Homeಅಂಕಣಗಳುದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

ದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

| ಥೂತ್ತೇರಿ |

ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಎಡೂರಪ್ಪನ ಸರಕಾರ ಬೀಳಲು ಬಿಡುವುದಿಲ್ಲ ಎಂಬಂತಹ ಮಾತನಾಡಿದಂದಿನಿಂದ ಸರಿಯಾಗಿ ನಿದ್ರೆಯೇ ಬಾರದಾಗಿದೆಯಲ್ಲಾ. ಗೌಡರ ಮಾತು ನಿಜವೋ, ಕನಸೋ ಇದರ ಮರ್ಮವೇನೆಂದು ತಿಳಿದುಕೊಳ್ಳಲು ಅವರಿಗೇ ಫೋನ್ ಮಾಡಿದರೆ ಹೇಗೆ ಎಂದು ಯೋಚಿಸಿ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: ಸಿದ್ದಲಿಂಗೇಶಾ ಎಡೆಯೂರು ಸಿದ್ದಲಿಂಗೇಶಾ ಶ್ರೀ ಎಡೆಯೂರು ಸಿದ್ದಲಿಂ….. “ಹಲೋ….”
“ನಮಸ್ಕಾರ ಸಾರ್ ನಾನು ಯಾಹೂ.”
“ಏನ್ಹೇಳಿ ಯಾಹು ಅವುರೆ.”
“ಒಂದೆರಡು ಮಾತಿವೆ ಸಾರ್.”
“ಅದರಿಂದೇನು ಪ್ರಯೋಜನ.”
“ಪತ್ರಿಕೆಗೆ ಬರೀಬೇಕು ಸಾರ್.”
“ಗೌರಿ ಸಿಸ್ಟರ್ ಪತ್ರಿಕೆ ನಿಂತೋಗಲಿಲ್ಲವ.”
“ಇಲ್ಲ ಸಾರ್, ನ್ಯಾಯಪಥ ಅಂತ ಶುರುಮಾಡಿದ್ದೀವಿ.”
“ಹೌದಾ ಒಂದು ಕಳಿಸಿಕೊಡಿ.”
“ಆಯ್ತು ಸಾರ್, ಎಡೂರಪ್ಪನಿಗೆ ಬೆಂಬಲ ಘೋಷಣೆ ಮಾಡಿದ್ರಲ್ಲ ಸಾ.”
“ಯಾಕೆ ಅನ್ನೋ ವಿವರ ಹೇಳಿದ್ದೀನಿ.”
“ಅದು ಕೋಮುವಾದಿ ಪಾರ್ಟಿ ನೀವು ಜಾತ್ಯತೀತ ಜನತಾದಳ ಅಲ್ಲವ ಸಾರ್.”
“ಅದು ಸರಿ, ಈಗ ಚುನಾವಣೆ ಬಂದ್ರೇ ತಡಕಳೋ ಶಕ್ತಿಯಿಲ್ಲ.”
“ಹಾಗಿದ್ರೆ ಕಾಂಗ್ರೆಸ್‍ಗೆ ಸಪೋರ್ಟ್ ಮಾಡಿ ಮಲ್ಲಿಕಾರ್ಜುನ ಖರ್ಗೆನ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ ಸಾರ್.”
“ಅಲ್ಲಿನ ಅಹಿಂದ ನಾಯಕರು ಅದಿಕ್ಕೆಲ್ಲ ಅವಕಾಶ ಕೊಡಲ್ಲ.”
“ಸಾರ್ ನಿಮ್ಮ ಮಾತಿನಿಂದ ಕರ್ನಾಟಕದ ಸಾಮಾನ್ಯ ಜನರ ಪ್ರಜ್ಞೆ ದಂಗುಬಡುದೋಗ್ಯದೆ ಸಾರ್.”
“ಯಾವ ಮಾತಿನಿಂದರೀ.”
“ಅದೇ ಎಡೂರಪ್ಪನ ಸರಕಾರಕ್ಕೆ ಸಪೋರ್ಟ್ ಮಾಡದ್ರ ಬಗ್ಗೆ.”
“ಅಯ್ಯೋ ರಾಮ ಆಗ್ಲೆ ಹೇಳಿದೆನಲ್ರೀ.”
“ಅದು ಸರಿ ಸರ್. ಕುಮಾರಣ್ಣ ಬಿಜೆಪಿ ಜೊತೆ ಸರಕಾರ ಮಾಡದೇ ಆದ್ರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ರಿ.”
“ಹೌದು ಹೇಳಿದ್ದೆ.”
“ನಾವೆಲ್ಲ ಹೆದರಿ ಪದ್ಮನಾಭನಗರದ ನಿಮ್ಮ ಮನೆ ಹತ್ರಕೆ ಓಡಿ ಬಂದಾಗ ನೀವು ದೆಹಲಿಯಿಂದ ಬಂದಿದ್ದ ಅಂಥೋನಿ, ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ ಇವರನ್ನ ಕೂರಿಸಿಕೊಂಡು ಅದೇ ಹೆಣದ ಮಾತೇಳತ ಇದ್ರಿ. ಅವುರು ನಿಜ ಅನ್ನಕಂಡು ಗಾಬರಿಯಾಗಿದ್ರು.”
