Homeಚಳವಳಿರೈತ ಹೋರಾಟ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಆರ್ಥಿಕ ನೆರವು ಬೇಕಿದೆ: ಕೇಸರಿ ಹರವು

ರೈತ ಹೋರಾಟ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಆರ್ಥಿಕ ನೆರವು ಬೇಕಿದೆ: ಕೇಸರಿ ಹರವು

ಐತಿಹಾಸಿಕ ಹೋರಾಟವೊಂದರ ಸಮಗ್ರ ದಾಖಲೆಯಾಗಿ ಉಳಿಯಲಿರುವ ಈ ಸಾಕ್ಷ್ಯಚಿತ್ರಕ್ಕೆ ಆರ್ಥಿಕ ನೆರವು ಲಭ್ಯವಾದರೆ ಮಹತ್ವದ ಪ್ರಯತ್ನಕ್ಕೆ ಜೊತೆಯಾದ ಎಲ್ಲರಿಗೂ ಒಂದು ಸಾರ್ಥಕ ಭಾವ ಉಳಿಯುತ್ತದೆ.

- Advertisement -
- Advertisement -

ಕಳೆದ ಒಂಬತ್ತು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟ ಐತಿಹಾಸಿಕ ಎಂದೇ ಪರಿಗಣಿಸಲಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ರೀತಿಯ ಸಂಘಟಿತವಾದ, ಅಹಿಂಸಾತ್ಮಕವಾದ, ಇಷ್ಟು ದೊಡ್ಡ ಹೋರಾಟ ದೀರ್ಘಕಾಲ ನಡೆದ ಇನ್ನೊಂದು ಉದಾಹರಣೆ ಇಲ್ಲ.

ಇಂಥ ಹೋರಾಟವನ್ನು ದಾಖಲಿಸುವ ಮಹತ್ವದ ಕೆಲಸಕ್ಕೆ ಮುಂದಾದ ಕನ್ನಡದ ಸಿನಿಮಾ ನಿರ್ದೇಶಕ ಕೇಸರಿ ಹರವು ಅವರು ದೆಹಲಿ ರೈತ ಹೋರಾಟ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದು, ಈ ಸಾಕ್ಷ್ಯಚಿತ್ರ ಪೂರೈಸಲು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದುವರೆಗೂ ಮೂರು ಬಾರಿ ದೆಹಲಿಗೆ ತೆರಳಿ 18 ದಿನಗಳ ಕಾಲ ದೆಹಲಿಯ ಗಡಿಗಳಲ್ಲಿ ರೈತ ಹೋರಾಟಗಾರರೊಂದಿಗೆ ನೆಲೆಸಿ ಅಲ್ಲಿನ ಹೋರಾಟದ ದೃಶ್ಯಗಳನ್ನು ಸೆರೆಹಿಡಿದಿರುವ ಹರವು ಅವರು, ನಂತರದಲ್ಲಿ ಪಂಜಾಬ್‌ ಮತ್ತು ಹರ್ಯಾಣಗಳಲ್ಲಿ ಓಡಾಡಿ, ಅಲ್ಲಿನ ರೈತರು, ಕೃಷಿ ಪರಿಸ್ಥಿತಿಗಳನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಕರ್ನಾಟಕದ ಹೋರಾಟಗಳು ಸೇರಿದಂತೆ ಸುಮಾರು 28 ದಿನಗಳ ಕಾಲ ಮೂರು ಕೃಷಿ ಕಾಯ್ದೆ ವಿರುದ್ಧದ ಹೋರಾಟ ಬಹುಮುಖ್ಯ ಸಂಗತಿಗಳನ್ನು ತಮ್ಮ ಕೆಮೆರಾ ಮೂಲಕ ಸೆರೆಹಿಡಿದಿದ್ದಾರೆ.

ಮೂಲತಃ ಸಿನಿಮಾ ನಿರ್ದೇಶಕರಾದ ಅವರು ‘ಭೂಮಿಗೀತ’, ‘ಒಳ್ಳೆಯವನು’ ಚಿತ್ರಗಳನ್ನು, 12 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.

