HomeUncategorizedವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು! ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು! ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ತ್ಯತ್ಯಾಸ ಕಂಡು ಬರುತ್ತಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಕಲಬುರ್ಗಿಯಲ್ಲಿ ಮತ ಏಣಿಕೆ ಮುಗಿದ ನಂತರ ಲೆಕ್ಕ ಹಾಕಿದಾಗ, ಮತದಾನ ಆಗಿದ್ದಕ್ಕಿಂತ ಎಣಿಕೆ ಆದ ಮತಗಳು ಹೆಚ್ಚಿದ್ದವು! ಇದನ್ನು ಅಲ್ಲಿನ ‘ಪ್ರಜಾವಾಣಿ’ ವಿಸ್ತಾರವಾಗಿ ವರದಿ ಮಾಡಿತ್ತು. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಉತ್ತರ ಭಾರತದ ಎಂಟು ಆಯ್ದ ಕ್ಷೇತ್ರಗಳಲ್ಲಿ ತನಿಖೆ ನಡೆಸಿದ್ದು, ಎಲ್ಲ ಕಡೆ ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಜಾಸ್ತಿ ಇವೆ! ಈ ಕುರಿತು ಚುನಾವಣಾ ಆಯೋಗ ಉತ್ತರಿಸಲೇಬೇಕು ಎಂದು ಮೂವರು ಮಾಜಿ ಚುನಾವಣಾ ಆಯುಕ್ತರು ಒತ್ತಾಯಿಸಿದ್ದಾರೆ….

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗದು. ಸರಿ ಒಪ್ಪೋಣ. ಆದರೆ ನಿರ್ದಿಷ್ಠ ಪಕ್ಷವೊಂದಕ್ಕೆ ಮೊದಲೇ ಮತ ಚಲಾಯಿಸಿದ ಮತಯಂತ್ರಗಳನ್ನು ತಂದು ತುರುಕಲು ಸಾಧ್ಯವೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಮಾಡಿರುವ ತನಿಖೆ ಈ ಪ್ರಶ್ನೆಗಳನ್ನು ಎತ್ತಿದೆ ಮತ್ತು ಈ ಕುರಿತು ಧ್ವನಿ ಎತ್ತಿರುವ ಮೂವರು ಮಾಜಿ ಚುನಾವಣಾ ಆಯುಕ್ತರು ಆಯೋಗ ಈ ಕುರಿತು ಗೊಂದಲಗಳನ್ನು ಕೂಡಲೇ ಬಹೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೌಂಟಿಂಗ್‍ನಲ್ಲಿ ಹೆಚ್ಚಾಗಿದ್ದು ಹೇಗೆ?
ಈ ಪ್ರಶ್ನೆಯನ್ನು ಪ್ರಜಾಪ್ರಭುತ್ವ ಗೌರವಿಸುವ ಎಲ್ಲರೂ ಕೇಳಲೇಬೇಕಾಗಿದೆ. ಉತ್ತರಪ್ರದೇಶ, ಬಿಹಾರ್, ದೆಹಲಿ ಮತ್ತು ಮಧ್ಯಪ್ರದೇಶದ ಹಲವಾರು ಕ್ಷೇತ್ರಗಳಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಅವುಗಳಲ್ಲಿ ಎಂಟು ಕ್ಷೇತ್ರಗಳ ತನಿಖೆ ಮಾಡಿದಾಗ ಇದು ಸತ್ಯ ಎಂಬುದು ಸಾಬೀತಾಗಿದೆ. ಅದರಲ್ಲಿ ಪ್ರತಿಷ್ಠಿತ ಎನಿಸಿದ್ದ ಪಾಟ್ನಾ ಸಾಹೀಬ್, ಜೆಹಲ್ನಾಬಾದ್ ಮತ್ತು ಬೇಗುಸರಾಯ್ ಕ್ಷೇತ್ರಗಳೂ ಸೇರಿವೆ. ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತಗಳು ಹೆಚ್ಚಿವೆ, ಒಂದು ಕಡೆ ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತ ಕಡಿಮೆಯೂ ಇದೆ. ಈ ವ್ಯತ್ಯಾಸವೇ ಗೋಲ್‍ಮಾಲ್ ನಡೆದಿರಬಹುದು ಎಂಬ ದಟ್ಟ ಸಂಶಯಕ್ಕೆ ಕಾರಣವಾಗಿದೆ.

