Homeಕರ್ನಾಟಕ’ಪ್ರಜಾಭಾರತ’ ದನಿ ಅಡಗಿಸಲು ಸಂಚು; ಹೊರಾಟಗಾರ ಪತ್ರಕರ್ತ ಕೆ. ದೀಪಕ್ ಮೇಲೆ FIR

’ಪ್ರಜಾಭಾರತ’ ದನಿ ಅಡಗಿಸಲು ಸಂಚು; ಹೊರಾಟಗಾರ ಪತ್ರಕರ್ತ ಕೆ. ದೀಪಕ್ ಮೇಲೆ FIR

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೈಸೂರಿನ "ಪ್ರಜಾಭಾರತ" ಸುದ್ದಿವಾಹಿನಿಯು "ಮತಭಾರತ" ಎಂಬ ಸರಣಿ ಸಂಚಿಕೆಯೊಂದರಲ್ಲಿ "ಬಿಜೆಪಿ ಮಿಷನ್:360-ಭಾರತಕ್ಕೆ ಆಪತ್ತು" ಎಂಬ ಪ್ರಸಾರ ಮಾಡಿತ್ತು.

- Advertisement -
- Advertisement -

ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲಾ ಕೈ ವಶಮಾಡಿಕೊಂಡಿರುವ “ಭಕ್ತರ ಫ್ರಭುತ್ವ” ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಫ್ಯಾಸಿಸಂ ಧೋರಣೆಯನ್ನು ಮುಂದುವರೆಸಿದೆ.

ತನ್ನ ಸುಳ್ಳುಗಳನ್ನು, ಮತೋನ್ಮತ್ತ ಕ್ರೌರ್ಯವನ್ನು ಖಂಡಿಸುವ, ಅದೇ ಕಾಲಕ್ಕೆ ಸತ್ಯವನ್ನು ಜನರ ಮುಂದಿಡುವ ಯಾರೊಬ್ಬರನ್ನೂ ಸಹಿಸಿಕೊಳ್ಳದ ಬಿಜೆಪಿ ರಾಜ್ಯದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಕೆಲಸಕ್ಕೆ ಕೈ ಹಾಕಿರುವ ಮತ್ತೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಬಯಲಾಗಿದೆ.

ಇದನ್ನೂ ಓದಿ: 2019ರಲ್ಲಿ ದಿಟ್ಟವಾಗಿ ಧ್ವನಿಯೆತ್ತಿದ 10 ಪತ್ರಕರ್ತೆಯರ ಕುರಿತು

ಮೈಸೂರಿನ ಹಿರಿಯ ಪತ್ರಕರ್ತ ‘ಪ್ರಜಾಭಾರತ’ ಸುದ್ದಿವಾಹಿನಿಯ ಸಂಪಾದಕ ಕೆ. ದೀಪಕ್ ವಿರುದ್ಧ ಬಿಜೆಪಿಯ ರಾಜ್ಯ ಜಂಟೀ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ಎಂಬುವರು ಸದ್ದಿಲ್ಲದೆ ಪೊಲೀಸ್ ದೂರು ದಾಖಲಿಸಿ ದೀಪಕ್ ಅವರನ್ನು ಜೈಲಿಗೆ ನೂಕುವ ಷಡ್ಯಂತ್ರ ದೀಪಕ್ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ವಿಫಲವಾಗಿದೆ.

ದೀಪಕ್ ಮಾಡಿದ ಅಪರಾಧವಾದರೂ ಏನು ಗೊತ್ತಾ?

ಕಳೆದ 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿನ “ಪ್ರಜಾಭಾರತ” ಸುದ್ದಿವಾಹಿನಿಯು  “ಮತಭಾರತ” ಎಂಬ ಸರಣಿ ಸಂಚಿಕೆಯೊಂದರಲ್ಲಿ “ಬಿಜೆಪಿ ಮಿಷನ್:360-ಭಾರತಕ್ಕೆ ಆಪತ್ತು” ಪ್ರಸಾರ ಮಾಡಿದ್ದು. ಬಿಜೆಪಿಯ ಸಂವಿಧಾನ ವಿರೋಧಿ ಆಡಳಿತವನ್ನು ಎಳೆ ಎಳೆಯಾಗಿ ವಿಶ್ಲೇಷಿಸಲಾಗಿತ್ತು.

ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಮೈಸೂರಿನ ಪ್ರಜಾಭಾರತ ಸುದ್ದಿವಾಹಿನಿ ಸಂಪಾದಕ ಕೆ.ದೀಪಕ್ ವಿರುದ್ಧ ಕೋಮು ಸೌಹಾರ್ದ ಕದಡುವ ಸಂಚು ನಡೆಸಿದ ಆರೋಪ ಹೊರಿಸಿ ಬಿಜೆಪಿ ರಾಜ್ಯ ಜಂಟೀ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರಿಯಾ ಜೊತೆ ಮಾಧ್ಯಮಗಳ ದುರ್ವತನೆ: ಕೊನೆಗೂ ಎಚ್ಚೆತ್ತ ಮುಂಬೈ ಪೊಲೀಸರು

ಸದ್ದಿಲ್ಲದೆ ಎಫ್‌ಐಅರ್ (ಐಪಿಸಿ 504, 505, 153 ಎ) ದಾಖಲಾಗಿದ್ದು, 17 ತಿಂಗಳ ನಂತರ ದೀಪಕ್ ಅವರನ್ನು ಬಂಧಿಸಿ ಜೈಲಿಗೆ ನೂಕುವಂತೆ ಪೊಲೀಸರಿಗೆ ತೀವ್ರ ಒತ್ತಡಗಳನ್ನು ಹೇರಲಾಗಿತ್ತು. ದೀಪಕ್ ನಿರೀಕ್ಷಣಾ ಜಾಮೀನು ಪಡೆದು ಬಿಜೆಪಿಯ ಷಡ್ಯಂತ್ರವನ್ನು ವಿಫಲಗೊಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜಾಭಾರತ ಸುದ್ದಿವಾಹಿನಿ ಮತಭಾರತ ಸರಣಿಯಲ್ಲಿ ಕೇಂದ್ರದ ಮೋದಿ ಸರ್ಕಾರದ ವೈಫಲ್ಯ, ಸಮುದಾಯ ವಿರೋಧಿತನಗಳನ್ನು ಬಯಲಿಗೆಳೆಯುತ್ತಾ ಬಂದಿದ್ದರು. ಮೈಸೂರಿನ ಸಂಸದ ಪ್ರತಾಪ ಸಿಂಹ ಅವರ ಲೈಂಗಿಕ ಹಗರಣವನ್ನು ಸ್ಪೋಟಿಸಿದ್ದರು. ಇದೇ ಸೇಡಿಗೆ ದೀಪಕ್ ವಿರುದ್ಧ ಬೆಂಗಳೂರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ದೂರು ದಾಖಲಾದದ್ದು ದೀಪಕ್ ಅವರಿಗೆ ತಿಳಿಯಲು 17 ತಿಂಗಳೇ ಬೇಕಾಯಿತು!. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದಂತೆ ದೀಪಕ್ ವಿರುದ್ಧ ಕೇಸು ದಾಖಲಾಗಿರುವುದು ಬೆಳಕಿಗೆ ಬಂದಿದ್ದು. ಅವರನ್ನು ಬಂಧಿಸಿಯೇ ತೀರಬೇಕೆಂಬ ಒತ್ತಡಗಳು ಪೊಲೀಸರ ಮೇಲಿತ್ತು.

ಪತ್ರಕರ್ತ ದೀಪಕ್ ಅವರನ್ನು ಜೈಲಿಗೆ ನೂಕಿ ಭಯಪಡಿಸಿ ಬಾಯಿ ಮುಚ್ಚಿಸುವ ಪ್ರತಾಪಸಿಂಹನ ಕೇಡಿ ಕೃತ್ಯ ಸದ್ಯಕ್ಕೆ ಈಡೇರಿಲ್ಲ.

