Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಫ್ಯಾಕ್ಟ್‌ಚೆಕ್‌‌: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್‌ ಟಿವಿ!

ಭಾರತದ ಮತ್ತು ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.

- Advertisement -
- Advertisement -

ಯಾಂಗ್ ಜಿಯಾನ್ಲಿ ಎಂಬ ಚೀನಾದ ಮಾಜಿ ಅಧಿಕಾರಿ ಗಾಲ್ವಾನ್‌ನಲ್ಲಿ 100 ಚೀನಿಯರು ಸಾವನ್ನಪ್ಪಿದ್ದಾರೆ ಎಂದಿದ್ದಾರೆಂದು ರಿಪಬ್ಲಿಕ್ ಟಿವಿ, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅಸ್ಪಷ್ಟ ವೆಬ್‌ಸೈಟ್ kreately.in ‌ನ ವರದಿಯನ್ನು ಟ್ವೀಟ್ ಮಾಡಿ “ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗ ಜಿಯಾನ್ಲಿ ಯಾಂಗ್, ಜೂನ್ 15 ರ ರಾತ್ರಿ ಭಾರತ-ಚೀನಾದ ಸೈನಿಕರ ನಡುವಿನ ಭೀಕರ ಸಂಘರ್ಷದಲ್ಲಿ 100 ಕ್ಕೂ ಹೆಚ್ಚು ಚೀನೀ ಸೈನಿಕರು ಕೊಲ್ಲಲ್ಪಟ್ಟರು ಎಂದು ಒಪ್ಪಿಕೊಂಡಿದ್ದಾರೆ.” ಎಂದು ಬರೆದಿದ್ದಾರೆ. ಕಪಿಲ್ ಮಿಶ್ರಾರ ಈ ಟ್ವೀಟ್ 11,700 ಕ್ಕೂ ಹೆಚ್ಚು ಬಾರಿ ರಿಟ್ವೀಟ್‌ ಆಗಿದೆ.

ಜುಲೈ 7 ರಂದು ಪ್ರಕಟವಾದ ರಿಪಬ್ಲಿಕ್ ಟಿವಿ ವರದಿಯಲ್ಲಿ ಕೂಡ ಇದೆ ಮಾಹಿತಿಯನ್ನು ನೀಡಲಾಗಿದೆ. “ಭಾರತ-ಚೀನಾ ನಡುವಿನ ಹಿಂಸಾತ್ಮಕ ಮುಖಾಮುಖಿಯಲ್ಲಿ 100 ಕ್ಕೂ ಹೆಚ್ಚು ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಜಿಯಾನ್ಲಿ ಯಾಂಗ್ ಒಪ್ಪಿದ್ದಾರೆ” ಎಂದು ಬರೆದಿದೆ. ಮೈನೇಷನ್ ಕೂಡಾ ರೀತಿಯ ವರದಿಯನ್ನು ಪ್ರಕಟಿಸಿತು.

ರಿಪಬ್ಲಿಕ್ ಟಿವಿಯ ಲೇಖನವು ತ್ಸೈ ಇಂಗ್-ವೆನ್ ಎಂಬ ಖಾತೆಯಿಂದ ಪಡೆದುಕೊಂಡದ್ದಾಗಿದೆ.

ಇದನ್ನು ಮೊದಲಿಗೆ @NewsLineIFE  ಎಂಬ ಟ್ವಿಟ್ಟರ್‌ ಹ್ಯಾಂಡಲ್ ಟ್ವಿಟ್ಟರಿನಲ್ಲಿ ಹಂಚಿತ್ತು.

ಫ್ಯಾಕ್ಟ್‌‌ಚೆಕ್‌:

ಈ ವಿವಾದಾತ್ಮಕ ಸಂದೇಶದ ಎಲ್ಲಾ ವಾದಗಳು ಸಂಶಯಾಸ್ಪದ ವೆಬ್‌ಸೈಟ್‌ಗಳು ಮತ್ತು ಖಾತೆಗಳಿಂದ ಹೊರಹೊಮ್ಮಿದವುಗಳಾಗಿದೆ.

