Homeಎಕಾನಮಿಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ....

ಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ….

- Advertisement -
- Advertisement -

ಏನಿಲ್ಲಾ, ಈ ನಮ್ಮ ಕರುನಾಡಿನ ಸಚಿವ ಸಂಪುಷ್ಟದ ಸನ್ಮಾನ್ಯ ಸದಸ್ಯರೆಲ್ಲಾ ʻNDRF NDRF’ ಅನ್ನಾಕ ಹತ್ಯಾರೆಲ್ಲಾ, ಏನದು?

ಅಷ್ಟ ಅಲ್ಲಾ, ಇದು ಒಂದಲ್ಲ. ಎರಡು. ಬದಲಾದ ರಾಜಕೀಯ ಪರಿಸ್ಥಿತಿಯೊಳಗ ಎಲ್ಲದಕ್ಕೂ ಎರಡೆರಡು ರೂಪ ಇರತಾವಲ್ಲಾ, ನಾಯಕರದು ರಾಜ್ಯಮಟ್ಟದೊಳಗ ಒಂದು, ತಮ್ಮ ಕ್ಷೇತ್ರದೊಳಗ ಇನ್ನೊಂದು ರೂಪ ಇರ್ತದಲ್ಲಾ, ಹಂಗ, ಇದರದೂ ಎರಡು ರೂಪ ಅದಾವು.

ದೇಶದ ಯಾವುದೇ ಮೂಲಿಯೊಳಗ ನೆರೆ, ಬರ, ಭೂಕಂಪ, ಸುಂಟರಗಾಳಿ ಅಥವಾ ಇತರ ಪ್ರಕೃತಿ ವಿಕೋಪಗಳು ಆದರ ಅಲ್ಲಿಗೆ ಸಹಾಯ ಮಾಡಲಿಕ್ಕೆ ಅಂತ ಇರೋದು ಭಾರತೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ. ಇದು ಕೇಂದ್ರ ಗೃಹ ಇಲಾಖೆಯ ಪ್ರಕೃತಿ ವಿಕೋಪ ವಿಭಾಗದ ಒಂದು ಭಾಗ. ಈ ಸಂಸ್ಥೆಯ ಕೆಳಗಡೆ ಇರೋವು ವಿವಿಧ ರಾಜ್ಯಗಳ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಗಳು. ಸನ್ 2005 ರಲ್ಲಿ ಜಾರಿಯಾದ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯ ಕೆಳಗ ಈ ಸಂಸ್ಥೆಗಳು ಆರಂಭವಾದವು.

ಇಂಥಾ ಎಜೆನ್ಸಿಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕೃತಿ ವಿಕೋಪಗಳು ಎಲ್ಲೆಲ್ಲಿ ಆಗತಾವೋ ಅಲ್ಲಲ್ಲಿ ತನು ಮನ ಧನ ಸಹಾಯ ಮಾಡಬೇಕು ಅಥವಾ ಹಾಗೇಂತ ನಮ್ಮ ಆಶಾ ಇರಬಹುದೇನೋ.

ಈಗ ನಮ್ಮಲ್ಲೆ ತನುವಿಗೊಂದು ಎನ್‍ಡಿಆರ್‌ಎಫ್ ಹಾಗೂ ಧನಕ್ಕೆ ಇನ್ನೊಂದು ಎನ್‍ಡಿಆರ್‌ಎಫ್ ಅವ. ಆದರ ಮನಕ್ಕ ಅಂತ ಮಾತ್ರ ಪ್ರತ್ಯೇಕ ಸಂಸ್ಥೆ ಇಲ್ಲ. ಅದು ಕೇಂದ್ರ ಸರಕಾರದ ಮನದಲ್ಲಿ ಇರಬಹುದೇನೋ, ಹೋಗಲಿ ಬಿಡರಿ.

ಒಂದನೇ ಎನ್‍ಡಿಆರ್‌ಎಫ್ ಅಂದರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ದಳ. (NDRF national disaster response force) ದೆಹಲಿಯ ಮುಖ್ಯ ಕಚೇರಿ ಬಿಟ್ಟರ ಇದಕ್ಕ ಬ್ಯಾರೆ ಬ್ಯಾರೆ ರಾಜ್ಯದೊಳಗ 17 ಉಪವಿಭಾಗ ಅವ.