ಈ ಎಂಟು ಕ್ಷೇತ್ರಗಳ ಪೈಕಿ ಕನಿಷ್ಠ ಒಂದರಲ್ಲಿ, ಗೆಲುವಿನ ಅಂತರಕ್ಕಿಂತ ಮತ ವ್ಯತ್ಯಾಸ (ಕೌಂಟ್ ಆದ ಮತಗಳು ಮೈನಸ್ ವೋಟ್ ಆದ ಮತಗಳು)ವೇ ದೊಡ್ಡದಿದ್ದು ಬಹುಪಾಲು ಕ್ಷೇತ್ರಗಳಲ್ಲಿ ಇದು ಸಂಭವಿಸಿರಬಹುದು ಎಂದು ತನಿಖೆ ಉಲ್ಲೇಖಿಸಿದೆ. ಮೇ 23ರ ಏಣಿಕೆಗೂ ಮೊದಲು ಅಕ್ರಮವಾಗಿ ಎವಿಎಂಗಳನ್ನು ಸಾಗಿಸಿದ ವರದಿ ಮತ್ತು ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಇಲ್ಲೇನೋ ಮಸಲತ್ತು ನಡೆದಿದೆ ಎಂಬ ಸಂಶಯವನ್ನು ಈ ತನಿಖೆ ಇನ್ನಷ್ಟು ಗಟ್ಟಿಗೊಳಿಸಿದೆ.

ಮಾಜಿ ಆಯುಕ್ತರ ಆಗ್ರಹ
ಮೂವರು ಮಾಜಿ ಆಯುಕ್ತರು ಇದರ ವಿರುದ್ಧ ಧ್ವನಿ ಎತ್ತಿ ಆಯೋಗ ಕೂಡಲೇ ಈ ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ. 2011-12ರಲ್ಲಿ ಆಯುಕ್ತರಾಗಿದ್ದ ಖುರೇಶಿ, ಇದಕ್ಕೆ ಆಯೋಗದ ಬಳಿ ಕಾರಣಗಳಿರಬಹುದು. ಆದರೆ ಈ ವಿಷಯವಾಗಿ ಯಾರಾದರೂ ಕೋರ್ಟಿಗೆ ಹೋಗೋದು ಒಳ್ಳೆಯದು ಎಂದು ಹೇಳಿದ್ದಾರೆ.

ಖುರೇಷಿ

2006-09ರಲ್ಲಿ ಆಯುಕ್ತರಾಗಿದ್ದ ಗೋಪಾಲಸ್ವಾಮಿ, 2015ರಲ್ಲಿ ಆಯುಕ್ತರಾಗಿದ್ದ ಎಚ್.ಎಸ್ ಬ್ರಹ್ಮ ಕೂಡ ಇದೇ ತರಹದ ಪ್ರಶ್ನೆ ಎತ್ತುವ ಮೂಲಕ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!
ಪಾಟ್ನಾ ಸಾಹೀಬ್ ಕ್ಷೇತ್ರದಲ್ಲಿ ಬಿಜೆಪಿಯಿಂದ ರವಿಶಂಕರ ಪ್ರಸಾದ್ ಮತ್ತು ಕಾಂಗ್ರೆಸ್‍ನಿಂದ ಶತ್ರುಘನ ಸಿನ್ಹಾ ಸ್ಪರ್ಧಿಸಿದ್ದರು. ಅಲ್ಲಿ 20, 51, 905 ಅರ್ಹ ಮತದಾರರಿದ್ದು, ಮೇ 18ರಂದು ಶೇ 46.34ರಷ್ಟು ಮತದಾನವಾಗಿತ್ತು. ಆದರೆ ಮೇ 23ರಂದು ಏಣಿಕೆ ಮಾಡಿದಾಗ ಅಂಚೆಮತ ಸೇರಿ ರವಿಶಂಕರ ಪ್ರಸಾದ್‍ಗೆ 6,07,506, ಶತ್ರುಘ್ನ ಸಿನ್ಹಾಗೆ 3,22, 849 ಮತ್ತು ನೋಟಾ ಸೇರಿ ಇತರೆ 45,709 ಮತ ಲಭಿಸಿವೆ.

ಅಂದರೆ ಆಯೋಗದ ಪ್ರಕಾರ 9,82,285 ಮತಗಳು ದಾಖಲಾಗಿವೆ. ಶೆಕಡಾವಾರು ಮತದಾನದ ಪ್ರಕಾರ, 9,50,852 ಮತಗಳು ಹಾಕಲ್ಪಟ್ಟಿವೆ. ಈ ಹೆಚ್ಚುವರಿ 31,433 ಮತಗಳು ಎಲ್ಲಿಂದ ಬಂದವು?

ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ಯತ್ಯಾಸ ಕಂಡು ಬರುತ್ತಿದೆ.

ಇದು ಕೇವಲ ಅಂಕಗಣಿತದ ತಪ್ಪಾಗಿರಲಾರದು. ಏಕೆಂದರೆ ದೇಶದ ನಾನಾ ಕಡೆಯಿಂದ ಈ ಸಂಶಯಗಳು ಕೇಳಿ ಬಂದಿವೆ. ರಾಜ್ಯದ ಪ್ರತಿಷ್ಠಿತ ಕಲಬುರ್ಗಿ ಕ್ಷೇತ್ರದಲ್ಲೂ ಅಪರಾ ತಪರಾ ಕಂಡುಬಂದಿದೆ.

ಈಗಲಾದರೂ ಚುನಾವಣಾ ಆಯೋಗ ಈ ವ್ಯತ್ಯಾಸಗಳಿಗೆ ಕಾರಣ ನೀಡಲೇಬೇಕು. ಹೆಚ್ಚುವರಿ ಮತಗಳು ಹೇಗೆ ಬಂದವು ಎಂಬುದನ್ನೂ ವಿವರಿಸಬೇಕು….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಆದರೆ ಆಗಲಿ ಬಿಡಿ. ಗೆದ್ದು ಬಂದರೂ ಅವರು ಮಾಡೋದು ಅಷ್ಟರಲ್ಲೇ ಇದೆ. ಆಯ್ಕೆ ಆದವರೆಲ್ಲ ಖಜಾನೆ ದರೋಡೆ ಮಾಡಿಯೇ ಸಿದ್ಧ. ಮತದಾನ ಮಾಡಿದವರಿಗೆ ನಯಾ ಪೈಸೆ ಲಾಭ ಆಗಿದೆಯೇ. ಮತ ದಾನ ಮಾಡಿ ಮಾಡಿ ಮತದಾರ ಕೆಟ್ಟ.. ಮತ ದಾನ ಮಾಡಿಸಿಕೊಂಡಾವ ಲೂಟಿ ಮಾಡಿ ಮಾಡಿ ಅವನ ವಂಶವೃಕ್ಷ ತಿಂದು ತೇಗಿದರೂ ಹತ್ತಾರು ತಲೆಮಾರುಗಳು ಸುಖವಾಗಿರಬಹುದು ಅಷ್ಟು ದರೋಡೆ ಮಾಡಿ ಪ್ರಜಾಪ್ರಭುತ್ವ ಕೆಟ್ಟ ಹಾಳಾಗೋ ಹಾಗೆ ಮಾಡಿದ. ಯಾವಾನ್ ಗೆದ್ದರೂ ಕಳ್ಳತನ ಮಾಡೋದ್ ತಾನೆ. ಒಬ್ಬನಿಗಾದರೂ ದೇಶದ ಅಭಿವೃದ್ಧಿ ಅಂದರೇನು ಅಂತಾ ಗೊತ್ತಾ..? ಅವರ ಕುಟುಂಬದವರೆಲ್ಲರ ನವರಂಧ್ರಗಳು ಸುಖ ಪಡಬೇಕು. ರೈತರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕು. ವಿಷ ಕುಡಿದು ಸಾಯಬೇಕು. ನಿರುದ್ಯೋಗಿಗಳು ಕೆಲಸ ಇಲ್ಲದೇ ಹುಚ್ಚರಂಥೆ ಅಲೆಯಬೇಕು. ಇದನ್ನು ಬಿಟ್ಟು ಈ ದೇಶದ ಚುನಾವಣೆಯ ನಂತರ ದೇಶ ಬದಲಾಗಿದೆಯೇ..? ಎಲ್ಲಾ ಖಧೀಮರು, ಭ್ರಷ್ಟರು. ಎಂಟು ದಶಕಗಳು ಕಳೆದರೂ ಜನರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಚುನಾವಣೆ ನೆಪಕ್ಕೆ ಮಾತ್ರ. ಇಷ್ಟು ದಶಕಗಳಲ್ಲಿ ಆಯ್ಕೆ ಆಗಿದ್ದವರಲ್ಲಿ ಒಬ್ಬನಾದರೂ ಸಾಚಾ ಇದ್ದರೆ ಎದಿ ಮುಟ್ಟಿ ಕೊಂಡು ಹೇಳಲಿ ನೋಡೋಣ.

  2. ಈ ಸುದ್ದಿಯ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳದೇ ನಂಬುವುದು ಕಷ್ಟ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...