Homeಕರೋನಾ ತಲ್ಲಣಕೋವಿಡ್‌ ಎದುರಿಸುವಲ್ಲಿ ವಿಫಲತೆ: ಡಬಲ್ ಇಂಜಿನ್ ಸರಕಾರಗಳಿಂದ ಡಬಲ್ ಧೋಖಾ

ಕೋವಿಡ್‌ ಎದುರಿಸುವಲ್ಲಿ ವಿಫಲತೆ: ಡಬಲ್ ಇಂಜಿನ್ ಸರಕಾರಗಳಿಂದ ಡಬಲ್ ಧೋಖಾ

ಬಹುಶಃ ಕರ್ನಾಟಕ  ಹೈಕೋರ್ಟ್ ಇಲ್ಲದೇ ಹೋಗಿದ್ದರೆ ರಾಜ್ಯದ ಕೋವಿಡ್ ರೋಗಿಗಳ ಸ್ಥಿತಿ ಊಹಿಸಲೂ ಅಸಾಧ್ಯವಾಗಿರುತ್ತಿತ್ತು.

- Advertisement -
- Advertisement -

ಕೋವಿಡ್ ಎರಡನೇ ಅಲೆಯು ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಅಪ್ಪಳಿಸಿ ಜಗತ್ತನ್ನೇ  ತಲ್ಲಣಗೊಳಿಸಿತು. ಮಾತ್ರವಲ್ಲ ಜಗತ್ತಿನಾದ್ಯಂತ ಎಲ್ಲಾ ಸರ್ಕಾರಗಳ ಬಂಡವಾಳವನ್ನು ಬಯಲು ಮಾಡಿತು. ಎರಡನೇ ಅಲೆಗೆ ಬಹುಪಾಲು ದೇಶಗಳ, ರಾಜ್ಯಗಳ ಸರ್ಕಾರಗಳು ಸಿದ್ಧವಾಗಿರಲಿಲ್ಲ ಅನ್ನುವುದು ನಿಜವಾದರೂ, ಕಠಿಣ ಪರಿಸ್ಥಿತಿಯಲ್ಲಿ ಎಷ್ಟು ವಿವೇಕಾಯುತವಾಗಿ ಸರ್ಕಾರಗಳು ಮತ್ತು ನಾಯಕರು ನಡೆದುಕೊಂಡರು ಎಂಬುದು ಬಹಳ ಮುಖ್ಯವಾಗುತ್ತದೆ.  ಒಕ್ಕೂಟ ಸರ್ಕಾರವಂತೂ ತನಗೂ ಈ ಸಮಸ್ಯೆಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸಿತು.  ರೈತ ನಾಯಕ, ಹೋರಾಟಗಳಿಂದ ಬೆಳೆದುಬಂದವರು ಅನ್ನಿಸಿಕೊಂಡಿರುವ ಯಡಿಯೂರಪ್ಪನವರಾದರೂ ಜನರ ಮನಗೆಲ್ಲುವ ಕೆಲಸ ಮಾಡಬಹುದಿತ್ತು ಆದರೆ ಅವರು ಸಹ ಸಂಪೂರ್ಣವಾಗಿ ವಿಫಲರಾದರು.

ಇಡೀ ಕೋವಿಡ್ ಸಂದರ್ಭದಲ್ಲಿ ಯಾವ ಸಮಯದಲ್ಲೂ ಯಡಿಯೂರಪ್ಪ ಅಥವಾ ಅವರ ಮಂತ್ರಿಗಳು ಯಾರೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲೇ ಇಲ್ಲ. ಜನರಿಗೆ ಸರ್ಕಾರದ ಬಗ್ಗೆ ಭರವಸೆ ಹುಟ್ಟುವಂತಹ ಯಾವ ಕೆಲಸವನ್ನೂ ಮಾಡಲಿಲ್ಲ. ಇವರುಗಳಿಗೆ ದುರಾಸಕ್ತಿ ಇತ್ತೇ ಹೊರತು ದೂರದೃಷ್ಟಿ ಇರಲಿಲ್ಲ.

