Homeಸಿನಿಮಾಕ್ರೀಡೆಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

ಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

- Advertisement -
- Advertisement -

23 ವರ್ಷ ವಯಸ್ಸಿನ ಕಿಲಿಯಾನ್ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಪಡೆದ ಫ್ರಾನ್ಸ್ ಆಟಗಾರ. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೋತರೂ ಫುಟ್ಬಾಲ್‌ ಪ್ರೇಮಿಗಳ ಮನಗೆದ್ದವರು ಎಂಬಾಪೆ.

2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವರ್ಡ್‌ಕಪ್‌ನಲ್ಲಿ ‘ಬೆಸ್ಟ್ ಯಂಗ್ ಪ್ಲೇಯರ್‌ ಅವಾರ್ಡ್’ ಪಡೆದಿದ್ದ ಎಂಬಾಪೆ ಈ ಸಲದ ಕತಾರ್‌ ವರ್ಡ್‌ಕಪ್‌ನಲ್ಲಿ ಅತಿ ಹೆಚ್ಚು ಗೋಲ್‌ ಭಾರಿಸುವ ಮೂಲಕ ‘ಗೋಲ್ಡನ್ ಬೂಟ್ ಅವಾರ್ಡ್’ ತಮ್ಮದಾಗಿಸಿಕೊಂಡರು.

ವರ್ಡ್‌ಕಪ್‌ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲ್ ಗಳಿಸಿದ ಎರಡನೇ ಆಟಗಾರರಾಗಿ ಎಂಬಾಪೆ ಹೊಮ್ಮಿದರು. 1966ರಲ್ಲಿ ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್ ಈ ಸಾಧನೆ ಮಾಡಿದ್ದರು.

2022ರ ವರ್ಡ್ ಕಪ್‌ ಫೈನಲ್ ಭಾರೀ ಪೈಪೋಟಿಯಿಂದ ಕೂಡಿತ್ತು. ಅರ್ಜೆಂಟೀನಾ ಪರವಾಗಿ ಡಿ ಮಾರಿಯ ಒಂದು ಗೋಲ್‌, ಲಿಯೋನಲ್ ಮೆಸ್ಸಿ ಎರಡು ಗೋಲ್ ಭಾರಿಸಿದರೆ, ಫ್ರಾನ್ಸ್‌ ಪರವಾಗಿ ಮೂರು ಗೋಲ್‌ಗಳನ್ನೂ ಎಂಬಾಪೆ ಒಬ್ಬರೇ ಗಳಿಸುವ ಮೂಲಕ ಪೆನಾಲ್ಟಿ ಶೂಟ್‌ಗೆ ಪಂದ್ಯ ಕಾಲಿಡಲು ಕಾರಣವಾದರು.

ತೊಂಬತ್ತು ನಿಮಿಷಗಳ ಆಟದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಒಂದು ಪ್ಯಾನಲ್ಟಿ ಸೇರಿದಂತೆ ಎಂಬಾಪೆ ಬಾರಿಸಿದ ಎರಡು ಗೋಲುಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಮತ್ತೆ ಹೆಚ್ಚುವರಿ ಅರ್ಧ ಗಂಟೆಯಲ್ಲಿ ಮೆಸ್ಸಿ ಒಂದು ಗೋಲು ಗಳಿಸಿದರು. ಪ್ಯಾನಲ್ಟಿ ಗೋಲಿನ ಅದೃಷ್ಟ ಪಡೆದ ಎಂಬಾಪೆ ಮತ್ತೊಂದು ಗೋಲು ತಮ್ಮದಾಗಿಸಿಕೊಂಡರು. ಹೀಗೆ ಸಮಬಲ ಸಾಧಿಸಿದ ಪಂದ್ಯ ಪ್ಯಾನಲ್ಟಿ ಶೂಟೌಟ್‌ಗೆ ಕಾಲಿಟ್ಟಿದ್ದು ರೋಮಾಂಚನಕಾರಿಯಾಗಿತ್ತು. ಫೈನಲ್‌ನಲ್ಲಿ ನಾಲ್ಕು ಗೋಲು ಗಳಿಸಿದ ಖ್ಯಾತಿಗೂ ಎಂಬಾಪೆ ಪಾತ್ರರಾಗಿದ್ದಾರೆ. 2018ರ ವರ್ಡ್‌ಕಪ್‌ ಫೈನಲ್‌ನಲ್ಲಿ ಕ್ರೊಯೇಷಿಯ ವಿರುದ್ಧ ಒಂದು ಗೋಲನ್ನು ಎಂಬಾಪೆ ಗಳಿಸಿದ್ದರು.

ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್‌ ಯಾರಿಗೆ ದೊರಕುತ್ತದೆ ಎಂಬ ಕುತೂಹಲ ಉಂಟಾಗಿತ್ತು. ಪಂದ್ಯದ ಏರಿಳಿತದಲ್ಲಿ ಒಮ್ಮೆ ಮೆಸ್ಸಿ ಕಡೆಗೂ ಮತ್ತೊಂದು ಸಲ ಎಂಬಾಪೆ ಕಡೆಗೂ ಗೋಲ್ಡನ್‌ ಬೂಟ್‌ ಅವಕಾಶ ಹರಿದಾಡುತ್ತಿತ್ತು. ಅಂತಿಮವಾಗಿ ಏಳು ಗೋಲನ್ನು ಮೆಸ್ಸಿ ಗಳಿಸಿದರೆ, ಎಂಬಾಪೆ ಎಂಟು ಗೋಲು ಭಾರಿಸಿದರು.

