Homeಮುಖಪುಟರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

ರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

- Advertisement -
- Advertisement -

ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರು ತೀರ್ಪು ನೀಡಿ 2 ವರ್ಷ ಶಿಕ್ಷೆ ವಿಧಿಸಿದ್ದು ನಂತರ ಅತ್ಯಂತ ತೀವ್ರಗತಿಯಲ್ಲಿ ಲೋಕಸಭೆಯ ಸೆಕ್ರೆಟೆರಿಯಟ್ ಅವರ ಸ್ಥಾನವನ್ನು ಅನರ್ಹಗೊಳಿಸಿದ್ದು ದೇಶದಾದ್ಯಂತ ತೀವ್ರ ಗಂಭೀರವಾದ ಕೆಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಕಳೆದ ಕೆಲವು ವರ್ಷಗಳಲ್ಲಿ ಮೊದಲ ಬಾರಿಗೆ ಬಹುತೇಕ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಒಮ್ಮತದಿಂದ ಈ ಬೆಳವಣಿಗೆಗಳನ್ನು ಖಂಡಿಸುತ್ತಿರುವುದು ಕೆಲವರಿಗೆ ಧನಾತ್ಮಕ ಬೆಳವಣಿಗೆಯಂತೆ ಕಂಡರೆ, ಇನ್ನೂ ಕೆಲವರಿಗೆ ’ನೋಡಿದ್ರಾ ಆಡಳಿತ ಪಕ್ಷದ ಪವರ್ ಏನು’ ಎಂದು ಎದೆತಟ್ಟಿ ಹೇಳುವಂತೆ ಮಾಡಿದೆ. ಇದರ ಮಧ್ಯೆ ವಕೀಲರುಗಳು, ಕಾನೂನು ತಜ್ಞರು ಮುಂತಾದವರು ತಮ್ಮ ಪ್ರಖರ ವಾಕ್ ಚಾತುರ್ಯದಿಂದ ಮಾನನಷ್ಟ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ, ಸಂವಿಧಾನದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು, ರಾಹುಲ್ ಮಾತಿನಲ್ಲಿನ ವ್ಯಾಕರಣ ಆಧರಿಸಿ ಅದನ್ನು ಅನ್ವಯಿಸುವ, ಮಾತಾಡಿದ ಜಾಗ ಹಾಗೂ ಮೊಕದ್ದಮೆ ಹೂಡಿದ ಜಾಗಗಳ ಬಗ್ಗೆ ಕಾನೂನಿನ ಅನ್ವಯಿಕೆಯ ಬಗ್ಗೆ ವ್ಯಾಖ್ಯೆಗಳು, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯ ತುಲನೆ ಮಾಡಿ ತಮ್ಮದೇ ವಿಶಿಷ್ಟ ತೀರ್ಮಾನಗಳನ್ನು ಹಾಕುತ್ತಿದ್ದಾರೆ. ಆದರೆ ವಿಷಯ ಇಷ್ಟು ಮಾತ್ರವೇ? ಇದು ಕೇವಲ ಕಾನೂನಿನ ಒಂದು ಗೋಜಲು ಮಾತ್ರವೆ? ಅಥವಾ ವಿರೋಧ ಪಕ್ಷಗಳು ಹೇಳುವಂತೆ ಕೇವಲ ರಾಜಕೀಯವೆ?

ಈ ಕೇಸಿನ ಸಂಪೂರ್ಣ ಹಿನ್ನೆಲೆ ಹಾಗೂ ರಾಜಕೀಯದ ಹಲವು ದೃಷ್ಟಿಕೋನಗಳಿಂದ ಇದನ್ನು ನೋಡುತ್ತಾ ಹೋದರೆ ’ದ್ವೇಷ ಮತ್ತು ಸೇಡಿನ ರಾಜಕಾರಣ’ ಮತ್ತು ಅದನ್ನು ಸಾಧಿಸಲು ಸಂವಿಧಾನಾತ್ಮಕ ಸಂಸ್ಥೆಗಳ ವ್ಯವಸ್ಥಿತ ಬಳಕೆ ಹಾಗೂ ಅದಕ್ಕಾಗಿ ಯೋಜನಾಬದ್ಧ ಪ್ರಣಾಳಿಕೆಗಳು ನಿಚ್ಚಳವಾಗಿ (ನೋಡುವ ಮನಸ್ಸಿದ್ದವರಿಗೆ) ಕಂಡುಬರುತ್ತವೆ. ಪ್ರಜಾತಂತ್ರ ಹೇಗೆ ಹಂತಹಂತವಾಗಿ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಬಂದು, ಇಂದು ಕೊನೆಯುಸಿರೆಳೆಯುವ ಸ್ಥಿತಿಗೆ ಬಂದುನಿಂತಿದೆ ಎಂಬುದು (ಇನ್ನೂ ವಿಚಾರಿಸುವ ಶಕ್ತಿ ಉಳಿಸಿಕೊಂಡವರಿಗೆ) ಅರಿವಿಗೆ ಬರುತ್ತದೆ.

