Homeಅಂಕಣಗಳುಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

ಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -4

ಪೂಣಚ್ಚನವರಿಗೆ ತಮ್ಮ ಮಕ್ಕಳು ಯಾರಾದರೂ ಸಕಲೇಶಪುರದ ತೋಟದಲ್ಲಿ ನೆಲೆಸಲಿ ಎಂದು ಆಸೆಯಿತ್ತು. ಗಂಡು ಮಕ್ಕಳು ಹೇಗೂ ಕೊಡಗಿನಲ್ಲಿಯೇ ನೆಲೆ ನಿಂತರು. ಹಿರಿಯ ಮಗಳು ವಿಜಯಾ ಮತ್ತು ಅಳಿಯ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ ಅವರಿಗೆ ಕೊಡಗಿನಲ್ಲಿ ಪಿತ್ರಾರ್ಜಿತ ತೋಟವಿತ್ತು. ಆದ್ದರಿಂದ ಕಿರಿಯ ಮಗಳು ಕಾವೇರಿ ನಂಬೀಶನ್ ಇಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಪ್ರಯತ್ನಿಸಿ, ಅವರು ಮೊದಲು ಯೋಚಿಸಿದಂತೆ ಸ್ಥಳ ದೊರೆಯದೆ ಅವರೂ ಕೊಡಗಿನಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದ್ದರಿಂದ ಪೂಣಚ್ಚನವರು ಇಲ್ಲಿ ತೋಟವನ್ನು ಇಟ್ಟುಕೊಂಡು ಮಾಡುವುದೇನು ಎಂಬ ತೀರ್ಮಾನಕ್ಕೆ ಬಂದರು. ಆ ವೇಳೆಯಲ್ಲಿ ರವೀಂದ್ರನಾಥರು ಕೂಡಾ ಗಣಪಯ್ಯನವರ ಕಾಲದಿಂದ ಹಾರ್ಲೆ ಮ್ಯಾನೇಜ್ ಮೆಂಟಿನಲ್ಲಿದ್ದ ಕೆಲವು ತೋಟಗಳನ್ನು ಬಿಟ್ಟುಕೊಟ್ಟಿದ್ದರು.

ಪೂರ್ಣಿಮಾ ಎಸ್ಟೇಟ್

ಈ ಎಲ್ಲ ಕಾರಣಗಳಿಂದ ಪೂಣಚ್ಚನವರೂ ತಮ್ಮ ಪೂರ್ಣಿಮಾ ಎಸ್ಟೇಟನ್ನು ಮಾರಾಟ ಮಾಡಲು  ನಿರ್ಧರಿಸಿದರು. 1989ರಲ್ಲಿ ಪೂರ್ಣಿಮಾ ಎಸ್ಟೇಟ್ ಪಕ್ಕದಲ್ಲಿಯೇ ಇದ್ದ ರಕ್ಷಿದಿಯ ಜಾನ್ ಲೋಬೋರವರ ಕುಟುಂಬವರ್ಗದವರಿಗೆ ಮಾರಾಟ ಮಾಡಿದರು. ಈಗ ಆ ತೋಟ ಅವರಲ್ಲಿಯೇ ಇದೆ.

ತೋಟ ಮಾರುವ ನಿರ್ಧಾರವೇನು ಪೂಣಚ್ಚನವರಿಗೆ ಸಂತಸದ ವಿಚಾರವಾಗಿರಲಿಲ್ಲ. ಅವರಿಗೆ ಗಣಪಯ್ಯನವರ ಸ್ನೇಹದಿಂದಾಗಿ ಸಕಲೇಶಪುರವೂ ತಮ್ಮ ಕೊಡಗಿನಷ್ಟೇ ಪ್ರಿಯವಾದ ಸ್ಥಳವಾಗಿತ್ತು. ತೋಟ ಮಾರಾಟವಾಗಿ ಹಸ್ತಾಂತರಿಸುವ ದಿನ ತೋಟದ ಎಲ್ಲ ಕಾರ್ಮಿಕರಿಗೂ ಒಂದಷ್ಟು ಕೊಡುಗೆ ಮತ್ತು ನೆನಪಿನ ಕಾಣಿಕೆಗಳನ್ನು ಕೊಟ್ಟರು. ಮತ್ತು ಕಾನೂನಾತ್ಮಕವಾಗಿ ಅವರು ಕೊಡಬೇಕಿದ್ದ ಎಲ್ಲ ಹಣವನ್ನೂ ಕೆಲಸಗಾರರಿಗೆ ನೀಡಿದರು. ಕೊನೆಯಲ್ಲಿ ನಿಮ್ಮೆಲ್ಲರಿಗೆ ನಾನು ಕೃತಜ್ಞ ಎಂದು ಹೇಳಿ ದುಖಃ ತಡೆಯಲಾಗದೆ ಕಣ್ಣೀರುಗರೆದರು. ಅಷ್ಟು ವರ್ಷಗಳ ಕಾಲ ಒಂದು ಕುಟುಂಬದಂತೆ ಬದುಕಿದ ಎಲ್ಲ ಕೆಲಸಗಾರರಿಗೂ ಇದು ಬಹಳ ನೋವಿನ ದಿನವಾಗಿತ್ತು.

