Homeಮುಖಪುಟನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ – 22

ಸಮಸ್ಯೆಗಳ ಪರಿಹಾರ

ಸಮಸ್ಯೆಗಳು ಜೀವನದ ಒಂದು ಅವಿಭಾಜ್ಯ ಅಂಗ. ಹಾಗೆಂದು ಸಮಸ್ಯೆಯಿಂದ ಓಡಿ ಹೋಗುವುದಾಗಲೀ, ಆತ್ಮಹತ್ಯೆಯಾಗಲೀ ಪರಿಹಾರವಲ್ಲ. ಜೀವನಾವಶ್ಯಕ ಕಲೆಗಳಲ್ಲಿ ಸಮಸ್ಯೆ ಬಗೆಹರಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ಜೊತೆ ಜೊತೆಯಾಗಿ ಹೋಗುತ್ತವೆ. ಸಮಸ್ಯೆ ಪರಿಹಾರಕ್ಕೆ ಎಲ್ಲೋ ಒಂದು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದ್ದರೆ, ತೆಗೆದುಕೊಂಡ ನಿರ್ಧಾರ ಇನ್ನೆಲ್ಲೋ ಒಂದು ಸಮಸ್ಯೆಯನ್ನು ಸೃಷ್ಟಿಸಲೂಬಹುದು. ಹಾಗಾಗಿ ಅವೆರಡಕ್ಕೂ ಒಂದು ರೀತಿಯ ನಂಟು ಇರುವಂತಿದ್ದರೂ ಎಲ್ಲಾ ಸಮಸ್ಯೆಗೂ ನಿರ್ಧಾರವೇ ಪರಿಹಾರ ಎಂತಲೂ ಇಲ್ಲ; ಎಲ್ಲಾ ನಿರ್ಧಾರಗಳೂ ಹೊಸ ಸಮಸ್ಯೆಗೆ ಕಾರಣವಾಗುತ್ತವೆ ಎಂತಲೂ ಇಲ್ಲ.

ಇಲ್ಲಿ ಸಮಸ್ಯೆಯನ್ನು ನಾವು ಎರಡು ವಿಧವಾಗಿ ಪರಿಗಣಿಸಬಹುದು. ಒಂದು ವೈಯುಕ್ತಿಕ ಅಥವಾ ಸಾಮಾಜಿಕ. ಇದು ಮನಶಾಸ್ತ್ರಕ್ಕೆ ಸಂಬಂಧಿಸಿದ್ದು, ಮತ್ತೊಂದು ವಿಜ್ಞಾನಕ್ಕೆ ಸಂಬಂಧಿಸಿದ್ದು, ಅಂದರೆ ಗಣಿತ, ವ್ಯಾಕರಣ, ವೈದ್ಯಕೀಯ, ಇತ್ಯಾದಿ.. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ, ಕೇವಲ ವೈಯುಕ್ತಿಕ ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಒಟ್ಟಿನಲ್ಲಿ ಸಮಸ್ಯೆ ಏನೇ ಇರಲಿ, ಅದು ಸ್ಪಷ್ಟವಾಗಿದ್ದಷ್ಟೂ ಪರಿಹಾರ ಸುಲಭ. ಸಮಸ್ಯೆ ಏನು ಎಂಬುದೇ ತಿಳಿಯದಿದ್ದಲ್ಲಿ ಪರಿಹಾರವೂ ಕಷ್ಟಸಾಧ್ಯ. ಪರಿಹಾರಕ್ಕೆ ನಮಗೆ ಬೇಕಾಗಿರುವುದು ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆ. ಇವೆರಡರ ಬಗ್ಗೆ ನಾನು ಈಗಾಗಲೇ ತಿಳಿಸಿದ್ದೇನೆ.