ಕೇಸಿನ ಹಿನ್ನೆಲೆ

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಭಾಷಣ ಮಾಡುತ್ತ ರಾಹುಲ್ ಗಾಂಧಿ ಅವರು ಮೋದಿ ಉಪನಾಮ ಹೊಂದಿದ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಅವರನ್ನು ಇನ್ನು ಸಮೀಕರಿಸುತ್ತ “ಅದ್ಹೇಗೆ ಈ ಎಲ್ಲಾ ಕಳ್ಳರ ಹೆರಲ್ಲೂ ಮೋದಿ ಇದೆ” ಎಂದಿದ್ದರು. ಮತ್ತೆ ಅದನ್ನು ಬಿಡಿಸಿ ಹೇಳುತ್ತಾ, ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿ ದೇಶದಿಂದ ಓಡಿಹೋದ ನೀರವ್ ಮೋದಿ, ಲಲಿತ್ ಮೋದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಸೇರಿಸಿದ್ದರು.

ಈ ಭಾಷಣವನ್ನು ಆಧರಿಸಿ ಗುಜರಾತ್‌ನ ಶಾಸಕ ಪೂರ್ಣೇಶ್ ಮೋದಿ ಎನ್ನುವ ವ್ಯಕ್ತಿ ಸೂರತ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದ. ಆತನ ಪ್ರಕಾರ ರಾಹುಲ್ ಗಾಂಧಿ ಸಕಲ ಮೋದಿ ಸಮುದಾಯವನ್ನು ಅಪಮಾನ ಮಾಡಿದ್ದರು.ಈ ಕೇಸಿನ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಬಹುತೇಕ ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿಯಾದವರು ಹೈಕೋರ್ಟ್‌ಗೆ ಹೋಗಿ ಕೇಸಿಗೆ ಅಥವಾ ತನಿಖೆಗೆ ತಡೆಯಾಜ್ಞೆ ತರುತ್ತಾರೆ. ಆದರೆ ಇಲ್ಲಿ ದೂರುದಾರ ಪೂರ್ಣೇಶ್ ಮೋದಿಯೇ ಹೈಕೋರ್ಟ್‌ನಲ್ಲಿ ತನ್ನ ಕೇಸಿಗೆ ತಾನೇ ತಡೆಯಾಜ್ಞೆ ತರುತ್ತಾರ. ಸುಮಾರು ಒಂದು ವರ್ಷ ಕೇಸು ನಿಂತ ಸ್ಥಿತಿಯಲ್ಲಿಯೇ ಇರುತ್ತದೆ. ಇದಕ್ಕೆ ಕಾರಣವೆಂದರೆ, ಪ್ರಕರಣ ದಾಖಲಾದ ನಂತರ ರಾಹುಲ್ ಗಾಂಧಿ ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿ ಹೋದ ನಂತರ, ಮತ್ತೆ ಪ್ರತಿ ವಿಚಾರಣೆಗೆ ಅವರನ್ನು ಕರೆಸುವಂತೆ ಸಲ್ಲಿಸಿದ್ದ ದೂರುದಾರರ ಮನವಿಯನ್ನು ಅಂದಿನ ನ್ಯಾಯಾಧೀಶರು ತಿರಸ್ಕರಿಸಿ ಕೇಸಿನ ವಾದ ಮಂಡಿಸುವಂತೆ ಆದೇಶಿಸಿದ್ದರು.

