Homeಅಂಕಣಗಳುಮತ್ತೆ ಚುನಾವಣೆ ನಡೆಸಿ ಸ್ಥಿರ ಸರ್ಕಾರ ರಚಿಸುವುದೇ ಪರಿಹಾರ

ಮತ್ತೆ ಚುನಾವಣೆ ನಡೆಸಿ ಸ್ಥಿರ ಸರ್ಕಾರ ರಚಿಸುವುದೇ ಪರಿಹಾರ

- Advertisement -
- Advertisement -

ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿ, ಅವರ ರಾಜೀನಾಮೆ ಒಪ್ಪಿಕೊಳ್ಳಬಹುದು. ಇಲ್ಲವೇ ಅವರನ್ನು ಅನರ್ಹಗೊಳಿಸಬಹುದು. ಇದು ಅವರ ವಿವೇಚನೆಗೆ ಬಿಟ್ಟ ವಿಷಯ ಎಂದು ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ.

ಈ ಅತೃಪ್ತ ಶಾಸಕರ ಅರ್ಹತೆಯ ಬಗೆಗೆ ಪರಿಶೀಲಿಸುವ ಮೊದಲು, ಕರ್ನಾಟಕದಲ್ಲಿ ಈ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯನ್ನು ವಿಧಾನಸಭಾಧ್ಯಕ್ಷರು ಗಮನಿಸಬೇಕು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಲಿಲ್ಲ. ಆ ಸಮಯದಲ್ಲಿ ಭಾಜಪದ ಯಡಿಯೂರಪ್ಪನವರು, ತಮ್ಮ ಪಕ್ಷಕ್ಕೆ ಬಹುಮತಕ್ಕಿಂತ 9 ಸ್ಥಾನಗಳು ಕಡಿಮೆ ದೊರೆತಿದ್ದರೂ, ಗೌರ್ನರ್ ಅವರನ್ನು ಸಂಧಿಸಿ ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ವಿನಂತಿಸಿಕೊಂಡರು. ಗೌರ್ನರ್ ಅವರು, ಅವರಿಗೆ ಬಹುಮತವಿದೆಯೇ ಎಂಬುದನ್ನು ವಿಚಾರಿಸದೆ ಯಡಿಯೂರಪ್ಪನವರ ಕೋರಿಕೆಗೆ ಅನುಮತಿ ಇತ್ತರು. ಅವರಿಗೆ ಮುಖ್ಯಮಂತ್ರಿ ಪದವಿಯ ಪ್ರತಿಜ್ಞಾವಿಧಿಗಳನ್ನು ಬೋಧಿಸಿದರು.

