Homeಸಾಹಿತ್ಯ-ಸಂಸ್ಕೃತಿಕಥೆಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

ಪುರಾಣ ಮತ್ತು ವರ್ತಮಾನದ ಭೀಷ್ಮಂದಿರ ಹೋಲಿಕೆಗಳು !!!

- Advertisement -
- Advertisement -

| ಇಸ್ಮತ್ ಪಜೀರ್ |

ಭೀಷ್ಮ ಒಮ್ಮೆ ನಡೆದುಕೊಂಡು ಹೋಗುತ್ತಿರುವಾಗ ಆತನ ಊರುಗೋಲಿನಡಿಗೆ ಸಿಲುಕಿದ ಓತಿಕ್ಯಾತವೊಂದು ಅಪ್ಪಚ್ಚಿಯಾಗುತ್ತದೆ. ಹಾಗೆ ವಿಲವಿಲನೆ ಒದ್ದಾಡುತ್ತಿರುವ ಓತಿಕ್ಯಾತನ ಮೇಲೆ ಕಿಂಚಿತ್ತೂ ಕರುಣೆ ತೋರದೇ ಭೀಷ್ಮ ಅದನ್ನು ತನ್ನ ಊರಿಗೋಲಿನ ತುದಿಯಲ್ಲೇ ಎತ್ತಿ ಮುಳ್ಳಿನ ಗಿಡವೊಂದರ ಮೇಲೆ ಎಸೆಯುತ್ತಾನೆ. ಅಸಹಾಯಕ ಓತಿಕ್ಯಾತ ಭೀಷ್ಮ ನಿಗೆ ನೀನು ಶರಶಯ್ಯೆಯಲ್ಲೇ ಒದ್ದಾಡಿ ಪ್ರಾಣ ಬಿಡುವಂತಾಗಲಿ ಎಂದು ಶಾಪ ಹಾಕುತ್ತದೆ. ಓತಿಕ್ಯಾತನ ಶಾಪವೇ ಭೀಷ್ಮನಿಗೆ ಶರಶಯ್ಯೆಯ ಮರಣ ತಂದಿದೆ ಎಂಬುವುದೂ ಕನ್ನಡದ ಜನಪದರ ನಂಬುಗೆ.

ಮಹಾಭಾರತದ ಭೀಷ್ಮ ತನ್ನ ಶಿಷ್ಯಂದಿರ ಪಟ್ಟವನ್ನು ಖಾಯಂಗೊಳಿಸುವ ಕನಸ ಹೊತ್ತವನಾಗಿದ್ದರೆ…
ಬಿಜೆಪಿಯ ಭೀಷ್ಮ ಸ್ವತಃ ತಾನೇ ರಾಜನಾಗುವ ಕನಸು ಹೊತ್ತಿದ್ದವರು. ಮಹಾಭಾರತದ ಭೀಷ್ಮ ಹೇಗೆ ಕೊನೆಗೂ ತನ್ನ ಶಿಷ್ಯಂದಿರ ಪಟ್ಟ ಉಳಿಸಲು ಸಾಧ್ಯವಾಗಲಿಲ್ಲವೋ… ಹಾಗೆಯೇ ಬಿಜೆಪಿಯ ಭೀಷ್ಮನೂ ತನ್ನ ಕನಸನ್ನು ಸಾಕಾರಗೊಳಿಸಿ ಪಟ್ಟವೇರಲು ಸಾಧ್ಯವಾಗದಿದ್ದುದು ಪುರಾಣ ಮತ್ತು ವರ್ತಮಾನದ ಕ್ರೂರ ವ್ಯಂಗ್ಯವೇ ಸರಿ.

ಇದೀಗ‌ ಬಿಜೆಪಿಯ ಭೀಷ್ಮ ‌ಅಡ್ವಾಣಿಯದ್ದೂ‌ ಮಹಾಭಾರತದ ಭೀಷ್ಮನದ್ದೇ ಸ್ಥಿತಿ. ಇಂದು ಅಡ್ವಾಣಿ ಎಷ್ಟೇ‌‌ ಸುಭಗನಂತೆ ನಟಿಸಲಿ. ಅಡ್ವಾಣಿಗೆ ಅವರ ಪಾಪದ ಫಲ ದೊರೆಯುತ್ತಿದೆ ಎಂದಷ್ಟೇ ಇಂದಿನ‌ ಅವರ ದಯನೀಯ ಸ್ಥಿತಿಯನ್ನು ವಿಶ್ಲೇಷಿಸುವುದು ಹೆಚ್ಚು ಸೂಕ್ತ.

