Homeಅಂತರಾಷ್ಟ್ರೀಯಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

ಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

- Advertisement -
- Advertisement -

ಜಮ್ಮುಕಾಶ್ಮೀರದಲ್ಲಿ ವಿಶೇಷಾಧಿಕಾರ ರದ್ದಾದ ನಂತರ ಮೊದಲ ಬಾರಿಗೆ ಅಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ, ವರದಿ ನೀಡಲು ಯೂರೋಪಿಯನ್‌ ಒಕ್ಕೂಟ ಸಂಸದರು ಭೇಟಿ ನೀಡಿದ್ದರು. ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ. ಇಲ್ಲಿನ ರಾಜಕೀಯ ನಮಗೆ ಬೇಡ, ವಾಸ್ತವ ಸ್ಥಿತಿಯನ್ನು ಅರಿತು ಭಯೋತ್ಪಾದನೆ ನಿರ್ಮೂಲನೆಯಲ್ಲಿ ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಈಗ ಅಂತಹದ್ದೊಂದು ಯೂರೋಪಿಯನ್‌ ಒಕ್ಕೂಟದ ಪ್ರಾಯೋಜಕತ್ವದ ಹಿಂದೆ ಫೇಕ್‌ (ಸುಳ್ಳಿನ) ನ್ಯೂಸ್‌ ಜಾಲವೇ ಇದೆ ಎಂಬುದು ಬೆಳಕಿಗೆ ಬಂದಿದೆ.

ಹಾಗಿದ್ದರೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯೂರೋಪಿಯನ್‌ ಒಕ್ಕೂಟದ ಹಿಂದೆ ಫೇಕ್‌ ನ್ಯೂಸ್‌ ಜಾಲದ ಕೈವಾಡವಿದೆಯಾ..? ಇದೆಲ್ಲಾ ಬಿಜೆಪಿ ಪರ ಸರ್ಕಾರವನ್ನು ಬೆಂಬಲಿಸಲು, ಫೇಕ್‌ ನೆಟ್‌ವರ್ಕ್‌‌ನ್ನು ಬಳಸಿಕೊಳ್ಳಲಾಗಿತ್ತಾ..? ಎಂಬ ಪ್ರಶ್ನೆಗಳಿಗೆ ಸಿಕ್ಕಿರುವ ಉತ್ತರ ಹೌದು… ಸುಳ್ಳು ಜಾಲದ ಪ್ರಾಯೋಜಕತ್ವದಲ್ಲಿ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿತ್ತು ಅಂತಾ ಯೂರೋಪ್ ಮೂಲದ ಸರ್ಕಾರೇತರ, ಸುಳ್ಳುಸುದ್ದಿಗಳ ಮೂಲ ಪತ್ತೆ ಹಚ್ಚುವ ಡಿಸಿನ್ಫೋಲ್ಯಾಬ್‌ ಹೇಳಿರುವುದಾಗಿ ಸ್ಕ್ರೋಲ್.ಇನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.

