Homeಕರ್ನಾಟಕಎಲೆಮರೆ 1: ಗಡಿನಾಡಲ್ಲಿ ಹರ್ಷಿಯಾ ಬಾನುವಿನ ಕನ್ನಡ ಕಲರವ..

ಎಲೆಮರೆ 1: ಗಡಿನಾಡಲ್ಲಿ ಹರ್ಷಿಯಾ ಬಾನುವಿನ ಕನ್ನಡ ಕಲರವ..

- Advertisement -
- Advertisement -

ಆರೋಗ್ಯಕರವಾಗಿ ಚಿಂತಿಸುವ, ಬರೆವ, ಜೀವಪರ ಆಶಯಗಳನ್ನಿಟ್ಟುಕೊಂಡು ಬದ್ಧತೆಯಿಂದ ದುಡಿಯುವ ಎಲೆಮರೆಯ ವ್ಯಕ್ತಿಗಳನ್ನು ಗುರುತಿಸುವ ಮತ್ತು ಹೊಸ ತಲೆಮಾರಿಗೆ ಪ್ರೇರಕವಾಗುವಂತಹ ಮಾದರಿಗಳನ್ನು ಪರಿಚಯಿಸುವ ಸಣ್ಣ ಪ್ರಯತ್ನ `ಎಲೆಮರೆ’. ಇಲ್ಲಿ ಸಾಹಿತಿಗಳು, ಚಳವಳಿಗಾರರು, ಪತ್ರಕರ್ತರು, ಪ್ರಗತಿಪರ ಯುವ ರೈತರು, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ನೌಕರರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಕೆಲಸ ಮಾಡುತ್ತಿರುವ ಬೆಳಕಿಗೆ ಬಾರದ ಎಲ್ಲ ವಯೋಮಾನದವರನ್ನು ಒಳಗೊಳ್ಳಲಾಗುವುದು. ಎಲೆಮರೆಯಲ್ಲಿರುವ ಹಲವರನ್ನು ಪರಿಚಯಿಸಲು ಸಂಶೋಧಕರಾದ ಅರುಣ್ ಜೋಳದಕೂಡ್ಲಿಗಿಯವರ ಜೊತೆಗೆ ರಾಜ್ಯದ ವಿವಿಧ ಭಾಗಗಳ ಸ್ನೇಹಿತರು ಕೈಜೋಡಿಸಲಿದ್ದಾರೆ.

ಫೇಸ್‍ಬುಕ್‍ನಲ್ಲಿ ಕಳೆದ ಐದಾರು ವರ್ಷದಿಂದ ಸೂಕ್ಷ್ಮವಾಗಿ ಗಮನಿಸುವ ಪ್ರೊಫೈಲುಗಳಲ್ಲಿ ಹರ್ಷಿಯಾ ಬಾನುಳ ಪೇಜ್ ಕೂಡ ಒಂದು. ಕಣ್ಣಗೊಂಬೆಗಳು ಮೇಲೆ ಸರಿದ ಹರ್ಷಿಯಾ ಡಿಪಿ ನೋಡಿದಾಗಲೆಲ್ಲಾ ಇವರು ಹೇಗೆ ಫೇಸ್‍ಬುಕ್ ಬಳಸಬಹುದು ಎಂದುಕೊಂಡೆ. ನಂತರ ಟೀಚರ್ ಎನ್ನುವುದು ತಿಳಿದಾಗಲೂ ಹರ್ಷಿಯಾ ಹೇಗೆ ಪಾಠ ಮಾಡುತ್ತಾರೆ, ಮಕ್ಕಳು ಹೇಗೆ ರಿಯಾಕ್ಟ್ ಮಾಡಬಹುದೆಂಬ ಪ್ರಶ್ನೆಯೊಂದು ಸುಳಿಯಿತು. ಈಚೆಗೆ ಹರ್ಷಿಯಾ ಮಾದರಿ ಶಿಕ್ಷಕಿ ಎನ್ನುವ ಪತ್ರಿಕಾ ವರದಿಗಳು ಬಂದಾಗ ನಿಜಕ್ಕೂ ಖುಷಿಯಾಯಿತು. ಹರ್ಷಿಯಾ ಜತೆ ಮಾತನಾಡಿದಾಗ ಅವಳ ಕಠಿಣ ದಾರಿಯನ್ನು ನೆನಪಿಸಿಕೊಂಡರು.

