Homeಚಳವಳಿತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಎಲ್ಲೆಡೆ ತೀವ್ರ ಖಂಡನೆ

ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಎಲ್ಲೆಡೆ ತೀವ್ರ ಖಂಡನೆ

ಸಹಸ್ರಮಾನದ ಅತ್ಯಂತ ಬೌದ್ಧಿಕ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಕೆಲ ಮೂರ್ಖ ಜನರು ಅವರ ಪ್ರತಿಮೆಯನ್ನು ಕೆಡವಿದರು ಆದರೆ ಎಂದಿಗೂ ಅವರ ಉನ್ನತತೆ ಮತ್ತು ಸಿದ್ಧಾಂತವನ್ನು ಮುಟ್ಟಲಾರರು

- Advertisement -
- Advertisement -

ತಮಿಳುನಾಡಿನ ವೇದಾರಣ್ಯಪುರಂ ಎಂಬಲ್ಲಿ ಹಾಡುಹಗಲೇ ಮತೀಯವಾದಿ, ಜಾತಿವಾದಿ ದುಷ್ಕರ್ಮಿಗಳ ಗುಂಪೊಂದು ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿರುವ, ಆ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದೆ. ಅಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಕೃತ್ಯಕ್ಕೆ ರಾಷ್ಟ್ರಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.

ಪ್ರತಿ ಬಾರಿಯೂ ಈ ರೀತಿಯ ಘಟನೆ ಸಂಭವಿಸಿದಾಗ, ನಾವು ಡಾ. ಅಂಬೇಡ್ಕರ್ ಅವರ ಮುನ್ನೋಟವನ್ನೇ ಕೊಲ್ಲುತ್ತಿದ್ದೇವೆ. ಇದು ಕೇವಲ ಅವರ ಪ್ರತಿಮೆಯ ಮೇಲಿನ ಆಕ್ರಮಣವಲ್ಲ, ಜಾತಿ, ವರ್ಗ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಪುರುಷರು ಮತ್ತು ಮಹಿಳೆಯರು ಸಮಾನರು ಎಂಬ ಅವರ ತತ್ವಗಳ ಮೇಲಿನ ಆಕ್ರಮಣವಾಗಿದೆ ಎಂದು ದಲಿತ ಹೋರಾಟಗಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಂಎನ್ಎಂ ಪಕ್ಷದ ಮುಖ್ಯಸ್ಥ ಮತ್ತು ಚಿತ್ರನಟ ಕಮಲ್ ಹಾಸನ್ ರವರು “ದೇಶವನ್ನು ವಿಭಜಿಸುವ ಮತ್ತು ಯಾಜಮಾನ್ಯ ಸ್ಥಾಪಿಸುವ ಶಕ್ತಿಗಳು  ಈ ಘಟನೆಗೆ ಕಾರಣವಾಗಿದ್ದಾರೆ” ಎಂದು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿಯ ನಂತರ, ಈಗ ತಮಿಳುನಾಡಿನಲ್ಲಿ ದಲಿತ ಭಾವನೆಗಳಿಗೆ ಧಕ್ಕೆಯಾಗಿದೆ. ರಾಷ್ಟ್ರ ವಿರೋಧಿ ಗೂಂಡಾಗಳು ಅಂಬೇಡ್ಕರ್ ಪ್ರತಿಮೆಯನ್ನು ಕೆಡವಿದ್ದಾರೆ. ಇದು ನಾವು ಬೆಳೆದ ಭಾರತವಲ್ಲ. ದಯವಿಟ್ಟು ನಮ್ಮ ಸಹೋದರ ಮತ್ತು ಸಹೋದರಿಯರ ಮೇಲಿನ ದ್ವೇಷದ ಅಪರಾಧವನ್ನು ನಿಲ್ಲಿಸಿ ಎಂದು ಎನ್.ಎಸ್.ಯು.ಐ ನ ರಾಷ್ಟ್ರೀಯ ಕಾರ್ಯದರ್ಶಿ ವರ್ಧನ್ ಯಾದವ್ ಮನವಿ ಮಾಡಿದ್ದಾರೆ.