ಪೂರ್ಣಿಮಾ ಎಸ್ಟೇಟ್ ಮಾರಾಟಮಾಡಿದ ಹಣದಲ್ಲಿ ಪೂಣಚ್ಚನವರು ಸಕಲೇಶಪುರದ ರೋಟರಿ ಶಾಲೆಗೆ ಐದು ಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡಿದರು. ಆ ಹಣವನ್ನು ಬಳಸಿಕೊಂಡು ಕಟ್ಟಿದ ಕಟ್ಟಡವನ್ನು ಸಿ.ಎಂ.ಪೂಣಚ್ಚ ಬ್ಲಾಕ್ ಎಂದು ಕರೆಯಲಾಗಿದೆ.

ಪೂಣಚ್ಚ ಬ್ಲಾಕ್

ನಾನೂ ಸೇರಿದಂತೆ ಎಲ್ಲ ಕೆಲಸಗಾರರಿಗೆ ಮುಂದೇನು ಎಂಬ ಪ್ರಶ್ನೆಯಿತ್ತು. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಮನೆಯ ಎಲ್ಲ ಜವಾಬ್ದಾರಿ ನನ್ನ ಮೇಲಿತ್ತು. ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಸ್ವಲ್ಪ ದೂರದಲ್ಲೇ ಮನೆಯೊಂದನ್ನು ಕಟ್ಟಿಕೊಳ್ಳುತ್ತಿದ್ದೆ. ಅದನ್ನು ಅವಸರದಲ್ಲಿ ಒಂದಿಷ್ಟು ವಾಸಕ್ಕೆ ಆಗುವಷ್ಟು ವ್ಯವಸ್ಥೆ ಮಾಡಿಕೊಂಡೆ. ನಾನು ಇಷ್ಟಪಟ್ಟಿದ್ದರೆ ಪೂರ್ಣಿಮಾ ಎಸ್ಟೇಟಿನಲ್ಲಿಯೇ ಕೆಲಸದಲ್ಲಿ ಮುಂದುವರೆಯಬಹುದಿತ್ತು. ಹೊಸ ಮಾಲಿಕರು ಅದರ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ ನನಗೆ ಸ್ವತಂತ್ರವಾಗಿ ಬದುಕಲು ಇದೊಂದು ಅವಕಾಶ ಎಂದುಕೊಂಡು ನಾನು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.

ಕಾರ್ಮಿಕರಲ್ಲಿ ಹಲವರಿಗೆ ಈ ಹಿಂದೆಯೇ ನಾವು ಅಲ್ಲಲ್ಲಿ ಸ್ವಂತ ಮನೆ ಮಾಡಿಸಿಕೊಟ್ಟಿದ್ದೆವು. ಅವರು ಅಲ್ಲಿ ವಾಸಕ್ಕೆ ಹೋಗಿ ಅವರ ಇಷ್ಟಬಂದಲ್ಲಿಗೆ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಆ ರೀತಿ ಸ್ವಂತ ಮನೆ ಇಲ್ಲದವರೂ ಕೆಲವರಿದ್ದರು. ಅವರು ಏನು ಮಾಡುವುದೆಂದು ಇಕ್ಕಟ್ಟಿನಲ್ಲಿದ್ದರು.

ನಾನು ಬೇರೆ ಹಲವು ಯೋಜನೆಗಳಲ್ಲಿ ಇದ್ದೆ. ಹಾಸನದಲ್ಲಿ ಹೊಸ ಪತ್ರಿಕೆಯೊಂದು ಪ್ರಾರಂಭವಾಗುವುದರಲ್ಲಿತ್ತು. ನನಗೆ ಅಲ್ಲಿ ಕೆಲಸಮಾಡಲು ಆಹ್ವಾನವಿತ್ತು. ಆದರೆ ಅದು ಕೂಡಾ ನಿಗದಿತ ಸಮಯಕ್ಕೆ ಪ್ರಾರಂಭವಾಗದೆ ಮುಂದೆ ಹೋಗುತ್ತ ಇತ್ತು. ಹೆಚ್ಚು ಸಮಯ ಕೆಲಸವಿಲ್ಲದೆ ಕೂರಲು ನನಗೆ ಮನೆಯ ಪರಿಸ್ಥಿತಿ ಕಷ್ಟವಿತ್ತು. ಅಷ್ಟರಲ್ಲಿ ಒಂದು ದಿನ ರವೀಂದ್ರನಾಥರು “ದೇವಾಲಕೆರೆಯಲ್ಲಿನ ಆಶೀರ್ವಾದ್ ಎಸ್ಟೇಟ್ ಅನ್ನು ನೋಡಿಕೊ, ಅಲ್ಲಿ ಸರಿಯಾಗಿ ಯಾವುದೂ ನಡೆಯುತ್ತ ಇಲ್ಲ, ಅಲ್ಲಿ ಹಲವು ತೊಂದರೆಗಳವೆ, ನಿನಗೆ ಅದು ಹೇಗೂ ಸಾಕಷ್ಟು ಗೆಳೆಯರಿರುವ ಊರು” ಎಂದರು.