ಇದರಾಗ ಭಾರತೀಯ ಪೊಲೀಸ್ ಸೇವೆ ಹಾಗೂ ಭಾರತೀಯ ಅರೆಸೇನಾ ದಳದ ಅಧಿಕಾರಿಗಳು ಮತ್ತ ಬ್ಯಾರೆ ಬ್ಯಾರೆ ಸಿಬ್ಬಂದಿ ಇದ್ದಾರ. ಈ ಹಿಂದಿನ 15 ವರ್ಷದೊಳಗ ಇವರೆಲ್ಲಾ ಕೂಡಿ ಸುಮಾರು 17 ಲಕ್ಷ ಜನರ ಜೀವಾ ಉಳಿಸ್ಯಾರ. ಇಂಥವರ ಕೆಲಸದ ಬಗ್ಗೆ ಯಾರಿಗೂ ತಕರಾರು ಇಲ್ಲ. ಇರಲಿಕ್ಕೆ ಸಾಧ್ಯನೂ ಇಲ್ಲ. ಇದರಾಗೇನು ರಾಜಕೀಯ ಇದ್ದಂತಿಲ್ಲ. ಹೋದವರ್ಷ ಮಹಾರಾಷ್ಟ್ರದ ಕೊಲ್ಹಾಪುರದ ಪ್ರವಾಹದಾಗ ಉಳದ ಹೆಣಮಗಳೊಬ್ಬಳು ಆ ಸಿಬ್ಬಂದಿ ಕಾಲಿಗೆ ಬಿದ್ದು ‘ನೀನೇ ನಮ್ಮ ಪಾಂಡುರಂಗೋ ಯಪ್ಪಾ’ ಅಂತ ಹೇಳಿದ್ದ ವಿಡಿಯೋ ನಿಮ್ಮ ಫೋನಿನ ವಾಟ್ಸಪ್ಪಿಗೆ ಬಂದಿತ್ತಲ್ಲ, ಅಕೀ ಭಾವನೆಯೇ ಉಳಿದೆ ಎಲ್ಲಾರ ಭಾವನೆ.

ಆದರ ಎಲ್ಲಾರ ತಕರಾರು ಇರುವುದು ಆ ಇನ್ನೊಂದು ಎನ್‍ಡಿಆರ್‌ಎಫ್‍ನ ಬಗ್ಗೆ. ಇದು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (NDRF national disaster response force).

ಇವರು ರಾಜ್ಯಗಳೊಳಗ ವಿಕೋಪ ನಡೆದಾಗ ಅವರಿಗೆ ದುಡ್ಡು ಕೊಡುವವರು. (ಕೇಂದ್ರಕ್ಕಂತೂ ಪ್ರಕೃತಿ ವಿಕೋಪ ಬರಂಗಿಲ್ಲಲ್ಲಾ. ಅಲ್ಲಿ ಬರೋ ವಿಕೋಪ ಅಂದರ ಬರೇ ಎಲೆಕ್ಷನ್ ಒಂದ)

ಇವರು ಯಾವಾಗ ಯಾರಿಗೆ ಏನು ಕೊಡುತ್ತಾರೆ ಅನ್ನೋದು ಮಾತ್ರ ಭಾರತೀಯ ಮತದಾರನ ಮನಸ್ಸಿಗಿಂತಾ ನಿಗೂಢ. ಯಾವಾಗರ ಹಿಂದೀ ಝೀ ಟಿವಿಯೊಳಗ ನಿಗೂಢ ರಹಸ್ಯ ಅಂತ ಇದರದ್ದೂ ಒಂದು ಎಪಿಸೋಡು ಬರಬಹುದು.

