Homeಚಳವಳಿಮುಳುಗುತ್ತಿರುವ ಭಾರತ ಮತ್ತು ಅದರೊಳಗಿರುವ ನಾವು: ದೇವನೂರು ಮಹಾದೇವ

ಮುಳುಗುತ್ತಿರುವ ಭಾರತ ಮತ್ತು ಅದರೊಳಗಿರುವ ನಾವು: ದೇವನೂರು ಮಹಾದೇವ

- Advertisement -
- Advertisement -

ಇದು ಇತ್ತೀಚಿನ ಒಂದು ಸುದ್ದಿ: ಪ್ರಜಾವಾಣಿ 19 ಸೆಪ್ಟೆಂಬರ್ 2019ರ ಸಂಚಿಕೆಯಲ್ಲಿ `ಮೋದಿಗಾಗಿ ಜನರ ಮುಳುಗಡೆ’ ಎಂಬ ತಲೆಬರಹದಲ್ಲಿ ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ಅವರ ಟ್ವೀಟ್‍ನ್ನು ಉಲ್ಲೇಖಿಸಲಾಗಿದೆ.

ಮೇಧಾ ಪಾಟ್ಕರ್ ಅವರ ಟ್ವೀಟ್ ಹೀಗಿದೆ: `ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಸಲುವಾಗಿ ಸರ್ದಾರ್ ಸರೋವರವನ್ನು ಭರ್ತಿ ಮಾಡಲಾಗಿದೆ. ಹೀಗೆ ಭರ್ತಿ ಮಾಡಿರುವುದರಿಂದ ಸರೋವರದ ಹಿನ್ನೀರು 250 ಕಿ.ಮೀ.ನಷ್ಟು ಹಿಂದಕ್ಕೆ ಬಂದಿದೆ. ನೂರಾರು ಗ್ರಾಮಗಳು ಮುಳುಗಡೆಯಾಗಿವೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಗೋಳು ಮೋದಿ ಜನ್ಮ ದಿನಾಚರಣೆ ಸಂಭ್ರಮದಲ್ಲಿ ಮೂಲೆಗುಂಪಾಗಿದೆ’

ಇದನ್ನು ಓದಿದ ಮೇಲೆ ಮುಳುಗಡೆ, ನಿರಾಶ್ರಿತರು ಹಾಗೂ ಮೋದಿ ಜನ್ಮ ದಿನಾಚರಣೆ ಜೊತೆಗೂಡಿ ನನ್ನ ಮನಸ್ಸಲ್ಲಿ ಉಳಿದು ಬಿಟ್ಟಿತು. ನಿಧಾನಕ್ಕೆ ಈ ಮುಳುಗಡೆ ಭಾರತದ ಇಂದಿನ ಸ್ಥಿತಿಗತಿಗೆ ಕನ್ನಡಿ ಹಿಡಿದಂತೆ ಕಾಣಿಸತೊಡಗಿತು.

