Homeಚಳವಳಿತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಎಲ್ಲೆಡೆ ತೀವ್ರ ಖಂಡನೆ

ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ: ಎಲ್ಲೆಡೆ ತೀವ್ರ ಖಂಡನೆ

ಸಹಸ್ರಮಾನದ ಅತ್ಯಂತ ಬೌದ್ಧಿಕ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಕೆಲ ಮೂರ್ಖ ಜನರು ಅವರ ಪ್ರತಿಮೆಯನ್ನು ಕೆಡವಿದರು ಆದರೆ ಎಂದಿಗೂ ಅವರ ಉನ್ನತತೆ ಮತ್ತು ಸಿದ್ಧಾಂತವನ್ನು ಮುಟ್ಟಲಾರರು

- Advertisement -
- Advertisement -

ತಮಿಳುನಾಡಿನ ವೇದಾರಣ್ಯಪುರಂ ಎಂಬಲ್ಲಿ ಹಾಡುಹಗಲೇ ಮತೀಯವಾದಿ, ಜಾತಿವಾದಿ ದುಷ್ಕರ್ಮಿಗಳ ಗುಂಪೊಂದು ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿರುವ, ಆ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದೆ. ಅಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಕೃತ್ಯಕ್ಕೆ ರಾಷ್ಟ್ರಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.

ಪ್ರತಿ ಬಾರಿಯೂ ಈ ರೀತಿಯ ಘಟನೆ ಸಂಭವಿಸಿದಾಗ, ನಾವು ಡಾ. ಅಂಬೇಡ್ಕರ್ ಅವರ ಮುನ್ನೋಟವನ್ನೇ ಕೊಲ್ಲುತ್ತಿದ್ದೇವೆ. ಇದು ಕೇವಲ ಅವರ ಪ್ರತಿಮೆಯ ಮೇಲಿನ ಆಕ್ರಮಣವಲ್ಲ, ಜಾತಿ, ವರ್ಗ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಪುರುಷರು ಮತ್ತು ಮಹಿಳೆಯರು ಸಮಾನರು ಎಂಬ ಅವರ ತತ್ವಗಳ ಮೇಲಿನ ಆಕ್ರಮಣವಾಗಿದೆ ಎಂದು ದಲಿತ ಹೋರಾಟಗಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಂಎನ್ಎಂ ಪಕ್ಷದ ಮುಖ್ಯಸ್ಥ ಮತ್ತು ಚಿತ್ರನಟ ಕಮಲ್ ಹಾಸನ್ ರವರು “ದೇಶವನ್ನು ವಿಭಜಿಸುವ ಮತ್ತು ಯಾಜಮಾನ್ಯ ಸ್ಥಾಪಿಸುವ ಶಕ್ತಿಗಳು  ಈ ಘಟನೆಗೆ ಕಾರಣವಾಗಿದ್ದಾರೆ” ಎಂದು ತೀವ್ರವಾಗಿ ಖಂಡಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೆಹಲಿಯ ನಂತರ, ಈಗ ತಮಿಳುನಾಡಿನಲ್ಲಿ ದಲಿತ ಭಾವನೆಗಳಿಗೆ ಧಕ್ಕೆಯಾಗಿದೆ. ರಾಷ್ಟ್ರ ವಿರೋಧಿ ಗೂಂಡಾಗಳು ಅಂಬೇಡ್ಕರ್ ಪ್ರತಿಮೆಯನ್ನು ಕೆಡವಿದ್ದಾರೆ. ಇದು ನಾವು ಬೆಳೆದ ಭಾರತವಲ್ಲ. ದಯವಿಟ್ಟು ನಮ್ಮ ಸಹೋದರ ಮತ್ತು ಸಹೋದರಿಯರ ಮೇಲಿನ ದ್ವೇಷದ ಅಪರಾಧವನ್ನು ನಿಲ್ಲಿಸಿ ಎಂದು ಎನ್.ಎಸ್.ಯು.ಐ ನ ರಾಷ್ಟ್ರೀಯ ಕಾರ್ಯದರ್ಶಿ ವರ್ಧನ್ ಯಾದವ್ ಮನವಿ ಮಾಡಿದ್ದಾರೆ.

