Homeಅಂಕಣಗಳುಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

ಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -4

ಪೂಣಚ್ಚನವರಿಗೆ ತಮ್ಮ ಮಕ್ಕಳು ಯಾರಾದರೂ ಸಕಲೇಶಪುರದ ತೋಟದಲ್ಲಿ ನೆಲೆಸಲಿ ಎಂದು ಆಸೆಯಿತ್ತು. ಗಂಡು ಮಕ್ಕಳು ಹೇಗೂ ಕೊಡಗಿನಲ್ಲಿಯೇ ನೆಲೆ ನಿಂತರು. ಹಿರಿಯ ಮಗಳು ವಿಜಯಾ ಮತ್ತು ಅಳಿಯ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ ಅವರಿಗೆ ಕೊಡಗಿನಲ್ಲಿ ಪಿತ್ರಾರ್ಜಿತ ತೋಟವಿತ್ತು. ಆದ್ದರಿಂದ ಕಿರಿಯ ಮಗಳು ಕಾವೇರಿ ನಂಬೀಶನ್ ಇಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಪ್ರಯತ್ನಿಸಿ, ಅವರು ಮೊದಲು ಯೋಚಿಸಿದಂತೆ ಸ್ಥಳ ದೊರೆಯದೆ ಅವರೂ ಕೊಡಗಿನಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದ್ದರಿಂದ ಪೂಣಚ್ಚನವರು ಇಲ್ಲಿ ತೋಟವನ್ನು ಇಟ್ಟುಕೊಂಡು ಮಾಡುವುದೇನು ಎಂಬ ತೀರ್ಮಾನಕ್ಕೆ ಬಂದರು. ಆ ವೇಳೆಯಲ್ಲಿ ರವೀಂದ್ರನಾಥರು ಕೂಡಾ ಗಣಪಯ್ಯನವರ ಕಾಲದಿಂದ ಹಾರ್ಲೆ ಮ್ಯಾನೇಜ್ ಮೆಂಟಿನಲ್ಲಿದ್ದ ಕೆಲವು ತೋಟಗಳನ್ನು ಬಿಟ್ಟುಕೊಟ್ಟಿದ್ದರು.

ಪೂರ್ಣಿಮಾ ಎಸ್ಟೇಟ್

ಈ ಎಲ್ಲ ಕಾರಣಗಳಿಂದ ಪೂಣಚ್ಚನವರೂ ತಮ್ಮ ಪೂರ್ಣಿಮಾ ಎಸ್ಟೇಟನ್ನು ಮಾರಾಟ ಮಾಡಲು  ನಿರ್ಧರಿಸಿದರು. 1989ರಲ್ಲಿ ಪೂರ್ಣಿಮಾ ಎಸ್ಟೇಟ್ ಪಕ್ಕದಲ್ಲಿಯೇ ಇದ್ದ ರಕ್ಷಿದಿಯ ಜಾನ್ ಲೋಬೋರವರ ಕುಟುಂಬವರ್ಗದವರಿಗೆ ಮಾರಾಟ ಮಾಡಿದರು. ಈಗ ಆ ತೋಟ ಅವರಲ್ಲಿಯೇ ಇದೆ.

ತೋಟ ಮಾರುವ ನಿರ್ಧಾರವೇನು ಪೂಣಚ್ಚನವರಿಗೆ ಸಂತಸದ ವಿಚಾರವಾಗಿರಲಿಲ್ಲ. ಅವರಿಗೆ ಗಣಪಯ್ಯನವರ ಸ್ನೇಹದಿಂದಾಗಿ ಸಕಲೇಶಪುರವೂ ತಮ್ಮ ಕೊಡಗಿನಷ್ಟೇ ಪ್ರಿಯವಾದ ಸ್ಥಳವಾಗಿತ್ತು. ತೋಟ ಮಾರಾಟವಾಗಿ ಹಸ್ತಾಂತರಿಸುವ ದಿನ ತೋಟದ ಎಲ್ಲ ಕಾರ್ಮಿಕರಿಗೂ ಒಂದಷ್ಟು ಕೊಡುಗೆ ಮತ್ತು ನೆನಪಿನ ಕಾಣಿಕೆಗಳನ್ನು ಕೊಟ್ಟರು. ಮತ್ತು ಕಾನೂನಾತ್ಮಕವಾಗಿ ಅವರು ಕೊಡಬೇಕಿದ್ದ ಎಲ್ಲ ಹಣವನ್ನೂ ಕೆಲಸಗಾರರಿಗೆ ನೀಡಿದರು. ಕೊನೆಯಲ್ಲಿ ನಿಮ್ಮೆಲ್ಲರಿಗೆ ನಾನು ಕೃತಜ್ಞ ಎಂದು ಹೇಳಿ ದುಖಃ ತಡೆಯಲಾಗದೆ ಕಣ್ಣೀರುಗರೆದರು. ಅಷ್ಟು ವರ್ಷಗಳ ಕಾಲ ಒಂದು ಕುಟುಂಬದಂತೆ ಬದುಕಿದ ಎಲ್ಲ ಕೆಲಸಗಾರರಿಗೂ ಇದು ಬಹಳ ನೋವಿನ ದಿನವಾಗಿತ್ತು.

