Homeಮುಖಪುಟರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

ರಾಹುಲ್ ಗಾಂಧಿ ಅನರ್ಹತೆ: ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ

- Advertisement -
- Advertisement -

ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶರು ತೀರ್ಪು ನೀಡಿ 2 ವರ್ಷ ಶಿಕ್ಷೆ ವಿಧಿಸಿದ್ದು ನಂತರ ಅತ್ಯಂತ ತೀವ್ರಗತಿಯಲ್ಲಿ ಲೋಕಸಭೆಯ ಸೆಕ್ರೆಟೆರಿಯಟ್ ಅವರ ಸ್ಥಾನವನ್ನು ಅನರ್ಹಗೊಳಿಸಿದ್ದು ದೇಶದಾದ್ಯಂತ ತೀವ್ರ ಗಂಭೀರವಾದ ಕೆಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಕಳೆದ ಕೆಲವು ವರ್ಷಗಳಲ್ಲಿ ಮೊದಲ ಬಾರಿಗೆ ಬಹುತೇಕ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಒಮ್ಮತದಿಂದ ಈ ಬೆಳವಣಿಗೆಗಳನ್ನು ಖಂಡಿಸುತ್ತಿರುವುದು ಕೆಲವರಿಗೆ ಧನಾತ್ಮಕ ಬೆಳವಣಿಗೆಯಂತೆ ಕಂಡರೆ, ಇನ್ನೂ ಕೆಲವರಿಗೆ ’ನೋಡಿದ್ರಾ ಆಡಳಿತ ಪಕ್ಷದ ಪವರ್ ಏನು’ ಎಂದು ಎದೆತಟ್ಟಿ ಹೇಳುವಂತೆ ಮಾಡಿದೆ. ಇದರ ಮಧ್ಯೆ ವಕೀಲರುಗಳು, ಕಾನೂನು ತಜ್ಞರು ಮುಂತಾದವರು ತಮ್ಮ ಪ್ರಖರ ವಾಕ್ ಚಾತುರ್ಯದಿಂದ ಮಾನನಷ್ಟ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ, ಸಂವಿಧಾನದ ಬಗ್ಗೆ ಹಲವು ಬಗೆಯ ವ್ಯಾಖ್ಯಾನಗಳು, ರಾಹುಲ್ ಮಾತಿನಲ್ಲಿನ ವ್ಯಾಕರಣ ಆಧರಿಸಿ ಅದನ್ನು ಅನ್ವಯಿಸುವ, ಮಾತಾಡಿದ ಜಾಗ ಹಾಗೂ ಮೊಕದ್ದಮೆ ಹೂಡಿದ ಜಾಗಗಳ ಬಗ್ಗೆ ಕಾನೂನಿನ ಅನ್ವಯಿಕೆಯ ಬಗ್ಗೆ ವ್ಯಾಖ್ಯೆಗಳು, ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯ ತುಲನೆ ಮಾಡಿ ತಮ್ಮದೇ ವಿಶಿಷ್ಟ ತೀರ್ಮಾನಗಳನ್ನು ಹಾಕುತ್ತಿದ್ದಾರೆ. ಆದರೆ ವಿಷಯ ಇಷ್ಟು ಮಾತ್ರವೇ? ಇದು ಕೇವಲ ಕಾನೂನಿನ ಒಂದು ಗೋಜಲು ಮಾತ್ರವೆ? ಅಥವಾ ವಿರೋಧ ಪಕ್ಷಗಳು ಹೇಳುವಂತೆ ಕೇವಲ ರಾಜಕೀಯವೆ?

