Homeಅಂಕಣಗಳುಸುದೀರ್ಘ ಕಾಲದ ಪರಿಸರ ಪುನಶ್ಚೇತನದ ಕಾರ್ಯಕ್ರಮಗಳಿಗೆ ಸಿದ್ಧರಾಗೋಣ

ಸುದೀರ್ಘ ಕಾಲದ ಪರಿಸರ ಪುನಶ್ಚೇತನದ ಕಾರ್ಯಕ್ರಮಗಳಿಗೆ ಸಿದ್ಧರಾಗೋಣ

- Advertisement -
- Advertisement -

ಸಂಪಾದಕೀಯ |

ಹೆದರಿಕೊಳ್ಳಬೇಕಿಲ್ಲ. ದೀರ್ಘವಾದ ಯಾವುದೇ ಕೆಲಸಕ್ಕೂ ಸಹನೆಯಿಲ್ಲದ ಮನೋಭಾವ ಇಂದಿನ ದಿನಮಾನದ್ದು. ಯಾವುದೂ ದೀರ್ಘವಾಗಬಾರದು, ಸ್ವಲ್ಪವೂ ಬೋರ್ ಎನಿಸಬಾರದು, ಎಲ್ಲವೂ ಇನ್‍ಸ್ಟಂಟ್ ಆಗಿರಬೇಕು. ಹಾಗಿರುವಾಗ ಸುದೀರ್ಘ ಕಾಲದ ಪ್ರಕ್ರಿಯೆಯೊಂದಕ್ಕೆ ಸಿದ್ಧರಾಗಲೇಬೇಕು ಎಂದುಕೊಂಡರೆ, ಓದುಗರು ಹೆದರಿಕೊಳ್ಳುವ ಸಾಧ್ಯತೆ ಇದೆ. ಇಲ್ಲ, ಹೆದರಿಕೊಳ್ಳಬೇಕಿಲ್ಲ.
ಏಕೆಂದರೆ, ಆಗಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ. ನಾವು ಬದುಕುತ್ತಿರುವ ಭೂಮಿಯನ್ನು, ಲಕ್ಷ ಲಕ್ಷ ವರ್ಷಗಳಿಂದ ಉಳಿದುಕೊಂಡು ಬಂದಿದ್ದ ಭೂಮಿಯನ್ನು ಕೇವಲ 100 ವರ್ಷಗಳಲ್ಲಿ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಹಾಳು ಮಾಡಿದ್ದೇವೆ.
ಹಾಗಾಗಿ ತುರ್ತಾಗಿ ಏನೋ ಮಾಡಿ ಇದನ್ನು ಒಮ್ಮಿಂದೊಮ್ಮೆಗೇ ಸುಧಾರಿಸಲೂ ಸಾಧ್ಯವಿಲ್ಲ. ಮೊದಲಿಗೆ ಇನ್ನಷ್ಟು ಹಾಳುಗೆಡವುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಭೂಮಿಗೆ ಜ್ವರ ಬರಿಸಿರುವುದರಿಂದ, ಅದರ ತಾಪವನ್ನು ತಡೆದುಕೊಳ್ಳಲೇಬೇಕು, ಬೇರೆ ದಾರಿಯಿಲ್ಲ. ಇದನ್ನು ತಂಪಾಗಿಸಲು, ಪುನಶ್ಚೇತನಗೊಳಿಸಲು ದೃಢವಾದ ದೀರ್ಘಕಾಲಿಕ ಹೆಜ್ಜೆಗಳನ್ನಿಡಬೇಕು.
ಚುನಾವಣಾ ಕಾವು ಸಹಾ ಭೂಮಿಯ ಜ್ವರವನ್ನು ಏರಿಸಿದೆಯೆಂದರೆ ಆಶ್ಚರ್ಯವಾಗಬಹುದು. ಹೌದು, ಚುನಾವಣೆಯ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತಿರುವ ಬರ ಸಹಾ ಯಾರಿಗೂ (ಬರಪೀಡಿತವಾದ ಪ್ರದೇಶಗಳ ರೈತರಿಗೂ) ಒಂದು ಪ್ರಮುಖ ವಿಷಯವೆನಿಸಿಲ್ಲ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗಳೆರಡೂ ‘ತಾಪಮಾನ ಏರಿಕೆ’ಯ ಕುರಿತು ತಮ್ಮ ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿಸಿವೆ. ನಿರ್ದಿಷ್ಟವಾದ ಕೆಲವು ಅಂಶಗಳೂ ಅವುಗಳಲ್ಲಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಒಂದೆರಡು ಹೆಜ್ಜೆ ಮುಂದಿದ್ದು, ಮಹಾರಾಷ್ಟ್ರದ ಕಾಂಗ್ರೆಸ್ ಘಟಕವು, ಏಪ್ರಿಲ್ 8ರಂದು ಪ್ರತ್ಯೇಕ ಪರಿಸರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ.
