Homeಕರ್ನಾಟಕಮತ್ತೆ ಕಲ್ಯಾಣ ಆಂದೋಲನವಾದೀತೆ?

ಮತ್ತೆ ಕಲ್ಯಾಣ ಆಂದೋಲನವಾದೀತೆ?

- Advertisement -
- Advertisement -

ಜಾತಿ ಪ್ರಾಬಲ್ಯ ಹೆಚ್ಚಿ ಮೇಲ್ವರ್ಗದವರು ತಳಸಮುದಾಯದವರೊಂದಿಗೆ ಮೀಸಲಾತಿಗಾಗಿ ಪೈಪೋಟಿಗಿಳಿದಿರುವಂತಹ ಕಾಲಮಾನದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಶರಣ ಚಳುವಳಿಯ ಜಾತ್ಯತೀತ ಅರಿವಿನ ಮಾರ್ಗವನ್ನು ಬಿತ್ತಲು, “ಮತ್ತೆ ಕಲ್ಯಾಣ” ಆಂದೋಲನವನ್ನು ತಮ್ಮ ಅನುಯಾಯಿಗಳೊಂದಿಗೆ ಹಮ್ಮಿಕೊಂಡಿದ್ದಾರೆ.

ಅದಕ್ಕಾಗಿ ಆಗಸ್ಟ್ 1 ರಿಂದ ತರೀಕೆರೆ ತಾಲ್ಲೂಕಿನಿಂದ ಆರಂಭಿಸಿ ಆಗಸ್ಟ್ 30ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯಗೊಳಿಸಲಿರುವ ಶ್ರೀಗಳ ಕಾರ್ಯಕ್ರಮ ಕುರಿತು ಪತ್ರಿಕೆಗಳಲ್ಲಿ ಓದಿದೆ. ಇದೊಂದು ಸದಾಶಯದ ಪ್ರಯತ್ನವಾದರೂ ಎಷ್ಟರಮಟ್ಟಿಗೆ ಸಾರ್ಥಕತೆ ಪಡೆದೀತೆಂಬ ಎದೆಗುದಿ ಇದ್ದೇ ಇದೆ.

ಡಾ.ಬಿ.ಎಲ್ ವೇಣು

ಬಸವಣ್ಣನವರು ಮಾಡಿದ ಕಲ್ಯಾಣ ಕ್ರಾಂತಿ ಕೂಡ ಸಫಲವಾದದ್ದಿಲ್ಲ. 12ನೇ ಶತಮಾನದಲ್ಲಿ ಅವರು ಸರ್ವ ಸಮುದಾಯದವರನ್ನೂ ಕಾಯಕದ ಮೂಲಕವೇ ಗುರುತಿಸಿ ಒಂದೆಡೆ ಒಗ್ಗೂಡಿಸಿ ಸಾಕ್ಷರಗೊಳಿಸಿ ತಿಳಿಹೇಳಿ ಸರ್ವಸಮಾನತೆಗೆ ನಾಂದಿ ಹಾಡಿದರು. ವೈದಿಕರು ಬಿಜ್ಜಳನನ್ನೇ ಓಲೈಸಿ ಬಸವಣ್ಣನನ್ನು ಗಡಿಪಾರು ಮಾಡಿಸಿ ಕೂಡಲಸಂಗಮದಲ್ಲಿ ಐಕ್ಯಗೊಳಿಸಿ ತಮ್ಮ ಜಾತಿ ಕಾಪಾಡಿಕೊಂಡಿದ್ದು ಇಂದಿಗೆ ಇತಿಹಾಸ.