ಯಡಿಯೂರಪ್ಪನವರು ಬಹುಮತ ಸಂಪಾದಿಸಿಕೊಳ್ಳಲು ಶಾಸಕ ಶ್ರೀರಾಮುಲು ಅವರ ಸಹಕಾರ ಕೋರಿದರು. ಶ್ರೀರಾಮುಲು ಕಾಂಗ್ರೆಸ್ ಶಾಸಕರಲ್ಲಿ ಕೆಲವರನ್ನು ಹಣಕೊಟ್ಟೋ, ಮಂತ್ರಿ ಪದವಿಯ ಆಮಿಷ ಒಡ್ಡಿಯೋ ಶಾಸಕ ಸ್ಥಾನಕ್ಕೆ ಬೇರೆ ಪಕ್ಷದವರಿಂದ ರಾಜೀನಾಮೆ ಕೊಡಿಸಿ, ಆ ಮೂಲಕ ಯಡಿಯೂರಪ್ಪನವರಿಗೆ ಬಹುಮತ ದೊರೆಯುವಂತೆ ಮಾಡಿ, ಅವರನ್ನು ಖಾಯಂ ಆಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಸ್ಥಾಪಿಸಲು ಭಾರಿ ಪ್ರಯತ್ನ ಮಾಡಿದರು. ಅದು ಆಗ ಫಲಿಸಲಿಲ್ಲ. ತಮಗೆ ಬಹುಮತ ಇಲ್ಲದ ಕಾರಣದಿಂದ ಯಡಿಯೂರಪ್ಪನವರು ಗೌರ್ನರಿಗೆ ರಾಜೀನಾಮೆ ಪತ್ರ ಇತ್ತು, ಮುಖ್ಯಮಂತ್ರಿ ಸ್ಥಾನವನ್ನು ಖಾಲಿ ಮಾಡಿದರು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂದು ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಯಡಿಯೂರಪ್ಪನವರು ಅಧಿಕಾರ ಪಡೆಯುವ ದೃಷ್ಟಿಯಿಂದ ಅಂದಿನಿಂದ ಇಂದಿನವರೆಗೂ ಪ್ರಯತ್ನ ಪಡುತ್ತಲೇ ಇದ್ದಾರೆ. ವಿರೋಧ ಪಕ್ಷದ ಶಾಸಕರನ್ನು ತಮ್ಮ ಬಲೆಗೆ ಬೀಳಿಸಿ, ಅವರಿಂದ ಶಾಸನಸಭೆಗೆ ರಾಜೀನಾಮೆ ನೀಡಿಸಿ ಆ ಮೂಲಕ, ಭಾಜಪಕ್ಕೆ ಬಹುಮತ ದೊರಕಿಸಿಕೊಳ್ಳಲು ಅಹರ್ನಿಶಿ ದುಡಿಯುತ್ತಿದ್ದಾರೆ. ಈ ಸತ್ಯಸಂಗತಿ ರಮೇಶ್ ಕುಮಾರ್ ಅವರಿಗೆ ತಿಳಿಯದ್ದೇನು ಅಲ್ಲ. ಈ ಮಧ್ಯೆ ಕುಮಾರಸ್ವಾಮಿಯವರ ಮಂತ್ರಿಮಂಡಲದಲ್ಲಿ ಕೂಡಿಕೊಳ್ಳಲು ಕೆಲ ಶಾಸಕರು ಹರಸಾಹಸ ಮಾಡಿದರು. ಅವರಿಗೆ ಅದು ದೊರಕಲಿಲ್ಲ. ಅವರನ್ನು ಭಾಜಪದ ಯಡಿಯೂರಪ್ಪನವರು ಮತ್ತು ಇತರ ನಾಯಕರು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂದು ಚುನಾವಣೆ ಮಾಡಹತ್ತಿದರು. ಈ ಅತೃಪ್ತರು ಒಂದುಗೂಡಿದರು. ರೆಸಾರ್ಟ್ ರಾಜಕೀಯ ಮಾಡಲು ಪ್ರಾರಂಭಿಸಿದರು. ಅವರನ್ನು ಸಂತೃಪ್ತಿಗೊಳಿಸಲು ಕಾಂಗ್ರೆಸ್ ಪಕ್ಷ ಎಷ್ಟೇ ಪ್ರಯತ್ನಪಟ್ಟರೂ ಅತೃಪ್ತರು ಅದಕ್ಕೆ ಸೊಪ್ಪು ಹಾಕಲಿಲ್ಲ.

ಬಿಜೆಪಿಗೆ ಇದರಿಂದ ಹುರುಪು ಬಂತು. ಮುಖ್ಯಮಂತ್ರಿ ಗದ್ದುಗೆ ಮತ್ತು ತಮಗಾಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿದು, ಅವರು ಆನಂದಪಟ್ಟರು. ಕಾಂಗ್ರೆಸ್ಸಿನಿಂದ ಈ ಅತೃಪ್ತರನ್ನು ಬೇರ್ಪಡಿಸುವ ಕೆಲಸಕ್ಕೆ ಕೈಹಾಕಿದರು. ಈ ತಿಂಗಳು ಬೊಂಬಾಯಿ ಹೋಟೆಲುಗಳಲ್ಲಿ ವಾಸ್ತವ್ಯ ಹೂಡಿದ ಭಿನ್ನಮತೀಯರ ಜೊತೆಗಿರಲು ಬಿಜೆಪಿ ಶಾಸಕರಾದ ಅಶ್ವತ್ಥನಾರಾಯಣ ಮತ್ತು ಅಶೋಕ್ ಧಾವಿಸಿದರು. ಭಿನ್ನಮತೀಯರ ಮನವೊಲಿಸಿ, ಅವರನ್ನು ರಾಜೀನಾಮೆ ನೀಡುವಂತೆ ಚಿತಾವಣೆ ಮಾಡಲು ಅವರು ಅಲ್ಲಿಗೆ ಹೋಗಿರಬಹುದು.
ಈ ಮಧ್ಯೆ ಒಂದು ಹೊಸ ಬೆಳವಣಿಗೆ ಕರ್ನಾಟಕದಲ್ಲಿ ಆಯಿತು. 2018ರ ಲೋಕಸಭಾ ಚುನಾವಣೆ ಘೋಷಿತವಾಯಿತು. ಚುನಾವಣೆಯಲ್ಲಿ ಭಾಜಪ ಕರ್ನಾಟಕದಲ್ಲಿ ಪ್ರಚಂಡ ಬಹುಮತ ಪಡೆಯಿತು. ಇದರಿಂದ ಭಿನ್ನಮತೀಯ ಸ್ವಾರ್ಥಿಗಳಿಗೆ ನಡುಕಬಂತು. ಕಾಂಗ್ರೆಸ್ಸಿನೊಳಗೆ ಇದ್ದರೆ ನಮಗೆ ಭವಿಷ್ಯವಿಲ್ಲ. ಆದ್ದರಿಂದ ನಾವು ನಮ್ಮ ಹಿತದೃಷ್ಟಿಯಿಂದ ಕಾಂಗ್ರೆಸ್ ತೊರೆದು ಭಾಜಪಗೆ ಸೇರುವುದು ಅನಿವಾರ್ಯ ಎಂದು ತಿಳಿದು, ರಾಜೀನಾಮೆ ಪ್ರಹಸನ ಆರಂಭಿಸಿದರು. ಮೊದಲು ಈ ಸಂಖ್ಯೆ ನಾಲ್ಕಾರು ಇದ್ದದ್ದು ಹನ್ನೆರಡಕ್ಕೇರಿತು.