ಒಬ್ಬ ಅಂಬೇಡ್ಕರ್ ಅವರನ್ನು ಅವಮಾನಿಸಿದರೆ, ಸಾವಿರ ಅಂಬೇಡ್ಕರ್ ರವರು ಹುಟ್ಟಿಬರಲಿದ್ದಾರೆ ಎಂದು ವಂಚಿತ್ ಬಹುಜನ್ ಅಘಾಡಿಯ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಮಾಡಲಾಗಿದೆ. ಇದೇ ಘೋಷಣೆಯನ್ನು ಸಾವಿರಾರು ಜನರು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ಸಹಸ್ರಮಾನದ ಅತ್ಯಂತ ಬೌದ್ಧಿಕ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಕೆಲ ಮೂರ್ಖ ಜನರು ಅವರ ಪ್ರತಿಮೆಯನ್ನು ಕೆಡವಿದರು ಆದರೆ ಎಂದಿಗೂ ಅವರ ಉನ್ನತತೆ ಮತ್ತು ಸಿದ್ಧಾಂತವನ್ನು ಮುಟ್ಟಲಾರರು ಎಂದು ಸರ್ವೇಶ್ ಬಾಬು ಎಂಬುವವರು ಟ್ವೀಟ್ ಮಾಡಿದ್ದಾರೆ.

ಘಟನೆಯ ಸ್ಥಳದಲ್ಲಿ ನಿನ್ನೆಯೇ ಅಂಬೇಡ್ಕರ್ ಪ್ರತಿಮೆಯ ಮರುನಿರ್ಮಾಣ ಮಾಡುವ ಕಾರ್ಯ ಮುಗಿದಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ಅಂಬೇಡ್ಕರ್ ಅವರ ಆದರ್ಶಗಳನ್ನು ತತ್ವಗಳನ್ನು. ಅವರು ವಿದ್ಯಾ. ಪದವಿ ಕಲಿತಷ್ಠು. ಆ ಮುರ್ಖ ರಿಗೆ. ಓದಲಿಕಾಗಲ್ಲ. ಅವರ ಜ್ಞಾನ ಮತ್ತು ವ್ಯಕ್ತಿತ್ವ ಹಾಗೆ ಆ ಮುರ್ಖ ರಿಗೆ ಬೆಳೆಯಲ್ಲಿ ಕ್ಕಾಗಲ್ಲ.

    • ಅಂಬೇಡ್ಕರ್ ಈ ದೇಶದ ನಿಜವಾದ ದೇವರು.
      ದೇವರ ಮೂರ್ತಿಯನ್ನು ಕೆಡಿಸುವವರು ಸುಟ್ಟುಹೋಗುತಾರೆ. ಜೈಭೀಮ್

  2. ನಾವು ಬಹಜನರು ಸುಮ್ಮನೆ ಇದ್ದೇವೆ ಎಂದರೆ ಅದಕ್ಕೆ ಒಂದು ಅರ್ಥ ಇದೆ ಯಾಕೆಂದರೆ ನಮ್ಮ ಒಳಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಶಾಂತಿ ನೆಲೆಸಿದೆ ಹಾಗಾಗಿ ಅದನ್ನು ಬಿಟ್ಟು ನಿಂತರೆ ನಮ್ಮ ದೇಶದಲ್ಲಿ ರಕ್ತದೋಕುಳಿ ಆಗುತ್ತೆ. ನಮೋ ಬುದ್ಧಾಯಾ.

