Homeಮುಖಪುಟದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ.

- Advertisement -
- Advertisement -

“ಸೌಗಂಧ್ ಮುಝೆ ಇಸ್ ಮಿಟ್ಟೀಕೀ, ಮೈ ದೇಶ್ ನಹೀ ಬಿಕನೆ ದೂಂಗಾ” (ನನಗೆ ಈ ಮಣ್ಣಿನ ಆಣೆ, ನಾನು ದೇಶವನ್ನು ಮಾರಲು ಬಿಡುವುದಿಲ್ಲ) ಎಂಬ ಭಾಷಣ ಕೇಳಿ ಚಪ್ಪಾಳೆ ಹೊಡೆದು ನಿಮ್ಮ ಅಮೂಲ್ಯವಾದ ಮತವನ್ನು ಓರ್ವ ಮೋಡಿಗಾರನಿಗೆ ಹಾಕಿ ನಿಶ್ಚಿಂತೆಯಿಂದ ಮನೆಯಲ್ಲಿ ಮಲಗಿದ್ದಿರಿ ಅಲ್ಲವೇ? ಈಗ ನೋಡಿ ನಮ್ಮ ದೇಶ ಹೇಗೆ ಹೇಗೆ ಮಾರಾಟವಾಗುತ್ತಿದೆ ಎಂದು.

ನಿಮ್ಮ ಮತದ ಆಧಾರದಿಂದ ಗಳಿಸಿದ ಸಂಸತ್ತಿನ ಬಹುಮತದ ಮೇರೆಗೆ ಸರಕಾರ ಯಾವ ಯಾವ ಕಾಯ್ದೆಗಳನ್ನು ತರುತ್ತಿದೆ, ತಂದಿದೆ, ಹಳೆಯ ಕಾಯಿದೆಗಳಿಗೆ ತಿದ್ದುಪಡಿ ಮಾಡಿದೆ, ನಿಯಮಾವಳಿ ರೂಪಿಸಿದೆ ಅಥವಾ ಬದಲಾಯಿಸಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದರಲ್ಲಿ ದೇಶದ ಜನತೆಗೆ ಯಾವ ರೀತಿ ಮೋಸವಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಕೋಸ್ಟಲ್ ರೆಗ್ಯುಲೇಷನ್ ಜ಼ೊನ್ (ಸಿ ಅರ್ ಝೆಡ್) ನೋಟಿಫಿಕೇಷನ್ 2019ರಲ್ಲಿ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಮಾಡುವುದರಿಂದ ಪರಿಸರ ಸಂರಕ್ಷಣೆ, ಅಭಿವೃದ್ಧಿ, ಉದ್ಯೋಗವಕಾಶ ಮತ್ತು ಜನರ ಜೀವನ ಗುಣಮಟ್ಟ ಹೆಚ್ಚಳ ಆಗುತ್ತದೆ ಎಂದು ಬಾಯಿಯಲ್ಲಿ ಹೇಳುತ್ತಾ ಕೇರಳ ರಾಜ್ಯದ ಕೊಚ್ಚಿ ನಗರದ ಮಾರಾಡುವಿನ ಕರಾವಳಿ ತೀರದ ನಾಲ್ಕು ದೊಡ್ಡ ಬಿಲ್ಡಿಂಗುಗಳನ್ನು ಜನವರಿ 2020ರಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ, ನಗರಪಾಲಿಕೆ ಕೆಡವಿದ ದೃಶ್ಯ ನಿಮಗೆ ನೆನಪಿರಬಹುದು. ಇದನ್ನು ನೀವು ಸ್ವಾಗತಿಸಿರಲೂಬಹುದು.