ಅರಸೀಕೆರೆಯ ಕರೀಂಸಾಬ್ ಗೌರ್ನಮೆಂಟ್ ಹಾಸ್ಪಿಟಲ್‍ನಲ್ಲಿ ಕೆಲಸ ಮಾಡುತ್ತಿದ್ದಾಗ, ಪುಟ್ಟ ಹರ್ಷಿಯಾ ಅಪ್ಪನ ಜತೆಗೆ ಆಸ್ಪತ್ರೆಗೆ ಹೋಗುತ್ತಿದ್ದಳು. ಚೀಟಿ ಬರೆಯುವವರು ಇಲ್ಲದೆ ಇದ್ದಾಗ ಅವಳೇ ಕೌಂಟರಲ್ಲಿ ರೋಗಿಗಳಿಗೆ ಚೀಟಿ ಬರೆಯುತ್ತಿದ್ದಳು. ಎಷ್ಟೋ ಜನರಿಗೆ ಚೀಟಿ ಬರೆಸೋದಕ್ಕೆ ಎರಡು ರೂಪಾಯಿಯೂ ಇರುತ್ತಿರಲಿಲ್ಲ. ಇದು ಹರ್ಷಿಯಾ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಮುಂದೆ ವೈದ್ಯೆಯಾಗಿ ಬಡವರ ಸೇವೆ ಮಾಡಬೇಕೆಂಬ ಕನಸು ಕಟ್ಟಿದಳು. ಆದರೆ ಎಸ್‍ಎಸ್‍ಎಲ್‍ಸಿ ನಂತರ ಸೈನ್ಸ್ ತೆಗೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ದೃಷ್ಟಿದೋಶದ ಕಾರಣ ಸೈನ್ಸ್ ಸಿಗಲಿಲ್ಲ. ಪದವಿ ನಂತರವೂ ಕೆಎಎಸ್ ಪ್ರಿಲಿಮ್ಸ್ ಮೇನ್ಸ್ ಎಗ್ಜಾಮ್ ನಂತರ ಸಂದರ್ಶನಕ್ಕೆ ಹೋಗಬೇಕಾಗಿತ್ತು. ಆಡಳಿತದ ಹುದ್ದೆಯನ್ನು ನಿಭಾಯಿಸಲು ನಿನ್ನಿಂದ ಆಗದು ಎನ್ನುವ ಅಪ್ಪಅಮ್ಮನ ಒತ್ತಾಯಕ್ಕೆ ಈ ಕನಸೂ ಈಡೇರಲಿಲ್ಲ. ಆದರೆ ಬಿಇಡಿ ಮಾಡಿ ಇದೀಗ ಬಂಗಾರಪೇಟೆಯ ಆದರ್ಶ ಶಾಲೆಯಲ್ಲಿ ಆದರ್ಶ ಶಿಕ್ಷಕಿಯಾಗಿ ಗಮನ ಸೆಳೆದಿದ್ದಾಳೆ.

