Homeಮುಖಪುಟಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ...

ಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ…

- Advertisement -
- Advertisement -

ಜುಲೈ 25 ಮತ್ತು 28ರಂದು ಅಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಕಾಂಗ್ರೆಸ್-ಜೆಡಿಎಸ್‍ಗಳನ್ನು ತೊರೆದು ಬಿಜೆಪಿ ಸೇರಬಯಸಿದ್ದ 17 ಶಾಸಕರನ್ನು ಅನರ್ಹರೆಂದು ತೀರ್ಪಿತ್ತರು. ಪಕ್ಷಾಂತರ ನಿಷೇಧ ಕಾಯ್ದೆ, ಜನಪ್ರತಿನಿಧಿಗಳ ಕಾಯ್ದೆ, ಸುಪ್ರೀಂಕೋರ್ಟಿನ ತೀರ್ಪುಗಳು ಮತ್ತು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ನೀಡಿದ ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದರು. ಈ 17 ಶಾಸಕರು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಅದೇ ತೀರ್ಪಿನ ಭಾಗವಾಗಿತ್ತು.

ಈ ತೀರ್ಪು ಪ್ರಕಟಿಸಿದ ಪತ್ರಿಕಾಗೋಷ್ಠಿಯಲ್ಲೇ ಸ್ಪೀಕರ್ ಹೇಳಿದಂತೆ, ಈ ತೀರ್ಪಿನ ಪ್ರತಿಯನ್ನು ಚುನಾವಣಾ ಆಯೋಗಕ್ಕೂ ಕಳಿಸಲಾಯಿತು. ಯಾವುದೇ ಶಾಸನಸಭೆಯ ಸೀಟು, ಯಾವುದೇ ಕಾರಣಕ್ಕೆ ಖಾಲಿ ಬಿದ್ದರೆ, ಆರು ತಿಂಗಳೊಳಗೆ ಅದನ್ನು ತುಂಬಲು ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಏನು ಮಾಡಿತು ಎಂಬುದನ್ನು ಗಮನಿಸೋಣ.

ಸೆ.21 ರಂದು ಇತರ ರಾಜ್ಯಗಳ ವಿಧಾನಸಭಾ ಮತ್ತು ಉಪಚುನಾವಣೆಗಳ ವೇಳಾಪಟ್ಟಿ ಘೋಷಣೆ. ಅಕ್ಟೋಬರ್ 21ಕ್ಕೆ ಚುನಾವಣೆ. ಅದೇ ದಿನ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ.

ರಾಜ್ಯದ ಅನರ್ಹ ಶಾಸಕರು ಸ್ಪರ್ಧೆ ಮಾಡುವಂತಿಲ್ಲ – ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಹೇಳಿಕೆ.

ಸೆ.23: ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಸ್ವಯಂಪ್ರೇರಿತ ಹೇಳಿಕೆ – ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಬಹುದೇ ಹೊರತು, ಅವರ ಸ್ಪರ್ಧೆಯನ್ನು ತಡೆಯುವಂತಿಲ್ಲ. ಅವರ ಸ್ಪರ್ಧೆಗೆ ತನ್ನದೇನೂ ಅಭ್ಯಂತರವಿಲ್ಲ.

ಸೆ.25: ಚುನಾವಣೆ ಮುಂದೂಡುವ ಆಫರ್
ಸೆ.26: ಕೋರ್ಟಿನಿಂದ ತಡೆಯಾಜ್ಞೆ, ಮುಂದಿನ ವಿಚಾರಣೆ ಅಕ್ಟೋಬರ್ 22ಕ್ಕೆ.
ಸೆ.27: ಚುನಾವಣೆಗೆ ಮತ್ತೆ ದಿನ ನಿಗದಿ, ಡಿಸೆಂಬರ್ 5ಕ್ಕೆ ಚುನಾವಣೆ. ಆದರೆ ಮತ ಎಣಿಕೆ ದಿನ ಘೋಷಣೆಯಿಲ್ಲ; ನೀತಿಸಂಹಿತೆ ಘೋಷಣೆಯಿಲ್ಲ.
ಸೆ.29: ಮತ ಎಣಿಕೆಗೆ ದಿನ ನಿಗದಿ