ಜನ-ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸುವ ಕೇಸರಿ ಹರವು ಅವರು ನಿರ್ಮಿಸಿದ ‘ಅಘನಾಶಿನಿ ಮತ್ತು ಮಕ್ಕಳು’, ‘ನಗರ ಮತ್ತು ನಗರ ಕಣಿವ’ ಸಾಕ್ಷ್ಯಚಿತ್ರಗಳು ಹೋರಾಟದ ಭಾಗವಾಗಿ ರೂಪುಗೊಂಡ ಸಾಕ್ಷ್ಯಚಿತ್ರಗಳು.

ಅಘನಾಶಿನಿ ಮತ್ತು ಮಕ್ಕಳು, ಸಾಕ್ಷ್ಯಚಿತ್ರದಲ್ಲಿ ತದಡಿ ಬಳಿ ಉಷ್ಣಸ್ಥಾವರ ನಿರ್ಮಿಸುವ ಕುರಿತು ಮಾಡಿದೆವು. ಅದರ ವಿರುದ್ಧ ನಡೆದ ಹೋರಾಟವನ್ನು ಸಾಕ್ಷ್ಯಚಿತ್ರದಲ್ಲಿ ತಂದೆ. ಪರಿಸರ ಮತ್ತು ಸಾಮಾಜಿಕ, ಸ್ಥಳೀಯ ಆರ್ಥಿಕತೆಯ ಉಳಿಯುವ ಪ್ರಶ್ನೆಯಾಗಿ ಈ ಸಾಕ್ಷ್ಯಚಿತ್ರದಲ್ಲಿ ಮಹತ್ವದ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಮಾಡಿದೆ.

ನಗರ ಮತ್ತು ನದಿ ಕಣಿವೆ ಸಾಕ್ಷ್ಯಚಿತ್ರದಲ್ಲಿ ಗೊಂಡ್ಯಾ ಜಲವಿದ್ಯುತ್‌ ಯೋಜನೆ ಜಾರಿಗೆ ಬರುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ತನ್ನದೇ ಮಹತ್ವ ಹೊಂದಿರುವ ಗೊಂಡ್ಯಾ ಕಾಡಿನ ಬಗ್ಗೆ, ಅಲ್ಲಿನ ಜೀವವೈವಿಧ್ಯದ ಬಗ್ಗೆ, ಅದನ್ನು ಸಂರಕ್ಷಿಸುವ ಕುರಿತು ಸಾಕ್ಷ್ಯಚಿತ್ರದಲ್ಲಿ ದಾಖಲಿಸಿದ್ದಾರೆ.

ಅವರ ತುಡಿತ ರೈತ ಪರ ವಿಚಾರಗಳಲ್ಲೂ ಎದ್ದು ಕಾಣುವುದು ರೈತ ನಾಯಕ ಕೆ ಎಸ್‌ ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರದಲ್ಲಿ. ಪುಟ್ಟಣ್ಣಯ್ಯ ಜೀವನ ಮತ್ತು ಹೋರಾಟದ ಜೊತೆಗೆ ರೈತ ಹೋರಾಟ, ರೈತ ಸಮಸ್ಯೆಗಳನ್ನು ಬಿಂಬಿಸಿದರು. ಇದರ ವಿಸ್ತರಣೆಯಂತೆಯೇ ದೆಹಲಿ ಹೋರಾಟದ ಸಾಕ್ಷ್ಯಚಿತ್ರದ ಆಲೋಚನೆ ಅವರನ್ನು ಕಾಡಿದ್ದು.