ಸಮಸ್ಯೆಯ ಪರಿಹಾರದಲ್ಲಿ ನಮ್ಮ ಮನಃಸ್ಥಿತಿಯೂ ಮುಖ್ಯ ಭೂಮಿಕೆ ವಹಿಸುತ್ತದೆ. ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ. ಅದೇ ರೀತಿ ಸಮಸ್ಯೆಯ ಎಲ್ಲಾ ಪಾರ್ಶ್ವಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗಿಲ್ಲದಿದ್ದಲ್ಲಿ, ನಮಗೆ ಗೊತ್ತಿರುವ ಅಲ್ಪ ಮಾಹಿತಿಯ ಆಧಾರದ ಮೇಲೆ, ಪರಿಹಾರಕ್ಕೆ ಕೈ ಹಾಕಿ ವಿಪರೀತ ಪರಿಣಾಮ ಎದುರಿಸಬೇಕಾಗುತ್ತದೆ. ಉದಾ: ಎಲೆಕ್ಟ್ರಿಕ್ ಮೀಟರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಒಲೆಯ ಮೇಲಿರಿಸಿದ ಕಾಯ್ದ ಎಣ್ಣೆಗೆ ಬೆಂಕಿ ತಗುಲಿದಾಗ, ನಾವು ಬೆಂಕಿ ನಂದಿಸಲು ಅದರ ಮೇಲೆ ನೀರು ಎರಚಲು ಹೋದಲ್ಲಿ, ವಿದ್ಯುತ್ ಶಾಕಿನಿಂದ ಅಥವಾ ದೊಡ್ಡ ಬೆಂಕಿ ಅನಾಹುತದಿಂದ ಹೆಚ್ಚಿನ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಸಮಸ್ಯೆ ಅರ್ಥವಾಗದಿದ್ದಲ್ಲಿ, ನಮ್ಮಲ್ಲಿ ಸಾಮರ್ಥ್ಯ/ಸಂಪನ್ಮೂಲದ ಕೊರತೆ ಇದ್ದಲ್ಲಿ, ಪರಿಹಾರಕ್ಕೆ ನಾವೊಬ್ಬರೇ ಯತ್ನಿಸದೇ, ಕೂಡಲೇ ಬೇರೆಯವರ ಸಹಾಯ ಪಡೆಯಬೇಕು. ಇದು ಸಮಸ್ಯೆ ಪರಿಹಾರ ಕಲೆಯ ಮುಖ್ಯ ಎಚ್ಚರಿಕೆ.

ಮೊಟ್ಟ ಮೊದಲಿಗೆ ನಾವು ಸಮಸ್ಯೆ ಏನು ಎಂಬುದನ್ನು ಸರಿಯಾಗಿ ಅರಿಯಬೇಕು. ಸಮಸ್ಯೆ ನೇರವಾಗಿ ನಮ್ಮ ಕಣ್ಣಿಗೆ ಕಾಣುವುದು ಅಪರೂಪ, ಕೇವಲ ಅದರ ಲಕ್ಷಣಗಳು ನಮಗೆ ಗೋಚರಿಸುತ್ತವೆ. ಸಮಸ್ಯೆ ಎಲ್ಲೋ ಇರುತ್ತದೆ, ಲಕ್ಷಣಗಳು ಇನ್ನೆಲ್ಲೋ ಕಾಣಿಸಿಕೊಳ್ಳುತ್ತವೆ. ಹೇಗೆ ವೈದ್ಯರು ನಮ್ಮ ಕಾಯಿಲೆ ಕಂಡು ಹಿಡಿಯುವಾಗ ನಮ್ಮಿಂದ ತೊಂದರೆಯ ಲಕ್ಷಣಗಳನ್ನು ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾವೂ ಸಹ ಸಮಸ್ಯೆಯ ಗುಣ-ಲಕ್ಷಣಗಳನ್ನು ಗುರುತಿಸಿ, ವಿಶ್ಲೇಷಿಸಿ ಅದರಿಂದ ಸಮಸ್ಯೆ ಏನು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದರಲ್ಲೂ ಸಮಸ್ಯೆಗೆ “ಮೂಲ ಕಾರಣ” ಏನು ಎಂಬುದನ್ನು ತಿಳಿದು, ನಂತರ ಮೂಲ ಕಾರಣ ಹೋಗಲಾಡಿಸುವಂತಹ ಪರಿಹಾರ ಹುಡುಕಬೇಕಾಗುತ್ತದೆ. ಮೂಲ ಕಾರಣ ತಿಳಿಯದಿದ್ದರೆ ನಾವು ಪರಿಹಾರಕ್ಕೆ ದಾರಿ ಸಿಕ್ಕದೆ, ಅದರ ಚಕ್ರವ್ಯೂಹದಲ್ಲಿ ಸಿಲುಕುವುದು ನಿಶ್ಚಿತ.

