ಉತ್ತರ ಪ್ರದೇಶದ ಸಂಭಾಲ್ನಲ್ಲಿ ಕಿಕ್ಕಿರಿದು ಸೇರಿರುವ ದೊಡ್ಡ ಕೂಟವೊಂದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಲಪಂಥೀಯ ಟ್ವಿಟರ್ ಬಳಕೆದಾರರು ಕೊರೊನಾ ಮಾರ್ಗಸೂಚಿಗಳನ್ನು ಮೀರಿ ರಂಝಾನ್ ಆಚರಣೆಗೆ ಜನರು ಸೇರಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸುತ್ತಿದ್ದಾರೆ.
2021 ರ ಏಪ್ರಿಲ್ 16 ರಂದು ನಿಧನರಾದ ಸ್ಥಳೀಯ ಧರ್ಮಗುರು ಮೌಲಾನಾ ಅಬ್ದುಲ್ ಮೊಮಿನ್ ನದ್ವಿ ಅವರ ಅಂತ್ಯಕ್ರಿಯೆಯ ಮೆರವಣಿಗೆ ಸಂಭಾಲ್ನ ಮದರಸಾ ಅಂಜುಮಾನ್ ಮುಯಿನುಲ್ ಇಸ್ಲಾಂನಲ್ಲಿ ಜನರು ನೆರೆದಿರುವುದನ್ನು ತೋರಿಸುವ ವಿಡಿಯೊ ಇದಾಗಿದೆ.
ಮದರಸ ಮತ್ತು ಅದರ ಸುತ್ತಲೂ ಚಿತ್ರೀಕರಿಸಿದ ವಿಡಿಯೋವನ್ನು, ಹರಿದ್ವಾರದ ಕುಂಭಮೇಳಕ್ಕೆ ಹೋಲಿಕೆ ಮಾಡಿರುವ ನೆಟ್ಟಿಗರು, ಕೊರೊನಾ ಎರಡನೇ ಅಲೆಯ ಕಾರಣಕ್ಕೆ ದೇಶವು ತೀವ್ರ ಹಿನ್ನಡೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಸಭೆ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಉಲ್ಬಣ: ಖಾಸಗಿ ಜೆಟ್ಗಳ ಮೂಲಕ ವಿದೇಶಕ್ಕೆ ಹಾರುತ್ತಿರುವ ಭಾರತದ ಅತಿ ಸಿರಿವಂತರು!
ಉತ್ತರ ಪ್ರದೇಶ ಸರ್ಕಾರವು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕಾರಣಕ್ಕೆ ಘೋಷಿಸಿದ ಇತ್ತೀಚಿನ ನಿರ್ಬಂಧಗಳ ಪ್ರಕಾರ, ಶವಸಂಸ್ಕಾರ ಅಥವಾ ಸಮಾಧಿ ಸ್ಥಳಗಳಲ್ಲಿ ಅಂತ್ಯಕ್ರಿಯೆಯ ಸಮಯದಲ್ಲಿ 20 ಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರುವಂತಿಲ್ಲ.
ಇದೇ ವಿಡಿಯೊ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್, “ಕುಂಭಮೇಳದ ನಂತರ ….ಗೌರವಾನ್ವಿತ ಪ್ರಧಾನಿಯವರೆ, ದಯವಿಟ್ಟು ರಂಜಾನ್ ಸಭೆಯನ್ನು ಕೂಡಾ ನಿಲ್ಲಿಸುವಂತೆ ವಿನಂತಿಸುತ್ತೇನೆ” ಎಂದು ಬರೆದು ಕೊಂಡಿದ್ದಾರೆ. ಆದರೆ ಈ ಟ್ವೀಟನ್ನು ಅವರು ಡಿಲಿಟ್ ಮಾಡಿದ್ದಾರೆ. ಅವರ ಟ್ವೀಟ್ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: ಅರ್ಹರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹ
“ವೈರಲ್ ವೀಡಿಯೊದಲ್ಲಿ ನೋಡಿದ ಜನಸಮೂಹವು, ಸಂಭಾಲ್ನ ನಖಾಸ್ ಪ್ರದೇಶದಲ್ಲಿನ ಅಂಜುಮಾನ್ ಮುಯಿನುಲ್ ಇಸ್ಲಾಂ ಮದ್ರಸದಲ್ಲಿ ಸೇರಿದ ಜನ ಸಮೂಹವಾಗಿದೆ” ಎಂದು ಸಂಭಾಲ್ ನಿವಾಸಿ ಶಾನ್ ಅವರು ತಿಳಿಸಿದ್ದಾರೆಂದು ಭೂಮ್ಲೈವ್ ವರದಿ ಮಾಡಿದೆ. ಮೌಲಾನಾ ಅಬ್ದುಲ್ ಮೊಮಿನ್ ನದ್ವಿ ಅವರು ಸಂಭಾಲ್ನಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯ ಪ್ರಾರ್ಥನೆಗಾಗಿ ಈ ಜನರು ಸೇರಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಮೆರವಣಿಗೆಯ ಇತರ ತುಣುಕುಗಳು ಫೇಸ್ಬುಕ್ನಲ್ಲಿ ನೋಡಬಹುದಾಗಿದೆ. ವಿಡಿಯೊದಲ್ಲಿ ಅಂಜುಮಾನ್ ಮುಯಿನುಲ್ ಇಸ್ಲಾಂ ಮದರಸಾದ ಹಿನ್ನಲೆಯನ್ನು ಕೂಡಾ ನೋಡಬಹುದಾಗಿದೆ.
