Homeಅಂಕಣಗಳುಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂದರೆ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ...!

ಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂದರೆ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ…!

ಭಾರೀ ಪ್ರಚಾರ ದೊಂದಿಗೆ ಶುರು ಆದ ಆ ಖಾನಾವಳಿಗಳು ಬಡವರಿಗೆ ಯಾವ ಕಾಲಕ್ಕೆ ಬೇಕಾಗಿದ್ದವೋ ಆ ಕಾಲಕ್ಕೆ ಉಪಯೋಗ ಆಗಲಿಲ್ಲ.

- Advertisement -
- Advertisement -

ಗುಲಾಬಿ ಅಂತ ನಾವು ಯಾವುದನ್ನು ಕರೀತೀವೋ,

ಅದರ ಹೆಸರು ಏನಿದ್ದರೇನು ಸುಗಂಧ ಅಷ್ಟೇ ಸಿಹಿಯಲ್ಲವೇ ?

ಅಂತ ಕವಿಯೊಬ್ಬ ಸುಮಾರು 400 ವರ್ಷ ಹಿಂದ ಒದರಿ ಹೋದ.

ಅವನ ಹೆಸರು ವಿಲಿಯಮ್ ಷೇಕ್ಸ್‌ಪಿಯರ್. ಅವ ಇಂಗ್ಲಂಡದೊಳಗ ನಾಟಕ, ಹಾಡು ಬರಕೊಂಡು ಇದ್ದಾಗ ನಮ್ಮಲ್ಲೇ ಮೊಹಮ್ಮದ್ ಜಲಾಲಉದ್ದೀನ್ ಅಕ್ಬರ್ ಅವರು ರಾಜ್ಯ ಆಳತಾ ಇದ್ದರು.

ನಮ್ಮಲ್ಲೆ ಬಹುಶಃ ಎಲ್ಲರಿಗೂ ಷೇಕ್ಸ್‌ಪಿಯರ್ ಅವರ ಹೆಸರು ಗೊತ್ತು. ಆದರ ಅಕ್ಬರ್ ಅನ್ನೋದು ಅವರ ಬಿರುದು, ಅವನ ಹೆಸರು ಅಲ್ಲ ಅಂತ ಗೊತ್ತಿಲ್ಲ.

ಅವ ಹೋಗಲಿ ಬಿಡ್ರಿ, ಮಹಾಭಾರತದಾಗ ಭೀಷ್ಮ ಅನ್ನೋದು ಗಂಗಾಪುತ್ರನ ಬಿರುದು, ಹೆಸರು ಅಲ್ಲ ಅನ್ನೋದು ಗೊತ್ತಿರೋದಿಲ್ಲ. ಹಂಗ ನೋಡಿದರ ಮಹಾಭಾರತದಾಗ ಬಿರುದುಗಳೇ ಜಾಸ್ತಿ, ಹೆಸರು ಕಮ್ಮಿ. ಇರಲಿ ಬಿಡ್ರಿ.

ಈಗ ನಮ್ಮ ಮುಂದೆ ಬಂದಿರೋ ವಿಷಯ ಅಂದ್ರ ವಿಶ್ವ ಸಂಸ್ಥೆಯವರು ನಮ್ಮ ದೇಶದ ಕೆಲವು ರಾಜ್ಯಗಳ ಕೋವಿಡ್ ನಿರ್ವಹಣೆಯನ್ನು ಹೊಗಳಿದ ಸುದ್ದಿ.

ಅಲ್ಲಿನ ತಜ್ಞರು ಮುಂಬೈ ಶಹರದ ಧಾರಾವಿ ಝೋಪಡ ಪಟ್ಟಿಯೊಳಗ ಹೆಂಗ ಈ ರೋಗ ನಿಯಂತ್ರಣಕ್ಕ ಬಂತು ಅನ್ನೋದನ್ನು ನೋಡಿ, ಅಲ್ಲೇ ಸರಿ ಆಗಬಹುದು ಅಂದ್ರ ಎಲ್ಲಾದರೂ ಆಗಬಹುದು ಅಂತ ಹೇಳಿದರು. ಮತ್ತು ಕೇರಳದ ರೋಗಿ ಪತ್ತೆ ವಿಧಾನ ಹಾಗೂ ಆಸ್ಪತ್ರೆ ನಿರ್ವಹಣೆ ವಿಷಯದ ಬಗ್ಗೆ ಹೊಗಳಿದರು. ಅವರು ಇನ್ನೊಂದು ವಿಷಯ ಪ್ರಸ್ತಾಪ ಮಾಡಿದರು.

