Homeಮುಖಪುಟಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ...

ಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ…

- Advertisement -
- Advertisement -

ಜುಲೈ 25 ಮತ್ತು 28ರಂದು ಅಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಕಾಂಗ್ರೆಸ್-ಜೆಡಿಎಸ್‍ಗಳನ್ನು ತೊರೆದು ಬಿಜೆಪಿ ಸೇರಬಯಸಿದ್ದ 17 ಶಾಸಕರನ್ನು ಅನರ್ಹರೆಂದು ತೀರ್ಪಿತ್ತರು. ಪಕ್ಷಾಂತರ ನಿಷೇಧ ಕಾಯ್ದೆ, ಜನಪ್ರತಿನಿಧಿಗಳ ಕಾಯ್ದೆ, ಸುಪ್ರೀಂಕೋರ್ಟಿನ ತೀರ್ಪುಗಳು ಮತ್ತು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ನೀಡಿದ ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದರು. ಈ 17 ಶಾಸಕರು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಅದೇ ತೀರ್ಪಿನ ಭಾಗವಾಗಿತ್ತು.

ಈ ತೀರ್ಪು ಪ್ರಕಟಿಸಿದ ಪತ್ರಿಕಾಗೋಷ್ಠಿಯಲ್ಲೇ ಸ್ಪೀಕರ್ ಹೇಳಿದಂತೆ, ಈ ತೀರ್ಪಿನ ಪ್ರತಿಯನ್ನು ಚುನಾವಣಾ ಆಯೋಗಕ್ಕೂ ಕಳಿಸಲಾಯಿತು. ಯಾವುದೇ ಶಾಸನಸಭೆಯ ಸೀಟು, ಯಾವುದೇ ಕಾರಣಕ್ಕೆ ಖಾಲಿ ಬಿದ್ದರೆ, ಆರು ತಿಂಗಳೊಳಗೆ ಅದನ್ನು ತುಂಬಲು ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಏನು ಮಾಡಿತು ಎಂಬುದನ್ನು ಗಮನಿಸೋಣ.

ಸೆ.21 ರಂದು ಇತರ ರಾಜ್ಯಗಳ ವಿಧಾನಸಭಾ ಮತ್ತು ಉಪಚುನಾವಣೆಗಳ ವೇಳಾಪಟ್ಟಿ ಘೋಷಣೆ. ಅಕ್ಟೋಬರ್ 21ಕ್ಕೆ ಚುನಾವಣೆ. ಅದೇ ದಿನ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ.

ರಾಜ್ಯದ ಅನರ್ಹ ಶಾಸಕರು ಸ್ಪರ್ಧೆ ಮಾಡುವಂತಿಲ್ಲ – ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಹೇಳಿಕೆ.

ಸೆ.23: ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಸ್ವಯಂಪ್ರೇರಿತ ಹೇಳಿಕೆ – ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಬಹುದೇ ಹೊರತು, ಅವರ ಸ್ಪರ್ಧೆಯನ್ನು ತಡೆಯುವಂತಿಲ್ಲ. ಅವರ ಸ್ಪರ್ಧೆಗೆ ತನ್ನದೇನೂ ಅಭ್ಯಂತರವಿಲ್ಲ.

ಸೆ.25: ಚುನಾವಣೆ ಮುಂದೂಡುವ ಆಫರ್
ಸೆ.26: ಕೋರ್ಟಿನಿಂದ ತಡೆಯಾಜ್ಞೆ, ಮುಂದಿನ ವಿಚಾರಣೆ ಅಕ್ಟೋಬರ್ 22ಕ್ಕೆ.
ಸೆ.27: ಚುನಾವಣೆಗೆ ಮತ್ತೆ ದಿನ ನಿಗದಿ, ಡಿಸೆಂಬರ್ 5ಕ್ಕೆ ಚುನಾವಣೆ. ಆದರೆ ಮತ ಎಣಿಕೆ ದಿನ ಘೋಷಣೆಯಿಲ್ಲ; ನೀತಿಸಂಹಿತೆ ಘೋಷಣೆಯಿಲ್ಲ.
ಸೆ.29: ಮತ ಎಣಿಕೆಗೆ ದಿನ ನಿಗದಿ