ಅಡ್ವಾಣಿ ತನ್ನ ರಾಜಕೀಯ ಏಳಿಗೆಗಾಗಿ ಮಾಡಿದ ಕೃತ್ಯಗಳು ಕಡಿಮೆ ಕ್ರೌರ್ಯಯದ್ದೇನಲ್ಲ. ಸ್ವತಃ ತಾನು ಕ್ರೌರ್ಯ ಮಾಡಿಸಿದ್ದಲ್ಲದೇ, ತನ್ನ ಶಿಷ್ಯಂದಿರಾದ ಕೌರವರು ಮಾಡಿದ ಕ್ರೌರ್ಯಕ್ಕೆ ಬೀಷ್ಮ ಮೌನಸಮ್ಮತಿ ನೀಡಿ ಒಳಗೊಳಗೇ ನಕ್ಕಂತೆ… ತನ್ನ ಶಿಷ್ಯಂದಿರಾದ ಮೋದಿ- ಶಾ ಜೋಡಿ ಗುಜರಾತಿನಲ್ಲಿ ಮಾಡಿದ ಅಮಾನವೀಯ ಬರ್ಬರ ಕೃತ್ಯಕ್ಕೆ ಇಂದು ತನ್ನ ರಾಜಕೀಯ ಬದುಕಿನ ಶರಶಯ್ಯೆಯಲ್ಲಿ ಮಲಗಿರುವ ಬಿಜೆಪಿಯ ಬೀಷ್ಮ ಪಿತಾಮಹ ಅಡ್ವಾಣಿ ಒಳಗೊಳಗೇ ನಗುತ್ತಾ ಮೌನ ಸಮ್ಮತಿ ನೀಡಿದ್ದು ಇತಿಹಾಸದ ಪುಟ ಸೇರುವಷ್ಟು ಹಳತಾಗಿಲ್ಲ.

ಮಹಾಭಾರತದ ಬೀಷ್ಮನಿಗೆ ಓತಿಕ್ಯಾತನ ಶಾಪವೆಂದು ಜನಪದರು ನಂಬಿದರೆ, ನಮ್ಮ ಕಾಲದ ರಾಜಕೀಯ ಬೀಷ್ಮನಿಗೆ ಎರಡೆರಡು ಶಾಪವಿದೆ. ಒಂದನೆಯದಾಗಿ ರಾಮ ಜನ್ಮ ಭೂಮಿಯ ಹೆಸರಲ್ಲಿ ದೇಶದ ಉದ್ದಗಲದ ಚರಂಡಿಗಳಲ್ಲಿ ಮಾನವ ರಕ್ತದ ಕೋಡಿ ಹರಿಸಿದ್ದರ ಶಾಪ. ಎರಡನೆಯದಾಗಿ ತನ್ನ ಶಿಷ್ಯಂದಿರ ಬರ್ಬರತೆಗೆ ಮೌನ ಸಮ್ಮತಿ ಸೂಚಿಸುತ್ತಾ, ಮಹಾಭಾರತದ ಭೀಷ್ಮ ಓತಿಕ್ಯಾತನ ಸಾವನ್ನು ಆನಂದಿಸಿದಂತೆ ಗುಜರಾತಿನ ಅಮಾಯಕ ಮುಸ್ಲಿಮರ ಸಾವನ್ನು ಆನಂದಿಸಿದುದರ ಶಾಪ.

ಮೊದಲನೆಯದಾಗಿ ನಮ್ಮ ತುಳನಾಡಿನ ಜನಪದರ ನಂಬಿಕೆಯಂತೆ ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು…
ಎರಡನೆಯದಾಗಿ ನಮ್ಮ ಕನ್ನಡದ ಗಾದೆಯಂತೆ ಮಾಡಿದ್ದುಣ್ಣೋ ಮಹರಾಯ.

ಬಿಜೆಪಿಯ ಭೀಷ್ಮನ ಈ ಸ್ಥಿತಿಗೆ ಇದಕ್ಕಿಂತ ಬೇರೆ ಕಾರಣ ಬೇಕೇ….?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...