Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಭಾರತದ ಮತ್ತು ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.

- Advertisement -
- Advertisement -

ಯಾಂಗ್ ಜಿಯಾನ್ಲಿ ಎಂಬ ಚೀನಾದ ಮಾಜಿ ಅಧಿಕಾರಿ ಗಾಲ್ವಾನ್‌ನಲ್ಲಿ 100 ಚೀನಿಯರು ಸಾವನ್ನಪ್ಪಿದ್ದಾರೆ ಎಂದಿದ್ದಾರೆಂದು ರಿಪಬ್ಲಿಕ್ ಟಿವಿ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅಸ್ಪಷ್ಟ ವೆಬ್‌ಸೈಟ್ kreately.in ‌ನ ವರದಿಯನ್ನು ಟ್ವೀಟ್ ಮಾಡಿ “ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗ ಜಿಯಾನ್ಲಿ ಯಾಂಗ್, ಜೂನ್ 15 ರ ರಾತ್ರಿ ಭಾರತ-ಚೀನಾದ ಸೈನಿಕರ ನಡುವಿನ ಭೀಕರ ಸಂಘರ್ಷದಲ್ಲಿ 100 ಕ್ಕೂ ಹೆಚ್ಚು ಚೀನೀ ಸೈನಿಕರು ಕೊಲ್ಲಲ್ಪಟ್ಟರು ಎಂದು ಒಪ್ಪಿಕೊಂಡಿದ್ದಾರೆ.” ಎಂದು ಬರೆದಿದ್ದಾರೆ. ಕಪಿಲ್ ಮಿಶ್ರಾರ ಈ ಟ್ವೀಟ್ 11,700 ಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದೆ.

ಜುಲೈ 7 ರಂದು ಪ್ರಕಟವಾದ ರಿಪಬ್ಲಿಕ್ ಟಿವಿ ವರದಿಯಲ್ಲಿ ಕೂಡ ಇದೆ ಮಾಹಿತಿಯನ್ನು ನೀಡಲಾಗಿದೆ. “ಭಾರತ-ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿದ್ದಾರೆ” ಎಂದು ಬರೆದಿದೆ. ಮೈನೇಷನ್ ಕೂಡಾ ರೀತಿಯ ವರದಿಯನ್ನು ಪ್ರಕಟಿಸಿತು.

ರಿಪಬ್ಲಿಕ್ ಟಿವಿಯ ಲೇಖನವು ತ್ಸೈ ಇಂಗ್-ವೆನ್ ಎಂಬ ಖಾತೆಯಿಂದ ಪಡೆದುಕೊಂಡದ್ದಾಗಿದೆ.

ಇದನ್ನು ಮೊದಲಿಗೆ @NewsLineIFE  ಎಂಬ ಟ್ವಿಟ್ಟರ್‌ ಹ್ಯಾಂಡಲ್ ಟ್ವಿಟ್ಟರಿನಲ್ಲಿ ಹಂಚಿತ್ತು.

ಫ್ಯಾಕ್ಟ್‌‌ಚೆಕ್‌:

ಈ ವಿವಾದಾತ್ಮಕ ಸಂದೇಶದ ಎಲ್ಲಾ ವಾದಗಳು ಸಂಶಯಾಸ್ಪದ ವೆಬ್‌ಸೈಟ್‌ಗಳು ಮತ್ತು ಖಾತೆಗಳಿಂದ ಹೊರಹೊಮ್ಮಿದವುಗಳಾಗಿದೆ.

@NewsLineIFE ಎಂಬ ಟ್ವಿಟ್ಟರ್‌‌ ಹ್ಯಾಂಡಲ್ ಈ ಸಂದೇಶವನ್ನು ಮೊದಲ ಬಾರಿಗೆ ಹಂಚಿಕೊಂಡಿತು. ಜುಲೈ 2 ರಂದು ಈ ಹ್ಯಾಂಡಲ್ ಚೀನಾದ ಐವರು ಸೈನಿಕರು ಸಾವನ್ನಪ್ಪಿದರು ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂಬ ಆಧಾರರಹಿತವಾಗಿ ಬರೆದಿತ್ತು. ಅದರ ನಂತರ ಚೀನಾದ 43 ಸೈನಿಕರು ಕೊಲ್ಲಲ್ಪಟ್ಟರು ಎಂದು ಟ್ವೀಟ್ ಮಾಡಿತ್ತು ಆದರೆ ಎರಡೂ ಟ್ವೀಟ್‌ಗಳನ್ನು ಈಗ ಅಳಿಸಲಾಗಿದೆ.