ಈ ಎಲ್ಲಾ ಬೆಳವಣಿಗೆಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ಇದ್ದ ಅನುಮಾನಗಳನ್ನು ಖಾತರಿಗೊಳಿಸಿದೆ. ಸಾಕಷ್ಟು ಕಾಲದಿಂದ ಚುನಾವಣಾ ಆಯೋಗವು ಬಿಜೆಪಿ ಪಕ್ಷದ ಕಚೇರಿಯಂತೆ ವರ್ತಿಸುತ್ತಿದೆ ಎಂಬ ದೂರು ಇದ್ದೇ ಇತ್ತು. 2017ರಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳು ಒಟ್ಟಿಗೇ ಘೋಷಣೆಯಾಗಬೇಕಿತ್ತು. ಆದರೆ ಆಳುವ ಬಿಜೆಪಿ ಸರ್ಕಾರಕ್ಕೆ ಸಹಾಯ ಮಾಡಲು ಬೇಕೆಂದೇ ಗುಜರಾತ್ ಚುನಾವಣೆಗಳನ್ನು ತಡವಾಗಿ ಘೋಷಿಸಲಾಗಿತ್ತು. ಅಲ್ಲಿಂದ ಶುರುವಾದದ್ದು 2019ರ ಲೋಕಸಭಾ ಚುನಾವಣೆಯಲ್ಲಂತೂ ಹಲವು ರೀತಿಯಲ್ಲಿ ಏಕಪಕ್ಷೀಯ ವರ್ತನೆ ಎದ್ದು ಕಾಣುತ್ತಿತ್ತು.

ಈ ಪ್ರಕರಣಕ್ಕೆ ಬರುವುದಾದರೆ, ಸ್ಪೀಕರ್ ತೀರ್ಪಿನಲ್ಲಿ ಅನರ್ಹತೆ ಮತ್ತು ವಿಧಾನಸಭೆಯ ಈ ಅವಧಿ ಪೂರ್ಣವಾಗುವವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದಿತ್ತು. ಈ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಅವರು ಅನರ್ಹರಾಗಿರುವುದರಿಂದಲೇ ಚುನಾವಣಾ ಆಯೋಗ ಉಪಚುನಾವಣೆಯನ್ನು ನಿಗದಿಪಡಿಸಿದೆ. ಅಂದರೆ ಸ್ಪೀಕರ್ ತೀರ್ಪಿನ ಕಾರಣಕ್ಕೇ ಉಪಚುನಾವಣೆ ನಿಗದಿಯಾಗಿದೆ. ಹೀಗಿದ್ದೂ, ಅದೇ ತೀರ್ಪಿನ ಇನ್ನೊಂದು ಭಾಗವನ್ನು ಮಾತ್ರ ತಾನು ಜಾರಿ ಮಾಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಲು ಹೇಗೆ ಸಾಧ್ಯ? ಒಂದುವೇಳೆ ಸ್ಪೀಕರ್ ಅವರ ತೀರ್ಪಿನ ಈ ಭಾಗದ ಕುರಿತು ತನಗೆ ಗೊಂದಲವಿದೆ;

ಸಾಂವಿಧಾನಿಕವಾಗಿ ಯಾರನ್ನೂ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದೇ ಚುನಾವಣಾ ಆಯೋಗದ ಅಭಿಪ್ರಾಯವಾಗಿದ್ದರೆ, ಈ ಕುರಿತು ಸ್ಪಷ್ಟೀಕರಣ ಕೋರಿ ಸುಪ್ರೀಂಕೋರ್ಟಿನ ಮೊರೆ ಹೋಗಬೇಕಾಗಿತ್ತು. ಅದನ್ನೂ ಮಾಡಲಿಲ್ಲ. ಬದಲಿಗೆ ಸುಪ್ರೀಂಕೋರ್ಟಿನಲ್ಲಿ ತನ್ನ ಅಭಿಪ್ರಾಯವನ್ನು ಮುಂದಿಟ್ಟು, ಚುನಾವಣೆಯನ್ನು ಮುಂದೂಡಲೂ ಸಿದ್ಧವೆಂದು ಹೇಳಿಬಿಟ್ಟಿತು.

