Homeಅಂಕಣಗಳುಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

ಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -4

ಪೂಣಚ್ಚನವರಿಗೆ ತಮ್ಮ ಮಕ್ಕಳು ಯಾರಾದರೂ ಸಕಲೇಶಪುರದ ತೋಟದಲ್ಲಿ ನೆಲೆಸಲಿ ಎಂದು ಆಸೆಯಿತ್ತು. ಗಂಡು ಮಕ್ಕಳು ಹೇಗೂ ಕೊಡಗಿನಲ್ಲಿಯೇ ನೆಲೆ ನಿಂತರು. ಹಿರಿಯ ಮಗಳು ವಿಜಯಾ ಮತ್ತು ಅಳಿಯ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ ಅವರಿಗೆ ಕೊಡಗಿನಲ್ಲಿ ಪಿತ್ರಾರ್ಜಿತ ತೋಟವಿತ್ತು. ಆದ್ದರಿಂದ ಕಿರಿಯ ಮಗಳು ಕಾವೇರಿ ನಂಬೀಶನ್ ಇಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಪ್ರಯತ್ನಿಸಿ, ಅವರು ಮೊದಲು ಯೋಚಿಸಿದಂತೆ ಸ್ಥಳ ದೊರೆಯದೆ ಅವರೂ ಕೊಡಗಿನಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದ್ದರಿಂದ ಪೂಣಚ್ಚನವರು ಇಲ್ಲಿ ತೋಟವನ್ನು ಇಟ್ಟುಕೊಂಡು ಮಾಡುವುದೇನು ಎಂಬ ತೀರ್ಮಾನಕ್ಕೆ ಬಂದರು. ಆ ವೇಳೆಯಲ್ಲಿ ರವೀಂದ್ರನಾಥರು ಕೂಡಾ ಗಣಪಯ್ಯನವರ ಕಾಲದಿಂದ ಹಾರ್ಲೆ ಮ್ಯಾನೇಜ್ ಮೆಂಟಿನಲ್ಲಿದ್ದ ಕೆಲವು ತೋಟಗಳನ್ನು ಬಿಟ್ಟುಕೊಟ್ಟಿದ್ದರು.

ಪೂರ್ಣಿಮಾ ಎಸ್ಟೇಟ್

ಈ ಎಲ್ಲ ಕಾರಣಗಳಿಂದ ಪೂಣಚ್ಚನವರೂ ತಮ್ಮ ಪೂರ್ಣಿಮಾ ಎಸ್ಟೇಟನ್ನು ಮಾರಾಟ ಮಾಡಲು  ನಿರ್ಧರಿಸಿದರು. 1989ರಲ್ಲಿ ಪೂರ್ಣಿಮಾ ಎಸ್ಟೇಟ್ ಪಕ್ಕದಲ್ಲಿಯೇ ಇದ್ದ ರಕ್ಷಿದಿಯ ಜಾನ್ ಲೋಬೋರವರ ಕುಟುಂಬವರ್ಗದವರಿಗೆ ಮಾರಾಟ ಮಾಡಿದರು. ಈಗ ಆ ತೋಟ ಅವರಲ್ಲಿಯೇ ಇದೆ.

ತೋಟ ಮಾರುವ ನಿರ್ಧಾರವೇನು ಪೂಣಚ್ಚನವರಿಗೆ ಸಂತಸದ ವಿಚಾರವಾಗಿರಲಿಲ್ಲ. ಅವರಿಗೆ ಗಣಪಯ್ಯನವರ ಸ್ನೇಹದಿಂದಾಗಿ ಸಕಲೇಶಪುರವೂ ತಮ್ಮ ಕೊಡಗಿನಷ್ಟೇ ಪ್ರಿಯವಾದ ಸ್ಥಳವಾಗಿತ್ತು. ತೋಟ ಮಾರಾಟವಾಗಿ ಹಸ್ತಾಂತರಿಸುವ ದಿನ ತೋಟದ ಎಲ್ಲ ಕಾರ್ಮಿಕರಿಗೂ ಒಂದಷ್ಟು ಕೊಡುಗೆ ಮತ್ತು ನೆನಪಿನ ಕಾಣಿಕೆಗಳನ್ನು ಕೊಟ್ಟರು. ಮತ್ತು ಕಾನೂನಾತ್ಮಕವಾಗಿ ಅವರು ಕೊಡಬೇಕಿದ್ದ ಎಲ್ಲ ಹಣವನ್ನೂ ಕೆಲಸಗಾರರಿಗೆ ನೀಡಿದರು. ಕೊನೆಯಲ್ಲಿ ನಿಮ್ಮೆಲ್ಲರಿಗೆ ನಾನು ಕೃತಜ್ಞ ಎಂದು ಹೇಳಿ ದುಖಃ ತಡೆಯಲಾಗದೆ ಕಣ್ಣೀರುಗರೆದರು. ಅಷ್ಟು ವರ್ಷಗಳ ಕಾಲ ಒಂದು ಕುಟುಂಬದಂತೆ ಬದುಕಿದ ಎಲ್ಲ ಕೆಲಸಗಾರರಿಗೂ ಇದು ಬಹಳ ನೋವಿನ ದಿನವಾಗಿತ್ತು.

