Homeಕರ್ನಾಟಕಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

ಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

- Advertisement -
- Advertisement -

| ನಹುಷ |
ಉಡುಪಿ-ಚಿಕ್ಕಮಗಳೂರು ಲೋಕಾ ರಣರಂಗದಲ್ಲಿ ಬಿಜೆಪಿಯ ಕೂಗುಮಾರಿ ಬ್ರಾಂಡಿನ ಶೋಭಾ ಕರಂದ್ಲಾಜೆ ಮತ್ತ ಜೆಡಿಎಸ್ ವೇಷದ ಕಾಂಗ್ರೆಸಿಗ ಪ್ರಮೋದ್ ಮಧ್ವರಾಜ್ ನಡುವೆ ಮುಖಾಮುಖಿ ಹಣಾಹಣಿ ನಡೆದಿದೆ. ಜನದ್ರೋಹದಿಂದ ಹೆಸರು ಕೆಡಿಸಿಕೊಂಡಿರುವ ಶೋಭಕ್ಕ ಹೋದಹೋದಲ್ಲಿ ಕಾರಿಂದ ಇಳಿಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಕೆಗೆ ದಿನಗಳೆದಂತೆ ಸಂಕಟ ಹೆಚ್ಚಾಗುತ್ತಲೇ ಇದೆ. ಪ್ರಮೋದ್ ತನ್ನ ರಾಯಲ್ ದೌಲತ್ತಿನ ಹಮ್ಮು ಅಹಂಕಾರ ಬಿಟ್ಟು ಸಂಪ್ರದಾಯಿಕ ಶತ್ರುಗಳಿಗೆಲ್ಲಾ ಶರಣಾಗುತ್ತ ಅಖಾಡದಲ್ಲಿ ಗಟ್ಟಿಗೊಳ್ಳುತ್ತಿದ್ದಾರೆ. ಶೋಭಕ್ಕನ ಮೇಲಿರುವ ತಾತ್ಸಾರವನ್ನು ಹಿಂದೂತ್ವದ ಅಮಲಿಂದ ತಪ್ಪಿಸಿ ತಂದು ಓಟು ಮಾಡಿಕೊಳ್ಳಬೇಕಾದ ಸವಾಲು ಮೈತ್ರಿಕೂಟಕ್ಕೆ ಎದುರಾಗಿದೆ.

