Homeಚಳವಳಿಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ

- Advertisement -
- Advertisement -

ರಂಗಾಯಣಕ್ಕಾಗಿ ಬಹುರೂಪಿ ಎಂಬ ನಾಟಕವನ್ನು ಬರೆದು ನಿರ್ದೇಶಿಸಿದ ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಚಿನ್ನಸ್ವಾಮಿಯವರು ನಿಜಕ್ಕೂ ಬಹುರೂಪಿಯೇ. ಕವಿ, ನಾಟಕಕಾರ, ನಟ, ರಂಗನಿರ್ದೇಶಕ, ಚಿಂತಕ ಹೀಗೆ ಬಹುಆಯಾಮವುಳ್ಳ ಲೇಖಕರಾದ ಅವರು ಕೆಎಸ್‍ಆರ್‌ಟಿಸಿಯಲ್ಲಿ ಆರ್ಥಿಕ ಸಲಹೆಗಾರರಾಗಿ ಗೊತ್ತಿದ್ದರೆ, ಸಾಹಿತ್ಯದ ಓದುಗರಲ್ಲದ ಲಕ್ಷಾಂತರ ಜನರಿಗೆ ‘ನಾನೊಂದು ಮರವಾಗಿದ್ದರೆ’ ಹಾಡಿನ ಕರ್ತೃವಾಗಿ ಗೊತ್ತು. ಭಾರತದ ಐದು ಭಾಷೆಗಳಲ್ಲದೇ ಹೀಬ್ರೂ, ಸ್ಪ್ಯಾನಿಷ್, ಇಂಗ್ಲಿಷ್ ಭಾಷೆಗಳಿಗೂ ಅವರ ಕೃತಿಗಳು ಅನುವಾದವಾಗಿದ್ದು, ವಿವಿಧ ಪ್ರಕಾರಗಳ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕನ್ನಡದ ಪ್ರಮುಖ ಬರಹಗಾರರಲ್ಲೊಬ್ಬರು.

ಭಾರತದ ಪ್ರಜಾಪ್ರಭುತ್ವವು ಜಾತಿಯ ಕಿಲುಬು ಹಿಡಿದ ಒಂದು ಪಾತ್ರೆ. ಅಲ್ಲಿಗೆ ಪಾಯಸ ಹಾಕಿದರೂ ಅಷ್ಟೆ, ನೀರು ಹಾಕಿದರೂ ಅಷ್ಟೆ; ವಿಷವಾಗಿ ಪರಿವರ್ತನೆಯಾಗುತ್ತದೆ. ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಿಲುಬು ಹಿಡಿದ ಪಾತ್ರೆಗಳೇ ಆಗಿವೆ. ನಾಲ್ಕನೆಯ ಅಂಗವೆಂದು ನಂಬಿಕೊಂಡು ಬಂದಿರುವ ಮಾಧ್ಯಮ ಕ್ಷೇತ್ರವು ಹೆಚ್ಚು ಕಲುಷಿತವಾಗಿರುವುದು ತಿಳಿದಿರುವ ಸಂಗತಿ. ಆತ್ಮಪ್ರತ್ಯಯವುಳ್ಳ ಹಿಂದೂ ಒಬ್ಬ ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಜಾತಿ ಭ್ರಷ್ಟಾಚಾರ, ಸ್ವಜನಪಕ್ಷಪಾತವಷ್ಟೇ ಅಲ್ಲ, ಎಲ್ಲ ಅನೈತಿಕತೆಯ ಗಂಗೋತ್ರಿ. ಜಾತಿ ಎಂಬುದು ವಿಷ, ಜಾತಿ ಎಂಬುದು