ಪೂರ್ಣಿಮಾ ಎಸ್ಟೇಟ್ ಮಾರಾಟಮಾಡಿದ ಹಣದಲ್ಲಿ ಪೂಣಚ್ಚನವರು ಸಕಲೇಶಪುರದ ರೋಟರಿ ಶಾಲೆಗೆ ಐದು ಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡಿದರು. ಆ ಹಣವನ್ನು ಬಳಸಿಕೊಂಡು ಕಟ್ಟಿದ ಕಟ್ಟಡವನ್ನು ಸಿ.ಎಂ.ಪೂಣಚ್ಚ ಬ್ಲಾಕ್ ಎಂದು ಕರೆಯಲಾಗಿದೆ.

ಪೂಣಚ್ಚ ಬ್ಲಾಕ್

ನಾನೂ ಸೇರಿದಂತೆ ಎಲ್ಲ ಕೆಲಸಗಾರರಿಗೆ ಮುಂದೇನು ಎಂಬ ಪ್ರಶ್ನೆಯಿತ್ತು. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಮನೆಯ ಎಲ್ಲ ಜವಾಬ್ದಾರಿ ನನ್ನ ಮೇಲಿತ್ತು. ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಸ್ವಲ್ಪ ದೂರದಲ್ಲೇ ಮನೆಯೊಂದನ್ನು ಕಟ್ಟಿಕೊಳ್ಳುತ್ತಿದ್ದೆ. ಅದನ್ನು ಅವಸರದಲ್ಲಿ ಒಂದಿಷ್ಟು ವಾಸಕ್ಕೆ ಆಗುವಷ್ಟು ವ್ಯವಸ್ಥೆ ಮಾಡಿಕೊಂಡೆ. ನಾನು ಇಷ್ಟಪಟ್ಟಿದ್ದರೆ ಪೂರ್ಣಿಮಾ ಎಸ್ಟೇಟಿನಲ್ಲಿಯೇ ಕೆಲಸದಲ್ಲಿ ಮುಂದುವರೆಯಬಹುದಿತ್ತು. ಹೊಸ ಮಾಲಿಕರು ಅದರ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ ನನಗೆ ಸ್ವತಂತ್ರವಾಗಿ ಬದುಕಲು ಇದೊಂದು ಅವಕಾಶ ಎಂದುಕೊಂಡು ನಾನು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.

ಕಾರ್ಮಿಕರಲ್ಲಿ ಹಲವರಿಗೆ ಈ ಹಿಂದೆಯೇ ನಾವು ಅಲ್ಲಲ್ಲಿ ಸ್ವಂತ ಮನೆ ಮಾಡಿಸಿಕೊಟ್ಟಿದ್ದೆವು. ಅವರು ಅಲ್ಲಿ ವಾಸಕ್ಕೆ ಹೋಗಿ ಅವರ ಇಷ್ಟಬಂದಲ್ಲಿಗೆ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಆ ರೀತಿ ಸ್ವಂತ ಮನೆ ಇಲ್ಲದವರೂ ಕೆಲವರಿದ್ದರು. ಅವರು ಏನು ಮಾಡುವುದೆಂದು ಇಕ್ಕಟ್ಟಿನಲ್ಲಿದ್ದರು.