ಈ ಎಲ್ಲಾ ಬೆಳವಣಿಗೆಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ಇದ್ದ ಅನುಮಾನಗಳನ್ನು ಖಾತರಿಗೊಳಿಸಿದೆ. ಸಾಕಷ್ಟು ಕಾಲದಿಂದ ಚುನಾವಣಾ ಆಯೋಗವು ಬಿಜೆಪಿ ಪಕ್ಷದ ಕಚೇರಿಯಂತೆ ವರ್ತಿಸುತ್ತಿದೆ ಎಂಬ ದೂರು ಇದ್ದೇ ಇತ್ತು. 2017ರಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳು ಒಟ್ಟಿಗೇ ಘೋಷಣೆಯಾಗಬೇಕಿತ್ತು. ಆದರೆ ಆಳುವ ಬಿಜೆಪಿ ಸರ್ಕಾರಕ್ಕೆ ಸಹಾಯ ಮಾಡಲು ಬೇಕೆಂದೇ ಗುಜರಾತ್ ಚುನಾವಣೆಗಳನ್ನು ತಡವಾಗಿ ಘೋಷಿಸಲಾಗಿತ್ತು. ಅಲ್ಲಿಂದ ಶುರುವಾದದ್ದು 2019ರ ಲೋಕಸಭಾ ಚುನಾವಣೆಯಲ್ಲಂತೂ ಹಲವು ರೀತಿಯಲ್ಲಿ ಏಕಪಕ್ಷೀಯ ವರ್ತನೆ ಎದ್ದು ಕಾಣುತ್ತಿತ್ತು.

ಈ ಪ್ರಕರಣಕ್ಕೆ ಬರುವುದಾದರೆ, ಸ್ಪೀಕರ್ ತೀರ್ಪಿನಲ್ಲಿ ಅನರ್ಹತೆ ಮತ್ತು ವಿಧಾನಸಭೆಯ ಈ ಅವಧಿ ಪೂರ್ಣವಾಗುವವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದಿತ್ತು. ಈ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಅವರು ಅನರ್ಹರಾಗಿರುವುದರಿಂದಲೇ ಚುನಾವಣಾ ಆಯೋಗ ಉಪಚುನಾವಣೆಯನ್ನು ನಿಗದಿಪಡಿಸಿದೆ. ಅಂದರೆ ಸ್ಪೀಕರ್ ತೀರ್ಪಿನ ಕಾರಣಕ್ಕೇ ಉಪಚುನಾವಣೆ ನಿಗದಿಯಾಗಿದೆ. ಹೀಗಿದ್ದೂ, ಅದೇ ತೀರ್ಪಿನ ಇನ್ನೊಂದು ಭಾಗವನ್ನು ಮಾತ್ರ ತಾನು ಜಾರಿ ಮಾಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಲು ಹೇಗೆ ಸಾಧ್ಯ? ಒಂದುವೇಳೆ ಸ್ಪೀಕರ್ ಅವರ ತೀರ್ಪಿನ ಈ ಭಾಗದ ಕುರಿತು ತನಗೆ ಗೊಂದಲವಿದೆ;

ಸಾಂವಿಧಾನಿಕವಾಗಿ ಯಾರನ್ನೂ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದೇ ಚುನಾವಣಾ ಆಯೋಗದ ಅಭಿಪ್ರಾಯವಾಗಿದ್ದರೆ, ಈ ಕುರಿತು ಸ್ಪಷ್ಟೀಕರಣ ಕೋರಿ ಸುಪ್ರೀಂಕೋರ್ಟಿನ ಮೊರೆ ಹೋಗಬೇಕಾಗಿತ್ತು. ಅದನ್ನೂ ಮಾಡಲಿಲ್ಲ. ಬದಲಿಗೆ ಸುಪ್ರೀಂಕೋರ್ಟಿನಲ್ಲಿ ತನ್ನ ಅಭಿಪ್ರಾಯವನ್ನು ಮುಂದಿಟ್ಟು, ಚುನಾವಣೆಯನ್ನು ಮುಂದೂಡಲೂ ಸಿದ್ಧವೆಂದು ಹೇಳಿಬಿಟ್ಟಿತು.