ಈ ಕೇಸಿನ ಸಂಪೂರ್ಣ ಹಿನ್ನೆಲೆ ಹಾಗೂ ರಾಜಕೀಯದ ಹಲವು ದೃಷ್ಟಿಕೋನಗಳಿಂದ ಇದನ್ನು ನೋಡುತ್ತಾ ಹೋದರೆ ’ದ್ವೇಷ ಮತ್ತು ಸೇಡಿನ ರಾಜಕಾರಣ’ ಮತ್ತು ಅದನ್ನು ಸಾಧಿಸಲು ಸಂವಿಧಾನಾತ್ಮಕ ಸಂಸ್ಥೆಗಳ ವ್ಯವಸ್ಥಿತ ಬಳಕೆ ಹಾಗೂ ಅದಕ್ಕಾಗಿ ಯೋಜನಾಬದ್ಧ ಪ್ರಣಾಳಿಕೆಗಳು ನಿಚ್ಚಳವಾಗಿ (ನೋಡುವ ಮನಸ್ಸಿದ್ದವರಿಗೆ) ಕಂಡುಬರುತ್ತವೆ. ಪ್ರಜಾತಂತ್ರ ಹೇಗೆ ಹಂತಹಂತವಾಗಿ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಬಂದು, ಇಂದು ಕೊನೆಯುಸಿರೆಳೆಯುವ ಸ್ಥಿತಿಗೆ ಬಂದುನಿಂತಿದೆ ಎಂಬುದು (ಇನ್ನೂ ವಿಚಾರಿಸುವ ಶಕ್ತಿ ಉಳಿಸಿಕೊಂಡವರಿಗೆ) ಅರಿವಿಗೆ ಬರುತ್ತದೆ.

ಕೇಸಿನ ಹಿನ್ನೆಲೆ

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಭಾಷಣ ಮಾಡುತ್ತ ರಾಹುಲ್ ಗಾಂಧಿ ಅವರು ಮೋದಿ ಉಪನಾಮ ಹೊಂದಿದ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಅವರನ್ನು ಇನ್ನು ಸಮೀಕರಿಸುತ್ತ “ಅದ್ಹೇಗೆ ಈ ಎಲ್ಲಾ ಕಳ್ಳರ ಹೆರಲ್ಲೂ ಮೋದಿ ಇದೆ” ಎಂದಿದ್ದರು. ಮತ್ತೆ ಅದನ್ನು ಬಿಡಿಸಿ ಹೇಳುತ್ತಾ, ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿ ದೇಶದಿಂದ ಓಡಿಹೋದ ನೀರವ್ ಮೋದಿ, ಲಲಿತ್ ಮೋದಿ ಜೊತೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಸೇರಿಸಿದ್ದರು.

ಈ ಭಾಷಣವನ್ನು ಆಧರಿಸಿ ಗುಜರಾತ್‌ನ ಶಾಸಕ ಪೂರ್ಣೇಶ್ ಮೋದಿ ಎನ್ನುವ ವ್ಯಕ್ತಿ ಸೂರತ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದ. ಆತನ ಪ್ರಕಾರ ರಾಹುಲ್ ಗಾಂಧಿ ಸಕಲ ಮೋದಿ ಸಮುದಾಯವನ್ನು ಅಪಮಾನ ಮಾಡಿದ್ದರು.ಈ ಕೇಸಿನ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಬಹುತೇಕ ಕ್ರಿಮಿನಲ್ ಕೇಸುಗಳಲ್ಲಿ ಅಪರಾಧಿಯಾದವರು ಹೈಕೋರ್ಟ್‌ಗೆ ಹೋಗಿ ಕೇಸಿಗೆ ಅಥವಾ ತನಿಖೆಗೆ ತಡೆಯಾಜ್ಞೆ ತರುತ್ತಾರೆ. ಆದರೆ ಇಲ್ಲಿ ದೂರುದಾರ ಪೂರ್ಣೇಶ್ ಮೋದಿಯೇ ಹೈಕೋರ್ಟ್‌ನಲ್ಲಿ ತನ್ನ ಕೇಸಿಗೆ ತಾನೇ ತಡೆಯಾಜ್ಞೆ ತರುತ್ತಾರ. ಸುಮಾರು ಒಂದು ವರ್ಷ ಕೇಸು ನಿಂತ ಸ್ಥಿತಿಯಲ್ಲಿಯೇ ಇರುತ್ತದೆ. ಇದಕ್ಕೆ ಕಾರಣವೆಂದರೆ, ಪ್ರಕರಣ ದಾಖಲಾದ ನಂತರ ರಾಹುಲ್ ಗಾಂಧಿ ಕೋರ್ಟಿಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿ ಹೋದ ನಂತರ, ಮತ್ತೆ ಪ್ರತಿ ವಿಚಾರಣೆಗೆ ಅವರನ್ನು ಕರೆಸುವಂತೆ ಸಲ್ಲಿಸಿದ್ದ ದೂರುದಾರರ ಮನವಿಯನ್ನು ಅಂದಿನ ನ್ಯಾಯಾಧೀಶರು ತಿರಸ್ಕರಿಸಿ ಕೇಸಿನ ವಾದ ಮಂಡಿಸುವಂತೆ ಆದೇಶಿಸಿದ್ದರು.