“ಮೌಲಾನಾ ನದ್ವಿ ಬಹಳ ಪ್ರಭಾವಿತ ವ್ಯಕ್ತಿ. ಅನೇಕ ಜನರು ಅವರ ಅಭಿಮಾನಿಗಳಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜನರು ದೂರದಿಂದ ಬಂದಿದ್ದರು. ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ನಾವು ನಿರಂತರವಾಗಿ ಜನರಿಗೆ ಮನವಿ ಮಾಡುತ್ತಿದ್ದೆವು. ಜೊತೆಗೆ ನಾವು ಪ್ರದೇಶವನ್ನು ಸ್ಯಾನಿಟೈಝ್ ಕೂಡಾ ಮಾಡುತ್ತಿದ್ದೆವು” ಎಂದು ಮದರಸಾ ಸಂಬಂಧಿತ ವ್ಯಕ್ತಿಯಾದ ಜೈದ್ ನೋಮಾನಿ ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ದೇಶಾದ್ಯಂತ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ವಿಳಂಬಕ್ಕೆ ಮೋದಿ ಸರ್ಕಾರವೇ ಕಾರಣ ಹೊರತು ರಾಜ್ಯಗಳಲ್ಲ
“ಆದರೆ ಅಂತಹ ಜನಸಮೂಹವನ್ನು ನಿರ್ವಹಿಸುವುದು ಮತ್ತು ನಿಯಂತ್ರಿಸುವುದು ನಮಗೆ ತುಂಬಾ ಕಷ್ಟಕರವಾಗಿತ್ತು. ಆದಾಗ್ಯೂ, ದಫನ ಭೂಮಿಯನ್ನು ತಲುಪಲು ಮತ್ತು ಅಂತ್ಯಕ್ರಿಯೆಯನ್ನು ಪೂರೈಸಲು ನಾವು ಸರಪಣಿಯನ್ನು ಮಾಡಿಕೊಂಡೆವು. ಅಲ್ಲದೆ ಪೊಲೀಸ್ ಆಡಳಿತದ ಕಡೆಯಿಂದ ನಮಗೆ ಯಾವುದೇ ನಿರ್ದಿಷ್ಟ ಸೂಚನೆಗಳು ಸಿಗಲಿಲ್ಲ. ನಾವು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲು ಪ್ರಯತ್ನಿಸಿದ್ದೇವೆ ಆದರೆ ಜನಸಂದಣಿಯನ್ನು ನಿಯಂತ್ರಿಸುವುದು ಸುಲಭವಲ್ಲ” ಎಂದು ಅವರು ಹೇಳಿದ್ದಾರೆ.
ಮೌಲಾನಾ ನಿಧನರಾಗಿದ್ದಾರೆ ಎಂದು ಅವರ ಹೆಸರಲ್ಲಿ ಇರುವ ಫೇಸ್ಬುಕ್ ಪೇಜೊಂದು, ಏಪ್ರಿಲ್ 16, 2021 ರಂದು ಘೋಷಿಸಿತ್ತು.
ವಿಡಿಯೊದಲ್ಲಿ ಇರುವುದು ಅಂತ್ಯಕ್ರಿಯೆಯ ಮೆರವಣಿಗೆ ಎಂದು ಸಂಭಾಲ್ ಪೊಲೀಸರು ದೃಡಪಡಿಸಿದ್ದಾರೆ. ಆದರೆ ಸಭೆ ಸೇರಲು ಅನುಮತಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಕೇಶ್ವರರ ‘ನಿಂಬೆ’ ಸಲಹೆ ಪಾಲಿಸಿ ಎಂದ ಬಿಜೆಪಿ ಸಂಸದ; ಅವೈಜ್ಞಾನಿಕತೆ ಹರಡುತ್ತಿದ್ದಾರೆಂದು ಆಕ್ರೋಶ