@NewsLineIFE  ಈ ಸುದ್ದಿಯನ್ನು ಟ್ವೀಟ್ ಮಾಡುವಾಗ @drapr007 ಎಂಬ ಟ್ವಿಟ್ಟರ್‌ ಹ್ಯಾಂಡಲ್‌ಅನ್ನು ಟ್ಯಾಗ್ ಮಾಡಿತ್ತು. ಈ ಹ್ಯಾಂಡಲ್ ಈ ವಿಚಾರವನ್ನು ಜುಲೈ 1 ರಂದು ಅಂದರೆ ಒಂದು ದಿನದ ಹಿಂದೆಯೇ  ಬರೆದಿತ್ತು.

ಇದಲ್ಲದೆ 100 ಚೀನೀ ಸೈನಿಕರ ಸಾವುಗಳ ಕುರಿತು ಲೇಖನವನ್ನು ಪ್ರಕಟಿಸಿದ ವೆಬ್‌ಸೈಟ್ kreately.in ಹೊಸದಾಗಿ ರಚಿಸಲಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಅದರ ಟ್ವಿಟರ್ ಬಯೋ “ ನೀವೆ ಪ್ರಕಟಿಸಿ, ಸೈನ್‌ಅಪ್ ಮಾಡಿ ಮತ್ತು ಬರಹಗಾರರಾಗಿ, ಈಗಿದು ಸುಲಭ…” ಎಂದು ಬರೆದಿದೆ. ಈ ವೆಬ್‌ಸೈಟ್ ಪತ್ರಿಕೋದ್ಯಮದ ವೇದಿಕೆಯಲ್ಲ, ಅದು ಬಳಕೆದಾರರು ಕಳುಹಿಸಿದ ವಿಷಯವನ್ನು ಪ್ರಕಟಿಸುತ್ತದೆ. ಅಲ್ಲದೆ ಇದನ್ನು ಯಾರು ನಡೆಸುತ್ತಿದ್ದಾರೆ ಹಾಗೂ ಅವರ ವಿಳಾಸದಂತಹ ಯಾವುದೆ ಮಾಹಿತಿಯನ್ನು ಅದು ಹೊಂದಿಲ್ಲ.

ಅಷ್ಟೇ ಅಲ್ಲದೆ ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಂನ ಲೇಖನವನ್ನು ಹಲವಾರು ವ್ಯಕ್ತಿಗಳು ಹಂಚಿಕೊಂಡಿದ್ದು, 100 ಚೀನೀ ಸೈನಿಕರನ್ನು ಭಾರತೀಯ ಸೇನೆಯಿಂದ ಕೊಲ್ಲಲಾಗಿದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ ಮತ್ತು ಜಿಯಾನ್ಲಿ ಯಾಂಗ್ ಅವರ ವಾಷಿಂಗ್ಟನ್ ಟೈಮ್ಸ್ ಅಭಿಪ್ರಾಯವನ್ನು ಈ ವೆಬ್‌ಸೈಟ್‌ ಉಲ್ಲೇಖಿಸಿದೆ.

ವಾಷಿಂಗ್ಟನ್ ಟೈಮ್ಸ್ ನಲ್ಲಿ ಯಾಂಗ್ ಜಿಯಾನ್ಲಿಯ ಅಭಿಪ್ರಾಯದ ತುಣುಕು

ಯಾಂಗ್ ಜಿಯಾನ್ಲಿ ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನೀ ಸೈನಿಕರು ಸಾವನ್ನಪ್ಪಿದ್ದಾರೆಂದು ಮುಖ್ಯವಾಹಿನಿಯಲ್ಲಿ ಇಲ್ಲದ, ನಂಬಲರ್ಹವಲ್ಲದ ಮಾಧ್ಯಮಗಳು ಹೇಳಿವೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ.

