Homeಕರ್ನಾಟಕಮತ್ತೆ ಕಲ್ಯಾಣ ಆಂದೋಲನವಾದೀತೆ?

ಮತ್ತೆ ಕಲ್ಯಾಣ ಆಂದೋಲನವಾದೀತೆ?

- Advertisement -
- Advertisement -

ಜಾತಿ ಪ್ರಾಬಲ್ಯ ಹೆಚ್ಚಿ ಮೇಲ್ವರ್ಗದವರು ತಳಸಮುದಾಯದವರೊಂದಿಗೆ ಮೀಸಲಾತಿಗಾಗಿ ಪೈಪೋಟಿಗಿಳಿದಿರುವಂತಹ ಕಾಲಮಾನದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು ಶರಣ ಚಳುವಳಿಯ ಜಾತ್ಯತೀತ ಅರಿವಿನ ಮಾರ್ಗವನ್ನು ಬಿತ್ತಲು, “ಮತ್ತೆ ಕಲ್ಯಾಣ” ಆಂದೋಲನವನ್ನು ತಮ್ಮ ಅನುಯಾಯಿಗಳೊಂದಿಗೆ ಹಮ್ಮಿಕೊಂಡಿದ್ದಾರೆ.

ಅದಕ್ಕಾಗಿ ಆಗಸ್ಟ್ 1 ರಿಂದ ತರೀಕೆರೆ ತಾಲ್ಲೂಕಿನಿಂದ ಆರಂಭಿಸಿ ಆಗಸ್ಟ್ 30ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯಗೊಳಿಸಲಿರುವ ಶ್ರೀಗಳ ಕಾರ್ಯಕ್ರಮ ಕುರಿತು ಪತ್ರಿಕೆಗಳಲ್ಲಿ ಓದಿದೆ. ಇದೊಂದು ಸದಾಶಯದ ಪ್ರಯತ್ನವಾದರೂ ಎಷ್ಟರಮಟ್ಟಿಗೆ ಸಾರ್ಥಕತೆ ಪಡೆದೀತೆಂಬ ಎದೆಗುದಿ ಇದ್ದೇ ಇದೆ.

ಡಾ.ಬಿ.ಎಲ್ ವೇಣು

ಬಸವಣ್ಣನವರು ಮಾಡಿದ ಕಲ್ಯಾಣ ಕ್ರಾಂತಿ ಕೂಡ ಸಫಲವಾದದ್ದಿಲ್ಲ. 12ನೇ ಶತಮಾನದಲ್ಲಿ ಅವರು ಸರ್ವ ಸಮುದಾಯದವರನ್ನೂ ಕಾಯಕದ ಮೂಲಕವೇ ಗುರುತಿಸಿ ಒಂದೆಡೆ ಒಗ್ಗೂಡಿಸಿ ಸಾಕ್ಷರಗೊಳಿಸಿ ತಿಳಿಹೇಳಿ ಸರ್ವಸಮಾನತೆಗೆ ನಾಂದಿ ಹಾಡಿದರು. ವೈದಿಕರು ಬಿಜ್ಜಳನನ್ನೇ ಓಲೈಸಿ ಬಸವಣ್ಣನನ್ನು ಗಡಿಪಾರು ಮಾಡಿಸಿ ಕೂಡಲಸಂಗಮದಲ್ಲಿ ಐಕ್ಯಗೊಳಿಸಿ ತಮ್ಮ ಜಾತಿ ಕಾಪಾಡಿಕೊಂಡಿದ್ದು ಇಂದಿಗೆ ಇತಿಹಾಸ.