ಅದು ಎನಪ ಅಂದ್ರ ಕೇರಳದ ಕುಟುಂಬಶ್ರೀ ವ್ಯವಸ್ಥೆ ಕೆಳಗ ನಡೀತಾ ಇರೋ ಕಮ್ಮಿ ಖರ್ಚಿನ ಸರ್ಕಾರಿ ಕ್ಯಾಂಟೀನ್‌ಗಳು ಹೆಂಗ ಬಡವರ ಹಸಿವನ್ನು ಕಮ್ಮಿ ಮಾಡಿದರು ಅನ್ನೋದನ್ನ ಎತ್ತಿ ತೋರಿಸಿದರು.

ಆ ರಾಜ್ಯದ 510 ನಗರ ಹಾಗೂ ಹಳ್ಳಿಗಳಲ್ಲಿ ರಾಜ್ಯ ಸರಕಾರದಿಂದ ಬಡವರಿಗೆ ಅಂತ ಹೇಳಿ ‘ಜನಕೀಯ ಕುಟುಂಬಶ್ರೀ’ ಕ್ಯಾಂಟೀನು ಶುರು ಅಗಿದಾವ. ಇವನ್ನ ಮಹಿಳಾ ಸಂಘಗಳು ನಡಸತಾವ. ಅವರು ಇಪ್ಪತ್ತು ರೂಪಾಯಿಗೆ ಒಂದು ಊಟ ಕೊಡತಾರ. ಅದರಾಗ ಅರ್ಧ ಖರ್ಚು ರಾಜ್ಯ ಸರಕಾರ ವಹಿಸಿಕೊಳ್ಳೋದಕ್ಕ ಅವರಿಗೆ ಒಂದು ಊಟದ ಮ್ಯಾಲೆ ಹತ್ತು ರೂಪಾಯಿ ಸಿಗತದ.

ಇಲ್ಲಿ ತನಕ ಆ ಮಹಿಳಾ ಖಾನಾವಳಿಗಳು ಸುಮಾರು ಹತ್ತು ಲಕ್ಷ ತಾಟು ಊಟ ಮಾರಾಟ ಮಾಡಿದಾವ. ಇವುಗಳ ಯಶಸ್ಸು ನೋಡಿ ಇನ್ನೂ ಹೆಚ್ಚು ಕ್ಯಾಂಟೀನ್ ಶುರು ಮಾಡಬೇಕು ಅಂತ ಸರಕಾರ ನಿರ್ಧಾರ ಮಾಡೇತಿ.

ಎಲ್ಲಕ್ಕಿಂತ ಮುಖ್ಯ ಅಂದ್ರ ಇವು ಲಾಕಡೌನ್‌ದಾಗೂ ಕೆಲಸ ಮಾಡಿದಾವು.

ಅಲ್ಲಿ ಸಾಧ್ಯ ಆಗಿದ್ದು ನಮ್ಮಲ್ಲೆ ಯಾಕ ಸಾಧ್ಯ ಆಗಿಲ್ಲ? ನಮ್ಮಲ್ಲೆ ಯಾಕ ಬಡವರು ರಸ್ತೆದಾಗ ಸತ್ತರು? ಯಾಕ ಅವರಿಗೆ ಹೊತ್ತಿಗೆ ಸರಿಯಾಗಿ ಊಟ ಸಿಗಲಿಲ್ಲ? ಯಾಕ ನಮ್ಮ ಸರ್ಕಾರಿ ಖಾನಾವಳಿಗಳು ಲಾಕಡೌನ್‌ದಾಗ ಬಂದ ಆಗಿದ್ದವು?

