Homeಚಳವಳಿರೈತ ಹೋರಾಟ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಆರ್ಥಿಕ ನೆರವು ಬೇಕಿದೆ: ಕೇಸರಿ ಹರವು

ರೈತ ಹೋರಾಟ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೆ ಆರ್ಥಿಕ ನೆರವು ಬೇಕಿದೆ: ಕೇಸರಿ ಹರವು

ಐತಿಹಾಸಿಕ ಹೋರಾಟವೊಂದರ ಸಮಗ್ರ ದಾಖಲೆಯಾಗಿ ಉಳಿಯಲಿರುವ ಈ ಸಾಕ್ಷ್ಯಚಿತ್ರಕ್ಕೆ ಆರ್ಥಿಕ ನೆರವು ಲಭ್ಯವಾದರೆ ಮಹತ್ವದ ಪ್ರಯತ್ನಕ್ಕೆ ಜೊತೆಯಾದ ಎಲ್ಲರಿಗೂ ಒಂದು ಸಾರ್ಥಕ ಭಾವ ಉಳಿಯುತ್ತದೆ.

- Advertisement -
- Advertisement -

ಕಳೆದ ಒಂಬತ್ತು ತಿಂಗಳುಗಳಿಂದ ನಡೆಯುತ್ತಿರುವ ರೈತ ಹೋರಾಟ ಐತಿಹಾಸಿಕ ಎಂದೇ ಪರಿಗಣಿಸಲಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ರೀತಿಯ ಸಂಘಟಿತವಾದ, ಅಹಿಂಸಾತ್ಮಕವಾದ, ಇಷ್ಟು ದೊಡ್ಡ ಹೋರಾಟ ದೀರ್ಘಕಾಲ ನಡೆದ ಇನ್ನೊಂದು ಉದಾಹರಣೆ ಇಲ್ಲ.

ಇಂಥ ಹೋರಾಟವನ್ನು ದಾಖಲಿಸುವ ಮಹತ್ವದ ಕೆಲಸಕ್ಕೆ ಮುಂದಾದ ಕನ್ನಡದ ಸಿನಿಮಾ ನಿರ್ದೇಶಕ ಕೇಸರಿ ಹರವು ಅವರು ದೆಹಲಿ ರೈತ ಹೋರಾಟ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದು, ಈ ಸಾಕ್ಷ್ಯಚಿತ್ರ ಪೂರೈಸಲು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದುವರೆಗೂ ಮೂರು ಬಾರಿ ದೆಹಲಿಗೆ ತೆರಳಿ 18 ದಿನಗಳ ಕಾಲ ದೆಹಲಿಯ ಗಡಿಗಳಲ್ಲಿ ರೈತ ಹೋರಾಟಗಾರರೊಂದಿಗೆ ನೆಲೆಸಿ ಅಲ್ಲಿನ ಹೋರಾಟದ ದೃಶ್ಯಗಳನ್ನು ಸೆರೆಹಿಡಿದಿರುವ ಹರವು ಅವರು, ನಂತರದಲ್ಲಿ ಪಂಜಾಬ್‌ ಮತ್ತು ಹರ್ಯಾಣಗಳಲ್ಲಿ ಓಡಾಡಿ, ಅಲ್ಲಿನ ರೈತರು, ಕೃಷಿ ಪರಿಸ್ಥಿತಿಗಳನ್ನು ಚಿತ್ರಿಸಿಕೊಂಡು ಬಂದಿದ್ದಾರೆ. ಕರ್ನಾಟಕದ ಹೋರಾಟಗಳು ಸೇರಿದಂತೆ ಸುಮಾರು 28 ದಿನಗಳ ಕಾಲ ಮೂರು ಕೃಷಿ ಕಾಯ್ದೆ ವಿರುದ್ಧದ ಹೋರಾಟ ಬಹುಮುಖ್ಯ ಸಂಗತಿಗಳನ್ನು ತಮ್ಮ ಕೆಮೆರಾ ಮೂಲಕ ಸೆರೆಹಿಡಿದಿದ್ದಾರೆ.

ಮೂಲತಃ ಸಿನಿಮಾ ನಿರ್ದೇಶಕರಾದ ಅವರು ‘ಭೂಮಿಗೀತ’, ‘ಒಳ್ಳೆಯವನು’ ಚಿತ್ರಗಳನ್ನು, 12 ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.

