Homeಮುಖಪುಟಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ 'ಗೆಟ್ ಔಟ್'!

ಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ ‘ಗೆಟ್ ಔಟ್’!

2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ

- Advertisement -
- Advertisement -

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ. ಇದರ ಬಗ್ಗೆ ಅಲ್ಲಿ ತೀವ್ರವಾದ ಚರ್ಚೆಗಳಾಗುತ್ತಿವೆ. ಇದರಿಂದಾಗಿ ಈ ಚಿತ್ರ ಅಲ್ಲಿ ಎಬ್ಬಿಸಿರುವ ಕಂಪನಗಳ ಮಹತ್ವದ ಅರಿವಾಗುತ್ತದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ ಈ ಚಿತ್ರ ನೋಡಿದ ನಂತರ ಅಮೆರಿಕಾದ ಕರಿಯರು; ಹೀಗೆನ್ನುವ ಬದಲು ಅಮೆರಿಕಾದ ದಲಿತರು ಎನ್ನುವುದೇ ಹೆಚ್ಚು ಸೂಕ್ತ. ಇವರ ಮತ್ತು ಭಾರತದ ದಲಿತರ ಸಾಮಾಜಿಕ ಸ್ಥಿತಿಗತಿಗಳು ಒಂದೇ… ಇವರಿಬ್ಬರೂ ಸಮಾಜೋ –ರಾಜಕೀಯ ಸ್ಥಾನಮಾನಗಳಿಂದ ನಿಜವಾದ ಅರ್ಥದಲ್ಲಿ ವಂಚಿತರು ಎನಿಸುತ್ತದೆ.

ಇಂಥದ್ದೊಂದು ಥಿಯರಿಯನ್ನು ಹಾಲಿವುಡ್ ನಿರ್ದೇಶಕ ಜೋರ್ಡನ್ ಪಿಲೇ ಮುಂದಿಟ್ಟಿದ್ದಾರೆ ಎನಿಸುತ್ತದೆ. ಅವರ “ಗೆಟೌಟ್” ಸಿನೆಮಾ ಇಂಥದೊಂದು ಅಭಿಪ್ರಾಯವನ್ನು ಹುದುಗಿಸಿಕೊಂಡಿದೆ. ಇಂಥ ಥಿಯರಿ ಸುಮ್ಮನೆ ಮೂಡಿದ್ದಲ್ಲ. ಶತಶತಮಾನಗಳಿಂದಲೂ ಅಮೆರಿಕಾದಲ್ಲಿರುವ ಆಫ್ರಿಕನ್ –ಅಮೆರಿಕನ್ ಪ್ರಜೆಗಳು ತಾತ್ಸಾರ, ನಿಂದನೆ, ಅವಮಾನ, ಕಗ್ಗೊಲೆಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಅವರನ್ನು ಅವಮಾನಿಸುವ ಪ್ರಕರಣಗಳೂ ಇಂದಿಗೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೆಟೌಟ್ ಸಿನೆಮಾ ಮೂಡಿರುವಂತೆ ಕಾಣುತ್ತದೆ.

ಅಮೆರಿಕಾ ಸಿನೆ-ಟಿವಿರಂಗದಲ್ಲಿ ಜೋರ್ಡನ್ ಪಿಲೆಯದು ಖ್ಯಾತ ಹೆಸರು. ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಗೆಟೌಟ್ ಸಿನೆಮಾದ ವಿಶೇಷ ಸಂಗತಿಯೆಂದರೆ ನಿರ್ದೇಶಕರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ ಪಿಲೆ ಕೂಡ ಆಫ್ರಿಕನ್ ಅಮೆರಿಕನ್. ಇದು ಕೂಡ ಇಥದ್ದೊಂದು ಥಿಯರಿಗೆ ಮತ್ತಷ್ಟೂ ಬಲಕೊಟ್ಟಿದೆ.

ಅಮೆರಿಕಾದ ಕುಕೇಶಿಯನ್ (ಶ್ವೇತವರ್ಣಿಯರು) ಆಫ್ರಿಕಾದವರನ್ನು ಶತಶತಮಾನಗಳ ಕಾಲ ಗುಲಾಮರನ್ನಾಗಿ ನಡೆಸಿಕೊಂಡಿದೆ. ಇಂದು ಗುಲಾಮಗಿರಿ ಪದ್ಧತಿ ಅಳಿದಿದೆ. ಆದರೆ ಅದನ್ನು ಕುಕೇಶಿಯನ್ ಸಮಾಜ ಬೇರೊಂದು ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ ಎಂಬ ವಾದವನ್ನು ಜೋರ್ಡನ್ ಪಿಲೆ ನಮ್ಮ ಮುಂದಿಡುತ್ತಾರೆ.