ಈ ಕೇಸು ತೀರ್ಮಾನವಾಗುವವರೆಗೆ ಚುನಾವಣೆ ಬೇಡವೆಂದು ಮರುದಿನ ಕೋರ್ಟು ತೀರ್ಪಿತ್ತಿತು. ಕೇಸು ಯಾವಾಗ ಫೈಸಲ್ ಆಗುವುದೆಂಬ ಬಗ್ಗೆ ಯಾವ ಖಾತರಿ ಇಲ್ಲದಿದ್ದಾಗ್ಯೂ, ಮರುದಿನವೇ ಡಿಸೆಂಬರ್ 5ಕ್ಕೆ ಚುನಾವಣೆ ಎಂಬ ಪರಿಷ್ಕøತ ವೇಳಾಪಟ್ಟಿ ಪ್ರಕಟಿಸಲಾಯಿತು. ಸಾಮಾನ್ಯವಾಗಿ ಚುನಾವಣೆಯ ವೇಳಾಪಟ್ಟಿ ಘೋಷಣೆಯಾದ ದಿನದಿಂದಲೇ ನೀತಿಸಂಹಿತೆ ಸಹ ಲಾಗೂ ಆಗಬೇಕು. ಇದೂ ಆಗಲಿಲ್ಲ. ಬದಲಿಗೆ ನೀತಿ ಸಂಹಿತೆಯು ಚುನಾವಣಾ ಅಧಿಸೂಚನೆ ಹೊರಡಿಸುವ ನವೆಂಬರ್ 11ರಿಂದ ಚುನಾವಣೆ ನೀತಿಸಂಹಿತೆ ಜಾರಿ ಎಂದು ಹೇಳಲಾಗಿದೆ. ಅಂದರೆ ಈಗಿನಿಂದ ಸದರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ಆಡಳಿತ ನಡೆಸುವ ಪಕ್ಷಕ್ಕೆ ಯಾವ ಅಡ್ಡಿಯೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಶನಿವಾರ ರಾಜ್ಯ ಚುನಾವಣಾ ಆಯುಕ್ತರು ‘ಅನರ್ಹರು ಸ್ಪರ್ಧೆ ಮಾಡುವಂತಿಲ್ಲ’ ಎಂದು ಹೇಳಿದನಂತರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಸ್ಪರ್ಧೆ ಮಾಡಬಹುದು ಎಂದು ಕೇಂದ್ರ ಆಯೋಗ ಹೇಳಿದ್ದೇಕೆ ಎಂಬ ಪ್ರಶ್ನೆ ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ. ಅದೇ ಶನಿವಾರದಂದು ಅನರ್ಹ ಶಾಸಕರು ತಾವು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು (ಚಿಕ್ಕಬಳ್ಳಾಪುರದ ಮಾಜಿ ಶಾಸಕ ಸುಧಾಕರ್ ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ವ್ಯಸ್ತರಾಗಿದ್ದವರು ಅಲ್ಲಿಂದ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಓಡಿದರು) ಯಡಿಯೂರಪ್ಪನವರನ್ನು ಅರಣ್ಯ ಇಲಾಖೆಯ ಗೆಸ್ಟ್‍ಹೌಸ್‍ನಲ್ಲಿ ಭೇಟಿಯಾದರು. ಯಡಿಯೂರಪ್ಪನವರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ದೆಹಲಿಗೆ ಓಡಿದರು.

