Homeಕರ್ನಾಟಕಸಿದ್ದವಾಗೇ ಹೋಯ್ತಾ ಬಿಜೆಪಿ ಸಚಿವ ಸಂಪುಟ? ಇರ್ತಾರಾ ಮೂರು ಡಿಸಿಎಂಗಳು?

ಸಿದ್ದವಾಗೇ ಹೋಯ್ತಾ ಬಿಜೆಪಿ ಸಚಿವ ಸಂಪುಟ? ಇರ್ತಾರಾ ಮೂರು ಡಿಸಿಎಂಗಳು?

- Advertisement -
- Advertisement -

| ಗೌರಿ ಡೆಸ್ಕ್ |

ಸುಪ್ರೀಂ ಕೋರ್ಟ್ ನಿರ್ದೇಶನದಿಂದಾಗಿ ಕರ್ನಾಟಕದ ರಾಜಕೀಯ ಹೈಡ್ರಾಮ ಹೆಚ್ಚೂಕಮ್ಮಿ ಸಮಿಫೈನಲ್ ಹಂತಕ್ಕೆ ಬಂದು ತಲುಪಿದಂತಾಗಿದೆ. ಇವತ್ತೇ ಸಂಜೆ ಆರು ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ೧೦ ಬಂಡಾಯ ಶಾಸಕರಿಗೆ ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯ, ಆದಷ್ಟು ಬೇಗ ಇದಕ್ಕೊಂದು ಮಂಗಳ ಹಾಡುವಂತೆ ಸ್ಪೀಕರ್‌ಗೆ ಸೂಚನೆ ನೀಡಿದೆ. ಅದು ಕೇವಲ ಸೂಚನೆಯಾಗಿರೋದ್ರಿಂದ, ಸ್ಪೀಕರ್ ಮೇಲೆ ಯಾವ ಒತ್ತಡವನ್ನೂ ನ್ಯಾಯಾಲಯ ಹಾಕಿಲ್ಲ. ಹಾಗಾಗಿ, ನನಗೆ ರಾಜೀನಾಮೆಗಳನ್ನು ಪರಾಮರ್ಶಿಸಲು ಒಂದಷ್ಟು ಸಮಯ ಬೇಕು ಅಂತ ರಮೇಶ್ ಕುಮಾರರು ಸುರ್ಪೀಂ ಕೋರ್ಟಿಗೆ ಅರ್ಜಿ ಹಾಕಿರುವ ಲೇಟೆಸ್ಟ್ ಸುದ್ದಿ ಹೊರ ಬರುತ್ತಿದೆ.

ಆದರೆ ಬಿಜೆಪಿ ಈ ಸಾರಿ ತನ್ನ ಆಪರೇಷನ್ ಬಗ್ಗೆ ಅದೆಷ್ಟು ಅದಮ್ಯ ವಿಶ್ವಾಸದಲ್ಲಿದೆಯೆಂದರೆ, ಸಚಿವ ಸಂಪುಟದ ಪಟ್ಟಿಯೇ ತಯಾರಾಗಿ ಯಾರ್‍ಯಾರಿಗೆ ಯಾವ್ಯಾವ ಖಾತೆ ಅನ್ನೋ ಹಂಚಿಕೆಯೂ ಮುಗಿದುಹೋಗಿದೆ ಅನ್ನೋ ಲೇಟೆಸ್ಟ್ ವರ್ತಮಾನ ಕಮಲ ಪಾಳಯದಲ್ಲಿ ಕೇಳಿಬರುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ಅಲ್ಲವೋ ಗೊತ್ತಿಲ್ಲ, ಆದರೆ ವಿಧಾನಸೌಧ, ಯಡಿಯೂರಪ್ಪನವರ ನಿವಾಸ ಧವಳಗಿರಿ, ಪ್ರೆಸ್ಸ್‌ಕ್ಲಬ್, ಮಲ್ಲೇಶ್ವರಂ ಬಿಜೆಪಿ ಕಚೇರಿಯ ಆವರಣದಲ್ಲಿ ಈ ಮಾತುಕತೆಗಳು ಜೋರಾಗಿ ಚರ್ಚೆಯಲ್ಲಿವೆ.