ಶೋಭಕ್ಕನ ದುಃಸ್ಥಿತಿ ಕಂಡು ಆರೆಸೆಸ್ ಬೆಚ್ಚಿಬಿದ್ದಿದೆ. ಈಯಮ್ಮನ ಫೀಲ್ಡಿಗೆ ಕಳಿಸಬೇಡಿ ಎಂದು ಬಿಜೆಪಿ ಲೀಡರ್‍ಗಳಿಗೆ ಆರೆಸೆಸ್ ಸೂತ್ರದಾರಿಗಳು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ನಾವೇ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ, ಆದರೆ ಆಕೆ ತೆರೆಮರೆಯಲ್ಲೇ ಇರಬೇಕು, ಆಕೆ ಕಂಡರೆ ಮತದಾರರಿಗೆ ಆಕ್ರೋಶ ಉಕ್ಕುತ್ತದೆಂದು ಚೆಡ್ಡಿ ಚತುರರು ಅಲವತ್ತು ಕೇಳುತ್ತಿದ್ದಾರೆ. ಹುಸಿ ಹಿಂದೂತ್ವದ ದೆಸೆಯಿಂದ ಕರಾವಳಿಯಲ್ಲಿ ಒಂಚೂರು ಶೋಭಕ್ಕನಿಗೆ ಬೆಂಬಲ ಇದೆಯಾದರೂ ಮಲೆನಾಡಿನ ಭಾಗದಲ್ಲಿ ಆಕೆಗೆ ಮಾನ-ಮರ್ಯಾದೆಯೇ ಇಲ್ಲ ಬಿಜೆಪಿಉ ಸೆಕೆಂಡ್ ಕಿಂಗ್ ಅಮಿತ್ ಶಾ ತೆಂಗಿಗೆ ರೇಟು ಏರಿಸಿದಂತೆ ಅಡಿಕೆಗೂ ಬಂಪರ್ ಬೆಲೆಬರುವಂತೆ ಮಾಡುತ್ತೇನೆಂದು ಮೋಸ ಮಾಡಿದ್ದು ಚಿಕ್ಕಮಗಳೂರು ಕಡೆಯ ತೋಟಗಾರರನ್ನು ಕೆರಳಿಸಿದೆ. ಅಡಿಕೆ-ಕರಿಮೆಣಸು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಬಿಜೆಪಿ ಅಂದರೆ ಬುಸುಗುಡುತ್ತಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿಟಿ.ರವಿ “ಈಕೆ ಮತ್ತೆ ಗೆದ್ದರೆ ನಮಗೆ ಉಳಿಗಾಲವಿಲ್ಲವೆಂದು ಹೇಳುತ್ತಿರುವುದು, ಅತ್ತ ಉಡುಪಿ ಭಾಗದ ರಘುಪತಿ ಭಟ್ಟ, ಸುನೀಲ್ ಕುಮಾರ್ ಶೋಭಕ್ಕ ಸೋತುಹೋಗಲೆಂದು ಒಳಗೊಳಗೇ ಹರಕೆ ಹೊರುತ್ತಿದ್ದಾರೆ. ಓಟು ಕೇಳುವ ನೈತಿಕ ಧೈರ್ಯ ಶೋಭಕ್ಕನಿಗೆ ಇಲ್ಲ, ಆಕೆ ಮೋದಿಗಾಗಿ ಮತ ಹಾಕಿ ಎನ್ನುತ್ತಿದ್ದಾರೆ. ಆರೆಸೆಸ್ ತಂಡ ಹಿಂದೂತ್ವ ಉದ್ದೀತನಕ್ಕೆ ಬಿಜೆಪಿಗೆ ಓಟು ಅನಿವಾರ್ಯವೆಂದು ಪ್ರಚಾರ ನಡೆಸಿದೆ. ಯಡ್ಡಿಯನ್ನು ಕುಣಿಸಲು ಶೋಭಕ್ಕನ ಗೆಲ್ಲಿಸಿಕೊಳ್ಳಬೇಕಾದ ದರ್ದು ಚೆಡ್ಡಿ ಚೆತುರರ ಕಾಡುತ್ತಿದೆ. ಕೇಸರಿ ಪಡೆ ಏನೇ ಹೇಳಿದರೂ ಕಟ್ಟರ್ ಭಜರಂಗಿಳು “ನೋಟಾ” ಒತ್ತುವ ಸಾಧ್ಯತೆಯೇ ಜಾಸ್ತಿ ನೋಟಾ ಹೆಚ್ಚಾದಂತೆ ಮೈತ್ರಿ ಅಭ್ಯರ್ಥಿಯ ಸೋಲಿನ ಸಾಧ್ಯತೆ ಕಮ್ಮಿಯಾಗುತ್ತದೆ.