”ಕೊರೊನಾ ಬಿಕ್ಕಟ್ಟಿನ ನಡುವೆ ಕೇಂದ್ರವು ಸುಗ್ರೀವಾಜ್ಞೆ ಮೂಲಕ ಬಹಳ ಅಸಂವಿಧಾನಿಕವಾಗಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಇದನ್ನು ವಿರೋಧಿಸಿ ಪಂಜಾಬಿ ರೈತರು ಒಗ್ಗಟ್ಟಾಗಿ ಪ್ರತಿಭಟಿಸಿದ ರೀತಿ, ಕಾಯ್ದೆಗಳನ್ನು ಅರ್ಥ ಮಾಡಿಕೊಂಡ ರೀತಿ, ರೈತರಿಗೆ ಮಾರಕ ಎಂಬುದನ್ನ ಗ್ರಹಿಸಿದ ರೀತಿಯನ್ನು ನಾನು ತಿಳಿದುಕೊಳ್ಳುತ್ತಿದ್ದೆ. ನವೆಂಬರ್‌ನಲ್ಲಿ 26ಕ್ಕೆ ದೆಹಲಿ ಚಲೋಗೆ ನಿರ್ಧರಿಸಿದರೊ, ಆಗ ಈ ಚಳವಳಿ ದೊಡ್ಡದಾಗಿ ಬೆಳೆಯುತ್ತದೆ. ಇದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಅನ್ನಿಸಿತು” ಎಂದು ರೈತ ಹೋರಾಟದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಪ್ರೇರಣೆಯ ಸಂದರ್ಭವನ್ನು ಅವರು ‘ಅನ್ನದ ಋಣ’ ವೆಬ್ ಸೈಟ್ ನೊಂದಿಗೆ ಹಂಚಿಕೊಂಡಿದ್ದಾರೆ.

ಈ ಎಲ್ಲ ಚಿತ್ರೀಕರಣವೂ ಹಲವು ಸಮಾನ ಆಸಕ್ತ, ಸಮಾನ ಮನಸ್ಕರ ನೆರವಿನೊಂದಿಗೆ ಕೈಗೊಂಡ ಕೇಸರಿ ಹರವು ಅವರು ಇನ್ನಷ್ಟು ಮಹತ್ವದ ಸಂಗತಿಗಳನ್ನು ದಾಖಲಿಸಬೇಕೆಂಬ ಇಚ್ಚೆ ಹೊಂದಿದ್ದಾರೆ.

”ಬಿಹಾರ್‌ ಮತ್ತು ಕೇರಳದಲ್ಲಿ ಎಪಿಎಂಸಿಗಳಿಲ್ಲ. ಬಿಹಾರದಲ್ಲಿ ರೈತ ಉತ್ಪನ್ನಗಳ ಮಾರುಕಟ್ಟೆಯದ್ದು ಅತ್ಯಂತ ದಾರುಣ ಸ್ಥಿತಿ. ಆದರೆ ಕೇರಳದಲ್ಲಿ ಎಪಿಎಂಸಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವೆರಡನ್ನೂ ಅಧ್ಯಯನ ಮಾಡಬೇಕು. ಅಲ್ಲಿನ ರೈತರನ್ನು ಮಾತನಾಡಿಸಬೇಕು. ದೆಹಲಿ ಹೋರಾಟಕ್ಕೆ ಸಂಬಂಧಿಸಿದ ಅಲ್ಲಿನ ಕೆಲ ತಜ್ಞ-ಚಿಂತಕರ ಮಾತುಗಳನ್ನು ಸೆರೆಹಿಡಿಯಬೇಕು. ಇದು ಸಾಧ್ಯವಾಗುವುದಾದರೆ, ಇಲ್ಲಿಯವರೆಗಿನ ಶ್ರಮ ಸಾರ್ಥಕವಾಗುತ್ತದೆ” ಎನ್ನುತ್ತಾರೆ ಕೇಸರಿ ಹರವು.

”ಈ ಸಾಕ್ಷ್ಯಚಿತ್ರದಲ್ಲಿರುವುದು ಕೇವಲ ರೈತ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನವಷ್ಟೇ ಅಲ್ಲ, ದೇಶದ ಸಾರ್ವಭೌಮತ್ವ, ಸಾಮಾಜಿಕ ಸಾರ್ವಭೌಮತ್ವ ಮತ್ತು ಪರಿಸರದ ಅಂಶಗಳನ್ನು ಈ ರೈತರ ಹೋರಾಟ ಹೊಂದಿದೆ ಎಂಬುದನ್ನೂ ದಾಖಲಿಸುತ್ತದೆ. ಇದು ರೈತರಿಗಷ್ಟೇ ಅಲ್ಲ, ಎಲ್ಲರಿಗೂ ಸಂಬಂಧಿಸಿದ್ದು. ಈ ಮೂರು ಕಾಯ್ದೆಗಳಿಂದ ಖಾಸಗೀಕರಣಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾರ್ವಭೌಮತ್ವವನ್ನು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಇದು ರೈತರ ಸಮಸ್ಯೆಯಲ್ಲ, ಪ್ರತಿಯೊಬ್ಬರ ಸಮಸ್ಯೆಯಾಗಲಿದೆ, ಪ್ರತಿಯೊಂದು ಕಸುಬಿನ ಸಮಸ್ಯೆಯಾಗಲಿದೆ. ಇದು ದೇಶವ್ಯಾಪಿ ಹರಡುತ್ತಿದೆ. ಹರಡಬೇಕು. ಆದರೆ ಈ ವರೆಗೆ ರೈತರು ಮಾತ್ರ ಹೋರಾಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮಿಕ್ಕೆಲ್ಲರೂ ಈ ಹೊರಾಟದಲ್ಲಿ ಪಾಲ್ಗೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತದೆ” ಎಂದು ಸಾಕ್ಷ್ಯಚಿತ್ರದ ಆಶಯ ಮತ್ತು ಅಗತ್ಯಗಳನ್ನು ಹರವು ಅವರು ವಿವರಿಸುತ್ತಾರೆ.