 

ಈಗಂತೂ ಎಲ್ಲಾ ಜಾತಿಗಳಲ್ಲಿಯೂ ಅಂತರ್ಗತವಾಗಿ ವೈದಿಕರಿದ್ದಾರೆ. ತಾವೇ ಹೆಚ್ಚೆಂದು ಪಟ್ಟಪದವಿಗಳಿಗಾಗಿ ಜಾತಿಯ ಗುಂಪು ಕಟ್ಟುತ್ತಿದ್ದಾರೆ. ಅಷ್ಟೇಕೆ ಬಸವಣ್ಣನವರ ಅನುಯಾಯಿಗಳೇ ತಮ್ಮ ಧರ್ಮವನ್ನೀಗ ಜಾತಿಯಾಗಿಸಿ ಕುರೂಪಗೊಳಿಸಿಲ್ಲವೆ? ನಮ್ಮ ದೇಶದಲ್ಲಿ ವೈದಿಕ ಧರ್ಮ ವಿರೋಧಿಸಿಯೇ ಜನ್ಮತಳೆದ ಜೈನ ಬೌದ್ಧ ಚಾರ್ವಾಕ ವೀರಶೈವ ಧರ್ಮಗಳೆಲ್ಲವೂ ಜಾತಿ ಭೂತಗಳಾಗಿಲ್ಲವೆ? ಅಷ್ಟೇ ಅಲ್ಲ ವೈದಿಕರ ನಕಲುಗಳಾಗಿ ಹೋಮಯಜ್ಞಯಾಗ ಮಡಿಮೈಲಿಗೆ ಅಸ್ಪೃಶ್ಯತೆ ಪಾಲಿಸುತ್ತಿಲ್ಲವೆ? ಶಾಂತಿ ಸಮಾನತೆ ಅಹಿಂಸೆ ಸಾರಿದ ಬುದ್ಧನನ್ನು ಭಾರತದಿಂದಲೇ ಒದ್ದು ಓಡಿಸಿಯಾಯಿತು. ಬಸವಣ್ಣನನ್ನು ಕರ್ನಾಟಕದಾಚೆಗೆ ಬೆಳೆಯಲೂ ಬಿಡದೆ ಸಂಗಮದಲ್ಲಿ ಐಕ್ಯಗೊಳಿಸಿದ್ದಾಯಿತು. ಬುದ್ಧ ಬಸವ ವಾಲ್ಮೀಕಿ ಕನಕ ಅಂಬೇಡ್ಕರ್ ಎಲ್ಲಾ ಮಹಾನುಭಾವರನ್ನೂ ಜಾತಿ ಸಂಕೋಲೆಯಲ್ಲಿ ಕಟ್ಟಿ ಕೆಡವಿ ವಿರೂಪಗೊಳಿಸಲಾಯಿತು.

ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀಗಳು

ನಮ್ಮದೇನು ವೀರಶೈವ ಧರ್ಮವೋ ಲಿಂಗಾಯಿತ ಧರ್ಮವೋ ಅಥವಾ ನಾವೇನು ವೀರಶೈವ ಲಿಂಗಾಯಿತರೋ? ತಮ್ಮದೇನು ಜಾತಿಯೋ ಧರ್ಮವೋ ಎಂಬ ಸಂದಿಗ್ಧದಲ್ಲಿರುವ, ಮೀಸಲಾತಿ ಲಾಭಕ್ಕಾಗಿ ಧರ್ಮದ ಅಸ್ಮಿತೆಗಾಗಿ ಪರಿತಪಿಸದೆ ಲಿಂಗಾಯಿತರು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದಾರೆ. ತಮ್ಮ ಧರ್ಮೀಯರ ಇಂತಹ ಗೊಂದಲಗಳನ್ನು ಶ್ರೀಗಳು ಮೊದಲು ಬಗೆಹರಿಸಬೇಕಿದೆ.

ವೀರಶೈವ ಲಿಂಗಾಯಿತರಲ್ಲೇ ಇರುವ ಅನೇಕ ಬಣಗಳಲ್ಲಿನ (ಬಣಜಿಗ ನೊಣಬ ಪಂಚಮಸಾಲಿ ಸಾದರ ಗೌಡ ಇತ್ಯಾದಿ) ಗೊಂದಲ ಬಗೆಹರಿಸಿ ಮಹಾಸ್ವಾಮಿಗಳೇ ಮುಂದೆ ನಿಂತು ವಿವಾಹ ಮಾಡಿಸುವ ಅಗತ್ಯವಿದೆ. ನಂತರ ಬಸವಣ್ಣನ ಪರಿಕಲ್ಪನೆಯಂತೆ ಇತರರನ್ನು ಅಂತರ್ಜಾತೀಯ ಕಲ್ಯಾಣಗಳಿಗೆ ಅಣಿಗೊಳಿಸಿದರೆ ಮಾತ್ರ “ಮತ್ತೆ ಕಲ್ಯಾಣ” ಆಂದೋಲನವಾದೀತು.

