Homeಸಿನಿಮಾಕ್ರೀಡೆಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

ಫ್ರಾನ್ಸ್‌ ಸೋತರೂ ಫುಟ್‌ಬಾಲ್‌ ಪ್ರೇಮಿಗಳ ಮನಗೆದ್ದ ಎಂಬಾಪೆ; ಗೋಲ್ಡನ್ ಬೂಟ್‌ ಪಯಣದ ಯಶೋಗಾಥೆ

- Advertisement -
- Advertisement -

23 ವರ್ಷ ವಯಸ್ಸಿನ ಕಿಲಿಯಾನ್ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಪಡೆದ ಫ್ರಾನ್ಸ್ ಆಟಗಾರ. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೋತರೂ ಫುಟ್ಬಾಲ್‌ ಪ್ರೇಮಿಗಳ ಮನಗೆದ್ದವರು ಎಂಬಾಪೆ.

2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವರ್ಡ್‌ಕಪ್‌ನಲ್ಲಿ ‘ಬೆಸ್ಟ್ ಯಂಗ್ ಪ್ಲೇಯರ್‌ ಅವಾರ್ಡ್’ ಪಡೆದಿದ್ದ ಎಂಬಾಪೆ ಈ ಸಲದ ಕತಾರ್‌ ವರ್ಡ್‌ಕಪ್‌ನಲ್ಲಿ ಅತಿ ಹೆಚ್ಚು ಗೋಲ್‌ ಭಾರಿಸುವ ಮೂಲಕ ‘ಗೋಲ್ಡನ್ ಬೂಟ್ ಅವಾರ್ಡ್’ ತಮ್ಮದಾಗಿಸಿಕೊಂಡರು.

ವರ್ಡ್‌ಕಪ್‌ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲ್ ಗಳಿಸಿದ ಎರಡನೇ ಆಟಗಾರರಾಗಿ ಎಂಬಾಪೆ ಹೊಮ್ಮಿದರು. 1966ರಲ್ಲಿ ಇಂಗ್ಲೆಂಡ್‌ನ ಜಿಯೋಫ್ ಹರ್ಸ್ಟ್ ಈ ಸಾಧನೆ ಮಾಡಿದ್ದರು.

2022ರ ವರ್ಡ್ ಕಪ್‌ ಫೈನಲ್ ಭಾರೀ ಪೈಪೋಟಿಯಿಂದ ಕೂಡಿತ್ತು. ಅರ್ಜೆಂಟೀನಾ ಪರವಾಗಿ ಡಿ ಮಾರಿಯ ಒಂದು ಗೋಲ್‌, ಲಿಯೋನಲ್ ಮೆಸ್ಸಿ ಎರಡು ಗೋಲ್ ಭಾರಿಸಿದರೆ, ಫ್ರಾನ್ಸ್‌ ಪರವಾಗಿ ಮೂರು ಗೋಲ್‌ಗಳನ್ನೂ ಎಂಬಾಪೆ ಒಬ್ಬರೇ ಗಳಿಸುವ ಮೂಲಕ ಪೆನಾಲ್ಟಿ ಶೂಟ್‌ಗೆ ಪಂದ್ಯ ಕಾಲಿಡಲು ಕಾರಣವಾದರು.

