Homeಕರ್ನಾಟಕಮತ್ತೆ ಕಲ್ಯಾಣ ಆಂದೋಲನವಾದೀತೆ?

ಮತ್ತೆ ಕಲ್ಯಾಣ ಆಂದೋಲನವಾದೀತೆ?

- Advertisement -
- Advertisement -

ಜಾತಿ ಪ್ರಾಬಲ್ಯ ಹೆಚ್ಚಿ ಮೇಲ್ವರ್ಗದವರು ತಳಸಮುದಾಯದವರೊಂದಿಗೆ ಮೀಸಲಾತಿಗಾಗಿ ಪೈಪೋಟಿಗಿಳಿದಿರುವಂತಹ ಕಾಲಮಾನದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಶರಣ ಚಳುವಳಿಯ ಜಾತ್ಯತೀತ ಅರಿವಿನ ಮಾರ್ಗವನ್ನು ಬಿತ್ತಲು, “ಮತ್ತೆ ಕಲ್ಯಾಣ” ಆಂದೋಲನವನ್ನು ತಮ್ಮ ಅನುಯಾಯಿಗಳೊಂದಿಗೆ ಹಮ್ಮಿಕೊಂಡಿದ್ದಾರೆ.

ಅದಕ್ಕಾಗಿ ಆಗಸ್ಟ್ 1 ರಿಂದ ತರೀಕೆರೆ ತಾಲ್ಲೂಕಿನಿಂದ ಆರಂಭಿಸಿ ಆಗಸ್ಟ್ 30ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯಗೊಳಿಸಲಿರುವ ಶ್ರೀಗಳ ಕಾರ್ಯಕ್ರಮ ಕುರಿತು ಪತ್ರಿಕೆಗಳಲ್ಲಿ ಓದಿದೆ. ಇದೊಂದು ಸದಾಶಯದ ಪ್ರಯತ್ನವಾದರೂ ಎಷ್ಟರಮಟ್ಟಿಗೆ ಸಾರ್ಥಕತೆ ಪಡೆದೀತೆಂಬ ಎದೆಗುದಿ ಇದ್ದೇ ಇದೆ.

ಡಾ.ಬಿ.ಎಲ್ ವೇಣು

ಬಸವಣ್ಣನವರು ಮಾಡಿದ ಕಲ್ಯಾಣ ಕ್ರಾಂತಿ ಕೂಡ ಸಫಲವಾದದ್ದಿಲ್ಲ. 12ನೇ ಶತಮಾನದಲ್ಲಿ ಅವರು ಸರ್ವ ಸಮುದಾಯದವರನ್ನೂ ಕಾಯಕದ ಮೂಲಕವೇ ಗುರುತಿಸಿ ಒಂದೆಡೆ ಒಗ್ಗೂಡಿಸಿ ಸಾಕ್ಷರಗೊಳಿಸಿ ತಿಳಿಹೇಳಿ ಸರ್ವಸಮಾನತೆಗೆ ನಾಂದಿ ಹಾಡಿದರು. ವೈದಿಕರು ಬಿಜ್ಜಳನನ್ನೇ ಓಲೈಸಿ ಬಸವಣ್ಣನನ್ನು ಗಡಿಪಾರು ಮಾಡಿಸಿ ಕೂಡಲಸಂಗಮದಲ್ಲಿ ಐಕ್ಯಗೊಳಿಸಿ ತಮ್ಮ ಜಾತಿ ಕಾಪಾಡಿಕೊಂಡಿದ್ದು ಇಂದಿಗೆ ಇತಿಹಾಸ.