@NewsLineIFE ಎಂಬ ಟ್ವಿಟ್ಟರ್‌‌ ಹ್ಯಾಂಡಲ್ ಈ ಸಂದೇಶವನ್ನು ಮೊದಲ ಬಾರಿಗೆ ಹಂಚಿಕೊಂಡಿತು. ಜುಲೈ 2 ರಂದು ಈ ಹ್ಯಾಂಡಲ್ ಚೀನಾದ ಐವರು ಸೈನಿಕರು ಸಾವನ್ನಪ್ಪಿದರು ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂಬ ಆಧಾರರಹಿತವಾಗಿ ಬರೆದಿತ್ತು. ಅದರ ನಂತರ ಚೀನಾದ 43 ಸೈನಿಕರು ಕೊಲ್ಲಲ್ಪಟ್ಟರು ಎಂದು ಟ್ವೀಟ್ ಮಾಡಿತ್ತು ಆದರೆ ಎರಡೂ ಟ್ವೀಟ್‌ಗಳನ್ನು ಈಗ ಅಳಿಸಲಾಗಿದೆ.

@NewsLineIFE  ಈ ಸುದ್ದಿಯನ್ನು ಟ್ವೀಟ್ ಮಾಡುವಾಗ @drapr007 ಎಂಬ ಟ್ವಿಟ್ಟರ್‌ ಹ್ಯಾಂಡಲ್‌ಅನ್ನು ಟ್ಯಾಗ್ ಮಾಡಿತ್ತು. ಈ ಹ್ಯಾಂಡಲ್ ಈ ವಿಚಾರವನ್ನು ಜುಲೈ 1 ರಂದು ಅಂದರೆ ಒಂದು ದಿನದ ಹಿಂದೆಯೇ  ಬರೆದಿತ್ತು.

ಇದಲ್ಲದೆ 100 ಚೀನೀ ಸೈನಿಕರ ಸಾವುಗಳ ಕುರಿತು ಲೇಖನವನ್ನು ಪ್ರಕಟಿಸಿದ ವೆಬ್‌ಸೈಟ್ kreately.in ಹೊಸದಾಗಿ ರಚಿಸಲಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಅದರ ಟ್ವಿಟರ್ ಬಯೋ “ ನೀವೆ ಪ್ರಕಟಿಸಿ, ಸೈನ್‌ಅಪ್ ಮಾಡಿ ಮತ್ತು ಬರಹಗಾರರಾಗಿ, ಈಗಿದು ಸುಲಭ…” ಎಂದು ಬರೆದಿದೆ. ಈ ವೆಬ್‌ಸೈಟ್ ಪತ್ರಿಕೋದ್ಯಮದ ವೇದಿಕೆಯಲ್ಲ, ಅದು ಬಳಕೆದಾರರು ಕಳುಹಿಸಿದ ವಿಷಯವನ್ನು ಪ್ರಕಟಿಸುತ್ತದೆ. ಅಲ್ಲದೆ ಇದನ್ನು ಯಾರು ನಡೆಸುತ್ತಿದ್ದಾರೆ ಹಾಗೂ ಅವರ ವಿಳಾಸದಂತಹ ಯಾವುದೆ ಮಾಹಿತಿಯನ್ನು ಅದು ಹೊಂದಿಲ್ಲ.

ಅಷ್ಟೇ ಅಲ್ಲದೆ ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಂನ ಲೇಖನವನ್ನು ಹಲವಾರು ವ್ಯಕ್ತಿಗಳು ಹಂಚಿಕೊಂಡಿದ್ದು, 100 ಚೀನೀ ಸೈನಿಕರನ್ನು ಭಾರತೀಯ ಸೇನೆಯಿಂದ ಕೊಲ್ಲಲಾಗಿದೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ ಮತ್ತು ಜಿಯಾನ್ಲಿ ಯಾಂಗ್ ಅವರ ವಾಷಿಂಗ್ಟನ್ ಟೈಮ್ಸ್ ಅಭಿಪ್ರಾಯವನ್ನು ಈ ವೆಬ್‌ಸೈಟ್‌ ಉಲ್ಲೇಖಿಸಿದೆ.