ಕಳೆದ ತಿಂಗಳು ಯುರೋಪಿಯನ್ ಯೂನಿಯನ್ ನಿಯೋಗ ಕಾಶ್ಮೀರ ಭೇಟಿ ನೀಡಿ, ವಸ್ತುಸ್ಥಿತಿ ಅಧ್ಯಯನ ನಡೆಸಿತ್ತು. ನಂತರ ಸುದ್ದಿಗೋಷ್ಠಿ ನಡೆಸಿ, ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿತ್ತು. ಆದರೆ ಇದೊಂದು ಪ್ರಾಯೋಜಕತ್ವದ ಭೇಟಿಯಾಗಿತ್ತು. ವಿಶ್ವಸಂಸ್ಥೆಯಾಗಲಿ ಅಥವಾ ಸ್ವತಃ ಭಾರತ ಸರ್ಕಾರವಾಗಲಿ ಇದನ್ನು ಪ್ರಾಯೋಜಿಸಿರಲಿಲ್ಲ. ಹಾಗಾದರೆ ಪ್ರಾಯೋಜಿಸಿದ್ದು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿರುವ ಡಿಸ್-ಇನ್ಫೋಲ್ಯಾಬ್ ಸಂಸ್ಥೆಯು ಅಚ್ಚರಿಯ ಸತ್ಯಗಳನ್ನು ಹೊರಗೆಡವಿದೆ. ಅಧಿಕೃತ ದಾಖಲೆಗಳ ಪ್ರಕಾರ ಇದನ್ನು ಪ್ರಾಯೋಜಿಸಿದ್ದು ನವದೆಹಲಿ ಮೂಲದ International Institute for Non-Aligned Studies ಎಂಬ ಥಿಂಕ್ ಟ್ಯಾಂಕ್ ಸಂಸ್ಥೆ. ಈ ಥಿಂಕ್ ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್ ಹೆಸರಿನ ಕಂಪನಿ. ಇದೇ ಶ್ರೀವಾಸ್ತವ್ ಕಂಪನಿಯ ಮುಖ್ಯ ಸ್ಟೇಕ್ ಹೋಲ್ಡರುಗಳು ಒಂದು ಅಂತರ್ಜಾಲ ಪತ್ರಿಕೆಯನ್ನೂ ಸಲಹುತ್ತಿದ್ದಾರೆ. ಅದರ ಹೆಸರು ಇಪಿ ಟುಡೇ. ಈ ಇಪಿ ಟುಡೆ ಅಂತರ್ಜಾಲ ಪತ್ರಿಕೆ ಸರ್ವರ್ ನ ಮೂಲ ಹಿಡಿದು ಹೊರಟ ಡಿಸ್-ಇನ್ಫೋಲ್ಯಾಬ್ ಸಂಸ್ಥೆ `65ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ ಸುಮಾರು 265ಕ್ಕೂ ಹೆಚ್ಚು ಫೇಕ್ ನ್ಯೂಸ್ ಸುದ್ದಿಗಳನ್ನು ಪ್ರಸಾರ ಮಾಡುವ ವೆಬ್ಸೈಟ್‌ಗಳ ನಂಟು ಇರುವುದು’ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.

ಚುನಾಯಿತ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು, ಪಾಕಿಸ್ತಾನದ ವಿರುದ್ಧ ಸಾರ್ವಜನಿಕರು ರೊಚ್ಚಿಗೇಳುವಂತೆ ಮಾಡಲು ಸ್ಥಳೀಯ ಪತ್ರಿಕೆ ಅಥವಾ ನೈಜ ಮಾಧ್ಯಮಗಳ ಹೆಸರುಗಳನ್ನು ಹೊಂದಿರುವ ನಕಲಿ ವೆಬ್ಸೈಟ್‌ಗಳನ್ನು ರನ್‌ ಮಾಡುವುದೇ ಈ ಫೇಕ್ ನ್ಯೂಸ್ ಜಾಲಗಳ ಪ್ರಧಾನ ಕಸುಬು ಎನ್ನಲಾಗಿದೆ. ಇಂಥಾ ನಕಲಿ ವೆಬ್ಸೈಟ್‌ಗಳು ನೈಜ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಯಥಾವತ್ತಾಗಿ ಪ್ರಕಟಿಸುತ್ತಿರುವುದನ್ನು ಡಿಸಿನ್ಫೋಲ್ಯಾಬ್‌ ಕಂಡು ಹಿಡಿದಿದೆ. ವಿವಿಧ ದೇಶಗಳಲ್ಲಿನ ಬಲಪಂಥೀಯ ರಾಜಕಾರಣವನ್ನು ಉದ್ದೀಪಿಸುವ ಕೆಲಸ ಮಾಡುತ್ತಲೇ ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ನೆಪದಲ್ಲಿ ನವದೆಹಲಿಯಲ್ಲಿರುವ ಅಧಿಕಾರದಲ್ಲಿರುವ ಸರ್ಕಾರಕ್ಕೆ ಜಾಗತಿಕ ಒಲವು ಸಿಗುವಂತೆ ಈ ನ್ಯೂಸ್ ವೆಬ್ಸೈಟ್ ಗಳ ಮೂಲಕ ಮಾಡಲಾಗುತ್ತಿದೆ.