ಉದಾಹರಣೆಗೆ, ಈ ಸತೆ, ಕರ್ನಾಟಕಕ್ಕ 1,872 ಕೋಟಿ ಕೊಟ್ಟಾರ (ಕೇಂದ್ರ ಹಾಗೂ ರಾಜ್ಯ ನಿಧಿಗಳ ಲೆಕ್ಕದಲ್ಲಿ) ಮಹಾರಾಷ್ಟ್ರಕ್ಕ 3,150 ಕೋಟಿ, ಓಡಿಶಾಗೆ 3,666 ಕೋಟಿ . ರಾಜಸ್ತಾನಕ್ಕೆ 1,666 ಕೋಟಿ, ಆಂಧ್ರ 770 ಕೋಟಿ, ಮತ್ತ ಉತ್ತರ ಪ್ರದೇಶಕ್ಕೆ 541 ಕೋಟಿ . ಹಿಮಾಚಲ ಪ್ರದೇಶಕ್ಕೆ 434 ಕೋಟಿ, ಗೋವಾ ಮಿಜೋರಾಮಿಗೆ ಏನಿಲ್ಲಾ. ನಾಗಾಲ್ಯಾಂಡಿಗೆ 5 ಕೋಟಿ ಹಾಗೂ ಮಣಿಪುರಕ್ಕೆ 9.9 ಕೋಟಿ ಬಿಡುಗಡೆ ಆಗೇದ.

ಇದಲ್ಲಾಗಿಂತ ಮಜಾ ಏನೆಂದರ ನಾವು ಆರಿಸಿ ಕಳಿಸಿದ ಘನ ಸರಕಾರದವರು ನಾವು ಕಟ್ಟಿದ ಸುಂಕದ ರೊಕ್ಕದಾಗ ಈ ಸಂಸ್ಥಾದ ತಿಜೋರಿಯೊಳಗ ಒಂದು ವರ್ಷಕ್ಕೆ ಇಟ್ಟಿರೋದು ಬರೇ 23,465 ಕೋಟಿ ರೂಪಾಯಿ.

ಕರ್ನಾಟಕದ ಜನಾ ಒಂದು ವರ್ಷಕ್ಕ ಸುಮಾರು 29,000 ಕೋಟಿ ರೂಪಾಯಿ ಬರೇ ಜಿಎಸ್‍ಟಿ ಅಂದರ ಗಬ್ಬರ ಸಿಂಗ್ ಟ್ಯಾಕ್ಸ ಕಟ್ಟತಾರ. ಬ್ಯಾರೆ ಟ್ಯಾಕ್ಸಿನ ಲೆಕ್ಕಾ ಬ್ಯಾರೆ ಮತ್ತ. ಇದರಿಂದ ಸೆಂಟರಿನವರ ಹಾರ್ಟು ಎಷ್ಟು ದೊಡ್ಡದು ಅಂತ ತಿಳಕೋಬಹುದು.

ಅದರಾಗೂನು, ಎಲ್ಲಾ ರಾಜ್ಯಗಳ ಎಲ್ಲಾ ಥರದ ವಿಕೋಪಗಳಿಗೆ ಅವರು ಬಿಡುಗಡೆ ಮಾಡಿರುವುದು ಬರೇ 6,614 ಕೋಟಿ. ಅವರ ತಿಜೋರಿಯೊಳಗ ಇನ್ನೂ 51 ಶೇಕಡಾ ಹಣದ ಶಿಲ್ಕು ಹಂಗ ಬಾಕಿ ಉಳಿದದ.

ನಮ್ ಸೀಎಮ್ ಬಿ.ಎಸ್ ಯಡಿಯೂರಪ್ಪನವರು ಮನ್ನೆ ನೆರೆ ಪರಿಹಾರಕ್ಕೆ 38,000 ಕೋಟಿ ರೂಪಾಯಿ ಕೇಳಿದಾಗ ಮ್ಯಾಲಿನವರು ನಿಮ್ಮ ನಷ್ಟದ ಅಂದಾಜೇ ಸರಿ ಇಲ್ಲ ಎಂದು ಬೈದು ಕಳಿಸಿದ್ದು ಯಾಕ ಅಂತ ಗೊತ್ತಾತಲ್ಲಾ ? ನೋಡ್ರಿ, ಹೆಂಗದ ಮಜಾ!

ಹೆಚ್ಚಿನ ವಿವರಗಳಿಗೆ –

www.ndrf.gov.in

https://www.ndmindia.nic.in/images/allocation.PDF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...