ತೊಂಬತ್ತು ನಿಮಿಷಗಳ ಆಟದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಒಂದು ಪ್ಯಾನಲ್ಟಿ ಸೇರಿದಂತೆ ಎಂಬಾಪೆ ಬಾರಿಸಿದ ಎರಡು ಗೋಲುಗಳು ಪಂದ್ಯದ ದಿಕ್ಕನ್ನೇ ಬದಲಿಸಿತು. ಮತ್ತೆ ಹೆಚ್ಚುವರಿ ಅರ್ಧ ಗಂಟೆಯಲ್ಲಿ ಮೆಸ್ಸಿ ಒಂದು ಗೋಲು ಗಳಿಸಿದರು. ಪ್ಯಾನಲ್ಟಿ ಗೋಲಿನ ಅದೃಷ್ಟ ಪಡೆದ ಎಂಬಾಪೆ ಮತ್ತೊಂದು ಗೋಲು ತಮ್ಮದಾಗಿಸಿಕೊಂಡರು. ಹೀಗೆ ಸಮಬಲ ಸಾಧಿಸಿದ ಪಂದ್ಯ ಪ್ಯಾನಲ್ಟಿ ಶೂಟೌಟ್‌ಗೆ ಕಾಲಿಟ್ಟಿದ್ದು ರೋಮಾಂಚನಕಾರಿಯಾಗಿತ್ತು. ಫೈನಲ್‌ನಲ್ಲಿ ನಾಲ್ಕು ಗೋಲು ಗಳಿಸಿದ ಖ್ಯಾತಿಗೂ ಎಂಬಾಪೆ ಪಾತ್ರರಾಗಿದ್ದಾರೆ. 2018ರ ವರ್ಡ್‌ಕಪ್‌ ಫೈನಲ್‌ನಲ್ಲಿ ಕ್ರೊಯೇಷಿಯ ವಿರುದ್ಧ ಒಂದು ಗೋಲನ್ನು ಎಂಬಾಪೆ ಗಳಿಸಿದ್ದರು.

ಫೈನಲ್ ಪಂದ್ಯದ ಆರಂಭಕ್ಕೂ ಮೊದಲು ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್‌ ಯಾರಿಗೆ ದೊರಕುತ್ತದೆ ಎಂಬ ಕುತೂಹಲ ಉಂಟಾಗಿತ್ತು. ಪಂದ್ಯದ ಏರಿಳಿತದಲ್ಲಿ ಒಮ್ಮೆ ಮೆಸ್ಸಿ ಕಡೆಗೂ ಮತ್ತೊಂದು ಸಲ ಎಂಬಾಪೆ ಕಡೆಗೂ ಗೋಲ್ಡನ್‌ ಬೂಟ್‌ ಅವಕಾಶ ಹರಿದಾಡುತ್ತಿತ್ತು. ಅಂತಿಮವಾಗಿ ಏಳು ಗೋಲನ್ನು ಮೆಸ್ಸಿ ಗಳಿಸಿದರೆ, ಎಂಬಾಪೆ ಎಂಟು ಗೋಲು ಭಾರಿಸಿದರು.

ಗೋಲ್ಡನ್ ಬೂಟ್‌ನ ಸಮರ ಹೇಗಿತ್ತು?

ಕತಾರ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು ಎಂಟು ಗೋಲ್‌ಗಳನ್ನು ಎಂಬಾಪೆ ಗಳಿಸಿದ್ದಾರೆ. ಜೊತೆಗೆ ಎರಡು ಗೋಲ್‌ಗಳಿಗೆ ಅಸಿಸ್ಟ್‌ (ನೆರವು) ಮಾಡಿದ್ದಾರೆ. ಫ್ರಾನ್ಸ್‌ ತಂಡವು ಟೂರ್ನಿಯಲ್ಲಿ ಫೈನಲ್‌ ತಲುಪಿ, ಪ್ರಬಲ ಪೈಪೋಟಿ ನೀಡಲು ಕಾರಣವಾದ ಎಂಬಾಪೆಯ ಗೋಲ್‌ಗಳು ಹೀಗಿದ್ದವು:

(ಆವರಣದಲ್ಲಿ ನೀಡಿರುವುದು ಎಂಬಾಪೆ ಗಳಿಸಿದ ಗೋಲ್‌ಗಳ ಸಂಖ್ಯೆ)

ಡಿ ಗುಂಪು: ಫ್ರಾನ್ಸ್ 4-1 ಆಸ್ಟ್ರೇಲಿಯಾ (1 ಗೋಲು, 1 ಅಸಿಸ್ಟ್‌)

ಡಿ ಗುಂಪು: ಫ್ರಾನ್ಸ್ 2-1 ಡೆನ್ಮಾರ್ಕ್ (2 ಗೋಲು)

ಡಿ ಗುಂಪು: ಟುನೀಶಿಯಾ 1-0 ಫ್ರಾನ್ಸ್ (0 ಗೋಲುಗಳು)