  3. ಅಜ್ಞಾನದ ಅವಿವೇಕಿಗಳು
    ಬೀದಿಯಲ್ಲಿ ಹುಟ್ಟಿದ ಬಿಕಾರಿ ಮಕ್ಳೇ…
    ನೀವು ಅಂಬೇಡ್ಕರ್ ರವರ ಮೂರ್ತಿಗೆ ಅವಮಾನ ಮಾಡಿರಬಹುದು, ಆದ್ರೆ ಅವರ ಸಮತೆಯ ರಾಜ್ಯದ ನಿರ್ಮಾಣದ ಕಲ್ಪನೆ ಚಿಂತನೆಗಳು ವಿಚಾರಕ್ಕಲ್ಲ.ನೀವು ಏನುಮಾಡಿದರೂ,ಅದು ನಿಮ್ಮ ಅಂತ್ಯದ ವನವಾಸ
    ಈ ದೇಶದಲ್ಲಿ ಸಾವಿರಾರೂ ಅಂಬೇಡ್ಕರ್ ರವರು ಇದ್ದಾರೆ ಅವ್ರು ನಿಮ್ಮನ್ನು ಸುಮ್ನೆ ಬಿಡಲ್ಲ

  4. ಅಂಬೇಡ್ಕರ್ ಅವರ ಆದರ್ಶಗಳನ್ನು ತತ್ವಗಳನ್ನು. ಅವರು ವಿದ್ಯಾ. ಪದವಿ ಕಲಿತಷ್ಠು. ಆ ಮುರ್ಖ ರಿಗೆ. ಓದಲಿಕಾಗಲ್ಲ. ಅವರ ಜ್ಞಾನ ಮತ್ತು ವ್ಯಕ್ತಿತ್ವ ಹಾಗೆ ಆ ಮುರ್ಖ ರಿಗೆ ಬೆಳೆಯಲ್ಲಿ ಕ್ಕಾಗಲ್ಲ. ನಾವು ಬಹಜನರು ಸುಮ್ಮನೆ ಇದ್ದೇವೆ ಎಂದರೆ ಅದಕ್ಕೆ ಒಂದು ಅರ್ಥ ಇದೆ ಯಾಕೆಂದರೆ ನಮ್ಮ ಒಳಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಶಾಂತಿ ನೆಲೆಸಿದೆ ಹಾಗಾಗಿ ಅದನ್ನು ಬಿಟ್ಟು ನಿಂತರೆ ನಮ್ಮ ದೇಶದಲ್ಲಿ ರಕ್ತದೋಕುಳಿ ಆಗುತ್ತೆ.
    ಜೈಭೀಮ್

  5. ನಮ್ಮ ಬಹುಜನರಲ್ಲಿ ಕಡಿಮೆ ಇದ್ದ ಜಾಗೃತಿ, ನಮ್ಮತನವನ್ನು ನೀವೇ ಎಚ್ಚರಿಸುತ್ತಿದ್ದೀರಿ… ಇದು ಒಳ್ಳೆಯ ಲಕ್ಷಣವೆ.. ಆದರೆ ಸಂವಿಧಾನ ವಿರೋಧಿಗಳಿಗೆ ಮತ್ತು ಅಸಮಾನತೆಯ ಪ್ರತಿಪಾದಕರಿಗೆ ಪಾಠ ಕಲಿಸುವ ಹಾಗೆ ನೀವೆ ಮಾಡ್ತಿದ್ದೀರ…
    *ಶಾಂತಿ ಪಾಲನೆಯಲ್ಲಿ ಬುದ್ಧನ ತಾಳ್ಮೆ ಇದೆ ಆದರೆ ಅಶೋಕನ ಶೌರ್ಯ ನಮ್ಮಲ್ಲಿ ಇನ್ನೂ ಹಾಗೇ ಇದೆ…* ಅಂದು ಅಶೋಕ್ ಬಿಸಾಡಿದ ಕತ್ತಿ ತೆಗೆದುಕೊಂಡರೆ ಆಗೋದು ಎರಡೇ…
    ಎರಡನೆ ಕಳಿಂಗ ಯುದ್ಧ ಅಥವಾ ಎರಡನೇ ಕೊರೆಗಾಂವ್ ಯುದ್ಧ… ಆಯ್ಕೆ ನಿಮ್ಮದೆ…

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...