Homeಚಳವಳಿಮುಳುಗುತ್ತಿರುವ ಭಾರತ ಮತ್ತು ಅದರೊಳಗಿರುವ ನಾವು: ದೇವನೂರು ಮಹಾದೇವ

ಮುಳುಗುತ್ತಿರುವ ಭಾರತ ಮತ್ತು ಅದರೊಳಗಿರುವ ನಾವು: ದೇವನೂರು ಮಹಾದೇವ

- Advertisement -
- Advertisement -

ಇದು ಇತ್ತೀಚಿನ ಒಂದು ಸುದ್ದಿ: ಪ್ರಜಾವಾಣಿ 19 ಸೆಪ್ಟೆಂಬರ್ 2019ರ ಸಂಚಿಕೆಯಲ್ಲಿ `ಮೋದಿಗಾಗಿ ಜನರ ಮುಳುಗಡೆ’ ಎಂಬ ತಲೆಬರಹದಲ್ಲಿ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಅವರ ಟ್ವೀಟ್‍ನ್ನು ಉಲ್ಲೇಖಿಸಲಾಗಿದೆ.

ಮೇಧಾ ಪಾಟ್ಕರ್ ಅವರ ಟ್ವೀಟ್ ಹೀಗಿದೆ: `ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಸಲುವಾಗಿ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ. ಹೀಗೆ ಭರ್ತಿ ಮಾಡಿರುವುದರಿಂದ ಸರೋವರದ ಹಿನ್ನೀರು 250 ಕಿ.ಮೀ.ನಷ್ಟು ಹಿಂದಕ್ಕೆ ಬಂದಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಗೋಳು ಮೋದಿ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಮೂಲೆಗುಂಪಾಗಿದೆ’

ಇದನ್ನು ಓದಿದ ಮೇಲೆ ಮುಳುಗಡೆ, ನಿರಾಶ್ರಿತರು ಹಾಗೂ ಮೋದಿ ಜನ್ಮ ದಿನಾಚರಣೆ ಜೊತೆಗೂಡಿ ನನ್ನ ಮನಸ್ಸಲ್ಲಿ ಉಳಿದು ಬಿಟ್ಟಿತು. ನಿಧಾನಕ್ಕೆ ಈ ಮುಳುಗಡೆ ಭಾರತದ ಇಂದಿನ ಸ್ಥಿತಿಗತಿಗೆ ಕನ್ನಡಿ ಹಿಡಿದಂತೆ ಕಾಣಿಸತೊಡಗಿತು.

ಹೌದು, ಭಾರತದ ಆರ್ಥಿಕತೆ, ಕೈಗಾರಿಕೆ, ಬ್ಯಾಂಕ್, ಉದ್ಯೋಗ ಮುಳುಗಡೆಯಾಗುತ್ತಿವೆ. ಜಿಡಿಪಿಯೂ ಮುಳುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುತ್ತಿರುವ ಒಕ್ಕೂಟ ವ್ಯವಸ್ಥೆ, ಬಹುತ್ವ ಹಾಗೂ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ನ್ಯಾಯಾಂಗ, ಸಿಬಿಐ, ನಾಲ್ಕನೆಯ ಅಂಗ ಮಾಧ್ಯಮ ಇಂಥವುಗಳೂ ಸರ್ಕಾರದ ಹಸ್ತಕ್ಷೇಪದಿಂದ ಮುಳುಗುತ್ತ ಉಸಿರಾಡಲು ಕಷ್ಟ ಪಡುತ್ತಿವೆ. ಇನ್ನೊಂದು ಕಡೆ ಗುಂಪು ಹತ್ಯೆಗಳಾಗುತ್ತಿದ್ದರೂ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿಲ್ಲ. ಇದೆಲ್ಲಾ ಏನನ್ನು ಹೇಳುತ್ತಿದೆ? ಆಳ್ವಿಕೆ ನಡೆಸುತ್ತಿರುವವರು ಅಸಮರ್ಥರು ಎಂದು ತಾನೆ? ಇಷ್ಟು ಸಾಲದು ಎಂಬಂತೆ so called ಅಭಿವೃದ್ಧಿ ಹೆಸರಿನಲ್ಲಿ ನಡೆದ ಅರಣ್ಯ ನಾಶ, ಗಣಿಗಾರಿಕೆ, ಪ್ರಕೃತಿ ಧ್ವಂಸದಿಂದ ಹುಚ್ಚು ಹೊಳೆ, ಭೂ ಕುಸಿತ, ಸಾವು-ನೋವು ಆಕ್ರಂದನ ಹೆಚ್ಚುತ್ತಿದೆ. ಸರ್ಕಾರಗಳು ಕಣ್ಣೆತ್ತಿಯೂ ನೋಡುತ್ತಿಲ್ಲ.