ಈ ವರ್ಷ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅದಾನಿ ಹಾಗೂ ಪ್ರಧಾನಿ ಮೋದಿ ನಡುವಿನ ಸಂಬಂಧ ಹಾಗೂ ಅದಾನಿ ಕಂಪನಿಗಳಿಗೆ ಶೆಲ್ ಕಂಪನಿಗಳಿಂದ ಹರಿದು ಬಂದ ಹಣದ ಬಗ್ಗೆ ತೀಕ್ಷ್ಣ ವಾಗ್ದಾಳಿ ಮಾಡಿದಾಗ ಅದಕ್ಕೆ ಹರಿದುಬಂದ ಬೆಂಬಲದ ಪ್ರತಿಕ್ರಿಯೆಗಳು ಬಿಜೆಪಿಗೆ ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ರಾಹುಲ್ ಗಾಂಧಿಯನ್ನು ’ಪಪ್ಪು’ ಎಂದು ಬಿಂಬಿಸಲು ವ್ಯಯಿಸಿದ ನೂರಾರು ಕೋಟಿ ರೂಪಾಯಿಗಳ ದೊಡ್ಡ ಮಟ್ಟದ ಶ್ರಮ ನೀರಿನಲ್ಲಿ ಕೊಚ್ಚಿಹೋದಂತೆ ವ್ಯರ್ಥವಾಗಿಬಿಡಬಹುದೇನೋ ಎಂಬ ಅಳುಕು ಕೂಡ ಶುರುವಾಗುತ್ತಿತ್ತು. ಲೋಕಸಭೆಯ ದಾಖಲೆಗಳಿಂದ ಅವರು ಆಡಿದ ಮಾತುಗಳನ್ನೇನೋ ತೆಗೆದುಹಾಕಲಾಯಿತು. ಆದರೆ ಅವರ ಮತ್ತೆ ಲೋಕಸಭೆಯಲ್ಲಿ ಮಾತೇ ಆಡದಂತೆ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಯಿತು. ಒಂದೇ ವಾರದೊಳಗೆ ಫೆಬ್ರವರಿ 16ರಂದು ಗುಜರಾತ್‌ನ ಪೂರ್ಣೇಶ್ ಮೋದಿ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆಯನ್ನು ತೆರವುಗೊಳಿಸಿದರು. ಫೆಬ್ರವರಿ 27ರಂದು ಪ್ರಕರಣ ಪುನಃ ಪ್ರಾರಂಭವಾಯಿತು. ಕೇವಲ 25 ದಿನಗಳಲ್ಲಿ ಪ್ರಕರಣ ಮುಗಿದು 23.03.2023ರಂದು ರಾಹುಲ್ ಗಾಂಧಿ ತಪ್ಪಿತಸ್ಥ ಎಂಬ ತೀರ್ಮಾನದ ಜೊತೆಗೆ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಯಿತು ಮತ್ತು ಮರುದಿನ 24.03.2023 ರಂದು ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.

ಇದನ್ನೂ ಓದಿ: ‘ಗಾಂಧಿ ತತ್ವಗಳಿಗೆ ಎಸಗಿದ ದೊಡ್ಡ ದ್ರೋಹ’: ರಾಹುಲ್ ಅಮಾನತ್ತಿಗೆ ಅಮೆರಿಕ ಸಂಸದರಿಂದ ಖಂಡನೆ

ಕಾನೂನು ಮತ್ತು ಅನ್ವಯಿಸಿದ ರೀತಿ

ರಾಹುಲ್ ಗಾಂಧಿಯವರನ್ನು ಐಪಿಸಿ ಕಲಂ 499 ಮತ್ತು 500ರ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ನೀಡಬಹುದಾದ ಗರಿಷ್ಠ ಶಿಕ್ಷೆ 2 ವರ್ಷ ಅಥವಾ ದಂಡ ಅಥವಾ ಎರಡೂ ಎಂದಿದ್ದು ರಾಹುಲ್ ಗಾಂಧಿಗೆ ಈ ಕಲಂ ವಿಧಿಸುವ ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

ಕ್ರಿಮಿನಲ್ ಕೇಸುಗಳಲ್ಲಿ ಸಾಮಾನ್ಯವಾಗಿ ಗಮನಿಸುವಂತೆ, ಅಪರಾಧದ ಗಂಭೀರತೆ ಅಪರಾಧಿಯ ಹಿನ್ನೆಲೆ ಮತ್ತು ಮೊದಲ ಬಾರಿ ತಪ್ಪೆಸಗಿದವರಿಗೆ ಸಿಗಬಹುದಾದ ರಿಯಾಯಿತಿ ಯಾವುದನ್ನೂ ಪರಿಗಣಿಸಿದಂತೆ ತೋರಿಲ್ಲ. ಯಾವ ಲಾಭವೂ ರಾಹುಲ್ ಗಾಂಧಿಯವರಿಗೆ ಸಿಕ್ಕಿಲ್ಲ. ಇದರ ಬಗ್ಗೆ ಸ್ವಲ್ಪ ವಿವರವಾಗಿ ಅವಲೋಕಿಸಿದಾಗ ಕೆಲವು ಗಂಭೀರ ಅಂಶಗಳು ಗೋಚರಿಸುತ್ತವೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಯಾವುದೇ ವ್ಯಕ್ತಿಗೆ 2 ವರ್ಷಕ್ಕೆ ಕಡಿಮೆ ಇಲ್ಲದಂತೆ ಶಿಕ್ಷೆ ಆದರೆ ಆ ವ್ಯಕ್ತಿ ಅನರ್ಹಗೊಳ್ಳುತ್ತಾನೆ.

