Homeಮುಖಪುಟನೂಹ್ ಹಿಂಸಾಚಾರದ ಐದು ಅರ್ಧಸತ್ಯಗಳು

ನೂಹ್ ಹಿಂಸಾಚಾರದ ಐದು ಅರ್ಧಸತ್ಯಗಳು

- Advertisement -
- Advertisement -

“ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದ ಹಿಂದೂ ಭಕ್ತಾದಿಗಳ ಮೇಲೆ ಮುಸ್ಲಿಂ ದಂಗೆಕೋರರಿಂದ ಸಂಯೋಜಿತ ದಾಳಿ… ಎರಡು ಸಮುದಾಯಗಳ ಸಂಘರ್ಷದ ಮುಂದೆ ಅಸಹಾಯಕರಾದ ಪೊಲೀಸರು”- ಜುಲೈ 31ರ ಸಂಜೆ ನೂಹ್‌ನ ಈ ಸುದ್ದಿಗಳನ್ನು ನೋಡಿ ನನ್ನ ಚಿಂತೆ ಎಲ್ಲೆಮೀರಿತ್ತು. ಕಳೆದ ಇಪ್ಪತ್ತರೆಡು ವರ್ಷಗಳಿಂದ ಹರಿಯಾಣದ ಮೇವಾತ್ ಪ್ರದೇಶದೊಂದಿಗೆ ನನ್ನ ನಿಕಟ ಸಂಬಂಧವಿದೆ. ಮಾರನೆಯ ದಿನ ಆಗಸ್ಟ್ 1ರಂದೇ ನಾನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಯ ಮುಖ್ಯಾಲಯ ನೂಹ್ ತಲುಪಿದೆ. ಅಲ್ಲಿ ಡಿಸಿ ಮತ್ತು ಎಸ್‌ಪಿ ಅವರನ್ನು ಭೇಟಿಯಾದೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟೆ, ಹಿಂಸಾಚಾರಕ್ಕೆ ಬಲಿಯಾದ ಕೆಲವು ಸಂತ್ರಸ್ತರನ್ನು ಭೇಟಿಯಾದೆ ಹಾಗೂ ಅನೇಕ ಪ್ರತ್ಯಕ್ಷ ಸಾಕ್ಷಿಗಳನ್ನು ಕಂಡೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ವಿದೇವ್ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದೆ, ಮಾಧ್ಯಮಗಳು ಮತ್ತು ಕೇವಲ ಸ್ವಾರ್ಥಕ್ಕಾಗಿ ಹರಡಿಸಲಾಗುತ್ತಿದ್ದ ಪ್ರೊಪಗಾಂಡಾಗಳನ್ನು ಕೇಳುತ್ತಿದ್ದೆ. ಒಟ್ಟಾರೆಯಾಗಿ ದೇಶದ ಎದುರಿಗೆ ಅರ್ಧಸತ್ಯಗಳಿಂದ ಕೂಡಿದ ಒಂದು ಭ್ರಮಾತ್ಮಕ ಚಿತ್ರಣವನ್ನು ರಚಿಸಲಾಗುತ್ತಿದೆ, ಅದು ರಾಷ್ಟ್ರೀಯ ಏಕತೆಗೆ ಮಾರಕವಾಗಿದೆ. ಹಾಗಾಗಿ, ಈ ಘಟನೆ ಮತ್ತು ಇದರ ಸಂದರ್ಭದ ಸಂಪೂರ್ಣ ಸತ್ಯವನ್ನು ದೇಶದ ಮುಂದೆ ಇಡುವುದು ಅತ್ಯವಶ್ಯಕವಾಗಿದೆ.

