ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಿನ್ನೆ ಸಂಜೆ ಜಾರಿ ನಿರ್ದೇಶನಾಲಯದಿಂದ ಹೈದರಾಬಾದ್ ಮನೆಯಿಂದ ಬಂಧಿಸಲ್ಪಟ್ಟ ಬಿಆರ್ಎಸ್ ನಾಯಕಿ ಕೆ ಕವಿತಾ ಅವರನ್ನು ಇಂದು ರಾಷ್ಟ್ರ ರಾಜಧಾನಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆಕೆಯ ಬಂಧನವನ್ನು ಕಾನೂನುಬಾಹಿರವೆಂದು ಹೇಳಿರುವ ಬಿಆರ್ಎಸ್ ನಾಯಕ ಕೆಟಿಆರ್, ಇದರ ವಿರುದ್ಧ ಹೋರಾಟ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಬಂಧನದ ನಂತರ ಮಧ್ಯರಾತ್ರಿಯ ಸುಮಾರಿಗೆ ದೆಹಲಿಗೆ ಬಂದಿಳಿದ ಆಕೆಯನ್ನು ತನಿಖಾ ಸಂಸ್ಥೆಯ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಯಿತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಂಸ್ಥೆಯು ಮನವಿ ಮಾಡಿದೆ.
ಕವಿತಾ ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರ ಸಹೋದರ ಮತ್ತು ತೆಲಂಗಾಣ ಮಾಜಿ ಸಚಿವ ಕೆಟಿ ರಾಮರಾವ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ, “ಅಧಿಕಾರದ ದುರುಪಯೋಗ ಮತ್ತು ರಾಜಕೀಯ ಲಾಭಕ್ಕಾಗಿ ಸಾಂಸ್ಥಿಕ ದುರುಪಯೋಗವು ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಪ್ರಕರಣವು ತೀರಾ ಸಬ್-ಜುಡಿಸ್ ಆಗಿರುವಾಗ ಮತ್ತು ಒಂದೆರಡು ದಿನಗಳಲ್ಲಿ ಮರುಪರಿಶೀಲನೆಗೆ ಮುಂದಾದಾಗ ಬಂಧಿಸುವ ವಿಪರೀತ ಧಾವಂತದ ಬಗ್ಗೆ ಮಾರ್ಚ್ 19ರಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗುತ್ತದೆ. ಅದಕ್ಕಿಂತಲೂ ಭಯಾನಕ ಸಂಗತಿಯೆಂದರೆ ಇಡಿ ತನ್ನ ಸ್ವಂತ ಜವಾಬ್ದಾರಿಯನ್ನು ದುರ್ಬಲಗೊಳಿಸುವುದು. ಗೌರವಾನ್ವಿತ ಸುಪ್ರೀಂ ಕೋರ್ಟಿನಲ್ಲಿ ನ್ಯಾಯವು ಮೇಲುಗೈ ಸಾಧಿಸುತ್ತದೆ ಮತ್ತು ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.
ಹಣಕಾಸು ತನಿಖಾ ಸಂಸ್ಥೆಯು ಶುಕ್ರವಾರ ತೆಲಂಗಾಣದ ವಿಧಾನ ಪರಿಷತ್ ಸದಸ್ಯೆ ಕೆ ಕವಿತಾ (46) ಅವರನ್ನು ಹೈದರಾಬಾದ್ನ ಅವರ ಮೆನಯಲ್ಲಿ ಬಂಧಿಸಿತು. ಗಂಟೆಗಳ ಕಾಲ ದಾಳಿ ನಡೆಸಿ ಇದೀಗ ರದ್ದುಪಡಿಸಿದ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದೆ.
ನೂರಾರು ಬೆಂಬಲಿಗರು ಏಜೆನ್ಸಿ ಕ್ರಮವನ್ನು ಪ್ರತಿಭಟಿಸಿದ್ದರಿಂದ ಕವಿತಾ ಅವರನ್ನು ಹೈದರಾಬಾದ್ನ ಬಂಜಾರಾ ಹಿಲ್ಸ್ನ ಮನೆಯಿಂದ ಸಂಜೆ ಬಂಧಿಸಲಾಯಿತು.
ಲೋಕಸಭೆ ಚುನಾವಣೆಗೆ ವಾರಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದ ದಿನದಲ್ಲಿ ಈ ಬಂಧನ ನಡೆದಿದೆ. ಹೈದರಾಬಾದ್ನ ಉಪನಗರವಾದ ಮಲ್ಕಾಜ್ಗಿರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್ಶೋ ನಡೆಸಿದರು.
ಸುಪ್ರೀಂ ಕೋರ್ಟ್ ಬುಧವಾರದವರೆಗೆ ಬಿಆರ್ಎಸ್ ನಾಯಕನಿಗೆ ವಿಚಾರಣೆಯಿಂದ ವಿನಾಯಿತಿ ನೀಡಿತ್ತು. ಶುಕ್ರವಾರ ಪ್ರಕರಣದಲ್ಲಿ ಏಜೆನ್ಸಿಯ ಸಮನ್ಸ್ ವಿರುದ್ಧ ಆಕೆಯ ಅರ್ಜಿಯನ್ನು ವಿಚಾರಣೆ ನಡೆಸಿತು; ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ.
ಇದನ್ನೂ ಓದಿ; ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ಗೆ ಜಾಮೀನು ಮಂಜೂರು


