Homeಮುಖಪುಟ"ನನ್ನ ವಿರುದ್ಧದ ಪ್ರಕರಣಗಳು ಒಂದೊಂದು ಸಹ ನನ್ನ ಎದೆಯ ಮೇಲಿನ ಪದಕಗಳಂತೆ ": ರಾಹುಲ್ ಗಾಂಧಿ  

“ನನ್ನ ವಿರುದ್ಧದ ಪ್ರಕರಣಗಳು ಒಂದೊಂದು ಸಹ ನನ್ನ ಎದೆಯ ಮೇಲಿನ ಪದಕಗಳಂತೆ “: ರಾಹುಲ್ ಗಾಂಧಿ  

- Advertisement -
- Advertisement -

“ನನ್ನ ವಿರುದ್ಧ 15 ರಿಂದ 16 ಪ್ರಕರಣಗಳಿವೆ. ನೀವು ಸೈನಿಕನನ್ನು ನೋಡಿದಾಗ ಅವನ ಎದೆಯ ಮೇಲೆ ಸಾಕಷ್ಟು ಪದಕಗಳು ಇರುತ್ತವೆ. ಹಾಗೆಯೇ ಪ್ರತಿಯೊಂದು ಪ್ರಕರಣವೂ ನನಗೆ ಪದಕವಾಗಿದೆ” ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ವಯನಾಡಿನ ವನ್ಯಾಂಬಲಂನಲ್ಲಿ ನಡೆದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮ ವಿರುದ್ಧ ಬಿಜೆಪಿಯಿಂದ ದೇಶಾದ್ಯಂತ ಪ್ರಕರಣಗಳು ದಾಖಲಾಗಿವೆ. ಅವು ನನ್ನನ್ನು ತಲ್ಲಣಗೊಳಿಸುವುದಿಲ್ಲ ಮತ್ತು ಅವುಗಳನ್ನು “ಪದಕ” ಎಂದು ಪರಿಗಣಿಸಿದ್ದೇನೆ ಎಂದಿದ್ದಾರೆ.

“ಅವರಿಗಿಂತ ನಾನು ಹೆಚ್ಚು ಸಂತೋಷದಿಂದಿದ್ದೀನಿ” ಮತ್ತು ಅವರನ್ನು ಸೈದ್ಧಾಂತಿಕವಾಗಿ ಎದುರಿಸುತ್ತೇನೆ. ನಾನು ದ್ವೇಷದ ಭಾರತವನ್ನು ನಂಬುವುದಿಲ್ಲ. ಬಿಜೆಪಿ ಎಷ್ಟು ಬಾರಿ ಮನವರಿಕೆ ಮಾಡಲು ಪ್ರಯತ್ನ ಪಟ್ಟರೂ ಸಹ ನಾನು ಅದನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.

ಮಹಿಳೆಯರನ್ನು, ಎಲ್ಲಾ ಧರ್ಮದ ಜನರಿಗೆ, ಎಲ್ಲಾ ಸಮುದಾಯಗಳನ್ನು ಮತ್ತು ವಿಭಿನ್ನ ಸಿದ್ಧಾಂತವುಳ್ಳವರನ್ನು ಗೌರವಿಸುವುದೇ ಭಾರತದ ಶಕ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.

“ಅವರು ನನ್ನ ವಿರುದ್ಧ ಮೊಕದ್ದಮೆ ಹೂಡಿದಾಗಲೆಲ್ಲಾ ನಾನು ಪ್ರೀತಿಯ ಬಗ್ಗೆ ಮಾತನಾಡುತ್ತೇನೆ.. ಮತ್ತು ನನ್ನೊಂದಿಗೆ ನಿಂತಿರುವ ನಿಮ್ಮನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಅವರು ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದಾರೆ.

ಆದ್ದರಿಂದ ಅವರು ನನ್ನ ವಿರುದ್ಧ ಮೊಕದ್ದಮೆ ಹೂಡಿದಾಗಲೆಲ್ಲಾ, ಅವರು ನನ್ನ ಎದೆಯ ಮೇಲೆ ಪದಕವನ್ನು ಹಾಕುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹವನ್ನು ಉಲ್ಲೇಖಿಸಿದ ಅವರು, ಅನೇಕ ಜನರು ತಮ್ಮ ಮನೆಗಳು, ಜೀವನ ಮತ್ತು ಎಲ್ಲವನ್ನೂ ಕಳೆದುಕೊಂಡರು, ಆದರೆ ಅಂತಹ ದುರಂತದಲ್ಲಿ ಹಲವಾರು ಜನರ ಸಕಾರಾತ್ಮಕ ಮಾನವೀಯ ಗುಣಗಳು ಬೆಳಕಿಗೆ ಬಂದವು ಎಂದು ಸಹಾಯ ಮಾಡಿದವರನ್ನು ನೆನೆದಿದ್ದಾರೆ.

ಪ್ರವಾಹ ಪೀಡಿತ ಜನರನ್ನು ತಲುಪಲು ಇನ್ನೂ ಸಾಕಷ್ಟು ಮರು ನಿರ್ಮಾಣ ಮತ್ತು ಬೆಂಬಲದ ಅಗತ್ಯವಿದೆ ಎಂದ ಅವರು ಪರಿಹಾರ ಮತ್ತು ಪುನರ್ವಸತಿ ವಿಷಯದ ಕುರಿತು ರಾಜ್ಯ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...