ಅರ್ಧಸತ್ಯ #1: “ಇದು ಮುಸ್ಲಿಂ ದಂಗೆಕೋರರು ಮಾಡಿದ ಸಂಯೋಜಿತ ದಾಳಿ”. ಹೌದು, ಕಲ್ಲು ಎಸೆತ ಮತ್ತು ಹಿಂಸೆಯ ಆರಂಭವು ಮುಸ್ಲಿಂ ಗುಂಪುಗಳಿಂದ ಆಗಿತ್ತು. ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯ ನೈತಿಕ ಹೊಣೆಗಾರಿಕೆ ಮುಸ್ಲಿಂ ಸಮುದಾಯದ್ದಾಗಿರುತ್ತೆ ಎಂಬುದೂ ಸತ್ಯ. ಆದರೆ, ಅಪರಾಧಿಗಳನ್ನು ಗುರುತಿಸುವ ಈ ಕಥನದಲ್ಲಿ ಅನೇಕ ಸುಳ್ಳುಗಳು ಅಡಗಿವೆ. ಮೊದಲನೆಯದು, ಈ ಕಥಾನಕವು ಕೆಲವೇ ಕೆಲವು ಮುಸ್ಲಿಂ ಗೂಂಡಾಗಳ ಕುಕೃತ್ಯದ ಹೊಣೆಗಾರಿಕೆಯನ್ನು ಇಡೀ ಮುಸ್ಲಿಂ ಸಮುದಾಯದ ಮೇಲೆ ಹಾಕುತ್ತದೆ. ಇದನ್ನು ಒಂದುವೇಳೆ ಒಪ್ಪಿಕೊಳ್ಳಬೇಕೆಂದರೆ, ಗುರುಗಾಂವದಲ್ಲಿ ಮಸೀದಿಯ ಮೇಲೆ ಆದ ದಾಳಿ ಮತ್ತು ಅದರ ಮೌಲ್ವಿಯ ಕೊಲೆಯ ಹೊಣೆಗಾರಿಕೆಯನ್ನು ಹಿಂದೂ ಸಮುದಾಯದ ಮೇಲೆ ಹಾಕಬಹುದೇ? ಎರಡನೆಯದಾಗಿ, ಇಷ್ಟು ದೊಡ್ಡ ಪ್ರಮಾಣದ ಹಿಂಸೆ ಯಾವುದೇ ರೀತಿಯ ಸಿದ್ಧತೆಯಿಲ್ಲದೇ ಆಗಲು ಸಾಧ್ಯವಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ, ಆದರೆ ಇದರಲ್ಲಿ ಯಾವುದೇ ಸಂಘಟನೆಯ ಕೈವಾಡ ಇರುವುದಕ್ಕೆ ಯಾವ ಪ್ರಮಾಣಗಳೂ ಇಲ್ಲ. ಮೂರನೆಯದಾಗಿ, ಈ ಕಥಾನಕ ಒಂದು ಸತ್ಯವನ್ನು ಮರೆಮಾಚುತ್ತದೆ, ಅದೇನೆಂದರೆ, ದಾಳಿಯನ್ನು ಆರಂಭಿಸುವವರು ಮುಸಲ್ಮಾನರಾಗಿದ್ದಾಗ, ನೂಹ್‌ನ ಮ್ಯಾಜಿಸ್ಟ್ರೇಟ್, ಭಾದಸ ಗ್ರಾಮದ ಗುರುಕಲು ಹಾಗೂ ಬಡಕಲಿ ಚೌಕಿನ ಹಿಂದೂ ವ್ಯಾಪಾರಿಗಳನ್ನು ರಕ್ಷಿಸುವವರೂ ಮುಸಲ್ಮಾನರೇ ಆಗಿದ್ದರು ಎಂಬುದು.