“ನಿಜ ಅಲವೇನ್ರೀ.”
“ನಿಜ ಸಾರ್. ಆದ್ರು ಕುಮಾರಣ್ಣ ಎಡೂರಪ್ಪನ ಜೊತೆ ಸೇರಿಕೊಂಡು ಸರಕಾರ ಮಾಡೇಬುಟ್ರು.”
“ಎಲ್ಲವೂ ನಮ್ಮ ಕೈಮೀರಿ ಹೋಯ್ತಲ್ರೀ ಆಗ.”
“ಆದ್ರು ತಾವು ಕೆಲವೇ ದಿನದಲ್ಲಿ ಕುಮಾರಣ್ಣನ ಜೊತೆ ಸೇರಿಕಂಡ್ರಿ ಸಾರ್.”
“ಯಾಕೆ ಅಂದ್ರೆ, ಕುಮಾರಣ್ಣನ್ನ ಮುಗಸೋದಕ್ಕೆ ದುಷ್ಟ ಚತುಷ್ಟಯರುಗಳು ಕಾಯ್ತಾಯಿದ್ರು. ಅವರಿಂದ ಕುಮಾರಸ್ವಾಮಿನ ಉಳಿಸಿಕೊಬೇಕಾಗಿತ್ತು.”
“ಸರಿ ಸಾರ್, ತಂದೆಯಾದವನ ಕರ್ತವ್ಯ ಅದು. ಅದೇ ಟೈಮಲ್ಲಿ ಸಂಸತ್ತಲ್ಲಿ ನೀವು ಉತ್ತರ ಕೊಡ್ತ ನಾನಿಲ್ಲದ ಸಮಯದಲ್ಲಿ ನನ್ನ ಮಗನನ್ನ ಆರಿಸಿಕೊಂಡೋಗಿ ಸರಕಾರ ಮಾಡಿದ್ರು ಅಂದ್ರಿ ಸಂಸತ್ತು ಅದನ್ನ ನಂಬಿತ್ತು.”
“ಸಂಸತ್ತಲ್ಲಿ ಸುಳ್ಳು ಹೇಳಕ್ಕಾಗತ್ತೇನ್ರೀ.”
“ಹೇಳಬವುದು ಸಾರ್, ಈಗ ಇಡೀ ಬಿಜೆಪಿಗಳು ಸಂಸತ್ತಲ್ಲಿ ಬರೀ ಅದ್ನೇ ಹೇಳ್ತಾ ಅವುರೆ.”
“ಅವುರ ವಿಷಯ ಬಿಡಿ, ವಾಸ್ತವಾಂಶವನ್ನ ನಾನು ಹೇಳಿದೆ.”
“ಹೇಳಿದ್ರಿ, ಅದರಂಗೇ ನಡಕಂಡ್ರಿ ಸಾರ್, ಇಪ್ಪತ್ತು ತಿಂಗಳ ನಂತರ ಎಡೂರಪ್ಪನಿಗೆ ಅವಕಾಶ ಕೊಡಲಿಲ್ಲ. ಅಕಾಲಿಕ ಚುನಾವಣೆ ಬಂತು.”
“ಆ ಇತಿಹಾಸ ಎಲ್ಲ ಈಗೇಕೆ.”
“ಈಗೇಕೆ ಅಂದ್ರೇ, ಅಂದು ನೀವು ಬಿಜೆಪಿ ಜೊತೆ ಕುಮಾರಣ್ಣ ಸರಕಾರ ಮಾಡಕ್ಕೆ ಹೋದಾಗ ನಡಕೊಂಡ ಪ್ರಹಸನ ಡ್ರಾಮ ಅನ್ನದು, ಈಗಿನ ನಿಮ್ಮ ಹೇಳಿಕೆಯಿಂದ ಸಾಬೀತಾಗಿದೆಯಂತೆ.”
“ಯಾವ ಬೋಸುಡಿಮಗ ಅಂಗಂದೋನು.”
“ನಿಮ್ಮ ಪಾರ್ಟಿಯವರೆ ಅಂಗಂದ್ರು ಸಾ.”
“ಅದ್ಯಾವನು ಕರಕಂಡು ಬನ್ರಿ ಇಲ್ಲಿ.”
“ಬಿಜೆಪಿಗೆ ಸಪೋರ್ಟ್ ಅಂದ ನೀವು ಐದು ಕ್ಷೇತ್ರಕ್ಕೆ ಯಾಕೆ ಸಾರ್ ಕ್ಯಾಂಡೇಟಾಕ್ತಿರಿ.”
“ನಮ್ಮ ಶಕ್ತಿ ಇರ ಅಷ್ಟು.”
“ಐದರಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿಗೆ ಸಹಾಯ ಮಾಡದಕಿಂತ, 15 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಸದೇ ಇರದು ವಳ್ಳೆದಲವ.”
“ನಮ್ಮದು ಪ್ರಾದೇಶಿಕ ಪಾರ್ಟಿ, ನಮಗೆ ಕೆಲವು ಇತಿಮಿತಿಗಳಿರದರಿಂದ ಹಾಗೆ ಮಾಡಕ್ಕೆ ಬರಲ್ಲ.”
“ಐದು ಕ್ಷೇತ್ರದ ಚುನಾವಣೆ ಖರ್ಚು ಬಿಜೆಪಿ ಕೊಡ್ತದ ಸಾರ್.”
“ಅವುರ್ಯಾಕ್ ಕೊಡ್ತರ್ರೀ.”
“ಐದರಲ್ಲಿ ಕಾಂಗ್ರೆಸ್ ಸೋಲಸಬೇಕಲ್ಲವ ಅದಕ್ಕೆ.”
“ಅಷ್ಟು ಬಡತನ ನನ್ನ ಪಾರ್ಟಿಗೆ ಬಂದಿಲ್ಲ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಜನ್‌ಪುರ ಹತ್ಯೆ: ದೇವಾಲಯದ ಬಳಿ ಇರಿತಕ್ಕೊಳಗಾಗಿದ್ದ 18 ವರ್ಷದ ಮುಸ್ಲಿಂ ಯುವಕ ಸಾವು 

