Homeಕರ್ನಾಟಕಬಾಗಲಕೋಟೆ: ಸೋಮಾರಿ ಸಂಸದನ ಗದ್ದುಗೆಗೆ ಆ್ಯಕ್ಟಿವ್ ಹುಡುಗಿಯ ಚಾಲೆಂಜ್!

ಬಾಗಲಕೋಟೆ: ಸೋಮಾರಿ ಸಂಸದನ ಗದ್ದುಗೆಗೆ ಆ್ಯಕ್ಟಿವ್ ಹುಡುಗಿಯ ಚಾಲೆಂಜ್!

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |

ಎಲೆಕ್ಷನ್ ರೌಂಡ್ ಅಪ್: ಬಾಗಲಕೋಟೆ
ಒಂದು ಕಡೆ ಚುನಾವಣೆಗೆ ನಿಲ್ಲಲು ಆಸಕ್ತಿಯೇ ಇರದ ಸಂಸದ ಪಿ.ಸಿ. ಗದ್ದಿಗೌಡರನ್ನು ಬಿಜೆಪಿ ಒತ್ತಾಯದಿಂದ ಕಣಕ್ಕಿಳಿಸಿದೆ. ಇನ್ನೊಂದು ಕಡೆ ಪಾರಂಪರಿಕ ಲೋಕಲ್ ಕಾಂಗ್ರೆಸ್ ನಾಯಕರ ಅಸಡ್ಡೆಯನ್ನು ಮೆಟ್ಟಿ ಹಾಕಿದ ಯುವತಿಯೊಬ್ಬಳು ಗೆಲ್ಲಲೇಬೇಕೆಂದು ಹಟಕ್ಕೆ ಬಿದ್ದು ಫೀಲ್ಡಿಗೆ ಇಳಿದಿದ್ದಾಳೆ. ಗೆಲುವು ಈ ಯುವತಿಯ ಪರವೇ ನಿಂತಂತಿದೆ.

ಬಾಗಲಕೋಟೆ ಕ್ಷೇತ್ರ ಈ ಸಲ ಗಮನ ಸೆಳೆದಿರುವುದು ಮೂರು ಕಾರಣಗಳಿಂದಾಗಿ. ಒಂದು, ಪುಟು ಪುಟು ಓಡಾಡುತ್ತ ಕ್ಷೇತ್ರದ ತುಂಬೆಲ್ಲ ಪ್ರಚಾರ ಮಾಡುತ್ತ ಜನರನ್ನು ಸೆಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶೆಪ್ಪನವರ್. ಎರಡನೇಯದು, ಬಾದಾಮಿ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭಿರವಾಗಿ ಪರಿಗಣಿಸಿರುವುದು. ಮೂರನೆಯ ಮತ್ತು ಅತಿ ಮುಖ್ಯ ಕಾರಣ: ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರವಿದ್ದ ಪಂಚಮಸಾಲಿ ಸಮಯದಾಯ ಈ ಸಲ ತಮ್ಮದೇ ಸಮುದಾಯದ ವೀಣಾ ಪರ ನಿಂತಿರುವುದು.