ಸಂಸ್ಥೆಯ ನಿಷ್ಠೆ ಇಲ್ಲದವರು, ಆಸೆಬುರುಕರು, ಭ್ರಷ್ಟರು, ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರವೃತ್ತಿಯುಳ್ಳವರು, ಸಮಯ ಸಾಧಕರು ತುಂಬಿರುವ ರಾಜಕೀಯ ಪಕ್ಷಗಳ ಭಾಗ್ಯವೇನು? ಈ ಪಕ್ಷಗಳಿಂದ ನೈಜ ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯವಾದೀತೆಂದು ನಿರೀಕ್ಷಿಸಬಹುದೇ?
ಇನ್ನೊಂದು ಹೊಸ ಬೆಳವಣಿಗೆ ಈ ಅತೃಪ್ತರ ಕಡೆಯಿಂದ ಆಗುತ್ತಿದೆ. ಪಕ್ಷಾಂತರ ಕಾಯಿದೆ ಮೂಲಕ ಈ ಸ್ವಾರ್ಥಿ ಅತೃಪ್ತರನ್ನು ಹತೋಟಿಗೆ ತರುವ ಕೆಲಸವನ್ನು ಅಂದಿನ ಸರ್ಕಾರಗಳು ಮಾಡಿದವು. ಆದರೆ ಈ ಸಮಯ ಸಾಧಕರು, ಪಕ್ಷಾಂತರ ಕಾಯ್ದೆ ತಮಗೆ ಮುಳುವಾಗುವುದೆಂದು ತಿಳಿದು, ಶಾಸನಸಭೆಗೆ, ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವ ಹೂಟ ಹೂಡಿದ್ದಾರೆ. ಇವರೆಲ್ಲ ‘ನಾವು ಸನ್ಯಾಸಿಗಳಲ್ಲ, ನಮಗೂ ಅಧಿಕಾರ ಬೇಕು’ ಎಂದು ಹೇಳುತ್ತಾ ಬಂದಿದ್ದಾರೆ. ಇಂತಹವರು ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕಾರ ದಾಹದಿಂದ ಮತ್ತೊಂದು ಲಾಭದಾಯಕ ಸಂಸ್ಥೆಗೆ ಸೇರುವವರಿದ್ದಾರೆ. ಇವರನ್ನು ಅನರ್ಹಗೊಳಿಸಬೇಕು. ಇಂದು ಆಮಿಷ, ಒತ್ತಡಗಳಿಗೆ ಮಣಿದು ಸ್ವಹಿತಸಾಧನೆಗಾಗಿ ಪಕ್ಷ ಬದಲಾಯಿಸಲು ಹೊರಟಿರುವ ಇವರು ಮತ ಹಾಕಿ ಗೆಲ್ಲಿಸಿದ ಮತದಾರರಿಗೆಲ್ಲ ದ್ರೋಹ ಬಗೆದಿದ್ದಾರೆಂದು ಧಾರಾಳವಾಗಿ ಹೇಳಬಹುದು. ಈ ಸ್ವಾರ್ಥಿ ಅತೃಪ್ತರು ಪಕ್ಷಾಂತರ ಕಾಯಿದೆಯ ಬುಡಕ್ಕೆ ಕೊಡಲಿಪೆಟ್ಟು ಕೊಟ್ಟು ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ.