ತಮ್ಮ ವಾದವನ್ನು ಕಥಾರೂಪಕ್ಕೆ ತಂದಿರುವ ಪಿಲೆ ಅದಕ್ಕೆ ಸಶಕ್ತ ಚಿತ್ರಕಥೆ ಸ್ವರೂಪ ನೀಡಿದ್ದಾರೆ. ಇದು ಎಷ್ಟು ಪರಿಪಕ್ವವಾಗಿದೆ ಎಂದರೆ ಎಲ್ಲಿಯೂ ಗೋಜಲು – ಗೊಂದಲವಿಲ್ಲ. ಸಂಭಾಷಣೆ ಕೂಡ ಅಷ್ಟೆ ಸ್ಪಷ್ಟತೆ-ನಿಖರತೆ ಹೊಂದಿದೆ. ಇದನ್ನು ಪಿಲೆ ಮತ್ತು ಅವರ ಸಂಗಡಿಗ ತಂತ್ರಜ್ಞರು ತೆರೆ ಮುಂದೆ ಕಾಣಿಸಿರುವ ರೀತಿ ಅನನ್ಯ.

“ಗೆಟೌಟ್” ಸಾಮಾಜಿಕ-ರಾಜಕೀಯ ಕಥನ. ಕೊಂಚ ಹಳಿ ತಪ್ಪಿದ್ದರೂ ಇದೊಂದು ನಿರ್ದೇಶಕನ ಹಳಹಳಿಕೆಯ ದುರ್ಬಲ ಡಾಕ್ಯುಮೆಂಟರಿಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜೋರ್ಡನ್ ಪಿಲೆಯ ಪರಿಶ‍್ರಮ ಅದಕ್ಕೆ ಅವಕಾಶ ನೀಡಿಲ್ಲ. ಈ ಕಾರಣದಿಂದ ಸಿನೆಮಾದ ಎಲ್ಲ ದೃಷ್ಟಿಕೋನಗಳಲ್ಲಿಯೂ ಇದು ಅತ್ಯುತ್ತಮ.

ಗೆಟೌಟ್ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಆಗರ್ಭ ಶ್ರೀಮಂತ ಕುಕೇಶಿಯನ್ ಮನೆತನದ ಯುವತಿ ರೋಸಿ ಆರ್ಮಿಟೆಜ್ ತನ್ನ ಆಫ್ರಿಕನ್ –ಅಮೆರಿನ್ ಬಾಯ್ ಫ್ರೆಂಡ್ ಕ್ರಿಸ್ ಜೊತೆ ತನ್ನ ಅರಮನೆಯಂಥ ಮನೆಗೆ ಅಡಿಯಿಡುತ್ತಾಳೆ. ಕಾಲಿಟ್ಟ ಗಳಿಗೆಯಿಂದಲೂ ಕ್ರಿಸ್ ಗೆ ನಾನಾರೀತಿಯ ಮಾನಸಿಕ ಯಾತನೆಗಳು ಶುರುವಾಗುತ್ತವೆ. ರೋಸಿ ಅಪ್ಪ ಡೀನ್ ಅರ್ಮಿಟೇಜ್ ನರರೋಗ ಶಾಸ್ತ್ರಜ್ಞ. ಅಮ್ಮ ಕ್ಯಾಥ್ರೆನ್ ಕೀನರ್ ಸಮ್ಮೋಹಿನಿ ತಜ್ಞೆ.

ಈ ಎರಡು ಪಾತ್ರಗಳು ಮಾಡುತ್ತಿರುವ ವೃತ್ತಿಗಳು ಕೂಡ ಸಾಂಕೇತಿಕ. ಡೀನ್ ಅರ್ಮಿಟೇಜ್ ತನ್ನ ಮನೆತನದ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ ಹೋಗುತ್ತಾನೆ. ಪ್ರತಿಹಂತದಲ್ಲಿಯೂ ಆ ಎಲ್ಲ ಮಾತುಗಳು ಆತ ಆಫ್ರಿಕನ್ –ಅಮೆರಿಕನ್ ಸಮುದಾಯ (ಕರಿಯರು) ದವರ ಬಗ್ಗೆ ಹೊಂದಿರುವ ಹೇವರಿಕೆಗಳನ್ನು ವ್ಯಕ್ತ ಮಾಡುತ್ತಲೇ ಹೋಗುತ್ತವೆ. ಈತನ ಹೆಂಡತಿ, ಮಗ ಕೂಡ ಇದೇ ಸ್ವಭಾವದವರು: ಚಿತ್ರದ ಕೊನೆಕೊನೆ ಹಂತ ನಮ್ಮನ್ನು ಮತ್ತೊಂದು ಮಹಾನ್ ಶಾಕ್ ಗೆ ದೂಡುತ್ತದೆ. ಅದನ್ನು ನಾನಿಲ್ಲಿ ವಿವರಿಸಲು ಹೋಗುವುದಿಲ್ಲ.