ಬಾಗಲಕೋಟೆಯಲ್ಲಿ 2009 ಮತ್ತು 2014ರಲ್ಲಿ ಬಿಜೆಪಿಯಿಂದ ಸಂಸದರಾಗಿರುವ ಗಾಣಿಗ ಸಮುದಾಯದ ಗದ್ದಿಗೌಡರು ಸಂಭಾವಿತರು ಎಂಬ ಬಗ್ಗೆ ಎರಡು ಮಾತಿಲ್ಲ. ಅವರೆಂದೂ ಬಾಗಲಕೋಟೆ ಬಿಜೆಪಿ ಶಾಸಕ ಚರಂತಿಮಠ, ತೇರದಾಳದ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ತರಹ ಕೋಮು ಉನ್ಮಾದದ ರಾಜಕಾರಣ ಮಾಡಿದವರಲ್ಲ. ಜಮಖಂಡಿ ಶಾಸಕ ಮುರುಗೇಶ ನಿರಾಣಿ, ಹುನಗುಂದದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರಂತೆ ಬ್ಯುಸಿನೆಸ್ ಇಂಟರೆಸ್ಟ್ ಹೊಂದಿದವರಲ್ಲ. ಆದರೆ, ಅವರು ಮಹಾ ಸೋಮಾರಿ. ಚುನಾವಣೆಯಲ್ಲಿ ಮುಖ ತೋರಿಸುವ ಗದ್ದಿಗೌಡರು ನಂತರ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ಪಕ್ಷದ ಸಾರ್ವಜನಿಕ ಸಭೆಗಳಲ್ಲೂ ಅವರಿಗೆ ಆಸಕ್ತಿ ಇಲ್ಲವೇ ಇಲ್ಲ. ಇದಕ್ಕಿಂತ ಮಿಗಿಲಾಗಿ 10 ವರ್ಷಗಳಲ್ಲಿ ಬಾಗಲಕೋಟೆಗೆ ಅವರು ಕೊಟ್ಟಿದ್ದು ಶೂನ್ಯ.

ಗದ್ದಿಗೌಡರ್ ನಿರುಪ್ರದವಿ ಇರಬಹುದು, ಆದರೆ ಸೋಮಾರಿ ಎಂಬುದು ಈ ಸಲ ಹೈಟಾಗಲು ಕಾರಣ ಎದುರಿಗೆ ನಿಂತಿರುವ ಯುವತಿ ಹುಮ್ಮಸ್ಸಿನಿಂದ ಪುಟಿದೇಳುವ, ರಾಜಕೀಯವನ್ನು ಜನಸೇವೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿರುವ ಯುವತಿ.

ಬಾಗಲಕೋಟೆ ಕ್ಷೇತ್ರದಲ್ಲಿ ಗದಗ ಜಿಲ್ಲೆಯಾ ನರಗುಂದವೂ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದುಬಿಜೆಪಿಗೆ ವರವಾಗಬಹುದೇ ಎಂಬ ಪ್ರಶನೆ ಸಹಜ. 2014ರಲ್ಲಿ ಕಾಂಗ್ರಸ್‍ನಿಂದ ಇಲ್ಲಿ 7 ಶಾಸಕರಿದ್ದರೂ ಗದ್ದಿಗೌಡರ್ ಇಲ್ಲಿ 5,220 ಮತಗಳಿಂದ ಗೆದ್ದಿದ್ದರು. ಆಗ ಮೋದಿಯ ಸೃಷ್ಟಿತ ಹವಾ ಇತ್ತು. ಅದಕ್ಕೂ ಮುಖ್ಯವಾಗಿ ಇಲ್ಲಿ ಸದಾ ಜಾತಿ ರಾಜಕಾರಣವೇ ರ್ಮಯಲುಗೈ ಪಡೆದಿದ್ದು ಬಿಜೆಪಿಗೆ ವರದಾನವಾಗಿತ್ತು.

ಇಲ್ಲಿ ಲಿಂಗಾಯತ/ವೀರಶೈವ ಜಾತಿಗೆ ಸೇರಿದ ಗಾಣಿಗರು, ಪಂಚಮಸಾಲಿಗಳು ಮತ್ತು ರೆಡಿಗಳು ತಲಾ ಒಂದೂವರೆ ಲಕ್ಷದಷ್ಟು ಮತಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ರಡ್ಡಿಗಳ ಟಿಕೆಟ್ ಕೊಟ್ಟ ಪರಿಣಾಮ, ಗಾಣಿಗರು ಮತ್ತು ಪಂಚಮಸಾಲಿಗಳು ಒಟ್ಟಾಗಿ ಬಿಜೆಪಿ ನೆರವಿಗೆ ಬರುತ್ತಿದ್ದರು. ಈ ಸಲ ಪಂಚಮಸಾಲಿಗೆ ಸೇರಿದ ಮಹಿಳಾ ಅಭ್ಯರ್ಥಿ ಕಣದಲ್ಲಿ ರಂಗು ಎಬ್ಬಿಸುವ ಮೂಲಕ ಹೊಸ ಜಾತಿ ಸಂಇಕರಣದ ಗೆಲುವಿನತ್ತ ಮುನ್ನುಗುತ್ತಿದ್ದಾರೆ.