ಮಮತಾ ಸಿಂಗ್

ಅರ್ಧಸತ್ಯ #2: “ಈ ಹಿಂಸಾಚಾರದ ಬಲಿಪಶುಗಳು ಒಂದು ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಭಕ್ತಾದಿಗಳು.”- ಈ ಹಿಂಸಾಚಾರದ ಬಲಿಪಶುಗಳನ್ನು ಗುರುತಿಸುವ ಈ ಕಥಾನಕವೂ ಅರ್ಧಸತ್ಯವಾಗಿದೆ. ನಲಹಡನ ಶಿವ ಮಂದಿರದ ಪರಂಪರೆಯ ಅನುಗುಣವಾಗಿ ಈ ಯಾತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಸ್ವಾಭಾವಿಕವಾಗಿಯೇ ಅವರ್‍ಯಾರೂ ದಂಗೆ ಮಾಡಲು ಬಂದಿದ್ದಿಲ್ಲ. ಆರಂಭಿಕ ಹಿಂಸಾಚಾರದ ಬಲಿಪಶುಗಳು ಬಹುತೇಕರು ಹಿಂದೂಗಳೇ ಆಗಿದ್ದರು ಎಂಬುದು ಸತ್ಯವಾಗಿದೆ. ಆದರೆ, ವಾಸ್ತವವೇನೆಂದರೆ ಈ ಜಲಾಭಿಷೇಕ ಶೋಭಾ ಯಾತ್ರೆಯಲ್ಲಿ ಸಾಮಾನ್ಯ ಭಕ್ತಾದಿಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಪದ್ರವಕಾರಿ ವ್ಯಕ್ತಿಗಳೂ ಪಾಲ್ಗೊಂಡಿದ್ದರು, ಅವರು ಧಾರ್ಮಿಕ ಕಾರಣಕ್ಕಾಗಿ ಅಲ್ಲಿ ಬರದೇ ಪರಿಸ್ಥಿತಿ ಉದ್ರೇಕಗೊಳಿಸುವ ಉದ್ದೇಶದಿಂದ ಹಾಗೂ ದಂಗೆಗಳನ್ನು ಶುರು ಮಾಡುವ ಉದ್ದೇಶದಿಂದ ಅದಕ್ಕೆ ಎಲ್ಲಾ ತಯ್ಯಾರಿ ಮಾಡಿಕೊಂಡೇ ಅಲ್ಲಿ ಸೇರಿಕೊಂಡಿದ್ದರು. ಹಿಂಸೆ ಮತ್ತು ಪ್ರತಿಕ್ರಿಯಾತ್ಮಕ ಹಿಂಸಾಚಾರದೊಂದಿಗೆ ಭಕ್ತಾದಿಗಳಿಗೆ ಯಾವ ಸಂಬಂಧವೂ ಇರಲಿಲ್ಲ. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯಾವುದೇ ಮಹಿಳೆಯೊಂದಿಗೆ ಯಾವ ರೀತಿಯ ಕಿರುಕುಳ ಅಥವಾ ಅನುಚಿತ ವರ್ತನೆಯ ಯಾವ ಘಟನೆಯೂ ಆಗಿಲ್ಲ, ಹಾಗೆಂದು ಇದನ್ನು ರಾಜ್ಯದ ಎಡಿಜಿಪಿ ಮಮತಾ ಸಿಂಗ್ ಅವರೇ ಪುಷ್ಟೀಕರಿಸಿದ್ದಾರೆ. ಹಿಂಸಾಚಾರದಿಂದ ಬಚಾವಾಗಲು ದೇವಸ್ಥಾನದಲ್ಲಿ ಸೇರಿಕೊಂಡ ಭಕ್ತಾದಿಗಳನ್ನು ಸುತ್ತುವರಿದು, ಅವರ ಮೇಲೆ ಸಂಯೋಜಿತ ದಾಳಿ ನಡೆಸಿದ ವಿಷಯವೂ ಸುಳ್ಳು. ದೇವಸ್ಥಾನದ ಪುಜಾರಿಯೇ ಇದನ್ನು ನಿರಾಕರಿಸಿದ್ದಾರೆ.

ಅರ್ಧಸತ್ಯ #3: “ಎರಡು ಸಮುದಾಯಗಳ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿತು.”- ಈ ಸಂಘರ್ಷದಲ್ಲಿ ಒಂದೆಡೆ ಹಿಂದೂಗಳಿದ್ದರು, ಇನ್ನೊಂದೆಡೆ ಮುಸ್ಲಿಮರಿದ್ದರು ಎಂಬುದು ವಾಸ್ತವ, ಆದರೆ ಈ ಎರಡೂ ಸಮುದಾಯಗಳ ನಡುವೆ ಸಂಘರ್ಷವಾಗಿಲ್ಲ. ಒಂದೆಡೆ ಮುಸ್ಲಿಂ ಗಲಭೆಕೋರರಿದ್ದರೆ ಇನ್ನೊಂದೆಡೆ ಹಿಂದೂ ಗಲಭೆಕೋರರಿದ್ದರು. 31ನೆಯ ತಾರೀಕಿನಿಂದ ಇಂದಿನವರೆಗೆ ಮೇವಾತ್‌ನಲ್ಲಿ ಎಲ್ಲಿಯೂ, ಈಶಾನ್ಯ ದೆಹಲಿ ಪ್ರದೇಶದಲ್ಲಿ ಇರುವ ಹಾಗೆ ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಹಿಂಸೆ ಅಥವಾ ಘರ್ಷಣೆಯ ಯಾವ ಒಂದು ಘಟನೆಯೂ ನಡೆದಿಲ್ಲ.