ಇದನ್ನೆಲ್ಲಾ ನೋಡಿದಾಗ ಭಾರತ ಮುಳುಗುತ್ತಿರುವ ಹಡಗು ಎನ್ನದೆ ಬೇರೆನು ಹೇಳಬೇಕು? ಹಡಗನ್ನು ಮುಳುಗಿಸುತ್ತಿರುವ ತೂತುಗಳ ಕಡೆಗೆ ಜನಸ್ತೋಮದ ಗಮನ ಹೋಗದಂತಿರಲು ಹಡಗಿನ ಕ್ಯಾಪ್ಟನ್‍ಗಳಿಂದ, ಮಹಾಭಾರತದ ವಿರಾಟ ಪರ್ವದ ಉತ್ತರನ ಪೌರುಷ ನಾಟಕ ನಡೆಯುತ್ತಿದೆ. ಈ ನಾಟಕದ ಭಾಗವಾಗಿಯೇ ಕಾಶ್ಮೀರದ ಸಮಸ್ಯೆಯನ್ನು ನೋಡಬೇಕು ಅನ್ನಿಸುತ್ತದೆ. ನೆನಪಿಸಿಕೊಳ್ಳೋಣ- ಶೇಖ್ ಅಬ್ದುಲ್ಲಾ ಇಲ್ಲದಿದ್ದರೆ ಕಾಶ್ಮೀರ ಭಾರತದ್ದು ಆಗುತ್ತಿರಲಿಲ್ಲ.