ಆ ಚರ್ಚೆಯ ಒಟ್ಟಾರೆ ಸಾರಾಂಶ ಇಷ್ಟು. ಹೊಸ ಸರ್ಕಾರದಲ್ಲಿ ಯಡ್ಯೂರಪ್ಪನವರು ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋದು ಫಿಕ್ಸು. ಬಿ.ಎಲ್.ಸಂತೋಷ್ ಸೇರಿದಂತೆ ಬಿಜೆಪಿಯ ಒಂದು ಬಣಕ್ಕೆ ಯಡ್ಯೂರಪ್ಪ ಸಿಎಂ ಆಗೋದು ಇಷ್ಟವಿಲ್ಲ. ಅವರು ಈಗ ಸರ್ಕಾರ ರಚನೆ ಮಾಡೋದರ ಬದಲು, ಮಧ್ಯಂತರ ಚುನಾವಣೆಗೆ ಹೋಗುವ ವಾದವನ್ನು ಮುಂದೆ ಮಾಡಿದ್ದುಂಟು. ಅದಕ್ಕಾಗೆ, ಈಗ ಕೈ-ತೆನೆಗೆ ಕೈಕೊಟ್ಟು ಕಮಲ ಮುಡಿಯುತ್ತಿರುವ ಒಂದಷ್ಟು ಶಾಸಕರ ಬಿಜೆಪಿ ಸೇರ್ಪಡೆಗೆ ಈ ಬಣದಿಂದ ವಿರೋಧ ವ್ಯಕ್ತವಾದದ್ದು. ಮಧ್ಯಂತರ ಚುನಾವಣೆ ನಡೆದರೆ ಏನಿಲ್ಲವೆಂದರು 140 ರಿಂದ 150 ಸೀಟು ನಿರಾಯಾಸವಾಗಿ ಬಿಜೆಪಿ ಗೆಲ್ಲುತ್ತೆ, ಆಗ ಯಡ್ಯೂರಪ್ಪನವರ ಹಂಗು ಇರೋದಿಲ್ಲ, ಅವರನ್ನು ಪಕ್ಕಕ್ಕೆ ಸರಿಸಿ ನಮ್ಮಲ್ಲೇ ಬೇರೆ ಯಾರಾದರು ಸಿಎಂ ಆಗಬೇಕು ಅನ್ನೋದು ಅವರ ಲೆಕ್ಕಾಚಾರವಾಗಿತ್ತು. ಆದರೆ ಸದ್ಯಕ್ಕೆ ಅವರ ವಾದ ಕೈಮೇಲಾಗಿಲ್ಲ. ಹಾಗಾಗಿ ಯಡಿಯೂರಪ್ಪ ಸಿಎಂ ಆಗಲಿದ್ದಾರೆ.

ಇನ್ನು ಬಿಜೆಪಿ ಹೊಸ ಸರ್ಕಾರದಲ್ಲಿ ಬಿಜೆಪಿಯ 20 ಶಾಸಕರಿಗೆ ಮತ್ತು ಹೊರಗಿನಿಂದ ಬಂದ 14 ಶಾಸಕರಿಗೆ ಮಂತ್ರಿ ಭಾಗ್ಯ ಕರುಣಿಸಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಸೋಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀರಾಮುಲು, ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ ಇನ್ನೂ ಮೊದಲಾದವರಿದ್ದರೆ ವಲಸಿಗ ಶಾಸಕರಲ್ಲಿ ಇಬ್ಬರು ಪಕ್ಷೇತರರನ್ನೂ ಸೇರಿಸಿ ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಹೆಸರುಗಳು ಅಂತಿಮಗೊಂಡಿವೆಯಂತೆ!

