Homeಮುಖಪುಟನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ – 22

ಸಮಸ್ಯೆಗಳ ಪರಿಹಾರ

ಸಮಸ್ಯೆಗಳು ಜೀವನದ ಒಂದು ಅವಿಭಾಜ್ಯ ಅಂಗ. ಹಾಗೆಂದು ಸಮಸ್ಯೆಯಿಂದ ಓಡಿ ಹೋಗುವುದಾಗಲೀ, ಆತ್ಮಹತ್ಯೆಯಾಗಲೀ ಪರಿಹಾರವಲ್ಲ. ಜೀವನಾವಶ್ಯಕ ಕಲೆಗಳಲ್ಲಿ ಸಮಸ್ಯೆ ಬಗೆಹರಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ಜೊತೆ ಜೊತೆಯಾಗಿ ಹೋಗುತ್ತವೆ. ಸಮಸ್ಯೆ ಪರಿಹಾರಕ್ಕೆ ಎಲ್ಲೋ ಒಂದು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದ್ದರೆ, ತೆಗೆದುಕೊಂಡ ನಿರ್ಧಾರ ಇನ್ನೆಲ್ಲೋ ಒಂದು ಸಮಸ್ಯೆಯನ್ನು ಸೃಷ್ಟಿಸಲೂಬಹುದು. ಹಾಗಾಗಿ ಅವೆರಡಕ್ಕೂ ಒಂದು ರೀತಿಯ ನಂಟು ಇರುವಂತಿದ್ದರೂ ಎಲ್ಲಾ ಸಮಸ್ಯೆಗೂ ನಿರ್ಧಾರವೇ ಪರಿಹಾರ ಎಂತಲೂ ಇಲ್ಲ; ಎಲ್ಲಾ ನಿರ್ಧಾರಗಳೂ ಹೊಸ ಸಮಸ್ಯೆಗೆ ಕಾರಣವಾಗುತ್ತವೆ ಎಂತಲೂ ಇಲ್ಲ.

ಇಲ್ಲಿ ಸಮಸ್ಯೆಯನ್ನು ನಾವು ಎರಡು ವಿಧವಾಗಿ ಪರಿಗಣಿಸಬಹುದು. ಒಂದು ವೈಯುಕ್ತಿಕ ಅಥವಾ ಸಾಮಾಜಿಕ. ಇದು ಮನಶಾಸ್ತ್ರಕ್ಕೆ ಸಂಬಂಧಿಸಿದ್ದು, ಮತ್ತೊಂದು ವಿಜ್ಞಾನಕ್ಕೆ ಸಂಬಂಧಿಸಿದ್ದು, ಅಂದರೆ ಗಣಿತ, ವ್ಯಾಕರಣ, ವೈದ್ಯಕೀಯ, ಇತ್ಯಾದಿ.. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ, ಕೇವಲ ವೈಯುಕ್ತಿಕ ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಒಟ್ಟಿನಲ್ಲಿ ಸಮಸ್ಯೆ ಏನೇ ಇರಲಿ, ಅದು ಸ್ಪಷ್ಟವಾಗಿದ್ದಷ್ಟೂ ಪರಿಹಾರ ಸುಲಭ. ಸಮಸ್ಯೆ ಏನು ಎಂಬುದೇ ತಿಳಿಯದಿದ್ದಲ್ಲಿ ಪರಿಹಾರವೂ ಕಷ್ಟಸಾಧ್ಯ. ಪರಿಹಾರಕ್ಕೆ ನಮಗೆ ಬೇಕಾಗಿರುವುದು ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆ. ಇವೆರಡರ ಬಗ್ಗೆ ನಾನು ಈಗಾಗಲೇ ತಿಳಿಸಿದ್ದೇನೆ.