 

ಈಗಂತೂ ಎಲ್ಲಾ ಜಾತಿಗಳಲ್ಲಿಯೂ ಅಂತರ್ಗತವಾಗಿ ವೈದಿಕರಿದ್ದಾರೆ. ತಾವೇ ಹೆಚ್ಚೆಂದು ಪಟ್ಟಪದವಿಗಳಿಗಾಗಿ ಜಾತಿಯ ಗುಂಪು ಕಟ್ಟುತ್ತಿದ್ದಾರೆ. ಅಷ್ಟೇಕೆ ಬಸವಣ್ಣನವರ ಅನುಯಾಯಿಗಳೇ ತಮ್ಮ ಧರ್ಮವನ್ನೀಗ ಜಾತಿಯಾಗಿಸಿ ಕುರೂಪಗೊಳಿಸಿಲ್ಲವೆ? ನಮ್ಮ ದೇಶದಲ್ಲಿ ವೈದಿಕ ಧರ್ಮ ವಿರೋಧಿಸಿಯೇ ಜನ್ಮತಳೆದ ಜೈನ ಬೌದ್ಧ ಚಾರ್ವಾಕ ವೀರಶೈವ ಧರ್ಮಗಳೆಲ್ಲವೂ ಜಾತಿ ಭೂತಗಳಾಗಿಲ್ಲವೆ? ಅಷ್ಟೇ ಅಲ್ಲ ವೈದಿಕರ ನಕಲುಗಳಾಗಿ ಹೋಮಯಜ್ಞಯಾಗ ಮಡಿಮೈಲಿಗೆ ಅಸ್ಪೃಶ್ಯತೆ ಪಾಲಿಸುತ್ತಿಲ್ಲವೆ? ಶಾಂತಿ ಸಮಾನತೆ ಅಹಿಂಸೆ ಸಾರಿದ ಬುದ್ಧನನ್ನು ಭಾರತದಿಂದಲೇ ಒದ್ದು ಓಡಿಸಿಯಾಯಿತು. ಬಸವಣ್ಣನನ್ನು ಕರ್ನಾಟಕದಾಚೆಗೆ ಬೆಳೆಯಲೂ ಬಿಡದೆ ಸಂಗಮದಲ್ಲಿ ಐಕ್ಯಗೊಳಿಸಿದ್ದಾಯಿತು. ಬುದ್ಧ ಬಸವ ವಾಲ್ಮೀಕಿ ಕನಕ ಅಂಬೇಡ್ಕರ್ ಎಲ್ಲಾ ಮಹಾನುಭಾವರನ್ನೂ ಜಾತಿ ಸಂಕೋಲೆಯಲ್ಲಿ ಕಟ್ಟಿ ಕೆಡವಿ ವಿರೂಪಗೊಳಿಸಲಾಯಿತು.

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು

ನಮ್ಮದೇನು ವೀರಶೈವ ಧರ್ಮವೋ ಲಿಂಗಾಯಿತ ಧರ್ಮವೋ ಅಥವಾ ನಾವೇನು ವೀರಶೈವ ಲಿಂಗಾಯಿತರೋ? ತಮ್ಮದೇನು ಜಾತಿಯೋ ಧರ್ಮವೋ ಎಂಬ ಸಂದಿಗ್ಧದಲ್ಲಿರುವ, ಮೀಸಲಾತಿ ಲಾಭಕ್ಕಾಗಿ ಧರ್ಮದ ಅಸ್ಮಿತೆಗಾಗಿ ಪರಿತಪಿಸದೆ ಲಿಂಗಾಯಿತರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದಾರೆ. ತಮ್ಮ ಧರ್ಮೀಯರ ಇಂತಹ ಗೊಂದಲಗಳನ್ನು ಶ್ರೀಗಳು ಮೊದಲು ಬಗೆಹರಿಸಬೇಕಿದೆ.

ವೀರಶೈವ ಲಿಂಗಾಯಿತರಲ್ಲೇ ಇರುವ ಅನೇಕ ಬಣಗಳಲ್ಲಿನ (ಬಣಜಿಗ ನೊಣಬ ಪಂಚಮಸಾಲಿ ಸಾದರ ಗೌಡ ಇತ್ಯಾದಿ) ಗೊಂದಲ ಬಗೆಹರಿಸಿ ಮಹಾಸ್ವಾಮಿಗಳೇ ಮುಂದೆ ನಿಂತು ವಿವಾಹ ಮಾಡಿಸುವ ಅಗತ್ಯವಿದೆ. ನಂತರ ಬಸವಣ್ಣನ ಪರಿಕಲ್ಪನೆಯಂತೆ ಇತರರನ್ನು ಅಂತರ್ಜಾತೀಯ ಕಲ್ಯಾಣಗಳಿಗೆ ಅಣಿಗೊಳಿಸಿದರೆ ಮಾತ್ರ “ಮತ್ತೆ ಕಲ್ಯಾಣ” ಆಂದೋಲನವಾದೀತು.

