Homeಚಳವಳಿಬಹುಮುಖಿ ದಾಳಿಯನ್ನು ಎದುರಿಸುವುದು ಸಾಧ್ಯವೇ?...

ಬಹುಮುಖಿ ದಾಳಿಯನ್ನು ಎದುರಿಸುವುದು ಸಾಧ್ಯವೇ?…

- Advertisement -
- Advertisement -

ಪತ್ರಿಕೆಯಲ್ಲಿ ಈ ದಿನ ಅಥವಾ ವಾರ ನೀವು ಯಾವುದರ ಮೇಲೆ ಕೇಂದ್ರೀಕರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸುವುದು ಈ ಕಾಲದಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ ನಿಮ್ಮ ಗಮನ ಅಸಲೀ ಸಮಸ್ಯೆಯ ಮೇಲೆ ಹೋಗದಂತೆ ಮಾಡಲೆಂದೇ ಕೆಲವು ವಾಗ್ವಾದಗಳನ್ನು ತೇಲಿಬಿಟ್ಟಿರಬಹುದೆಂಬ ಅನುಮಾನ ಬಂದಿರುತ್ತದೆ. ಕೆಲವೊಮ್ಮೆ ಅವು ಕೇವಲ ವಾಗ್ವಾದಗಳಾಗಿರುವುದಿಲ್ಲ; ಯಾರದ್ದೋ ಬದುಕಿನ ಅತ್ಯಂತ ಜ್ವಲಂತ ಸಮಸ್ಯೆಯಾಗಿರುತ್ತದೆ. ಉದಾಹರಣೆಗೆ ಕಾಶ್ಮೀರ, ಎನ್‍ಆರ್‍ಸಿ ಇತ್ಯಾದಿ. ಕೆಲವು ಸಾರಿ ಅದು ಯಾರ ಬದುಕಿನ ತಕ್ಷಣದ ಕಾಡುವ ಸಮಸ್ಯೆಯೂ ಆಗಿರುವುದಿಲ್ಲ; ಆದರೆ ನಮ್ಮ ಇತಿಹಾಸದಲ್ಲಿ ಅಡಗಿರುವ ಸತ್ಯಗಳನ್ನು ಬುಡಮೇಲು ಮಾಡುವ ಕೆಲಸ ನಡೆದಿರುತ್ತದೆ. ಸಾವರ್ಕರ್‌ಗೆ ಭಾರತರತ್ನ ನೀಡುತ್ತೇವೆನ್ನುವುದನ್ನು ಬಿಜೆಪಿ ಪಕ್ಷವು ಮಹಾರಾಷ್ಟ್ರ ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಅದಕ್ಕೆ ನಿದರ್ಶನ.

ಅಸಲೀ ಸಮಸ್ಯೆ ಮತ್ತು ಹೊಸದಾಗಿ ಸೃಷ್ಟಿಸಿದ ಇಶ್ಯೂ ಎರಡನ್ನೂ ಆಯ್ದುಕೊಂಡು, ಅವುಗಳನ್ನು ಸತ್ಯದ ಮುಖಾಂತರ ಎದುರಿಸಬೇಕಾದ್ದು ನಮ್ಮ ಜವಾಬ್ದಾರಿ. ಆದರೆ, ಎರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವಂತೆ ಪರಿಸ್ಥಿತಿ ದೂಡುತ್ತದೆ. ಇದು ರಾಜಕೀಯ ಕಾರ್ಯಕರ್ತರಿಗೆ ಮಾತ್ರವಲ್ಲದೇ, ನಮ್ಮಂತಹ ಪತ್ರಿಕೆಗಳಿಗೂ ಇರುವ ಸಂದಿಗ್ಧ.