"ದೇವಾಲಯದ ಬಳಿ ಇರಿತಕ್ಕೊಳಗಾಗಿದ್ದ 18 ವರ್ಷದ ಮೊಹಮ್ಮದ್ ಆಸಿಫ್ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾನೆ" ಎಂದು ಭಜನ್‌ಪುರ ಹತ್ಯೆಯ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮುಂಜಾನೆ ಈಶಾನ್ಯ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ 18 ವರ್ಷದ ಯುವಕನೊಬ್ಬನನ್ನು...

ಹಿಂದೂ, ಬೌದ್ಧ, ಸಿಖ್ ಧರ್ಮ ಹೊರತುಪಡಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ ಕೋರ್ಟ್

ಒಬ್ಬರು ವ್ಯಕ್ತಿಯು ಒಮ್ಮೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ಅದನ್ನೇ ಸಕ್ರಿಯವಾಗಿ ಪ್ರತಿಪಾದಿಸಿ, ಆಚರಿಸಿದರೆ, ಅವರನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಸದಸ್ಯರು ಎಂಬುವುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು...

ಮಹಿಳಾ ಸೇನಾಧಿಕಾರಿಗಳು ಶಾಶ್ವತ ಆಯೋಗಕ್ಕೆ ಅರ್ಹರು: ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಮಂಗಳವಾರ, ಅನಿಯಂತ್ರಿತ ಮೌಲ್ಯಮಾಪನದಿಂದಾಗಿ ಶಾಶ್ವತ ಆಯೋಗವನ್ನು ನಿರಾಕರಿಸಲಾದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮಹಿಳಾ ಕಿರು ಸೇವಾ ಆಯೋಗ (ಎಸ್‌ಎಸ್‌ಸಿ) ಅಧಿಕಾರಿಗಳು ಪೂರ್ಣ ಪಿಂಚಣಿ ಸೌಲಭ್ಯಗಳಿಗೆ ಅರ್ಹರು...

ಚುನಾವಣಾ ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ ‌’ಸೀಲ್’ ; ʼಸಿಬ್ಬಂದಿ ದೋಷʼ ಎಂದ ಆಯೋಗ!

ಕೇರಳ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಸೋಮವಾರ (ಮಾ.23) ಬಿಜೆಪಿ ರಾಜ್ಯ ಘಟಕದ ಸೀಲ್ ಹೊಂದಿರುವ ಚುನಾವಣಾ ಆಯೋಗದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ....