ಸಕಲೇಶಪುರ ರೋಟರಿ ಶಾಲೆ 98 ರಲ್ಲಿ

ನಾನು ಸದ್ಯಕ್ಕೆ ಒಂದು ಉದ್ಯೋಗವಾಯಿತೆಂದು ಒಪ್ಪಿಕೊಂಡೆ. ನಮ್ಮ ಪುಟ್ಟ ಮನೆಗೆ ವಾಸಕ್ಕೆ ಬಂದೆವು. ಇಲ್ಲಿ ವಿದ್ಯುತ್, ನೀರು ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ. ಅಂತೂ ಇರಲೊಂದು ಸೂರಿತ್ತು. ಫರ್ಲಾಂಗ್ ದೂರದಲ್ಲೊಂದು ಬೋರ್ ವೆಲ್ ಇತ್ತು.

ನಾನು ದೇವಾಲಕೆರೆ ತೋಟದ ಉಸ್ತುವಾರಿ ವಹಿಸಿಕೊಂಡದ್ದು ತಿಳಿದ ಕೂಡಲೇ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಮಾಡುತ್ತಿದ್ದ ಸ್ವಂತ ಮನೆಯಿಲ್ಲದ ಹಲವರು ತಾವೂ ದೇವಾಲಕೆರೆಗೆ ಬರುತ್ತೇವೆಂದು ಅಲ್ಲಿಗೆ ಬಂದರು. ಇದರಿಂದಾಗಿ ನನಗೆ ಅಲ್ಲಿ ಕೂಡಾ ಒಂದು ಒಳ್ಳೆಯ ಕೆಲಸಗಾರರ ತಂಡವನ್ನು ಕಟ್ಟಲು ಸಾಧ್ಯವಾಯಿತು.

ಅಲ್ಲಿ ಜಮೀನಿನ ದಾಖಲೆಗಳನ್ನು ಸರಿಪಡಿಸುವುದರಿಂದ ಹಿಡಿದು, ಕಳ್ಳತನ ಇತ್ಯಾದಿ ಹಲವಾರು ನಾನಾ ರೀತಿಯ ಸಮಸ್ಯೆಗಳಿದ್ದವು. ಎಲ್ಲವನ್ನೂ ಒಂದೊಂದಾಗಿ ಬಗೆಹರಿಸಿಕೊಳ್ಳುತ್ತ ತೋಟವನ್ನು ಅಭಿವೃದ್ಧಿ ಮಾಡಬೇಕಿತ್ತು. ಮುಂದಿನ ಆರು ವರ್ಷಗಳಲ್ಲಿ ಅದು ಒಂದು ಅತ್ಯುತ್ತಮ ತೋಟವಾಯಿತು. ಇದಕ್ಕೆ ನನ್ನೊಂದಿಗಿದ್ದ ಮೇಸ್ತ್ರಿ, ಕೆಲಸಗಾರರು ಮತ್ತು ಅಲ್ಲಿ ಸುತ್ತ ಇದ್ದಂತಹ ನನ್ನ ಶಾಲಾ ಸಹಪಾಠಿ ಗೆಳೆಯರ ಬೆಂಬಲ ಕಾರಣವಾಯಿತು. ಇದೆಲ್ಲದರ ಜೊತೆಯಲ್ಲಿ ಗಣಪಯ್ಯನವರ ಕಾಲದಲ್ಲಿ ಜನತಾ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಡಿ.ಎಸ್. ಲೋಕೇಶ ಗೌಡರ ಸಹಕಾರ ಮುಖ್ಯವಾಗಿತ್ತು. ರಾಜಕಾರಣದಲ್ಲಿ ಸೋತಿದ್ದರೂ ಲೋಕೇಶಗೌಡರು ಸಾಮಾಜಿಕ ಕಳಕಳಿಯನ್ನು ಕಳೆದುಕೊಂಡಿರಲಿಲ್ಲ. ಅನುಭವದ ಜೊತೆಯಲ್ಲಿ ಸಾಹಿತ್ಯ, ರಾಜಕಾರಣ ಎಂದು ತುಂಬ ಓದಿಕೊಂಡಿದ್ದ ಅವರು ಹಲವಾರು ಯುವಕರಿಗೆ ಮಾರ್ಗದರ್ಶಕರಾಗಿದ್ದರು. ದೇವಾಲಕೆರೆಯ ಬಸ್ ಸ್ಟಾಪಿನ ಪಕ್ಕದ ಭಟ್ಟರ ಹೋಟೆಲ್ ಅಡ್ಡಾದಲ್ಲಿ ನಾವು ಪದೇ ಪದೇ ಭೇಟಿಯಾಗುತ್ತಿದ್ದೆವು. ಪ್ರತಿ ಬಾರಿಯೂ ಅವರಲ್ಲಿ ಹೊಸತೊಂದು ವಿಷಯವಿರುತ್ತಿತ್ತು.