ದೇಶದ ಸಾರ್ವಭೌಮತೆಯನ್ನು ಮತ್ತಷ್ಟು ಕಿತ್ತುಕೊಳ್ಳುವ ಆರ್‍ಸಿಇಪಿ ಒಪ್ಪಂದದ ಕುರಿತು ರೈತಸಂಘಗಳು ಪ್ರತಿಭಟಿಸುತ್ತಿರುವಾಗ ಅದಕ್ಕೆ ಇಂಬು ಕೊಡುವುದು ನಮ್ಮ ಕರ್ತವ್ಯ; ಕರ್ನಾಟಕದ ಬರ-ನೆರೆ ಸಂಕಷ್ಟಕ್ಕೆ ಪರಿಹಾರವಾಗಿ 1 ಲಕ್ಷ ಕೋಟಿ ಪ್ಯಾಕೇಜ್‍ಅನ್ನು ರೈತರು ಕೇಳುತ್ತಿರುವಾಗಲೇ, ಮತ್ತೊಂದು ಮಳೆ ಇಡೀ ರಾಜ್ಯವನ್ನು ಆವರಿಸಿದೆ. ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಅಪ್ಪಳಿಸಿದೆ. ಬಿಎಸ್‍ಎನ್‍ಎಲ್‍ಅನ್ನು ಮುಳುಗಿಸುವ ಕಾಂಗ್ರೆಸ್‍ನ ಹಳೆಯ ಪ್ಲಾನ್‍ಅನ್ನು ಬಿಜೆಪಿ ಯಶಸ್ವಿ ಮಾಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಹೀಗಿರುವಾಗ ಸಿ.ಟಿ.ರವಿಯ ಮನೆಹಾಳ ಮಾತು, ಸಾವರ್ಕರ್‍ಗೆ ಭಾರತರತ್ನ ಇತ್ಯಾದಿಗಳು ನಮ್ಮನ್ನು ಬೇರೆ ಕಡೆಗೆ ಎಳೆಯುತ್ತವೆ. ಅದನ್ನು ಮುಗಿಸಿ ಬರುವ ಹೊತ್ತಿಗೆ ಬಿಎಸ್‍ಎನ್‍ಎಲ್ ಮುಳುಗಿ ರೈಲ್ವೇ ಖಾಸಗೀಕರಣದ ಮಾತು ನಡೆಯುತ್ತಿರುತ್ತದೆ. ಅದರ ಬಗ್ಗೆ ಮಾತು ಆಡುವುದು ಸಾಧ್ಯವೇ ಆಗದಂತೆ ದೇಶದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿ ‘ಗೋಡ್ಸೆ ದೇಶಭಕ್ತ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ’ ಎಂದು ಹೇಳುವ ಸಾಧ್ಯತೆ ಇರುತ್ತದೆ.

ಆ ವಾರ ನಿಮಗೆ ಲಭ್ಯವಿರುವ ಮೂರು ಪುಟಗಳಲ್ಲಿ ಗೋಡ್ಸೆಯ ಕುರಿತು ಎಷ್ಟು ಮಾತನಾಡುವಿರಿ, ರೈಲ್ವೇ ಖಾಸಗೀಕರಣದ ಕುರಿತು ಏನು ಹೇಳುವಿರಿ ಎಂಬ ಸಂದಿಗ್ಧ ಎದುರಾಗುತ್ತದೆ. ಇಂತಹ ಸಂದಿಗ್ಧದಿಂದ ಹೊರಬರುವುದು ಸಾಧ್ಯವಿಲ್ಲವೇ? ಸಂತ್ರಸ್ತರು, ಕಾಳಜಿಯುಳ್ಳವರು, ಪ್ರಜಾತಂತ್ರವಾದಿಗಳೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಅನಿಸಿಕೆ ಹೇಳಿ, ಟ್ವಿಟ್ಟರ್ ಟ್ರೆಂಡ್ ಮಾಡಿಬಿಟ್ಟರೆ ಸಾಕೇ?