ಸರಕಾರಕ್ಕೆ ಕೋವಿಡ್ ಎದುರಿಸಲು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕೊಂಚವೂ ಅರಿವೇ ಇರಲಿಲ್ಲ. ಸಾಂಕ್ರಮಿಕ ರೋಗ ತಜ್ಞರು ಅಥವಾ ವೈರಾಲಾಜಿಸ್ಟ್‌ರ ಬದಲಿಗೆ ಇಬ್ಬರು ಹೃದಯರೋಗ ತಜ್ಞರನ್ನು ಕೋವಿಡ್ ಟಾಸ್ಕ್ ಪೋರ್ಸಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡ ಸರ್ಕಾರ ಮೊದಲ ಹೆಜ್ಜೆಯಲ್ಲೇ ಎಡವಿತು.

ಇನ್ನು ಸರ್ಕಾರದ ಮಂತ್ರಿಗಳಲ್ಲೇ ಕೊಂಚವೂ ಸಾಮರಸ್ಯ ಇರಲಿಲ್ಲ. ಪ್ರತೀ ಬಾರಿ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳ ಯೋಜನೆ ಮತ್ತು ಯೋಚನೆಗಳಲ್ಲಿ ತಾಳೆಯೇ ಆಗುತ್ತಿರಲಿಲ್ಲ. ಇಡೀ ಕೋವಿಡ್ ಅವಧಿಯಲ್ಲಿ ಒಂದೇ ಒಂದು ಸಣ್ಣ ನಿರ್ಧಾರವನ್ನೂ ಸರ್ಕಾರ ಸಮರ್ಪಕವಾಗಿ ತೆಗೆದುಕೊಳ್ಳಲಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳು ಜನರನ್ನು ಫೀಸಿನ ಹೆಸರಲ್ಲಿ ದೋಚುತ್ತಿದ್ದರೂ, ಸರಕಾರ ಕಣ್ಣು – ಮೂಗು – ಬಾಯಿ ಮುಚ್ಚಿಕೊಂಡು ಕುಳಿತಿತ್ತು.

ಆಮ್ಲಜನಕ ಕೊರತೆಯ ಬಗ್ಗೆ ಸರಿಯಾಗಿ ಸಿದ್ಧತೆಯನ್ನೂ ಮಾಡಲಿಲ್ಲ, ತನ್ನ ಸಂಸದರ ಮೂಲಕ ಒಕ್ಕೂಟ ಸರ್ಕಾರಕ್ಕೆ ಒತ್ತಡ ತರುವ ಕೆಲಸವನ್ನೂ ಮಾಡಲಿಲ್ಲ. ಐಸಿಯು ಬೆಡ್‌ಗಳು, ವೆಂಟಿಲೇಟರ್ ಬೆಡ್‌ಗಳ ಕೊರತೆಯ ವಿಚಾರದಲ್ಲೂ ಸರ್ಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳದೇ ಲೂಟಿಗೆ ಸಿಕ್ಕ ಅವಕಾಶದಂತೆ ವರ್ತಿಸಿತು. ಲಸಿಕೆಯ ವಿಚಾರದಲ್ಲಂತೂ ಖುದ್ದಾಗಿ ಹೈಕೋರ್ಟ್ ಕರ್ನಾಟಕ ಸರ್ಕಾರವನ್ನು ತಿವಿದು ನಿಮ್ಮ ಬಳಿ ಪ್ಲಾನ್ ಎಂಬುದು ಏನಾದರೂ ಇದೆಯೇ ಎಂದು ಕೇಳಿತು.