ಹೌದು, ಭಾರತದ ಆರ್ಥಿಕತೆ, ಕೈಗಾರಿಕೆ, ಬ್ಯಾಂಕ್, ಉದ್ಯೋಗ ಮುಳುಗಡೆಯಾಗುತ್ತಿವೆ. ಜಿಡಿಪಿಯೂ ಮುಳುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುತ್ತಿರುವ ಒಕ್ಕೂಟ ವ್ಯವಸ್ಥೆ, ಬಹುತ್ವ ಹಾಗೂ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ, ನ್ಯಾಯಾಂಗ, ಸಿಬಿಐ, ನಾಲ್ಕನೆಯ ಅಂಗ ಮಾಧ್ಯಮ ಇಂಥವುಗಳೂ ಸರ್ಕಾರದ ಹಸ್ತಕ್ಷೇಪದಿಂದ ಮುಳುಗುತ್ತ ಉಸಿರಾಡಲು ಕಷ್ಟ ಪಡುತ್ತಿವೆ. ಇನ್ನೊಂದು ಕಡೆ ಗುಂಪು ಹತ್ಯೆಗಳಾಗುತ್ತಿದ್ದರೂ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿಲ್ಲ. ಇದೆಲ್ಲಾ ಏನನ್ನು ಹೇಳುತ್ತಿದೆ? ಆಳ್ವಿಕೆ ನಡೆಸುತ್ತಿರುವವರು ಅಸಮರ್ಥರು ಎಂದು ತಾನೆ? ಇಷ್ಟು ಸಾಲದು ಎಂಬಂತೆ so called ಅಭಿವೃದ್ಧಿ ಹೆಸರಿನಲ್ಲಿ ನಡೆದ ಅರಣ್ಯ ನಾಶ, ಗಣಿಗಾರಿಕೆ, ಪ್ರಕೃತಿ ಧ್ವಂಸದಿಂದ ಹುಚ್ಚು ಹೊಳೆ, ಭೂ ಕುಸಿತ, ಸಾವು-ನೋವು ಆಕ್ರಂದನ ಹೆಚ್ಚುತ್ತಿದೆ. ಸರ್ಕಾರಗಳು ಕಣ್ಣೆತ್ತಿಯೂ ನೋಡುತ್ತಿಲ್ಲ.

ಇದನ್ನೆಲ್ಲಾ ನೋಡಿದಾಗ ಭಾರತ ಮುಳುಗುತ್ತಿರುವ ಹಡಗು ಎನ್ನದೆ ಬೇರೆನು ಹೇಳಬೇಕು? ಹಡಗನ್ನು ಮುಳುಗಿಸುತ್ತಿರುವ ತೂತುಗಳ ಕಡೆಗೆ ಜನಸ್ತೋಮದ ಗಮನ ಹೋಗದಂತಿರಲು ಹಡಗಿನ ಕ್ಯಾಪ್ಟನ್‍ಗಳಿಂದ, ಮಹಾಭಾರತದ ವಿರಾಟ ಪರ್ವದ ಉತ್ತರನ ಪೌರುಷ ನಾಟಕ ನಡೆಯುತ್ತಿದೆ. ಈ ನಾಟಕದ ಭಾಗವಾಗಿಯೇ ಕಾಶ್ಮೀರದ ಸಮಸ್ಯೆಯನ್ನು ನೋಡಬೇಕು ಅನ್ನಿಸುತ್ತದೆ. ನೆನಪಿಸಿಕೊಳ್ಳೋಣ- ಶೇಖ್ ಅಬ್ದುಲ್ಲಾ ಇಲ್ಲದಿದ್ದರೆ ಕಾಶ್ಮೀರ ಭಾರತದ್ದು ಆಗುತ್ತಿರಲಿಲ್ಲ.