ಖಂಡಿತಾ ಸಾಲದು. ಬೀದಿಯಲ್ಲಿ ಸಂತ್ರಸ್ತರು ಒಟ್ಟುಗೂಡಿ ಶಕ್ತಿಯುತವಾಗಿ ತಮ್ಮ ಅನಿಸಿಕೆಗಳನ್ನು ಮುಂದಿಡುವುದು, ಬುದ್ಧಿಜೀವಿಗಳು ಸರಿಯಾದ ಹತಾರಗಳೊಂದಿಗೆ ತಮ್ಮದೇ ಆದ ಮಾಧ್ಯಮಗಳನ್ನು ಹುಡುಕಿಕೊಂಡು ವಾಗ್ವಾದಕ್ಕಿಳಿಯುವುದು ಎರಡೂ ಆಗಬೇಕು. ಮಾಧ್ಯಮವು ಇವೆರಡಕ್ಕೂ ಸೂಕ್ತ ಅವಕಾಶ ಕಲ್ಪಿಸಿ ಅದನ್ನು ವ್ಯಾಪಕಗೊಳಿಸಬೇಕು; ಅಧಿಕಾರಸ್ಥರ ಮೇಲೆ ಒತ್ತಡ ತರಬೇಕು. ಆಗ ಪರಿಣಾಮ ಕಾಣತೊಡಗುತ್ತದೆ. ಆದರೆ, ಇಂದಿನ ಮಾಧ್ಯಮ ಇವೆರಡನ್ನೂ (ಬೀದಿಯಲ್ಲಿನ ಭಿನ್ನಮತ ಮತ್ತು ಬುದ್ಧಿಜೀವಿಗಳ ಅಭಿಮತ) ದಿಕ್ಕೆಡಿಸುವ ಕೆಲಸ ಮಾಡುತ್ತಿದೆ. ಅದರ ಫಲವಾಗಿ ಎಲ್ಲವೂ ದುರ್ಬಲವಾಗಿಬಿಟ್ಟಿವೆ. ಹಾಗಾದರೆ ದಾರಿಯೇನು? ದಾರಿಯಿಷ್ಟೇ; ಇವು ಮೂರೂ ಅಭಿನ್ನವಾಗಿ ಜೊತೆಗೂಡುವುದು. ಜೊತೆಗೂಡಿಸುವ ಕೆಲಸವನ್ನು ಮಾಧ್ಯಮ ಮಾಡಬೇಕು. ಮಿಕ್ಕೆರಡು ವಲಯಗಳು ಜೊತೆಗೂಡಿ ಮಾಧ್ಯಮವನ್ನು ಕಟ್ಟಿ ನಿಲ್ಲಿಸಬೇಕು. ಅದು ಮಾತ್ರವೇ ದಾರಿ.

ನ್ಯಾಯಪಥ ಮತ್ತು ನಮ್ಮ ವೆಬ್‍ಸೈಟ್‍ಗಳು ಮಾಡಹೊರಟಿರುವುದು ಅದನ್ನೇ. ಇದನ್ನೇ ಈ ವಾರದಲ್ಲಿ ನಡೆಯಲಿರುವ ಜಿಲ್ಲಾ ಸಭೆಗಳಲ್ಲೂ ಚರ್ಚಿಸಲಾಗುವುದು. ಹೊಸ ರೀತಿಯ ಮಾಧ್ಯಮವು ಬೀದಿಯಲ್ಲಿರುವ ಜನತೆ ಮತ್ತು ಹೊಸಕಾಲದ ಬುದ್ಧಿಜೀವಿಗಳನ್ನು ಬೆಸೆಯುತ್ತಾ, ಅವೆರಡರಿಂದ ಪ್ರತ್ಯೇಕವಾಗುಳಿಯದೇ ತಾನೂ ಜೊತೆಗೂಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು.ಅವರಿಗೆ 69 ವರ್ಷಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ದೀರ್ಘ ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಗಳು ಹೇಳಿವೆ. ಆರೋಗ್ಯದಲ್ಲಿ ಹಠಾತ್...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...