ವಿನಾಶಕಾರಿ ಎಂದು ಹೇಳುತ್ತೇವೆ. ಆದರೆ ನಮ್ಮ ಶ್ರಮವೆಲ್ಲವೂ ಜಾತಿಯನ್ನು ಉಳಿಸಿಕೊಳ್ಳುವುದರಲ್ಲೇ ವ್ಯಯವಾಗುತ್ತಿದೆ. ಈ ದೇಶದ ಎಲ್ಲ ರೋಗಗಳ, ಅನಿಷ್ಟಗಳ ಮೂಲ ಜಾತಿ ಎಂಬುದು ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ನಮ್ಮ ದೇಶದ ಆರ್ಥಿಕತೆ ಪ್ರಪಂಚದ ಆರ್ಥಿಕತೆಯಲ್ಲಿ ಐದನೆಯದೋ, ಆರನೆಯದೋ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯೆನಿಸುತ್ತದೆ. ಯಾಕೆಂದರೆ ಅದರ ಎಂಬತ್ತು ಭಾಗ ಶೇ.ಒಂದರಷ್ಟು ಮೇಲ್ಜಾತಿ ಜನರ ಬಳಿ ಅಥವಾ 56 ಕುಟುಂಬಗಳ ಒಳಗೆ ಅಡಕವಾಗಿದ್ದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಆದ್ದರಿಂದ ಈ ದೇಶದಲ್ಲಿ ಒಬ್ಬ ಒಳ್ಳೆಯ ಆಡಳಿತಗಾರ ಅಡ್ರೆಸ್ ಮಾಡಬೇಕಾಗಿರುವುದು ಜಾತಿಯನ್ನು, ಅಸಮಾನತೆಯನ್ನು. ಜಾತಿಯ ಕಾರಣದಿಂದಾಗಿ ಈ ದೇಶದ ಪ್ರತಿಭೆಯ ವ್ಯಾಪ್ತಿಯು ಕುಗ್ಗಿಹೋಗಿದೆ, ಅವಕಾಶಗಳ ವ್ಯೋಮವು ಕಿರಿದಾಗಿದೆ ಎಂಬುದು ಎಲ್ಲಿಯವರೆಗೆ ನಮ್ಮ ತಿಳಿವಳಿಕೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ದೇಶದ ಸರ್ವಾಂಗೀಣ ಏಳಿಗೆ ಎಂಬುದಿಲ್ಲ.

ಸಂವಿಧಾನವನ್ನು ಅಂಬೇಡ್ಕರ್ ರಚಿಸಿಟ್ಟು ಹೋದರು. ಆದರೆ ಜಾತಿವಾದಿಗಳ ಕೈಯಲ್ಲಿ ಸಿಕ್ಕಿ ಅದರ ಆಶಯಗಳು ನಗಣ್ಯವಾಗಿವೆ. ಜಾತಿವಾದವೇ ಹೂರಣವಾಗಿ ಸಂವಿಧಾನ ಅದರ ಕವಚವಾಗಿದೆ. ಇಂಡಿಯಾದ ಹಿಂದೂ ಜಾತಿಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು.
1. ಅಲ್ಪಸಂಖ್ಯಾತ ಬ್ರಾಹ್ಮಣೀಯ ಜಾತಿಗಳು
2. ಬಲಾಢ್ಯ ಊಳಿಗಮಾನ್ಯ ಜಾತಿಗಳು
3. ಬಹುಜನ ಹಿಂದುಳಿದ ಜಾತಿಗಳು ಮತ್ತು
4. ಬಹುಜನ ದಲಿತ ಜಾತಿಗಳು.

