Homeಅಂಕಣಗಳುದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

ದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

| ಥೂತ್ತೇರಿ |

ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಎಡೂರಪ್ಪನ ಸರಕಾರ ಬೀಳಲು ಬಿಡುವುದಿಲ್ಲ ಎಂಬಂತಹ ಮಾತನಾಡಿದಂದಿನಿಂದ ಸರಿಯಾಗಿ ನಿದ್ರೆಯೇ ಬಾರದಾಗಿದೆಯಲ್ಲಾ. ಗೌಡರ ಮಾತು ನಿಜವೋ, ಕನಸೋ ಇದರ ಮರ್ಮವೇನೆಂದು ತಿಳಿದುಕೊಳ್ಳಲು ಅವರಿಗೇ ಫೋನ್ ಮಾಡಿದರೆ ಹೇಗೆ ಎಂದು ಯೋಚಿಸಿ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: ಸಿದ್ದಲಿಂಗೇಶಾ ಎಡೆಯೂರು ಸಿದ್ದಲಿಂಗೇಶಾ ಶ್ರೀ ಎಡೆಯೂರು ಸಿದ್ದಲಿಂ….. “ಹಲೋ….”
“ನಮಸ್ಕಾರ ಸಾರ್ ನಾನು ಯಾಹೂ.”
“ಏನ್ಹೇಳಿ ಯಾಹು ಅವುರೆ.”
“ಒಂದೆರಡು ಮಾತಿವೆ ಸಾರ್.”
“ಅದರಿಂದೇನು ಪ್ರಯೋಜನ.”
“ಪತ್ರಿಕೆಗೆ ಬರೀಬೇಕು ಸಾರ್.”
“ಗೌರಿ ಸಿಸ್ಟರ್ ಪತ್ರಿಕೆ ನಿಂತೋಗಲಿಲ್ಲವ.”
“ಇಲ್ಲ ಸಾರ್, ನ್ಯಾಯಪಥ ಅಂತ ಶುರುಮಾಡಿದ್ದೀವಿ.”
“ಹೌದಾ ಒಂದು ಕಳಿಸಿಕೊಡಿ.”
“ಆಯ್ತು ಸಾರ್, ಎಡೂರಪ್ಪನಿಗೆ ಬೆಂಬಲ ಘೋಷಣೆ ಮಾಡಿದ್ರಲ್ಲ ಸಾ.”
“ಯಾಕೆ ಅನ್ನೋ ವಿವರ ಹೇಳಿದ್ದೀನಿ.”
“ಅದು ಕೋಮುವಾದಿ ಪಾರ್ಟಿ ನೀವು ಜಾತ್ಯತೀತ ಜನತಾದಳ ಅಲ್ಲವ ಸಾರ್.”
“ಅದು ಸರಿ, ಈಗ ಚುನಾವಣೆ ಬಂದ್ರೇ ತಡಕಳೋ ಶಕ್ತಿಯಿಲ್ಲ.”
“ಹಾಗಿದ್ರೆ ಕಾಂಗ್ರೆಸ್‍ಗೆ ಸಪೋರ್ಟ್ ಮಾಡಿ ಮಲ್ಲಿಕಾರ್ಜುನ ಖರ್ಗೆನ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ ಸಾರ್.”
“ಅಲ್ಲಿನ ಅಹಿಂದ ನಾಯಕರು ಅದಿಕ್ಕೆಲ್ಲ ಅವಕಾಶ ಕೊಡಲ್ಲ.”
“ಸಾರ್ ನಿಮ್ಮ ಮಾತಿನಿಂದ ಕರ್ನಾಟಕದ ಸಾಮಾನ್ಯ ಜನರ ಪ್ರಜ್ಞೆ ದಂಗುಬಡುದೋಗ್ಯದೆ ಸಾರ್.”
“ಯಾವ ಮಾತಿನಿಂದರೀ.”
“ಅದೇ ಎಡೂರಪ್ಪನ ಸರಕಾರಕ್ಕೆ ಸಪೋರ್ಟ್ ಮಾಡದ್ರ ಬಗ್ಗೆ.”
“ಅಯ್ಯೋ ರಾಮ ಆಗ್ಲೆ ಹೇಳಿದೆನಲ್ರೀ.”
“ಅದು ಸರಿ ಸರ್. ಕುಮಾರಣ್ಣ ಬಿಜೆಪಿ ಜೊತೆ ಸರಕಾರ ಮಾಡದೇ ಆದ್ರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ರಿ.”
“ಹೌದು ಹೇಳಿದ್ದೆ.”
“ನಾವೆಲ್ಲ ಹೆದರಿ ಪದ್ಮನಾಭನಗರದ ನಿಮ್ಮ ಮನೆ ಹತ್ರಕೆ ಓಡಿ ಬಂದಾಗ ನೀವು ದೆಹಲಿಯಿಂದ ಬಂದಿದ್ದ ಅಂಥೋನಿ, ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ ಇವರನ್ನ ಕೂರಿಸಿಕೊಂಡು ಅದೇ ಹೆಣದ ಮಾತೇಳತ ಇದ್ರಿ. ಅವುರು ನಿಜ ಅನ್ನಕಂಡು ಗಾಬರಿಯಾಗಿದ್ರು.”