ಇದನ್ನೂ ಓದಿ: ಸೆ.13ಕ್ಕೆ ವಿಧಾನಸೌಧ ಮುತ್ತಿಗೆ, ಸೆ. 17ಕ್ಕೆ ಕರ್ನಾಟಕ ಬಂದ್: ಕೋಡಿಹಳ್ಳಿ ಚಂದ್ರಶೇಖರ್‌

ಐತಿಹಾಸಿಕ ಹೋರಾಟವೊಂದರ ಸಮಗ್ರ ದಾಖಲೆಯಾಗಿ ಉಳಿಯಲಿರುವ ಈ ಸಾಕ್ಷ್ಯಚಿತ್ರಕ್ಕೆ ಆರ್ಥಿಕ ನೆರವು ಲಭ್ಯವಾದರೆ ಮಹತ್ವದ ಪ್ರಯತ್ನಕ್ಕೆ ಜೊತೆಯಾದ ಎಲ್ಲರಿಗೂ ಒಂದು ಸಾರ್ಥಕ ಭಾವ ಉಳಿಯುತ್ತದೆ. ರೈತ ಹೋರಾಟ ಕುರಿತ ಗೊಂದಲ, ಅಪಪ್ರಚಾರಗಳಿಗೆ ತೆರೆ ಎಳೆಯುವ, ಕಾರ್ಪೊರೆಟ್‌ ವ್ಯವಸ್ಥೆಯೊಂದರ ಸಂಚುಗಳು, ರೈತ ಹೋರಾಟ ಇಡೀ ದೇಶದ ಹೋರಾಟವೆಂಬುದನ್ನು ಹೇಳುವ ಎಲ್ಲ ಅಂಶಗಳೂ ಈ ಸಾಕ್ಷ್ಯಚಿತ್ರ ಅನಾವರಣ ಮಾಡುವ ಉದ್ದೇಶ ಮತ್ತು ಬದ್ಧತೆಯನ್ನು ಹೊಂದಿದೆ ಎಂಬುದು ಹರವು ಅವರ ವಿಶ್ವಾಸದ ಮಾತು. ಈ ಸಾಕ್ಷ್ಯಚಿತ್ರ ಪೂರ್ಣಗೊಳಿಸಲು ಅಗತ್ಯವಿರುವ ಆರ್ಥಿಕ ನೆರವಿಗೆ ಎಲ್ಲ ಸದಾಶಯವುಳ್ಳ ಸಹೃದಯರು ಮುಂದಾಗಬಹುದು. ಈ ಕೆಳಗಿನ ಹರವು ಅವರ ಬ್ಯಾಂಕ್‌ ಖಾತೆ ಮತ್ತು ಯುಪಿಐ ವಿವರಗಳಿವೆ. ಸೂಕ್ತ ರೀತಿಯಲ್ಲಿ ನೆರವಾಗುವ ಮೂಲಕ ಸಾಕ್ಷ್ಯಚಿತ್ರ ಪೂರ್ಣಗೊಳ್ಳಲು ಸಹಕರಿಸಬೇಕು.

UPI: kesari.haravoo@oksbi
Kesari Haravu: Bank details:
Kesari Harvoo
Ac. No. 30260889394
SBI, Nagarabhavi (AED) Branch
IFSC: SBIN0009050

ವರದಿ ಕೃಪೆ: ಅನ್ನದ ಋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...