 

ಈಗಂತೂ ಎಲ್ಲಾ ಜಾತಿಗಳಲ್ಲಿಯೂ ಅಂತರ್ಗತವಾಗಿ ವೈದಿಕರಿದ್ದಾರೆ. ತಾವೇ ಹೆಚ್ಚೆಂದು ಪಟ್ಟಪದವಿಗಳಿಗಾಗಿ ಜಾತಿಯ ಗುಂಪು ಕಟ್ಟುತ್ತಿದ್ದಾರೆ. ಅಷ್ಟೇಕೆ ಬಸವಣ್ಣನವರ ಅನುಯಾಯಿಗಳೇ ತಮ್ಮ ಧರ್ಮವನ್ನೀಗ ಜಾತಿಯಾಗಿಸಿ ಕುರೂಪಗೊಳಿಸಿಲ್ಲವೆ? ನಮ್ಮ ದೇಶದಲ್ಲಿ ವೈದಿಕ ಧರ್ಮ ವಿರೋಧಿಸಿಯೇ ಜನ್ಮತಳೆದ ಜೈನ ಬೌದ್ಧ ಚಾರ್ವಾಕ ವೀರಶೈವ ಧರ್ಮಗಳೆಲ್ಲವೂ ಜಾತಿ ಭೂತಗಳಾಗಿಲ್ಲವೆ? ಅಷ್ಟೇ ಅಲ್ಲ ವೈದಿಕರ ನಕಲುಗಳಾಗಿ ಹೋಮಯಜ್ಞಯಾಗ ಮಡಿಮೈಲಿಗೆ ಅಸ್ಪೃಶ್ಯತೆ ಪಾಲಿಸುತ್ತಿಲ್ಲವೆ? ಶಾಂತಿ ಸಮಾನತೆ ಅಹಿಂಸೆ ಸಾರಿದ ಬುದ್ಧನನ್ನು ಭಾರತದಿಂದಲೇ ಒದ್ದು ಓಡಿಸಿಯಾಯಿತು. ಬಸವಣ್ಣನನ್ನು ಕರ್ನಾಟಕದಾಚೆಗೆ ಬೆಳೆಯಲೂ ಬಿಡದೆ ಸಂಗಮದಲ್ಲಿ ಐಕ್ಯಗೊಳಿಸಿದ್ದಾಯಿತು. ಬುದ್ಧ ಬಸವ ವಾಲ್ಮೀಕಿ ಕನಕ ಅಂಬೇಡ್ಕರ್ ಎಲ್ಲಾ ಮಹಾನುಭಾವರನ್ನೂ ಜಾತಿ ಸಂಕೋಲೆಯಲ್ಲಿ ಕಟ್ಟಿ ಕೆಡವಿ ವಿರೂಪಗೊಳಿಸಲಾಯಿತು.

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು

ನಮ್ಮದೇನು ವೀರಶೈವ ಧರ್ಮವೋ ಲಿಂಗಾಯಿತ ಧರ್ಮವೋ ಅಥವಾ ನಾವೇನು ವೀರಶೈವ ಲಿಂಗಾಯಿತರೋ? ತಮ್ಮದೇನು ಜಾತಿಯೋ ಧರ್ಮವೋ ಎಂಬ ಸಂದಿಗ್ಧದಲ್ಲಿರುವ, ಮೀಸಲಾತಿ ಲಾಭಕ್ಕಾಗಿ ಧರ್ಮದ ಅಸ್ಮಿತೆಗಾಗಿ ಪರಿತಪಿಸದೆ ಲಿಂಗಾಯಿತರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದಾರೆ. ತಮ್ಮ ಧರ್ಮೀಯರ ಇಂತಹ ಗೊಂದಲಗಳನ್ನು ಶ್ರೀಗಳು ಮೊದಲು ಬಗೆಹರಿಸಬೇಕಿದೆ.

ವೀರಶೈವ ಲಿಂಗಾಯಿತರಲ್ಲೇ ಇರುವ ಅನೇಕ ಬಣಗಳಲ್ಲಿನ (ಬಣಜಿಗ ನೊಣಬ ಪಂಚಮಸಾಲಿ ಸಾದರ ಗೌಡ ಇತ್ಯಾದಿ) ಗೊಂದಲ ಬಗೆಹರಿಸಿ ಮಹಾಸ್ವಾಮಿಗಳೇ ಮುಂದೆ ನಿಂತು ವಿವಾಹ ಮಾಡಿಸುವ ಅಗತ್ಯವಿದೆ. ನಂತರ ಬಸವಣ್ಣನ ಪರಿಕಲ್ಪನೆಯಂತೆ ಇತರರನ್ನು ಅಂತರ್ಜಾತೀಯ ಕಲ್ಯಾಣಗಳಿಗೆ ಅಣಿಗೊಳಿಸಿದರೆ ಮಾತ್ರ “ಮತ್ತೆ ಕಲ್ಯಾಣ” ಆಂದೋಲನವಾದೀತು.