ಜನ-ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸುವ ಕೇಸರಿ ಹರವು ಅವರು ನಿರ್ಮಿಸಿದ ‘ಅಘನಾಶಿನಿ ಮತ್ತು ಮಕ್ಕಳು’, ‘ನಗರ ಮತ್ತು ನಗರ ಕಣಿವ’ ಸಾಕ್ಷ್ಯಚಿತ್ರಗಳು ಹೋರಾಟದ ಭಾಗವಾಗಿ ರೂಪುಗೊಂಡ ಸಾಕ್ಷ್ಯಚಿತ್ರಗಳು.

ಅಘನಾಶಿನಿ ಮತ್ತು ಮಕ್ಕಳು, ಸಾಕ್ಷ್ಯಚಿತ್ರದಲ್ಲಿ ತದಡಿ ಬಳಿ ಉಷ್ಣಸ್ಥಾವರ ನಿರ್ಮಿಸುವ ಕುರಿತು ಮಾಡಿದೆವು. ಅದರ ವಿರುದ್ಧ ನಡೆದ ಹೋರಾಟವನ್ನು ಸಾಕ್ಷ್ಯಚಿತ್ರದಲ್ಲಿ ತಂದೆ. ಪರಿಸರ ಮತ್ತು ಸಾಮಾಜಿಕ, ಸ್ಥಳೀಯ ಆರ್ಥಿಕತೆಯ ಉಳಿಯುವ ಪ್ರಶ್ನೆಯಾಗಿ ಈ ಸಾಕ್ಷ್ಯಚಿತ್ರದಲ್ಲಿ ಮಹತ್ವದ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಮಾಡಿದೆ.

ನಗರ ಮತ್ತು ನದಿ ಕಣಿವೆ ಸಾಕ್ಷ್ಯಚಿತ್ರದಲ್ಲಿ ಗೊಂಡ್ಯಾ ಜಲವಿದ್ಯುತ್‌ ಯೋಜನೆ ಜಾರಿಗೆ ಬರುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ತನ್ನದೇ ಮಹತ್ವ ಹೊಂದಿರುವ ಗೊಂಡ್ಯಾ ಕಾಡಿನ ಬಗ್ಗೆ, ಅಲ್ಲಿನ ಜೀವವೈವಿಧ್ಯದ ಬಗ್ಗೆ, ಅದನ್ನು ಸಂರಕ್ಷಿಸುವ ಕುರಿತು ಸಾಕ್ಷ್ಯಚಿತ್ರದಲ್ಲಿ ದಾಖಲಿಸಿದ್ದಾರೆ.

ಅವರ ತುಡಿತ ರೈತ ಪರ ವಿಚಾರಗಳಲ್ಲೂ ಎದ್ದು ಕಾಣುವುದು ರೈತ ನಾಯಕ ಕೆ ಎಸ್‌ ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ನಿರ್ಮಿಸಿದ ಸಾಕ್ಷ್ಯಚಿತ್ರದಲ್ಲಿ. ಪುಟ್ಟಣ್ಣಯ್ಯ ಜೀವನ ಮತ್ತು ಹೋರಾಟದ ಜೊತೆಗೆ ರೈತ ಹೋರಾಟ, ರೈತ ಸಮಸ್ಯೆಗಳನ್ನು ಬಿಂಬಿಸಿದರು. ಇದರ ವಿಸ್ತರಣೆಯಂತೆಯೇ ದೆಹಲಿ ಹೋರಾಟದ ಸಾಕ್ಷ್ಯಚಿತ್ರದ ಆಲೋಚನೆ ಅವರನ್ನು ಕಾಡಿದ್ದು.

