Homeಕರ್ನಾಟಕಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

ಉಡುಪಿ-ಚಿಕ್ಕಮಗಳೂರು: ಸೋಲಿನ ಭಯದಲ್ಲಿ ಶೋಭಕ್ಕ!

- Advertisement -
- Advertisement -

| ನಹುಷ |
ಉಡುಪಿ-ಚಿಕ್ಕಮಗಳೂರು ಲೋಕಾ ರಣರಂಗದಲ್ಲಿ ಬಿಜೆಪಿಯ ಕೂಗುಮಾರಿ ಬ್ರಾಂಡಿನ ಶೋಭಾ ಕರಂದ್ಲಾಜೆ ಮತ್ತ ಜೆಡಿಎಸ್ ವೇಷದ ಕಾಂಗ್ರೆಸಿಗ ಪ್ರಮೋದ್ ಮಧ್ವರಾಜ್ ನಡುವೆ ಮುಖಾಮುಖಿ ಹಣಾಹಣಿ ನಡೆದಿದೆ. ಜನದ್ರೋಹದಿಂದ ಹೆಸರು ಕೆಡಿಸಿಕೊಂಡಿರುವ ಶೋಭಕ್ಕ ಹೋದಹೋದಲ್ಲಿ ಕಾರಿಂದ ಇಳಿಯಲಿಕ್ಕೂ ಸಾಧ್ಯವಾಗುತ್ತಿಲ್ಲ. ಆಕೆಗೆ ದಿನಗಳೆದಂತೆ ಸಂಕಟ ಹೆಚ್ಚಾಗುತ್ತಲೇ ಇದೆ. ಪ್ರಮೋದ್ ತನ್ನ ರಾಯಲ್ ದೌಲತ್ತಿನ ಹಮ್ಮು ಅಹಂಕಾರ ಬಿಟ್ಟು ಸಂಪ್ರದಾಯಿಕ ಶತ್ರುಗಳಿಗೆಲ್ಲಾ ಶರಣಾಗುತ್ತ ಅಖಾಡದಲ್ಲಿ ಗಟ್ಟಿಗೊಳ್ಳುತ್ತಿದ್ದಾರೆ. ಶೋಭಕ್ಕನ ಮೇಲಿರುವ ತಾತ್ಸಾರವನ್ನು ಹಿಂದೂತ್ವದ ಅಮಲಿಂದ ತಪ್ಪಿಸಿ ತಂದು ಓಟು ಮಾಡಿಕೊಳ್ಳಬೇಕಾದ ಸವಾಲು ಮೈತ್ರಿಕೂಟಕ್ಕೆ ಎದುರಾಗಿದೆ.

