Homeಕರ್ನಾಟಕಬಾಗಲಕೋಟೆ: ಸೋಮಾರಿ ಸಂಸದನ ಗದ್ದುಗೆಗೆ ಆ್ಯಕ್ಟಿವ್ ಹುಡುಗಿಯ ಚಾಲೆಂಜ್!

ಬಾಗಲಕೋಟೆ: ಸೋಮಾರಿ ಸಂಸದನ ಗದ್ದುಗೆಗೆ ಆ್ಯಕ್ಟಿವ್ ಹುಡುಗಿಯ ಚಾಲೆಂಜ್!

- Advertisement -
- Advertisement -

| ಮಹಾಲಿಂಗಪ್ಪ ಆಲಬಾಳ |

ಎಲೆಕ್ಷನ್ ರೌಂಡ್ ಅಪ್: ಬಾಗಲಕೋಟೆ
ಒಂದು ಕಡೆ ಚುನಾವಣೆಗೆ ನಿಲ್ಲಲು ಆಸಕ್ತಿಯೇ ಇರದ ಸಂಸದ ಪಿ.ಸಿ. ಗದ್ದಿಗೌಡರನ್ನು ಬಿಜೆಪಿ ಒತ್ತಾಯದಿಂದ ಕಣಕ್ಕಿಳಿಸಿದೆ. ಇನ್ನೊಂದು ಕಡೆ ಪಾರಂಪರಿಕ ಲೋಕಲ್ ಕಾಂಗ್ರೆಸ್ ನಾಯಕರ ಅಸಡ್ಡೆಯನ್ನು ಮೆಟ್ಟಿ ಹಾಕಿದ ಯುವತಿಯೊಬ್ಬಳು ಗೆಲ್ಲಲೇಬೇಕೆಂದು ಹಟಕ್ಕೆ ಬಿದ್ದು ಫೀಲ್ಡಿಗೆ ಇಳಿದಿದ್ದಾಳೆ. ಗೆಲುವು ಈ ಯುವತಿಯ ಪರವೇ ನಿಂತಂತಿದೆ.

ಬಾಗಲಕೋಟೆ ಕ್ಷೇತ್ರ ಈ ಸಲ ಗಮನ ಸೆಳೆದಿರುವುದು ಮೂರು ಕಾರಣಗಳಿಂದಾಗಿ. ಒಂದು, ಪುಟು ಪುಟು ಓಡಾಡುತ್ತ ಕ್ಷೇತ್ರದ ತುಂಬೆಲ್ಲ ಪ್ರಚಾರ ಮಾಡುತ್ತ ಜನರನ್ನು ಸೆಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶೆಪ್ಪನವರ್. ಎರಡನೇಯದು, ಬಾದಾಮಿ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭಿರವಾಗಿ ಪರಿಗಣಿಸಿರುವುದು. ಮೂರನೆಯ ಮತ್ತು ಅತಿ ಮುಖ್ಯ ಕಾರಣ: ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರವಿದ್ದ ಪಂಚಮಸಾಲಿ ಸಮಯದಾಯ ಈ ಸಲ ತಮ್ಮದೇ ಸಮುದಾಯದ ವೀಣಾ ಪರ ನಿಂತಿರುವುದು.