ಗಂಗಾ ದೋಣಿಯಲ್ಲಿ ಇಫ್ತಾರ್ ಕೂಟ: ಆರೋಪ ಹೊತ್ತಿರುವ 14 ಮುಸ್ಲಿಂ ಯುವಕರಿಗೆ ಜಾಮೀನು ನಿರಾಕರಿಸಿದ ವಾರಣಾಸಿ ನ್ಯಾಯಾಲಯ

ಗಂಗಾ ನದಿಯ ದೋಣಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದ ಆರೋಪ ಹೊತ್ತಿರುವ 14 ಮುಸ್ಲಿಂ ಯುವಕರಿಗೆ ಜಾಮೀನು ನಿರಾಕರಿಸಿದ ವಾರಣಾಸಿಯ ನ್ಯಾಯಾಲಯವು, ಅವರ ಮೇಲಿನ ಅಪರಾಧಗಳು ಗಂಭೀರ ಮತ್ತು ಜಾಮೀನು ರಹಿತವಾಗಿವೆ ಎಂದು ಹೇಳಿದೆ....

100ಕ್ಕೂ ಹೆಚ್ಚು ಸೈನಿಕರಿದ್ದ ಕೊಲಂಬಿಯಾ ವಾಯುಪಡೆಯ ವಿಮಾನ ಪತನ : 66 ಮಂದಿ ಸಾವು

ದಕ್ಷಿಣ ಕೊಲಂಬಿಯಾದ ಪುತುಮಾಯೊ ಪ್ರಾಂತ್ಯದ ಪ್ಯೂರ್ಟೊ ಲೆಗುಯಿಜಾಮೊ ಎಂಬಲ್ಲಿ ಸೋಮವಾರ (ಮಾರ್ಚ್ 23) ಬೆಳಿಗ್ಗೆ ವಾಯುಪಡೆಯ ವಿಮಾನವೊಂದು ಪತನಗೊಂಡಿದ್ದು, ದುರಂತದಲ್ಲಿ ಈವರೆಗೆ ಕನಿಷ್ಠ 66 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ಯೂರ್ಟೊ...

ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗಿವೆ, ಐದು ದಿನಗಳ ಕಾಲ ದಾಳಿ ಮಾಡದಂತೆ ಸೂಚಿಸಿದ್ದೇನೆ : ಟ್ರಂಪ್

ಕಳೆದ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿವೆ. ಆದ್ದರಿಂದ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಐದು ದಿನಗಳವರೆಗೆ ಮುಂದೂಡಲು ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಎಸ್‌ಐಆರ್ ದೂರಾಲೋಚನೆ ಅಲ್ಲ, ಸಿಎಎ-ಎನ್‌ಆರ್‌ಸಿ ಜಾರಿಗೊಳಿಸುವ ದುರಾಲೋಚನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು 'ದೂರಾಲೋಚನೆ'ಯಲ್ಲ, ಬದಲಿಗೆ ಅದು ಸಿಎಎ-ಎನ್‌ಅರ್‌ಸಿಯನ್ನು ಜಾರಿಗೊಳಿಸುವ 'ದುರಾಲೋಚನೆ'ಯನ್ನು ತನ್ನ ಒಡಲಲ್ಲಿಟ್ಟಿಕೊಂಡಿದೆ. ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿರುವಾಗ ಕರ್ನಾಟಕದಲ್ಲಿ ತರಾರುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಬಾರದು...

ಸ್ವಘೋಷಿತ ದೇವಮಾನವನ ಖರಾತ್ ವಿರುದ್ಧ ಮತ್ತೆರಡು ಎಫ್‌ಐಆರ್ : ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಆರೋಪ

ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳ ಮೇಲೆ ಈಗಾಗಲೇ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿ ಅಶೋಕ್ ಖರಾತ್ ವಿರುದ್ಧ ಮಹಾರಾಷ್ಟ್ರದ ನಾಸಿಕ್‌ನ ಸರ್ಕಾರವಾಡಾ ಪೊಲೀಸರು ಶನಿವಾರ (ಮಾ.21) ಎರಡು ಹೊಸ ಅತ್ಯಾಚಾರ...

ದಲಿತ ಮಹಿಳೆ ಮೇಲೆ ಸಾರ್ವಜನಿಕವಾಗಿ ಹಲ್ಲೆ; ಹಾಡಗಲೇ ಕೂದಲಿಡಿದು ಎಳೆದಾಡಿದ ಪಂಜಾಬ್ ಪೊಲೀಸರು

ಪಂಜಾಬ್‌ನ ಜಲಂಧರ್‌ನಲ್ಲಿ ಕಳೆದ ಶುಕ್ರವಾರ (ಮಾ.20), ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಾಡಿದ್ದಾರೆ ಎಂದು 'ಸಿಯಾಸಾಟ್.ಕಾಮ್' ವರದಿ ಮಾಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ...