Homeಮುಖಪುಟನರಗುಂದ ಬಂಡಾಯದ ನಂತರ

ನರಗುಂದ ಬಂಡಾಯದ ನಂತರ

- Advertisement -
- Advertisement -

ಸಿಪಿಎಂ ನಾಯಕರಾದ ಜಿ.ಎನ್ ನಾಗರಾಜ್‌ರವರು 80ರ ದಶಕದ ರೈತ ಚಳವಳಿ ಕುರಿತು ದಾಖಲಿಸಿದ್ದಾರೆ. ಇದು ಪ್ರಾಮಾಣಿಕವಾದ ಐತಿಹಾಸಿಕ ವಿವರಗಳನ್ನೊಳಗೊಂಡ ಬರಹ. ನರಗುಂದ ರೈತ ಬಂಡಾಯದ ಸಮಯದಲ್ಲಿ ನಾಗರಾಜ್ ಕೃಷಿ ಇಲಾಖೆಯ ಅಧಿಕಾರಿಯಾಗಿದ್ದರು, ಜೊತೆಗೆ ರೈತರು, ಅಧಿಕಾರಿಗಳು ಮತ್ತು ಮುಖ್ಯಮಂತ್ರಿಯ ನಡುವೆ ವ್ಯವಹರಿಸುವ ಜವಾಬ್ದಾರಿ ಹೊತ್ತವರಾಗಿದ್ದರು. ಎಲ್ಲವೂ ಕೈಮೀರುವ ಹಂತ ತಲುಪಿದಾಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದಕ್ಕೆ ಕಾರಣ ರೈತರು ಮತ್ತು ಕೃಷಿ ಕಾರ್ಮಿಕರ ಬಗ್ಗೆ ಅವರಿಗಿದ್ದ ಕಾಳಜಿ. ಕೃಷಿ ಅಧಿಕಾರಿಯೊಬ್ಬ ಆಗ ಹಠಾತ್ತನೆ ರಾಜೀನಾಮೆ ಬರೆದು ಸಂಘಟಕರಾಗಿ ಬದಲಾಗುವುದು ಒಂದು ಸಾಹಸ. ಇಂತಹ ತೀರ್ಮಾನಕ್ಕೆ ಧೈರ್ಯಬೇಕು. ಅದನ್ನು ತಮ್ಮ ಬದುಕಿನಲ್ಲಿ ತೋರಿಸಿದವರು ನಾಗರಾಜ್.

ಕರ್ನಾಟಕದ ಇತಿಹಾಸದಲ್ಲಿ ರೈತ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಬಲಿಷ್ಠ ಎತ್ತುಗಳೊಂದಿಗೆ ಹೊಲ ಉತ್ತು ಬೇಸಾಯ ಮಾಡಿದ್ದ ದೇವರಾಜ ಅರಸರಿಂದ ಅಧಿಕಾರವನ್ನು ಕಿತ್ತು ಗುಂಡೂರಾಯರಿಗೆ ಕೊಟ್ಟ ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಆ ಕಾರಣಕ್ಕೆ ಅಂದು ರಾಜಕೀಯವಾಗಿ ಕರ್ನಾಟಕವನ್ನು ಕಳೆದುಕೊಂಡರು. ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದ ಅರಸು ಆಡಳಿತದ ಫಲವಾಗಿ ಕರ್ನಾಟಕದಲ್ಲಿ ಕಾಂಗೈಯನ್ನ ಅಲುಗಾಡಿಸುವುದು ಕಷ್ಟವಿತ್ತು. ಆದರೆ ಜನಾಭಿಪ್ರಾಯವಿಲ್ಲದೆ ನೇಮಕಗೊಂಡಿದ್ದ ಗುಂಡೂರಾವ್ ಆಡಳಿತ ವೈಖರಿಯಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಕರ್ನಾಟಕದ ಜನ ಸಮೂಹದ ಪ್ರತಿಭಟನೆಗಳು ತನ್ನ ವಿರುದ್ಧವಾಗಿವೆ ಎಂದು ಭಾವಿಸಿದ್ದ ಗುಂಡೂರಾಯರ ಮಾತಿನಲ್ಲಿ ಪ್ರತೀಕಾರದ ಮಾತು ಬರುತ್ತಿದ್ದವು. ನಾಯಕನಾದವನ ಬಾಯಲ್ಲಿ ಹಿಂಸೆಯ ಮಾತುಗಳು ಬರಬಾರದು, ಬಂದರೆ ಅದರ ಪರಿಣಾಮ ಘೋರ. ನಾಯಕನ ಬಾಯಿಂದ ಪ್ರತಿಹಿಂಸೆ ಮಾತು ಬಂದರೆ ಪೊಲೀಸರಿಗೆ ಎಲ್ಲಿಲ್ಲದ ಶಕ್ತಿ ಬರುತ್ತದೆ. ಗುಂಡೂರಾಯರ ಕಾಲದ ಪೊಲೀಸರು ರಕ್ಕಸರಂತಾಗಿದ್ದರು. ಇದರ ಪರಿಣಾಮ ನರಗುಂದದಲ್ಲಿ ರೈತರ ದಂಗೆಯಾಗಿ ಗೋಲಿಬಾರಿಗೆ ಎರಡು ಜೀವ ಬಲಿಯಾಗಿದ್ದವು. ಪೊಲೀಸ್ ಇನ್‌ಸ್ಪೆಕ್ಟರ್ ಹತನಾಗಿದ್ದ.

ಇತ್ತ ಶಿವಮೊಗ್ಗದಲ್ಲಿ ಅದಾಗಲೇ ರೈತನಾಯಕ ಹೆಚ್.ಎಸ್ ರುದ್ರಪ್ಪನವರ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಂಘ ಹುಟ್ಟಿಕೊಂಡು ಸರಕಾರದ ವಿರುದ್ಧ ಹೋರಾಡುತ್ತಿತ್ತು. ಅಂತಹ ಸಮಯದಲ್ಲಿ ಮುಲಾಜಿಲ್ಲದೆ ರೈತರನ್ನು ಗೋಲಿಬಾರ್ ಮುಖಾಂತರ ಉಡಾಯಿಸಿದ ಸರಕಾರದ ವಿರುದ್ಧ ರುದ್ರಪ್ಪನವರ ಟೀಮು ಸಿಡಿಗೆದ್ದಿತು. ತಮ್ಮ ಮುಂದಿನ ಚಳವಳಿಯ ನಾಯಕತ್ವಕ್ಕಾಗಿ ಪ್ರೊ.ಎಂ.ಡಿ ನಂಜುಂಡಸ್ವಾಮಿಯವರನ್ನ ಕರೆಸಿಕೊಂಡರು. ಸುಂದರೇಶ್, ಕಡಿದಾಳು ಶಾಮಣ್ಣ, ಕೆ.ಟಿ ಗಂಗಾಧರ, ಬಸವರಾಜಪ್ಪ ಇವರೆಲ್ಲಾ ನರಗುಂದಕ್ಕೆ ಹೋದರು. ಅಲ್ಲಿ ಪೊಲೀಸರು ರೈತರನ್ನು ಬೇಟೆಯಾಡಿ ತಂದು ಜೈಲಿಗೆ ದಬ್ಬುತ್ತಿದ್ದುದನ್ನ ನೋಡಿದ ರೈತ ನಾಯಕರಿಗೆ ಸಿಟ್ಟು ಕಟ್ಟಯೊಡೆಯಿತು. ಗುಂಡೂರಾಯರು ಎಲ್ಲ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿದಂತೆ ಕಂಡಿತು.

ಪ್ರೊ. ನಂಜುಂಡಸ್ವಾಮಿಯವರ ಟೀಮು ಮಡಿದ ರೈತರ ನೆನಪಿಗೆ ನೆಡಲು ವೀರಗಲ್ಲುಗಳ ಸಮೇತ ನರಗುಂದಕ್ಕೆ ಹೋಗಿದ್ದರು. IB ಬಳಿ ಹೋದಾಗ ಅಲ್ಲಿನ ಪೊಲೀಸರು IBಯಲ್ಲಿ ರೂಮಿಲ್ಲ, ಅದಾಗಲೆ ಎಸ್‌ಪಿಗೆ ಅಲಾಟ್ ಮಾಡಲಾಗಿದೆ ಎಂದರು. ಪ್ರೊ. ನಂಜುಂಡಸ್ವಾಮಿಯವರು ಕೆ.ಟಿ ಗಂಗಾದರ್ ಕಡೆ ನೋಡಿ “ಬಾಗಿಲು ಓಪನ್ ಮಾಡಿ” ಎಂದರು. ಕೂಡಲೇ ಗಂಗಾಧರ್ ಕಲ್ಲುತೆಗೆದುಕೊಂಡು ಬೀಗ ಹೊಡೆದರು. ಬಾಗಿಲು ತೆಗೆಯಿತು. ಆ ನಂತರ ಯಾವ ಪೊಲೀಸರು ಇವರ ಸನಿಹ ಸುಳಿಯಲಿಲ್ಲ. ಇಲ್ಲೊಂದು ಮಹತ್ವದ ವಿಷಯವಿದೆ; ನರಗುಂದ ನವಲಗುಂದದ ಬಂಡಾಯಕ್ಕೆ ಓಗೊಟ್ಟು ಬಂದಿದ್ದ ಈ ನಾಯಕರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಪ್ರೊ. ನಂಜುಂಡಸ್ವಾಮಿ ದೊಡ್ಡ ಜಮೀನ್ದಾರರ ಮಗ. ವಿದೇಶದಲ್ಲಿ ಲಾ ಓದಿಕೊಂಡು ಬಂದವರು. ನಮ್ಮ ಸಂವಿಧಾನ, ಕಾನೂನು, ಲೋಹಿಯಾರನ್ನೆಲ್ಲ ಅರೆದು ಕುಡಿದವರು. ಇನ್ನ ರುದ್ರಪ್ಪ ಗಾಂಧಿವಾದಿ, ರಾಜಕಾರಣಿ, ವಿಧಾನಸಭೆ ಸ್ಪೀಕರ್‌ರಾಗಿದ್ದವರು. ಎನ್.ಡಿ ಸುಂದರೇಶ್ ಕೂಡ ಜಮೀನ್ದಾರರ ಮಗ ಹಾಗೂ ಹೈಕೋರ್ಟ್ ಜಡ್ಜು ಎನ್.ಡಿ ವೆಂಕಟೇಶರ ತಮ್ಮ. ಇನ್ನ ಕಡಿದಾಳು ಶಾಮಣ್ಣ ಕಡಿದಾಳ ಮಂಜಪ್ಪನವರ ಅಣ್ಣನ ಮಗ. ಗಂಗಾಧರ ಸಮಾಜವಾದಿ ಚಿಂತನೆಯ ಹೋರಾಟಗಾರ. ಇಂತವರ ದಂಡು ನರಗುಂದಕ್ಕೆ ಬಂದಾಗ ಸರಕಾರ ಮತ್ತು ಪೊಲೀಸರ ಪುಂಗಿ ಬಂದಾದವು.

ಇನ್ಯಾರೆ ಆ ಸಮಯದಲ್ಲಿ ನರಗುಂದಕ್ಕೆ ಹೋಗಿದ್ದರೆ, ಹೊಡೆದು ಓಡಿಸುತ್ತಿದ್ದರು. ಗುಂಡೂರಾಯರು ಕೂಡ ಉಸಿರೆತ್ತಲಿಲ್ಲ. ಅಂದು ನರಗುಂದ ನವಲಗುಂದದಲ್ಲಿ ನಡೆದ ಬಂಡಾಯವನ್ನು ಈ ರೈತನಾಯಕರು ಅವಲೋಕಿಸಿದಾಗ ಅಲ್ಲಿ ನಾಯಕತ್ವದ ಕೊರತೆ ಇದೆಯೆಂದು ಭಾವಿಸಿದರು. ಅಲ್ಲಿನ ಬಂಡಾಯವನ್ನು ಜವಾಬ್ದಾರಿಯುತ ನಾಯಕರು ನಿಭಾಯಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂಬುದು ರೈತನಾಯಕರ ಅರಿವಿಗೆ ಬಂತು. ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ರೈತರು ಮತ್ತವರ ಕುಟುಂಬದವರನ್ನ ಭೇಟಿ ಮಾಡಿ ಧೈರ್ಯ ತುಂಬಲು ಕಡಿದಾಳು ಶಾಮಣ್ಣ ಮತ್ತು ಕೆ.ಟಿ ಗಂಗಾಧರ್‌ರನ್ನು ನೇಮಿಸಿದ ಪ್ರೊಫೆಸರ್ ಟೀಮು ಶಿವಮೊಗ್ಗಕ್ಕೆ ಬಂದು ನಿರಾಯುಧರಾದ ರೈತರನ್ನು ಕೊಂದ ಸರಕಾರದ ವಿರುದ್ಧ ಚಳವಳಿ ಆರಂಭಿಸಿದರು. ಡಿ.ಸಿ ಕಚೆರಿ ಎದುರು ಪೆಂಡಾಲ್ ಹಾಕಿ ಪ್ರತಿಭಟನೆ ಆರಂಭಿಸಿದ ನಾಯಕರ ಬೆಂಬಲಕ್ಕೆ ಇಡೀ ಶಿವಮೊಗ್ಗ ಜಿಲ್ಲೆಯ ರೈತರು ಹರಿದು ಬರತೊಡಗಿದರು. ಆಗ ಅಗಸ್ಟ್ 15 ಬಂತು, ಆ ದಿನವನ್ನು ಕರಾಳ ದಿನವಾಗಿ ಆಚರಿಸಿದ ರೈತನಾಯಕರು ಮುಂದೆ ಅಕ್ಟೋಬರ್ 2ರವರೆಗೂ ಧರಣಿ ಕುಳಿತರು. 45 ದಿನ ನಡೆದಂತಹ ಈ ಧರಣಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಯ್ತು. ಜನ ಸಾಗರವನ್ನು ಹತ್ತಿಕ್ಕಲೋಸ್ಕರ ಪೊಲೀಸರು ರೈತರನ್ನು ಅರೆಸ್ಟು ಮಾಡಿ ಜೈಲಿಗೆ ತೆಗೆದುಕೊಂಡು ಹೋದರೆ, ಜೈಲೆ ಭರ್ತಿಯಾಗಿ ಅಲ್ಲಿ ಜಾಗವೇ ಇಲ್ಲ ಎಂಬಂತಾಯಿತು. ಕಡೆಗೆ ಪೊಲೀಸರು ಅವರನ್ನೆಲ್ಲಾ ಶಿವಮೊಗ್ಗದಿಂದ ದೂರ ಕರೆದುಕೊಂಡು ಹೋಗಿ ಬಿಟ್ಟು ಬರತೊಡಗಿದರು.

ಅಕ್ಟೋಬರ್ 2ರಂದು ಒಂದು ಬೃಹತ್ ಸಭೆ ಶಿವಮೊಗ್ಗದಲ್ಲಿ ನಡೆಯಿತು. ಆ ಸಭೆಗೆ ಲಂಕೇಶ್, ತೇಜಸ್ವಿಯವರೂ ಬಂದರು. ಐಬಿಯಲ್ಲಿದ್ದ ಜಾರ್ಜ್ ಫರ್ನಾಂಡಿಸ್ ತಾನು ಬಂದು ರೈತರನ್ನು ಕುರಿತು ಭಾಷಣ ಮಾಡುವುದಾಗಿ ಹೇಳಿ ಕಳುಹಿಸಿದರು. ಆಗ ಪ್ರೊಫೆಸರ್ ಅವರು ಹೇಳಿದ್ದು ಹೀಗೆ: ಫರ್ನಾಂಡಿಸ್ ಒಂದು ಪಾರ್ಟಿಯಲ್ಲಿರುವುದರಿಂದ ಇಲ್ಲಿ ಬಂದು ಭಾಷಣ ಮಾಡುವ ಅಗತ್ಯವಿಲ್ಲ ಎಂದು. ಅಂತು ಒಂದು ಐತಿಹಾಸಿಕ ಸಭೆ ಜರುಗಿತು. ನರಗುಂದ ನವಲುಗುಂದದ ಬಂಡಾಯದ ಫಲವಾಗಿ ಕರ್ನಾಟಕ ರೈತ ಸಂಘ ಉದಯವಾಯ್ತು. ರೈತನಾಯಕರು ಇಡೀ ನಾಡನ್ನು ತಿರುಗಿ, ರೈತರನ್ನ ಸಂಘಟಿಸಿದರು. ಎಲ್ಲೆಲ್ಲಿ ಕಬ್ಬು ಬೆಳೆಗಾರರ ಸಂಘವಿತ್ತೋ ಅವರೆಲ್ಲಾ ರೈತ ಸಂಘದಲ್ಲಿ ಗುರುತಿಸಿಕೊಂಡರು. ಸರಕಾರದ ಬದಲಾವಣೆಯಲ್ಲಿ ಹಲವು ಜೀವಗಳನ್ನ ಕಳೆದುಕೊಂಡ ಏಕೈಕ ಸಂಘ ರೈತ ಸಂಘವಾಗಿತ್ತು.

ಇವತ್ತೇನು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಕೂಗಿಗೆ ಕಿವುಡಾಗಿ ಹಠ ಸಾಧಿಸಿತೋ ಅದೇ ರೀತಿ ಅಂದಿನ ಕಾಂಗ್ರೆಸ್ ರಾಜ್ಯ ಸರಕಾರ ರೈತರನ್ನು ತಮ್ಮ ವೈರಿಗಳೆಂದು ಭಾವಿಸಿ ನಡೆದುಕೊಂಡಿತ್ತು. ರೈತರ ಮೇಲೆ ಮುಲಾಜಿಲ್ಲದೆ ಗೋಲಿಬಾರು ಮಾಡಿದರು. ಇದರ ಫಲವಾಗಿ ಆಳವಾಗಿ ಬೇರೂರಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿತು. ಮುಂದೆ ನಡೆದ ರೈತ ಸಂಘದ ಸಾಧನೆಗಳು ಮೆಲುಕು ಹಾಕಿ ಮರುಗುವಂತಹವು!

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...