ಇನ್ನೊಂದು ಮಾತು, ಜಾತಿಗೊಬ್ಬ ಸ್ವಾಮಿಗಳು ಹುಟ್ಟಿಕೊಂಡಿರುವ 21ನೇ ಶತಮಾನದಲ್ಲಿ ಮೊದಲಿಗೆ ಎಲ್ಲಾ ಮಠದಯ್ಯಗಳೂ ತಮ್ಮ ತಮ್ಮ ಜಾತಿ (ಧರ್ಮ) ಅಹಂಕಾರ, ಮುನಿಸು, ಮಠದ ಪರಂಪರೆ, ಸಿರಿವಂತಿಕೆಯನ್ನು ಬದಿಗೊತ್ತಿ ಒಂದಾಗುವ ಮೂಲಕ “ಮತ್ತೆ ಕಲ್ಯಾಣ” ಆರಂಭ ಪಡೆದರಂತೂ ಮಹತ್ವಪೂರ್ಣ ಆಂದೋಲನವಾದಿತಷ್ಟೇ ಅಲ್ಲ, ಮುಂದಿನ ಹಾದಿ ಕೂಡ ಸುಗಮ ಸ್ಪಷ್ಟ.

ಹೆಚ್ಚು ವಿದ್ಯಾವಂತರೇ ಜಾತಿ ಮೌಢ್ಯದಿಂದ ನರಳುತ್ತಿದ್ದು, ಯುವ ಪೀಳಿಗೆಯಂತೂ ಧರ್ಮಾಂಧರಂತೆ ವರ್ತಿಸುತ್ತಿರುವುದು ಇತ್ತೀಚಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ರಾಜತ್ವವಿದ್ದ ಕಾಲದಲ್ಲಿಯೇ ಬಸವಣ್ಣ ಮಾಡಿದ ಕ್ರಾಂತಿಯನ್ನು ಪ್ರಜಾಪ್ರಭುತ್ವವಿರುವ ದೇಶದಲ್ಲಿಂದು ಮಾಡುವುದು ಸಹ ಸವಾಲಿನ ಕೆಲಸವೆ. ಸರ್ವ ಮಠಾಧಿಪತಿಗಳೂ ತಮ್ಮ ಕ್ಷೇತ್ರದಲ್ಲಿರುವ ತಮ್ಮ ಅನುಯಾಯಿಗಳನ್ನು ‘ಮೊದಲ ಹೆಜ್ಜೆ’ ಎಂಬಂತೆ ಜಾತಿವ್ಯವಸ್ಥೆಯ ಬಿಕ್ಕಟ್ಟಿನಿಂದ ಈಚೆ ತಂದು ಸರ್ವರೊಳಗೊಂದಾಗಿ ಬಾಳಲು ಪ್ರಯತ್ನಗಳಾಗಬೇಕಿದೆ. ಮನೆಗೆದ್ದು ಮಾರುಗೆಲ್ಲದೆ ವೃಥಾ ನೂರಾರು ಕಿ.ಮೀ. ಆಂದೋಲನ ಯಾತ್ರೆ ಪ್ರಯಾಸವಾದೀತಷ್ಟೆ.