ಬಾಗಲಕೋಟೆಯಲ್ಲಿ 2009 ಮತ್ತು 2014ರಲ್ಲಿ ಬಿಜೆಪಿಯಿಂದ ಸಂಸದರಾಗಿರುವ ಗಾಣಿಗ ಸಮುದಾಯದ ಗದ್ದಿಗೌಡರು ಸಂಭಾವಿತರು ಎಂಬ ಬಗ್ಗೆ ಎರಡು ಮಾತಿಲ್ಲ. ಅವರೆಂದೂ ಬಾಗಲಕೋಟೆ ಬಿಜೆಪಿ ಶಾಸಕ ಚರಂತಿಮಠ, ತೇರದಾಳದ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ತರಹ ಕೋಮು ಉನ್ಮಾದದ ರಾಜಕಾರಣ ಮಾಡಿದವರಲ್ಲ. ಜಮಖಂಡಿ ಶಾಸಕ ಮುರುಗೇಶ ನಿರಾಣಿ, ಹುನಗುಂದದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರಂತೆ ಬ್ಯುಸಿನೆಸ್ ಇಂಟರೆಸ್ಟ್ ಹೊಂದಿದವರಲ್ಲ. ಆದರೆ, ಅವರು ಮಹಾ ಸೋಮಾರಿ. ಚುನಾವಣೆಯಲ್ಲಿ ಮುಖ ತೋರಿಸುವ ಗದ್ದಿಗೌಡರು ನಂತರ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ಪಕ್ಷದ ಸಾರ್ವಜನಿಕ ಸಭೆಗಳಲ್ಲೂ ಅವರಿಗೆ ಆಸಕ್ತಿ ಇಲ್ಲವೇ ಇಲ್ಲ. ಇದಕ್ಕಿಂತ ಮಿಗಿಲಾಗಿ 10 ವರ್ಷಗಳಲ್ಲಿ ಬಾಗಲಕೋಟೆಗೆ ಅವರು ಕೊಟ್ಟಿದ್ದು ಶೂನ್ಯ.

ಗದ್ದಿಗೌಡರ್ ನಿರುಪ್ರದವಿ ಇರಬಹುದು, ಆದರೆ ಸೋಮಾರಿ ಎಂಬುದು ಈ ಸಲ ಹೈಟಾಗಲು ಕಾರಣ ಎದುರಿಗೆ ನಿಂತಿರುವ ಯುವತಿ ಹುಮ್ಮಸ್ಸಿನಿಂದ ಪುಟಿದೇಳುವ, ರಾಜಕೀಯವನ್ನು ಜನಸೇವೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿರುವ ಯುವತಿ.

ಬಾಗಲಕೋಟೆ ಕ್ಷೇತ್ರದಲ್ಲಿ ಗದಗ ಜಿಲ್ಲೆಯಾ ನರಗುಂದವೂ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದುಬಿಜೆಪಿಗೆ ವರವಾಗಬಹುದೇ ಎಂಬ ಪ್ರಶನೆ ಸಹಜ. 2014ರಲ್ಲಿ ಕಾಂಗ್ರಸ್‍ನಿಂದ ಇಲ್ಲಿ 7 ಶಾಸಕರಿದ್ದರೂ ಗದ್ದಿಗೌಡರ್ ಇಲ್ಲಿ 5,220 ಮತಗಳಿಂದ ಗೆದ್ದಿದ್ದರು. ಆಗ ಮೋದಿಯ ಸೃಷ್ಟಿತ ಹವಾ ಇತ್ತು. ಅದಕ್ಕೂ ಮುಖ್ಯವಾಗಿ ಇಲ್ಲಿ ಸದಾ ಜಾತಿ ರಾಜಕಾರಣವೇ ರ್ಮಯಲುಗೈ ಪಡೆದಿದ್ದು ಬಿಜೆಪಿಗೆ ವರದಾನವಾಗಿತ್ತು.

ಇಲ್ಲಿ ಲಿಂಗಾಯತ/ವೀರಶೈವ ಜಾತಿಗೆ ಸೇರಿದ ಗಾಣಿಗರು, ಪಂಚಮಸಾಲಿಗಳು ಮತ್ತು ರೆಡಿಗಳು ತಲಾ ಒಂದೂವರೆ ಲಕ್ಷದಷ್ಟು ಮತಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ರಡ್ಡಿಗಳ ಟಿಕೆಟ್ ಕೊಟ್ಟ ಪರಿಣಾಮ, ಗಾಣಿಗರು ಮತ್ತು ಪಂಚಮಸಾಲಿಗಳು ಒಟ್ಟಾಗಿ ಬಿಜೆಪಿ ನೆರವಿಗೆ ಬರುತ್ತಿದ್ದರು. ಈ ಸಲ ಪಂಚಮಸಾಲಿಗೆ ಸೇರಿದ ಮಹಿಳಾ ಅಭ್ಯರ್ಥಿ ಕಣದಲ್ಲಿ ರಂಗು ಎಬ್ಬಿಸುವ ಮೂಲಕ ಹೊಸ ಜಾತಿ ಸಂಇಕರಣದ ಗೆಲುವಿನತ್ತ ಮುನ್ನುಗುತ್ತಿದ್ದಾರೆ.