ಜಾತಿ ಪ್ರಗತಿ ವಿರೋಧಿ, ವಿನಾಶಕಾರಕ ಎಂದು ಒಬ್ಬ ಬ್ರಾಹ್ಮಣೀಯ ಮೇಲ್ಜಾತೀ ರಾಜಕಾರಣಿಗೆ ತಿಳಿಯುವುದಿಲ್ಲವೆಂದಲ್ಲ. ಅವನು ಜಾತಿವಿನಾಶದತ್ತ ಕಾರ್ಯೋನ್ಮುಖನಾದರೆ ತನ್ನ ಬುಡಕ್ಕೇ ಕೊಡಲಿ ಬೀಳುತ್ತದೆ ಎಂದು ಅವನಿಗೆ ತಿಳಿದಿದೆ. ಜಾತಿ ಪೋಷಣೆಯೇ ತನ್ನ ಅಸ್ತಿತ್ವಕ್ಕೆ ಆಧಾರ ಎಂದು ತಿಳಿದಿರುವುದರಿಂದಲೇ ಜಾತಿ ವಿಷಯ ಬಂದಾಗ ಅವನು ಜಾಣಗುರುಡು ಪ್ರದರ್ಶಿಸುತ್ತಾನೆ. ಬಲಾಢ್ಯ ಊಳಿಗಮಾನ್ಯ ಜಾತಿಗಳ ಪ್ರತಿನಿಧಿಗಳು ಆರಿಸಿ ಬರಲು ತಮ್ಮ ಜಾತಿಗಳನ್ನೆ ನೆಚ್ಚಿಕೊಂಡಿರುವುದರಿಂದ ಜಾತಿವಿನಾಶ ಅವರಿಗೆ ಬೇಕಾಗಿರುವುದಿಲ್ಲ. ಮೆದುಳನ್ನೇ ಬಂಡವಾಳ ಮಾಡಿಕೊಂಡಿರುವ ಬ್ರಾಹ್ಮಣೀಯ ಜಾತಿಜನ ಅಸಮಾನತೆ, ಭ್ರಷ್ಟಾಚಾರ ಎಲ್ಲ ಸಮಾಜಗಳಲ್ಲಿಯೂ ಇರುವಂಥದ್ದೆ ಎಂದೂ, ಜಾತಿಯಿಂದ ನಷ್ಟವೇನೂ ಇಲ್ಲ ಎಂದೂ ಪ್ರಚಾರ ಮಾಡಿಕೊಂಡು ಬರುತ್ತಿದ್ದಾರೆ. ಬಲಾಢ್ಯ ಊಳಿಗಮಾನ್ಯ ಜಾತಿಗಳು ತಮ್ಮ ಭುಜಬಲ ಮತ್ತು ಧನಬಲದಿಂದ ಬಹುಜನರನ್ನು ಹತ್ತಿಕ್ಕುತ್ತ ಜಾತಿವಾದವನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ವಾಸ್ತವವಾಗಿ ಇವೆರಡು ವರ್ಗಗಳು ಜಾತಿವ್ಯವಸ್ಥೆಯ ಪರಮ ಫಲಾನುಭವಿಗಳಾಗಿರುವುದರಿಂದ ಜಾತಿವಿನಾಶಕ್ಕೆ ಅವರು ವಿಮುಖರಾಗಿರುವುದು ಸಹಜವೇ ಆಗಿದೆ. ನಮ್ಮ ಜಾತಿಯ ವಕೀಲ, ನಮ್ಮ ಜಾತಿಯ ನ್ಯಾಯಾಧೀಶ, ನಮ್ಮವನೇ ಆದ ಮಹಾಲೇಖಪಾಲ ಮತ್ತು ನಮ್ಮ ಕೈಬೆರಳ ತುದಿಯಲ್ಲಿ ಆಡಿಸಬಹುದಾದ ಪೊಲೀಸ್ ಮುಖ್ಯಸ್ಥ ಇರುವವರೆಗೆ ಅವರಿಗೆ ಜಾತಿ ನಕಾರಾತ್ಮಕ ಎನಿಸುವುದಿಲ್ಲ. ಇನ್ನು, ಬಹುಜನ ಹಿಂದುಳಿದ ಜಾತಿಗಳು ಮತ್ತು ಬಹುಜನ ದಲಿತ ಜಾತಿಗಳು ಮಾತ್ರ ಜಾತಿವಿರೋಧಿ ಚಳವಳಿಗಳ ಭಾಗವಾಗಿದ್ದಾರೆ. ಇದು ಕಾಳ್ಗಿಚ್ಚಿನ ಎದುರು ಆಗಾಗ ಬಂದುಹೋಗುವ ತುಂತುರು ಮಳೆಯಷ್ಟೆ ಅಪ್ರಯೋಜಕವಾಗಿದೆ.