ಅಲ್ಲಿ ಅಮಿತ್‍ಶಾರನ್ನು ಭೇಟಿಯಾಗಿ ಹೊರಬಂದನಂತರ ‘ನಾಳೆ ಸುಪ್ರೀಂಕೋರ್ಟಿನಲ್ಲಿ ನಮಗೆ ಒಳ್ಳೆಯ ಫಲಿತಾಂಶ ಬರುವುದೆಂಬ ವಿಶ್ವಾಸವಿದೆ’ ಎಂದು ಹೇಳಿದರು. ಮರುದಿನ ಕೋರ್ಟು ಅವರ ಪರವಾಗಿ ಏನನ್ನೂ ಹೇಳಲಿಲ್ಲವಾದರೂ, ಚುನಾವಣಾ ಆಯೋಗದ ವಕೀಲರು ಸದರಿ ಕೇಸಿನಲ್ಲಿ ವಾದಿ-ಪ್ರತಿವಾದಿ ಅಲ್ಲದಿದ್ದರೂ ‘ಅನರ್ಹರು ಸ್ಪರ್ಧಿಸಬಹುದು’ ಎಂದು ಹೇಳುತ್ತಾರೆಂಬ ವಿಶ್ವಾಸ ಯಡಿಯೂರಪ್ಪನವರಿಗೆ ಹೇಗೆ ಬಂದಿತು? ಅಲ್ಲಿಂದಾಚೆಗೆ ಆಯೋಗವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಅನರ್ಹ ಶಾಸಕರು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣವಾಗುವವರೆಗೆ ಚುನಾವಣೆ ನಡೆಸುವುದಿಲ್ಲ ಎಂದೂ ಹೇಳಿತು. ಚುನಾವಣೆಯನ್ನು ಮುಂದೂಡಿಯೂ ಬಿಟ್ಟಿತು.

ಹಾಗಾದರೆ ಒಂದುವೇಳೆ 6 ತಿಂಗಳೊಳಗೆ ವಿಚಾರಣೆ ಪೂರ್ಣವಾಗಿ ತೀರ್ಪು ಬಾರದಿದ್ದರೆ? ಸಾಂವಿಧಾನಿಕ ಕರ್ತವ್ಯವನ್ನು ಕೆಲವು ‘ಅನರ್ಹ’ ಶಾಸಕರಿಗಾಗಿ ಚುನಾವಣಾ ಆಯೋಗವು ಬದಿಗೊತ್ತಿಬಿಡುತ್ತದೆಯೇ? ಬಹುಶಃ ಈ ಪ್ರಶ್ನೆಗೆ ಉತ್ತರವಾಗಿ ಅದು ಮತ್ತೆ ತರಾತುರಿಯಲ್ಲಿ (ಸುಪ್ರೀಂಕೋರ್ಟಿನ ವಿಚಾರಣೆ ಯಾವಾಗ ಮುಗಿಯುತ್ತದೆಂಬ ಕುರಿತು ಯಾವ ಹೊಸ ಬೆಳವಣಿಗೆಯೂ ಆಗದಿದ್ದರೂ) ಮುಂದೂಡಿದ ಚುನಾವಣೆಯ ದಿನಗಳನ್ನು ಘೋಷಣೆ ಮಾಡಿತು. ಎಷ್ಟು ತರಾತುರಿಯಿತ್ತೆಂದರೆ, ಚುನಾವಣಾ ಫಲಿತಾಂಶದ ದಿನಗಳನ್ನೂ ಘೋಷಿಸಲಿಲ್ಲ. ಬಹುಶಃ ‘ಒಂದುವೇಳೆ ಸುಪ್ರೀಂಕೋರ್ಟು ಅಷ್ಟರಲ್ಲಿ ತೀರ್ಮಾನ ಮಾಡದೇ ಇದ್ದಲ್ಲಿ ಫಲಿತಾಂಶ ಘೋಷಣೆ ಮಾಡದೇ ಕಾಯೋಣ’ ಎಂಬ ಅಡ್ಡಕಸುಬಿ ಐಡಿಯಾ ಯಾರಾದರೂ ಕೊಟ್ಟಿರಬೇಕು ಎನಿಸುತ್ತದೆ. ಅದನ್ನು ಬಿಟ್ಟರೆ ಇದಕ್ಕೆ ಬೇರಾವ ಕಾರಣವೂ ಕಾಣುತ್ತಿಲ್ಲ. ಮತ್ತೆ ಒಂದುದಿನ ಬಿಟ್ಟು ಫಲಿತಾಂಶದ ದಿನವನ್ನೂ ಆಯೋಗವು ನಿಗದಿ ಮಾಡಿತು.

ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಚುನಾವಣಾ ಆಯೋಗವು ಇಷ್ಟು ಎಡಬಿಡಂಗಿತನದಿಂದ ವರ್ತಿಸಿದ್ದನ್ನು ಯಾರೂ ಕಂಡಿಲ್ಲ. ಎಲ್ಲವೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಆಮಿಷ, ಬೆದರಿಕೆ, ಅಧಿಕಾರದಾಹದ ಕಾರಣಕ್ಕೆ ಪಕ್ಷಾಂತರ ಮಾಡಿದ ಜನದ್ರೋಹಿಗಳ ರಕ್ಷಣೆಗೆ!? ಹೀಗಿರುವಾಗ ಚುನಾವಣಾ ಆಯೋಗವು ಬಿಜೆಪಿ ಕಚೇರಿ ಎಂಬ ಆಪಾದನೆ ಯಾರಾದರೂ ಮಾಡಿದರೆ ಅದಕ್ಕೆ ಸಾಂದರ್ಭಿಕ ಸಾಕ್ಷ್ಯಗಳು ಮಾತ್ರವಲ್ಲದೇ, ಸಾಂವಿಧಾನಿಕ ಆಶಯಗಳ ಉಲ್ಲಂಘನೆಯ ಸ್ಪಷ್ಟ ನಿದರ್ಶನಗಳು ಸಿಗುತ್ತವೆ.

ಎಲ್ಲವೂ ಕೇಂದ್ರ ಆಯೋಗದ್ದೇ – ರಾಜ್ಯ ಚುನಾವಣಾ ಆಯುಕ್ತ

ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ ಎಂಬ ಹೇಳಿಕೆ ನೀಡಿದ್ದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಈಗ ತಮ್ಮ ಮಾತುಗಳನ್ನು ತಾವೇ ನುಂಗಬೇಕಾಗಿ ಬಂದಿದೆ. ಎರಡೇ ದಿನಗಳಲ್ಲಿ ಅದನ್ನು ಬದಲಿಸಿ ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಆಯೋಗ ಹೇಳಿಕೆ ನೀಡಿತು. ಆ ನಂತರ ಚುನಾವಣೆಯನ್ನು ಮುಂದೂಡಿತು; ಮತ್ತೆ ಚುನಾವಣಾ ದಿನಾಂಕ ಘೋಷಣೆ ಮಾಡಿತು. ಫಲಿತಾಂಶ ನಿಗದಿಯ ಪೂರಕ ಪತ್ರವನ್ನೂ ತಾನೇ ಬರೆಯಿತು. ಇದರ ಬಗ್ಗೆ ಸಂಜೀವ್ ಕುಮಾರ್ ಅವರನ್ನು ಕೇಳಿದಾಗ ‘ಎಲ್ಲವೂ ಕೇಂದ್ರ ಚುನಾವಣಾ ಆಯೋಗದಿಂದಲೇ ಬಂದಿದೆ. ಪೂರಕ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವುದೂ ಅವರೇ’ ಎಂದು ಹೇಳಿದ್ದು ವರದಿಯಾಗಿದೆ.
ರಾಜ್ಯಗಳಲ್ಲಿನ ಸಂಸ್ಥೆಗಳ ಮೇಲೂ ಕೇಂದ್ರದ ಕೂಟವೊಂದು ಹಿಡಿತ ಸಾಧಿಸಿ ಪ್ರಜಾತಂತ್ರವನ್ನು ಗಾಳಿಗೆ ತೂರಲು ಸಾಂವಿಧಾನಿಕ ಅಧಿಕಾರದಿಂದಲೇ ಸಾಧ್ಯವಾಗುವ ರೀತಿಯಲ್ಲಿ ನಮ್ಮ ರಚನೆಗಳಿವೆ. ಅದನ್ನು ಮೋದಿ-ಶಾ ನಿರ್ಲಜ್ಜವಾಗಿ ಬಳಸುತ್ತಿದ್ದಾರೆ. ಚುನಾವಣಾ ಆಯೋಗವು ಅವರ ಕೈಯ್ಯಲ್ಲಿನ ಅಂತಹ ಒಂದು ಅಸ್ತ್ರವಷ್ಟೇ ಆಗಿದೆ.