ಇನ್ನೂ ಕುತೂಹಲಕರ ಸಂಗತಿ ಅಂದ್ರೆ, ಯಡ್ಯೂರಪ್ಪನವರ ಹೊಸ ಸರ್ಕಾರದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ಫಿಕ್ಸ್ ಆಗಿದೆಯಂತೆ. ಈಶ್ವರಪ್ಪ,ಆರ್.ಅಶೋಕ್ ಜೊತೆಗೆ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಅಲ್ಲಿನ ಅಧ್ಯಕ್ಷಗಾದಿಯಿಂದ ನೇರವಾಗಿ ಎದ್ದುಬಂದು ಕಮಲದ ‘ಗೃಹಪ್ರವೇಶ’ಗೈದಿರುವ ಬಾಂಬೆಹಕ್ಕಿ ಎಚ್.ವಿಶ್ವನಾಥ್‌ರಿಗೂ ಡಿಸಿಎಂ ಭಾಗ್ಯ ಒಲಿದು ಬಂದಿದೆ ಎನ್ನಲಾಗಿದೆ! ಇದೇವೇಳೆ ಈಶ್ವರಪ್ಪ ಮತ್ತು ವಿಶ್ವನಾಥ್ ಇಬ್ಬರೂ ಕುರುಬ ಸಮುದಾಯಕ್ಕೆ ಸೇರಿರೋದ್ರಿಂದ ಒಂದೇ ಜಾತಿಗೆ ಎರಡು ಹುದ್ದೆ ಕೊಡಬಾರದೆಂಬ ಚರ್ಚೆಯೂ ಕೇಳಿಬಂದಿದ್ದು, ಈಶ್ವರಪ್ಪನವರಿಗೆ ಪ್ರಭಾವಿ ಖಾತೆಯ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನವನ್ನೂ ಬಿಟ್ಟುಕೊಟ್ಟು ಆ ಮೂರನೇ ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು ಆಯ್ಕೆ ಮಾಡಬೇಕೆನ್ನುವ ಪ್ರಸ್ತಾಪ ಚರ್ಚೆಯಾಗುತ್ತಿದೆಯಂತೆ!

ಇದನ್ನು ಕೂಸು ಹುಟ್ಟುವ ಮುನ್ನ ಕುಲಾವಿ ಎನ್ನಬೇಕೋ, ಮಾಮೂಲಿ ರಾಜಕೀಯ ವದಂತಿ ಎನ್ನಬೇಕೋ ತಿಳಿಯದಾಗಿದೆ. ಒಟ್ಟಾರೆ ಬೆಳವಣಿಗೆಗಳನ್ನು ನೋಡಿದರೆ, ಕರ್ನಾಟಕಕ್ಕೊಂದು ಸ್ಥಿರ ಜನಪರ ಸರ್ಕಾರ ದೊರೆಯುವ ಲಕ್ಷಣಗಳಂತೂ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಯಡಿಯೂರಪ್ಪನವರ ಪರಿ ಲಜ್ಜೆಗೆಟ್ಟ ರಾಜಕೀಯ ವ್ಯಕ್ತಿ ಇನ್ನೊಬ್ಬ ಇಲ್ಲ ಅನುಕೂಲಸಿಂಧು ರಾಜಕೀಯ ನಡೆಯಿಂದ ಮೈತ್ರಿ ಸರ್ಕಾರ ಹುಟ್ಟಿಕೊಂಡು ನಡೆದುಕೊಂಡು ಹೋಗುತ್ತಿದೆ ಆದರೆ ಮುಖ್ಯಮಂತ್ರಿಯಾಗುವ ಆಗಲೇಬೇಕೆಂದು ಹೆಬ್ಬಯಕೆಯಿಂದ ಈ ರೀತಿಯಾಗಿ ನಿಂತು ಸರ್ಕಾರವನ್ನು ಬೀಳಿಸುವ ಲಜ್ಜೆಗೇಡಿ ವರ್ತನೆ ಯಡಿಯೂರಪ್ಪನಿಗೆ ಮಾತ್ರ ಸಾಧ್ಯ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...