ಕನ್ನಡ ಶಾಲೆಗಳ ಅಳಿವುಉಳಿವಿನ ಚರ್ಚೆಗಳು ನಡೆಯುತ್ತಿರುವಾಗ ಶೇ.75ರಷ್ಟು ಅಂಧತ್ವವಿರುವ ಹರ್ಷಿಯಾ ಭಾನುವಿನ ಕನ್ನಡ ಪಾಠಗಳು ವಿಶೇಷವಾಗಿವೆ. ಪ್ರತೀ ಪಾಠವನ್ನು ಕಂಠಪಾಟ ಮಾಡಿ ಮರುದಿನ ಪುಸ್ತಕ ಹಿಡಿದು ಸಾಮಾನ್ಯ ಶಿಕ್ಷಕರು ಓದುವ ಹಾಗೆ ನೆನಪಿನಿಂದ ಪಾಠ ಓದುತ್ತಾಳೆ. ಇದರಿಂದ ಮಕ್ಕಳ ಗಮನ ಬೇರೆಡೆ ಹರಿಯುವುದಿಲ್ಲ. ಅಂತೆಯೇ ವ್ಯಾಕರಣಕ್ಕೆ ಸಂಬಂಧಿಸಿದ ಸರಳ ಕಲಿಕೆಗೆ ಅನುವಾಗುವಂತೆ ಹರ್ಷಿಯಾ ಮಾಡಿದ ಚಾರ್ಟ್‍ಗಳು ವಿಶೇಷವಾಗಿವೆ. ಪ್ರಾಥಮಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಹರ್ಷಿಯಾ ವ್ಯಾಕರಣ ಮಾದರಿಯನ್ನು ಎಲ್ಲಾ ಶಿಕ್ಷಕರು ಅನುಸರಿಸಲೆಂದು ಇಲಾಖೆಯ ಶಿಕ್ಷಣ ವಾರ್ತೆಯಲ್ಲಿ ಲೇಖನ ಪ್ರಕಟಿಸಿದ್ದರು.

ಪದವಿಯಲ್ಲಿ ಮೊದಲು ಪರಿಚಯವಾದ ಕನ್ನಡದ ಪ್ರೊಫೆಸರ್ ಮತ್ತು ಲೇಖಕಿ ಸ.ಉಷಾ ಅವರ ಒಡನಾಟದಿಂದ ಹರ್ಷಿಯಾ ಓದು ಮತ್ತು ತಿಳಿವಿನ ದಿಕ್ಕು ಬದಲಾಯಿತು. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ನೆನಪಿನ ದೋಣಿ, ಮಾಸ್ತಿಯವರ ಕತೆ ಕಾದಂಬರಿಗಳು, ನಿಸಾರ್ ಅಹಮದ್‍ರ ಕವಿತೆ, ರಹಮತ್ ತರೀಕೆರೆಯವರ ಅಂಕಣ ಬರಹ, ಆನ್‍ಲೈನ್‍ನ ಅವಧಿ, ಕೆಂಡಸಂಪಿಗೆ ಹೀಗೆ ಸಾಹಿತ್ಯದ ಓದು ಕೂಡ ಹರ್ಷಿಯಾಳನ್ನು ವೈಚಾರಿಕವಾಗಿ ಸೂಕ್ಷ್ಮವಾಗಿಸಿದೆ. ಹರ್ಷಿಯಾ ಒಳ್ಳೆಯ ಕವಯಿತ್ರಿ ಕೂಡ. ಕವನ ಸಂಕಲನ ಇನ್ನಷ್ಟೇ ಪ್ರಕಟವಾಗಬೇಕಿದೆ. ಕಳೆದ ನಾಲ್ಕೂ ಎಸ್‍ಎಸ್‍ಎಲ್‍ಸಿ ಬ್ಯಾಚ್‍ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ನೂರರಷ್ಟು ಫಲಿತಾಂಶ ಬಂದಿದೆ. ಉಳಿದೆರಡು ಬ್ಯಾಚ್ 98.5. ಶೇ ಫಲಿತಾಂಶ ಬಂದಿದೆ. ಕಳೆದ ಬಾರಿ ಮೂರು ವಿದ್ಯಾರ್ಥಿನಿಯರು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅವರಿಗೆ ಹರ್ಷಿಯಾ ಸ್ವಂತ ಖಾತೆಯಿಂದ ಒಂದು ಸಾವಿರ ರೂ ನಗದು ಹಾಗು ಪದಕವನ್ನು ಶಾಲಾ ಮುಖ್ಯಸ್ಥರಿಂದ ಕೊಡಿಸಿ ಗೌರವಿಸಿ ಪ್ರೋತ್ಸಾಹಿಸಿದ್ದಾರೆ.