ಪೂರ್ಣೇಶ್ ಮೋದಿ

ಅಕಸ್ಮಾತ್ ಶಿಕ್ಷೆ 1 ವರ್ಷ 10 ತಿಂಗಳಾದರೂ ಈ ಕಾಯ್ದೆ ಅನ್ವಯಿಸುವುದಿಲ್ಲ. ಇದೇ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ 30 ದಿನಗಳ ಅವಕಾಶವನ್ನು ಮೇಲ್ಮನವಿ ಸಲ್ಲಿಸಲು, ಈಗ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ನೀಡಿದ್ದರೂ 2013ರಲ್ಲಿ ’ಲಿಲ್ಲಿ ಥಾಮಸ್ ವರ್ಸಸ್ ಭಾರತ ಒಕ್ಕೂಟ’ ಕೇಸಿನಲ್ಲಿ ಅದನ್ನು ಅಸಂವಿಧಾನಿಕ ಎಂದು ರದ್ದು ಮಾಡಲಾಗಿರುವುದರಿಂದ, ಕೂಡಲೇ ಜಾರಿಗೆ ಬರುವಂತೆ ಸದಸ್ಯತ್ವವನ್ನು ಅನರ್ಹಗೊಳಿಸಲಾಗುತ್ತದೆ. 2013ರಲ್ಲಿ ಯುಪಿಎ ಸರ್ಕಾರ ಈ ತೀರ್ಪನ್ನು ತೊಡೆದುಹಾಕಲು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿಯವರೇ ವಿರೋಧಿಸಿದ್ದರು ಎಂಬುದು ವಿಪರ್ಯಾಸ.

ಇನ್ನು ಮಾನನಷ್ಟ ಎಂಬ ಮೊಕದ್ದಮೆಯ ಒಳಹೊರಗುಗಳನ್ನು ನೋಡಿದರೆ ಮತ್ತದೇ ವ್ಯಾಖ್ಯಾನಗಳ ಹಾವಳಿ. ರಾಹುಲ್ ಗಾಂಧಿ ಏಕೆ ಈ ಎಲ್ಲ ಕಳ್ಳರ ಹೆಸರುಗಳಲ್ಲಿ ಮೋದಿ ಇದೆ ಎಂದು ಹೇಳಿ, ನಂತರ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಹೆಸರುಗಳನ್ನು ತೆಗೆದುಕೊಂಡ ಮೇಲೆ, ಮೂಲಭೂತವಾಗಿ ಮೊಕದ್ದಮೆ ಹೂಡುವ ಅವಕಾಶ ಇರುವುದು ಈ ಮೂವರಿಗೆ ಮಾತ್ರ. ಅಕಸ್ಮಾತ್ ಮೋದಿ ಎಂಬ ಉಪನಾಮ ಇರುವವರೆಲ್ಲ ಕಳ್ಳರೆಂದು ಹೇಳಿದ್ದರೆ, ಪೂರ್ಣೇಶ್ ಮೋದಿಯೂ ಕೇಸ್ ಹಾಕಬಹುದಾಗಿತ್ತು. ಕಾಯ್ದೆಯ ಪ್ರಕಾರ ಒಂದು ಕಂಪನಿ, ಸಂಘ ಅಥವಾ ಒಂದು ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಹೇಳಿದಾಗಲೂ ಇದು ಅನ್ವಯವಾಗುತ್ತದೆ. ಪೂರ್ಣೇಶ್ ಮೋದಿ ಇಲ್ಲಿ ಯಾವುದೇ ಗುಂಪನ್ನು ಪ್ರತಿನಿಧಿಸುವುದಿಲ್ಲ. ಮೋದಿ ಎಂಬುದು ಒಂದು ಉಪನಾಮ ಹೊರತು ಒಂದು ಸಮುದಾಯ ಅಥವಾ ಜಾತಿ ದ್ಯೋತಕವಲ್ಲ.