ಗೆಟ್ ಔಟ್ ಚಿತ್ರದ ದೃಶ್ಯ

ಡೀನ್ ಅರ್ಮಿಟೇಜ್ ತಾನು ಲಿಬರಲ್ ಧೋರಣೆಯುಳ್ಳವನು, ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯಲ್ಲಿ ಬರಾಕ್ ಒಬಾಮನನ್ನು ಬೆಂಬಲಿಸಿದೆ ಎನ್ನುತ್ತಾನೆ. ಮಾತುಗಳು ಪ್ರಗತಿಪರತೆಯ ಮುಖವಾಡ ಹೊಂದಿವೆ. ಆದರೆ ಆತನ ಅಂತರಂಗದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ.

ಡೀನ್ ಅರ್ಮಿಟೇಜ್ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆಫ್ರಿಕನ್ –ಅಮೆರಿಕನ್ ಸಮುದಾಯದವರು. ಇವರ ವರ್ತನೆ, ಹಾವಭಾವ-ಸ್ವಭಾವ ಎಲ್ಲವೂ ಕೃತಕ ಎಂದು ಕ್ರಿಸ್ ಗೆ ಮೇಲಿಂದ ಮೇಲೆ ಅನಿಸತೊಡಗುತ್ತದೆ. ಈ ದೊಡ್ಡಮನೆಯ ಪಾರ್ಟಿಗೆ ಬಂದ ಕುಕೇಶಿಯನ್ ಸಮುದಾಯದವರಿಗೂ ಕೂಡ ಆಫ್ರಿಕನ್ –ಅಮೆರಿಕನ್ ಸಮುದಾಯದ ಬಗ್ಗೆ ಹೇವರಿಕೆ ನೋಟ. ಅಲ್ಲೊಬ್ಬ ಕಪ್ಪುವರ್ಣೀಯ ಯುವಕನ ಜೊತೆ ಆತನಿಗಿಂತ ವಯಸಿನಲ್ಲಿ ಸಾಕಷ್ಟು ಹಿರಿಯಳಾದ ಮಹಿಳೆ ಸಾಂಗತ್ಯ ಹೊಂದಿರುತ್ತಾಳೆ. ಅದ್ಹೇಕೆ ಎಂದು ಚಿತ್ರ ತನ್ನದೇ ಧಾಟಿಯಲ್ಲಿ ವಿವರಿಸುತ್ತದೆ.

ತನ್ನ ಗ್ರಹಿಕೆಗಳೆಲ್ಲವನ್ನೂ ಕ್ರಿಶ್ ತನ್ನ ಪೊಲೀಸ್ ಗೆಳೆಯನ ಜೊತೆ ಪೋನಿನಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಅದು ಕೂಡ ಕೊನೆಯಲ್ಲಿ ಈತನ ನೆರವಿಗೆ ಬರುತ್ತದೆ. ಕ್ರಿಸ್ ಗೆ ಕುಕೇಶಿಯನ್ ರೋಸಿ ಮನೆತನದ ಎಲ್ಲರ  ಸ್ವಭಾವ ಆಷಾಢಭೂತಿತನದಿಂದ ಕೂಡಿದೆ, ಬೇಗನೆ ಇಲ್ಲಿಂದ ಪಾರಾಗಬೇಕು ಎಂದು ಮನದಟ್ಟಾಗುತ್ತದೆ. ಹೊರಡಲು ಅನುವಾಗುತ್ತಾನೆ. ಅಷ್ಟರಲ್ಲೆ ಆತನ ಕೊಲೆಯ ಪಿತೂರಿ ನಡೆಯುತ್ತದೆ. ಇದರಿಂದ ಕ್ರಿಸ್ ಹೇಗೆ ಪಾರಾದ ಎನ್ನುವುದನ್ನು ಸಿನೆಮಾ ನೋಡಿ ಅರಿಯುವುದೇ ಸೂಕ್ತ.

ಇಂದಿಗೂ ಅಮೆರಿಕಾದಲ್ಲಿ ಜನಾಂಗೀಯ ದ್ವೇಷ ನಿಂತಿಲ್ಲ. ಕುಕೇಶಿಯನ್ (ಶ್ವೇತವರ್ಣೀಯರು) ಆಫ್ರಿಕನ್ –ಅಮೆರಿಕನ್ಸ್ ವ್ಯಕ್ತಿಗಳನ್ನು ಕಗ್ಗೊಲೆ ಮಾಡಿದ ವರದಿಗಳು ಆಗಾಗ್ಗೆ ಬರುತ್ತಲೇ ಇವೆ. ಅಲ್ಲಿನ ಪೊಲೀಸ್ ಇಲಾಖೆಯ ಕುಕೇಶಿಯನ್ಸ್ ಗಳಲ್ಲಿಯೂ ಇಂಥ ಜನಾಂಗೀಯ ದ್ವೇಷವಿದೆ. ಕಪ್ಪುವರ್ಣೀಯರು, ಶ್ವೇತವರ್ಣೀಯ ಪೊಲೀಸ್ ಅಧಿಕಾರಿಗಳ ಗುಂಡೇಟಿಗೆ ವಿನಾಃಕಾರಣ ಬಲಿಯಾದ ಉದಾಹರಣೆಗಳು ಸಾಕಷ್ಟು.