ಹರ್ಷಿಯಾ ವ್ಯಕ್ತಿತ್ವ ಮಾನವೀಯ ಮೌಲ್ಯಗಳ ನೆಲೆಗಳಲ್ಲಿ ರೂಪುಗೊಂಡಿದೆ. ಅಂತೆಯೇ ಸಮಾನತೆಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಹೊಣೆಗಾರಿಕೆಯನ್ನು ತುಂಬಾ ಎಚ್ಚರದಿಂದ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಹಂತಹಂತವಾಗಿ ತನಗಿರುವ ದೃಷ್ಟಿದೋಶದ ಸಮಸ್ಯೆಯನ್ನೂ, ಲೋಕದ ಕಣ್ಣಿನ ಅನುಕಂಪವನ್ನೂ ಮೀರಿದ ಛಲದಿಂದ ಬದುಕನ್ನು ಕಟ್ಟಿಕೊಂಡವರು. `ನನಗೆ ದೂರದೃಷ್ಟಿ ದೋಶವಿದೆ. ತೀರಾ ಹತ್ತಿರದಿಂದ ಓದಕೋಬೇಕು. ನನ್ನ ಐಬಾಲ್ ಶೇಕ್ ಆಗೋದ್ರಿಂದ ಅದು ಆಪರೇಷನ್‍ಗೂ ಸಪೋರ್ಟ್ ಮಾಡಲ್ಲ, ಮತ್ತೆ ಯಾವ ಗ್ಲಾಸ್ ಕೂಡ ನನ್ನ ಕಣ್ ಮೇಲೆ ವರ್ಕ್ ಆಗೋಲ್ಲ. ಈ ತರಹದ ಸಮಸ್ಯೆ ಆಗಿರೋದ್ರಿಂದ ನನ್ನ ಅಂಧತ್ವದ ಸ್ಥಿತಿಯನ್ನು ಸರ್ಜರಿಯಿಂದಲೋ, ಟ್ರೀಟ್‍ಮೆಂಟಿಂದಲೋ ವಾಸಿ ಮಾಡ್ಕೊಳ್ಳೋಕೆ ಆಗಲ್ಲ. ಹೀಗಾಗಿ ನನ್ನದೇ ಕೆಲಸಗಳಲ್ಲಿ ತೊಡಗಿಕೊಂಡು ಅಂಧತ್ವವನ್ನೂ ಮರೆತ್ತಿದ್ದೇನೆ’ ಎಂದು ಹರ್ಷಿಯಾ ಆತ್ಮವಿಶ್ವಾಸದಿಂದ ಮಾತನಾಡುತ್ತಾಳೆ.

ಹೀಗೆ ಅರಸೀಕೆರೆಯ ಕರೀಂಸಾಬ್ ಮತ್ತು ರಿಹಾನ್ ಭಾನು ದಂಪತಿಗಳ ಹಿರಿಯ ಮಗಳಾದ ಹರ್ಷಿಯಾ ಸಾಮಾನ್ಯ ಸ್ಕೂಲುಗಳಲ್ಲೆ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ ತನ್ನದೇ ಆದ ವಿಶಿಷ್ಟ ಬೋಧನೆಯ ಮೂಲಕ ಜಡಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾಳೆ. ಇದನ್ನು ಗುರುತಿಸಿ ಕರ್ನಾಟಕ ಕಾವಲು ಪಡೆಯ `ಆದರ್ಶ ಶಿಕ್ಷಕಿ’ ಪ್ರಶಸ್ತಿ, ದೆಹಲಿಯ ಆವಂತಿಕಾ ಸಂಸ್ಥೆಯ `ಡಾ.ಅಬ್ದುಲ್ ಕಲಾಂ’ ಪ್ರಶಸ್ತಿಯನ್ನು ಒಳಗೊಂಡಂತೆ ಹಲವು ಖಾಸಗಿ ಸಂಸ್ಥೆಗಳು ಗೌರವಿಸಿವೆ. ಹರ್ಷಿಯಾಳ ಕನಸುಗಳು ಮತ್ತಷ್ಟು ದೃಢವಾಗಲಿ. ತನ್ನ ಸುತ್ತಮುತ್ತಣ ಪರಿಸರದಲ್ಲಿ ಹರ್ಷಿಯಾಳ ಒಳಗಣ್ಣಿನ ಬೆಳಕು ಬದಲಾವಣೆಗೆ ನೆರವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...