ಒಬ್ಬ ಅಂಬೇಡ್ಕರ್ ಅವರನ್ನು ಅವಮಾನಿಸಿದರೆ, ಸಾವಿರ ಅಂಬೇಡ್ಕರ್ ರವರು ಹುಟ್ಟಿಬರಲಿದ್ದಾರೆ ಎಂದು ವಂಚಿತ್ ಬಹುಜನ್ ಅಘಾಡಿಯ ಟ್ವಿಟ್ಟರ್ ಅಕೌಂಟ್ ನಿಂದ ಟ್ವೀಟ್ ಮಾಡಲಾಗಿದೆ. ಇದೇ ಘೋಷಣೆಯನ್ನು ಸಾವಿರಾರು ಜನರು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ಸಹಸ್ರಮಾನದ ಅತ್ಯಂತ ಬೌದ್ಧಿಕ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ. ಕೆಲ ಮೂರ್ಖ ಜನರು ಅವರ ಪ್ರತಿಮೆಯನ್ನು ಕೆಡವಿದರು ಆದರೆ ಎಂದಿಗೂ ಅವರ ಉನ್ನತತೆ ಮತ್ತು ಸಿದ್ಧಾಂತವನ್ನು ಮುಟ್ಟಲಾರರು ಎಂದು ಸರ್ವೇಶ್ ಬಾಬು ಎಂಬುವವರು ಟ್ವೀಟ್ ಮಾಡಿದ್ದಾರೆ.

ಘಟನೆಯ ಸ್ಥಳದಲ್ಲಿ ನಿನ್ನೆಯೇ ಅಂಬೇಡ್ಕರ್ ಪ್ರತಿಮೆಯ ಮರುನಿರ್ಮಾಣ ಮಾಡುವ ಕಾರ್ಯ ಮುಗಿದಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ಅಂಬೇಡ್ಕರ್ ಅವರ ಆದರ್ಶಗಳನ್ನು ತತ್ವಗಳನ್ನು. ಅವರು ವಿದ್ಯಾ. ಪದವಿ ಕಲಿತಷ್ಠು. ಆ ಮುರ್ಖ ರಿಗೆ. ಓದಲಿಕಾಗಲ್ಲ. ಅವರ ಜ್ಞಾನ ಮತ್ತು ವ್ಯಕ್ತಿತ್ವ ಹಾಗೆ ಆ ಮುರ್ಖ ರಿಗೆ ಬೆಳೆಯಲ್ಲಿ ಕ್ಕಾಗಲ್ಲ.

    • ಅಂಬೇಡ್ಕರ್ ಈ ದೇಶದ ನಿಜವಾದ ದೇವರು.
      ದೇವರ ಮೂರ್ತಿಯನ್ನು ಕೆಡಿಸುವವರು ಸುಟ್ಟುಹೋಗುತಾರೆ. ಜೈಭೀಮ್

  2. ನಾವು ಬಹಜನರು ಸುಮ್ಮನೆ ಇದ್ದೇವೆ ಎಂದರೆ ಅದಕ್ಕೆ ಒಂದು ಅರ್ಥ ಇದೆ ಯಾಕೆಂದರೆ ನಮ್ಮ ಒಳಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಶಾಂತಿ ನೆಲೆಸಿದೆ ಹಾಗಾಗಿ ಅದನ್ನು ಬಿಟ್ಟು ನಿಂತರೆ ನಮ್ಮ ದೇಶದಲ್ಲಿ ರಕ್ತದೋಕುಳಿ ಆಗುತ್ತೆ. ನಮೋ ಬುದ್ಧಾಯಾ.