ಈ ವರ್ಷ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅದಾನಿ ಹಾಗೂ ಪ್ರಧಾನಿ ಮೋದಿ ನಡುವಿನ ಸಂಬಂಧ ಹಾಗೂ ಅದಾನಿ ಕಂಪನಿಗಳಿಗೆ ಶೆಲ್ ಕಂಪನಿಗಳಿಂದ ಹರಿದು ಬಂದ ಹಣದ ಬಗ್ಗೆ ತೀಕ್ಷ್ಣ ವಾಗ್ದಾಳಿ ಮಾಡಿದಾಗ ಅದಕ್ಕೆ ಹರಿದುಬಂದ ಬೆಂಬಲದ ಪ್ರತಿಕ್ರಿಯೆಗಳು ಬಿಜೆಪಿಗೆ ಅಷ್ಟೊಂದು ಅನುಕೂಲಕರವಾಗಿರಲಿಲ್ಲ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ರಾಹುಲ್ ಗಾಂಧಿಯನ್ನು ’ಪಪ್ಪು’ ಎಂದು ಬಿಂಬಿಸಲು ವ್ಯಯಿಸಿದ ನೂರಾರು ಕೋಟಿ ರೂಪಾಯಿಗಳ ದೊಡ್ಡ ಮಟ್ಟದ ಶ್ರಮ ನೀರಿನಲ್ಲಿ ಕೊಚ್ಚಿಹೋದಂತೆ ವ್ಯರ್ಥವಾಗಿಬಿಡಬಹುದೇನೋ ಎಂಬ ಅಳುಕು ಕೂಡ ಶುರುವಾಗುತ್ತಿತ್ತು. ಲೋಕಸಭೆಯ ದಾಖಲೆಗಳಿಂದ ಅವರು ಆಡಿದ ಮಾತುಗಳನ್ನೇನೋ ತೆಗೆದುಹಾಕಲಾಯಿತು. ಆದರೆ ಅವರ ಮತ್ತೆ ಲೋಕಸಭೆಯಲ್ಲಿ ಮಾತೇ ಆಡದಂತೆ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಯಿತು. ಒಂದೇ ವಾರದೊಳಗೆ ಫೆಬ್ರವರಿ 16ರಂದು ಗುಜರಾತ್‌ನ ಪೂರ್ಣೇಶ್ ಮೋದಿ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆಯನ್ನು ತೆರವುಗೊಳಿಸಿದರು. ಫೆಬ್ರವರಿ 27ರಂದು ಪ್ರಕರಣ ಪುನಃ ಪ್ರಾರಂಭವಾಯಿತು. ಕೇವಲ 25 ದಿನಗಳಲ್ಲಿ ಪ್ರಕರಣ ಮುಗಿದು 23.03.2023ರಂದು ರಾಹುಲ್ ಗಾಂಧಿ ತಪ್ಪಿತಸ್ಥ ಎಂಬ ತೀರ್ಮಾನದ ಜೊತೆಗೆ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಯಿತು ಮತ್ತು ಮರುದಿನ 24.03.2023 ರಂದು ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.

