Homeಮುಖಪುಟದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ.

- Advertisement -
- Advertisement -

“ಸೌಗಂಧ್ ಮುಝೆ ಇಸ್ ಮಿಟ್ಟೀಕೀ, ಮೈ ದೇಶ್ ನಹೀ ಬಿಕನೆ ದೂಂಗಾ” (ನನಗೆ ಈ ಮಣ್ಣಿನ ಆಣೆ, ನಾನು ದೇಶವನ್ನು ಮಾರಲು ಬಿಡುವುದಿಲ್ಲ) ಎಂಬ ಭಾಷಣ ಕೇಳಿ ಚಪ್ಪಾಳೆ ಹೊಡೆದು ನಿಮ್ಮ ಅಮೂಲ್ಯವಾದ ಮತವನ್ನು ಓರ್ವ ಮೋಡಿಗಾರನಿಗೆ ಹಾಕಿ ನಿಶ್ಚಿಂತೆಯಿಂದ ಮನೆಯಲ್ಲಿ ಮಲಗಿದ್ದಿರಿ ಅಲ್ಲವೇ? ಈಗ ನೋಡಿ ನಮ್ಮ ದೇಶ ಹೇಗೆ ಹೇಗೆ ಮಾರಾಟವಾಗುತ್ತಿದೆ ಎಂದು.

ನಿಮ್ಮ ಮತದ ಆಧಾರದಿಂದ ಗಳಿಸಿದ ಸಂಸತ್ತಿನ ಬಹುಮತದ ಮೇರೆಗೆ ಸರಕಾರ ಯಾವ ಯಾವ ಕಾಯ್ದೆಗಳನ್ನು ತರುತ್ತಿದೆ, ತಂದಿದೆ, ಹಳೆಯ ಕಾಯಿದೆಗಳಿಗೆ ತಿದ್ದುಪಡಿ ಮಾಡಿದೆ, ನಿಯಮಾವಳಿ ರೂಪಿಸಿದೆ ಅಥವಾ ಬದಲಾಯಿಸಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದರಲ್ಲಿ ದೇಶದ ಜನತೆಗೆ ಯಾವ ರೀತಿ ಮೋಸವಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಕೋಸ್ಟಲ್ ರೆಗ್ಯುಲೇಷನ್ ಜ಼ೊನ್ (ಸಿ ಅರ್ ಝೆಡ್) ನೋಟಿಫಿಕೇಷನ್ 2019ರಲ್ಲಿ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಮಾಡುವುದರಿಂದ ಪರಿಸರ ಸಂರಕ್ಷಣೆ, ಅಭಿವೃದ್ಧಿ, ಉದ್ಯೋಗವಕಾಶ ಮತ್ತು ಜನರ ಜೀವನ ಗುಣಮಟ್ಟ ಹೆಚ್ಚಳ ಆಗುತ್ತದೆ ಎಂದು ಬಾಯಿಯಲ್ಲಿ ಹೇಳುತ್ತಾ ಕೇರಳ ರಾಜ್ಯದ ಕೊಚ್ಚಿ ನಗರದ ಮಾರಾಡುವಿನ ಕರಾವಳಿ ತೀರದ ನಾಲ್ಕು ದೊಡ್ಡ ಬಿಲ್ಡಿಂಗುಗಳನ್ನು ಜನವರಿ 2020ರಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ, ನಗರಪಾಲಿಕೆ ಕೆಡವಿದ ದೃಶ್ಯ ನಿಮಗೆ ನೆನಪಿರಬಹುದು. ಇದನ್ನು ನೀವು ಸ್ವಾಗತಿಸಿರಲೂಬಹುದು.