ಪೂರ್ಣಿಮಾ ಎಸ್ಟೇಟ್ ಮಾರಾಟಮಾಡಿದ ಹಣದಲ್ಲಿ ಪೂಣಚ್ಚನವರು ಸಕಲೇಶಪುರದ ರೋಟರಿ ಶಾಲೆಗೆ ಐದು ಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡಿದರು. ಆ ಹಣವನ್ನು ಬಳಸಿಕೊಂಡು ಕಟ್ಟಿದ ಕಟ್ಟಡವನ್ನು ಸಿ.ಎಂ.ಪೂಣಚ್ಚ ಬ್ಲಾಕ್ ಎಂದು ಕರೆಯಲಾಗಿದೆ.

ಪೂಣಚ್ಚ ಬ್ಲಾಕ್

ನಾನೂ ಸೇರಿದಂತೆ ಎಲ್ಲ ಕೆಲಸಗಾರರಿಗೆ ಮುಂದೇನು ಎಂಬ ಪ್ರಶ್ನೆಯಿತ್ತು. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಮನೆಯ ಎಲ್ಲ ಜವಾಬ್ದಾರಿ ನನ್ನ ಮೇಲಿತ್ತು. ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಸ್ವಲ್ಪ ದೂರದಲ್ಲೇ ಮನೆಯೊಂದನ್ನು ಕಟ್ಟಿಕೊಳ್ಳುತ್ತಿದ್ದೆ. ಅದನ್ನು ಅವಸರದಲ್ಲಿ ಒಂದಿಷ್ಟು ವಾಸಕ್ಕೆ ಆಗುವಷ್ಟು ವ್ಯವಸ್ಥೆ ಮಾಡಿಕೊಂಡೆ. ನಾನು ಇಷ್ಟಪಟ್ಟಿದ್ದರೆ ಪೂರ್ಣಿಮಾ ಎಸ್ಟೇಟಿನಲ್ಲಿಯೇ ಕೆಲಸದಲ್ಲಿ ಮುಂದುವರೆಯಬಹುದಿತ್ತು. ಹೊಸ ಮಾಲಿಕರು ಅದರ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ ನನಗೆ ಸ್ವತಂತ್ರವಾಗಿ ಬದುಕಲು ಇದೊಂದು ಅವಕಾಶ ಎಂದುಕೊಂಡು ನಾನು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.

ಕಾರ್ಮಿಕರಲ್ಲಿ ಹಲವರಿಗೆ ಈ ಹಿಂದೆಯೇ ನಾವು ಅಲ್ಲಲ್ಲಿ ಸ್ವಂತ ಮನೆ ಮಾಡಿಸಿಕೊಟ್ಟಿದ್ದೆವು. ಅವರು ಅಲ್ಲಿ ವಾಸಕ್ಕೆ ಹೋಗಿ ಅವರ ಇಷ್ಟಬಂದಲ್ಲಿಗೆ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಆ ರೀತಿ ಸ್ವಂತ ಮನೆ ಇಲ್ಲದವರೂ ಕೆಲವರಿದ್ದರು. ಅವರು ಏನು ಮಾಡುವುದೆಂದು ಇಕ್ಕಟ್ಟಿನಲ್ಲಿದ್ದರು.