ಇನ್ನೊಂದು ಮಾತು, ಜಾತಿಗೊಬ್ಬ ಸ್ವಾಮಿಗಳು ಹುಟ್ಟಿಕೊಂಡಿರುವ 21ನೇ ಶತಮಾನದಲ್ಲಿ ಮೊದಲಿಗೆ ಎಲ್ಲಾ ಮಠದಯ್ಯಗಳೂ ತಮ್ಮ ತಮ್ಮ ಜಾತಿ (ಧರ್ಮ) ಅಹಂಕಾರ, ಮುನಿಸು, ಮಠದ ಪರಂಪರೆ, ಸಿರಿವಂತಿಕೆಯನ್ನು ಬದಿಗೊತ್ತಿ ಒಂದಾಗುವ ಮೂಲಕ “ಮತ್ತೆ ಕಲ್ಯಾಣ” ಆರಂಭ ಪಡೆದರಂತೂ ಮಹತ್ವಪೂರ್ಣ ಆಂದೋಲನವಾದಿತಷ್ಟೇ ಅಲ್ಲ, ಮುಂದಿನ ಹಾದಿ ಕೂಡ ಸುಗಮ ಸ್ಪಷ್ಟ.

ಹೆಚ್ಚು ವಿದ್ಯಾವಂತರೇ ಜಾತಿ ಮೌಢ್ಯದಿಂದ ನರಳುತ್ತಿದ್ದು, ಯುವ ಪೀಳಿಗೆಯಂತೂ ಧರ್ಮಾಂಧರಂತೆ ವರ್ತಿಸುತ್ತಿರುವುದು ಇತ್ತೀಚಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ರಾಜತ್ವವಿದ್ದ ಕಾಲದಲ್ಲಿಯೇ ಬಸವಣ್ಣ ಮಾಡಿದ ಕ್ರಾಂತಿಯನ್ನು ಪ್ರಜಾಪ್ರಭುತ್ವವಿರುವ ದೇಶದಲ್ಲಿಂದು ಮಾಡುವುದು ಸಹ ಸವಾಲಿನ ಕೆಲಸವೆ. ಸರ್ವ ಮಠಾಧಿಪತಿಗಳೂ ತಮ್ಮ ಕ್ಷೇತ್ರದಲ್ಲಿರುವ ತಮ್ಮ ಅನುಯಾಯಿಗಳನ್ನು ‘ಮೊದಲ ಹೆಜ್ಜೆ’ ಎಂಬಂತೆ ಜಾತಿವ್ಯವಸ್ಥೆಯ ಬಿಕ್ಕಟ್ಟಿನಿಂದ ಈಚೆ ತಂದು ಸರ್ವರೊಳಗೊಂದಾಗಿ ಬಾಳಲು ಪ್ರಯತ್ನಗಳಾಗಬೇಕಿದೆ. ಮನೆಗೆದ್ದು ಮಾರುಗೆಲ್ಲದೆ ವೃಥಾ ನೂರಾರು ಕಿ.ಮೀ. ಆಂದೋಲನ ಯಾತ್ರೆ ಪ್ರಯಾಸವಾದೀತಷ್ಟೆ.