ಇದನ್ನೂ ಓದಿ: ಹರಿಯಾಣ: ಪ್ರಚೋದನಕಾರಿ ವಿಡಿಯೋ ಶೇರ್ ಮಾಡುತ್ತಿರುವ ಬಲಪಂಥೀಯ ಮಾಧ್ಯಮಗಳಿಗೆ ಡಿಜಿಪಿ ಎಚ್ಚರಿಕೆ

ಅರ್ಧಸತ್ಯ#4: “ಹಠಾತ್ತಾಗಿ ಭುಗಿಲೆದ್ದ ಈ ಹಿಂಸಾಚಾರದ ಎದುರು ಪೊಲೀಸ್ ಮತ್ತು ಆಡಳಿತ ಅಸಹಾಯಕವಾಗಿತ್ತು.”- ವಾಸ್ತವವೇನೆಂದರೆ, ಜುಲೈ 31ರಂದು ಭುಗಿಲೆದ್ದ ಹಿಂಸಾಚಾರ ದಿಢೀರನೇ ಆಗಿದ್ದಲ್ಲ. ಈ ಜಲಾಭಿಷೇಕ ಯಾತ್ರೆಯಲ್ಲಿ 2 ವರ್ಷಗಳ ಹಿಂದೆಯೂ ಮಜಾರ್ ಒಡೆದುಹಾಕುವ ಘಟನೆ ನಡೆದಿತ್ತು. ಜುಲೈ 25 ಮತ್ತು 26ರ ತನಕ ಮೋನು ಮನೇಸರ್ ಮತ್ತು ಬಿಟ್ಟು ಬಜರಂಗಿಯ ಪ್ರಚೋದನಕಾರಿ ವಿದೇವ್‌ಗಳು ಹರಿದಾಡುತ್ತಿದ್ದವು, ಗುಪ್ತಚರ ವರದಿಗಳು ಆಗಲೇ ಬಂದಿದ್ದವು. ಜುಲೈ 27ರಂದು ಸ್ಥಳೀಯ ಶಾಂತಿ ಸಮಿತಿಯ ಸಭೆಯಲ್ಲಿ ಈ ವಿದೇವ್‌ಗಳನ್ನು ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳಿಗೆ ತೋರಿಸಲಾಗಿತ್ತು. ಅದಾಗ್ಯೂ ಒಂದುವೇಳೆ ಈ ಯಾತ್ರೆಯಲ್ಲಿ ನೂರೈವತ್ತಕ್ಕೂ ಹೆಚ್ಚು ವಾಹನಗಳು ಬರಲು ಅವಕಾಶ ಮಾಡಿಕೊಡಲಾಗುತ್ತದೆ, ಯಾತ್ರಿಗಳ ನಡುವೆ ನಡೆಯುತ್ತಿರುವ ಗಲಭೆಕೋರರನ್ನು ತಡೆಯಲಾಗಿಲ್ಲ, ಬದಲಿಗೆ ಅವರು ಲಾಠಿಗಳು, ತಲವಾರಗಳು ಹಾಗೂ ಬಂದೂಕುಗಳನ್ನು ತೆಗೆದುಕೊಂಡು ನಡೆಯಲು ಅನುವು ಮಾಡಿಕೊಡಲಾಗುತ್ತದೆಂದರೆ ಒಂದೋ ಪೊಲೀಸ್ ಮತ್ತು ಆಡಳಿತದ ಅಪರಾಧಿಕ ನಿರ್ಲಕ್ಷ್ಯವಿತ್ತು ಅಥವಾ ಉದ್ದೇಶಪೂರ್ವಕವಾಗಿ ಇವೆಲ್ಲ ಆಗಲು ಅನುವು ಮಾಡಿಕೊಟ್ಟರು ಎನ್ನುವುದು ಸ್ಪಷ್ಟವಾಗುತ್ತದೆ.