  3. ಅಜ್ಞಾನದ ಅವಿವೇಕಿಗಳು
    ಬೀದಿಯಲ್ಲಿ ಹುಟ್ಟಿದ ಬಿಕಾರಿ ಮಕ್ಳೇ…
    ನೀವು ಅಂಬೇಡ್ಕರ್ ರವರ ಮೂರ್ತಿಗೆ ಅವಮಾನ ಮಾಡಿರಬಹುದು, ಆದ್ರೆ ಅವರ ಸಮತೆಯ ರಾಜ್ಯದ ನಿರ್ಮಾಣದ ಕಲ್ಪನೆ ಚಿಂತನೆಗಳು ವಿಚಾರಕ್ಕಲ್ಲ.ನೀವು ಏನುಮಾಡಿದರೂ,ಅದು ನಿಮ್ಮ ಅಂತ್ಯದ ವನವಾಸ
    ಈ ದೇಶದಲ್ಲಿ ಸಾವಿರಾರೂ ಅಂಬೇಡ್ಕರ್ ರವರು ಇದ್ದಾರೆ ಅವ್ರು ನಿಮ್ಮನ್ನು ಸುಮ್ನೆ ಬಿಡಲ್ಲ

  4. ಅಂಬೇಡ್ಕರ್ ಅವರ ಆದರ್ಶಗಳನ್ನು ತತ್ವಗಳನ್ನು. ಅವರು ವಿದ್ಯಾ. ಪದವಿ ಕಲಿತಷ್ಠು. ಆ ಮುರ್ಖ ರಿಗೆ. ಓದಲಿಕಾಗಲ್ಲ. ಅವರ ಜ್ಞಾನ ಮತ್ತು ವ್ಯಕ್ತಿತ್ವ ಹಾಗೆ ಆ ಮುರ್ಖ ರಿಗೆ ಬೆಳೆಯಲ್ಲಿ ಕ್ಕಾಗಲ್ಲ. ನಾವು ಬಹಜನರು ಸುಮ್ಮನೆ ಇದ್ದೇವೆ ಎಂದರೆ ಅದಕ್ಕೆ ಒಂದು ಅರ್ಥ ಇದೆ ಯಾಕೆಂದರೆ ನಮ್ಮ ಒಳಗೆ ಬುದ್ಧ,ಬಸವ,ಅಂಬೇಡ್ಕರ್ ರವರ ಶಾಂತಿ ನೆಲೆಸಿದೆ ಹಾಗಾಗಿ ಅದನ್ನು ಬಿಟ್ಟು ನಿಂತರೆ ನಮ್ಮ ದೇಶದಲ್ಲಿ ರಕ್ತದೋಕುಳಿ ಆಗುತ್ತೆ.
    ಜೈಭೀಮ್

  5. ನಮ್ಮ ಬಹುಜನರಲ್ಲಿ ಕಡಿಮೆ ಇದ್ದ ಜಾಗೃತಿ, ನಮ್ಮತನವನ್ನು ನೀವೇ ಎಚ್ಚರಿಸುತ್ತಿದ್ದೀರಿ… ಇದು ಒಳ್ಳೆಯ ಲಕ್ಷಣವೆ.. ಆದರೆ ಸಂವಿಧಾನ ವಿರೋಧಿಗಳಿಗೆ ಮತ್ತು ಅಸಮಾನತೆಯ ಪ್ರತಿಪಾದಕರಿಗೆ ಪಾಠ ಕಲಿಸುವ ಹಾಗೆ ನೀವೆ ಮಾಡ್ತಿದ್ದೀರ…
    *ಶಾಂತಿ ಪಾಲನೆಯಲ್ಲಿ ಬುದ್ಧನ ತಾಳ್ಮೆ ಇದೆ ಆದರೆ ಅಶೋಕನ ಶೌರ್ಯ ನಮ್ಮಲ್ಲಿ ಇನ್ನೂ ಹಾಗೇ ಇದೆ…* ಅಂದು ಅಶೋಕ್ ಬಿಸಾಡಿದ ಕತ್ತಿ ತೆಗೆದುಕೊಂಡರೆ ಆಗೋದು ಎರಡೇ…
    ಎರಡನೆ ಕಳಿಂಗ ಯುದ್ಧ ಅಥವಾ ಎರಡನೇ ಕೊರೆಗಾಂವ್ ಯುದ್ಧ… ಆಯ್ಕೆ ನಿಮ್ಮದೆ…

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...