ಇದರ ಹಿಂದ ಏನು ದೊಡ್ಡ ರಹಸ್ಯ ಇಲ್ಲ. ಇದರ ಹಿಂದ ಒಂದು ಮಜಾ ಕತಿ ಐತಿ. ಅದನ್ನ ಹೇಳಬೇಕು ಅಂದ್ರ ಷೇಕ್ಸ್‌ಪಿಯರ್‌ನ ನೆನಪು ಮಾಡಿಕೋಬೇಕು. ಅವನ ರೋಮಿಯೋ ಜೂಲಿಯಟ್ ನಾಟಕದ ಜಗತ್ ವಿಖ್ಯಾತ ಸಾಲು ‘ಹೆಸರಿನಲ್ಲಿ ಏನಿದೆ’ ಅನ್ನೋದನ್ನ ನೆನಪು ಮಾಡಿಕೋಬೇಕು.

ಕರ್ನಾಟಕದಾಗ ಸರ್ಕಾರಿ ಖಾನಾವಳಿಗಳಿಗೆ ಏನು ಅಂತ ಕರೀತಾರ? ಇಂದಿರಾ ಕ್ಯಾಂಟೀನು ಅಂತಾರ. ಆ ಹೆಸರನ ಅವಕ್ಕ ಕಂಟಕ ಆಗೇದ. ಹೆಂಗ ಅಂತೀರಿ? ಇಲ್ಲಿ ಕೇಳರಿ.

ಲಾಕಡೌನ್ ಆಗಿದ್ದಾಗ ಒಂದು ದಿವಸ ಯಾರೋ ಬಡವರು ಬಂದು ಅಲ್ಲಿ ಊಟ ಮಾಡಿದರು ಅಂದುಕೋರಿ. ಅವರು ಹೊರಗ ಹೋಗಿ ಏನು ಹೇಳತಾರ?

ನಾವು ಇಂದಿರಾ ಕ್ಯಾಂಟೀನ್‌ದೊಳಗ ಊಟ ಮಾಡಿದಿವಿ ಅಂತ ಹೇಳತಾರ. ಅದು ಈಗಿನ ಕಮಲ ಪಕ್ಷಕ್ಕೆ ಆಗಿ ಬರೋದಿಲ್ಲ. ನಾವು ಊಟ ಹಾಕಿದೀವಿ, ಅದರ ಕಾಂಗ್ರೆಸ್ ನಾಯಕಿಗೆ ಹೆಸರು ಬಂತು ಅಂತ ಅವರು ಕಿರಿಕಿರಿ ಮಾಡಿಕೋತಾರ.

ಇದನ್ನು ತಪ್ಪಿಸೋದು ಹೆಂಗ ಅಂದ್ರ ಬಡವರು ಹಸಿವೆಯಿಂದ ಇರೋದು ಅವರ ಪ್ರಾಬ್ಲಂ ಅಂತ ಸರಕಾರ ಬ್ಯಾರೆ ಕಡೆ ನೋಡೋದು. ಭಾಷಣ, ಹೆಸರು ಬದಲಾವಣೆ, ರಸ್ತೆ, ಸೇತುವೆ, ಗಟಾರು, ಕೋರೋನಾ ಔಷಧಿ ಗುತ್ತಿಗೆ, ಕೋರೋನಾ ಕಾಳಜಿ ಕೇಂದ್ರದ ಬಾಡಿಗೆ ಮುಂತಾದ ಅತಿ ಮುಖ್ಯ ಸಂಗತಿಗಳ ಬಗ್ಗೆ ಸಚಿವರು ತಲೆ ಕೆಡಿಸಿಕೊಳ್ಳೋದು. ಆ ಕ್ಲಿಷ್ಟ ಸಮಸ್ಯೆಗಳಿಗೆ ಈ ಸರಳ ಪರಿಹಾರಗಳು.