ನಮ್ಮನ್ನು ಆಳುವ ರಾಜಕಾರಣಿಗಳಿಗೆ ಆಳ್ವಿಕೆಯ ಮೂಲಪಾಠಗಳೇ ತಿಳಿದಿರುವುದಿಲ್ಲ. ಅನ್ನ, ಬಟ್ಟೆ, ವಸತಿ ಅಥವಾ ಆರೋಗ್ಯ, ವಿದ್ಯೆ, ವಿಮೆ ಇಂಥವು ಇವರ ಮೊದಲ ಆಯ್ಕೆಯಾಗಿರುವುದಿಲ್ಲ. ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸತ್ ಸದಸ್ಯರವರೆಗೆ ಅವರು ರಾಜಕಾರಣಕ್ಕೆ ಬರುವುದು ವಾಮಮಾರ್ಗದಲ್ಲಿ ಹಣ ಗಳಿಸಲು ಮತ್ತು ಅದನ್ನು ಬಳಸಿ ಮುಂದಿನ ಚುನಾವಣೆಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂಬುದು ಖಚಿತವಾಗಿದೆ. ನಮ್ಮ ಶಾಸಕರು, ಸಂಸದರು ತಮ್ಮ ಅನುದಾನವನ್ನು ಬಳಸುವ ಪರಿಯನ್ನು ನೋಡಿದರೆ ಇದು ತಿಳಿಯುತ್ತದೆ. ಅವರು ಶಾಲೆಗಳನ್ನು ಉತ್ತಮಪಡಿಸುವುದಕ್ಕಿಂತಲೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೆಚ್ಚು ಖರ್ಚು ಮಾಡಿರುತ್ತಾರೆ! ರೈತರ ಹೊಲ, ಮನೆ ನೋಡುವುದಿಲ್ಲ, ಮಳೆಬೆಳೆ ವಿಚಾರಿಸುವುದಿಲ್ಲ. ತಮ್ಮ ಕ್ಷೇತ್ರದ ಯಾವುದೇ ಕುಟುಂಬದ ಮದುವೆ, ಮುಂಜಿ ಶುಭಕಾರ್ಯದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಹಾಜರಿರುತ್ತಾರೆ. ಓಟು ಕೀಳುವುದಕ್ಕೆ ಭಾವನಾತ್ಮಕ ನಂಟು ಬೆಳೆಸಿಕೊಳ್ಳುವುದು (ಓಟುಗಳನ್ನು ಹಣ ಕೊಟ್ಟು ಖರೀದಿಸಬೇಕೆಂದು ತಿಳಿದೂ) ಅವರಿಗೆ ಅನಿವಾರ್ಯವಾಗಿರುತ್ತದೆ.

ಇನ್ನು ಮೇಲುಸ್ತರದ ರಾಜಕಾರಣಿಗಳು ಬೇರೊಂದು ರೀತಿಯಲ್ಲಿ ತಮ್ಮ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಇವರು ಹೆಚ್ಚಾಗಿ ಸರ್ಕಾರದ ನೀತಿ ನಿರೂಪಕರು. ಅಪಾರ ಹಣ ಇವರ ಬೆನ್ನಿಗಿರುತ್ತದೆ. ಪಕ್ಷ ಕಟ್ಟುವುದೇ ಇವರ ಕೆಲಸ. ಸರ್ಕಾರದ ಕೆಲಸಕ್ಕಿಂತಲೂ ಅದು ಮುಖ್ಯ ಎಂದು ತಿಳಿದವರು, ಅದಕ್ಕಾಗಿ ಭ್ರಷ್ಟಾಚಾರ ಅನಿವಾರ್ಯ ಎಂದು ನಂಬಿರುವವರು ಇವರು. ಅದರ ಜೊತೆಗೇ ತಮ್ಮ ಜಾತಿಯನ್ನು, ಮಠಗಳನ್ನೂ ಬೆಳೆಸುತ್ತಾರೆ. ತಮ್ಮ ಓಟುಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಎಪ್ಪತ್ತು ವರ್ಷಗಳು ಇಂಥ ರಾಜಕಾರಣಿಗಳಿಂದ ನಾವು ಆಳಿಸಿಕೊಂಡಿದ್ದೇವೆ.