ವಾಷಿಂಗ್ಟನ್ ಟೈಮ್ಸ್ ನಲ್ಲಿ ಯಾಂಗ್ ಜಿಯಾನ್ಲಿಯ ಅಭಿಪ್ರಾಯದ ತುಣುಕು

ಯಾಂಗ್ ಜಿಯಾನ್ಲಿ ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನೀ ಸೈನಿಕರು ಸಾವನ್ನಪ್ಪಿದ್ದಾರೆಂದು ಮುಖ್ಯವಾಹಿನಿಯಲ್ಲಿ ಇಲ್ಲದ, ನಂಬಲರ್ಹವಲ್ಲದ ಮಾಧ್ಯಮಗಳು ಹೇಳಿವೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ.

ಜಿಯಾನ್ಲಿ ನಿಜಕ್ಕೂ ಮಾಜಿ ಸಿಪಿಸಿ ನಾಯಕ ಯಾಂಗ್ ಫೆಂಗ್‌ಶೂನ್‌ರ ಮಗನಾಗಿದ್ದರೂ, ಅವರು ಚೀನಾದ ಮಾಜಿ ಮಿಲಿಟರಿ ನಾಯಕನಲ್ಲ. ಜಿಯಾನ್ಲಿ ವಾಸ್ತವವಾಗಿ ಅಮೆರಿಕಾದಲ್ಲಿ ವಾಸಿಸುವ ಚೀನಾದ ಭಿನ್ನಮತೀಯ ಆಗಿದ್ದರೆ. ಅವರು ಅಮೆರಿಕಾದಲ್ಲಿ ಅಧ್ಯಯನ ಮಾಡಿದ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ಇವರು ಮಾಜಿ ಟಿಯಾನನ್ಮೆನ್ ಸ್ಕ್ವೇರ್ ಕಾರ್ಯಕರ್ತರಾಗಿದ್ದು, ಕಾರ್ಮಿಕ ಅಶಾಂತಿಯ ಧ್ವನಿಯೆತ್ತಲು ಯತ್ನಿಸಿದ್ದಕ್ಕಾಗಿ 2002 ರಲ್ಲಿ ಚೀನಾ ಸರ್ಕಾರವು ಜೈಲಿಗಟ್ಟಿತ್ತು ಹಾಗೂ 2007 ರಲ್ಲಿ ಬಿಡುಗಡೆಯಾಗಿದ್ದರು.

ಇಂಡೋ-ಚೀನಾ ಘರ್ಷಣೆಗಳ ಕುರಿತು ಅವರು ಇತ್ತೀಚೆಗೆ ದಿ ವಾಷಿಂಗ್ಟನ್ ಟೈಮ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನು ಬರೆದಿದ್ದು, ಅದರಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಚೀನಾದ ಸಾವಿನ ಸಂಖ್ಯೆಯನ್ನು ಒಪ್ಪಿಕೊಂಡಿಲ್ಲ ಹಾಗೂ ಕನಿಷ್ಠ 40 ಚೀನಾ ಸೈನಿಕರ ಸಾವುಗಳ ಬಗ್ಗೆ ಭಾರತೀಯ ವರದಿಗಳು “ಸುಳ್ಳು ಮಾಹಿತಿ” ಎಂದು ಬರೆದಿದ್ದರು.

“ಯಾವ ದೇಶವು ತನ್ನ ಗಡಿಯಲ್ಲಿರುವ ಸಮವಸ್ತ್ರಧಾರಿ ಸೈನಿಕರ ಹುತಾತ್ಮತೆಯನ್ನು ಅಂಗೀಕರಿಸುವುದಿಲ್ಲ, ಅವರಿಗೆ ಗೌರವಾನ್ವಿತ ಕೊನೆಯ ಗೌರವ ಸಲ್ಲಿಸಲಿ. ಚೀನಾ ತಾನು ಸೈನ್ಯವನ್ನು ಎದುರಾಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಳೆದುಕೊಂಡೆ ಎಂದು ಒಪ್ಪಿಕೊಳ್ಳುವುದು ಆಂತರಿಕ ಅಶಾಂತಿಗೆ ಕಾರಣವಾಗಬಹುದು ಎಂಬ ಭಯದಲ್ಲಿ ತತ್ತರಿಸಿದೆ” ಎಂದು ಜಿಯಾನ್ಲಿ ಬರೆದಿದ್ದಾರೆ.