ಜಿಯಾನ್ಲಿ ನಿಜಕ್ಕೂ ಮಾಜಿ ಸಿಪಿಸಿ ನಾಯಕ ಯಾಂಗ್ ಫೆಂಗ್‌ಶೂನ್‌ರ ಮಗನಾಗಿದ್ದರೂ, ಅವರು ಚೀನಾದ ಮಾಜಿ ಮಿಲಿಟರಿ ನಾಯಕನಲ್ಲ. ಜಿಯಾನ್ಲಿ ವಾಸ್ತವವಾಗಿ ಅಮೆರಿಕಾದಲ್ಲಿ ವಾಸಿಸುವ ಚೀನಾದ ಭಿನ್ನಮತೀಯ ಆಗಿದ್ದರೆ. ಅವರು ಅಮೆರಿಕಾದಲ್ಲಿ ಅಧ್ಯಯನ ಮಾಡಿದ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ಇವರು ಮಾಜಿ ಟಿಯಾನನ್ಮೆನ್ ಸ್ಕ್ವೇರ್ ಕಾರ್ಯಕರ್ತರಾಗಿದ್ದು, ಕಾರ್ಮಿಕ ಅಶಾಂತಿಯ ಧ್ವನಿಯೆತ್ತಲು ಯತ್ನಿಸಿದ್ದಕ್ಕಾಗಿ 2002 ರಲ್ಲಿ ಚೀನಾ ಸರ್ಕಾರವು ಜೈಲಿಗಟ್ಟಿತ್ತು ಹಾಗೂ 2007 ರಲ್ಲಿ ಬಿಡುಗಡೆಯಾಗಿದ್ದರು.

ಇಂಡೋ-ಚೀನಾ ಘರ್ಷಣೆಗಳ ಕುರಿತು ಅವರು ಇತ್ತೀಚೆಗೆ ದಿ ವಾಷಿಂಗ್ಟನ್ ಟೈಮ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿದ್ದು, ಅದರಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಚೀನಾದ ಸಾವಿನ ಸಂಖ್ಯೆಯನ್ನು ಒಪ್ಪಿಕೊಂಡಿಲ್ಲ ಹಾಗೂ ಕನಿಷ್ಠ 40 ಚೀನಾ ಸೈನಿಕರ ಸಾವುಗಳ ಬಗ್ಗೆ ಭಾರತೀಯ ವರದಿಗಳು “ಸುಳ್ಳು ಮಾಹಿತಿ” ಎಂದು ಬರೆದಿದ್ದರು.

“ಯಾವ ದೇಶವು ತನ್ನ ಗಡಿಯಲ್ಲಿರುವ ಸಮವಸ್ತ್ರಧಾರಿ ಸೈನಿಕರ ಹುತಾತ್ಮತೆಯನ್ನು ಅಂಗೀಕರಿಸುವುದಿಲ್ಲ, ಅವರಿಗೆ ಗೌರವಾನ್ವಿತ ಕೊನೆಯ ಗೌರವ ಸಲ್ಲಿಸಲಿ. ಚೀನಾ ತಾನು ಸೈನ್ಯವನ್ನು ಎದುರಾಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಳೆದುಕೊಂಡೆ ಎಂದು ಒಪ್ಪಿಕೊಳ್ಳುವುದು ಆಂತರಿಕ ಅಶಾಂತಿಗೆ ಕಾರಣವಾಗಬಹುದು ಎಂಬ ಭಯದಲ್ಲಿ ತತ್ತರಿಸಿದೆ” ಎಂದು ಜಿಯಾನ್ಲಿ ಬರೆದಿದ್ದಾರೆ.

ಈ ವರದಿಯಲ್ಲಿ ಎಲ್ಲಿಯೂ ಚೀನಾದ ಸೈನಿಕರ ಸಾವಿಗೆ ಸಂಖ್ಯೆಯನ್ನು ಜಿಯಾನ್ಲಿ ಉಲ್ಲೇಖಿಸಿಲ್ಲ.

ನಕಲಿ ಟ್ವಿಟ್ಟರ್‌ ಖಾತೆಯಿಂದ ಸುದ್ದಿಯನ್ನು ಪಡೆದ ರಿಪಬ್ಲಿಕ್ ಟಿವಿ.

ರಿಪಬ್ಲಿಕ್ ಟಿವಿ @tsaiing_wen ಎಂಬ ಖಾತೆಯಿಂದ ಸುದ್ದಿಯನ್ನು ಪಡೆದಿದೆ. ಇದು ಚೀನಾ ಗಣರಾಜ್ಯದ (ತೈವಾನ್) ಅಧ್ಯಕ್ಷರದ್ದೆಂದು ಹೇಳುವ ನಕಲಿ ಖಾತೆಯಾಗಿದೆ. ಇದರಲ್ಲಿ ಟ್ವಿಟ್ಟರ್‌ ಪರಿಶೀಲನೆಯ ನೀಲಿ ಟಿಕ್ ಇಲ್ಲ.