ಮೋನು ಮನೇಸರ್, ಬಿಟ್ಟು ಬಜರಂಗಿ

ಅರ್ಧಸತ್ಯ #5: “ಸ್ಥಳೀಯ ಮಟ್ಟದಲ್ಲಿ ಏನೇ ತಪ್ಪುಗಳಾಗಿದ್ದರೂ, ರಾಜ್ಯ ಸರಕಾರವು ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಂತಿ ನೆಲೆಸುವಂತೆ ಮಾಡಿದೆ.”- ಮೇಲ್ನೋಟಕ್ಕೆ ಇದು ನಿಜ ಅನಿಸಬಹುದು, ಆದರೆ ವಾಸ್ತವದಲ್ಲಿ ಈ ಅಶಾಂತಿಯ ಮೂಲದಲ್ಲಿ ರಾಜ್ಯದ ಬಿಜೆಪಿ ಸರಕಾರವಿತ್ತು ಹಾಗೂ ಈಗ ಶಾಂತಿಯ ಬದಲಿಗೆ ದೀರ್ಘಾವಧಿಯ ಅಶಾಂತಿಯ ಬೀಜ ಬಿತ್ತಲಾಗುತ್ತಿದೆ. ರೈತರ ಹೋರಾಟದಿಂದ ಹಿನ್ನಡೆ ಅನುಭವಿಸಿದ ಹರಿಯಾಣದ ಬಿಜೆಪಿಯು ನೂಹ್‌ನ ಕಿಡಿಯನ್ನು ತನ್ನ ಚುನಾವಣೆಯ ಒಲೆ ಹೊತ್ತಿಸುವುದಕ್ಕಾಗಿ ಬಳಕೆ ಮಾಡಿದೆ ಎಂಬ ಸಂದೇಹ ಸ್ವಾಭಾವಿಕವಾಗಿದೆ. ಅಶಾಂತಿ ಆಗಬಹುದು ಎಂಬ ಸಂಪೂರ್ಣ ಆತಂಕದ ಹೊರತಾಗಿಯೂ ಹಿಂಸಾಚಾರ ಆಗಲು ಬಿಟ್ಟಿದ್ದಾರೆ ಎಂದರೆ ಅದು ರಾಜ್ಯ ಸರಕಾರದ ಸೂಚನೆಯಿಲ್ಲದೇ ಸಾಧ್ಯವಿದ್ದಿಲ್ಲ. ಹಿಂಸಾಚಾರ ಆದಕೂಡಲೇ ಹರಿಯಾಣದಲ್ಲಿ ಇದು ನಾಲ್ಕನೆಯ ಬಾರಿ (ಹಿಸಾರ್, ಪಂಚಕುಲಾ, ಝಜ್ಜರ್ ಹಾಗೂ ನೂಹ್) ಪೊಲೀಸ್ ನಾಪತ್ತೆಯಾದ ಪ್ರಕ್ರಿಯೆ ಕಂಡುಬಂದಿದೆ. ಈ ಹಿಂಸಾಚಾರದ ನಂತರ ರಾಜ್ಯದ ಇತರ ಪ್ರದೇಶಗಳಲ್ಲಿ ಮುಸಲ್ಮಾನರ ಸುರಕ್ಷತೆಗಾಗಿ ರಾಜ್ಯ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ, ಹಾಗಾಗಿ ಸಾವಿರಾರು ಬಡ ಮುಸಲ್ಮಾನರು ರಾತ್ರೋರಾತ್ರಿ ವಲಸೆ ಹೋಗಬೇಕಾಗಿಬಂತು. ಹಿಂಸಾಚಾರದಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲಿಗೆ ಬೇಕಾಬಿಟ್ಟಿಯಾಗಿ ಜನರನ್ನು ಬಂಧಿಸಲಾಯಿತು ಹಾಗೂ ತದನಂತರ ಕಾನೂನನ್ನು ಬದಿಗಿಟ್ಟು, 200 ರಿಂದ 300ರ ತನಕ ಮನೆ ಮತ್ತು ಅಂಗಡಿಗಳನ್ನು ಅತಿಕ್ರಮಣದ ಹೆಸರಿನಲ್ಲಿ ಕೆಡವಲಾಯಿತು. ಕೊನೆಗೆ ಹೈಕೋರ್ಟ್ ಇದನ್ನು ನಿಲ್ಲಿಸಿತು. ಇವೆಲ್ಲ ಶಾಂತಿ ಸ್ಥಾಪಿಸುವ ಬದಲಿಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷದ ಮೇಲೆ ಸೇಡು ತೀರಿಸಿಕೊಳ್ಳುವ ಕ್ರಮದಂತೆ ಕಾಣುತ್ತಿದೆ. ಇಂತಹ ಬೆಂಕಿಯಲ್ಲಿ ಕೇವಲ ಒಂದು ಪಕ್ಷ ಸುಡುವುದಿಲ್ಲ ಎಂದು ಇತಿಹಾಸ ನಮಗೆ ಹೇಳುತ್ತದೆ. ಅನ್ಯಾಯ ಮತ್ತು ದಬ್ಬಾಳಿಕೆ ಎಂದೂ ಶಾಂತಿ ನೆಲೆಸುವಂತೆ ಮಾಡುವುದಿಲ್ಲ, ಅದರಿಂದ ದೀರ್ಘಾವಧಿಯಲ್ಲಿ ಅಸಮಧಾನ, ಪ್ರತ್ಯೇಕತಾವಾದ ಹಾಗೂ ಉಗ್ರವಾದವು ಹುಟ್ಟಿಬೆಳೆಯುತ್ತವೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...