ಮೂಲ ಕಾರಣ (ರೂಟ್ ಕಾಸ್) ಹುಡುಕಲು ಹಲವಾರು ಉಪಕರಣಗಳಿವೆ. ಅವುಗಳಲ್ಲಿ ಒಂದು “ಫೈವ್ ವೈ” (Five Why) ಇದರಲ್ಲಿ ಸಮಸ್ಯೆಯ ಬಗ್ಗೆ ಐದು ಬಾರಿ “ಏಕೆ?“ ಎಂದು ಪ್ರಶ್ನಿಸುವುದು. ಈ ಐದು ಬಾರಿಯ ಪ್ರಶ್ನೆಗೆ ಉತ್ತರ ಸಿಗುವಂತಿದ್ದರೆ ನಮಗೆ ಸಮಸ್ಯೆಯ ಮೂಲ ಕಾರಣ ಸ್ಪಷ್ಟವಾಗುತ್ತದೆ.

ಇನ್ನೊಂದು ಉಪಕರಣ ”ಫಿಷ್ ಬೋನ್” ಡಯಾಗ್ರಾಮ್. ಇದರಲ್ಲಿ ಸಮಸ್ಯೆಗೆ ಯಾವುದು ಕಾರಣ – ನಮ್ಮ ವ್ಯವಸ್ಥೆಯೇ, ಸಲಕರಣೆಗಳೇ, ಪರ್ಯಾವರಣವೇ, ಬಳಕೆಯ ವಸ್ತುಗಳೇ, ಜನರೇ ಅಥವಾ ಪ್ರಕ್ರಿಯೆಯೇ? ಎಂಬುದಾಗಿ ಅವುಗಳ ಕಾರ್ಯವನ್ನು ನಿರೀಕ್ಷಿಸಿ, ವಿಶ್ಲೇಶಿಸಿ ಯಾವುದು “ಕಾರಣ”, ಯಾವುದು ಲಕ್ಷಣ ಎಂಬ ತೀರ್ಮಾನಕ್ಕೆ ಬರುವುದು. ಚಿತ್ರ ಮೀನಿನ ಮೂಳೆಯ ಆಕಾರದಲ್ಲಿರುವುದರಿಂದ ಇದಕ್ಕೆ ಫಿಶ್ ಬೋನ್ ಎನ್ನುತ್ತಾರೆ.

ಮೇಲಿನ ರೀತಿಗಳಲ್ಲದೆ ಸಮಸ್ಯೆ ಪರಿಹಾರಕ್ಕೆ ಇನ್ನೂ ಕೆಲವು ತಂತ್ರಗಳನ್ನು ಬಳಸಬಹುದು. ಅವೆಂದರೆ:

·         ಸಮಸ್ಯೆಯ ಒಂದು ನಿಜರೂಪ ಮಾದರಿ (ಮೊಡೆಲ್) ಮಾಡಿಕೊಂಡು ಅದರ ಮೇಲೆ ಮೊದಲು ಪ್ರಯೋಗ ಮಾಡುವುದು. ನಂತರ ಅದನ್ನು ನಿಜವಾದ ಸಮಸ್ಯೆಯ ಮೇಲೆ ಉಪಯೋಗಿಸುವುದು (ವೈದ್ಯರು ತಮ್ಮ ಔಷಧಿಗಳನ್ನು ಮೊದಲು ಬಲಿಪಶುಗಳ ಮೇಲೆ ಉಪಯೋಗಿಸುವ ರೀತಿಯಲ್ಲಿ).