16ರ ಸುತ್ತು: ಫ್ರಾನ್ಸ್ 3-1 ಪೋಲೆಂಡ್ (2 ಗೋಲುಗಳು, 1 ಅಸಿಸ್ಟ್)

ಕ್ವಾರ್ಟರ್-ಫೈನಲ್: ಇಂಗ್ಲೆಂಡ್ 1-2 ಫ್ರಾನ್ಸ್ (0 ಗೋಲು)

ಸೆಮಿಫೈನಲ್: ಫ್ರಾನ್ಸ್ 2-0 ಮೊರಾಕೊ (0 ಗೋಲು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (3 ಗೋಲುಗಳು)

ಮೆಸ್ಸಿ ಮ್ಯಾಜಿಕ್‌

ಅರ್ಜೆಂಟೀನಾದ ಸ್ಟಾರ್‌ ಆಟಗಾರ ಲಿಯೋನೆಲ್ ಮೆಸ್ಸಿ, ಅರ್ಜೇಂಟೀನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೊಂದು ಗೋಲ್ ಗಳಿಸಿದ್ದರೂ ಅವರು ಎಂಬಾಪೆ ಅವರೊಂದಿಗೆ ಸಮಬಲ ಸಾಧಿಸಿ ಗೋಲ್ಡನ್‌ ಬೂಟ್‌ ಪಡೆಯುತ್ತಿದ್ದರು. ಯಾಕೆಂದರೆ ಒಂದು ಹೆಚ್ಚುವರಿ ಅಸಿಸ್ಟ್ ಮಾಡಿದ ದಾಖಲೆ ಮೆಸ್ಸಿ ಅವರ ಪಾಲಿಗಿತ್ತು. ಅಂತಿಮವಾಗಿ ಮೆಸ್ಸಿ ಈ ಟೂರ್ನಿಯಲ್ಲಿ 7 ಗೋಲು ಹಾಗೂ 3 ಅಸಿಸ್ಟ್‌ ಮಾಡಿದ್ದಾರೆ.

ಮೆಸ್ಸಿ ಗೋಲ್‌ ಭಾರಿಸಿದ ಪಂದ್ಯಗಳು ಹೀಗಿವೆ:

(ಆವರಣದಲ್ಲಿ ನೀಡಿರುವುದು ಮೆಸ್ಸಿ ಗಳಿಸಿದ ಗೋಲ್‌ಗಳ ಸಂಖ್ಯೆ)

ಗುಂಪು ಸಿ: ಅರ್ಜೆಂಟೀನಾ 1-2 ಸೌದಿ ಅರೇಬಿಯಾ (1 ಗೋಲು)

ಗುಂಪು ಸಿ: ಅರ್ಜೆಂಟೀನಾ 2-1 ಮೆಕ್ಸಿಕೋ (1 ಗೋಲು, 1 ಅಸಿಸ್ಟ್‌)

ಗುಂಪು ಸಿ: ಪೋಲೆಂಡ್ 0-2 ಅರ್ಜೆಂಟೀನಾ (0 ಗೋಲುಗಳು)

16ರ ಸುತ್ತು: ಅರ್ಜೆಂಟೀನಾ 2-1 ಆಸ್ಟ್ರೇಲಿಯಾ (1 ಗೋಲು)

ಕ್ವಾರ್ಟರ್-ಫೈನಲ್: ನೆದರ್ಲ್ಯಾಂಡ್ಸ್ 2-2 ಅರ್ಜೆಂಟೀನಾ (1 ಗೋಲು, 1 ಅಸಿಸ್ಟ್‌)

ಸೆಮಿಫೈನಲ್: ಅರ್ಜೆಂಟೀನಾ 3-0 ಕ್ರೊಯೇಷಿಯಾ (1 ಗೋಲು, 1 ನೆರವು)

ಫೈನಲ್: ಅರ್ಜೆಂಟೀನಾ 3-3 ಫ್ರಾನ್ಸ್ (2 ಗೋಲು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...