ಇನ್ನೊಂದು ಮಾತು, ಜಾತಿಗೊಬ್ಬ ಸ್ವಾಮಿಗಳು ಹುಟ್ಟಿಕೊಂಡಿರುವ 21ನೇ ಶತಮಾನದಲ್ಲಿ ಮೊದಲಿಗೆ ಎಲ್ಲಾ ಮಠದಯ್ಯಗಳೂ ತಮ್ಮ ತಮ್ಮ ಜಾತಿ (ಧರ್ಮ) ಅಹಂಕಾರ, ಮುನಿಸು, ಮಠದ ಪರಂಪರೆ, ಸಿರಿವಂತಿಕೆಯನ್ನು ಬದಿಗೊತ್ತಿ ಒಂದಾಗುವ ಮೂಲಕ “ಮತ್ತೆ ಕಲ್ಯಾಣ” ಆರಂಭ ಪಡೆದರಂತೂ ಮಹತ್ವಪೂರ್ಣ ಆಂದೋಲನವಾದಿತಷ್ಟೇ ಅಲ್ಲ, ಮುಂದಿನ ಹಾದಿ ಕೂಡ ಸುಗಮ ಸ್ಪಷ್ಟ.

ಹೆಚ್ಚು ವಿದ್ಯಾವಂತರೇ ಜಾತಿ ಮೌಢ್ಯದಿಂದ ನರಳುತ್ತಿದ್ದು, ಯುವ ಪೀಳಿಗೆಯಂತೂ ಧರ್ಮಾಂಧರಂತೆ ವರ್ತಿಸುತ್ತಿರುವುದು ಇತ್ತೀಚಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ರಾಜತ್ವವಿದ್ದ ಕಾಲದಲ್ಲಿಯೇ ಬಸವಣ್ಣ ಮಾಡಿದ ಕ್ರಾಂತಿಯನ್ನು ಪ್ರಜಾಪ್ರಭುತ್ವವಿರುವ ದೇಶದಲ್ಲಿಂದು ಮಾಡುವುದು ಸಹ ಸವಾಲಿನ ಕೆಲಸವೆ. ಸರ್ವ ಮಠಾಧಿಪತಿಗಳೂ ತಮ್ಮ ಕ್ಷೇತ್ರದಲ್ಲಿರುವ ತಮ್ಮ ಅನುಯಾಯಿಗಳನ್ನು ‘ಮೊದಲ ಹೆಜ್ಜೆ’ ಎಂಬಂತೆ ಜಾತಿವ್ಯವಸ್ಥೆಯ ಬಿಕ್ಕಟ್ಟಿನಿಂದ ಈಚೆ ತಂದು ಸರ್ವರೊಳಗೊಂದಾಗಿ ಬಾಳಲು ಪ್ರಯತ್ನಗಳಾಗಬೇಕಿದೆ. ಮನೆಗೆದ್ದು ಮಾರುಗೆಲ್ಲದೆ ವೃಥಾ ನೂರಾರು ಕಿ.ಮೀ. ಆಂದೋಲನ ಯಾತ್ರೆ ಪ್ರಯಾಸವಾದೀತಷ್ಟೆ.