ಮಜಾ ಎಂದರೆ, ಕಾಂಗ್ರೆಸ್‍ನಲ್ಲಿ ಒಳ ಹೊಡೆತಗಳ ಆಟವಿಲ್ಲ ಕಾಪುನಲ್ಲಿ ಮಾಜಿ ಸಚಿವ ಸೊರಕೆ, ಉಡುಪುಯಲ್ಲಿ ಮಾಜಿ ಎಮ್ಮೆಲ್ಲೆ ಸಭಾಪತಿ, ಕಾರ್ಕಳದಲ್ಲಿ ಮೊಯ್ಲಿ ಮುನಿಯಾಲ್ ಬಣ, ಮಲೆನಾಡಲ್ಲಿ ಜೆಡಿಎಸ್-ಕಾಂಗ್ರೆಸ್ ತಂಡ ಮೊದಲಿನ ಹೊಟ್ಟೆಕಿಚ್ಚು ಬಿಟ್ಟು ದುಡಿಯುತ್ತಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದ ವೇಗವೀರರು ಸ್ವಜಾತಿ ಪ್ರಮೋದ್ ಪರ ಏಕಗಂಟಲ್ಲಿ ಓಟು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಘಟ್ಟದ ಮೇಲಿನ ಒಕ್ಕಲಿಗರ ಮತಕ್ಕಾಗಿ ದೇವೇಗೌಡ-ಕುಮಾರಣ್ಣ ಸ್ಟ್ರೇಟಜಿ ಹೆಣೆಯುತ್ತಿದ್ದಾರೆ. ಶೋಭಕ್ಕನ ಪರವಾಗಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟ ಒಬ್ಬರ ಬಿಟ್ಟರೆ ಉಳಿದ ಎಮ್ಮೆಲ್ಲೆಗಳು ಮೊದಲಿನ ನಿಷ್ಠೆ-ನಿಯತ್ತು ತೋರಿಸುತ್ತಿಲ್ಲ. ಹೀಗಾಗಿ ಶೋಭಕ್ಕನಿಗೆ ಬಿಜೆಪಿ ಓಟ್ ಬ್ಯಾಂಕಿನ ಶೇ.25-30 ಮತ ಖೋತಾ ಆಗುವ ಲೆಕ್ಕಾಚಾರ ನಡೆದಿದೆ. ಮೈತ್ರಿ ಕೂಟ ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಪಡೆದ ಅಷ್ಟೂ ಮತ ಪಡೆದರೂ ಸಾಕು, ಗೆಲುವಿನ ಛಾನ್ಸ್‍ನ ಗ್ರಾಫ್ಟ್ ಏರಿಕೆಯಾಗುತ್ತದೆ.

ಶೋಭಕ್ಕನಿಗೆ ಮೋದಿ ಮಂಕು ಬೂದಿ ಬಿಟ್ಟರೆ ಮತ್ತ್ಯಾವ ಪ್ಲಸ್ ಪಾಯಿಂಟ್ ಇಲ್ಲ. ಸುಳ್ಯ ಕಡೆಯ ಆಕೆಗಿಲ್ಲ, ಸ್ವಜಾತಿ ಮತ ಬಾಂಧವರೂ ಇಲ್ಲ! ಕರಾವಳಿಯ ಬಿಲ್ಲವರು ಮತ್ತು ಬಂಟರಿಗೆ ಸಂಘಪರಿವಾರದ ಹಿಂದೂತ್ವದ ಅಸಲೀ ಆಟದ ಹಿಕಮತ್ತು ಶೂದ್ರರಿಗೆಷ್ಟು ಗಂಡಾಂತರಕಾರಿ ಎಂಬುದು ಅರ್ಥವಾಗಿದೆ. ಬಿಲ್ಲವರು ಪಾಪದ ಹುಡುಗರು ಹಿಂದೂತ್ವದ ಹೆಸರಲ್ಲಿ ಜೈಲು ಪಾಲಾಗಿರುವ ಕರುಣಾ ಕತೆ ಆ ಜಾತಿಯ ಹಿರಿಯರ ಕಣ್ಣು ತೆರೆಸಿದರೆ ಮೈತ್ರಿಕೂಟದ ಗೆಲುವು ಇನ್ನಷ್ಟು ನಿಚ್ಚಳವಾಗುತ್ತದೆ. ಫೋಟೋ ಫಿನಿಶ್ ಫಲಿತಾಂಶ ಉಡುಪಿ-ಚಿಕ್ಕಮಗಳೂರು ಈ ಬಾರಿ ಕೊಡುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...