ಈ ಕೇಸು ತೀರ್ಮಾನವಾಗುವವರೆಗೆ ಚುನಾವಣೆ ಬೇಡವೆಂದು ಮರುದಿನ ಕೋರ್ಟು ತೀರ್ಪಿತ್ತಿತು. ಕೇಸು ಯಾವಾಗ ಫೈಸಲ್ ಆಗುವುದೆಂಬ ಬಗ್ಗೆ ಯಾವ ಖಾತರಿ ಇಲ್ಲದಿದ್ದಾಗ್ಯೂ, ಮರುದಿನವೇ ಡಿಸೆಂಬರ್ 5ಕ್ಕೆ ಚುನಾವಣೆ ಎಂಬ ಪರಿಷ್ಕøತ ವೇಳಾಪಟ್ಟಿ ಪ್ರಕಟಿಸಲಾಯಿತು. ಸಾಮಾನ್ಯವಾಗಿ ಚುನಾವಣೆಯ ವೇಳಾಪಟ್ಟಿ ಘೋಷಣೆಯಾದ ದಿನದಿಂದಲೇ ನೀತಿಸಂಹಿತೆ ಸಹ ಲಾಗೂ ಆಗಬೇಕು. ಇದೂ ಆಗಲಿಲ್ಲ. ಬದಲಿಗೆ ನೀತಿ ಸಂಹಿತೆಯು ಚುನಾವಣಾ ಅಧಿಸೂಚನೆ ಹೊರಡಿಸುವ ನವೆಂಬರ್ 11ರಿಂದ ಚುನಾವಣೆ ನೀತಿಸಂಹಿತೆ ಜಾರಿ ಎಂದು ಹೇಳಲಾಗಿದೆ. ಅಂದರೆ ಈಗಿನಿಂದ ಸದರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ಆಡಳಿತ ನಡೆಸುವ ಪಕ್ಷಕ್ಕೆ ಯಾವ ಅಡ್ಡಿಯೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಶನಿವಾರ ರಾಜ್ಯ ಚುನಾವಣಾ ಆಯುಕ್ತರು ‘ಅನರ್ಹರು ಸ್ಪರ್ಧೆ ಮಾಡುವಂತಿಲ್ಲ’ ಎಂದು ಹೇಳಿದನಂತರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಸ್ಪರ್ಧೆ ಮಾಡಬಹುದು ಎಂದು ಕೇಂದ್ರ ಆಯೋಗ ಹೇಳಿದ್ದೇಕೆ ಎಂಬ ಪ್ರಶ್ನೆ ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ. ಅದೇ ಶನಿವಾರದಂದು ಅನರ್ಹ ಶಾಸಕರು ತಾವು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು (ಚಿಕ್ಕಬಳ್ಳಾಪುರದ ಮಾಜಿ ಶಾಸಕ ಸುಧಾಕರ್ ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ವ್ಯಸ್ತರಾಗಿದ್ದವರು ಅಲ್ಲಿಂದ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಓಡಿದರು) ಯಡಿಯೂರಪ್ಪನವರನ್ನು ಅರಣ್ಯ ಇಲಾಖೆಯ ಗೆಸ್ಟ್‍ಹೌಸ್‍ನಲ್ಲಿ ಭೇಟಿಯಾದರು. ಯಡಿಯೂರಪ್ಪನವರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ದೆಹಲಿಗೆ ಓಡಿದರು.