ಇಂಥ ಉದಾಹರಣೆಗಳು ಕೂಡ “ಗೆಟೌಟ್” ಸಿನೆಮಾದ ಅಂತ್ಯ ಬದಲಾಗಲು ಕಾರಣವಾಗಿದೆ. ಈ ಮೊದಲು ಇದರ ಕ್ಲೈಮ್ಯಾಕ್ಸ್ ಬೇರೆಯದೇ ಆಗಿತ್ತು. ಯಾವಾಗ ಅಲ್ಲಿನ ಪೊಲೀಸರ ಎನ್ ಕೌಂಟರಿಗೆ ಕಪ್ಪುವರ್ಣೀಯರು ಬಲಿಯಾಗುವ ಪ್ರಕರಣಗಳು ಹೆಚ್ಚಾಯಿತೋ ಆಗ ನಿರ್ದೇಶಕ ಜೋರ್ಡನ್ ಪಿಲೆ ಮತ್ತು ತಂಡದವರು ಕ್ಲೈಮ್ಯಾಕ್ಸ್ ಗೆ ಬೇರೆಯದೇ ಸ್ವರೂಪ ನೀಡಲು ನಿರ್ಧರಿಸಿದರು.

ಕುಕೇಶಿಯನ್ ಸಮಾಜದಲ್ಲಿ ಮಡುಗಟ್ಟಿರುವ ಜನಾಂಗೀಯ ದ್ವೇಷ ಯಾವ ಆಯಾಮಗಳನ್ನು ತೆಗೆದುಕೊಂಡಿದೆ, ಅದು ಯಾವ ಸ್ವರೂಪದಲ್ಲಿ ಮುಂದುವರಿದಿದೆ ಎನ್ನುವುದನ್ನು ನಿರ್ದೇಶಕ ಜೋರ್ಡನ್ ಪಿಲೆ ಗ್ರಹಿಸಿ  ಮುಂದಿಟ್ಟಿರುವ ರೀತಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ.

ಜೋರ್ಡನ್ ಪಿಲೆ

ಈ ಸಿನೆಮಾಕ್ಕೆ ಟೊನಿ ಲಿವರ್ ಕ್ಯಾಮೆರಾ ಹಿಡಿದಿದ್ದಾರೆ. ಅದು ಚಿತ್ರಕಥೆಯ ಸಶಕ್ತತೆಯನ್ನು ಮತ್ತಷ್ಟೂ ಹೆಚ್ಚಿಸಿದೆ. ಮೈಕೆಲ್ ಅಬ್ಲಸ್ ನೀಡಿರುವ ಸಂಗೀತಕ್ಕೂ ಇದೇ ಮಾತು ಸಲ್ಲುತ್ತದೆ. 2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ.

ಅಭಿನಯದ ಬಗ್ಗೆ ಹೇಳುವುದಾದರೆ ಕ್ರಿಸ್ ಆಗಿರುವ ಡ್ಯಾನಿಯಲ್ ಅಭಿನಯ ಅನನ್ಯ. ಈತನ ಕಂಗಳೇ ಸಂಭಾಷಣೆಗಳನ್ನು ಹೇಳುತ್ತವೆ. ಕೆಲವೊಂದು ದೃಶ್ಯಗಳಲ್ಲಿ ಈತನ ಅಭಿನಯ ಅಬ್ಬಾ ಎಂಬ ಉದ್ಗಾರದೊಡನೆ ಮೆಚ್ಚುಗೆ ಪಡೆಯುತ್ತದೆ. ರೋಸ್ ಅರ್ಮಿಟೇಜ್ ಆಗಿರುವ ಆಲಿಸನ್ ವಿಲಿಯಮ್ಸ್, ಮಿಸ್ಸಿ ಅರ್ಮಿಟೇಜ್ ಆಗಿರುವ ಕ್ಯಾಥೆರಿನ್ ಕೀರ್ನರ್, ಡೀನ್ ಅರ್ಮಿಟೇಜ್ ಪಾತ್ರಧಾರಿ ಬ್ರಾಡ್ಲಿ, ಜಿಮ್ ಹಡ್ಸನ್ ಆಗಿ ಅಭಿನಯಿಸಿರುವ ಸ್ಟಿಫನ್ ರೂಟ್ ಅಭಿನಯ ಮನೋಜ್ಞ.

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...