ಆದರೆ, ಈ ಎಲ್ಲಾ ಭರವಸೆಗಳೂ ಸಹಾ ಪರಿಣಾಮಕಾರಿಯಾದ ಫಲಿತಾಂಶಗಳಾಗಿ ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುತ್ತವೆಂಬ ನಂಬಿಕೆ ಯಾರಿಗೂ ಇಲ್ಲ. ಅಷ್ಟೇ ಅಲ್ಲದೇ, ಈ ಕ್ರಮಗಳಷ್ಟೇ ಭೂಮಿಯನ್ನು ಉಳಿಸಲು ಸಾಧ್ಯವೂ ಇಲ್ಲ.
ಜನಸಂಖ್ಯೆಯ ಬಹಳಷ್ಟು ಜನರು ತೊಡಗಿಕೊಂಡಿರುವ ಕೃಷಿಯಿಂದ ಹಿಡಿದು, ಬೆರಳೆಣಿಕೆಯ ಕುಟುಂಬಗಳಿಗೆ ಭಾರೀ ಲಾಭ ತಂದುಕೊಡುವ ಉದ್ದಿಮೆಗಳವರೆಗೆ ಎಲ್ಲವೂ ಪರಿಸರ, ಅಂತರ್ಜಲ ಮತ್ತು ಗಾಳಿಯನ್ನು ಮನುಕುಲಕ್ಕೆ ಅಪಾಯಕಾರಿಯನ್ನಾಗಿಸುತ್ತಿದೆ. ಕರ್ನಾಟಕದಂತಹ ರಾಜ್ಯವು ಕಳೆದ 19 ವರ್ಷಗಳಲ್ಲಿ 16 ವರ್ಷಗಳು, ತನ್ನ ಭೂಭಾಗದ ಅರ್ಧದಷ್ಟು ಪ್ರದೇಶದಲ್ಲಿ ಬರ ಕಂಡಿದೆ. ಹೀಗಿರುವಾಗ ನಮಗೆ ಭಾರೀ ತೊಂದರೆ ಕಾದಿದೆಯೆಂಬ ಅಪಾಯದ ಭಾವವನ್ನು ಎಲ್ಲರೂ ತಳೆಯದೇ ಇದಕ್ಕೆ ಪರಿಹಾರವೆಲ್ಲಿಯದು?
ಕನಿಷ್ಠ ಚುನಾವಣೆಯ ನಂತರವಾದರೂ, ಈ ನಿಟ್ಟಿನಲ್ಲಿ ಸಮರೋಪಾದಿ ಕೆಲಸಗಳಾಗಬೇಕು. ಈಗಾಗಲೇ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವವರ ಜೊತೆ ಕೈ ಜೋಡಿಸಬೇಕು. ಇದೇ ಮೇ 17ರಿಂದ 19ರವರೆಗೆ ತುಮಕೂರು ಜಿಲ್ಲೆಯ ಸಮತಾ ವಿದ್ಯಾಲಯದ ಆವರಣದಲ್ಲಿ ಆಸಕ್ತರಿಗೆ ಒಂದು ಕಾರ್ಯಾಗಾರವನ್ನು ಪ್ರೊ.ರವಿವರ್ಮಕುಮಾರ್ ಹಾಗೂ ಪ್ರೊ.ಯತಿರಾಜುರಂತಹ ಹಿರಿಯರು ಆಯೋಜಿಸುತ್ತಿದ್ದಾರೆ. ನೀರಿನ ತಜ್ಞ ರಾಜೇಂದ್ರ ಸಿಂಗ್ ಸಹಾ ಅಲ್ಲಿಗೆ ಬರುತ್ತಿದ್ದಾರೆ. ಇಂತಹ ಎಷ್ಟೋ ಪ್ರಯತ್ನಗಳು ಆಗುವ ಅಗತ್ಯವಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರು ತಮ್ಮ ವ್ಯಾಪ್ತಿಯ ಕೆರೆಗಳ ಹೂಳೆತ್ತಿಸುವುದನ್ನು ಆದ್ಯತೆಯ ವಿಷಯವನ್ನಾಗಿಸಿಕೊಂಡಿದ್ದಾರೆ. ಇಂತಹುದೇ ಕೆಲಸವನ್ನು ಮಾರುತಿ ಪ್ರಸನ್ನ ಎಂಬ ತಹಸೀಲ್ದಾರರು ಮಂಡ್ಯ ತಾಲೂಕಿನಲ್ಲಿ ಮಾಡಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ನರೇಗಾ ಮೂಲಕವೇ ಕೆರೆಗಳನ್ನು ಸಂಪನ್ನಗೊಳಿಸುವ ಕೆಲಸವನ್ನು ಮಾಡಲಾಗಿತ್ತು. ಹೋರಾಟಗಾರ್ತಿ ಕೆ.