ಇದೇ ಕಾಯಿದೆಯಡಿ ಗೋವಾ ರಾಜ್ಯದ ಸಂಪೂರ್ಣ 53 ಕಿ.ಮೀ. ಉದ್ದದ ಕರಾವಳಿಯನ್ನು ಮೊರ್ಮುಗಾವ್ ಪೋರ್ಟ್ ಟ್ರಸ್ಟಿ (ಎಂಪಿಟಿ) ಗೆ ಹಸ್ತಾಂತರಿಸಿದೆ ಎಂಬ ಸುದ್ದಿ ಇದೆ ಆದರೆ ಎಂಪಿಟಿ ತನಗೆ ಕೇಂದ್ರ ಸರಕಾರದ ಈ ಸುತ್ತೋಲೆ ಸಿಕ್ಕೇ ಇಲ್ಲ ಎಂದು ಹೇಳಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಬುಲ್ಡೋಜರ್ ಮೂಲಕ ಪಾರಿತಗೊಂಡ ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021ರ ಸೆಕ್ಷನ್ 21, 22(2) ಮತ್ತು 22(3)ರ ಪ್ರಕಾರ ಯಾವುದೇ ಬಂದರಿನ ಆಡಳಿತ ಮಂಡಳಿ (ಬೋರ್ಡ್) ಅದಕ್ಕೆ ಸೇರಿದ ಎಲ್ಲಾ ಆಸ್ತಿಗಳ ಅಭಿವೃದ್ಧಿಯನ್ನು ತನ್ನ ಮನಸೋ ಇಚ್ಛೆ ಮಾಡಬಹುದು. ಇದಕ್ಕೆ ಯಾವುದೇ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ಪರವಾನಗಿ ಬೇಕಿಲ್ಲ ಅಥವಾ ಸ್ಥಳೀಯ ಕಾನೂನು ಅಡ್ಡ ಬರುವುದಿಲ್ಲ ಎಂದು ಹೇಳುತ್ತದೆ.

ಹಲವು ರಾಜ್ಯಗಳಲ್ಲಿರುವ ಬಂದರಿನ ಸಮಗ್ರ ಆಸ್ತಿಯನ್ನು, ರಾಜ್ಯ ಸರಕಾರದ ಸಮ್ಮತಿಯಿಲ್ಲದೇ, ಕೇಂದ್ರ ಸರಕಾರ ಈ ದೊಡ್ಡ ಬಂದರುಗಳ ಪೋರ್ಟ್ ಟ್ರಸ್ಟಿನ ಸುಪರ್ದಿಗೆ ಈಗಾಗಲೇ ವರ್ಗಾಯಿಸಿದೆ. ಇದರಲ್ಲಿ ನಮ್ಮ ಕರ್ನಾಟಕದ ಹೊಸ ಮಂಗಳೂರು ಬಂದರೂ ಸಹ ಸೇರಿದೆ. ಅಂದರೆ ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಕರಾವಳಿಯ “ಬೀಚ್” ಇನ್ನು ಮುಂದೆ “ಕ್ಲೋಸ್”. ಕರಾವಳಿಯ ಮೀನುಗಾರರ ಜೀವನ ನೀರುಪಾಲು.

ಇದೇ ರೀತಿ ಇನ್ನೆರಡು ಕಾಯಿದೆ ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ 2020 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ಒಟ್ಟಾರೆ ಸೇರಿಸಿ ನೋಡಿದಾಗ ಕರ್ನಾಟಕದ ಹಲವಾರು ನದಿಗಳನ್ನು ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಲಾಗಿದೆ. ಇದರಲ್ಲಿ ನಮ್ಮ ಭೀಮಾ, ಘಟಪ್ರಭಾ, ಕಬಿನಿ, ಕಾಳೀನದಿ, ಕೃಷ್ಣಾ, ಮಲಪ್ರಭಾ, ನೇತ್ರಾವತಿ, ಶರಾವತಿ, ತುಂಗಭದ್ರಾ, ಉದಯಾವರ ಮುಂತಾದ ನದಿಗಳು ಸೇರಿವೆ. ನಮ್ಮ ನದಿಗಳು ರಾಷ್ಟ್ರೀಯ ಜಲಮಾರ್ಗ ಆದರೆ ತಪ್ಪೇನು, ರಾಷ್ಟ್ರೀಯ ಹೆದ್ದಾರಿಗಳು ನಮ್ಮ ರಾಜ್ಯದಲ್ಲಿ ಇಲ್ಲವೇ ಎಂದು ನೀವು ಅನ್ನಬಹುದು. ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ನಿಯಮದ ಪ್ರಕಾರ ಈ ರಾಷ್ಟ್ರೀಯ ನದಿಗಳು ರಾಜ್ಯದ ಸ್ವತ್ತು ಆಗುವುದಿಲ್ಲ. ಇವು ಕೇಂದ್ರ ಸರಕಾರದ ಸಂಸ್ಠೆಯಾದ “ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾ”ದ ಸ್ವತ್ತು ಆಗುತ್ತದೆ. ಇದೇ ಕಾಯಿದೆಯ ಸೆಕ್ಷನ್ 2ರ ಪ್ರಕಾರ “ಅಪರ್ಟುನೆಂಟ್ ಲ್ಯಾಂಡ್” ಅಂದರೆ ನದಿಯ ಎರಡೂ ಬದಿಯಲ್ಲಿ ಹೊಂದಿಕೊಂಡಿರುವಂತಹ ಜಮೀನು, ಅದನ್ನು ಮಾರ್ಕ್ ಮಾಡಿರಲಿ ಅಥವಾ ಬಿಟ್ಟಿರಲಿ, ಅದೂ ಸಹ ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾದ ಸ್ವತ್ತು ಆಗುತ್ತದೆ. ಈ ನೆಲವನ್ನೂ ಸಹ ಅಥಾರಿಟಿಯವರು ತಮ್ಮ ಮನಸೋ ಇಚ್ಛೆ ಅಭಿವೃದ್ಧಿ ಮಾಡಬಹುದು ಮತ್ತು ಇದರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ನದಿ ತೀರದ ಜನರ ಪಾಡು ನೀರು ಪಾಲು.

