Homeಸಿನಿಮಾಕ್ರೀಡೆಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

ಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

- Advertisement -
- Advertisement -

23 ವರ್ಷ ವಯಸ್ಸಿನ ಕಿಲಿಯಾನ್ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಪಡೆದ ಫ್ರಾನ್ಸ್ ಆಟಗಾರ. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೋತರೂ ಫುಟ್ಬಾಲ್‌ ಪ್ರೇಮಿಗಳ ಮನಗೆದ್ದವರು ಎಂಬಾಪೆ.

2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವರ್ಡ್‌ಕಪ್‌ನಲ್ಲಿ ‘ಬೆಸ್ಟ್ ಯಂಗ್ ಪ್ಲೇಯರ್‌ ಅವಾರ್ಡ್’ ಪಡೆದಿದ್ದ ಎಂಬಾಪೆ ಈ ಸಲದ ಕತಾರ್‌ ವರ್ಡ್‌ಕಪ್‌ನಲ್ಲಿ ಅತಿ ಹೆಚ್ಚು ಗೋಲ್‌ ಭಾರಿಸುವ ಮೂಲಕ ‘ಗೋಲ್ಡನ್ ಬೂಟ್ ಅವಾರ್ಡ್’ ತಮ್ಮದಾಗಿಸಿಕೊಂಡರು.

ವರ್ಡ್‌ಕಪ್‌ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲ್ ಗಳಿಸಿದ ಎರಡನೇ ಆಟಗಾರರಾಗಿ ಎಂಬಾಪೆ ಹೊಮ್ಮಿದರು. 1966ರಲ್ಲಿ ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್ ಈ ಸಾಧನೆ ಮಾಡಿದ್ದರು.

2022ರ ವರ್ಡ್ ಕಪ್‌ ಫೈನಲ್ ಭಾರೀ ಪೈಪೋಟಿಯಿಂದ ಕೂಡಿತ್ತು. ಅರ್ಜೆಂಟೀನಾ ಪರವಾಗಿ ಡಿ ಮಾರಿಯ ಒಂದು ಗೋಲ್‌, ಲಿಯೋನಲ್ ಮೆಸ್ಸಿ ಎರಡು ಗೋಲ್ ಭಾರಿಸಿದರೆ, ಫ್ರಾನ್ಸ್‌ ಪರವಾಗಿ ಮೂರು ಗೋಲ್‌ಗಳನ್ನೂ ಎಂಬಾಪೆ ಒಬ್ಬರೇ ಗಳಿಸುವ ಮೂಲಕ ಪೆನಾಲ್ಟಿ ಶೂಟ್‌ಗೆ ಪಂದ್ಯ ಕಾಲಿಡಲು ಕಾರಣವಾದರು.

ತೊಂಬತ್ತು ನಿಮಿಷಗಳ ಆಟದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಒಂದು ಪ್ಯಾನಲ್ಟಿ ಸೇರಿದಂತೆ ಎಂಬಾಪೆ ಬಾರಿಸಿದ ಎರಡು ಗೋಲುಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಮತ್ತೆ ಹೆಚ್ಚುವರಿ ಅರ್ಧ ಗಂಟೆಯಲ್ಲಿ ಮೆಸ್ಸಿ ಒಂದು ಗೋಲು ಗಳಿಸಿದರು. ಪ್ಯಾನಲ್ಟಿ ಗೋಲಿನ ಅದೃಷ್ಟ ಪಡೆದ ಎಂಬಾಪೆ ಮತ್ತೊಂದು ಗೋಲು ತಮ್ಮದಾಗಿಸಿಕೊಂಡರು. ಹೀಗೆ ಸಮಬಲ ಸಾಧಿಸಿದ ಪಂದ್ಯ ಪ್ಯಾನಲ್ಟಿ ಶೂಟೌಟ್‌ಗೆ ಕಾಲಿಟ್ಟಿದ್ದು ರೋಮಾಂಚನಕಾರಿಯಾಗಿತ್ತು. ಫೈನಲ್‌ನಲ್ಲಿ ನಾಲ್ಕು ಗೋಲು ಗಳಿಸಿದ ಖ್ಯಾತಿಗೂ ಎಂಬಾಪೆ ಪಾತ್ರರಾಗಿದ್ದಾರೆ. 2018ರ ವರ್ಡ್‌ಕಪ್‌ ಫೈನಲ್‌ನಲ್ಲಿ ಕ್ರೊಯೇಷಿಯ ವಿರುದ್ಧ ಒಂದು ಗೋಲನ್ನು ಎಂಬಾಪೆ ಗಳಿಸಿದ್ದರು.

ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್‌ ಯಾರಿಗೆ ದೊರಕುತ್ತದೆ ಎಂಬ ಕುತೂಹಲ ಉಂಟಾಗಿತ್ತು. ಪಂದ್ಯದ ಏರಿಳಿತದಲ್ಲಿ ಒಮ್ಮೆ ಮೆಸ್ಸಿ ಕಡೆಗೂ ಮತ್ತೊಂದು ಸಲ ಎಂಬಾಪೆ ಕಡೆಗೂ ಗೋಲ್ಡನ್‌ ಬೂಟ್‌ ಅವಕಾಶ ಹರಿದಾಡುತ್ತಿತ್ತು. ಅಂತಿಮವಾಗಿ ಏಳು ಗೋಲನ್ನು ಮೆಸ್ಸಿ ಗಳಿಸಿದರೆ, ಎಂಬಾಪೆ ಎಂಟು ಗೋಲು ಭಾರಿಸಿದರು.