ಇನ್ನು ಒಕ್ಕೂಟ ಸರ್ಕಾರ ಹಾವನ್ನು ಕಂಡ ಮುಂಗುಸಿಯ ಹಾಗೆ ಸಾಧ್ಯವಾದಷ್ಟೂ ಕಿರುಕುಳವನ್ನು ಕರ್ನಾಟಕಕ್ಕೆ ಕೊಟ್ಟಿತು. ಡಬಲ್ ಇಂಜಿನ್ ಸರಕಾರ ಜನರನ್ನು ಸಾಯಲು  ಬಿಟ್ಟು ಡಬಲ್ ಧೋಖಾ ಮಾಡಿತು. ತನ್ನ ಹಕ್ಕಿನ ಪಾಲನ್ನು ಪಡೆಯಲು ಪ್ರತೀ ಬಾರಿಯೂ ಕೋರ್ಟ್ ಮುಂದೆ ನಿಲ್ಲಬೇಕಾದ ಸ್ಥಿತಿ ರಾಜ್ಯಕ್ಕೆ ಬಂತು. ಅದು ಆಮ್ಲಜನಕದ ವಿಷಯವಾಗಿರಲಿ, ಲಸಿಕೆಯ ಹಂಚಿಕೆಯಾಗಲಿ, ಅನುದಾನ, ಪರಿಹಾರಗಳಾಗಿರಲಿ ಎಲ್ಲದರಲ್ಲೂ ಒಕ್ಕೂಟ ಸರಕಾರ ನಮ್ಮ ನಾಡನ್ನು ಕೀಳಾಗಿ ಕಂಡಿತು.

ಬಹುಶಃ ಕರ್ನಾಟಕ  ಹೈಕೋರ್ಟ್ ಇಲ್ಲದೇ ಹೋಗಿದ್ದರೆ ರಾಜ್ಯದ ಕೋವಿಡ್ ರೋಗಿಗಳ ಸ್ಥಿತಿ ಊಹಿಸಲೂ ಅಸಾಧ್ಯವಾಗಿರುತ್ತಿತ್ತು.

ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಶಾಸಕ ಅಥವಾ ಸಂಸದನನ್ನು ಹೊಂದಿಲ್ಲದ ಆಮ್ ಆದ್ಮಿ ಪಕ್ಷದಂತಹ ಸಣ್ಣ ಪಕ್ಷವೊಂದು ರಾತೋರಾತ್ರಿ 42 ನುರಿತ ವೈದ್ಯರನ್ನು ಒಟ್ಟುಗೂಡಿಸಿ,   ಹಗಲೂ ರಾತ್ರಿ ಕರೆ ಸ್ವೀಕರಿಸಬಲ್ಲ ಕಾರ್ಯಕರ್ತರ ತಂಡ ರಚಿಸಿ,  24*7 ಸಹಾಯವಾಣಿಯನ್ನು ಆರಂಭಿಸಿತು. ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಆಕ್ಸಿಮೀಟರ್ ವಿತರಣೆ,  ಸುಮಾರು 16000 ಜನ ರೋಗಿಗಳಿಗೆ ಹೋಂ ಐಸೋಲೇಶನ್ ನೆರವು, ಸುಮಾರು 1300 ರೋಗಿಗಳಿಗೆ ಮನೋವೈದ್ಯರಿಂದ ಕೌನ್ಸಿಲಿಂಗ್, 3,00,000 ಕ್ಕೂ ಅಧಿಕ ಮಾಸ್ಕ್ ವಿತರಣೆ, ಅಪಾರ್ಟ್ಮೆಂಟ್‌ಗಳು, ವಸತಿ ಸಮುಚ್ಚಯಗಳು, ಮನೆಗಳು ಹಾಗೂ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಕಛೇರಿಗಳು, ಪೊಲೀಸ್ ಠಾಣೆಗಳು, ಪೊಲೀಸ್ ಚೌಕಿಗಳು ಸೇರಿದಂತೆ 18,000 ಕ್ಕೂ ಹೆಚ್ಚು ಕಡೆ ಸ್ಯಾನಿಟೈಶೇಷನ್ ಇಷ್ಟನ್ನೂ ಬರೀ ಬೆಂಗಳೂರು ನಗರವೊಂದರಲ್ಲೇ ಮಾಡಿತ್ತು. ಡಬಲ್ ಇಂಜಿನ್ ಸರಕಾರ ಏನೆಲ್ಲಾ ಮಾಡಬಹುದಿತ್ತು ಯೋಚಿಸಿ!