ಇದನ್ನೂ ಓದಿ: ‘ಗಾಂಧಿ ತತ್ವಗಳಿಗೆ ಎಸಗಿದ ದೊಡ್ಡ ದ್ರೋಹ’: ರಾಹುಲ್ ಅಮಾನತ್ತಿಗೆ ಅಮೆರಿಕ ಸಂಸದರಿಂದ ಖಂಡನೆ

ಕಾನೂನು ಮತ್ತು ಅನ್ವಯಿಸಿದ ರೀತಿ

ರಾಹುಲ್ ಗಾಂಧಿಯವರನ್ನು ಐಪಿಸಿ ಕಲಂ 499 ಮತ್ತು 500ರ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಒಬ್ಬ ವ್ಯಕ್ತಿಗೆ ನೀಡಬಹುದಾದ ಗರಿಷ್ಠ ಶಿಕ್ಷೆ 2 ವರ್ಷ ಅಥವಾ ದಂಡ ಅಥವಾ ಎರಡೂ ಎಂದಿದ್ದು ರಾಹುಲ್ ಗಾಂಧಿಗೆ ಈ ಕಲಂ ವಿಧಿಸುವ ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

ಕ್ರಿಮಿನಲ್ ಕೇಸುಗಳಲ್ಲಿ ಸಾಮಾನ್ಯವಾಗಿ ಗಮನಿಸುವಂತೆ, ಅಪರಾಧದ ಗಂಭೀರತೆ ಅಪರಾಧಿಯ ಹಿನ್ನೆಲೆ ಮತ್ತು ಮೊದಲ ಬಾರಿ ತಪ್ಪೆಸಗಿದವರಿಗೆ ಸಿಗಬಹುದಾದ ರಿಯಾಯಿತಿ ಯಾವುದನ್ನೂ ಪರಿಗಣಿಸಿದಂತೆ ತೋರಿಲ್ಲ. ಯಾವ ಲಾಭವೂ ರಾಹುಲ್ ಗಾಂಧಿಯವರಿಗೆ ಸಿಕ್ಕಿಲ್ಲ. ಇದರ ಬಗ್ಗೆ ಸ್ವಲ್ಪ ವಿವರವಾಗಿ ಅವಲೋಕಿಸಿದಾಗ ಕೆಲವು ಗಂಭೀರ ಅಂಶಗಳು ಗೋಚರಿಸುತ್ತವೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಯಾವುದೇ ವ್ಯಕ್ತಿಗೆ 2 ವರ್ಷಕ್ಕೆ ಕಡಿಮೆ ಇಲ್ಲದಂತೆ ಶಿಕ್ಷೆ ಆದರೆ ಆ ವ್ಯಕ್ತಿ ಅನರ್ಹಗೊಳ್ಳುತ್ತಾನೆ.