ಅಲ್ಲಿ ಅಮಿತ್‍ಶಾರನ್ನು ಭೇಟಿಯಾಗಿ ಹೊರಬಂದನಂತರ ‘ನಾಳೆ ಸುಪ್ರೀಂಕೋರ್ಟಿನಲ್ಲಿ ನಮಗೆ ಒಳ್ಳೆಯ ಫಲಿತಾಂಶ ಬರುವುದೆಂಬ ವಿಶ್ವಾಸವಿದೆ’ ಎಂದು ಹೇಳಿದರು. ಮರುದಿನ ಕೋರ್ಟು ಅವರ ಪರವಾಗಿ ಏನನ್ನೂ ಹೇಳಲಿಲ್ಲವಾದರೂ, ಚುನಾವಣಾ ಆಯೋಗದ ವಕೀಲರು ಸದರಿ ಕೇಸಿನಲ್ಲಿ ವಾದಿ-ಪ್ರತಿವಾದಿ ಅಲ್ಲದಿದ್ದರೂ ‘ಅನರ್ಹರು ಸ್ಪರ್ಧಿಸಬಹುದು’ ಎಂದು ಹೇಳುತ್ತಾರೆಂಬ ವಿಶ್ವಾಸ ಯಡಿಯೂರಪ್ಪನವರಿಗೆ ಹೇಗೆ ಬಂದಿತು? ಅಲ್ಲಿಂದಾಚೆಗೆ ಆಯೋಗವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಅನರ್ಹ ಶಾಸಕರು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣವಾಗುವವರೆಗೆ ಚುನಾವಣೆ ನಡೆಸುವುದಿಲ್ಲ ಎಂದೂ ಹೇಳಿತು. ಚುನಾವಣೆಯನ್ನು ಮುಂದೂಡಿಯೂ ಬಿಟ್ಟಿತು.

ಹಾಗಾದರೆ ಒಂದುವೇಳೆ 6 ತಿಂಗಳೊಳಗೆ ವಿಚಾರಣೆ ಪೂರ್ಣವಾಗಿ ತೀರ್ಪು ಬಾರದಿದ್ದರೆ? ಸಾಂವಿಧಾನಿಕ ಕರ್ತವ್ಯವನ್ನು ಕೆಲವು ‘ಅನರ್ಹ’ ಶಾಸಕರಿಗಾಗಿ ಚುನಾವಣಾ ಆಯೋಗವು ಬದಿಗೊತ್ತಿಬಿಡುತ್ತದೆಯೇ? ಬಹುಶಃ ಈ ಪ್ರಶ್ನೆಗೆ ಉತ್ತರವಾಗಿ ಅದು ಮತ್ತೆ ತರಾತುರಿಯಲ್ಲಿ (ಸುಪ್ರೀಂಕೋರ್ಟಿನ ವಿಚಾರಣೆ ಯಾವಾಗ ಮುಗಿಯುತ್ತದೆಂಬ ಕುರಿತು ಯಾವ ಹೊಸ ಬೆಳವಣಿಗೆಯೂ ಆಗದಿದ್ದರೂ) ಮುಂದೂಡಿದ ಚುನಾವಣೆಯ ದಿನಗಳನ್ನು ಘೋಷಣೆ ಮಾಡಿತು. ಎಷ್ಟು ತರಾತುರಿಯಿತ್ತೆಂದರೆ, ಚುನಾವಣಾ ಫಲಿತಾಂಶದ ದಿನಗಳನ್ನೂ ಘೋಷಿಸಲಿಲ್ಲ. ಬಹುಶಃ ‘ಒಂದುವೇಳೆ ಸುಪ್ರೀಂಕೋರ್ಟು ಅಷ್ಟರಲ್ಲಿ ತೀರ್ಮಾನ ಮಾಡದೇ ಇದ್ದಲ್ಲಿ ಫಲಿತಾಂಶ ಘೋಷಣೆ ಮಾಡದೇ ಕಾಯೋಣ’ ಎಂಬ ಅಡ್ಡಕಸುಬಿ ಐಡಿಯಾ ಯಾರಾದರೂ ಕೊಟ್ಟಿರಬೇಕು ಎನಿಸುತ್ತದೆ. ಅದನ್ನು ಬಿಟ್ಟರೆ ಇದಕ್ಕೆ ಬೇರಾವ ಕಾರಣವೂ ಕಾಣುತ್ತಿಲ್ಲ. ಮತ್ತೆ ಒಂದುದಿನ ಬಿಟ್ಟು ಫಲಿತಾಂಶದ ದಿನವನ್ನೂ ಆಯೋಗವು ನಿಗದಿ ಮಾಡಿತು.

ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಚುನಾವಣಾ ಆಯೋಗವು ಇಷ್ಟು ಎಡಬಿಡಂಗಿತನದಿಂದ ವರ್ತಿಸಿದ್ದನ್ನು ಯಾರೂ ಕಂಡಿಲ್ಲ. ಎಲ್ಲವೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಆಮಿಷ, ಬೆದರಿಕೆ, ಅಧಿಕಾರದಾಹದ ಕಾರಣಕ್ಕೆ ಪಕ್ಷಾಂತರ ಮಾಡಿದ ಜನದ್ರೋಹಿಗಳ ರಕ್ಷಣೆಗೆ!? ಹೀಗಿರುವಾಗ ಚುನಾವಣಾ ಆಯೋಗವು ಬಿಜೆಪಿ ಕಚೇರಿ ಎಂಬ ಆಪಾದನೆ ಯಾರಾದರೂ ಮಾಡಿದರೆ ಅದಕ್ಕೆ ಸಾಂದರ್ಭಿಕ ಸಾಕ್ಷ್ಯಗಳು ಮಾತ್ರವಲ್ಲದೇ, ಸಾಂವಿಧಾನಿಕ ಆಶಯಗಳ ಉಲ್ಲಂಘನೆಯ ಸ್ಪಷ್ಟ ನಿದರ್ಶನಗಳು ಸಿಗುತ್ತವೆ.

ಎಲ್ಲವೂ ಕೇಂದ್ರ ಆಯೋಗದ್ದೇ – ರಾಜ್ಯ ಚುನಾವಣಾ ಆಯುಕ್ತ

ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ ಎಂಬ ಹೇಳಿಕೆ ನೀಡಿದ್ದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಈಗ ತಮ್ಮ ಮಾತುಗಳನ್ನು ತಾವೇ ನುಂಗಬೇಕಾಗಿ ಬಂದಿದೆ. ಎರಡೇ ದಿನಗಳಲ್ಲಿ ಅದನ್ನು ಬದಲಿಸಿ ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಆಯೋಗ ಹೇಳಿಕೆ ನೀಡಿತು. ಆ ನಂತರ ಚುನಾವಣೆಯನ್ನು ಮುಂದೂಡಿತು; ಮತ್ತೆ ಚುನಾವಣಾ ದಿನಾಂಕ ಘೋಷಣೆ ಮಾಡಿತು. ಫಲಿತಾಂಶ ನಿಗದಿಯ ಪೂರಕ ಪತ್ರವನ್ನೂ ತಾನೇ ಬರೆಯಿತು. ಇದರ ಬಗ್ಗೆ ಸಂಜೀವ್ ಕುಮಾರ್ ಅವರನ್ನು ಕೇಳಿದಾಗ ‘ಎಲ್ಲವೂ ಕೇಂದ್ರ ಚುನಾವಣಾ ಆಯೋಗದಿಂದಲೇ ಬಂದಿದೆ. ಪೂರಕ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವುದೂ ಅವರೇ’ ಎಂದು ಹೇಳಿದ್ದು ವರದಿಯಾಗಿದೆ.
ರಾಜ್ಯಗಳಲ್ಲಿನ ಸಂಸ್ಥೆಗಳ ಮೇಲೂ ಕೇಂದ್ರದ ಕೂಟವೊಂದು ಹಿಡಿತ ಸಾಧಿಸಿ ಪ್ರಜಾತಂತ್ರವನ್ನು ಗಾಳಿಗೆ ತೂರಲು ಸಾಂವಿಧಾನಿಕ ಅಧಿಕಾರದಿಂದಲೇ ಸಾಧ್ಯವಾಗುವ ರೀತಿಯಲ್ಲಿ ನಮ್ಮ ರಚನೆಗಳಿವೆ. ಅದನ್ನು ಮೋದಿ-ಶಾ ನಿರ್ಲಜ್ಜವಾಗಿ ಬಳಸುತ್ತಿದ್ದಾರೆ. ಚುನಾವಣಾ ಆಯೋಗವು ಅವರ ಕೈಯ್ಯಲ್ಲಿನ ಅಂತಹ ಒಂದು ಅಸ್ತ್ರವಷ್ಟೇ ಆಗಿದೆ.