ನಾನು ಬೇರೆ ಹಲವು ಯೋಜನೆಗಳಲ್ಲಿ ಇದ್ದೆ. ಹಾಸನದಲ್ಲಿ ಹೊಸ ಪತ್ರಿಕೆಯೊಂದು ಪ್ರಾರಂಭವಾಗುವುದರಲ್ಲಿತ್ತು. ನನಗೆ ಅಲ್ಲಿ ಕೆಲಸಮಾಡಲು ಆಹ್ವಾನವಿತ್ತು. ಆದರೆ ಅದು ಕೂಡಾ ನಿಗದಿತ ಸಮಯಕ್ಕೆ ಪ್ರಾರಂಭವಾಗದೆ ಮುಂದೆ ಹೋಗುತ್ತ ಇತ್ತು. ಹೆಚ್ಚು ಸಮಯ ಕೆಲಸವಿಲ್ಲದೆ ಕೂರಲು ನನಗೆ ಮನೆಯ ಪರಿಸ್ಥಿತಿ ಕಷ್ಟವಿತ್ತು. ಅಷ್ಟರಲ್ಲಿ ಒಂದು ದಿನ ರವೀಂದ್ರನಾಥರು “ದೇವಾಲಕೆರೆಯಲ್ಲಿನ ಆಶೀರ್ವಾದ್ ಎಸ್ಟೇಟ್ ಅನ್ನು ನೋಡಿಕೊ, ಅಲ್ಲಿ ಸರಿಯಾಗಿ ಯಾವುದೂ ನಡೆಯುತ್ತ ಇಲ್ಲ, ಅಲ್ಲಿ ಹಲವು ತೊಂದರೆಗಳವೆ, ನಿನಗೆ ಅದು ಹೇಗೂ ಸಾಕಷ್ಟು ಗೆಳೆಯರಿರುವ ಊರು” ಎಂದರು.

ಸಕಲೇಶಪುರ ರೋಟರಿ ಶಾಲೆ 98 ರಲ್ಲಿ

ನಾನು ಸದ್ಯಕ್ಕೆ ಒಂದು ಉದ್ಯೋಗವಾಯಿತೆಂದು ಒಪ್ಪಿಕೊಂಡೆ. ನಮ್ಮ ಪುಟ್ಟ ಮನೆಗೆ ವಾಸಕ್ಕೆ ಬಂದೆವು. ಇಲ್ಲಿ ವಿದ್ಯುತ್, ನೀರು ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ. ಅಂತೂ ಇರಲೊಂದು ಸೂರಿತ್ತು. ಫರ್ಲಾಂಗ್ ದೂರದಲ್ಲೊಂದು ಬೋರ್ ವೆಲ್ ಇತ್ತು.

ನಾನು ದೇವಾಲಕೆರೆ ತೋಟದ ಉಸ್ತುವಾರಿ ವಹಿಸಿಕೊಂಡದ್ದು ತಿಳಿದ ಕೂಡಲೇ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಮಾಡುತ್ತಿದ್ದ ಸ್ವಂತ ಮನೆಯಿಲ್ಲದ ಹಲವರು ತಾವೂ ದೇವಾಲಕೆರೆಗೆ ಬರುತ್ತೇವೆಂದು ಅಲ್ಲಿಗೆ ಬಂದರು. ಇದರಿಂದಾಗಿ ನನಗೆ ಅಲ್ಲಿ ಕೂಡಾ ಒಂದು ಒಳ್ಳೆಯ ಕೆಲಸಗಾರರ ತಂಡವನ್ನು ಕಟ್ಟಲು ಸಾಧ್ಯವಾಯಿತು.

ಅಲ್ಲಿ ಜಮೀನಿನ ದಾಖಲೆಗಳನ್ನು ಸರಿಪಡಿಸುವುದರಿಂದ ಹಿಡಿದು, ಕಳ್ಳತನ ಇತ್ಯಾದಿ ಹಲವಾರು ನಾನಾ ರೀತಿಯ ಸಮಸ್ಯೆಗಳಿದ್ದವು. ಎಲ್ಲವನ್ನೂ ಒಂದೊಂದಾಗಿ ಬಗೆಹರಿಸಿಕೊಳ್ಳುತ್ತ ತೋಟವನ್ನು ಅಭಿವೃದ್ಧಿ ಮಾಡಬೇಕಿತ್ತು. ಮುಂದಿನ ಆರು ವರ್ಷಗಳಲ್ಲಿ ಅದು ಒಂದು ಅತ್ಯುತ್ತಮ ತೋಟವಾಯಿತು. ಇದಕ್ಕೆ ನನ್ನೊಂದಿಗಿದ್ದ ಮೇಸ್ತ್ರಿ, ಕೆಲಸಗಾರರು ಮತ್ತು ಅಲ್ಲಿ ಸುತ್ತ ಇದ್ದಂತಹ ನನ್ನ ಶಾಲಾ ಸಹಪಾಠಿ ಗೆಳೆಯರ ಬೆಂಬಲ ಕಾರಣವಾಯಿತು. ಇದೆಲ್ಲದರ ಜೊತೆಯಲ್ಲಿ ಗಣಪಯ್ಯನವರ ಕಾಲದಲ್ಲಿ ಜನತಾ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಡಿ.ಎಸ್. ಲೋಕೇಶ ಗೌಡರ ಸಹಕಾರ ಮುಖ್ಯವಾಗಿತ್ತು. ರಾಜಕಾರಣದಲ್ಲಿ ಸೋತಿದ್ದರೂ ಲೋಕೇಶಗೌಡರು ಸಾಮಾಜಿಕ ಕಳಕಳಿಯನ್ನು ಕಳೆದುಕೊಂಡಿರಲಿಲ್ಲ. ಅನುಭವದ ಜೊತೆಯಲ್ಲಿ ಸಾಹಿತ್ಯ, ರಾಜಕಾರಣ ಎಂದು ತುಂಬ ಓದಿಕೊಂಡಿದ್ದ ಅವರು ಹಲವಾರು ಯುವಕರಿಗೆ ಮಾರ್ಗದರ್ಶಕರಾಗಿದ್ದರು. ದೇವಾಲಕೆರೆಯ ಬಸ್ ಸ್ಟಾಪಿನ ಪಕ್ಕದ ಭಟ್ಟರ ಹೋಟೆಲ್ ಅಡ್ಡಾದಲ್ಲಿ ನಾವು ಪದೇ ಪದೇ ಭೇಟಿಯಾಗುತ್ತಿದ್ದೆವು. ಪ್ರತಿ ಬಾರಿಯೂ ಅವರಲ್ಲಿ ಹೊಸತೊಂದು ವಿಷಯವಿರುತ್ತಿತ್ತು.

