Homeರಾಷ್ಟ್ರೀಯಕಲೆಯನ್ನು (ಸಿನೆಮಾ) ಅರ್ಥ ಮಾಡಿಕೊಳ್ಳಬೇಕಾ ಅಥವಾ?

ಕಲೆಯನ್ನು (ಸಿನೆಮಾ) ಅರ್ಥ ಮಾಡಿಕೊಳ್ಳಬೇಕಾ ಅಥವಾ?

- Advertisement -
- Advertisement -

ಒಂದು – ನನ್ನ ಒಬ್ಬ ಮಿತ್ರ ಹೇಳಿದ ಘಟನೆ. ಅವನು ಮೊದಲ ಸಲ ಮುಂಬಯಿಗೆ ಹೋಗಿದ್ದಾಗ ಅವನಿಗಿದ್ದ ಒಂದು ಆಸೆ; ಮಲ್ಟಿಪ್ಲೆಕ್ಸ್‍ನಲ್ಲಿ ಒಂದು ಸಿನೆಮಾ ನೋಡಬೇಕು ಅಂತ. ಆಯ್ತು ಹೋದ, ಯಾವುದೋ ಒಂದು ದೊಡ್ಡ ಹೀರೋನ ಚಿತ್ರದ ಟಿಕೆಟ್ ತೊಗೊಂಡು, ಒಂದು ಹಾಲ್‍ನಲ್ಲಿ ಕುಳಿತ. ಅಲ್ಲಿ ಆ ದೊಡ್ಡ ಹೀರೋನ ಸಿನಿಮಾ ಶುರುವಾಗುವ ಬದಲಿಗೆ ಯಾವುದೋ ಸಾಕ್ಷಚಿತ್ರ ಶುರುವಾಯಿತು. ಆಯಿತು, ಕೆಲನಿಮಿಷ ಇದನ್ನು ತೋರಿಸಿ ಸಿನೆಮಾ ಶುರು ಮಾಡ್ತಾರೆ ಎಂದು ಕುಳಿತವನಿಗೆ ತಾನು ತಪ್ಪಾಗಿ ಬೇರೊಂದು ಹಾಲ್‍ಗೆ ಬಂದಿದ್ದೇನೆ ಎಂದು ತಿಳಿಯುವಷ್ಟರಲ್ಲಿ ತುಂಬಾ ತಡವಾಗಿತ್ತು.

“ಥೋ, ಅದ್ಹೆಂತದೋ ಮುಂಬಯಿಯಲ್ಲಿ ಇಲಿ ಹಿಡಿಯುವವರ ಚಿತ್ರ ಇತ್ತು ಮಾರಾಯಾ, ಒಂದು ಇಲಿ ಹೊಡೆದುಕೊಟ್ಟರೆ ಇಂತಿಷ್ಟು ರೂಪಾಯಿ ಕೊಡ್ತಾರೆಂತೆ, ದಿನಾ ರಾತ್ರಿ 12 ಗಂಟೆ ನಂತರ ಇವರೆಲ್ಲಾ ಕೆಲಸ ಶುರು ಹಚ್ಕೋತಾರೆ, ಹೆಂಗೆ ಹಿಡಿತಾರೆ ಗೊತ್ತಾ ಇಲೀನಾ, ಅವರ ಜೀವನ ಹೆಂಗಿರುತ್ತೆ ಗೊತ್ತಾ…” ಎಂದೆಲ್ಲಾ ಅವನು ಆ ಚಿತ್ರದ ಬಗ್ಗೆ ಸವಿಸ್ತಾರವಾಗಿ ಕಣ್ಣುಮುಂದೆ ಬರುವಂತೆ ಆ ಘಟನೆಯಾದ ಐದಾರು ವರ್ಷಗಳ ನಂತರವೂ ನಿನ್ನೆಯೇ ನೋಡಿದ ಸಿನೆಮಾದಂತೆ ಹೇಳುತ್ತಿದ್ದ; ಅದರೊಂದಿಗೆ ಎಂಥಾ ಡಬ್ಬಾ ಸಿನೆಮಾ, ಹೀರೋನ ಸಿನೆಮಾ ನೋಡೋಕ್ ಹೋಗಿ ಅದನ್ನು ನೋಡಬೇಕಾಯಿತು ಎನ್ನುವ ಕಡುಬೇಸರವನ್ನೂ ವ್ಯಕ್ತಪಡಿಸುತ್ತಿದ್ದ.