ನಾನು ಬೇರೆ ಹಲವು ಯೋಜನೆಗಳಲ್ಲಿ ಇದ್ದೆ. ಹಾಸನದಲ್ಲಿ ಹೊಸ ಪತ್ರಿಕೆಯೊಂದು ಪ್ರಾರಂಭವಾಗುವುದರಲ್ಲಿತ್ತು. ನನಗೆ ಅಲ್ಲಿ ಕೆಲಸಮಾಡಲು ಆಹ್ವಾನವಿತ್ತು. ಆದರೆ ಅದು ಕೂಡಾ ನಿಗದಿತ ಸಮಯಕ್ಕೆ ಪ್ರಾರಂಭವಾಗದೆ ಮುಂದೆ ಹೋಗುತ್ತ ಇತ್ತು. ಹೆಚ್ಚು ಸಮಯ ಕೆಲಸವಿಲ್ಲದೆ ಕೂರಲು ನನಗೆ ಮನೆಯ ಪರಿಸ್ಥಿತಿ ಕಷ್ಟವಿತ್ತು. ಅಷ್ಟರಲ್ಲಿ ಒಂದು ದಿನ ರವೀಂದ್ರನಾಥರು “ದೇವಾಲಕೆರೆಯಲ್ಲಿನ ಆಶೀರ್ವಾದ್ ಎಸ್ಟೇಟ್ ಅನ್ನು ನೋಡಿಕೊ, ಅಲ್ಲಿ ಸರಿಯಾಗಿ ಯಾವುದೂ ನಡೆಯುತ್ತ ಇಲ್ಲ, ಅಲ್ಲಿ ಹಲವು ತೊಂದರೆಗಳವೆ, ನಿನಗೆ ಅದು ಹೇಗೂ ಸಾಕಷ್ಟು ಗೆಳೆಯರಿರುವ ಊರು” ಎಂದರು.

ಸಕಲೇಶಪುರ ರೋಟರಿ ಶಾಲೆ 98 ರಲ್ಲಿ

ನಾನು ಸದ್ಯಕ್ಕೆ ಒಂದು ಉದ್ಯೋಗವಾಯಿತೆಂದು ಒಪ್ಪಿಕೊಂಡೆ. ನಮ್ಮ ಪುಟ್ಟ ಮನೆಗೆ ವಾಸಕ್ಕೆ ಬಂದೆವು. ಇಲ್ಲಿ ವಿದ್ಯುತ್, ನೀರು ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ. ಅಂತೂ ಇರಲೊಂದು ಸೂರಿತ್ತು. ಫರ್ಲಾಂಗ್ ದೂರದಲ್ಲೊಂದು ಬೋರ್ ವೆಲ್ ಇತ್ತು.

ನಾನು ದೇವಾಲಕೆರೆ ತೋಟದ ಉಸ್ತುವಾರಿ ವಹಿಸಿಕೊಂಡದ್ದು ತಿಳಿದ ಕೂಡಲೇ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಮಾಡುತ್ತಿದ್ದ ಸ್ವಂತ ಮನೆಯಿಲ್ಲದ ಹಲವರು ತಾವೂ ದೇವಾಲಕೆರೆಗೆ ಬರುತ್ತೇವೆಂದು ಅಲ್ಲಿಗೆ ಬಂದರು. ಇದರಿಂದಾಗಿ ನನಗೆ ಅಲ್ಲಿ ಕೂಡಾ ಒಂದು ಒಳ್ಳೆಯ ಕೆಲಸಗಾರರ ತಂಡವನ್ನು ಕಟ್ಟಲು ಸಾಧ್ಯವಾಯಿತು.

ಅಲ್ಲಿ ಜಮೀನಿನ ದಾಖಲೆಗಳನ್ನು ಸರಿಪಡಿಸುವುದರಿಂದ ಹಿಡಿದು, ಕಳ್ಳತನ ಇತ್ಯಾದಿ ಹಲವಾರು ನಾನಾ ರೀತಿಯ ಸಮಸ್ಯೆಗಳಿದ್ದವು. ಎಲ್ಲವನ್ನೂ ಒಂದೊಂದಾಗಿ ಬಗೆಹರಿಸಿಕೊಳ್ಳುತ್ತ ತೋಟವನ್ನು ಅಭಿವೃದ್ಧಿ ಮಾಡಬೇಕಿತ್ತು. ಮುಂದಿನ ಆರು ವರ್ಷಗಳಲ್ಲಿ ಅದು ಒಂದು ಅತ್ಯುತ್ತಮ ತೋಟವಾಯಿತು. ಇದಕ್ಕೆ ನನ್ನೊಂದಿಗಿದ್ದ ಮೇಸ್ತ್ರಿ, ಕೆಲಸಗಾರರು ಮತ್ತು ಅಲ್ಲಿ ಸುತ್ತ ಇದ್ದಂತಹ ನನ್ನ ಶಾಲಾ ಸಹಪಾಠಿ ಗೆಳೆಯರ ಬೆಂಬಲ ಕಾರಣವಾಯಿತು. ಇದೆಲ್ಲದರ ಜೊತೆಯಲ್ಲಿ ಗಣಪಯ್ಯನವರ ಕಾಲದಲ್ಲಿ ಜನತಾ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಡಿ.ಎಸ್. ಲೋಕೇಶ ಗೌಡರ ಸಹಕಾರ ಮುಖ್ಯವಾಗಿತ್ತು. ರಾಜಕಾರಣದಲ್ಲಿ ಸೋತಿದ್ದರೂ ಲೋಕೇಶಗೌಡರು ಸಾಮಾಜಿಕ ಕಳಕಳಿಯನ್ನು ಕಳೆದುಕೊಂಡಿರಲಿಲ್ಲ. ಅನುಭವದ ಜೊತೆಯಲ್ಲಿ ಸಾಹಿತ್ಯ, ರಾಜಕಾರಣ ಎಂದು ತುಂಬ ಓದಿಕೊಂಡಿದ್ದ ಅವರು ಹಲವಾರು ಯುವಕರಿಗೆ ಮಾರ್ಗದರ್ಶಕರಾಗಿದ್ದರು. ದೇವಾಲಕೆರೆಯ ಬಸ್ ಸ್ಟಾಪಿನ ಪಕ್ಕದ ಭಟ್ಟರ ಹೋಟೆಲ್ ಅಡ್ಡಾದಲ್ಲಿ ನಾವು ಪದೇ ಪದೇ ಭೇಟಿಯಾಗುತ್ತಿದ್ದೆವು. ಪ್ರತಿ ಬಾರಿಯೂ ಅವರಲ್ಲಿ ಹೊಸತೊಂದು ವಿಷಯವಿರುತ್ತಿತ್ತು.

ನಮ್ಮ ಮನೆಯಿಂದ ದೇವಾಲಕೆರೆಯ ತೋಟಕ್ಕೆ ಸುಮಾರು ಇಪ್ಪತ್ತೈದು ಕಿ.ಮಿ.ದೂರವಿತ್ತು. ಅಲ್ಲದೆ ನಾಲ್ಕು ಕಿ.ಮಿ. ಕಚ್ಚಾ ರಸ್ತೆಯಲ್ಲಿ ಕಡಿದಾದ ಗುಡ್ಡ ಹತ್ತಿ ಇಳಿದು ಸಾಗಬೇಕಿತ್ತು. ಆದ್ದರಿಂದ ಪ್ರತಿದಿನ ಸೈಕಲಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಪಡೆದು ಬೈಕೊಂದನ್ನು ಕೊಂಡುಕೊಂಡೆ.

ಸೈಕಲ್ಲಿನಲ್ಲಿ ಕುಳಿತು ಹೆಲಿಕಾಪ್ಟರ್ ಸವಾರಿ ಮಾಡುತ್ತಿದ್ದ ನನಗೀಗ ಸೂಪರ್ ಸಾನಿಕ್ ಜೆಟ್ ಸಿಕ್ಕಿದಂತಾಗಿತ್ತು. ಪೂರ್ಣಿಮಾ ಎಸ್ಟೇಟಿನ ಮಾರಾಟದಿಂದಾಗಿ ನಮ್ಮ ನಾಟಕ ತಂಡ ಹರಿದು ಹಂಚಿಹೋಗಿತ್ತು. ಅದನ್ನು ಮತ್ತೆ ಕಟ್ಟಬೇಕಿತ್ತು. ಜೊತೆಯಲ್ಲಿ ತೋಟದ ಕೆಲಸ, ಇತರ ಸಂಘಟನಾತ್ಮಕ ಕಾರ್ಯಗಳು, ಸ್ಥಳೀಯ ರಾಜಕಾರಣ, ಹೋರಾಟಗಳು, ಸಾಕ್ಷರತಾ ಆಂದೋಲನ, ಇತರ ಸುತ್ತಾಟಗಳು ಎಲ್ಲದಕ್ಕೂ ಅನುಕೂಲವಾಯಿತು.

ಪೂರ್ಣಿಮಾ ಎಸ್ಟೇಟ್ ಮಾರಾಟವಾಗಿ ಒಂದು ವರ್ಷವಾಗುವಷ್ಟರಲ್ಲೇ ಅಂದರೆ 1990ರಲ್ಲಿ ಪೂಣಚ್ಚನವರು ತೀರಿಕೊಂಡರು. ಅಲ್ಲಿಗೆ ಕೊಡಗು ಸಕಲೇಶಪುರಗಳ ಕಾಫಿ ವಲಯದ ಇನ್ನೊಂದು ಸಾಂಸ್ಕೃತಿಕ ಕೊಂಡಿಯೂ ಕಳಚಿದಂತಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...