Homeಅಂತರಾಷ್ಟ್ರೀಯIMF ನವ ಉದಾರವಾದಿ ಅಜೆಂಡಾ ವಿರುದ್ಧ ಹೋರಾಡಿ ಗೆದ್ದ ಈಕ್ವಡೋರ್‌ನ ಮೂಲನಿವಾಸಿಗಳು

IMF ನವ ಉದಾರವಾದಿ ಅಜೆಂಡಾ ವಿರುದ್ಧ ಹೋರಾಡಿ ಗೆದ್ದ ಈಕ್ವಡೋರ್‌ನ ಮೂಲನಿವಾಸಿಗಳು

ದಕ್ಷಿಣ ಅಮೇರಿಕಾ ಖಂಡದ ವಾಯವ್ಯ ಕರಾವಳಿಯಲ್ಲಿರುವ ಪುಟ್ಟ ರಾಷ್ಟ್ರ ಈಕ್ವಡೋರ್‌ನ ಮೂಲನಿವಾಸಿ ಜನರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಜೊತೆ ಸೇರಿ ನಡೆಸಿದ ಎರಡು ವಾರಗಳ ಉಗ್ರ ಪ್ರತಿಭಟನೆಯ ಬಳಿಕ ಸರಕಾರವನ್ನು ಮಣಿಸಿ, ಐಎಂಎಫ್ ಹೇರಿದ್ದ ಆರ್ಥಿಕ 'ಸುಧಾರಣೆ'ಗಳನ್ನು ತಿರಸ್ಕರಿಸುವಂತೆ ಮಾಡಿದ್ದಾರೆ.

- Advertisement -
- Advertisement -

ಮೂಲ: ಸ್ವಾತಿ ಶುಕ್ಲಾ

ಅನುವಾದ: ನಿಖಿಲ್ ಕೋಲ್ಪೆ

ಈಕ್ವಡೋರ್ ರಾಜಧಾನಿ ಕ್ವಿಟೋ ಕಳೆದ ಎರಡು ವಾರಗಳಿಂದ ರಣರಂಗವಾಗಿಬಿಟ್ಟಿತ್ತು. ಕಾರಣವೆಂದರೆ, ಇಂಧನ ಸಬ್ಸಿಡಿಯ ಹಿಂತೆಗೆತವನ್ನು ಮೂಲ ನಿವಾಸಿ ಜನರು ಖಂಡತುಂಡವಾಗಿ ಪ್ರತಿಭಟಿಸಿದ್ದರು. ಇಂಧನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿರುವುದಾಗಿ ಅಧ್ಯಕ್ಷ ಲೆನಿನ್ ಮೊರೆನೊ ಘೋಷಿಸಿದ ಬೆನ್ನಲ್ಲೇ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದೀಗ ಪ್ರತಿಭಟನಕಾರರಿಗೆ ಮಣಿದಿರುವ ಸರಕಾರ, ಐಎಂಎಫ್ ಹೇರಿದ್ದ ಪ್ಯಾಕೇಜನ್ನು ಹಿಂತೆಗೆದುಕೊಂಡಿದೆ.

ಮೊರೆನೊ ಸರಕಾರವು ಪ್ರಸ್ತಾಪಿಸಿದ್ದ ಹಲವಾರು ನವ ‘ಉದಾರವಾದಿ’ ಕ್ರಮಗಳಲ್ಲಿ ತೈಲ ಸಬ್ಸಿಡಿ ಹಿಂತೆಗೆತವೂ ಒಂದಾಗಿತ್ತು. ಮೂಲನಿವಾಸಿ ಗುಂಪುಗಳು ದೇಶದ ಅತ್ಯಂತ ದೊಡ್ಡ ಕಾರ್ಮಿಕ ಸಂಘಟನೆಗಳು ಹಾಗೂ ವಿದ್ಯಾರ್ಥಿ ಚಳವಳಿಗಳ ಜೊತೆ ಸೇರಿ ರಾಷ್ಟ್ರೀಯ ಮುಷ್ಕರವನ್ನು ಆಯೋಜಿಸಿದ್ದು, ಮಿಲಿಟರಿ ಮತ್ತು ಪೊಲೀಸ್ ಪಡೆಗಳು ಅತ್ಯಂತ ದಮನಕಾರಿಯಗಿ ಪ್ರತಿಭಟನೆಯನ್ನು ಬಗ್ಗುಬಡಿಯಲು ಯತ್ನಿಸಿದ್ದವು.