ಎರಡು – ಮುಂಬಯಿಯಲ್ಲಿ ಪಂಡಿತ್ ಪ್ರದೀಪ್ ಚಟರ್ಜಿಯವರ ಬಳಿ ಹಿಂದುಸ್ತಾನಿ ಸಂಗೀತ ಕಲಿಯುತ್ತಿದ್ದೆ. ನನ್ನ ಜೊತೆಗೆ ಕಲಿಯುತ್ತಿದ್ದ ಒಬ್ಬ ಶಿಷ್ಯೆ ಏನೋ ಹೇಳುತ್ತ “ಅವರು (ಒಬ್ಬ ಹಿಂದುಸ್ತಾನಿ ಗಾಯಕರನ್ನು ಹೆಸರಿಸಿ) ಹಾಡೋದು ನಮಗೆ ಅರ್ಥಾನೇ ಆಗೋಲ್ಲ” ಎಂದು ಬಿಟ್ಟಳು. ಅದನ್ನು ಕೇಳಿ ಸಿಟ್ಟಿಗೆದ್ದ ನಮ್ಮ ಗುರುಗಳು “ಏನ್ರೀ, ಯಾರದೋ ಮನೆಗೆ ಹೋದಾಗ, ಅಲ್ಲಿ ಒಳ್ಳೇ ಊಟ ಬಡಿಸಿದ ಮೇಲೆ, ಅದನ್ನು ಹೇಗೆ ಮಾಡಿದ್ರು, ಯಾವ್ಯಾವ ಪದಾರ್ಥಗಳನ್ನು ಹಾಕಿದ್ರು ಅಂತಾ ತಿಳಕೊಳ್ಳೋಕೆ ಹೋಗ್ತೀರಾ? ಆ ಊಟ ಎಂಜಾಯ್ ಮಾಡೋಕೆ ಅದೆಲ್ಲಾ ತಿಳಿಯೋದು ಅವಶ್ಯಕವಾ? ಅವೆಲ್ಲಾ ಏನೂ ತಿಳಿಯದೇ ಊಟ ಮಾಡಿದ್ರೆ ಸಮಾಧಾನ ಆಗಲ್ವಾ?… ಇಂಥಾ ಮಾತುಗಳು (ಆ ಶಿಷ್ಯೆ ಕೇಳಿದ್ದು) ನಿಮ್ಮ ಬಾಯಿಂದ ಬರಲೇಬಾರದು.” ಎಂದರು.
ಮೂರು – ಮನೆಯಲ್ಲಿ ಟಿವಿ ಆನ್ ಆಗಿತ್ತು, ಟೊರಂಟೀನೋನ ಕಿಲ್ ಬಿಲ್ 1 ಚಿತ್ರ ಬರುತ್ತಿತ್ತು. ಯಾರೂ ನೋಡುತ್ತಿರಲಿಲ್ಲ. ಆ ಚಿತ್ರದಲ್ಲಿ ವಿವಿಕಾ ಫಾಕ್ಸ್‍ಳನ್ನು ಕೊಲ್ಲುವ ಉದ್ದೇಶದಿಂದ ಊಮಾ ಥರ್ಮನ್ ಬಂದಾಗ ಹೊಡೆದಾಟದ ದೃಶ್ಯವೊಂದಿದೆ. ಏನೋ ಮಾಡುತ್ತಿದ್ದ ನನ್ನ ಅಮ್ಮ ಆ ದೃಶ್ಯವನ್ನು ನೋಡುತ್ತ ನಿಂತುಬಿಟ್ಟರು, “ಇದೇನಿದು, ಹೆಂಗೆ ಹೊಡೆದಾಡ್ತಾರೆ, ಓಹ್, ಸುಮ್ಮನಾದ್ರಲ್ಲ, ಹೊಡೆದಾಟ ಮುಗಿಸಿದ್ರಾ, ಓ… ಆ ಮಗು ಬಂತು ಅಂತ ಸುಮ್ಮನಾದ್ರಾ, ಅಯ್ತೋ ಆ ಮಗು ಹೋದ ಕೂಡಲೇ ಮತ್ತೇ ಶುರುಮಾಡಿಬಿಟ್ರಲ್ಲ…ಹಾಹಹಾಹಾ…” ಜೀವನದಲ್ಲಿ ಎಂದು ಹೊಡೆದಾಟದ ಸಿನೆಮಾಗಳನ್ನು ನೋಡದ ಅವರು ಪ್ರತಿಕ್ರಿಯಿಸಿದ್ದು ಹೀಗೆ. ಅಷ್ಟರಲ್ಲಿ ಕಲಾತ್ಮಕ ಸಿನೆಮಾಗಳನ್ನು ನೋಡುವ ಅಭಿರುಚಿ ಹೊಂದಿರುವ ಅಪ್ಪ ಅದನ್ನು ನೋಡಿ, “ಇದೇನು, ಮಕ್ಕಳ ತರಾ ಹೊಡೆದಾಟದ ಸಿನೆಮಾ ನೋಡ್ತೀರಿ…” ಎಂದು ಗದರಿಸಿದರು.
ನಾಲ್ಕು – ಹಲವಾರು ಬಾರಿ ಕೇಳಿದ್ದು; ಆವಯ್ಯನ ಸಿನೆಮಾಗಳು ಅರ್ಥಾನೇ ಆಗಲ್ಲ..
ಐದು – “ಗಾಡ್‍ಫಾದರ್ ಚಿತ್ರವನ್ನು ಮೊದಲ ಸಲ ನೋಡಿದಾಗ ಏನೂ ತಿಳೀಲಿಲ್ಲ, ಎರಡನೇ ಸಲ ನೋಡಿದಾಗಲೂ ತಿಳಿಯಲಿಲ್ಲ, ಆನಂತರ ಗಾಡ್‍ಫಾದರ್ ಪುಸ್ತಕ ಓದಿ ಸಿನೆಮಾ ನೋಡಿದೆ; ಎಂತಹ ಅದ್ಭುತ ಸಿನೆಮಾ” ಒಬ್ಬ ಗೆಳೆಯ ಹೇಳಿದ್ದು.
ರೋಮನ್ ಪೋಲನ್ಸ್ಕಿ ಅವರ ಅತ್ಯಂತ ಸುಪ್ರಸಿದ್ಧ ಸಿನೆಮಾ ರೋಸ್‍ಮೇರಿ’ಸ್ ಬೇಬಿ ಯನ್ನು ಮತ್ತು ಸ್ಟ್ಯಾನ್ಲಿ ಕ್ಯುಬರಿಕ್ ಅವರ ಶೈನಿಂಗ್ ಚಿತ್ರಗಳನ್ನು ಹೇಗೆ ಅರ್ಥೈಸಬೇಕು?
ದಕ್ಷಿಣ ಭಾರತದ ಸ್ಟಾರ್‍ಗಳ ಅಭಿಮಾನಿಗಳು ಆಯಾ ಸ್ಟಾರ್‍ನ ಎಲ್ಲಾ ಸಿನೆಮಾಗಳನ್ನು ಆನಂದಿಸುತ್ತಾರಾ? ಹೇಗೆ?
ಒಂದು ಸಿನೆಮಾ ಅನ್ನು ಆನಂದಿಸಲು ಅರ್ಥ ಮಾಡಿಕೊಳ್ಳಲೇಬೇಕೆ?