ಬರೀ ಆಮ್ ಆದ್ಮಿ ಪಕ್ಷ ಮಾತ್ರವಲ್ಲ, ವಿದ್ಯಾರ್ಥಿ ಸಂಘಟನೆಗಳು, ನೂರಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ರಾಜ್ಯ ಮತ್ತು ಒಕ್ಕೂಟ ಸರಕಾರ ಮಾಡುವುದಕ್ಕಿಂತಲೂ ಹೆಚ್ಚಿನ ಕೆಲಸವನ್ನು ನಾಜೂಕಾಗಿ, ಯೋಜಿತ ರೀತಿಯಲ್ಲಿ ಮಾಡಿದ್ದಾರೆ.

ಒಕ್ಕೂಟ ಸರಕಾರಕ್ಕೆ ಪೂರ್ತಿ ಎಂಟು ತಿಂಗಳ ಕಾಲಾವಕಾಶ ಇತ್ತು. ಈ ಅವಧಿಯಲ್ಲಿ ‘ಆಕ್ಸಿಜನ್ ಪ್ಲಾಂಟ್`ಗಳನ್ನು  ಅಗತ್ಯಕ್ಕೆ ಅನುಗುಣವಾಗಿ ಸ್ಥಾಪಿಸಬಹುದಿತ್ತು, ಸಾಕಷ್ಟು ಆಕ್ಸಿಜನ್ ಬೆಡ್ ಮತ್ತು ವೆಂಟಿಲೆಟರ್ ಬೆಡ್ ಸಿದ್ಧಪಡಿಸಿಟ್ಟುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಬಹುದಿತ್ತು. ಇದು ಯಾವುದನ್ನೂ ಮಾಡದೇ ಬೀದಿ ಬೀದಿಯಲ್ಲಿ ಜನ ಸಾಯುವಂತೆ ಮಾಡಿದರು. ಇದು ಸರ್ಕಾರದ ವಿಫಲತೆ ಅಲ್ಲ. ಇದು ಸರ್ಕಾರಿ ಪ್ರಾಯೋಜಿತ ಮಾರಣಹೋಮ ಅಂದರೂ ತಪ್ಪಲ್ಲ.

ಒಕ್ಕೂಟ ಸರಕಾರ ಮತ್ತು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷವು ಒಂದಿಷ್ಟೂ  ಹೊಣೆಗಾರಿಕೆಯನ್ನು ಹೊಂದದೇ ತನ್ನೆಲ್ಲಾ ವಿಫಲತೆಗಳ ಮೂಟೆಯನ್ನು ಕಾಂಗ್ರೆಸ್ ಪಕ್ಷದ ಮೇಲೆ ಹಾಕಿಬಿಟ್ಟಿತು. ಬಾಲಕ್ಕೆ ಬೆಂಕಿ ಹಚ್ಚಿಸಿಕೊಂಡ ಕುನ್ನಿಯಾದರೂ ಪ್ರತಿರೋಧ ತೋರುತ್ತದೆ, ಪಾಪ ಕಾಂಗ್ರೆಸ್ ಪಕ್ಷಕ್ಕೆ ಆ ಶಕ್ತಿಯೂ ಇಲ್ಲ.

ಮುಂದೆ ಬರಬಹುದಾದ ಮೂರನೇ ಕೋವಿಡ್ ಅಲೆಗೆ ಅರವಿಂದ್ ಕೇಜ್ರಿವಾಲರ ಸರಕಾರ ಈಗಾಗಲೇ ಸಿದ್ದತೆ ಆರಂಭಿಸಿದೆ. ಪೇಡಿಯಾಟ್ರಿಸ್ಟ್‌ಗಳ ತಂಡ ರಚಿಸಿ ಮಕ್ಕಳ ಐಸಿಯೂಗಳ, ವೆಂಟಿಲೇಟರ್ ಗಳ ನಿರ್ಮಾಣ ಆರಂಭಿಸಿದೆ. ಮಕ್ಕಳಿಗೆ ಆದಷ್ಟೂ ಬೇಗ ಲಸಿಕೆ ಹಾಕಿಸುವ ಸಿದ್ಧತೆ ಮಾಡುತ್ತಿದೆ. ಆದರೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ಈಗಲೂ ಮುಂಬರುವ ದಿನಗಳ ಬಗ್ಗೆ ಚಿಂತೆ ಇದ್ದಂತೆ ಕಾಣುತ್ತಿಲ್ಲ.