ಪೂರ್ಣೇಶ್ ಮೋದಿ

ಅಕಸ್ಮಾತ್ ಶಿಕ್ಷೆ 1 ವರ್ಷ 10 ತಿಂಗಳಾದರೂ ಈ ಕಾಯ್ದೆ ಅನ್ವಯಿಸುವುದಿಲ್ಲ. ಇದೇ ಪ್ರಜಾಪ್ರತಿನಿಧಿ ಕಾಯ್ದೆಯ ಅಡಿಯಲ್ಲಿ 30 ದಿನಗಳ ಅವಕಾಶವನ್ನು ಮೇಲ್ಮನವಿ ಸಲ್ಲಿಸಲು, ಈಗ ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ನೀಡಿದ್ದರೂ 2013ರಲ್ಲಿ ’ಲಿಲ್ಲಿ ಥಾಮಸ್ ವರ್ಸಸ್ ಭಾರತ ಒಕ್ಕೂಟ’ ಕೇಸಿನಲ್ಲಿ ಅದನ್ನು ಅಸಂವಿಧಾನಿಕ ಎಂದು ರದ್ದು ಮಾಡಲಾಗಿರುವುದರಿಂದ, ಕೂಡಲೇ ಜಾರಿಗೆ ಬರುವಂತೆ ಸದಸ್ಯತ್ವವನ್ನು ಅನರ್ಹಗೊಳಿಸಲಾಗುತ್ತದೆ. 2013ರಲ್ಲಿ ಯುಪಿಎ ಸರ್ಕಾರ ಈ ತೀರ್ಪನ್ನು ತೊಡೆದುಹಾಕಲು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿಯವರೇ ವಿರೋಧಿಸಿದ್ದರು ಎಂಬುದು ವಿಪರ್ಯಾಸ.

ಇನ್ನು ಮಾನನಷ್ಟ ಎಂಬ ಮೊಕದ್ದಮೆಯ ಒಳಹೊರಗುಗಳನ್ನು ನೋಡಿದರೆ ಮತ್ತದೇ ವ್ಯಾಖ್ಯಾನಗಳ ಹಾವಳಿ. ರಾಹುಲ್ ಗಾಂಧಿ ಏಕೆ ಈ ಎಲ್ಲ ಕಳ್ಳರ ಹೆಸರುಗಳಲ್ಲಿ ಮೋದಿ ಇದೆ ಎಂದು ಹೇಳಿ, ನಂತರ ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಹೆಸರುಗಳನ್ನು ತೆಗೆದುಕೊಂಡ ಮೇಲೆ, ಮೂಲಭೂತವಾಗಿ ಮೊಕದ್ದಮೆ ಹೂಡುವ ಅವಕಾಶ ಇರುವುದು ಈ ಮೂವರಿಗೆ ಮಾತ್ರ. ಅಕಸ್ಮಾತ್ ಮೋದಿ ಎಂಬ ಉಪನಾಮ ಇರುವವರೆಲ್ಲ ಕಳ್ಳರೆಂದು ಹೇಳಿದ್ದರೆ, ಪೂರ್ಣೇಶ್ ಮೋದಿಯೂ ಕೇಸ್ ಹಾಕಬಹುದಾಗಿತ್ತು. ಕಾಯ್ದೆಯ ಪ್ರಕಾರ ಒಂದು ಕಂಪನಿ, ಸಂಘ ಅಥವಾ ಒಂದು ನಿರ್ದಿಷ್ಟ ಗುಂಪನ್ನು ಉದ್ದೇಶಿಸಿ ಹೇಳಿದಾಗಲೂ ಇದು ಅನ್ವಯವಾಗುತ್ತದೆ. ಪೂರ್ಣೇಶ್ ಮೋದಿ ಇಲ್ಲಿ ಯಾವುದೇ ಗುಂಪನ್ನು ಪ್ರತಿನಿಧಿಸುವುದಿಲ್ಲ. ಮೋದಿ ಎಂಬುದು ಒಂದು ಉಪನಾಮ ಹೊರತು ಒಂದು ಸಮುದಾಯ ಅಥವಾ ಜಾತಿ ದ್ಯೋತಕವಲ್ಲ.