ಸಮಸ್ಯೆಯ ಪರಿಹಾರದಲ್ಲಿ ನಮ್ಮ ಮನಃಸ್ಥಿತಿಯೂ ಮುಖ್ಯ ಭೂಮಿಕೆ ವಹಿಸುತ್ತದೆ. ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ. ಅದೇ ರೀತಿ ಸಮಸ್ಯೆಯ ಎಲ್ಲಾ ಪಾರ್ಶ್ವಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗಿಲ್ಲದಿದ್ದಲ್ಲಿ, ನಮಗೆ ಗೊತ್ತಿರುವ ಅಲ್ಪ ಮಾಹಿತಿಯ ಆಧಾರದ ಮೇಲೆ, ಪರಿಹಾರಕ್ಕೆ ಕೈ ಹಾಕಿ ವಿಪರೀತ ಪರಿಣಾಮ ಎದುರಿಸಬೇಕಾಗುತ್ತದೆ. ಉದಾ: ಎಲೆಕ್ಟ್ರಿಕ್ ಮೀಟರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಒಲೆಯ ಮೇಲಿರಿಸಿದ ಕಾಯ್ದ ಎಣ್ಣೆಗೆ ಬೆಂಕಿ ತಗುಲಿದಾಗ, ನಾವು ಬೆಂಕಿ ನಂದಿಸಲು ಅದರ ಮೇಲೆ ನೀರು ಎರಚಲು ಹೋದಲ್ಲಿ, ವಿದ್ಯುತ್ ಶಾಕಿನಿಂದ ಅಥವಾ ದೊಡ್ಡ ಬೆಂಕಿ ಅನಾಹುತದಿಂದ ಹೆಚ್ಚಿನ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಸಮಸ್ಯೆ ಅರ್ಥವಾಗದಿದ್ದಲ್ಲಿ, ನಮ್ಮಲ್ಲಿ ಸಾಮರ್ಥ್ಯ/ಸಂಪನ್ಮೂಲದ ಕೊರತೆ ಇದ್ದಲ್ಲಿ, ಪರಿಹಾರಕ್ಕೆ ನಾವೊಬ್ಬರೇ ಯತ್ನಿಸದೇ, ಕೂಡಲೇ ಬೇರೆಯವರ ಸಹಾಯ ಪಡೆಯಬೇಕು. ಇದು ಸಮಸ್ಯೆ ಪರಿಹಾರ ಕಲೆಯ ಮುಖ್ಯ ಎಚ್ಚರಿಕೆ.

ಮೊಟ್ಟ ಮೊದಲಿಗೆ ನಾವು ಸಮಸ್ಯೆ ಏನು ಎಂಬುದನ್ನು ಸರಿಯಾಗಿ ಅರಿಯಬೇಕು. ಸಮಸ್ಯೆ ನೇರವಾಗಿ ನಮ್ಮ ಕಣ್ಣಿಗೆ ಕಾಣುವುದು ಅಪರೂಪ, ಕೇವಲ ಅದರ ಲಕ್ಷಣಗಳು ನಮಗೆ ಗೋಚರಿಸುತ್ತವೆ. ಸಮಸ್ಯೆ ಎಲ್ಲೋ ಇರುತ್ತದೆ, ಲಕ್ಷಣಗಳು ಇನ್ನೆಲ್ಲೋ ಕಾಣಿಸಿಕೊಳ್ಳುತ್ತವೆ. ಹೇಗೆ ವೈದ್ಯರು ನಮ್ಮ ಕಾಯಿಲೆ ಕಂಡು ಹಿಡಿಯುವಾಗ ನಮ್ಮಿಂದ ತೊಂದರೆಯ ಲಕ್ಷಣಗಳನ್ನು ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾವೂ ಸಹ ಸಮಸ್ಯೆಯ ಗುಣ-ಲಕ್ಷಣಗಳನ್ನು ಗುರುತಿಸಿ, ವಿಶ್ಲೇಷಿಸಿ ಅದರಿಂದ ಸಮಸ್ಯೆ ಏನು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದರಲ್ಲೂ ಸಮಸ್ಯೆಗೆ “ಮೂಲ ಕಾರಣ” ಏನು ಎಂಬುದನ್ನು ತಿಳಿದು, ನಂತರ ಮೂಲ ಕಾರಣ ಹೋಗಲಾಡಿಸುವಂತಹ ಪರಿಹಾರ ಹುಡುಕಬೇಕಾಗುತ್ತದೆ. ಮೂಲ ಕಾರಣ ತಿಳಿಯದಿದ್ದರೆ ನಾವು ಪರಿಹಾರಕ್ಕೆ ದಾರಿ ಸಿಕ್ಕದೆ, ಅದರ ಚಕ್ರವ್ಯೂಹದಲ್ಲಿ ಸಿಲುಕುವುದು ನಿಶ್ಚಿತ.