ಶೋಭಕ್ಕನ ದುಃಸ್ಥಿತಿ ಕಂಡು ಆರೆಸೆಸ್ ಬೆಚ್ಚಿಬಿದ್ದಿದೆ. ಈಯಮ್ಮನ ಫೀಲ್ಡಿಗೆ ಕಳಿಸಬೇಡಿ ಎಂದು ಬಿಜೆಪಿ ಲೀಡರ್‍ಗಳಿಗೆ ಆರೆಸೆಸ್ ಸೂತ್ರದಾರಿಗಳು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ನಾವೇ ಗೆಲ್ಲಿಸಲು ಪ್ರಯತ್ನ ಮಾಡ್ತೇವೆ, ಆದರೆ ಆಕೆ ತೆರೆಮರೆಯಲ್ಲೇ ಇರಬೇಕು, ಆಕೆ ಕಂಡರೆ ಮತದಾರರಿಗೆ ಆಕ್ರೋಶ ಉಕ್ಕುತ್ತದೆಂದು ಚೆಡ್ಡಿ ಚತುರರು ಅಲವತ್ತು ಕೇಳುತ್ತಿದ್ದಾರೆ. ಹುಸಿ ಹಿಂದೂತ್ವದ ದೆಸೆಯಿಂದ ಕರಾವಳಿಯಲ್ಲಿ ಒಂಚೂರು ಶೋಭಕ್ಕನಿಗೆ ಬೆಂಬಲ ಇದೆಯಾದರೂ ಮಲೆನಾಡಿನ ಭಾಗದಲ್ಲಿ ಆಕೆಗೆ ಮಾನ-ಮರ್ಯಾದೆಯೇ ಇಲ್ಲ ಬಿಜೆಪಿಉ ಸೆಕೆಂಡ್ ಕಿಂಗ್ ಅಮಿತ್ ಶಾ ತೆಂಗಿಗೆ ರೇಟು ಏರಿಸಿದಂತೆ ಅಡಿಕೆಗೂ ಬಂಪರ್ ಬೆಲೆಬರುವಂತೆ ಮಾಡುತ್ತೇನೆಂದು ಮೋಸ ಮಾಡಿದ್ದು ಚಿಕ್ಕಮಗಳೂರು ಕಡೆಯ ತೋಟಗಾರರನ್ನು ಕೆರಳಿಸಿದೆ. ಅಡಿಕೆ-ಕರಿಮೆಣಸು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಬಿಜೆಪಿ ಅಂದರೆ ಬುಸುಗುಡುತ್ತಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿಟಿ.ರವಿ “ಈಕೆ ಮತ್ತೆ ಗೆದ್ದರೆ ನಮಗೆ ಉಳಿಗಾಲವಿಲ್ಲವೆಂದು ಹೇಳುತ್ತಿರುವುದು, ಅತ್ತ ಉಡುಪಿ ಭಾಗದ ರಘುಪತಿ ಭಟ್ಟ, ಸುನೀಲ್ ಕುಮಾರ್ ಶೋಭಕ್ಕ ಸೋತುಹೋಗಲೆಂದು ಒಳಗೊಳಗೇ ಹರಕೆ ಹೊರುತ್ತಿದ್ದಾರೆ. ಓಟು ಕೇಳುವ ನೈತಿಕ ಧೈರ್ಯ ಶೋಭಕ್ಕನಿಗೆ ಇಲ್ಲ, ಆಕೆ ಮೋದಿಗಾಗಿ ಮತ ಹಾಕಿ ಎನ್ನುತ್ತಿದ್ದಾರೆ. ಆರೆಸೆಸ್ ತಂಡ ಹಿಂದೂತ್ವ ಉದ್ದೀತನಕ್ಕೆ ಬಿಜೆಪಿಗೆ ಓಟು ಅನಿವಾರ್ಯವೆಂದು ಪ್ರಚಾರ ನಡೆಸಿದೆ. ಯಡ್ಡಿಯನ್ನು ಕುಣಿಸಲು ಶೋಭಕ್ಕನ ಗೆಲ್ಲಿಸಿಕೊಳ್ಳಬೇಕಾದ ದರ್ದು ಚೆಡ್ಡಿ ಚೆತುರರ ಕಾಡುತ್ತಿದೆ. ಕೇಸರಿ ಪಡೆ ಏನೇ ಹೇಳಿದರೂ ಕಟ್ಟರ್ ಭಜರಂಗಿಳು “ನೋಟಾ” ಒತ್ತುವ ಸಾಧ್ಯತೆಯೇ ಜಾಸ್ತಿ ನೋಟಾ ಹೆಚ್ಚಾದಂತೆ ಮೈತ್ರಿ ಅಭ್ಯರ್ಥಿಯ ಸೋಲಿನ ಸಾಧ್ಯತೆ ಕಮ್ಮಿಯಾಗುತ್ತದೆ.