·         ಸಮಸ್ಯೆಯ ತರಹವೇ ಇರುವ ಅನುರೂಪ ಮಾದರಿಯ ಮೇಲೆ ಪ್ರಯೋಗ ಮಾಡಿ ನೋಡುವುದು.

·         “ಹೀಗೆ ಮಾಡಿದರೆ ಹೀಗೆ ಆಗುತ್ತದೆ” ಎನ್ನುವ ಪಠ್ಯಪುಸ್ತಕ ತತ್ವವಾದವನ್ನು ಪ್ರಯೋಗಿಸಿ ನೋಡುವುದು.

·         ಸಂಕೀರ್ಣ ಸಮಸ್ಯೆಯನ್ನು ಚಿಕ್ಕ-ಚಿಕ್ಕದಾಗಿ ತುಂಡರಿಸಿ ಪರಿಹಾರ ಹುಡುಕುವುದು.

·         ಯಾವ ಯಾವ ತುಂಡುಗಳಿಗೆ ಪರಿಹಾರ ಸಿಗುತ್ತದೋ ಅಲ್ಲಿಂದ ಮುಂದಕ್ಕೆ ಹೊಸದಾಗಿ ಯೋಚಿಸುವುದು.

·         ಪರಿಹಾರ ಸಿಗದ ತುಂಡುಗಳನ್ನು ಒಟ್ಟು ಸೇರಿಸಿ ಪರಿಹಾರ ಕಂಡುಕೊಳ್ಳುವುದು

·         ಸಮಸ್ಯೆಯನ್ನು ಪರಿವರ್ತಿಸಿ ಪರಿಹಾರವಿರುವಂತಹ ಸಮಸ್ಯೆಯನ್ನಾಗಿ ಮಾಡುವುದು.

ಸಮಸ್ಯೆ ಪರಿಹಾರದ ಐದು ಹೆಜ್ಜೆಗಳು:

1.      ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಸರಿಯಾಗಿ ಗುರುತಿಸಿ, ವ್ಯಾಖ್ಯಾನಿಸುವುದು.

2.      ಅದರ ಪರಿಹಾರಕ್ಕೆ ಬೇಕಾದ ಪರ್ಯಾಯ ಮಾರ್ಗಗಳನ್ನು, ಬೇಕಾದ ಸಂಪನ್ಮೂಲ ಹುಡುಕುವುದು/ಕ್ರೋಢೀಕರಿಸುವುದು.

3.      ಪರ್ಯಾಯ ಮಾರ್ಗಗಳ ಉಪಯುಕ್ತತೆ/ಮೌಲ್ಯ ಕಂಡುಹಿಡಿದು, ಅವುಗಳಲ್ಲಿ ಅತ್ಯಂತ ಸೂಕ್ತವಾದುದನ್ನು ಆಯ್ದುಕೊಳ್ಳುವುದು.

4.      ಆಯ್ದ ಯೋಜನೆಯನ್ನು ಚಾಚೂ ತಪ್ಪದಂತೆ ಜಾರಿಗೊಳಿಸುವುದು.

5.      ಸಮಸ್ಯೆ ಪರಿಹಾರವಾಯಿತೋ, ಇಲ್ಲವೋ ಎಂದು ನೋಡುವುದು. ಆಗಿಲ್ಲದಿದ್ದಲ್ಲಿ ಮತ್ತೆ. ಹೆಜ್ಜೆ ಕ್ರಮಾಂಕ 1 ರಿಂದ ಪ್ರಾರಂಭಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...