ಸುಗತ ಶ್ರೀನಿವಾಸರಾಜು ಅವರು ಶೇಖ್ ಅಬ್ದುಲ್ಲಾ ಅವರ ವ್ಯಕ್ತಿತ್ವವನ್ನು ಕಣ್ಣಿಗೆಕಟ್ಟುವಂತೆ ವಿವರಿಸುತ್ತಾರೆ- ಶೇಖ್ ಅಬ್ದುಲ್ಲಾರನ್ನು ನೆಹರೂ ಸರ್ಕಾರ ಅನೇಕ ವರ್ಷಗಳ ಕಾಲ ಗೃಹಬಂಧನದಲ್ಲಿರಿಸಿ ಬಿಡುಗಡೆಗೊಳಿಸಿದ ನಂತರ ಅವರು ಪಾಕಿಸ್ತಾನಕ್ಕೂ ಒಮ್ಮೆ ಭೇಟಿ ನೀಡುತ್ತಾರೆ. ಆಗ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಭುಟ್ಟೋ ಅವರು ಸ್ವತಃತಾವೇ ವಿಮಾನ ನಿಲ್ದಾಣಕ್ಕೆ ಬಂದು ಶೇಖ್‍ರನ್ನು ಸ್ವಾಗತಿಸುತ್ತಾರೆ. ಪಾಕಿಸ್ತಾನದಲ್ಲಿ ಅವರಿಗೆ ಭವ್ಯ ಸ್ವಾಗತ ಸಿಗುತ್ತದೆ. ಪಾಕಿಸ್ತಾನದ ಡಾನ್ ಪತ್ರಿಕೆ “ಶೇಖ್‍ ಅಬ್ದುಲ್ಲಾರಿಗೆ ನೆಹರೂ ಆಡಳಿತದ ಇಂಡಿಯಾ ಸಾಕಾಗಿ ಬೇಸತ್ತು ಹೋಗಿರಬೇಕು, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಲು ಇದು ಸಕಾಲ” ಎಂದೆಲ್ಲಾ ಬರೆಯುತ್ತದೆ. ಒಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಪತ್ರಿಕಾಕರ್ತರು ಅದೇ ಪ್ರಶ್ನೆ ಕೇಳಿದಾಗ ಶೇಖ್ ಅವರ ಉತ್ತರ- ‘ನೆಹರೂ ಒತ್ತಡಕ್ಕೆ ಸಿಲುಕಿ ನನ್ನನ್ನು ಬಂಧನದಲ್ಲಿ ಇರಿಸಿದ್ದಿರಬಹುದು. ಆದರೂ ಆತ ನನ್ನ ಸ್ನೇಹಿತನೆ. ಭಾರತ ಜಾತ್ಯಾತೀತ ದೇಶ. ಕಷ್ಟವೋ ಸುಖವೋ ಕಾಶ್ಮೀರ ಜಾತ್ಯಾತೀತ ಭಾರತದಲ್ಲಿ ಇರಲು ಬಯಸುತ್ತದೆ. ಇಸ್ಲಾಮಿಕ್ ರಿಪಬ್ಲಿಕ್ ಎನಿಸಿಕೊಂಡಿರುವ ಪಾಕಿಸ್ತಾನಕ್ಕಂತೂ ಸೇರುವುದಿಲ್ಲ’ ಎಂದು ನೇರವಾಗಿ ಸ್ಪಷ್ಟವಾಗಿ ಉತ್ತರಿಸುತ್ತಾರೆ.

ಶೇಖ್ ಅಬ್ದುಲ್ಲಾ ಅವರು ಭಾರತಕ್ಕೆ ಹಿಂತಿರುಗುವಾಗ ಅವರನ್ನು ಬೀಳ್ಕೊಡುವುದಕ್ಕೆ ಒಬ್ಬರೂ ಇರುವುದಿಲ್ಲ!. ಇದು ಕಾಶ್ಮೀರದ ಹೃದಯ. ಇದರ ಅರಿವಿಲ್ಲದ ಮೋದಿಶಾದ್ವಯರು ಕಾಶ್ಮೀರದ ನೆಲಕ್ಕೆ ಲಗ್ಗೆ ಇಟ್ಟರು. ಕಾಶ್ಮೀರಿ ಹೃದಯಕ್ಕೆ ಆಘಾತ ಮಾಡಿಬಿಟ್ಟರು. ಮೋದಿಶಾದ್ವಯರು ಚಕ್ರವರ್ತಿಯಂತೆ ನಡೆದುಕೊಳ್ಳಲಿಲ್ಲ, ಪಾಳೆಗಾರರಂತೆ ವರ್ತಿಸಿಬಿಟ್ಟರು.