ಕಳೆದ ಕೆಲ ವಾರಗಳ ಹಿಂದೆ ಇಪಿ ಟುಡೇ (EP Today) ವೆಬ್ಸೈಟ್‌ `ರಷ್ಯಾ ಟುಡೇ' ಮತ್ತು `ವಾಯ್ಸ್‌ ಆಫ್‌ ಅಮೆರಿಕ’ ಎಂಬ ಸುದ್ದಿಸಂಸ್ಥೆಗಳಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಕೃಪೆ ಕೂಡಾ ದಾಖಲಿಸದೆ ಯಥಾವತ್ತು ಪ್ರಕಟಿಸಿತ್ತು. ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಈ ಸಂಗತಿಯನ್ನು ಬಯಲು ಮಾಡಿದ ತರುವಾಯ ಇಪಿ ಟುಡೆ ಕ್ಷಮಾಪಣೆಯನ್ನೂ ಕೇಳಿತ್ತು. ಆದರೂ ಸಂಶಯ ಕಡಿಮೆಯಾಗದ ಕಾರಣ ಡಿಸ್-ಇನ್ಫೋಲ್ಯಾಬ್ ಸಂಸ್ಥೆ, ಇಪಿ ಟುಡೆ ಸುದ್ದಿಜಾಲದ ಆರ್ಕೈವ್ ಗಳನ್ನು ಶೋಧಿಸಿದಾಗ ಒಂದು ನಿರ್ದಿಷ್ಟ ದೇಶದ ವಿರುದ್ಧ ಜನಾಭಿಪ್ರಾಯ ರೂಪಿಸುವಂತ ಒಂದೇ ಬಗೆಯ ನ್ಯೂಸ್ ಗಳು ಇದ್ದವೇ ಹೊರತು ಸುದ್ದಿ ಸಂಸ್ಥೆಯೊಂದು ಕಾಯ್ದುಕೊಳ್ಳಬೇಕಾದ ವೈವಿಧ್ಯಮಯ ಶೇಖರಣೆ ಅಲ್ಲಿರಲಿಲ್ಲ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೋಷಿ ಎಂದು ಬಿಂಬಿಸುವ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕತೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ, ಭಾರತ ಮತ್ತು ಪಾಕ್‌ ನಡುವಿನ ಹಳಸಲು ಸಂಬಂಧ, ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದಕರಿಂದ ದಾಳಿ ಹೀಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಾಧಾರಿತ ಲೇಖನಗಳೇ ಹೆಚ್ಚು ಪಬ್ಲಿಶ್‌ ಆಗಿರುವುದು ಕಂಡು ಬಂದಿದೆ ಎಂದು ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಹೇಳಿಕೊಂಡಿದೆ.

ಇದೆಲ್ಲವನ್ನೂ ನೋಡಿದ ಮೇಲೆ, ಈ ಇಪಿ ಟುಡೇ ಹೇಗೆ ನಡೆಯುತ್ತಿದೆ..? ಇದರ ಹಿಂದಿರುವವರು ಯಾರು ಎಂದು ಕೆದಕುತ್ತಾ ಹೋದಂತೆ ಸಿಕ್ಕ ಉತ್ತರ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ. ಯಾಕಂದ್ರೆ ಇಪಿ ಟುಡೇ ಎಂಬ ದೈತ್ಯ ನಕಲಿ ವೆಬ್ಸೈಟ್‌ ಹಿಂದಿರುವವರು ಭಾರತೀಯ ಮೂಲದ ಹೂಡಿಕೆದಾರರು. ಎನ್‌ಜಿಒ, ಇಪಿ ಟುಡೇ ವೆಬ್ಸೈಟ್‌, ಇತರೆ ಕಂಪನಿಗಳ ನಕಲಿ ಜಾಲದ ಲಿಂಕ್‌ ಬಂದು ತಲುಪುವುದು ಶ್ರೀವಾಸ್ತವ್‌ ಎಂಬ ಗ್ರೂಪ್‌ನ್ನು. ಏನಿದು ಶ್ರೀವಾಸ್ತವ್‌ ಗ್ರೂಪ್‌ ಎಂದು ನೋಡಿದಾಗ, ಇದೊಂದು ನವದೆಹಲಿ ಮೂಲದ ಸಂಸ್ಥೆ ಎಂದು ಗೊತ್ತಾಯಿತು. ಶ್ರೀವಾಸ್ತವ್‌ ಗ್ರೂಪ್‌ಗೆ ಸೇರಿದ ಪ್ರಮುಖ ಆಸ್ತಿಯೆಂದರೆ ನವದೆಹಲಿ ಟೈಮ್ಸ್‌ ಮತ್ತು International Institute for Non-Aligned Studies ಥಿಂಕ್‌ಟ್ಯಾಂಕ್.

ಅಕ್ಟೋಬರ್‌ 30ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅನಧಿಕೃತ ಯೂರೋಪಿಯನ್‌ ನಿಯೋಗದ 23 ಸದಸ್ಯರ ತಂಡಕ್ಕೆ ಪ್ರಾಯೋಜಕತ್ವ ( sponsor) ನೀಡಿದ್ದೇ ಈ ಥಿಂಕ್‌ಥ್ಯಾಂಕ್‌. ನಿಯೋಗ ಭೇಟಿಯ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದು ಅಂತಾರಾಷ್ಟ್ರೀಯ ವ್ಯಾಪಾರ ದಲ್ಲಾಳಿ ಮದಿ ಶರ್ಮಾ.

ಇಪಿ ಟುಡೇ ಆನ್ಲೈನ್ ಪತ್ರಿಕೆಯ ಬೆನ್ನುಬಿದ್ದಿದ್ದ ಡಿಸ್-ಇನ್ಫೋಲ್ಯಾಬ್ ಸಂಸ್ಥೆಗೆ ಕೆಲ ದಿನಗಳಿಂದ ಇಪಿ ಟುಡೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳೇ  `ಟೈಮ್ಸ್‌ ಆಫ್‌ ಜಿನಿವಾ’ ಎಂಬ ಮತ್ತೊಂದು ಆನ್‌ಲೈನ್‌ ಪತ್ರಿಕೆಯಲ್ಲೂ ಮರು ಪ್ರಕಟವಾಗುತ್ತಿರೋದು ಗಮನಕ್ಕೆ ಬಂದಿತ್ತು. ಶೋಧಿಸಿ ನೋಡಿದಾಗ ಈ ಟೈಮ್ಸ್ ಆಫ್ ಜಿನೇವಾ ಕೂಡಾ ಇದೇ ಜಾಲದ ಭಾಗವೆಂಬುದು ಪತ್ತೆಯಾಗಿದೆ. ‘ವೆಬ್ಸೈಟಿನ ನೋಂದಣಿ ವಿಳಾಸ, ಇಮೇಲ್ ವಿಳಾಸ, ಇಂಟರ್ನೆಟ್ ಡೊಮೈನ್ ಗಳನ್ನು ಪರಿಶೀಲಿಸಿದಾಗ ಇವುಗಳ ಹಿಂದೆ ಎರಡು ಪ್ರಭಾವಿ ಜಾಲಗಳು ಇರುವುದು ತಿಳಿದು ಬಂದಿದೆ’ ಎಂದು ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

 

ಇಪಿ ಟುಡೇ ಮತ್ತು ಟೈಮ್ಸ್‌ ಆಫ್‌ ಜಿನಿವಾ ಸುದ್ದಿ ಸಂಸ್ಥೆಗಳು ಸುದ್ದಿ ಮೂಲಕ್ಕಾಗಿ ಯಾವುದನ್ನು ಅವಲಂಬಿಸಿವೆ ಎಂದು ಹುಡುಕಿ ಹೊರಟರೆ 4newsagency.com  ಎಂಬ ನ್ಯೂಸ್ ಏಜೆನ್ಸಿ ಬೆಳಕಿಗೆ ಬರುತ್ತದೆ. ತಾನೇ ಹೇಳಿಕೊಂಡಿರುವಂತೆ ಇದೊಂದು independent not-for-profit news cooperative ಸಂಸ್ಥೆ. ಇದರ ಪ್ರಧಾನ ಕಚೇರಿ ಸ್ವಿಡ್ಜ್‌ರ್ಲ್ಯಾಂಡ್‌ನಲ್ಲಿದೆ. ಈ ಸುದ್ದಿ ಸಂಸ್ಥೆ ಪ್ರಕಟಿಸಿರುವ ಎಲ್ಲಾ ಟ್ವೀಟ್‌, ಯೂ ಟ್ಯೂಬ್‌ ವಿಡಿಯೋಗಳು, ಸುದ್ದಿಗಳು, ಪ್ರಮುಖ ವಿಷಯಗಳು ಕೇವಲ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಪಾಕ್‌ ವಿರೋಧಿ ಚಟುವಟಿಕೆಗಳಿಗೇ ಸಂಬಂಧಿಸಿದ್ದಾಗಿವೆ!

ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖೆಯಿಂದ ಈ ತೀರ್ಮಾನಕ್ಕೆ ಬರಬಹುದು. ವಿಶ್ವಸಂಸ್ಥೆಯಾಗಲಿ, ಯುರೋಪ್ ಒಕ್ಕೂಟದ ಸಂಸತ್ತಾಗಲಿ ಅಥವಾ ಭಾರತ ಸರ್ಕಾರವಾಗಲಿ ಅಧಿಕೃತವಾಗಿ ಪ್ರಾಯೋಜಿಸದ; ಕೇವಲ `ಬಲಪಂಥೀಯ’ ವಿಚಾರಧಾರೆಯ ಚುನಾಯಿತ ಪ್ರತಿನಿಧಿಗಳನ್ನಷ್ಟೇ ಒಳಗೊಂಡಿದ್ದ ನಿಯೋಗವೊಂದರ ಭೇಟಿಯನ್ನು ಆಯೋಜಿಸಿದ್ದು International Institute for Non-Aligned Studies ಎಂಬ ಥಿಂಕ್‌ಟ್ಯಾಂಕ್. ಈ ಥಿಂಕ್‌ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್‌ ಗ್ರೂಪ್‌. ಇದೇ ಗ್ರೂಪಿನ ಪ್ರಧಾನ ಸ್ಟೇಕ್ ಹೋಲ್ಡರುಗಳು `ಇಪಿ ಟುಡೇ’ ಎಂಬ ಅಂತರ್ಜಾಲ ಪತ್ರಿಕೆಗೂ ಫಂಡ್ ಮಾಡುತ್ತಿದೆ. ಈ ಪತ್ರಿಕೆ ಒಂದು ನಿರ್ದಿಷ್ಟ ಐಡಿಯಾಲಜಿಕಲ್ ಅಜೆಂಡಾ ಇಟ್ಟುಕೊಂಡ ಸುದ್ದಿಗಳನ್ನಷ್ಟೇ ಪ್ರಕಟಿಸುತ್ತಿದೆ. ಇದೇ ಇಪಿ ಟುಡೇ ಪತ್ರಿಕೆಯ ಸರ್ವರ್ ನಲ್ಲೇ ಸುಮಾರು 265 ವೆಬ್ಸೈಟ್ಗಳು 65 ದೇಶಗಳಲ್ಲಿ ವ್ಯಾಪಿಸಿವೆ. ಹೆಚ್ಚೂ ಕಮ್ಮಿ ಇವೆಲ್ಲವೂ ಒಂದೇ ತೆರನಾದ ಸುದ್ದಿಯನ್ನು ಬಿತ್ತರಿಸುತ್ತಿವೆ, ಮತ್ತು ಅವೇ ಲೇಖನಗಳು ಮರು ಪ್ರಕಟವಾಗುತ್ತಿವೆ. ಅವುಗಳಲ್ಲಿ ಫೇಕ್ ನ್ಯೂಸ್ ಗಳೂ ಇರುತ್ತವೆ. ಜಾಗತಿಕ ಮಟ್ಟದಲ್ಲಿ ಹರಿದಾಡುವ ಇಂಥಾ ನ್ಯೂಸ್ ಗಳಿಂದ ಭಾರತದ ಪ್ರಧಾನಿ ಮೋದಿಯವರಿಗೆ ವಿದೇಶಿ ನೆಲದಲ್ಲಿ ಪ್ರಚಾರ ಸಿಗುತ್ತಾ ಬಂದಿದೆ. ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯುರೋಪಿಯನ್ ಒಕ್ಕೂಟದ ನಿಯೋಗದಿಂದಲೂ ಅನುಕೂಲ ಆದದ್ದು ಮೋದಿಯವರಿಗೆ. ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ರದ್ದು ಪಡಿಸುವಾಗ ಅಲ್ಲಿನ ಜನರಿಗೆ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಗಳು ಕೂಡಾ ಲಭಿಸದಂತೆ ನಿರ್ಬಂಧ ಹೇರಿ, ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದ ಮೋದಿ ಸರ್ಕಾರದ ವಿರುದ್ಧ ಜಾಗತಿಕ ವೇದಿಕೆಗಳಲ್ಲಿ ಮಾನವಹಕ್ಕು ಉಲ್ಲಂಘನೆಯ ಮಾತುಗಳು ಕೇಳಿಬಂದಿದ್ದವು. ಆ ಆರೋಪದಿಂದ ಮೋದಿಯವರನ್ನು ವಿಮುಕ್ತಿಗೊಳಿಸಲೆಂದೇ ಈ ಪ್ರಚಾರ ಜಾಲಗಳು ಈ ವ್ಯವಸ್ಥಿತ ಭೇಟಿಯನ್ನು ಆಯೋಜಿಸಿದ್ದವೇ ಎಂಬ ಅನುಮಾನ  ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖಾ ವರದಿಯಿಂದ ದಟ್ಟವಾಗುತ್ತಿದೆ.

ಕೃಪೆ: ಸ್ಕ್ರಾಲ್‌.ಇನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...