ಮೊದಲಾಗಿ ಇಂಧನ ಸಬ್ಸಿಡಿ ಹಿಂತೆಗೆತದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಮೂಲನಿವಾಸಿ ಗುಂಪುಗಳ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮತ್ತು ಅದರ ಧಣಿಗಳು ಹೇರಿರುವ ‘ನವ ಉದಾರವಾದಿ’ ಮಾದರಿಯ ವಿರುದ್ಧದ ಪ್ರತಿಭಟನೆಯಾಗಿ ಪರಿವರ್ತನೆಗೊಂಡು ಉಗ್ರರೂಪ ತಳೆಯಿತು.

ಲೆನಿನ್ ಮೊರೆನೊ

ಮಾರ್ಚ್ 2019ರಲ್ಲಿ ಐಎಂಎಫ್ ಹಲವು ಶರತ್ತುಗಳೊಂದಿಗೆ ಈಕ್ವಡೋರ್‌ಗೆ 4.2 ಬಿಲಿಯನ್ (420 ಕೋಟಿ) ಡಾಲರ್‌ಗಳ ಸಾಲ ನೀಡಿತ್ತು. ಇಂತಹ ಶರತ್ತುಗಳಲ್ಲಿ ಹಲವು ಅಂತರರಾಷ್ಟ್ರೀಯ ಹಗರಣಗಳನ್ನು ಬಯಲು ಮಾಡಿದ ವೀಕೀಲೀಕ್ಸ್ ಸಂಪಾದಕ ಜೂಲಿಯನ್ ಅಸ್ಸಾಂಜೆಯನ್ನು ಯುಎಸ್‌ಎಗೆ ಬಿಟ್ಟುಕೊಡಬೇಕು ಎಂಬುದೂ ಒಂದಾಗಿತ್ತು.

“ನಾವು ಈಕ್ವಡೋರ್‌ಗೆ ನೆರವಾಗಲು ಇಲ್ಲಿದ್ದೇವೆ. ನಮ್ಮ ಉದ್ದೇಶ ಎಂದರೆ, ಆರ್ಥಿಕತೆಯನ್ನು ಆಧುನಿಕರಣಗೊಳಿಸಲು ಈಕ್ವಡೋರಿಗೆ ನೆರವಾಗಿ, ಸುದೃಢ, ಸುಸ್ಥಿರ ಮತ್ತು ನ್ಯಾಯಸಮ್ಮತ ಅಭಿವೃದ್ಧಿಗೆ ದಾರಿಮಾಡಿಕೊಡುವುದು” ಎಂದು ಐಎಂಎಫ್ ಆಡಳಿತ ಮಂಡಳಿ ತನ್ನ ಎಂದಿನ ಬಂಡವಾಳಶಾಹಿ ಶೈಲಿಯಲ್ಲಿ ಬುರುಡೆ ಬಿಟ್ಟಿತ್ತು. ಇದರ ಬೆನ್ನಲ್ಲೇ ಹಲವಾರು “ಸಂಯಮದ” “ಸುಧಾರಣಾ” ಕ್ರಮಗಳನ್ನು ಹೇರಲಾಗಿತ್ತು.

ಐಎಂಎಫ್ ಜೊತೆ ಕಳೆದ ವರ್ಷ ನಡೆಸಿದ ಒಪ್ಪಂದಕ್ಕೆ ಅನುಗುಣವಾಗಿ ಮೊರೆನೊ ಸರಕಾರ ಸೆಪ್ಟೆಂಬರ್ 30ರಂದು ಪೆಟ್ರೋಲ್ ಮತ್ತು ಡೀಸೆಲ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿತ್ತು. ಇದರಿಂದ ಸಹಜವಾಗಿ ಇವೆರಡರ ಬೆಲೆಗಳು ಗಗನಕ್ಕೇರಿದ್ದವು.