ವೈರಲ್ ಸಂದೇಶದಲ್ಲಿ ಬಳಸಲಾದ ಜಿಯಾನ್ಲಿಯ ಹಳೆಯ ಫೋಟೋಗಳು

ಜಾಗತಿಕ ಮಾನವ ಹಕ್ಕುಗಳ ಕುರಿತ ಯುಎಸ್ ಹೌಸ್ ಉಪಸಮಿತಿಯ ಮುಂದೆ ಚೀನಾದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವ 2013 ರ ಫೋಟೋವನ್ನು kreately.com ಬಳಸಿದೆ.

ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಮ್ ಬಳಸಿದ ಚಿತ್ರ ಕೂಡಾ ವಿಕಿಪೀಡಿಯಾದಿಂದ ಪಡೆಯಲಾಗಿದೆ. ಅದರ ವಿವರಣೆಯ ಪ್ರಕಾರ, “ಯು.ಎಸ್. ಕಾಂಗ್ರೆಸ್ ರೇಬರ್ನ್ ಹೌಸ್ ಆಫೀಸ್ ಕಟ್ಟಡದಲ್ಲಿ ನಡೆದ 13 ನೇ ಇಂಟೆರೆಥ್ನಿಕ್ ಇಂಟರ್ ಫೇಯ್ತ್ ಲೀಡರ್ಶಿಪ್ ಕಾನ್ಫರೆನ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಡಾ. ಯಾಂಗ್ ಜಿಯಾನ್ಲಿಯವರ ಚಿತ್ರ. ಡಿಸೆಂಬರ್ 10, 2018.” ಎಂದು ಹೇಳಿದೆ.

 ಸುಳ್ಳು ಸುದ್ದಿಗಳ ತಂಡಗಳು

ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿತ್ತು. ಇದನ್ನು ಹಂಚಿದವರಲ್ಲಿ ಜಿಡಿ ಬಕ್ಷಿ, ರಮೇಶ್ ಸೋಲಂಕಿ, ಚಯಾನ್ ಚಟರ್ಜಿ ಪ್ರಮುಖರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು newscast-pratyakhsha.com ಎಂಬ ವೆಬ್‌ಸೈಟಿನ ಆಧಾರವಿಲ್ಲದ ಸುದ್ದಿಗಳನ್ನು ಹಂಚಿದ್ದಾರೆ.


ಓದಿ: ಕನ್ನಡ ಖಾಸಗಿ ಚಾನೆಲ್ ಮಾಲಿಕರು ಪ್ರತಿ ಜಿಲ್ಲೆಯಲ್ಲಿ ಕೊರೊನಾ ಆಸ್ಪತ್ರೆ ಕಟ್ಟುತ್ತಿರುವುದು ನಿಜವೇ ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ಬೆಂಬಲ

ಮಾರ್ಚ್ 9 ರ ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾದಾಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಮಂಡಿಸಲಾಗುವ ಅವಿಶ್ವಾಸ ನಿರ್ಣಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲ ನೀಡಲಿದೆ ಎಂದು ಪಕ್ಷದ ನಾಯಕರು...

ಹೊಸ ರಾಜ್ಯಪಾಲ ರವಿ ಬಿಜೆಪಿ ಕೇಡರ್, ಆದರೆ ಬಂಗಾಳ ಟಫ್ ಟರ್ಫ್ : ಮಮತಾ ಬ್ಯಾನರ್ಜಿ

ನೂತನ ರಾಜ್ಯಪಾಲ ಆರ್.ಎನ್ ರವಿ ಅವರನ್ನು 'ಬಿಜೆಪಿ ಕೇಡರ್' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಲೇವಡಿ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವಾಲಯ 'ನಬನ್ನಾ' ಮತ್ತು ರಾಜ್ಯಪಾಲರ ನಿವಾಸ...

ಕರ್ನಾಟಕ ಬಜೆಟ್ 2026| ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹಂಚಿಕೆ ನಿರಾಶದಾಯಕ

ಶಿಕ್ಷಣಕ್ಕೆ 47,224 ಕೋಟಿ (ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು...

ಕೇರಳ : ಪ್ರಧಾನಿ ಮೋದಿ ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ನರೇಂದ್ರ ಮೋದಿ 'ದೇಶದ್ರೋಹಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕೇರಳದ ಕಣ್ಣೂರಿನ ಶ್ರೀಕಂಡಪುರಂ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಶನಿವಾರ (ಮಾ.7) ವರದಿ...

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...