ಕೆ.ದೀಪಕ್ ಕಳೆದ 21 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಅವರೋರ್ವ ಜರ್ನಲಿಸ್ಟ್ ಆ್ಯಕ್ಟ್ವೀಸ್ಟ್. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿಹೊತ್ತಿಗೆಯಾಗಿದ್ದ ಮೈಸೂರಿನ ‘ಸಾಧ್ವಿ’ ಪತ್ರಿಕೆಯ ಮೂಲಕ ಪರ್ತಕರ್ತ ಬದುಕು ಕಟ್ಟಿಕೊಂಡ ದೀಪಕ್ ‘ವಿಜಯ’, ಸೂರ್ಯೋದಯ, ಪ್ರಜಾನುಡಿ, ಸಂಜೆವಾಣಿ, ವಾರ್ತಾಭಾರತಿ ಪತ್ರಿಕೆಗಳು ಸೇರಿದಂತೆ ದೃಶ್ಯಮಾಧ್ಯಮಗಳಲ್ಲೂ ವೃತ್ತಿಪರ ಪತ್ರಕರ್ತನಾಗಿಯೂ ಅದೇ ಕಾಲಕ್ಕೆ ಬುದ್ದ, ಬಸವ, ಅಂಬೇಡ್ಕರ್ ಪ್ರೇಣಿತ ವೈಚಾರಿಕ ಚಿಂತನೆಗಳೊಂದಿಗೆ ಸಾಮಾಜಿಕ ಚಳವಳಿಗಳ ಜೊತೆ ಹೆಜ್ಜೆ ಹಾಕುತಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ದೀಪಕ್ ಹಾಲಿ ಮೈಸೂರು ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ಪತ್ರಕರ್ತರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ.

ಬಿಜೆಪಿ ಯಾರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹಿಸಿಕೊಳ್ಳದು ಎಂಬುದಕ್ಕೆ ಅನೇಕ ನಿದರ್ಶನಗಳು ಮತ್ತೆ ಮತ್ತೆ ಬಯಲಾಗುತ್ತಲೆ ಇವೆ.

ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ

ಪ್ರಶ್ನಿಸುವ ಪತ್ರಕರ್ತರನ್ನು, ಸಾಹಿತಿ- ಬರಹಗಾರರನ್ನ, ವಿಮರ್ಶಕರನ್ನು, ಸೈದ್ಧಾಂತಿಕ ವಿರೋಧಿಗಳಿಗೆ ದೇಶದ್ರೋಹಿ ಎಂಬ  ಹಣೆ ಪಟ್ಟಿ ಕಟ್ಟಿ ದಮನ ಮಾಡುವ ಮತ್ತು ವಿಚಾರ ಸಂಘರ್ಷದ ಮೂಲಕ  ಎದುರುಗೊಳ್ಳಲಾರದ ಮನುವಾದಿ ಪ್ರೇಣಿತ ಬಿಜೆಪಿ ಮತ್ತದರ ಸಂತತಿಗಳು ಕಾನೂನು ದುರ್ಬಳಕೆ ಮಾಡಿಕೊಂಡೊ ಇಲ್ಲವೆ ಇನ್ನಾವುದಾದರೂ ದಾರಿಯಲ್ಲಿ ಹತ್ತಿಕ್ಕುವ ಕುಕೃತ್ಯಗಳು ಮುಂದುವರೆದಿವೆ.

ಪತ್ರಕರ್ತ ದೀಪಕ್ ವಿರುದ್ಧ ಕೇಸು ದಾಖಲಿಸಿದ ಬಿಜೆಪಿ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕಾರಿಯಾದದ್ದು ಎಂದು ಪತ್ರಕರ್ತರ ಸಮೂಹ ತೀವ್ರ‌ಖಂಡನೆ ವ್ಯಕ್ತಪಡಿಸಿದೆ.

“ನನ್ನ ಮೇಲೆ ಇಂತಹ ಹತ್ತಾರು ಕೇಸು ಹಾಕಿದರೂ ಸತ್ಯ ಹೇಳುವ ನನ್ನ ದನಿಯನ್ನು ಅಡಗಿಸಲಾಗದು. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದ ಹಕ್ಕನ್ನು ಹತ್ತಿಕ್ಕುವ ಯಾವುದೇ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ.”

ಕೆ.ದೀಪಕ್

ವಿಡಿಯೋ ನೋಡಿ:ಮಾಧ್ಯಮಗಳು ಸೃಷ್ಟಿಸಿರುವ ಸಾವಿನ ಬಾವಿ – ಡಾ.ವಾಸು ಎಚ್‌.ವಿ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...