ಹೀಗಿರುವಾಗ ’ನನ್ನ ಮಾನ ನಷ್ಟವಾಯಿತು’ ಎಂದು ಪೂರ್ಣೇಶ್ ಮೋದಿ ಸಲ್ಲಿಸಿದ ದಾವೆಯೇ ದೋಷಮುಕ್ತವಾಗಿದೆ ಎಂಬುದು ಅನೇಕ ಕಾನೂನು ಪಂಡಿತರ ವಾದ. ಇದೇ ವಾದವನ್ನು ಸುಪ್ರೀಂ ಕೋರ್ಟ್ ’ಎಸ್.ಖುಷ್ಬೂ ವರ್ಸಸ್ ಕನ್ನಿಯಮ್ಮಾಳ್’ ಕೇಸಿನಲ್ಲಿ ಹೇಳಿದ್ದು. ಕಲಂ 499ರ 2ನೇ ವಿವರಣೆಯು ವಿಶಾಲವಾಗಿದ್ದು ಒಂದು ನಿರ್ದಿಷ್ಟ ಸಮುದಾಯ ತನಗೆ ಮಾನನಷ್ಟವಾಗಿದೆ ಎಂದು ಹೇಳಬೇಕಾದರೆ ಅದು ಒಂದು ಗುರುತಿಸಬಹುದಾದಂತಹ ನಿರ್ದಿಷ್ಟ ಅಂಗವಾಗಿರಬೇಕು ಎಂದು ಅದು ಹೇಳುತ್ತದೆ. ಮೇಲ್ನೋಟಕ್ಕೆ ಗೊತ್ತಾಗುವಂತೆ ಪೂರ್ಣೇಶ್ ಮೋದಿ ಯಾವುದೇ ಅಂತಹ ಅಂಗವನ್ನು ಪ್ರತಿನಿಧಿಸುತ್ತಿರಲಿಲ್ಲ.

ಕಾನೂನು ತಜ್ಞರೂ ಅನೇಕ ವ್ಯಾಖ್ಯಾನ ನೀಡಬಹುದು. ನೂರಾರು ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಎದುರಿಗಿಟ್ಟು ವಾದ ಮಾಡಬಹುದು. ಆದರೆ ಕಾನೂನು ಕಾಯ್ದೆಗಳು ನಿಂತ ನೀರಲ್ಲ; ನಿರಂತರವಾಗಿ ಬದಲಾಗುತ್ತಿರುವ ದಿನಮಾನಗಳಲ್ಲಿ ಹೊಸ ಬಗೆಯ ವ್ಯಾಖ್ಯಾನಗಳು ಹುಟ್ಟಬೇಕು. ಇಲ್ಲಿಯವರೆಗೆ ಯಾವಯಾವ ರಾಜಕೀಯ ಮುಖಂಡರಿಗೆ ಶಿಕ್ಷೆಗಳಾದಾಗ ಎಷ್ಟು ಜನ ಸ್ಥಾನ ಕಳೆದುಕೊಂಡಿದ್ದಾರೆ ಎಂಬುದು ನಮ್ಮ ಕಣ್ಣ ಮುಂದಿದೆ. ಕರ್ನಾಟಕದಲ್ಲಿ ನೆಹರು ಓಲೆಕಾರ್ ಅಂಥವರ ಉದಾಹರಣೆ ಇದ್ದರೆ ಕೇಂದ್ರದಲ್ಲಿ ಸಾಧ್ವಿ ಪ್ರಜ್ಞಾ ಅವರಂಥವರು ಅನಾಯಾಸವಾಗಿ ಅಧಿಕಾರದಲ್ಲಿದ್ದಾರೆ. ಉನ್ನಾವ್‌ನ (ಉತ್ತರ ಪ್ರದೇಶ್) ಕುಲದೀಪ್ ಸಿಂಗ್ ಸೆಂಗರ್ ರೇಪ್ ಕೇಸಿನಲ್ಲಿ ಶಿಕ್ಷೆಯಾದರೂ ಜನರ ಪ್ರತಿಭಟನೆಗಳು ಭುಗಿಲೇಳುವವರೆಗೆ ತನ್ನ ಸ್ಥಾನದಲ್ಲೇ ಮುಂದುವರೆದಿದ್ದ.

ನಿಜ, ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...