ಮೂಲ ಕಾರಣ (ರೂಟ್ ಕಾಸ್) ಹುಡುಕಲು ಹಲವಾರು ಉಪಕರಣಗಳಿವೆ. ಅವುಗಳಲ್ಲಿ ಒಂದು “ಫೈವ್ ವೈ” (Five Why) ಇದರಲ್ಲಿ ಸಮಸ್ಯೆಯ ಬಗ್ಗೆ ಐದು ಬಾರಿ “ಏಕೆ?“ ಎಂದು ಪ್ರಶ್ನಿಸುವುದು. ಈ ಐದು ಬಾರಿಯ ಪ್ರಶ್ನೆಗೆ ಉತ್ತರ ಸಿಗುವಂತಿದ್ದರೆ ನಮಗೆ ಸಮಸ್ಯೆಯ ಮೂಲ ಕಾರಣ ಸ್ಪಷ್ಟವಾಗುತ್ತದೆ.

ಇನ್ನೊಂದು ಉಪಕರಣ ”ಫಿಷ್ ಬೋನ್” ಡಯಾಗ್ರಾಮ್. ಇದರಲ್ಲಿ ಸಮಸ್ಯೆಗೆ ಯಾವುದು ಕಾರಣ – ನಮ್ಮ ವ್ಯವಸ್ಥೆಯೇ, ಸಲಕರಣೆಗಳೇ, ಪರ್ಯಾವರಣವೇ, ಬಳಕೆಯ ವಸ್ತುಗಳೇ, ಜನರೇ ಅಥವಾ ಪ್ರಕ್ರಿಯೆಯೇ? ಎಂಬುದಾಗಿ ಅವುಗಳ ಕಾರ್ಯವನ್ನು ನಿರೀಕ್ಷಿಸಿ, ವಿಶ್ಲೇಶಿಸಿ ಯಾವುದು “ಕಾರಣ”, ಯಾವುದು ಲಕ್ಷಣ ಎಂಬ ತೀರ್ಮಾನಕ್ಕೆ ಬರುವುದು. ಚಿತ್ರ ಮೀನಿನ ಮೂಳೆಯ ಆಕಾರದಲ್ಲಿರುವುದರಿಂದ ಇದಕ್ಕೆ ಫಿಶ್ ಬೋನ್ ಎನ್ನುತ್ತಾರೆ.

ಮೇಲಿನ ರೀತಿಗಳಲ್ಲದೆ ಸಮಸ್ಯೆ ಪರಿಹಾರಕ್ಕೆ ಇನ್ನೂ ಕೆಲವು ತಂತ್ರಗಳನ್ನು ಬಳಸಬಹುದು. ಅವೆಂದರೆ:

·         ಸಮಸ್ಯೆಯ ಒಂದು ನಿಜರೂಪ ಮಾದರಿ (ಮೊಡೆಲ್) ಮಾಡಿಕೊಂಡು ಅದರ ಮೇಲೆ ಮೊದಲು ಪ್ರಯೋಗ ಮಾಡುವುದು. ನಂತರ ಅದನ್ನು ನಿಜವಾದ ಸಮಸ್ಯೆಯ ಮೇಲೆ ಉಪಯೋಗಿಸುವುದು (ವೈದ್ಯರು ತಮ್ಮ ಔಷಧಿಗಳನ್ನು ಮೊದಲು ಬಲಿಪಶುಗಳ ಮೇಲೆ ಉಪಯೋಗಿಸುವ ರೀತಿಯಲ್ಲಿ).