ನಮ್ಮ ಮನೆಯಿಂದ ದೇವಾಲಕೆರೆಯ ತೋಟಕ್ಕೆ ಸುಮಾರು ಇಪ್ಪತ್ತೈದು ಕಿ.ಮಿ.ದೂರವಿತ್ತು. ಅಲ್ಲದೆ ನಾಲ್ಕು ಕಿ.ಮಿ. ಕಚ್ಚಾ ರಸ್ತೆಯಲ್ಲಿ ಕಡಿದಾದ ಗುಡ್ಡ ಹತ್ತಿ ಇಳಿದು ಸಾಗಬೇಕಿತ್ತು. ಆದ್ದರಿಂದ ಪ್ರತಿದಿನ ಸೈಕಲಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಪಡೆದು ಬೈಕೊಂದನ್ನು ಕೊಂಡುಕೊಂಡೆ.

ಸೈಕಲ್ಲಿನಲ್ಲಿ ಕುಳಿತು ಹೆಲಿಕಾಪ್ಟರ್ ಸವಾರಿ ಮಾಡುತ್ತಿದ್ದ ನನಗೀಗ ಸೂಪರ್ ಸಾನಿಕ್ ಜೆಟ್ ಸಿಕ್ಕಿದಂತಾಗಿತ್ತು. ಪೂರ್ಣಿಮಾ ಎಸ್ಟೇಟಿನ ಮಾರಾಟದಿಂದಾಗಿ ನಮ್ಮ ನಾಟಕ ತಂಡ ಹರಿದು ಹಂಚಿಹೋಗಿತ್ತು. ಅದನ್ನು ಮತ್ತೆ ಕಟ್ಟಬೇಕಿತ್ತು. ಜೊತೆಯಲ್ಲಿ ತೋಟದ ಕೆಲಸ, ಇತರ ಸಂಘಟನಾತ್ಮಕ ಕಾರ್ಯಗಳು, ಸ್ಥಳೀಯ ರಾಜಕಾರಣ, ಹೋರಾಟಗಳು, ಸಾಕ್ಷರತಾ ಆಂದೋಲನ, ಇತರ ಸುತ್ತಾಟಗಳು ಎಲ್ಲದಕ್ಕೂ ಅನುಕೂಲವಾಯಿತು.

ಪೂರ್ಣಿಮಾ ಎಸ್ಟೇಟ್ ಮಾರಾಟವಾಗಿ ಒಂದು ವರ್ಷವಾಗುವಷ್ಟರಲ್ಲೇ ಅಂದರೆ 1990ರಲ್ಲಿ ಪೂಣಚ್ಚನವರು ತೀರಿಕೊಂಡರು. ಅಲ್ಲಿಗೆ ಕೊಡಗು ಸಕಲೇಶಪುರಗಳ ಕಾಫಿ ವಲಯದ ಇನ್ನೊಂದು ಸಾಂಸ್ಕೃತಿಕ ಕೊಂಡಿಯೂ ಕಳಚಿದಂತಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

24 ವರ್ಷಗಳ ಮೋದಿ ವರ್ಚಸ್ಸನ್ನು 2 ವಾರಗಳಲ್ಲಿ ಧೂಳೀಪಟ ಮಾಡಿದ ಸಿಜೆಪಿ: CJP ಆಂದೋಲನಕ್ಕೆ ಅರುಂಧತಿ ರಾಯ್ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಶಕಗಳಿಗೂ ಹೆಚ್ಚಿನ ಸುದೀರ್ಘ ರಾಜಕೀಯ ವರ್ಚಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನಾ ಆಂದೋಲನವು ಕೇವಲ ಎರಡು ವಾರಗಳಲ್ಲಿ ಬುಡಸಮೇತ ಅಲ್ಲಾಡಿಸಿದೆ. ಇದು ಯಾವುದೇ...

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...