ಮುಂದೇನು?
ವಿಧಾನಸಭೆ ಅಧಿವೇಶನ ಗುರುವಾರದಿಂದ ಆರಂಭವಾಯಿತು. ಸರ್ವೋಚ್ಚ ನ್ಯಾಯಾಲಯ ಸಭಾಧ್ಯಕ್ಷ ರಮೇಶ್ ಕುಮಾರ್‍ಗೆ ಯಾವ ಅಡಚಣೆಯೂ ಇಲ್ಲದೆ ಅಧಿವೇಶನ ನಡೆಸಲು ಸೂಚನೆ ನೀಡಿತು. ಈ ಮಧ್ಯೆ ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗ ರಾಜ್ಯಪಾಲರು ವಿಶ್ವಾಸಮತವನ್ನು ಒಂದು ಕಾಲಮಿತಿಯೊಳಗೆ ಪಡೆಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದರು. ಕುಮಾರಸ್ವಾಮಿಯವರು ಈ ಒಂದು ವರ್ಷದಲ್ಲಿ ಆಗಿರುವ ರಾಜಕೀಯ ಬೆಳವಣಿಗೆ ಬಗೆಗೆ ಪ್ರಸ್ತಾಪ ಮಾಡಿದರು. ಸಿದ್ದರಾಮಯ್ಯನವರು ಅತೃಪ್ತ ಶಾಸಕರಿಗೆ ವಿಪ್ ಕೊಟ್ಟಿದ್ದು, ಅವರು ಅಧಿವೇಶನಕ್ಕೆ ಬರದೇ ಇರುವುದರಿಂದ ಸಭಾಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕೆಂದು ನಿಲುವಳಿ ಸೂಚನೆ ನೀಡಿದರು. ಇದರ ಬಗೆಗೆ ಸಭಾಧ್ಯಕ್ಷರು ರೂಲಿಂಗ್ ಕೊಡುವುದು ಬಾಕಿ ಇದೆ ಸೋಮವಾರಕ್ಕೆ ಮುಂದೂಡಲಾಗಿದ್ದು ಅಂದು ಸ್ಪೀಕರ್ ನಿರ್ಣಯ ಹೇಳುತ್ತಾರೆ.

ಆ ನಂತರ ಕುಮಾರಸ್ವಾಮಿಯವರು ಮಂಡಿಸಿರುವ ವಿಶ್ವಾಸಮತ ನಿರ್ಣಯವನ್ನು ಸಭೆಯ ಮುಂದಿಟ್ಟು ಫಲಿತಾಂಶವನ್ನು ಪ್ರಕಟಿಸಬಹುದು.
ವಿಶ್ವಾಸ ನಿರ್ಣಯಕ್ಕೆ ಸೋಲಾಗಲಿ, ಗೆಲುವಾಗಲೀ ಭಾಜಪ ಮತ್ತು ಮೈತ್ರಿ ಕೂಟದ ಶಾಸಕರು ಇನ್ನೂ ನಾಲ್ಕು ವರ್ಷ ನಾಯಿ, ಬೆಕ್ಕುಗಳಂತೆ ಜಗಳವಾಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಪ್ರಜೆ ಈಗ ಮಳೆಯ ಅಭಾವ, ಡೆಂಗ್ಯು ಮೊದಲಾದ ರೋಗಗಳ ಕಾಟ, ಕುಡಿಯುವ ನೀರಿನ ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ. ಇವರ ಕಚ್ಚಾಟದಲ್ಲಿ ಜನಸಾಮಾನ್ಯರ ಸಮಸ್ಯೆಗಳು ನೆನೆಗುದಿಗೆ ಬೀಳುತ್ತವೆ.
ಈಗಿನ ಪರಿಸ್ಥಿತಿಯನ್ನು ನೋಡಿದರೆ ಕೂಡಲೇ ಚುನಾವಣೆಯನ್ನು ನಡೆಸಿ ಸ್ಥಿರವಾದ ಸರ್ಕಾರವನ್ನು ರಚಿಸುವುದು ಹೆಚ್ಚು ಸಮಂಜಸವೆಂದು ನನಗಾದರೂ ಅನಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...