ಕಾಶ್ಮೀರವನ್ನು ಛಿದ್ರಗೊಳಿಸಿದ್ದೂ ಕೂಡ ಭಾರತವೆಂಬ ಮುಳುಗುತ್ತಿರುವ ಹಡಗಿನಕಡೆ ಗಮನ ಹರಿಸದಿರಲಿ ಎಂಬುದಕ್ಕೇನೊ ಅನ್ನಿಸುತ್ತಿದೆ. ಹಾಗೇನೆ ಉತ್ತರನ ಪೌರುಷದಲ್ಲಿ ಉಪ ಪ್ರಸಂಗಗಳೂ ಆಗಾಗ ಬರುತ್ತವೆ. ‘ಒಂದೇ ಭಾಷೆ’ ಅನ್ನುವುದು – ಆಗ ಯಾರೂ ಮುಳುಗಡೆಕಡೆ ನೋಡುವುದಿಲ್ಲ. ‘ಒಂದೇ ಸಲ ಚುನಾವಣೆ’ ಅನ್ನುವುದು ಆಗ ಯಾರೂ ಮುಳುಗಡೆಕಡೆ ನೋಡುವುದಿಲ್ಲ. ಆರ್‍ಬಿಐ ಗೌರ್ನರ್ GDP ಐದಕ್ಕಿಂತ ಕೆಳಗಿಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದಾಗ ಮಾರನೆ ದಿನವೇ `ಎರಡು ಪಾರ್ಟಿ ವ್ಯವಸ್ಥೆ’ ಅನ್ನುವುದು. ಆಗ ಯಾರು ಮುಳುಗಡೆಕಡೆ ನೋಡುವುದಿಲ್ಲ. ಏನೂ ಇಲ್ಲದಿದ್ದರೆ ‘ಮೈಸೂರ್ ಪಾಕ್ ನಮ್ಮದು’ ಅಂದು ಬಿಡುವುದು! ಹೀಗೆ ಸರ್ಕಾರ ನಡೆಯುತ್ತಿದೆ. ಭಾರತ ಎಂಬ ಹಡಗು ದಿನೇ ದಿನೇ ಮುಳುಗುತ್ತಿದೆ.

ಈ ಮುಳುಗಡೆ ಸಂದರ್ಭದಲ್ಲಿ ನಾವು ಮಾಡಬಹುದಾದರೂ ಏನು? ಉದ್ಯೋಗದ ಕುಸಿತ, GDP ಕುಸಿತ, ಸಾರ್ವಜನಿಕ ಸಂಪತ್ತಿನ ಧ್ವಂಸ ಇವುಗಳನ್ನು ಸರ್ಕಾರದ `ಅಚ್ಚೇ ದಿನ್’, `ವೈಬ್ರೆಂಟ್ ಇಂಡಿಯಾ’ ಇತ್ಯಾದಿ, ಇತ್ಯಾದಿ ಬಾಣ ಬಿರುಸು ಬಿಟ್ಟು ಬೇರೆಕಡೆ ಗಮನ ಸೆಳೆದಷ್ಟೂ ಅದನ್ನು ಮೀರಿಸುವಂತೆ ಉದ್ಯೋಗದ ಕುಸಿತ, GDP ಕುಸಿತ, ಸಾರ್ವಜನಿಕ ಸಂಪತ್ತಿನ ಧ್ವಂಸ ಇಂಥವುಗಳನ್ನು ಸಾರ್ವಜನಿಕ ಮಾತುಕತೆಯಾಗಿಸಬೇಕು. ಶ್ರೀಪಾದ ಭಟ್ ಒಂದು ಲೇಖನದಲ್ಲಿ ಹೇಳಿರುವಂತೆ `ಜನರ ನಿರೀಕ್ಷೆಗಳು ಮತ್ತು ಹತಾಶೆಗಳ ಆಳ ಮತ್ತು ಪ್ರಮಾಣವನ್ನು ಅರಿಯಬೇಕಾಗಿದೆ. ಬೌದ್ಧಿಕ ವಾಕ್ಚಾತುರ್ಯಕ್ಕಿಂತ ಪಿಸುಮಾತಿನ ಕನವರಿಕೆಗಳು ಜನ ಸಂಪರ್ಕಕ್ಕೆ ಅಗತ್ಯವಾಗಿದೆ. ಇವನ್ನು ಸಾಂಸ್ಕøತಿಕ, ರಾಜಕೀಯ, ಆರ್ಥಿಕ ನೆಲೆಯಲ್ಲಿ ಅರಿತುಕೊಳ್ಳಬೇಕು.’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...