ಆದರ ಆಳುವ ಪಕ್ಷಕ್ಕೆ ಹೆಸರು ಬದಲಾವಣೆ ಮಾಡೋದು ಏನು ಅಷ್ಟು ಕಷ್ಟದ ಕೆಲಸ ಅಲ್ಲ. ಪಂಥ ಪ್ರಧಾನ ಸೇವಕರು ಬಂದ ಮ್ಯಾಲೆ ಎರಡು ನೂರಕ್ಕೂ ಹೆಚ್ಚು ಯೋಜನೆಗಳ ಹೆಸರು ಬದಲಾವಣೆ ಮಾಡಿದಾರು. ಕಾಂಗ್ರೆಸ್ ನವರು ಶುರು ಮಾಡಿದ ಯೋಜನೆ ಹೋಗಲಿ, ತಮ್ಮದೇ ಪಕ್ಷದ ಹಿರಿಯರು ಹರಿಬಿಟ್ಟ ಸ್ವದೇಶಿ ಅನ್ನೋ ವಿಚಾರದ ಹೆಸರು ಬದಲು ಮಾಡಿ ಆತ್ಮನಿರ್ಭರ ಅಂತ ಮಾಡಿದರು.

ಆದರ ಕರ್ನಾಟಕದೊಳಗ ಅದು ಸಾಧ್ಯ ಆಗಲಿಲ್ಲ. ಯಾಕೋ ಗೊತ್ತಿಲ್ಲ. ಅದಕ್ಕ ಆಡಳಿತಾತ್ಮಕ ಕಾರಣಗಳಿಗಿಂತ ರಾಜಕೀಯ ಕಾರಣನ ಹೆಚ್ಚು ಇರಬಹುದು.

ಅದು ಹೋಗಲಿ ಬಿಡ್ರಿ.

ಕರ್ನಾಟಕದ ಖಾನಾವಳಿಗೆ ಇಂದಿರಮ್ಮನ ಹೆಸರು ಹೆಂಗ ಬಂತು ಅಂತ ಗೊತ್ತೇನು ನಿಮಗ?

ಅದು ಗೊತ್ತಾಗಬೇಕು ಅಂದ್ರ ನಿಮಗ ಕೊಲ್ಲು ಹುಡುಗಿ ಒಮ್ಮೆ ನನ್ನ ಅನ್ನೋ ಹಾಡು ಗೊತ್ತಿರಬೇಕು. ಅದು ಮುಂಗಾರು ಮಳೆ ಅನ್ನೋ ಪಿಚ್ಚರುದಾಗಿನದು. ಅದರ ನಿರ್ದೇಶಕ ಯಾರು, ಅದಕ್ಕ ರೊಕ್ಕ ಕೊಟ್ಟವರು ಯಾರು ಅಂತ ನಿಮಗ ಗೊತ್ತಿರಬೇಕು. ಹಂಗ ಅದಕ್ಕ ರೊಕ್ಕ ಹೊಂದಿಸಿದವರು ಒಬ್ಬರು ರಾಜಕೀಯದಾಗ ಹೋಗೋಣು ಅಂತ ನಿರ್ಧಾರ ಮಾಡಿದರು.

ಅವರು ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್ ಸೇರಿಕೊಂಡರು. ಅಷ್ಟರೊಳಗ ರಾಜ್ಯ ಸರಕಾರ ಖಾನಾವಳಿ ಆರಂಭ ಮಾಡಬೇಕು, ಅವಕ್ಕ ನಮ್ಮ ಕ್ಯಾಂಟೀನ್ ಅಂತ ಹೆಸರು ಇಡಬೇಕು ಅಂತ ನಿರ್ಧಾರ ಮಾಡಿತ್ತು.