“ನಿಜ ಅಲವೇನ್ರೀ.”
“ನಿಜ ಸಾರ್. ಆದ್ರು ಕುಮಾರಣ್ಣ ಎಡೂರಪ್ಪನ ಜೊತೆ ಸೇರಿಕೊಂಡು ಸರಕಾರ ಮಾಡೇಬುಟ್ರು.”
“ಎಲ್ಲವೂ ನಮ್ಮ ಕೈಮೀರಿ ಹೋಯ್ತಲ್ರೀ ಆಗ.”
“ಆದ್ರು ತಾವು ಕೆಲವೇ ದಿನದಲ್ಲಿ ಕುಮಾರಣ್ಣನ ಜೊತೆ ಸೇರಿಕಂಡ್ರಿ ಸಾರ್.”
“ಯಾಕೆ ಅಂದ್ರೆ, ಕುಮಾರಣ್ಣನ್ನ ಮುಗಸೋದಕ್ಕೆ ದುಷ್ಟ ಚತುಷ್ಟಯರುಗಳು ಕಾಯ್ತಾಯಿದ್ರು. ಅವರಿಂದ ಕುಮಾರಸ್ವಾಮಿನ ಉಳಿಸಿಕೊಬೇಕಾಗಿತ್ತು.”
“ಸರಿ ಸಾರ್, ತಂದೆಯಾದವನ ಕರ್ತವ್ಯ ಅದು. ಅದೇ ಟೈಮಲ್ಲಿ ಸಂಸತ್ತಲ್ಲಿ ನೀವು ಉತ್ತರ ಕೊಡ್ತ ನಾನಿಲ್ಲದ ಸಮಯದಲ್ಲಿ ನನ್ನ ಮಗನನ್ನ ಆರಿಸಿಕೊಂಡೋಗಿ ಸರಕಾರ ಮಾಡಿದ್ರು ಅಂದ್ರಿ ಸಂಸತ್ತು ಅದನ್ನ ನಂಬಿತ್ತು.”
“ಸಂಸತ್ತಲ್ಲಿ ಸುಳ್ಳು ಹೇಳಕ್ಕಾಗತ್ತೇನ್ರೀ.”
“ಹೇಳಬವುದು ಸಾರ್, ಈಗ ಇಡೀ ಬಿಜೆಪಿಗಳು ಸಂಸತ್ತಲ್ಲಿ ಬರೀ ಅದ್ನೇ ಹೇಳ್ತಾ ಅವುರೆ.”
“ಅವುರ ವಿಷಯ ಬಿಡಿ, ವಾಸ್ತವಾಂಶವನ್ನ ನಾನು ಹೇಳಿದೆ.”
“ಹೇಳಿದ್ರಿ, ಅದರಂಗೇ ನಡಕಂಡ್ರಿ ಸಾರ್, ಇಪ್ಪತ್ತು ತಿಂಗಳ ನಂತರ ಎಡೂರಪ್ಪನಿಗೆ ಅವಕಾಶ ಕೊಡಲಿಲ್ಲ. ಅಕಾಲಿಕ ಚುನಾವಣೆ ಬಂತು.”
“ಆ ಇತಿಹಾಸ ಎಲ್ಲ ಈಗೇಕೆ.”
“ಈಗೇಕೆ ಅಂದ್ರೇ, ಅಂದು ನೀವು ಬಿಜೆಪಿ ಜೊತೆ ಕುಮಾರಣ್ಣ ಸರಕಾರ ಮಾಡಕ್ಕೆ ಹೋದಾಗ ನಡಕೊಂಡ ಪ್ರಹಸನ ಡ್ರಾಮ ಅನ್ನದು, ಈಗಿನ ನಿಮ್ಮ ಹೇಳಿಕೆಯಿಂದ ಸಾಬೀತಾಗಿದೆಯಂತೆ.”
“ಯಾವ ಬೋಸುಡಿಮಗ ಅಂಗಂದೋನು.”
“ನಿಮ್ಮ ಪಾರ್ಟಿಯವರೆ ಅಂಗಂದ್ರು ಸಾ.”
“ಅದ್ಯಾವನು ಕರಕಂಡು ಬನ್ರಿ ಇಲ್ಲಿ.”
“ಬಿಜೆಪಿಗೆ ಸಪೋರ್ಟ್ ಅಂದ ನೀವು ಐದು ಕ್ಷೇತ್ರಕ್ಕೆ ಯಾಕೆ ಸಾರ್ ಕ್ಯಾಂಡೇಟಾಕ್ತಿರಿ.”
“ನಮ್ಮ ಶಕ್ತಿ ಇರ ಅಷ್ಟು.”
“ಐದರಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿಗೆ ಸಹಾಯ ಮಾಡದಕಿಂತ, 15 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಸದೇ ಇರದು ವಳ್ಳೆದಲವ.”
“ನಮ್ಮದು ಪ್ರಾದೇಶಿಕ ಪಾರ್ಟಿ, ನಮಗೆ ಕೆಲವು ಇತಿಮಿತಿಗಳಿರದರಿಂದ ಹಾಗೆ ಮಾಡಕ್ಕೆ ಬರಲ್ಲ.”
“ಐದು ಕ್ಷೇತ್ರದ ಚುನಾವಣೆ ಖರ್ಚು ಬಿಜೆಪಿ ಕೊಡ್ತದ ಸಾರ್.”
“ಅವುರ್ಯಾಕ್ ಕೊಡ್ತರ್ರೀ.”
“ಐದರಲ್ಲಿ ಕಾಂಗ್ರೆಸ್ ಸೋಲಸಬೇಕಲ್ಲವ ಅದಕ್ಕೆ.”
“ಅಷ್ಟು ಬಡತನ ನನ್ನ ಪಾರ್ಟಿಗೆ ಬಂದಿಲ್ಲ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...