ಈ ದೇಶದಲ್ಲಿ ರಾಜ್ಯಾಧಿಕಾರ ಎನ್ನುವುದು ಕೆಟ್ಟರಕ್ತವಾಗಿದೆ. ಆ ರಕ್ತದ ರುಚಿ ಮಾನ, ಪ್ರಾಣದ ರುಚಿಗಿಂತಲು ಮಿಗಿಲು. ಒಬ್ಬ ಹಿರಿಯ ಮಂತ್ರಿ ಭ್ರಷ್ಟಾಚಾರದ ಹಗರಣದಲ್ಲಿ ಜೈಲಿಗೆ ಹೋದವನು ಹಿಂದಿರುಗಿ ಬರುವಾಗ ತನ್ನ ಕೈ ಮೇಲೆತ್ತಿ ಎರಡು ಬೆರಳುಗಳನ್ನು ಆಡಿಸುತ್ತಾ ವಿಜಯಶಾಲಿಯಾದಂತೆ ಹೊರಬರುತ್ತಾನೆ. ಭ್ರಷ್ಟಾಚಾರ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದರೂ ಅವನ ಜಾತಿಯ ಮಠಾಧೀಶರು ಬೆಂಬಲ ಸೂಚಿಸಲು ಬೀದಿಗಿಳಿಯುತ್ತಾರೆ. ಮತ್ತೊಬ್ಬ ಭ್ರಷ್ಟ ಮಂತ್ರಿ ಜೈಲು ಪಾಲಾದರು ಎಂದು ಅವನ ಜಾತಿಜನ ಮಂತ್ರಿ ಶಾಸಕರ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಭ್ರಷ್ಟರನ್ನು ಯಾಕೆ ಬೆಂಬಲಿಸುತ್ತೀರಿ ಎಂದು ಕೇಳಿನೋಡಿ. ಅವರ ಉತ್ತರ- ಬೇರೆ ಜಾತಿಯಲ್ಲಿ ಭ್ರಷ್ಟರಿಲ್ಲವೆ? ಎಂಬುದಾಗಿರುತ್ತದೆ. ಅವರ ನಾಯಕರು ಸಜ್ಜನರಲ್ಲವೆಂದು ಬೆಂಬಲಿಸುವ ಮಠಾಧೀಶರಿಗೂ, ರೈತರಿಗೂ, ಶ್ರಮಿಕರಿಗೂ, ಕೂಲಿಕಾರರಿಗೂ ಗೊತ್ತಿರುತ್ತದೆ. ಈ ನಾಯಕನಿಗೂ ತನ್ನ ಕುಕೃತ್ಯಗಳಿಂದಲೇ ಅವರನ್ನು ಸಂಪ್ರೀತಗೊಳಿಸಬೇಕೆಂದು ತಿಳಿದಿರುತ್ತದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಇತ್ತೀಚೆಗೆ ಮಥುರಾದಲ್ಲಿ ಭಾಷಣ ಮಾಡುವಾಗ ಮಾನ್ಯ ಪ್ರಧಾನ ಮಂತ್ರಿಗಳು “ಕೆಲವರಿಗೆ ಓಂ ಮತ್ತು ಗೋವು ಶಬ್ದಗಳು ಹಿಡಿಸುವುದಿಲ್ಲ” ಎಂದು ಹೇಳಿದ್ದಾರೆ. ಇದು ಯೋಚಿಸಬೇಕಾದ ವಿಷಯವೆ? ಸದಾ ಬಾಯಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಇವರ ಪ್ರಥಮ ಕಾಳಜಿ ಏನು ಎಂಬುದನ್ನು ಹೊರಹಾಕಿದ್ದಾರೆ. ಒಂದು ವರ್ಗದ ಆದ್ಯತೆಗಳನ್ನೆ ಒತ್ತಿ ಹೇಳುವ ಇವರು ಕಿಂಚಿತ್ ಅಳುಕು ಇಲ್ಲದೆ ನಾನು ಜಾತ್ಯತೀತನಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ. ಹಾಗೆ ಹೇಳುವುದರ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಸಂವಿಧಾನವನ್ನು ರಕ್ಷಿಸಬೇಕಾದವರು ಭಕ್ಷಣೆಗೆ ಇಳಿದಿದ್ದಾರೆ ಎಂದು ನಿರ್ವಾಹವಿಲ್ಲದೆ ಹೇಳಬೇಕಾಗಿದೆ. ನಮ್ಮ ನಾಯಕ ಹೀಗೆ ಹೇಳುತ್ತಾರೆಂದು ಅರಿತ ಅವರ ಹಿಂಬಾಲಕರು ಅನ್ಯಧರ್ಮೀಯರನ್ನು ಹೊಡೆದು, ಬಡಿದು ‘ಜೈಶ್ರೀರಾಮ್’ ಎಂದು ಹೇಳಿಸುತ್ತಾರೆ. ಮನುಷ್ಯನನ್ನು ಕೊಂದು (ಲಿಂಚಿಸಿ) ಗೋವನ್ನು ರಕ್ಷಿಸುತ್ತಾರೆ. ಇಂತಹ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅಂಥವರನ್ನು ಬೇಟೆಯಾಡುತ್ತಾರೆ. ಆದ್ದರಿಂದ ಜಾತ್ಯತೀತವಾದಿ ಆಗಿರುವುದಕ್ಕಿಂತಲೂ ಸಂವಿಧಾನವಾದಿ ಆಗಿರುವುದು ಇಂದಿನ ತುರ್ತು ಎಂದು ಹೇಳಲೇಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...