ಹೀಗಿರುವಾಗ ’ನನ್ನ ಮಾನ ನಷ್ಟವಾಯಿತು’ ಎಂದು ಪೂರ್ಣೇಶ್ ಮೋದಿ ಸಲ್ಲಿಸಿದ ದಾವೆಯೇ ದೋಷಮುಕ್ತವಾಗಿದೆ ಎಂಬುದು ಅನೇಕ ಕಾನೂನು ಪಂಡಿತರ ವಾದ. ಇದೇ ವಾದವನ್ನು ಸುಪ್ರೀಂ ಕೋರ್ಟ್ ’ಎಸ್.ಖುಷ್ಬೂ ವರ್ಸಸ್ ಕನ್ನಿಯಮ್ಮಾಳ್’ ಕೇಸಿನಲ್ಲಿ ಹೇಳಿದ್ದು. ಕಲಂ 499ರ 2ನೇ ವಿವರಣೆಯು ವಿಶಾಲವಾಗಿದ್ದು ಒಂದು ನಿರ್ದಿಷ್ಟ ಸಮುದಾಯ ತನಗೆ ಮಾನನಷ್ಟವಾಗಿದೆ ಎಂದು ಹೇಳಬೇಕಾದರೆ ಅದು ಒಂದು ಗುರುತಿಸಬಹುದಾದಂತಹ ನಿರ್ದಿಷ್ಟ ಅಂಗವಾಗಿರಬೇಕು ಎಂದು ಅದು ಹೇಳುತ್ತದೆ. ಮೇಲ್ನೋಟಕ್ಕೆ ಗೊತ್ತಾಗುವಂತೆ ಪೂರ್ಣೇಶ್ ಮೋದಿ ಯಾವುದೇ ಅಂತಹ ಅಂಗವನ್ನು ಪ್ರತಿನಿಧಿಸುತ್ತಿರಲಿಲ್ಲ.

ಕಾನೂನು ತಜ್ಞರೂ ಅನೇಕ ವ್ಯಾಖ್ಯಾನ ನೀಡಬಹುದು. ನೂರಾರು ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಎದುರಿಗಿಟ್ಟು ವಾದ ಮಾಡಬಹುದು. ಆದರೆ ಕಾನೂನು ಕಾಯ್ದೆಗಳು ನಿಂತ ನೀರಲ್ಲ; ನಿರಂತರವಾಗಿ ಬದಲಾಗುತ್ತಿರುವ ದಿನಮಾನಗಳಲ್ಲಿ ಹೊಸ ಬಗೆಯ ವ್ಯಾಖ್ಯಾನಗಳು ಹುಟ್ಟಬೇಕು. ಇಲ್ಲಿಯವರೆಗೆ ಯಾವಯಾವ ರಾಜಕೀಯ ಮುಖಂಡರಿಗೆ ಶಿಕ್ಷೆಗಳಾದಾಗ ಎಷ್ಟು ಜನ ಸ್ಥಾನ ಕಳೆದುಕೊಂಡಿದ್ದಾರೆ ಎಂಬುದು ನಮ್ಮ ಕಣ್ಣ ಮುಂದಿದೆ. ಕರ್ನಾಟಕದಲ್ಲಿ ನೆಹರು ಓಲೆಕಾರ್ ಅಂಥವರ ಉದಾಹರಣೆ ಇದ್ದರೆ ಕೇಂದ್ರದಲ್ಲಿ ಸಾಧ್ವಿ ಪ್ರಜ್ಞಾ ಅವರಂಥವರು ಅನಾಯಾಸವಾಗಿ ಅಧಿಕಾರದಲ್ಲಿದ್ದಾರೆ. ಉನ್ನಾವ್‌ನ (ಉತ್ತರ ಪ್ರದೇಶ್) ಕುಲದೀಪ್ ಸಿಂಗ್ ಸೆಂಗರ್ ರೇಪ್ ಕೇಸಿನಲ್ಲಿ ಶಿಕ್ಷೆಯಾದರೂ ಜನರ ಪ್ರತಿಭಟನೆಗಳು ಭುಗಿಲೇಳುವವರೆಗೆ ತನ್ನ ಸ್ಥಾನದಲ್ಲೇ ಮುಂದುವರೆದಿದ್ದ.

ನಿಜ, ಒಂದು ದೇಶ, ಒಂದು ಕಾಯ್ದೆ, ನ್ಯಾಯ ಮಾತ್ರ ಬೇರೆಬೇರೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...