ನಮ್ಮ ಮನೆಯಿಂದ ದೇವಾಲಕೆರೆಯ ತೋಟಕ್ಕೆ ಸುಮಾರು ಇಪ್ಪತ್ತೈದು ಕಿ.ಮಿ.ದೂರವಿತ್ತು. ಅಲ್ಲದೆ ನಾಲ್ಕು ಕಿ.ಮಿ. ಕಚ್ಚಾ ರಸ್ತೆಯಲ್ಲಿ ಕಡಿದಾದ ಗುಡ್ಡ ಹತ್ತಿ ಇಳಿದು ಸಾಗಬೇಕಿತ್ತು. ಆದ್ದರಿಂದ ಪ್ರತಿದಿನ ಸೈಕಲಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಪಡೆದು ಬೈಕೊಂದನ್ನು ಕೊಂಡುಕೊಂಡೆ.

ಸೈಕಲ್ಲಿನಲ್ಲಿ ಕುಳಿತು ಹೆಲಿಕಾಪ್ಟರ್ ಸವಾರಿ ಮಾಡುತ್ತಿದ್ದ ನನಗೀಗ ಸೂಪರ್ ಸಾನಿಕ್ ಜೆಟ್ ಸಿಕ್ಕಿದಂತಾಗಿತ್ತು. ಪೂರ್ಣಿಮಾ ಎಸ್ಟೇಟಿನ ಮಾರಾಟದಿಂದಾಗಿ ನಮ್ಮ ನಾಟಕ ತಂಡ ಹರಿದು ಹಂಚಿಹೋಗಿತ್ತು. ಅದನ್ನು ಮತ್ತೆ ಕಟ್ಟಬೇಕಿತ್ತು. ಜೊತೆಯಲ್ಲಿ ತೋಟದ ಕೆಲಸ, ಇತರ ಸಂಘಟನಾತ್ಮಕ ಕಾರ್ಯಗಳು, ಸ್ಥಳೀಯ ರಾಜಕಾರಣ, ಹೋರಾಟಗಳು, ಸಾಕ್ಷರತಾ ಆಂದೋಲನ, ಇತರ ಸುತ್ತಾಟಗಳು ಎಲ್ಲದಕ್ಕೂ ಅನುಕೂಲವಾಯಿತು.

ಪೂರ್ಣಿಮಾ ಎಸ್ಟೇಟ್ ಮಾರಾಟವಾಗಿ ಒಂದು ವರ್ಷವಾಗುವಷ್ಟರಲ್ಲೇ ಅಂದರೆ 1990ರಲ್ಲಿ ಪೂಣಚ್ಚನವರು ತೀರಿಕೊಂಡರು. ಅಲ್ಲಿಗೆ ಕೊಡಗು ಸಕಲೇಶಪುರಗಳ ಕಾಫಿ ವಲಯದ ಇನ್ನೊಂದು ಸಾಂಸ್ಕೃತಿಕ ಕೊಂಡಿಯೂ ಕಳಚಿದಂತಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...