ಸುಲಭ ಉತ್ತರಗಳಿಲ್ಲ.

ಸಿನೆಮಾಗಳು ಮತ್ತು ಆ ಸಿನೆಮಾಗಳನ್ನು ಆಸ್ವಾದಿಸುವುದು ವೈಯಕ್ತಿಕ ಅಭಿರುಚಿಗಳೊಂದಿಗೆ ಆಯಾ ಪ್ರದೇಶದ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಕೂಡ ಅವಲಂಬಿಸಿರುತ್ತದೆ. ಹಲವಾರು ಸಿನೆಮಾಗಳು ಸರ್ವಕಾಲದಲ್ಲೂ ಪ್ರಸ್ತುತವಾಗಿದ್ದರೆ ಕೆಲವು ಸಿನೆಮಾಗಳನ್ನು ಕೇವಲ ಒಂದು ದಶಕದ ನಂತರ ನೋಡಲಾಗುವುದಿಲ್ಲ. ಹೌದು ಸಿನೆಮಾಗೂ ಮತ್ತು ಕಲೆಯ ಇತರ ಪ್ರಕಾರಗಳಿಗೂ ಖಂಡಿತವಾಗಿಯೂ ವ್ಯತ್ಯಾಸಗಳಿವೆ. ಒಂದು ಮಾಡರ್ನ್ ಪೇಂಟಿಂಗ್‍ಗೂ ಒಂದು ‘ಕಲಾತ್ಮಕ’(ನಾನು ತುಂಬಾ ದ್ವೇಷಿಸುವ ಪದ) ಚಿತ್ರಕ್ಕೂ ಸಾಮ್ಯತೆಗಳಿವೆಯೆ? ಅವೆರಡನ್ನೂ ಹೋಲಿಸಬಹದಾ? ಅನೇಕರು ಮಾಡರ್ನ್ ಪೇಂಟಿಂಗ್ ಎಂದಕೂಡಲೇ ಮೂಗು ಮುರಿಯುತ್ತಾರೆ; ಸುಮ್ಮನೇ ಏನೋ ಗೀರಿದ್ದು ಎಂದುಕೊಳ್ಳುತ್ತಾರೆ (ಅನೇಕ ಕವಿತೆಗಳಿಗೂ ಇದೇ ತೆರನಾದ ಅಭಿಪ್ರಾಯ ಬಂದಿದ್ದನ್ನು ಕೇಳಿದ್ದೇವೆ.) ಆ ಪೇಂಟಿಂಗ್‍ಅನ್ನು ಅರ್ಥಮಾಡಿಕೊಳ್ಳಲೇಬೇಕಾ? ಒಂದು ಅದ್ಭುತ ಪೇಂಟಿಂಗ್ ನಮ್ಮನ್ನು ಅದನ್ನೇ ನೋಡುತ್ತ ಕೆಲಸಮಯ ನಿಲ್ಲಿಸಿದರೆ ಸಾಕಲ್ಲವೇ? ಪೇಂಟಿಂಗ್‍ನ ಯಾವ ಜ್ಞಾನವೂ ಇಲ್ಲದ ಒಬ್ಬನ ಎದುರಿಗೆ ಒಂದು ಅದ್ಭುತವೆಂದು ಪರಿಗಣಿಸಲಾದ ಪೇಂಟಿಂಗ್ ಮತ್ತು ಇನ್ನೊಂದು ಕೆಟ್ಟ ಪೇಂಟಿಂಗ್ ತಂದಿಟ್ಟರೆ ಅವನು ಯಾವ ಪೇಂಟಿಂಗ್ ಅನ್ನು ನೋಡುತ್ತಾನೆ? ಅವನು ಎರಡೂ ಪೇಂಟಿಂಗ್‍ಗಳನ್ನು ಇಷ್ಟಪಡದೇ ಹೋದರೂ ಅವೆರಡರಲ್ಲಿ ಆ ಅದ್ಭುತವಾದ ಕಲೆಯ ಕೆಲಸದ ಎದುರಿಗೆ ಖಂಡಿತವಾಗಿಯೂ ಹೆಚ್ಚು ಸಮಯ ಕಳೆಯುತ್ತಾನೆ. ಅವನು ಏಕೆ ಆ ಅದ್ಭುತ ಕಲಾಕೃತಿಯನ್ನು ಹೆಚ್ಚು ಸಮಯ ನೋಡುತ್ತ ನಿಂತ ಎನ್ನುವುದು ವಿಶ್ಲೇಷಣೆಯನ್ನು ವಿಮರ್ಶಕರೆಂದು ಕರೆದುಕೊಳ್ಳುವವರ ಕೆಲಸ.
ಒಂದು ಕಲಾಕೃತಿ, ಸಂಗೀತ ಅಥವಾ ಉತ್ಕøಷ್ಟ ಅಡುಗೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಆಸ್ವಾದಿಸಬಹುದಾದರೆ, ಅದು ಸಿನೆಮಾಗೆ ಅನ್ವಯವಾಗುವುದೇ?