ಇಂಧನ ಸಬ್ಸಿಡಿ ಹಿಂತೆಗೆತದ ಅರ್ಥವೆಂದರೆ, ಬಡವರು ಮತ್ತು ದುಡಿಯುವ ವರ್ಗದವರು ಇಂಧನಕ್ಕೆ ಹೆಚ್ಚು ಬೆಲೆ ತೆರಬೇಕಾದರೆ, ಖಾಸಗಿ ಇಂಧನ ಸಂಸ್ಥೆಗಳು ಹೆಚ್ಚು ಲಾಭವನ್ನು ದೋಚಬಹುದು.

“ಸರಕಾರ ಮಾಡಿರುವುದು ಏನೆಂದರೆ, ದೊಡ್ಡ ಬ್ಯಾಂಕುಗಳು, ಬಂಡವಾಳಶಾಹಿಗಳಿಗೆ ಬಹುಮಾನ ನೀಡಿ, ಬಡ ಈಕ್ವಡೋರಿಯನ್ನರಿಗೆ ಶಿಕ್ಷೆ ನೀಡಿರುವುದು” ಎಂದು ಕಾರ್ಮಿಕರ ಸಂಘಟನೆಗಳ ಒಕ್ಕೂಟವಾಗಿರುವ ವರ್ಕರ್ಸ್ ಯುನೈಟೆಡ್ ಫ್ರಂಟ್‌ನ ಮುಖ್ಯಸ್ಥ ಮೆಸಿಯಾಸ್ ಟಟಮುಯೆಸ್ ಹೇಳಿದ್ದಾರೆ.

ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಏಕೆಂದರೆ, ಇಂಧನ ಬೆಲೆ ಏರಿಕೆಯಿಂದ ಆಹಾರ ಮತ್ತು ಸಾರಿಗೆ ದರಗಳು ಗಗನಕ್ಕೇರಿದ್ದು, ಮೂಲ ನಿವಾಸಿ ಜನರು ಎಲ್ಲರಿಗಿಂತಲೂ ಹೆಚ್ಚು ಬಾಧಿತರಾಗಿದ್ದಾರೆ ಎಂದು ಪ್ರತಿಭಟನೆಯ ನಾಯಕರು ಹೇಳುತ್ತಾರೆ.

ಪ್ರತಿಭಟನಕಾರರು ಅಧ್ಯಕ್ಷೀಯ ಅರಮನೆಯ ಸುತ್ತಲಿನ ತಡೆಗಳನ್ನು ಭೇದಿಸಿ ಮುನ್ನುಗ್ಗುವ ವಿಫಲ ಪ್ರಯತ್ನ ನಡೆಸಿದ ಬಳಿಕ ಹೆದರಿದ ಮೊರೆನೊ, ತನ್ನ ಸರಕಾರವನ್ನು, ಆಡಳಿತವನ್ನು ಅಕ್ಟೋಬರ್ 7ರಂದು ಬಂದರು ನಗರ ಗ್ವಾಯಾಗುಲಿಗೆ ಸ್ಥಳಾಂತರಿಸಬೇಕಾಗಿ ಬಂದಿತ್ತು.

ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಮೇ, 2017ರಂದು ಅಧಿಕಾರ ತೊರೆದ ಮೇಲೆ ಮೊರೆನೊ ಸರಕಾರ ದೇಶವನ್ನು ಬಲಪಂಥದತ್ತ ಒಯ್ಯುತ್ತಿದೆ. ಈಗ ಮೊರೆನೊ, ಉದ್ಯಮಿಗಳು ಮತ್ತು ಸೇನೆಯ ಬೆಂಬಲ ಹೊಂದಿದ್ದರೂ, ಅವರ ಜನಪ್ರಿಯತೆ 2017ರಲ್ಲಿದ್ದ 70 ಶೇಕಡಾದಿಂದ 30 ಶೇಕಡಾಕ್ಕೆ ಕುಸಿದಿದೆ. ಮೊರೆನೊ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಅಧ್ಯಕ್ಷ ರಫಾಯೆಲ್ ಕೊರ್ರಿಯಾ ಸರಕಾರ ತಂದಿದ್ದ ಹಲವು ಪ್ರಗತಿಪರ ಕ್ರಮಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಪ್ರತಿಭಟನೆಯು ಎರಡನೇ ವಾರ ಪ್ರವೇಶಿಸುತ್ತಿದ್ದಂತೆ, ಮೂಲ ನಿವಾಸಿ ಪ್ರತಿಭಟನಕಾರರು ತಾವು ವಶಕ್ಕೆ ತೆಗೆದುಕೊಂಡ ಕೆಲವು ಪೊಲೀಸರನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಮೊರೆನೊ ಸರಕಾರಕ್ಕೆ ತಾವು ಅಂಜುವುದಿಲ್ಲ ಎಂಬ ದಿಟ್ಟ ಸಂದೇಶ ನೀಡಿದ್ದರು.

ಮೂಲನಿವಾಸಿಗಳ ಪ್ರತಿಭಟನೆಗಳು 1997ರಲ್ಲಿ ಅಬ್ದಲಾ ಬುಕಾರಮ್, 2000ದಲ್ಲಿ ಜಮಿಲ್ ಮಹುವದ್ ಮತ್ತು 2005ರಲ್ಲಿ ಲೂಸಿಯೋ ಗುಟಿಯೆರೆಝ್ ಸಹಿತ ಹಲವಾರು ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ಇದೀಗ ಪ್ರತಿಭಟನೆಗೆ ಮಣಿದಿರುವ ಮೊರೆನೊ ಸರಕಾರವು ಮೂಲನಿವಾಸಿಗಳೊಂದಿಗೆ ಬುಧವಾರ ಒಪ್ಪಂದಕ್ಕೆ ಬಂದಿದ್ದು, ಐಎಂಎಫ್ ಹೇರಿಕೆಯ ‘ಸುಧಾರಣಾ ಕ್ರಮ’ಗಳನ್ನು ಹಿಂತೆದುಕೊಳ್ಳಲು ಒಪ್ಪಿದೆ. ಇದರೊಂದಿಗೆ ಆರ್ಥಿಕತೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ, ಏಳು ಜನರ ಸಾವಿಗೆ ಕಾರಣವಾದ ಹೆಚ್ಚುಕಡಿಮೆ ಎರಡು ವಾರ ಕಾಲದ ಪ್ರತಿಭಟನೆ ಕೊನೆಗೊಳ್ಳಲಿದೆ.

ಒಪ್ಪಂದದ ಪ್ರಕಾರ, ತೈಲ ಬೆಲೆ ತೀವ್ರ ಏರಿಕೆಗೆ ಕಾರಣವಾದ ಡಿಕ್ರಿ 883 ಎಂದು ಕರೆಯಲ್ಪಡುವ ಐಎಂಎಫ್ ಪ್ರೇರಿತ ಪ್ಯಾಕೇಜನ್ನು ಮೊರೆನೊ ಸರಕಾರ ಹಿಂತೆಗೆದುಕೊಳ್ಳಲಿದೆ. ಇದಕ್ಕೆ ಬದಲಾಗಿ, ಪ್ರತಿಭಟನೆ ಮತ್ತು ರಸ್ತೆ ತಡೆಯನ್ನು ಹಿಂತೆಗೆದುಕೊಳ್ಳುವಂತೆ ಮೂಲ ನಿವಾಸಿ ಗುಂಪುಗಳ ನಾಯಕರು ತಮ್ಮ ಬೆಂಬಲಿಗರಿಗೆ ಕರೆ ನೀಡಲಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...