·         ಸಮಸ್ಯೆಯ ತರಹವೇ ಇರುವ ಅನುರೂಪ ಮಾದರಿಯ ಮೇಲೆ ಪ್ರಯೋಗ ಮಾಡಿ ನೋಡುವುದು.

·         “ಹೀಗೆ ಮಾಡಿದರೆ ಹೀಗೆ ಆಗುತ್ತದೆ” ಎನ್ನುವ ಪಠ್ಯಪುಸ್ತಕ ತತ್ವವಾದವನ್ನು ಪ್ರಯೋಗಿಸಿ ನೋಡುವುದು.

·         ಸಂಕೀರ್ಣ ಸಮಸ್ಯೆಯನ್ನು ಚಿಕ್ಕ-ಚಿಕ್ಕದಾಗಿ ತುಂಡರಿಸಿ ಪರಿಹಾರ ಹುಡುಕುವುದು.

·         ಯಾವ ಯಾವ ತುಂಡುಗಳಿಗೆ ಪರಿಹಾರ ಸಿಗುತ್ತದೋ ಅಲ್ಲಿಂದ ಮುಂದಕ್ಕೆ ಹೊಸದಾಗಿ ಯೋಚಿಸುವುದು.

·         ಪರಿಹಾರ ಸಿಗದ ತುಂಡುಗಳನ್ನು ಒಟ್ಟು ಸೇರಿಸಿ ಪರಿಹಾರ ಕಂಡುಕೊಳ್ಳುವುದು

·         ಸಮಸ್ಯೆಯನ್ನು ಪರಿವರ್ತಿಸಿ ಪರಿಹಾರವಿರುವಂತಹ ಸಮಸ್ಯೆಯನ್ನಾಗಿ ಮಾಡುವುದು.

ಸಮಸ್ಯೆ ಪರಿಹಾರದ ಐದು ಹೆಜ್ಜೆಗಳು:

1.      ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಸರಿಯಾಗಿ ಗುರುತಿಸಿ, ವ್ಯಾಖ್ಯಾನಿಸುವುದು.

2.      ಅದರ ಪರಿಹಾರಕ್ಕೆ ಬೇಕಾದ ಪರ್ಯಾಯ ಮಾರ್ಗಗಳನ್ನು, ಬೇಕಾದ ಸಂಪನ್ಮೂಲ ಹುಡುಕುವುದು/ಕ್ರೋಢೀಕರಿಸುವುದು.

3.      ಪರ್ಯಾಯ ಮಾರ್ಗಗಳ ಉಪಯುಕ್ತತೆ/ಮೌಲ್ಯ ಕಂಡುಹಿಡಿದು, ಅವುಗಳಲ್ಲಿ ಅತ್ಯಂತ ಸೂಕ್ತವಾದುದನ್ನು ಆಯ್ದುಕೊಳ್ಳುವುದು.

4.      ಆಯ್ದ ಯೋಜನೆಯನ್ನು ಚಾಚೂ ತಪ್ಪದಂತೆ ಜಾರಿಗೊಳಿಸುವುದು.

5.      ಸಮಸ್ಯೆ ಪರಿಹಾರವಾಯಿತೋ, ಇಲ್ಲವೋ ಎಂದು ನೋಡುವುದು. ಆಗಿಲ್ಲದಿದ್ದಲ್ಲಿ ಮತ್ತೆ. ಹೆಜ್ಜೆ ಕ್ರಮಾಂಕ 1 ರಿಂದ ಪ್ರಾರಂಭಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...