ಸುಗತ ಶ್ರೀನಿವಾಸರಾಜು ಅವರು ಶೇಖ್ ಅಬ್ದುಲ್ಲಾ ಅವರ ವ್ಯಕ್ತಿತ್ವವನ್ನು ಕಣ್ಣಿಗೆಕಟ್ಟುವಂತೆ ವಿವರಿಸುತ್ತಾರೆ- ಶೇಖ್ ಅಬ್ದುಲ್ಲಾರನ್ನು ನೆಹರೂ ಸರ್ಕಾರ ಅನೇಕ ವರ್ಷಗಳ ಕಾಲ ಗೃಹಬಂಧನದಲ್ಲಿರಿಸಿ ಬಿಡುಗಡೆಗೊಳಿಸಿದ ನಂತರ ಅವರು ಪಾಕಿಸ್ತಾನಕ್ಕೂ ಒಮ್ಮೆ ಭೇಟಿ ನೀಡುತ್ತಾರೆ. ಆಗ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಭುಟ್ಟೋ ಅವರು ಸ್ವತಃತಾವೇ ವಿಮಾನ ನಿಲ್ದಾಣಕ್ಕೆ ಬಂದು ಶೇಖ್‍ರನ್ನು ಸ್ವಾಗತಿಸುತ್ತಾರೆ. ಪಾಕಿಸ್ತಾನದಲ್ಲಿ ಅವರಿಗೆ ಭವ್ಯ ಸ್ವಾಗತ ಸಿಗುತ್ತದೆ. ಪಾಕಿಸ್ತಾನದ ಡಾನ್ ಪತ್ರಿಕೆ “ಶೇಖ್‍ ಅಬ್ದುಲ್ಲಾರಿಗೆ ನೆಹರೂ ಆಡಳಿತದ ಇಂಡಿಯಾ ಸಾಕಾಗಿ ಬೇಸತ್ತು ಹೋಗಿರಬೇಕು, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಲು ಇದು ಸಕಾಲ” ಎಂದೆಲ್ಲಾ ಬರೆಯುತ್ತದೆ. ಒಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಪತ್ರಿಕಾಕರ್ತರು ಅದೇ ಪ್ರಶ್ನೆ ಕೇಳಿದಾಗ ಶೇಖ್ ಅವರ ಉತ್ತರ- ‘ನೆಹರೂ ಒತ್ತಡಕ್ಕೆ ಸಿಲುಕಿ ನನ್ನನ್ನು ಬಂಧನದಲ್ಲಿ ಇರಿಸಿದ್ದಿರಬಹುದು. ಆದರೂ ಆತ ನನ್ನ ಸ್ನೇಹಿತನೆ. ಭಾರತ ಜಾತ್ಯಾತೀತ ದೇಶ. ಕಷ್ಟವೋ ಸುಖವೋ ಕಾಶ್ಮೀರ ಜಾತ್ಯಾತೀತ ಭಾರತದಲ್ಲಿ ಇರಲು ಬಯಸುತ್ತದೆ. ಇಸ್ಲಾಮಿಕ್ ರಿಪಬ್ಲಿಕ್ ಎನಿಸಿಕೊಂಡಿರುವ ಪಾಕಿಸ್ತಾನಕ್ಕಂತೂ ಸೇರುವುದಿಲ್ಲ’ ಎಂದು ನೇರವಾಗಿ ಸ್ಪಷ್ಟವಾಗಿ ಉತ್ತರಿಸುತ್ತಾರೆ.

ಶೇಖ್ ಅಬ್ದುಲ್ಲಾ ಅವರು ಭಾರತಕ್ಕೆ ಹಿಂತಿರುಗುವಾಗ ಅವರನ್ನು ಬೀಳ್ಕೊಡುವುದಕ್ಕೆ ಒಬ್ಬರೂ ಇರುವುದಿಲ್ಲ!. ಇದು ಕಾಶ್ಮೀರದ ಹೃದಯ. ಇದರ ಅರಿವಿಲ್ಲದ ಮೋದಿಶಾದ್ವಯರು ಕಾಶ್ಮೀರದ ನೆಲಕ್ಕೆ ಲಗ್ಗೆ ಇಟ್ಟರು. ಕಾಶ್ಮೀರಿ ಹೃದಯಕ್ಕೆ ಆಘಾತ ಮಾಡಿಬಿಟ್ಟರು. ಮೋದಿಶಾದ್ವಯರು ಚಕ್ರವರ್ತಿಯಂತೆ ನಡೆದುಕೊಳ್ಳಲಿಲ್ಲ, ಪಾಳೆಗಾರರಂತೆ ವರ್ತಿಸಿಬಿಟ್ಟರು.