ಗೋಲ್ಡನ್ ಬೂಟ್‌ನ ಸಮರ ಹೇಗಿತ್ತು?

ಕತಾರ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಎಂಟು ಗೋಲ್‌ಗಳನ್ನು ಎಂಬಾಪೆ ಗಳಿಸಿದ್ದಾರೆ. ಜೊತೆಗೆ ಎರಡು ಗೋಲ್‌ಗಳಿಗೆ ಅಸಿಸ್ಟ್‌ (ನೆರವು) ಮಾಡಿದ್ದಾರೆ. ಫ್ರಾನ್ಸ್‌ ತಂಡವು ಟೂರ್ನಿಯಲ್ಲಿ ಫೈನಲ್‌ ತಲುಪಿ, ಪ್ರಬಲ ಪೈಪೋಟಿ ನೀಡಲು ಕಾರಣವಾದ ಎಂಬಾಪೆಯ ಗೋಲ್‌ಗಳು ಹೀಗಿದ್ದವು:

(ಆವರಣದಲ್ಲಿ ನೀಡಿರುವುದು ಎಂಬಾಪೆ ಗಳಿಸಿದ ಗೋಲ್‌ಗಳ ಸಂಖ್ಯೆ)

ಡಿ ಗುಂಪು: ಫ್ರಾನ್ಸ್ 4-1 ಆಸ್ಟ್ರೇಲಿಯಾ (1 ಗೋಲು, 1 ಅಸಿಸ್ಟ್‌)

ಡಿ ಗುಂಪು: ಫ್ರಾನ್ಸ್ 2-1 ಡೆನ್ಮಾರ್ಕ್ (2 ಗೋಲು)

ಡಿ ಗುಂಪು: ಟುನೀಶಿಯಾ 1-0 ಫ್ರಾನ್ಸ್ (0 ಗೋಲುಗಳು)

16ರ ಸುತ್ತು: ಫ್ರಾನ್ಸ್ 3-1 ಪೋಲೆಂಡ್ (2 ಗೋಲುಗಳು, 1 ಅಸಿಸ್ಟ್)

ಕ್ವಾರ್ಟರ್-ಫೈನಲ್: ಇಂಗ್ಲೆಂಡ್ 1-2 ಫ್ರಾನ್ಸ್ (0 ಗೋಲು)

ಸೆಮಿಫೈನಲ್: ಫ್ರಾನ್ಸ್ 2-0 ಮೊರಾಕೊ (0 ಗೋಲು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (3 ಗೋಲುಗಳು)

ಮೆಸ್ಸಿ ಮ್ಯಾಜಿಕ್‌

ಅರ್ಜೆಂಟೀನಾದ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ, ಅರ್ಜೇಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೊಂದು ಗೋಲ್ ಗಳಿಸಿದ್ದರೂ ಅವರು ಎಂಬಾಪೆ ಅವರೊಂದಿಗೆ ಸಮಬಲ ಸಾಧಿಸಿ ಗೋಲ್ಡನ್‌ ಬೂಟ್‌ ಪಡೆಯುತ್ತಿದ್ದರು. ಯಾಕೆಂದರೆ ಒಂದು ಹೆಚ್ಚುವರಿ ಅಸಿಸ್ಟ್ ಮಾಡಿದ ದಾಖಲೆ ಮೆಸ್ಸಿ ಅವರ ಪಾಲಿಗಿತ್ತು. ಅಂತಿಮವಾಗಿ ಮೆಸ್ಸಿ ಈ ಟೂರ್ನಿಯಲ್ಲಿ 7 ಗೋಲು ಹಾಗೂ 3 ಅಸಿಸ್ಟ್‌ ಮಾಡಿದ್ದಾರೆ.

ಮೆಸ್ಸಿ ಗೋಲ್‌ ಭಾರಿಸಿದ ಪಂದ್ಯಗಳು ಹೀಗಿವೆ:

(ಆವರಣದಲ್ಲಿ ನೀಡಿರುವುದು ಮೆಸ್ಸಿ ಗಳಿಸಿದ ಗೋಲ್‌ಗಳ ಸಂಖ್ಯೆ)

ಗುಂಪು ಸಿ: ಅರ್ಜೆಂಟೀನಾ 1-2 ಸೌದಿ ಅರೇಬಿಯಾ (1 ಗೋಲು)

ಗುಂಪು ಸಿ: ಅರ್ಜೆಂಟೀನಾ 2-1 ಮೆಕ್ಸಿಕೋ (1 ಗೋಲು, 1 ಅಸಿಸ್ಟ್‌)

ಗುಂಪು ಸಿ: ಪೋಲೆಂಡ್ 0-2 ಅರ್ಜೆಂಟೀನಾ (0 ಗೋಲುಗಳು)

16ರ ಸುತ್ತು: ಅರ್ಜೆಂಟೀನಾ 2-1 ಆಸ್ಟ್ರೇಲಿಯಾ (1 ಗೋಲು)

ಕ್ವಾರ್ಟರ್-ಫೈನಲ್: ನೆದರ್ಲ್ಯಾಂಡ್ಸ್ 2-2 ಅರ್ಜೆಂಟೀನಾ (1 ಗೋಲು, 1 ಅಸಿಸ್ಟ್‌)

ಸೆಮಿಫೈನಲ್: ಅರ್ಜೆಂಟೀನಾ 3-0 ಕ್ರೊಯೇಷಿಯಾ (1 ಗೋಲು, 1 ನೆರವು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (2 ಗೋಲು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...