”ಕೊರೊನಾ ಬಿಕ್ಕಟ್ಟಿನ ನಡುವೆ ಕೇಂದ್ರವು ಸುಗ್ರೀವಾಜ್ಞೆ ಮೂಲಕ ಬಹಳ ಅಸಂವಿಧಾನಿಕವಾಗಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಇದನ್ನು ವಿರೋಧಿಸಿ ಪಂಜಾಬಿ ರೈತರು ಒಗ್ಗಟ್ಟಾಗಿ ಪ್ರತಿಭಟಿಸಿದ ರೀತಿ, ಕಾಯ್ದೆಗಳನ್ನು ಅರ್ಥ ಮಾಡಿಕೊಂಡ ರೀತಿ, ರೈತರಿಗೆ ಮಾರಕ ಎಂಬುದನ್ನ ಗ್ರಹಿಸಿದ ರೀತಿಯನ್ನು ನಾನು ತಿಳಿದುಕೊಳ್ಳುತ್ತಿದ್ದೆ. ನವೆಂಬರ್‌ನಲ್ಲಿ 26ಕ್ಕೆ ದೆಹಲಿ ಚಲೋಗೆ ನಿರ್ಧರಿಸಿದರೊ, ಆಗ ಈ ಚಳವಳಿ ದೊಡ್ಡದಾಗಿ ಬೆಳೆಯುತ್ತದೆ. ಇದನ್ನು ಸಾಕ್ಷ್ಯಚಿತ್ರ ಮಾಡಬೇಕೆಂದು ಅನ್ನಿಸಿತು” ಎಂದು ರೈತ ಹೋರಾಟದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಪ್ರೇರಣೆಯ ಸಂದರ್ಭವನ್ನು ಅವರು ‘ಅನ್ನದ ಋಣ’ ವೆಬ್ ಸೈಟ್ ನೊಂದಿಗೆ ಹಂಚಿಕೊಂಡಿದ್ದಾರೆ.

ಈ ಎಲ್ಲ ಚಿತ್ರೀಕರಣವೂ ಹಲವು ಸಮಾನ ಆಸಕ್ತ, ಸಮಾನ ಮನಸ್ಕರ ನೆರವಿನೊಂದಿಗೆ ಕೈಗೊಂಡ ಕೇಸರಿ ಹರವು ಅವರು ಇನ್ನಷ್ಟು ಮಹತ್ವದ ಸಂಗತಿಗಳನ್ನು ದಾಖಲಿಸಬೇಕೆಂಬ ಇಚ್ಚೆ ಹೊಂದಿದ್ದಾರೆ.

”ಬಿಹಾರ್‌ ಮತ್ತು ಕೇರಳದಲ್ಲಿ ಎಪಿಎಂಸಿಗಳಿಲ್ಲ. ಬಿಹಾರದಲ್ಲಿ ರೈತ ಉತ್ಪನ್ನಗಳ ಮಾರುಕಟ್ಟೆಯದ್ದು ಅತ್ಯಂತ ದಾರುಣ ಸ್ಥಿತಿ. ಆದರೆ ಕೇರಳದಲ್ಲಿ ಎಪಿಎಂಸಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವೆರಡನ್ನೂ ಅಧ್ಯಯನ ಮಾಡಬೇಕು. ಅಲ್ಲಿನ ರೈತರನ್ನು ಮಾತನಾಡಿಸಬೇಕು. ದೆಹಲಿ ಹೋರಾಟಕ್ಕೆ ಸಂಬಂಧಿಸಿದ ಅಲ್ಲಿನ ಕೆಲ ತಜ್ಞ-ಚಿಂತಕರ ಮಾತುಗಳನ್ನು ಸೆರೆಹಿಡಿಯಬೇಕು. ಇದು ಸಾಧ್ಯವಾಗುವುದಾದರೆ, ಇಲ್ಲಿಯವರೆಗಿನ ಶ್ರಮ ಸಾರ್ಥಕವಾಗುತ್ತದೆ” ಎನ್ನುತ್ತಾರೆ ಕೇಸರಿ ಹರವು.

”ಈ ಸಾಕ್ಷ್ಯಚಿತ್ರದಲ್ಲಿರುವುದು ಕೇವಲ ರೈತ ಸಮಸ್ಯೆಗಳನ್ನು ಬಿಂಬಿಸುವ ಪ್ರಯತ್ನವಷ್ಟೇ ಅಲ್ಲ, ದೇಶದ ಸಾರ್ವಭೌಮತ್ವ, ಸಾಮಾಜಿಕ ಸಾರ್ವಭೌಮತ್ವ ಮತ್ತು ಪರಿಸರದ ಅಂಶಗಳನ್ನು ಈ ರೈತರ ಹೋರಾಟ ಹೊಂದಿದೆ ಎಂಬುದನ್ನೂ ದಾಖಲಿಸುತ್ತದೆ. ಇದು ರೈತರಿಗಷ್ಟೇ ಅಲ್ಲ, ಎಲ್ಲರಿಗೂ ಸಂಬಂಧಿಸಿದ್ದು. ಈ ಮೂರು ಕಾಯ್ದೆಗಳಿಂದ ಖಾಸಗೀಕರಣಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾರ್ವಭೌಮತ್ವವನ್ನು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಇದು ರೈತರ ಸಮಸ್ಯೆಯಲ್ಲ, ಪ್ರತಿಯೊಬ್ಬರ ಸಮಸ್ಯೆಯಾಗಲಿದೆ, ಪ್ರತಿಯೊಂದು ಕಸುಬಿನ ಸಮಸ್ಯೆಯಾಗಲಿದೆ. ಇದು ದೇಶವ್ಯಾಪಿ ಹರಡುತ್ತಿದೆ. ಹರಡಬೇಕು. ಆದರೆ ಈ ವರೆಗೆ ರೈತರು ಮಾತ್ರ ಹೋರಾಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮಿಕ್ಕೆಲ್ಲರೂ ಈ ಹೊರಾಟದಲ್ಲಿ ಪಾಲ್ಗೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತದೆ” ಎಂದು ಸಾಕ್ಷ್ಯಚಿತ್ರದ ಆಶಯ ಮತ್ತು ಅಗತ್ಯಗಳನ್ನು ಹರವು ಅವರು ವಿವರಿಸುತ್ತಾರೆ.