ಜಾಮೀನು ನಿರಾಕರಣೆ : ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಉಮರ್ ಖಾಲಿದ್

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಜನವರಿ 5ರ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಬುಧವಾರಕ್ಕೆ (ಏ.15) ನಿಗದಿಯಾಗಿದೆ ಎಂದು...

ಜಾರ್ಖಂಡ್| ಅಬಕಾರಿ ಕಾನ್‌ಸ್ಟೆಬಲ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ; 159 ಅಭ್ಯರ್ಥಿಗಳ ಬಂಧನ

ರಾಂಚಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಿಂದ 159 ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ ನಂತರ ಪರೀಕ್ಷೆ ಪತ್ರಿಕೆ ಸೋರಿಕೆ ಕೃತ್ಯ ಬೆಳಕಿಗೆ ಬಂದಿದೆ. ತಮರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾರ್ಗಾಂವ್‌ನಲ್ಲಿರುವ ಸ್ಥಳದಲ್ಲಿ ಅಭ್ಯರ್ಥಿಗಳನ್ನು ಒಟ್ಟುಗೂಡಿಸಲಾಗಿದ್ದು, ಪರೀಕ್ಷೆಗೆ ಮೊದಲು...

ನೋಯ್ಡಾ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನಡೆದ ಕಾರ್ಮಿಕರ ಪ್ರತಿಭಟನೆಯಲ್ಲಿ ಹೆಚ್ಚಿದ ಹಿಂಸಾಚಾರ; ಕಲ್ಲು ತೂರಾಟ, ವಾಹನಗಳು ಧ್ವಂಸ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯ ಸಮಯದಲ್ಲಿ, ವಾಹನಗಳು ಮತ್ತು ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗಿದ್ದು, ಕಲ್ಲು ತೂರಾಟ...

‘ಮಹಿಳಾ ಮೀಸಲಾತಿಯಲ್ಲ, ಡಿಲಿಮಿಟೇಶನ್ ಅವರ ನಿಜವಾದ ವಿಷಯ..’; ಕೇಂದ್ರದ ಮೇಲೆ ಸೋನಿಯಾ ಗಾಂಧಿ ವಾಗ್ದಾಳಿ

ಮಹಿಳಾ ಮೀಸಲಾತಿಯಲ್ಲ, ಡಿಲಿಮಿಟೇಶನ್ (ಕ್ಷೇತ್ರ ಪುನರ್‌ ವಿಂಗಡಣೆ) ನಿರ್ಣಯವು ಏಪ್ರಿಲ್ 16 ರಿಂದ 18 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಕೇಂದ್ರದ ನಿರ್ಧಾರದ ಹಿಂದಿನ ಪ್ರಮುಖ ವಿಷಯವಾಗಿದೆ ಎಂದು ಕಾಂಗ್ರೆಸ್ ಸಂಸದೀಯ...

ಜಾತಿ ದೌರ್ಜನ್ಯಕ್ಕೆ ದಲಿತ ವಿದ್ಯಾರ್ಥಿ ಬಲಿ | ಸಂತಾಪ ಸೂಚಿಸಲು ಬಾರದ ಕಾಲೇಜು ಸಿಬ್ಬಂದಿ : ಅನುಮಾನ ವ್ಯಕ್ತಪಡಿಸಿದ ಶಿಕ್ಷಣ ಸಚಿವ

ಜಾತಿ ದೌರ್ಜನ್ಯದ ಆರೋಪ ಮಾಡಿ ದಲಿತ ವಿದ್ಯಾರ್ಥಿ ನಿತಿನ್ ರಾಜ್ ಸಾವಿಗೆ ಶರಣಾದ ನಂತರ, ಅವರ ಕಾಲೇಜಿನ ಒಬ್ಬನೇ ಒಬ್ಬ ಪ್ರತಿನಿಧಿಯೂ ಮನೆಗೆ ಭೇಟಿ ನೀಡದಿರುವುದು 'ಗಂಭೀರವಾದ ವಿಷಯ' ಎಂದು ಕೇರಳದ ಸಾರ್ವಜನಿಕ...