ಈಗಂತೂ ನಮ್ಮೊಂದಿಗೆ ಸರ್ವಧರ್ಮೀಯರೂ ಸಹಬಾಳ್ವೆ ನಡೆಸುತ್ತಿದ್ದಾರೆ. ನಾವು ಹಿಂದೂಗಳು ಎಂಬ ಭಾವವೇ ಭಾರವಾಗಿ ನಾವೆಲ್ಲಾ ಭಾರತೀಯರೆಂಬ ಸದ್ಭಾವನೆ ಮೂಡದೆ ಹೋದರೆ ಎಂತಹ ಪ್ರಯತ್ನವೂ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆಯೆ. ಎಲ್ಲಾ ಜಾತಿ ಧರ್ಮದವರೂ ಒಟ್ಟಾಗಿ ಸೇರಿ ಸಾಣೇಹಳ್ಳಿ ಶ್ರೀಗಳ ಮುಂದೆ ಜಾತ್ಯತೀತರು ಧರ್ಮಾತೀತರೆಂದು ಪ್ರದರ್ಶಿಸಿಕೊಳ್ಳಬಹುದು. ಆದರೆ ಇವರೆಲ್ಲಾ ಜಾತಿಧರ್ಮ ಬಿಟ್ಟು ಭವಿಷ್ಯದಲ್ಲಿ ಬದುಕಬಲ್ಲಷ್ಟು ಉದಾರಿಗಳು ವಿವೇಕಿಗಳಾಗಿದ್ದಾರೆಯೆ? ಮಾಂಸ ತಿಂದು ಕುಡಿದು ಸ್ವಚ್ಛಂದವಾಗಿ ಬದುಕುವುದೇ ಜಾತ್ಯತೀತ ಲಕ್ಷಣವೆಂದು ಭಾವಿಸಿರುವ ಆಧುನಿಕರಿಗೆ ಇಂತಹ ಜನಪದ ಆಂದೋಲನಗಳ ಆಂತರ್ಯ ಅರ್ಥವಾದೀತೆ!?

ಯಾವುದೇ ಜಾತಿ ವಿರೋಧಿಸದೆ ಕಲ್ಯಾಣದ ಆಶಯಗಳನ್ನು ಜಾರಿಗೆ ತರುವ ಸದುದ್ದೇಶ ತಮ್ಮದೆಂಬ ಹೇಳಿಕೆಯಿಂದೇನೂ ಆಗದು. ಜಾತಿಗಳನ್ನು ಒಗ್ಗೂಡಿಸಬೇಕೆಂದರೆ ಅಂತರ್ಜಾತೀಯ ವಿವಾಹಗಳನ್ನು ನಡೆಸುವ ಪ್ರಯತ್ನವೇ ಆಂದೋಲನದ ಗುರಿಯಾಗಬೇಕು. ಬರೀ ಪಾದಯಾತ್ರೆ ಸರ್ವಧರ್ಮೀಯರ ಸಭೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗಿನ ಸಂವಾದ ಹೆಚ್ಚು ಪ್ರಚಾರ ಗಿಟ್ಟಿಸೀತಷ್ಟೆ. ಕಾರ್ಯಕ್ರಮವು ಬಸವಣ್ಣನವರ ಕಲ್ಯಾಣ ಕ್ರಾಂತಿಯ ಹಾದಿಯಲ್ಲೇ ಸಾಗಬೇಕೆಂದಾದಲ್ಲಿ ಮೇಲ್ವರ್ಗ ಕೆಳವರ್ಗಗಳು ರಕ್ತ ಸಂಬಂಧಿಗಳಾಗುವ ಪ್ರಯತ್ನವೇ ಆಂದೋಲನದ ಮುಖ್ಯಗುರಿಯಾಗಬೇಕು.

‘ಕಲ್ಯಾಣ’ ಎಂದರೆ ಸರ್ವರಿಗೂ ಒಳಿತಾಗುವ ಸೀಮಿತ ಉದ್ದೇಶದ್ದಾದರೆ ಶ್ರೀಗಳು ಯಾತ್ರೆ ಹೋಗುವ ಗ್ರಾಮಗಳಲ್ಲಾದರೂ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆ, ಗೋಶಾಲೆಗಳ ನಿರ್ಮಾಣ, ಬಡವರಿಗೆ ಸೂರು ನೀರು ಕಲ್ಪಿಸುವ ಕುರಿತು ಸರ್ಕಾರದೊಡನೆ ಇಲ್ಲವೆ ತಮ್ಮ ಸಿರಿವಂತ ಭಕ್ತರೊಡನೆ ಚರ್ಚಿಸಿ ಕಾರ್ಯಗತಗೊಳಿಸಬೇಕು. ಇಲ್ಲವಾದರೆ ಯಾತ್ರೆ ಬರಿದೆ ಜಾತ್ರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...