ಗೋಲ್ಡನ್ ಬೂಟ್‌ನ ಸಮರ ಹೇಗಿತ್ತು?

ಕತಾರ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಎಂಟು ಗೋಲ್‌ಗಳನ್ನು ಎಂಬಾಪೆ ಗಳಿಸಿದ್ದಾರೆ. ಜೊತೆಗೆ ಎರಡು ಗೋಲ್‌ಗಳಿಗೆ ಅಸಿಸ್ಟ್‌ (ನೆರವು) ಮಾಡಿದ್ದಾರೆ. ಫ್ರಾನ್ಸ್‌ ತಂಡವು ಟೂರ್ನಿಯಲ್ಲಿ ಫೈನಲ್‌ ತಲುಪಿ, ಪ್ರಬಲ ಪೈಪೋಟಿ ನೀಡಲು ಕಾರಣವಾದ ಎಂಬಾಪೆಯ ಗೋಲ್‌ಗಳು ಹೀಗಿದ್ದವು:

(ಆವರಣದಲ್ಲಿ ನೀಡಿರುವುದು ಎಂಬಾಪೆ ಗಳಿಸಿದ ಗೋಲ್‌ಗಳ ಸಂಖ್ಯೆ)

ಡಿ ಗುಂಪು: ಫ್ರಾನ್ಸ್ 4-1 ಆಸ್ಟ್ರೇಲಿಯಾ (1 ಗೋಲು, 1 ಅಸಿಸ್ಟ್‌)

ಡಿ ಗುಂಪು: ಫ್ರಾನ್ಸ್ 2-1 ಡೆನ್ಮಾರ್ಕ್ (2 ಗೋಲು)

ಡಿ ಗುಂಪು: ಟುನೀಶಿಯಾ 1-0 ಫ್ರಾನ್ಸ್ (0 ಗೋಲುಗಳು)

16ರ ಸುತ್ತು: ಫ್ರಾನ್ಸ್ 3-1 ಪೋಲೆಂಡ್ (2 ಗೋಲುಗಳು, 1 ಅಸಿಸ್ಟ್)

ಕ್ವಾರ್ಟರ್-ಫೈನಲ್: ಇಂಗ್ಲೆಂಡ್ 1-2 ಫ್ರಾನ್ಸ್ (0 ಗೋಲು)

ಸೆಮಿಫೈನಲ್: ಫ್ರಾನ್ಸ್ 2-0 ಮೊರಾಕೊ (0 ಗೋಲು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (3 ಗೋಲುಗಳು)

ಮೆಸ್ಸಿ ಮ್ಯಾಜಿಕ್‌

ಅರ್ಜೆಂಟೀನಾದ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ, ಅರ್ಜೇಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೊಂದು ಗೋಲ್ ಗಳಿಸಿದ್ದರೂ ಅವರು ಎಂಬಾಪೆ ಅವರೊಂದಿಗೆ ಸಮಬಲ ಸಾಧಿಸಿ ಗೋಲ್ಡನ್‌ ಬೂಟ್‌ ಪಡೆಯುತ್ತಿದ್ದರು. ಯಾಕೆಂದರೆ ಒಂದು ಹೆಚ್ಚುವರಿ ಅಸಿಸ್ಟ್ ಮಾಡಿದ ದಾಖಲೆ ಮೆಸ್ಸಿ ಅವರ ಪಾಲಿಗಿತ್ತು. ಅಂತಿಮವಾಗಿ ಮೆಸ್ಸಿ ಈ ಟೂರ್ನಿಯಲ್ಲಿ 7 ಗೋಲು ಹಾಗೂ 3 ಅಸಿಸ್ಟ್‌ ಮಾಡಿದ್ದಾರೆ.

ಮೆಸ್ಸಿ ಗೋಲ್‌ ಭಾರಿಸಿದ ಪಂದ್ಯಗಳು ಹೀಗಿವೆ:

(ಆವರಣದಲ್ಲಿ ನೀಡಿರುವುದು ಮೆಸ್ಸಿ ಗಳಿಸಿದ ಗೋಲ್‌ಗಳ ಸಂಖ್ಯೆ)

ಗುಂಪು ಸಿ: ಅರ್ಜೆಂಟೀನಾ 1-2 ಸೌದಿ ಅರೇಬಿಯಾ (1 ಗೋಲು)

ಗುಂಪು ಸಿ: ಅರ್ಜೆಂಟೀನಾ 2-1 ಮೆಕ್ಸಿಕೋ (1 ಗೋಲು, 1 ಅಸಿಸ್ಟ್‌)

ಗುಂಪು ಸಿ: ಪೋಲೆಂಡ್ 0-2 ಅರ್ಜೆಂಟೀನಾ (0 ಗೋಲುಗಳು)

16ರ ಸುತ್ತು: ಅರ್ಜೆಂಟೀನಾ 2-1 ಆಸ್ಟ್ರೇಲಿಯಾ (1 ಗೋಲು)

ಕ್ವಾರ್ಟರ್-ಫೈನಲ್: ನೆದರ್ಲ್ಯಾಂಡ್ಸ್ 2-2 ಅರ್ಜೆಂಟೀನಾ (1 ಗೋಲು, 1 ಅಸಿಸ್ಟ್‌)

ಸೆಮಿಫೈನಲ್: ಅರ್ಜೆಂಟೀನಾ 3-0 ಕ್ರೊಯೇಷಿಯಾ (1 ಗೋಲು, 1 ನೆರವು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (2 ಗೋಲು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...