ಸುಮಾರು ಎರಡೂವರೆ ಲಕ್ಷದಷ್ಟಿರು ದಲಿತ ಮತಗಳು ಹೆಚ್ಚೂ ಕಡಿಮೆ ಕಾಂಗ್ರೆಸ್ ಪರವೇ ಇವೆ. ಒಂದು ಲಕ್ಷದಷ್ಟಿರುವ ಎಸ್‍ಟಿ ಮತಗಳಲ್ಲಿ ಎರಡೂ ಪಾರ್ಟಿಗಳು ಸಮಾನವಾಗಿ ಮತ ಪಡೆಯಬಹುದೇನೋ? ಎರಡೂವರೆ ಲಕ್ಷದಷ್ಟಿರುವ ಮುಸ್ಲಿಮರು ಕಾಂಗ್ರೆಸ್ ಪರವೇ. ಎರಡೂವರೆ ಲಕ್ಷದಷ್ಟಿರುವ ಕುರುಬರು ಮತ್ತು ಒಂದೂವರೆ ಲಕ್ಷದಷ್ಟಿರುವ ನೇಕಾರರು ಈ ಸಲ ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಪರ ನಿಲ್ಲುವ ದಟ್ಟ ಸಾಧ್ಯತೆ ಇವೆ. ಸಿದ್ದರಾಮಯ್ಯ ಒಂದು ದಿನ ಮತ್ತು ಸತೀಶ ಜಾರಕಿಹೊಳಿ ಎರಡು ದಿನ ಇಲ್ಲಿ ಪ್ರಚಾರ ಮಾಡಲಿದ್ದು ಅದು ಕಾಂಗ್ರೆಸ್ ಗೆಲುವಿಗೆ ದೊಡ್ಡ ‘ಬೂಸ್ಟ್’

ಜಾತಿ ಮೀರಿದ ಜಾಣೆ
ಜಿಪಂ ಸದಸ್ಯೆ ಆಗಿರುವ ವೀಣಾ ಕಾಶಪ್ಪನವರ್ ಹುನಗುಂದದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಪತ್ನಿ. ವಿಜಯಾನಂದನ ಹುಂಬ ಕ್ಯಾರೆಕ್ಟರ್‍ಗೆ ಈಕೆ ತದ್ವಿರುದ್ಧ. ಎಲ್ಲ ಜನರೊಡನೆ ಆತ್ಮೀಯತೆಯಿಂದ ಬೆರೆಯುವ, ಯುಜನತೆಯ ಮಧ್ಯದಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ವೀಣಾ ಮಾಡಿದ್ದಾರೆ. ಈಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಅವರು ಮಾಡಿರುವ ಕೆಲಸಗಳು ಗಮನ ಸೆಳೆದಿವೆ. ನೀರಾವರಿ, ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಹಾಸ್ಟೇಲ್‍ಗಳ ನಿರ್ವಹಣೆಯಲ್ಲಿ ಗುಣಮಟ್ಟ ತಂದ ಹಿರಿಮೆಯೂ ಅವರಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳಲ್ಲಿ ವಿಶೇಷ ಆಸಕ್ತಿ ತೋರಿದ್ದರಿಂದ ಅವರಿಗೆ ಮಹಿಳಾ ಮತದಾರರೂ ಒಲಿದಿದ್ದಾರೆ.
ಹೀಗಾಗಿ, ಈ ಸಲ ಗದ್ದಿಗೌಡರ ಗದ್ದುಗೆಯನ್ನು ಈ ಯುವತಿ ಕಿತ್ತುಕೊಳ್ಳುವ ಚಾನ್ಸ್ ಜಾಸ್ತಿನೇ ಇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...