ಈ ಕೋವಿಡ್ ಮಹಾಮಾರಿಯ ಅವಧಿಯಲ್ಲಿ ಒಕ್ಕೂಟ ಸರಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಒಂದು ಪಾಠವನ್ನಂತೂ ಕಲಿಯಬಹುದು. ಅದೇನೆಂದರೆ “ಸರ್ಕಾರಗಳು ಯಾವ ರೀತಿ ಸಾಂಕ್ರಾಮಿಕ ರೋಗಗಳನ್ನು ಎದುರಿಸಬಾರದು” ಅಂತ.

ದರ್ಶನ್ ಜೈನ್

(ದರ್ಶನ್ ಜೈನ್ ಸಾಮಾಜಿಕ ಕಾರ್ಯಕರ್ತರು ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಗಳು)


ಇದನ್ನೂ ಓದಿ: ಬಿಬಿಎಂಪಿ ಗೆದ್ದರೆ ದೆಹಲಿ ಮಾದರಿಯ ’ಮೊಹಲ್ಲಾ ಕ್ಲಿನಿಕ್’ ಆರಂಭ: ಆಮ್ ಆದ್ಮಿ ಪಕ್ಷ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಬಿಕ್ಕಟ್ಟು| ’10 ಅಂಶಗಳ ಪ್ರಸ್ತಾವನೆಯ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ’: ‘ಕದನ ವಿರಾಮ’ದ ಮರುದಿನ ಇರಾನ್ ಹೇಳಿಕೆ

ಮಂಗಳವಾರ ಒಪ್ಪಿಕೊಂಡ ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ ಗಾಲಿಬಾಫ್ ಬುಧವಾರ ಆರೋಪಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ  X ನಲ್ಲಿ ಈಬರೆದಿರುವ ಗಾಲಿಬಾಫ್, ಅಮೆರಿಕದ ಬಗ್ಗೆ...

ಬಂಗಾಳ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್‌ಜಿ-ಕರ್ ಸಂತ್ರಸ್ತೆ ತಾಯಿ

ಕರ್ತವ್ಯದಲ್ಲಿರುವಾಗಲೇ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಆರ್‌ಜಿಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಪಾಣಿಹತಿಯ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ...

‘ಮುಸ್ಲಿಮರನ್ನು ಮರುಳು ಮಾಡುವುದು ಸುಲಭ’: ಹುಮಾಯೂನ್ ಕಬೀರ್ ವಿಡಿಯೋ ವಿವಾದ: ತನಿಖೆಗೆ ಟಿಎಂಸಿ ಒತ್ತಾಯ

ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾಜಕೀಯ ವಿವಾದ ಭುಗಿಲೆದ್ದಿದ್ದು, ಹುಮಾಯೂನ್ ಕಬೀರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...

ಲೆಬನಾನ್ ಮೇಲೆ ‘ಅಗತ್ಯವಿರುವಲ್ಲೆಲ್ಲಾ’ ದಾಳಿ ಮುಂದುವರಿಸುವುದಾಗಿ ಘೋಷಿಸಿದ ನೆತನ್ಯಾಹು; ಹಿಜ್ಬೊಲ್ಲಾದ ಉನ್ನತ ಅಧಿಕಾರಿ ಹತ್ಯೆ 

ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡಿದ ಮರುದಿನ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮೇಲೆ "ಅಗತ್ಯವಿರುವಲ್ಲೆಲ್ಲಾ" ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇಸ್ರೇಲಿ ಸೇನೆಯು ಗುರುವಾರ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು...