ಈ ವರದಿಯಲ್ಲಿ ಎಲ್ಲಿಯೂ ಚೀನಾದ ಸೈನಿಕರ ಸಾವಿಗೆ ಸಂಖ್ಯೆಯನ್ನು ಜಿಯಾನ್ಲಿ ಉಲ್ಲೇಖಿಸಿಲ್ಲ.

ನಕಲಿ ಟ್ವಿಟ್ಟರ್‌ ಖಾತೆಯಿಂದ ಸುದ್ದಿಯನ್ನು ಪಡೆದ ರಿಪಬ್ಲಿಕ್ ಟಿವಿ.

ರಿಪಬ್ಲಿಕ್ ಟಿವಿ @tsaiing_wen ಎಂಬ ಖಾತೆಯಿಂದ ಸುದ್ದಿಯನ್ನು ಪಡೆದಿದೆ. ಇದು ಚೀನಾ ಗಣರಾಜ್ಯದ (ತೈವಾನ್) ಅಧ್ಯಕ್ಷರದ್ದೆಂದು ಹೇಳುವ ನಕಲಿ ಖಾತೆಯಾಗಿದೆ. ಇದರಲ್ಲಿ ಟ್ವಿಟ್ಟರ್‌ ಪರಿಶೀಲನೆಯ ನೀಲಿ ಟಿಕ್ ಇಲ್ಲ.

ವೈರಲ್ ಸಂದೇಶದಲ್ಲಿ ಬಳಸಲಾದ ಜಿಯಾನ್ಲಿಯ ಹಳೆಯ ಫೋಟೋಗಳು

ಜಾಗತಿಕ ಮಾನವ ಹಕ್ಕುಗಳ ಕುರಿತ ಯುಎಸ್ ಹೌಸ್ ಉಪಸಮಿತಿಯ ಮುಂದೆ ಚೀನಾದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವ 2013 ರ ಫೋಟೋವನ್ನು kreately.com ಬಳಸಿದೆ.

ನ್ಯೂಸ್ಕಾಸ್ಟ್- ಪ್ರತ್ಯಕ್ಷಾ.ಕಾಮ್ ಬಳಸಿದ ಚಿತ್ರ ಕೂಡಾ ವಿಕಿಪೀಡಿಯಾದಿಂದ ಪಡೆಯಲಾಗಿದೆ. ಅದರ ವಿವರಣೆಯ ಪ್ರಕಾರ, “ಯು.ಎಸ್. ಕಾಂಗ್ರೆಸ್ ರೇಬರ್ನ್ ಹೌಸ್ ಆಫೀಸ್ ಕಟ್ಟಡದಲ್ಲಿ ನಡೆದ 13 ನೇ ಇಂಟೆರೆಥ್ನಿಕ್ ಇಂಟರ್ ಫೇಯ್ತ್ ಲೀಡರ್ಶಿಪ್ ಕಾನ್ಫರೆನ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಡಾ. ಯಾಂಗ್ ಜಿಯಾನ್ಲಿಯವರ ಚಿತ್ರ. ಡಿಸೆಂಬರ್ 10, 2018.” ಎಂದು ಹೇಳಿದೆ.

 ಸುಳ್ಳು ಸುದ್ದಿಗಳ ತಂಡಗಳು

ಭಾರತದೊಂದಿಗಿನ ಘರ್ಷಣೆಯಲ್ಲಿ 100 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿತ್ತು. ಇದನ್ನು ಹಂಚಿದವರಲ್ಲಿ ಜಿಡಿ ಬಕ್ಷಿ, ರಮೇಶ್ ಸೋಲಂಕಿ, ಚಯಾನ್ ಚಟರ್ಜಿ ಪ್ರಮುಖರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು newscast-pratyakhsha.com ಎಂಬ ವೆಬ್‌ಸೈಟಿನ ಆಧಾರವಿಲ್ಲದ ಸುದ್ದಿಗಳನ್ನು ಹಂಚಿದ್ದಾರೆ.


ಓದಿ: ಕನ್ನಡ ಖಾಸಗಿ ಚಾನೆಲ್ ಮಾಲಿಕರು ಪ್ರತಿ ಜಿಲ್ಲೆಯಲ್ಲಿ ಕೊರೊನಾ ಆಸ್ಪತ್ರೆ ಕಟ್ಟುತ್ತಿರುವುದು ನಿಜವೇ ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...