ಮಜಾ ಎಂದರೆ, ಕಾಂಗ್ರೆಸ್‍ನಲ್ಲಿ ಒಳ ಹೊಡೆತಗಳ ಆಟವಿಲ್ಲ ಕಾಪುನಲ್ಲಿ ಮಾಜಿ ಸಚಿವ ಸೊರಕೆ, ಉಡುಪುಯಲ್ಲಿ ಮಾಜಿ ಎಮ್ಮೆಲ್ಲೆ ಸಭಾಪತಿ, ಕಾರ್ಕಳದಲ್ಲಿ ಮೊಯ್ಲಿ ಮುನಿಯಾಲ್ ಬಣ, ಮಲೆನಾಡಲ್ಲಿ ಜೆಡಿಎಸ್-ಕಾಂಗ್ರೆಸ್ ತಂಡ ಮೊದಲಿನ ಹೊಟ್ಟೆಕಿಚ್ಚು ಬಿಟ್ಟು ದುಡಿಯುತ್ತಿದೆ. ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದ ವೇಗವೀರರು ಸ್ವಜಾತಿ ಪ್ರಮೋದ್ ಪರ ಏಕಗಂಟಲ್ಲಿ ಓಟು ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಘಟ್ಟದ ಮೇಲಿನ ಒಕ್ಕಲಿಗರ ಮತಕ್ಕಾಗಿ ದೇವೇಗೌಡ-ಕುಮಾರಣ್ಣ ಸ್ಟ್ರೇಟಜಿ ಹೆಣೆಯುತ್ತಿದ್ದಾರೆ. ಶೋಭಕ್ಕನ ಪರವಾಗಿ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟ ಒಬ್ಬರ ಬಿಟ್ಟರೆ ಉಳಿದ ಎಮ್ಮೆಲ್ಲೆಗಳು ಮೊದಲಿನ ನಿಷ್ಠೆ-ನಿಯತ್ತು ತೋರಿಸುತ್ತಿಲ್ಲ. ಹೀಗಾಗಿ ಶೋಭಕ್ಕನಿಗೆ ಬಿಜೆಪಿ ಓಟ್ ಬ್ಯಾಂಕಿನ ಶೇ.25-30 ಮತ ಖೋತಾ ಆಗುವ ಲೆಕ್ಕಾಚಾರ ನಡೆದಿದೆ. ಮೈತ್ರಿ ಕೂಟ ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಪಡೆದ ಅಷ್ಟೂ ಮತ ಪಡೆದರೂ ಸಾಕು, ಗೆಲುವಿನ ಛಾನ್ಸ್‍ನ ಗ್ರಾಫ್ಟ್ ಏರಿಕೆಯಾಗುತ್ತದೆ.

ಶೋಭಕ್ಕನಿಗೆ ಮೋದಿ ಮಂಕು ಬೂದಿ ಬಿಟ್ಟರೆ ಮತ್ತ್ಯಾವ ಪ್ಲಸ್ ಪಾಯಿಂಟ್ ಇಲ್ಲ. ಸುಳ್ಯ ಕಡೆಯ ಆಕೆಗಿಲ್ಲ, ಸ್ವಜಾತಿ ಮತ ಬಾಂಧವರೂ ಇಲ್ಲ! ಕರಾವಳಿಯ ಬಿಲ್ಲವರು ಮತ್ತು ಬಂಟರಿಗೆ ಸಂಘಪರಿವಾರದ ಹಿಂದೂತ್ವದ ಅಸಲೀ ಆಟದ ಹಿಕಮತ್ತು ಶೂದ್ರರಿಗೆಷ್ಟು ಗಂಡಾಂತರಕಾರಿ ಎಂಬುದು ಅರ್ಥವಾಗಿದೆ. ಬಿಲ್ಲವರು ಪಾಪದ ಹುಡುಗರು ಹಿಂದೂತ್ವದ ಹೆಸರಲ್ಲಿ ಜೈಲು ಪಾಲಾಗಿರುವ ಕರುಣಾ ಕತೆ ಆ ಜಾತಿಯ ಹಿರಿಯರ ಕಣ್ಣು ತೆರೆಸಿದರೆ ಮೈತ್ರಿಕೂಟದ ಗೆಲುವು ಇನ್ನಷ್ಟು ನಿಚ್ಚಳವಾಗುತ್ತದೆ. ಫೋಟೋ ಫಿನಿಶ್ ಫಲಿತಾಂಶ ಉಡುಪಿ-ಚಿಕ್ಕಮಗಳೂರು ಈ ಬಾರಿ ಕೊಡುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...