ಬಾರಾಮತಿ ಉಪ ಚುನಾವಣಾ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ; ಸುನೇತ್ರಾ ಪವಾರ್ ಗೆಲುವು ಖಚಿತ

ಬಾರಾಮತಿ ಕ್ಷೇತ್ರದ ಉಪಚುನಾವಣಾ ಕಣದಿಂದ ಕಾಂಗ್ರೆಸ್ ಪಕ್ಷ ಹಿಂದೆ ಸರಿದ ಕಾರಣ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಗೆಲುವು ಖಚಿತವಾಗಿದೆ. ಬಾರಾಮತಿ ವಿಮಾನ ದುರಂತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್...

ಗಿಗ್ ಕಾರ್ಮಿಕರ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ

ದಾಖಲೆರಹಿತ ವಲಸಿಗರ ಒಳನುಸುಳುವಿಕೆ ಆರೋಪದ ರಾಜಕೀಯ ವಿವಾದದ ನಡುವೆ, ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ (ಎಂಎಂಆರ್‌) ಲಕ್ಷಾಂತರ ಗಿಗ್ ಮತ್ತು ವಿತರಣಾ ಕಾರ್ಮಿಕರಿಗೆ ಕಠಿಣ, ಕಡ್ಡಾಯ ಪರಿಶೀಲನಾ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ...

ಪಶ್ಚಿಮ ಬಂಗಾಳ| ಎಸ್‌ಐಆರ್‌ ತೀರ್ಪಿನ ನಂತರ ಒಂದೇ ಗ್ರಾಮದ 3,700 ಹೆಸರುಗಳು ಡಿಲೀಟ್!

ಪಶ್ಚಿಮ ಬಂಗಾಳದ ಮಾಲ್ಡಾದ ಹಳ್ಳಿಯೊಂದರ ಸುಮಾರು 4,000 ಮತದಾರರ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಮೊದಲ ಹಂತದ ಮತದಾರರ ಪಟ್ಟಿ ಈಗಾಗಲೇ ಸ್ಥಗಿತಗೊಂಡಿದ್ದು, ಇದರಿಂದಾಗಿ ಅವರು ರಾಜ್ಯಾದ್ಯಂತ ಲಕ್ಷಾಂತರ ಜನರಂತೆ ಏಪ್ರಿಲ್ 23 ರಂದು...

ದಲಿತ ಯುವಕನ ಕಸ್ಟಡಿ ಸಾವು ಆರೋಪ : ರಾಜ್ಯ ಸರ್ಕಾರ, ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಕರ್ನಾಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ (ಏ.8) ರಾಜ್ಯ ಸರ್ಕಾರ, ಪೊಲೀಸರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ...

ಇಬ್ಬರು ಮಕ್ಕಳ ಸಾವಿನ ಬಳಿಕ ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು ಪ್ರಯೋಗಿಸಿದ ಪೊಲೀಸರು

ಏಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ನಂತರ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಕಾರಣ ಬುಧವಾರ (ಏಪ್ರಿಲ್ 8) ಮಣಿಪುರದಾದ್ಯಂತ ಉದ್ವಿಗ್ನತೆ ಉಂಟಾಗಿತ್ತು....

ಮತಕ್ಕಾಗಿ ನಗದು ಪ್ರಕರಣ: ಪಾಲಕ್ಕಾಡ್‌ನಲ್ಲಿ ಎನ್‌ಡಿಎ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಮತದಾನದ ಒಂದು ದಿನಕ್ಕೆ ಮುಂಚಿತವಾಗಿ ಮತದಾರರಿಗೆ ಲಂಚ ನೀಡಿದ ಆರೋಪದ ಮೇಲೆ ಪಾಲಕ್ಕಾಡ್ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿನಿಧಿಗಳ ವಿರುದ್ಧ ಬುಧವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 8 ರಂದು ಬೆಳಿಗ್ಗೆ 10...