ನಮ್ಮ ಸಿನಿಮಾ ಸ್ಟಾರ್ ಅವರು ಕಾಂಗ್ರೆಸ್‌ನೊಳಗ ಫಳ ಫಳ ಹೊಳೀಬೇಕು ಅಂತ ಹೇಳಿ ಒಂದು ಸಲಹೆ ಕೊಟ್ಟರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೊಳಗ ಇದಕ್ಕ ನಮ್ಮ ಕ್ಯಾಂಟೀನ್ ಅನ್ನೋದು ಬ್ಯಾಡ, ಇಂದಿರಾ ಕ್ಯಾಂಟೀನ್ ಅನ್ನೋಣು ಅಂತ ಅಂದರು. ಇಂತಹ ಬೀಜ ಮಂತ್ರ ಪ್ರಯೋಗ ಆದ ಮೇಲೆ ಅದನ್ನ ವಿರೋಧ ಮಾಡೋ ಗಣ ಮಗ ಕಾಂಗ್ರೆಸ್ ದೊಳಗ ಯಾರ ಅದಾರು? ಎಲ್ಲರೂ ಸುಮ್ಮನೇ ಕೂತರು. ಜೈಕಾರ ಹಾಕಿದರು.

ಭಾರೀ ಪ್ರಚಾರ ದೊಂದಿಗೆ ಶುರು ಆದ ಆ ಖಾನಾವಳಿಗಳು ಬಡವರಿಗೆ ಯಾವ ಕಾಲಕ್ಕೆ ಬೇಕಾಗಿದ್ದವೋ ಆ ಕಾಲಕ್ಕೆ ಉಪಯೋಗ ಆಗಲಿಲ್ಲ.

ಬರ ಬರ್ತಾ ಅವನ್ನ ಮಹಿಳಾ ಸಂಘಗಳಿಗೆ ವಹಿಸಿ ಕೊಡಬೇಕು ಅನ್ನೋ ವಿಚಾರ ಹೋತು. ಅವು ಖಾಸಗಿ ಗುತ್ತಿಗೆದಾರರ ಕೈಯಾಗ ಸಿಕ್ಕು ನಮ್ಮ ಕ್ಯಾಂಟೀನು ಆಗದೇ ಕಾಂಟ್ರಾಕ್ಟರ ಕ್ಯಾಂಟೀನು ಆದವು.

ಇನ್ನು ಆ ಐತಿಹಾಸಿಕ ಐಡಿಯಾ ಕೊಟ್ಟ ಪುಣ್ಯಾತ್ಮ ಇಂದಿರಾ ಅವರ ಪಕ್ಷದೊಳಗ ಬಹಳ ದಿವಸ ಉಳೀಲಿಲ್ಲ. ಮುಂಗಾರು ಮಾರುತ ಇತ್ತಲಾಗ ಬೀಸಲಿಕ್ಕೆ ಹತ್ತಿದ್ದು ನೋಡಿದ ಅವರು ಈಗ ಕಮಲ ಪಕ್ಷ ದೊಳಗ ಅದಾರು.

ಯಕ್ಷಗಾನ ಭಾಗವತರು ಪ್ರತಿ ಸರೆ “ಬಲಿರೆ ಪರಾಕ್ರಮ ಕಂಠೀರವ” ಅಂತ ಹೇಳಿದಾಗ ಅವರು ಹೊಸ ಪಾತ್ರದ ಪರಿಚಯ ಮಾಡತಿರತಾರ. ಒಮ್ಮೊಮ್ಮೆ ಹಳೇ ಪಾತ್ರನ ಹೊಸ ಹೆಸರಿನಿಂದ ಬರತಾವೂ. ಯಾವಾಗ ಭಾಗ್ಯವಾತರು ನಕ್ಕೋತ ಹೊಸಬರ ಪರಿಚಯ ಮಾಡತಾರ.

ಆ ವಿಲಿಯಮ್ ಷೇಕ್ಸ್‌ಪಿಯರ್‌ಗೆ ಏನು ಗೊತ್ತು – ಹೆಸರಿನ ಗಮ್ಮತ್ತು? ನಮ್ಮಲ್ಲೇ ಗುಲಾಬಿ ಹೂವಿಗೆ ಕಮಲ ಅಂತ ಹೆಸರು ಇಟ್ಟರ ಅದು ಸೂಸೋ ಗಂಧನ ಬೇರೆ!

ಅಲ್ಲವೇ ಮನೋಲ್ಲಾಸಿನಿ?


ಇದನ್ನು ಓದಿ: ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರಿಗೆ ಶ್ರದ್ಧಾಂಜಲಿ: ಕಾಳಜಿ ವಹಿಸದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...