ಇಲಿಗಳನ್ನು ಕೊಲ್ಲುವವರ ಚಿತ್ರವನ್ನು ನೋಡಿದ ಆ ಗೆಳೆಯನಿಗೆ ಆ ಚಿತ್ರ ಅಷ್ಟೊಂದು ತಟ್ಟಿದ್ದರೂ (ಐದಾರೂ ವರ್ಷಗಳ ನಂತರವೂ ನೆನಪಿಟ್ಟುಕೊಂಡು ಅಷ್ಟೊಂದು ಉತ್ಸಾಹದಿಂದ ಮಾತನಾಡುತ್ತಾನೆ ಎಂದರೆ) ಅವನ ಬೇಸರ ತಣಿದಿದ್ದಿಲ್ಲ. ಆಗ ಅವನನ್ನು ಪೂರ್ವಗ್ರಹಪೀಡಿತನೆಂದು ಕರೆಯಬಹುದಲ್ಲವೇ? ಒಂದು ಚಿತ್ರ ನಮ್ಮನ್ನು ಆಳವಾಗಿ ತಟ್ಟಿದರೆ ಸಾಕಲ್ಲವೇ? ಆದರೆ ಒಂದು ಚಿತ್ರದಲ್ಲಿ ಏನಾಗುತ್ತದೆ ಎನ್ನುವುದು ತಿಳಿಯದೇ ಆ ಚಿತ್ರ ನೋಡುಗನಿಗೆ ತಟ್ಟಬಲ್ಲದೇ? ಹೌದು ಮತ್ತು ಇಲ್ಲ. ಟಾರ್ಕೊವ್‍ಸ್ಕಿ ಅವರ ಸ್ಟಾಕರ್ ಎನ್ನವ ಚಿತ್ರಗಳಿಗೆ ಅರ್ಥವಾಗಲೇಬೇಕು ಎನ್ನುವ ಷರತ್ತುಗಳಿಲ್ಲ. ಆದರೆ ಈ ಹಿಂದೆಯೇ ಹೇಳಿದಂತೆ ಚಲನಚಿತ್ರ ರಚನೆ/ಚಿತ್ರಕಥೆ ಬರಹ ಎನ್ನುವುದು ಒಂದು ಸಂಕೀರ್ಣ ಕಲೆ. ಬರಹಗಾರನು ಅಥವಾ ನಿರ್ದೇಶಕನು ಮಾಡಿದ ತಪ್ಪಿನಿಂದ ನೋಡುಗನಿಗೆ ಚಿತ್ರ ಅಥವಾ ಕತೆಯು ಅರ್ಥವಾಗದಿದ್ದಲ್ಲಿ ಇದು ಅನ್ವಯಿಸುವುದಿಲ್ಲ.

ಇನ್ನು ಕೆಲವು ಸಲ ನಮ್ಮ ನಮ್ಮ ಸಾಮಾಜಿಕ ಕಾರಣಗಳಿಂದಾಗಿಯೋ ಅಥವಾ ವೈಯಕ್ತಿಕ ಕಾರಣಗಳಿಂದಾಗಿಯೋ, ಆಯಾ ಪ್ರದೇಶಗಳಲ್ಲಿ ಅಂತಹ ವಿಷಯಗಳು ಮುನ್ನೆಲೆಗೆ ಬಾರದ ಕಾರಣಗಳಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಒಂದು ಒಳ್ಳೆಯ ಚಿತ್ರವೂ ಇಷ್ಟವಾಗದೇ ಹೋಗಬಹುದು.