ಸುಪ್ರೀಂಕೋರ್ಟೂ ಅನುಮಾನಾತೀತವಲ್ಲ
ಈಕೇಸಿನಲ್ಲಿ ಚುನಾವಣಾ ಆಯೋಗವು ಇದ್ದಕ್ಕಿದ್ದಂತೆ ವಿಶೇಷ ಆಸ್ಥೆ ವಹಿಸಿದ ಕುರಿತು ಸುಪ್ರೀಂಕೋರ್ಟಿಗೆ ಯಾವ ತಕರಾರೂ ಇರಲಿಲ್ಲ. ಅನರ್ಹ ಶಾಸಕರ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಅಗತ್ಯವಿದೆ ಮತ್ತು ತಾತ್ಕಾಲಿಕ ಪರಿಹಾರ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯಪೀಠ ತಿಳಿಸಿತ್ತು. ಅದು ಸಮಂಜಸವೂ ಆಗಿತ್ತು. ಏಕೆಂದರೆ ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಿರಿಟ್, ಶಾಸಕಾಂಗ ಪರಮಾಧಿಕಾರದಲ್ಲಿ ನ್ಯಾಯಾಂಗ ಹೇಗೆ ಮಧ್ಯೆ ಪ್ರವೇಶಿಸಬಹುದು ಇತ್ಯಾದಿಗಳ ವಿಚಾರದಲ್ಲಿ ಸಂವಿಧಾನದ ಸೂಕ್ತ ವ್ಯಾಖ್ಯಾನದ ಅಗತ್ಯವಿತ್ತು. ಹೀಗಾಗಿ ಹಿರಿಯ ವಕೀಲರುಗಳ ಅಭಿಪ್ರಾಯ, ವಿಚಾರಣೆ, ರಾಜಕೀಯ ಪಕ್ಷಗಳ ಅನಿಸಿಕೆ ಇವೆಲ್ಲವನ್ನೂ ತೆಗೆದುಕೊಂಡು ಕೂಲಂಕಷವಾಗಿ ನೀಡಲಾಗುವ ತೀರ್ಪು ಮುಂದಿನ ದಿನಗಳಲ್ಲಿ ದಾರಿದೀಪವಾಗಿರುತ್ತದೆ. ಆದರೆ ಅದು ಆಯೋಗದ ಏಕಪಕ್ಷೀಯ ನಿಲುವಿಗೆ ಸೊಪ್ಪು ಹಾಕಿಬಿಟ್ಟಿತು. ತಾನೇ ತಾನಾಗಿ ಚುನಾವಣೆ ಮುಂದೂಡಿಕೆಯ ಮಾತನ್ನು ಆಡಲಿಲ್ಲ ಎಂಬುದನ್ನು ತಪ್ಪಿಸಿಕೊಂಡಂತೆಯೂ ಆಯಿತು. ಅನರ್ಹ ಶಾಸಕರಿಗಾಗಿ ಚುನಾವಣಾ ಪ್ರಕ್ರಿಯೆಯನ್ನೇ ಮುಂದೂಡಲು ಅನುವು ಮಾಡಿಕೊಟ್ಟಂತೆಯೂ ಆಯಿತು ಎಂಬಂತೆ ಸುಪ್ರೀಂಕೋರ್ಟು ವರ್ತಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...