ಈಗಂತೂ ನಮ್ಮೊಂದಿಗೆ ಸರ್ವಧರ್ಮೀಯರೂ ಸಹಬಾಳ್ವೆ ನಡೆಸುತ್ತಿದ್ದಾರೆ. ನಾವು ಹಿಂದೂಗಳು ಎಂಬ ಭಾವವೇ ಭಾರವಾಗಿ ನಾವೆಲ್ಲಾ ಭಾರತೀಯರೆಂಬ ಸದ್ಭಾವನೆ ಮೂಡದೆ ಹೋದರೆ ಎಂತಹ ಪ್ರಯತ್ನವೂ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆಯೆ. ಎಲ್ಲಾ ಜಾತಿ ಧರ್ಮದವರೂ ಒಟ್ಟಾಗಿ ಸೇರಿ ಸಾಣೇಹಳ್ಳಿ ಶ್ರೀಗಳ ಮುಂದೆ ಜಾತ್ಯತೀತರು ಧರ್ಮಾತೀತರೆಂದು ಪ್ರದರ್ಶಿಸಿಕೊಳ್ಳಬಹುದು. ಆದರೆ ಇವರೆಲ್ಲಾ ಜಾತಿಧರ್ಮ ಬಿಟ್ಟು ಭವಿಷ್ಯದಲ್ಲಿ ಬದುಕಬಲ್ಲಷ್ಟು ಉದಾರಿಗಳು ವಿವೇಕಿಗಳಾಗಿದ್ದಾರೆಯೆ? ಮಾಂಸ ತಿಂದು ಕುಡಿದು ಸ್ವಚ್ಛಂದವಾಗಿ ಬದುಕುವುದೇ ಜಾತ್ಯತೀತ ಲಕ್ಷಣವೆಂದು ಭಾವಿಸಿರುವ ಆಧುನಿಕರಿಗೆ ಇಂತಹ ಜನಪದ ಆಂದೋಲನಗಳ ಆಂತರ್ಯ ಅರ್ಥವಾದೀತೆ!?

ಯಾವುದೇ ಜಾತಿ ವಿರೋಧಿಸದೆ ಕಲ್ಯಾಣದ ಆಶಯಗಳನ್ನು ಜಾರಿಗೆ ತರುವ ಸದುದ್ದೇಶ ತಮ್ಮದೆಂಬ ಹೇಳಿಕೆಯಿಂದೇನೂ ಆಗದು. ಜಾತಿಗಳನ್ನು ಒಗ್ಗೂಡಿಸಬೇಕೆಂದರೆ ಅಂತರ್ಜಾತೀಯ ವಿವಾಹಗಳನ್ನು ನಡೆಸುವ ಪ್ರಯತ್ನವೇ ಆಂದೋಲನದ ಗುರಿಯಾಗಬೇಕು. ಬರೀ ಪಾದಯಾತ್ರೆ ಸರ್ವಧರ್ಮೀಯರ ಸಭೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗಿನ ಸಂವಾದ ಹೆಚ್ಚು ಪ್ರಚಾರ ಗಿಟ್ಟಿಸೀತಷ್ಟೆ. ಕಾರ್ಯಕ್ರಮವು ಬಸವಣ್ಣನವರ ಕಲ್ಯಾಣ ಕ್ರಾಂತಿಯ ಹಾದಿಯಲ್ಲೇ ಸಾಗಬೇಕೆಂದಾದಲ್ಲಿ ಮೇಲ್ವರ್ಗ ಕೆಳವರ್ಗಗಳು ರಕ್ತ ಸಂಬಂಧಿಗಳಾಗುವ ಪ್ರಯತ್ನವೇ ಆಂದೋಲನದ ಮುಖ್ಯಗುರಿಯಾಗಬೇಕು.

‘ಕಲ್ಯಾಣ’ ಎಂದರೆ ಸರ್ವರಿಗೂ ಒಳಿತಾಗುವ ಸೀಮಿತ ಉದ್ದೇಶದ್ದಾದರೆ ಶ್ರೀಗಳು ಯಾತ್ರೆ ಹೋಗುವ ಗ್ರಾಮಗಳಲ್ಲಾದರೂ ಯುವಕರ ನಿರುದ್ಯೋಗ ಸಮಸ್ಯೆ ನಿವಾರಣೆ, ಗೋಶಾಲೆಗಳ ನಿರ್ಮಾಣ, ಬಡವರಿಗೆ ಸೂರು ನೀರು ಕಲ್ಪಿಸುವ ಕುರಿತು ಸರ್ಕಾರದೊಡನೆ ಇಲ್ಲವೆ ತಮ್ಮ ಸಿರಿವಂತ ಭಕ್ತರೊಡನೆ ಚರ್ಚಿಸಿ ಕಾರ್ಯಗತಗೊಳಿಸಬೇಕು. ಇಲ್ಲವಾದರೆ ಯಾತ್ರೆ ಬರಿದೆ ಜಾತ್ರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...