ಇದೇ ಕಾಯಿದೆಯಡಿ ಗೋವಾ ರಾಜ್ಯದ ಸಂಪೂರ್ಣ 53 ಕಿ.ಮೀ. ಉದ್ದದ ಕರಾವಳಿಯನ್ನು ಮೊರ್ಮುಗಾವ್ ಪೋರ್ಟ್ ಟ್ರಸ್ಟಿ (ಎಂಪಿಟಿ) ಗೆ ಹಸ್ತಾಂತರಿಸಿದೆ ಎಂಬ ಸುದ್ದಿ ಇದೆ ಆದರೆ ಎಂಪಿಟಿ ತನಗೆ ಕೇಂದ್ರ ಸರಕಾರದ ಈ ಸುತ್ತೋಲೆ ಸಿಕ್ಕೇ ಇಲ್ಲ ಎಂದು ಹೇಳಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಬುಲ್ಡೋಜರ್ ಮೂಲಕ ಪಾರಿತಗೊಂಡ ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021ರ ಸೆಕ್ಷನ್ 21, 22(2) ಮತ್ತು 22(3)ರ ಪ್ರಕಾರ ಯಾವುದೇ ಬಂದರಿನ ಆಡಳಿತ ಮಂಡಳಿ (ಬೋರ್ಡ್) ಅದಕ್ಕೆ ಸೇರಿದ ಎಲ್ಲಾ ಆಸ್ತಿಗಳ ಅಭಿವೃದ್ಧಿಯನ್ನು ತನ್ನ ಮನಸೋ ಇಚ್ಛೆ ಮಾಡಬಹುದು. ಇದಕ್ಕೆ ಯಾವುದೇ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ಪರವಾನಗಿ ಬೇಕಿಲ್ಲ ಅಥವಾ ಸ್ಥಳೀಯ ಕಾನೂನು ಅಡ್ಡ ಬರುವುದಿಲ್ಲ ಎಂದು ಹೇಳುತ್ತದೆ.

ಹಲವು ರಾಜ್ಯಗಳಲ್ಲಿರುವ ಬಂದರಿನ ಸಮಗ್ರ ಆಸ್ತಿಯನ್ನು, ರಾಜ್ಯ ಸರಕಾರದ ಸಮ್ಮತಿಯಿಲ್ಲದೇ, ಕೇಂದ್ರ ಸರಕಾರ ಈ ದೊಡ್ಡ ಬಂದರುಗಳ ಪೋರ್ಟ್ ಟ್ರಸ್ಟಿನ ಸುಪರ್ದಿಗೆ ಈಗಾಗಲೇ ವರ್ಗಾಯಿಸಿದೆ. ಇದರಲ್ಲಿ ನಮ್ಮ ಕರ್ನಾಟಕದ ಹೊಸ ಮಂಗಳೂರು ಬಂದರೂ ಸಹ ಸೇರಿದೆ. ಅಂದರೆ ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಕರಾವಳಿಯ “ಬೀಚ್” ಇನ್ನು ಮುಂದೆ “ಕ್ಲೋಸ್”. ಕರಾವಳಿಯ ಮೀನುಗಾರರ ಜೀವನ ನೀರುಪಾಲು.

ಇದೇ ರೀತಿ ಇನ್ನೆರಡು ಕಾಯಿದೆ ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ 2020 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ಒಟ್ಟಾರೆ ಸೇರಿಸಿ ನೋಡಿದಾಗ ಕರ್ನಾಟಕದ ಹಲವಾರು ನದಿಗಳನ್ನು ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಲಾಗಿದೆ. ಇದರಲ್ಲಿ ನಮ್ಮ ಭೀಮಾ, ಘಟಪ್ರಭಾ, ಕಬಿನಿ, ಕಾಳೀನದಿ, ಕೃಷ್ಣಾ, ಮಲಪ್ರಭಾ, ನೇತ್ರಾವತಿ, ಶರಾವತಿ, ತುಂಗಭದ್ರಾ, ಉದಯಾವರ ಮುಂತಾದ ನದಿಗಳು ಸೇರಿವೆ. ನಮ್ಮ ನದಿಗಳು ರಾಷ್ಟ್ರೀಯ ಜಲಮಾರ್ಗ ಆದರೆ ತಪ್ಪೇನು, ರಾಷ್ಟ್ರೀಯ ಹೆದ್ದಾರಿಗಳು ನಮ್ಮ ರಾಜ್ಯದಲ್ಲಿ ಇಲ್ಲವೇ ಎಂದು ನೀವು ಅನ್ನಬಹುದು. ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ನಿಯಮದ ಪ್ರಕಾರ ಈ ರಾಷ್ಟ್ರೀಯ ನದಿಗಳು ರಾಜ್ಯದ ಸ್ವತ್ತು ಆಗುವುದಿಲ್ಲ. ಇವು ಕೇಂದ್ರ ಸರಕಾರದ ಸಂಸ್ಠೆಯಾದ “ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾ”ದ ಸ್ವತ್ತು ಆಗುತ್ತದೆ. ಇದೇ ಕಾಯಿದೆಯ ಸೆಕ್ಷನ್ 2ರ ಪ್ರಕಾರ “ಅಪರ್ಟುನೆಂಟ್ ಲ್ಯಾಂಡ್” ಅಂದರೆ ನದಿಯ ಎರಡೂ ಬದಿಯಲ್ಲಿ ಹೊಂದಿಕೊಂಡಿರುವಂತಹ ಜಮೀನು, ಅದನ್ನು ಮಾರ್ಕ್ ಮಾಡಿರಲಿ ಅಥವಾ ಬಿಟ್ಟಿರಲಿ, ಅದೂ ಸಹ ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾದ ಸ್ವತ್ತು ಆಗುತ್ತದೆ. ಈ ನೆಲವನ್ನೂ ಸಹ ಅಥಾರಿಟಿಯವರು ತಮ್ಮ ಮನಸೋ ಇಚ್ಛೆ ಅಭಿವೃದ್ಧಿ ಮಾಡಬಹುದು ಮತ್ತು ಇದರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ನದಿ ತೀರದ ಜನರ ಪಾಡು ನೀರು ಪಾಲು.