ಈಗಂತೂ ನಮ್ಮೊಂದಿಗೆ ಸರ್ವಧರ್ಮೀಯರೂ ಸಹಬಾಳ್ವೆ ನಡೆಸುತ್ತಿದ್ದಾರೆ. ನಾವು ಹಿಂದೂಗಳು ಎಂಬ ಭಾವವೇ ಭಾರವಾಗಿ ನಾವೆಲ್ಲಾ ಭಾರತೀಯರೆಂಬ ಸದ್ಭಾವನೆ ಮೂಡದೆ ಹೋದರೆ ಎಂತಹ ಪ್ರಯತ್ನವೂ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆಯೆ. ಎಲ್ಲಾ ಜಾತಿ ಧರ್ಮದವರೂ ಒಟ್ಟಾಗಿ ಸೇರಿ ಸಾಣೇಹಳ್ಳಿ ಶ್ರೀಗಳ ಮುಂದೆ ಜಾತ್ಯತೀತರು ಧರ್ಮಾತೀತರೆಂದು ಪ್ರದರ್ಶಿಸಿಕೊಳ್ಳಬಹುದು. ಆದರೆ ಇವರೆಲ್ಲಾ ಜಾತಿಧರ್ಮ ಬಿಟ್ಟು ಭವಿಷ್ಯದಲ್ಲಿ ಬದುಕಬಲ್ಲಷ್ಟು ಉದಾರಿಗಳು ವಿವೇಕಿಗಳಾಗಿದ್ದಾರೆಯೆ? ಮಾಂಸ ತಿಂದು ಕುಡಿದು ಸ್ವಚ್ಛಂದವಾಗಿ ಬದುಕುವುದೇ ಜಾತ್ಯತೀತ ಲಕ್ಷಣವೆಂದು ಭಾವಿಸಿರುವ ಆಧುನಿಕರಿಗೆ ಇಂತಹ ಜನಪದ ಆಂದೋಲನಗಳ ಆಂತರ್ಯ ಅರ್ಥವಾದೀತೆ!?

ಯಾವುದೇ ಜಾತಿ ವಿರೋಧಿಸದೆ ಕಲ್ಯಾಣದ ಆಶಯಗಳನ್ನು ಜಾರಿಗೆ ತರುವ ಸದುದ್ದೇಶ ತಮ್ಮದೆಂಬ ಹೇಳಿಕೆಯಿಂದೇನೂ ಆಗದು. ಜಾತಿಗಳನ್ನು ಒಗ್ಗೂಡಿಸಬೇಕೆಂದರೆ ಅಂತರ್ಜಾತೀಯ ವಿವಾಹಗಳನ್ನು ನಡೆಸುವ ಪ್ರಯತ್ನವೇ ಆಂದೋಲನದ ಗುರಿಯಾಗಬೇಕು. ಬರೀ ಪಾದಯಾತ್ರೆ ಸರ್ವಧರ್ಮೀಯರ ಸಭೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗಿನ ಸಂವಾದ ಹೆಚ್ಚು ಪ್ರಚಾರ ಗಿಟ್ಟಿಸೀತಷ್ಟೆ. ಕಾರ್ಯಕ್ರಮವು ಬಸವಣ್ಣನವರ ಕಲ್ಯಾಣ ಕ್ರಾಂತಿಯ ಹಾದಿಯಲ್ಲೇ ಸಾಗಬೇಕೆಂದಾದಲ್ಲಿ ಮೇಲ್ವರ್ಗ ಕೆಳವರ್ಗಗಳು ರಕ್ತ ಸಂಬಂಧಿಗಳಾಗುವ ಪ್ರಯತ್ನವೇ ಆಂದೋಲನದ ಮುಖ್ಯಗುರಿಯಾಗಬೇಕು.

‘ಕಲ್ಯಾಣ’ ಎಂದರೆ ಸರ್ವರಿಗೂ ಒಳಿತಾಗುವ ಸೀಮಿತ ಉದ್ದೇಶದ್ದಾದರೆ ಶ್ರೀಗಳು ಯಾತ್ರೆ ಹೋಗುವ ಗ್ರಾಮಗಳಲ್ಲಾದರೂ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆ, ಗೋಶಾಲೆಗಳ ನಿರ್ಮಾಣ, ಬಡವರಿಗೆ ಸೂರು ನೀರು ಕಲ್ಪಿಸುವ ಕುರಿತು ಸರ್ಕಾರದೊಡನೆ ಇಲ್ಲವೆ ತಮ್ಮ ಸಿರಿವಂತ ಭಕ್ತರೊಡನೆ ಚರ್ಚಿಸಿ ಕಾರ್ಯಗತಗೊಳಿಸಬೇಕು. ಇಲ್ಲವಾದರೆ ಯಾತ್ರೆ ಬರಿದೆ ಜಾತ್ರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...