ಗೋವಾ ರಾಜ್ಯದ ಜಿ ಆರ್ ಇ ಎಂಬ ಸಂಸ್ಥೆ ಮತ್ತು ರಾಷ್ಟ್ರೀಯ ಮೀನುಗಾಗರ ಸಂಘ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಿ ಅರ್ ಝೆಡ್ ನೋಟಿಫಿಕೇಷನ್ 2019, ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ಸೆಕ್ಷನ್ 26ರ ಅನ್ವಯ “ಸಾರ್ವಜನಿಕ ಅವಶ್ಯಕತೆಗೆ” ಬೇಕಾದಷ್ಟು ನದಿ ತೀರದ ಜಮೀನನ್ನು ಅಥಾರಿಟಿ ಅಧಿಗ್ರಹಿಸಬಹುದು ಮತ್ತು ಅವರಿಂದ ಸಾಧ್ಯವಾಗದೇ ಇದ್ದಲ್ಲಿ ರಾಜ್ಯ ಸರಕಾರ ಅದನ್ನು ಅಧಿಗ್ರಹಿಸಿ ಅಥಾರಿಟಿಗೆ ಹಸ್ತಾಂತರಿಸಬೇಕು. ಆದರೆ ಈ ಜಮೀನಿನ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಒಂದು ರಾಜ್ಯದೊಳಗೆ ಕೇಂದ್ರ ತನ್ನದೇ ಆದ ರಾಜ್ಯವನ್ನು ಸ್ಥಾಪಿಸಿ ವಿಸ್ತರಿಸುತ್ತಿದೆ. ಹಂತಹಂತವಾಗಿ ರಾಜ್ಯದ ಆಸ್ತಿ ಮತ್ತು ಅಧಿಕಾರವನ್ನು ಕೇಂದ್ರ ಕಬಳಿಸುತ್ತಾ ಬಂದಿದೆ. ಸಂವಿಧಾನದ ಆರ್ಟಿಕಲ್ 1 ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ರಾಜ್ಯಗಳು ಕೇಂದ್ರ ಶಾಸಿತ ಪ್ರದೇಶಗಳಾಗುತ್ತಿವೆ.

ಅಷ್ಟೇ ಅಲ್ಲ, ಈ ಪೋರ್ಟ್ ಮತ್ತು ಏರ್ಪೋರ್ಟ್‌‌ಗಳನ್ನು ಕೇಂದ್ರ ಸರಕಾರ ಯಾವ ಆಪ್ತಮಿತ್ರರಿಗೆ ಮಾರಾಟ ಮಾಡುತ್ತಿದೆ, ಸರಕಾರದ ಎಲ್ಲಾ ಆಸ್ತಿಗಳನ್ನು ಕೊಂಡುಕೊಳ್ಳುವಷ್ಟು ಹಣ ಯಾರ ಹತ್ತಿರ ಇದೆ ಎಂಬುದನ್ನು ನಾನು ಬಿಡಿಸಿ ಹೇಳಬೇಕಿಲ್ಲ.

ಜಣ ಜಣ ಜಣ ಕಾಂಚಾಣದಲ್ಲಿ

ಅಂಬದಾನಿ ಲಾಂಛನದಲ್ಲಿ

ದೇವರು ದಿಂಡಿರ ಭಜನೆಯಲ್ಲಿ

ಮಂದಿರ ಮಸೀದಿ ಗದ್ದಲದಲ್ಲಿ

ಎಲ್ಲ ಮಾಯ ನಾಳೆ ನಾವು ಮಾಯ

ಎಲ್ಲಾ ಮಾಯ ನಾಳೆ ನೀವು ಮಾಯ….

  •   ಜಿ.ಆರ್.ವಿದ್ಯಾರಣ್ಯ

ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...