ಕಾಶ್ಮೀರವನ್ನು ಛಿದ್ರಗೊಳಿಸಿದ್ದೂ ಕೂಡ ಭಾರತವೆಂಬ ಮುಳುಗುತ್ತಿರುವ ಹಡಗಿನಕಡೆ ಗಮನ ಹರಿಸದಿರಲಿ ಎಂಬುದಕ್ಕೇನೊ ಅನ್ನಿಸುತ್ತಿದೆ. ಹಾಗೇನೆ ಉತ್ತರನ ಪೌರುಷದಲ್ಲಿ ಉಪ ಪ್ರಸಂಗಗಳೂ ಆಗಾಗ ಬರುತ್ತವೆ. ‘ಒಂದೇ ಭಾಷೆ’ ಅನ್ನುವುದು – ಆಗ ಯಾರೂ ಮುಳುಗಡೆಕಡೆ ನೋಡುವುದಿಲ್ಲ. ‘ಒಂದೇ ಸಲ ಚುನಾವಣೆ’ ಅನ್ನುವುದು ಆಗ ಯಾರೂ ಮುಳುಗಡೆಕಡೆ ನೋಡುವುದಿಲ್ಲ. ಆರ್‍ಬಿಐ ಗೌರ್ನರ್ GDP ಐದಕ್ಕಿಂತ ಕೆಳಗಿಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದಾಗ ಮಾರನೆ ದಿನವೇ `ಎರಡು ಪಾರ್ಟಿ ವ್ಯವಸ್ಥೆ’ ಅನ್ನುವುದು. ಆಗ ಯಾರು ಮುಳುಗಡೆಕಡೆ ನೋಡುವುದಿಲ್ಲ. ಏನೂ ಇಲ್ಲದಿದ್ದರೆ ‘ಮೈಸೂರ್ ಪಾಕ್ ನಮ್ಮದು’ ಅಂದು ಬಿಡುವುದು! ಹೀಗೆ ಸರ್ಕಾರ ನಡೆಯುತ್ತಿದೆ. ಭಾರತ ಎಂಬ ಹಡಗು ದಿನೇ ದಿನೇ ಮುಳುಗುತ್ತಿದೆ.

ಈ ಮುಳುಗಡೆ ಸಂದರ್ಭದಲ್ಲಿ ನಾವು ಮಾಡಬಹುದಾದರೂ ಏನು? ಉದ್ಯೋಗದ ಕುಸಿತ, GDP ಕುಸಿತ, ಸಾರ್ವಜನಿಕ ಸಂಪತ್ತಿನ ಧ್ವಂಸ ಇವುಗಳನ್ನು ಸರ್ಕಾರದ `ಅಚ್ಚೇ ದಿನ್’, `ವೈಬ್ರೆಂಟ್ ಇಂಡಿಯಾ’ ಇತ್ಯಾದಿ, ಇತ್ಯಾದಿ ಬಾಣ ಬಿರುಸು ಬಿಟ್ಟು ಬೇರೆಕಡೆ ಗಮನ ಸೆಳೆದಷ್ಟೂ ಅದನ್ನು ಮೀರಿಸುವಂತೆ ಉದ್ಯೋಗದ ಕುಸಿತ, GDP ಕುಸಿತ, ಸಾರ್ವಜನಿಕ ಸಂಪತ್ತಿನ ಧ್ವಂಸ ಇಂಥವುಗಳನ್ನು ಸಾರ್ವಜನಿಕ ಮಾತುಕತೆಯಾಗಿಸಬೇಕು. ಶ್ರೀಪಾದ ಭಟ್ ಒಂದು ಲೇಖನದಲ್ಲಿ ಹೇಳಿರುವಂತೆ `ಜನರ ನಿರೀಕ್ಷೆಗಳು ಮತ್ತು ಹತಾಶೆಗಳ ಆಳ ಮತ್ತು ಪ್ರಮಾಣವನ್ನು ಅರಿಯಬೇಕಾಗಿದೆ. ಬೌದ್ಧಿಕ ವಾಕ್ಚಾತುರ್ಯಕ್ಕಿಂತ ಪಿಸುಮಾತಿನ ಕನವರಿಕೆಗಳು ಜನ ಸಂಪರ್ಕಕ್ಕೆ ಅಗತ್ಯವಾಗಿದೆ. ಇವನ್ನು ಸಾಂಸ್ಕøತಿಕ, ರಾಜಕೀಯ, ಆರ್ಥಿಕ ನೆಲೆಯಲ್ಲಿ ಅರಿತುಕೊಳ್ಳಬೇಕು.’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....