ಇವೆಲ್ಲವುಗಳೂ ಇನ್ನೊಂದು ಮೂಲಭೂತ ಪ್ರಶ್ನೆಗೆ ಎಡೆಮಾಡಿಕೊಡುತ್ತವೆ. ಅಂತಿಮವಾಗಿ ಕಲೆಯ ಉದ್ದೇಶವಾದರೂ ಏನು? ಮನರಂಜನೆ ಎಂದರೇನು? ಮೇಲೆ ಹೆಸರಿಸಿದ ಸೈಕಾಲಾಜಿಕಲ್ ಹಾರರ್ ಚಿತ್ರವಾದ ಶೈನಿಂಗ್ ಮತ್ತು ರೋಸ್‍ಮೆರಿ’ಸ್ ಬೇಬಿ ಚಿತ್ರಗಳು ನಮಗೆ ಮನರಂಜನೆ ನೀಡುತ್ತವೆಯೇ? ಆ ಚಿತ್ರಗಳನ್ನು ನೋಡಿದ ನಂತರ ನಮ್ಮ ಮನದಲ್ಲಿ ಉಳಿಯುವ ಭಾವನೆಗಳಾದರೂ ಯಾವುವು? ಒಂದು ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ನಮ್ಮನ್ನು ಹಿಡಿದಿಟ್ಟುಕೊಂಡರೆ ಆ ಚಿತ್ರ ನಮಗೆ ಮನರಂಜನೆ ನೀಡಿದಂತೆಯೇ? ಕೆಲವು ಸಲ ಕೆಟ್ಟ ಚಿತ್ರಗಳೂ ನಮ್ಮನ್ನು ನೋಡಿಸಿಕೊಂಡು ಹೋಗುತ್ತವೆ, ಚಿತ್ರ ನೋಡಿದ ನಂತರ ಇದನ್ಯಾಕೆ ನೋಡಿದೆ ಎನ್ನುವ ಸಿಟ್ಟು ಮಾತ್ರ ಉಳಿದಿರುತ್ತೆ. ಹಾಗಾದರೆ ಏನು ಮನರಂಜನೆಯ ಅರ್ಥ? ಸುಖಾಂತದ ಕಥೆಗಳಷ್ಟೇ ಮನರಂಜನೆ ಎಂದಂತೂ ಯಾರೂ ಹೇಳುವುದಿಲ್ಲ. ದುರಂತ ಕಥೆಗಳನ್ನೂ ಅಷ್ಟೇ ಆಸ್ವಾದಿಸುತ್ತೇವೆ.

ಈ ಪ್ರಶ್ನೆಗಳಿಗೆ ಹಲವಾರು ಉತ್ತರಗಳಿರಬಹುದು; ನನಗೆ ನೆನಪಾಗುವುದು ಲಂಕೇಶ್ ಹೇಳುತ್ತಿದ್ದ ಪದ, ವಾಸನೆ. ಕೆಟ್ಟ ಸಿನೆಮಾಗಳ ವಾಸನೆ ಕೆಟ್ಟದಾಗಿರುತ್ತೆ, ಅವುಗಳ ವಾಸನೆ ಕಂಡುಹಿಡಿಯಲು ನಾವು ಚಿತ್ರ ನೋಡಲೇಬೇಕಂತಿಲ್ಲ, ಅದಕ್ಕೂ ಮುಂಚೆಯೇ ವಾಸನೆ ಹೊಡೆಯುತ್ತವೆ. ಒಳ್ಳೇ ಚಿತ್ರಗಳು ಅರ್ಥವಾಗದಿದ್ದರೂ ವಾಸನೆ ಚೆನ್ನಾಗಿತ್ತು ಎಂದರೆ ಸಂತೋಷಪಡುವ. ಸದ್ಯಕ್ಕೆ ವಾಸನೆಯೊಂದಿಗೆ ಮುಗಿಸುತ್ತೇನೆ; ಮುಂದೆ ನೋಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಭವನ’ಗಳನ್ನು ‘ಲೋಕಭವನ’ಗಳೆಂದು ಮರುನಾಮಕರಣ; ಇದು ಒಕ್ಕೂಟ ವ್ಯವಸ್ಥೆ ಮತ್ತು ಭಾಷಾ ಸಮಾನತೆಯ ಮೇಲಿನ ಆಕ್ರಮಣ: ಜಾಗೃತ ಕರ್ನಾಟಕ

ದೇಶಾದಾದ್ಯಂತ ಇರುವ ರಾಜಭವನಗಳ ಹೆಸರನ್ನು ಲೋಕಭವನ ಎಂದು ಮರುನಾಮಕರಣ ಮಾಡುವುದಾಗಿ ಕೇಂದ್ರ ಗೃಹಸಚಿವಾಲಯ ತೀರ್ಮಾನಿಸಿದೆ. ಕೇಂದ್ರದ  ಈ ನೀತಿಯನ್ನು ವಿರೋಧಿಸಿರುವ ಜಾಗೃತ ಕರ್ನಾಟಕ ದೇಶದ ಎಲ್ಲಾ ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ....

ಯುಜಿಸಿ ಈಕ್ವಿಟಿ ನಿಯಮಗಳ ಮೇಲಿನ ಸುಪ್ರೀಂ ಕೋರ್ಟ್ ತಡೆಗೆ ವಿದ್ಯಾರ್ಥಿಗಳ ಪ್ರತಿಭಟನೆ, ರೋಹಿತ್ ಕಾಯ್ದೆಗೆ ಒತ್ತಾಯ

ಯುಜಿಸಿ ಇಕ್ವಿಟಿ ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆಯ ವಿರುದ್ಧ ಮತ್ತು ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯವನ್ನು ಎದುರಿಸಲು ಶಾಸನಬದ್ಧ ರೋಹಿತ್ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ)...