ನೀಲಾರಂಥವರು ಅದರ ಪ್ರೇರಕ ಶಕ್ತಿಯಾಗಿದ್ದರು. ಹಾಸನದಲ್ಲಿ ರೂಪಾ ಹಾಸನ, ಅಧಿಕಾರಿ ಎಚ್.ಎಲ್.ನಾಗರಾಜು ಅವರುಗಳೂ ರಚನಾತ್ಮಕವಾದ ಈ ಕೆಲಸಗಳಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಸರ್ಕಾರ ಮತ್ತು ಜನರು ಜೊತೆಗೂಡಬಹುದಾದ ಬಹಳ ಮುಖ್ಯವಾದ ಕ್ಷೇತ್ರ ಇದು.
ಆದರೆ, ನಮ್ಮ ಹೆಚ್ಚಿನ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಯು ಸಾಮಾನ್ಯವಾಗಿ ಇಂಥವನ್ನು ಹಾಳುಗೆಡಹುವ ಯೋಜನೆಗಳನ್ನೇ ರೂಪಿಸುತ್ತಾರೆ. ಪ್ರಾಮಾಣಿಕರೆಂದು ಹೆಸರು ಮಾಡಿರುವವರು ರೂಲ್ ಪುಸ್ತಕವನ್ನಿಟ್ಟುಕೊಂಡು ತೊಂದರೆ ಕೊಡಲು ಸಾಧ್ಯವಿರುವುದನ್ನೆಲ್ಲಾ ಮಾಡುತ್ತಾರೆ. ಪಾರ್ಲಿಮೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವರು, ‘ಹೇಗೂ ಕರ್ನಾಟಕದ ಚುನಾವಣೆ ಮುಗಿದಿದೆ. ಬರಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಜಿ.ಪಂ ಸಿಇಓಗಳ ಸಭೆ ಕರೆಯಬೇಕು’ ಎಂದರೆ ಚುನಾವಣಾ ಆಯೋಗ ಬಿಡುತ್ತಿಲ್ಲವಂತೆ.
ನಾವಿರುವ ಪರಿಸರ, ನೆಲ, ಜಲಗಳನ್ನು ಸಂರಕ್ಷಿಸುವುದು ಮುಂದಿನ ದಿನಗಳಲ್ಲಿ ಎಲ್ಲಾ ಪಂಥೀಯರ, ವರ್ಗ ಜಾತಿ ಧರ್ಮ ಲಿಂಗಗಳ ಜನರ ಆದ್ಯತೆಯಾಗದೇ ಉಳಿಗಾಲವಿಲ್ಲ. ಅದರಲ್ಲೂ ರಾಜಸ್ತಾನದ ನಂತರ ಅತ್ಯಂತ ಹೆಚ್ಚು ಬರಪೀಡಿತ ಪ್ರದೇಶವನ್ನು ಹೊಂದಿರುವ ಕರ್ನಾಟಕವು ಎಚ್ಚೆತ್ತುಕೊಳ್ಳಬೇಕಿದೆ. ಶಿರಾದಲ್ಲಿ ನಡೆಯುತ್ತಿರುವ ಶಿಬಿರವು ಚೈತನ್ಯವುಳ್ಳ ಯುವಜನರನ್ನು ಸಿದ್ಧಗೊಳಿಸಿ, ಕರ್ನಾಟಕವನ್ನು ಜಾಗೃತಿಗೊಳಿಸಲಿ ಎಂಬ ಆಶಯ ನಮ್ಮದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...