ಸುಮಾರು ಎರಡೂವರೆ ಲಕ್ಷದಷ್ಟಿರು ದಲಿತ ಮತಗಳು ಹೆಚ್ಚೂ ಕಡಿಮೆ ಕಾಂಗ್ರೆಸ್ ಪರವೇ ಇವೆ. ಒಂದು ಲಕ್ಷದಷ್ಟಿರುವ ಎಸ್‍ಟಿ ಮತಗಳಲ್ಲಿ ಎರಡೂ ಪಾರ್ಟಿಗಳು ಸಮಾನವಾಗಿ ಮತ ಪಡೆಯಬಹುದೇನೋ? ಎರಡೂವರೆ ಲಕ್ಷದಷ್ಟಿರುವ ಮುಸ್ಲಿಮರು ಕಾಂಗ್ರೆಸ್ ಪರವೇ. ಎರಡೂವರೆ ಲಕ್ಷದಷ್ಟಿರುವ ಕುರುಬರು ಮತ್ತು ಒಂದೂವರೆ ಲಕ್ಷದಷ್ಟಿರುವ ನೇಕಾರರು ಈ ಸಲ ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಪರ ನಿಲ್ಲುವ ದಟ್ಟ ಸಾಧ್ಯತೆ ಇವೆ. ಸಿದ್ದರಾಮಯ್ಯ ಒಂದು ದಿನ ಮತ್ತು ಸತೀಶ ಜಾರಕಿಹೊಳಿ ಎರಡು ದಿನ ಇಲ್ಲಿ ಪ್ರಚಾರ ಮಾಡಲಿದ್ದು ಅದು ಕಾಂಗ್ರೆಸ್ ಗೆಲುವಿಗೆ ದೊಡ್ಡ ‘ಬೂಸ್ಟ್’

ಜಾತಿ ಮೀರಿದ ಜಾಣೆ
ಜಿಪಂ ಸದಸ್ಯೆ ಆಗಿರುವ ವೀಣಾ ಕಾಶಪ್ಪನವರ್ ಹುನಗುಂದದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಪತ್ನಿ. ವಿಜಯಾನಂದನ ಹುಂಬ ಕ್ಯಾರೆಕ್ಟರ್‍ಗೆ ಈಕೆ ತದ್ವಿರುದ್ಧ. ಎಲ್ಲ ಜನರೊಡನೆ ಆತ್ಮೀಯತೆಯಿಂದ ಬೆರೆಯುವ, ಯುಜನತೆಯ ಮಧ್ಯದಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ವೀಣಾ ಮಾಡಿದ್ದಾರೆ. ಈಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಅವರು ಮಾಡಿರುವ ಕೆಲಸಗಳು ಗಮನ ಸೆಳೆದಿವೆ. ನೀರಾವರಿ, ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಹಾಸ್ಟೇಲ್‍ಗಳ ನಿರ್ವಹಣೆಯಲ್ಲಿ ಗುಣಮಟ್ಟ ತಂದ ಹಿರಿಮೆಯೂ ಅವರಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳಲ್ಲಿ ವಿಶೇಷ ಆಸಕ್ತಿ ತೋರಿದ್ದರಿಂದ ಅವರಿಗೆ ಮಹಿಳಾ ಮತದಾರರೂ ಒಲಿದಿದ್ದಾರೆ.
ಹೀಗಾಗಿ, ಈ ಸಲ ಗದ್ದಿಗೌಡರ ಗದ್ದುಗೆಯನ್ನು ಈ ಯುವತಿ ಕಿತ್ತುಕೊಳ್ಳುವ ಚಾನ್ಸ್ ಜಾಸ್ತಿನೇ ಇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...