ಸುಪ್ರೀಂಕೋರ್ಟೂ ಅನುಮಾನಾತೀತವಲ್ಲ
ಈಕೇಸಿನಲ್ಲಿ ಚುನಾವಣಾ ಆಯೋಗವು ಇದ್ದಕ್ಕಿದ್ದಂತೆ ವಿಶೇಷ ಆಸ್ಥೆ ವಹಿಸಿದ ಕುರಿತು ಸುಪ್ರೀಂಕೋರ್ಟಿಗೆ ಯಾವ ತಕರಾರೂ ಇರಲಿಲ್ಲ. ಅನರ್ಹ ಶಾಸಕರ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಅಗತ್ಯವಿದೆ ಮತ್ತು ತಾತ್ಕಾಲಿಕ ಪರಿಹಾರ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯಪೀಠ ತಿಳಿಸಿತ್ತು. ಅದು ಸಮಂಜಸವೂ ಆಗಿತ್ತು. ಏಕೆಂದರೆ ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಿರಿಟ್, ಶಾಸಕಾಂಗ ಪರಮಾಧಿಕಾರದಲ್ಲಿ ನ್ಯಾಯಾಂಗ ಹೇಗೆ ಮಧ್ಯೆ ಪ್ರವೇಶಿಸಬಹುದು ಇತ್ಯಾದಿಗಳ ವಿಚಾರದಲ್ಲಿ ಸಂವಿಧಾನದ ಸೂಕ್ತ ವ್ಯಾಖ್ಯಾನದ ಅಗತ್ಯವಿತ್ತು. ಹೀಗಾಗಿ ಹಿರಿಯ ವಕೀಲರುಗಳ ಅಭಿಪ್ರಾಯ, ವಿಚಾರಣೆ, ರಾಜಕೀಯ ಪಕ್ಷಗಳ ಅನಿಸಿಕೆ ಇವೆಲ್ಲವನ್ನೂ ತೆಗೆದುಕೊಂಡು ಕೂಲಂಕಷವಾಗಿ ನೀಡಲಾಗುವ ತೀರ್ಪು ಮುಂದಿನ ದಿನಗಳಲ್ಲಿ ದಾರಿದೀಪವಾಗಿರುತ್ತದೆ. ಆದರೆ ಅದು ಆಯೋಗದ ಏಕಪಕ್ಷೀಯ ನಿಲುವಿಗೆ ಸೊಪ್ಪು ಹಾಕಿಬಿಟ್ಟಿತು. ತಾನೇ ತಾನಾಗಿ ಚುನಾವಣೆ ಮುಂದೂಡಿಕೆಯ ಮಾತನ್ನು ಆಡಲಿಲ್ಲ ಎಂಬುದನ್ನು ತಪ್ಪಿಸಿಕೊಂಡಂತೆಯೂ ಆಯಿತು. ಅನರ್ಹ ಶಾಸಕರಿಗಾಗಿ ಚುನಾವಣಾ ಪ್ರಕ್ರಿಯೆಯನ್ನೇ ಮುಂದೂಡಲು ಅನುವು ಮಾಡಿಕೊಟ್ಟಂತೆಯೂ ಆಯಿತು ಎಂಬಂತೆ ಸುಪ್ರೀಂಕೋರ್ಟು ವರ್ತಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...