ನರವಾಣೆ ಅಪ್ರಕಟಿತ ಪುಸ್ತಕ ಗದ್ದಲ | ಸತ್ಯ ಹೊರಬಂದರೆ ಮೋದಿ, ರಾಜನಾಥ್ ಸಿಂಗ್ ಮುಖವಾಡ ಬಯಲಾಗಲಿದೆ : ರಾಹುಲ್ ಗಾಂಧಿ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕುರಿತು ರಾಹುಲ್ ಗಾಂಧಿ ಸೋಮವಾರ (ಫೆ.2) ಲೋಕಸಭೆಯಲ್ಲಿ ಉಲ್ಲೇಖಿಸಿದ್ದು, ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ...

ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ಘರ್ಷಣೆ : ಮೂವರ ಬಂಧನ

ಗುಜರಾತ್‌ನ ಪಠಾಣ್ ತಾಲೂಕಿನ ಚದ್ರುಮಣ ಗ್ರಾಮದಲ್ಲಿ ದಲಿತ ಕುಟುಂಬದ ಮದುವೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಐವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ದ ಎಸ್‌ಸಿ/ಎಸ್‌ಟಿ...

ಲೋಕಸಭೆಯಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ರಾಹುಲ್ ಗಾಂಧಿ: ಸಭೆಯಲ್ಲಿ ತೀವ್ರ ಗದ್ದಲ

ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರ ಆತ್ಮಚರಿತ್ರೆಯಿಂದ ಉಲ್ಲೇಖಿಸಲು ಪ್ರಯತ್ನಿಸಿದ ನಂತರ ಗದ್ದಲ ಭುಗಿಲೆದ್ದಿತು. ರಾಹುಲ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ರಕ್ಷಣಾ ಸಚಿವ...

ಪಂಜಾಬ್ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಬಜೆಟ್ ಮತ್ತೊಮ್ಮೆ ವಿಫಲವಾಗಿದೆ: ಸಿಎಂ ಭಗವಂತ್ ಮಾನ್

ಕೇಂದ್ರ ಬಜೆಟ್ ಮತ್ತೊಮ್ಮೆ ಪಂಜಾಬ್‌ನ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಚಿವರು ಭಾನುವಾರ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ರೈತರಿಗೆ ಯಾವುದೇ...

ರಾಜ್ಯಪಾಲರು ಪೂರ್ಣ ಭಾಷಣ ಓದಿಲ್ಲ, ‘ಜೈ ಸಂವಿಧಾನ’ ಎನ್ನುವುದನ್ನು ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ ತೆರಳಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಶಾಸಕ...

ಉತ್ತರಾಖಂಡ| ಹಿಂದುತ್ವ ಗುಂಪಿನ ಕಿರುಕುಳದಿಂದ ಮುಸ್ಲಿಂ ಅಂಗಡಿ ಮಾಲೀಕನನ್ನು ರಕ್ಷಿಸಿದ ದೀಪಕ್ ಕುಮಾರ್

ಸ್ಥಳೀಯ ಮುಸ್ಲಿಂ ಅಂಗಡಿ ಮಾಲೀಕನ ವಿರುದ್ಧ ಬಜರಂಗದಳ ಸದಸ್ಯರು ನೀಡುತ್ತಿದ್ದ ಕಿರುಕುಳವನ್ನು ಜಿಮ್ ಮಾಲೀಕ ದೀಪಕ್ ಕುಮಾರ್ ಸ್ಥಳದಲ್ಲೇ ಎದುರಿಸಿದ್ದಾರೆ. ಆಕ್ರೋಶಿತರಾದ ಹಿಂದುತ್ವ ಗುಂಪಿನ ಸದಸ್ಯರು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದು, ಹಲವಾರ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...

ದಕ್ಷಿಣ ಪಿನಾಕಿನಿ ಜಲವಿವಾದ : ನ್ಯಾಯಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ನ್ಯಾಯಮಂಡಳಿ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.2) ನಿರ್ದೇಶನ ನೀಡಿದೆ. ಕೇಂದ್ರ...