ಇದನ್ನೂ ಓದಿ: ಸೆ.13ಕ್ಕೆ ವಿಧಾನಸೌಧ ಮುತ್ತಿಗೆ, ಸೆ. 17ಕ್ಕೆ ಕರ್ನಾಟಕ ಬಂದ್: ಕೋಡಿಹಳ್ಳಿ ಚಂದ್ರಶೇಖರ್‌

ಐತಿಹಾಸಿಕ ಹೋರಾಟವೊಂದರ ಸಮಗ್ರ ದಾಖಲೆಯಾಗಿ ಉಳಿಯಲಿರುವ ಈ ಸಾಕ್ಷ್ಯಚಿತ್ರಕ್ಕೆ ಆರ್ಥಿಕ ನೆರವು ಲಭ್ಯವಾದರೆ ಮಹತ್ವದ ಪ್ರಯತ್ನಕ್ಕೆ ಜೊತೆಯಾದ ಎಲ್ಲರಿಗೂ ಒಂದು ಸಾರ್ಥಕ ಭಾವ ಉಳಿಯುತ್ತದೆ. ರೈತ ಹೋರಾಟ ಕುರಿತ ಗೊಂದಲ, ಅಪಪ್ರಚಾರಗಳಿಗೆ ತೆರೆ ಎಳೆಯುವ, ಕಾರ್ಪೊರೆಟ್‌ ವ್ಯವಸ್ಥೆಯೊಂದರ ಸಂಚುಗಳು, ರೈತ ಹೋರಾಟ ಇಡೀ ದೇಶದ ಹೋರಾಟವೆಂಬುದನ್ನು ಹೇಳುವ ಎಲ್ಲ ಅಂಶಗಳೂ ಈ ಸಾಕ್ಷ್ಯಚಿತ್ರ ಅನಾವರಣ ಮಾಡುವ ಉದ್ದೇಶ ಮತ್ತು ಬದ್ಧತೆಯನ್ನು ಹೊಂದಿದೆ ಎಂಬುದು ಹರವು ಅವರ ವಿಶ್ವಾಸದ ಮಾತು. ಈ ಸಾಕ್ಷ್ಯಚಿತ್ರ ಪೂರ್ಣಗೊಳಿಸಲು ಅಗತ್ಯವಿರುವ ಆರ್ಥಿಕ ನೆರವಿಗೆ ಎಲ್ಲ ಸದಾಶಯವುಳ್ಳ ಸಹೃದಯರು ಮುಂದಾಗಬಹುದು. ಈ ಕೆಳಗಿನ ಹರವು ಅವರ ಬ್ಯಾಂಕ್‌ ಖಾತೆ ಮತ್ತು ಯುಪಿಐ ವಿವರಗಳಿವೆ. ಸೂಕ್ತ ರೀತಿಯಲ್ಲಿ ನೆರವಾಗುವ ಮೂಲಕ ಸಾಕ್ಷ್ಯಚಿತ್ರ ಪೂರ್ಣಗೊಳ್ಳಲು ಸಹಕರಿಸಬೇಕು.

UPI: kesari.haravoo@oksbi
Kesari Haravu: Bank details:
Kesari Harvoo
Ac. No. 30260889394
SBI, Nagarabhavi (AED) Branch
IFSC: SBIN0009050

ವರದಿ ಕೃಪೆ: ಅನ್ನದ ಋಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...