ಗೋವಾ ರಾಜ್ಯದ ಜಿ ಆರ್ ಇ ಎಂಬ ಸಂಸ್ಥೆ ಮತ್ತು ರಾಷ್ಟ್ರೀಯ ಮೀನುಗಾಗರ ಸಂಘ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಿ ಅರ್ ಝೆಡ್ ನೋಟಿಫಿಕೇಷನ್ 2019, ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ಸೆಕ್ಷನ್ 26ರ ಅನ್ವಯ “ಸಾರ್ವಜನಿಕ ಅವಶ್ಯಕತೆಗೆ” ಬೇಕಾದಷ್ಟು ನದಿ ತೀರದ ಜಮೀನನ್ನು ಅಥಾರಿಟಿ ಅಧಿಗ್ರಹಿಸಬಹುದು ಮತ್ತು ಅವರಿಂದ ಸಾಧ್ಯವಾಗದೇ ಇದ್ದಲ್ಲಿ ರಾಜ್ಯ ಸರಕಾರ ಅದನ್ನು ಅಧಿಗ್ರಹಿಸಿ ಅಥಾರಿಟಿಗೆ ಹಸ್ತಾಂತರಿಸಬೇಕು. ಆದರೆ ಈ ಜಮೀನಿನ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಒಂದು ರಾಜ್ಯದೊಳಗೆ ಕೇಂದ್ರ ತನ್ನದೇ ಆದ ರಾಜ್ಯವನ್ನು ಸ್ಥಾಪಿಸಿ ವಿಸ್ತರಿಸುತ್ತಿದೆ. ಹಂತಹಂತವಾಗಿ ರಾಜ್ಯದ ಆಸ್ತಿ ಮತ್ತು ಅಧಿಕಾರವನ್ನು ಕೇಂದ್ರ ಕಬಳಿಸುತ್ತಾ ಬಂದಿದೆ. ಸಂವಿಧಾನದ ಆರ್ಟಿಕಲ್ 1 ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ರಾಜ್ಯಗಳು ಕೇಂದ್ರ ಶಾಸಿತ ಪ್ರದೇಶಗಳಾಗುತ್ತಿವೆ.

ಅಷ್ಟೇ ಅಲ್ಲ, ಈ ಪೋರ್ಟ್ ಮತ್ತು ಏರ್ಪೋರ್ಟ್‌‌ಗಳನ್ನು ಕೇಂದ್ರ ಸರಕಾರ ಯಾವ ಆಪ್ತಮಿತ್ರರಿಗೆ ಮಾರಾಟ ಮಾಡುತ್ತಿದೆ, ಸರಕಾರದ ಎಲ್ಲಾ ಆಸ್ತಿಗಳನ್ನು ಕೊಂಡುಕೊಳ್ಳುವಷ್ಟು ಹಣ ಯಾರ ಹತ್ತಿರ ಇದೆ ಎಂಬುದನ್ನು ನಾನು ಬಿಡಿಸಿ ಹೇಳಬೇಕಿಲ್ಲ.

ಜಣ ಜಣ ಜಣ ಕಾಂಚಾಣದಲ್ಲಿ

ಅಂಬದಾನಿ ಲಾಂಛನದಲ್ಲಿ

ದೇವರು ದಿಂಡಿರ ಭಜನೆಯಲ್ಲಿ

ಮಂದಿರ ಮಸೀದಿ ಗದ್ದಲದಲ್ಲಿ

ಎಲ್ಲ ಮಾಯ ನಾಳೆ ನಾವು ಮಾಯ

ಎಲ್ಲಾ ಮಾಯ ನಾಳೆ ನೀವು ಮಾಯ….

  •   ಜಿ.ಆರ್.ವಿದ್ಯಾರಣ್ಯ

ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...