Homeಮುಖಪುಟನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ – 22

ಸಮಸ್ಯೆಗಳ ಪರಿಹಾರ

ಸಮಸ್ಯೆಗಳು ಜೀವನದ ಒಂದು ಅವಿಭಾಜ್ಯ ಅಂಗ. ಹಾಗೆಂದು ಸಮಸ್ಯೆಯಿಂದ ಓಡಿ ಹೋಗುವುದಾಗಲೀ, ಆತ್ಮಹತ್ಯೆಯಾಗಲೀ ಪರಿಹಾರವಲ್ಲ. ಜೀವನಾವಶ್ಯಕ ಕಲೆಗಳಲ್ಲಿ ಸಮಸ್ಯೆ ಬಗೆಹರಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ಜೊತೆ ಜೊತೆಯಾಗಿ ಹೋಗುತ್ತವೆ. ಸಮಸ್ಯೆ ಪರಿಹಾರಕ್ಕೆ ಎಲ್ಲೋ ಒಂದು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದ್ದರೆ, ತೆಗೆದುಕೊಂಡ ನಿರ್ಧಾರ ಇನ್ನೆಲ್ಲೋ ಒಂದು ಸಮಸ್ಯೆಯನ್ನು ಸೃಷ್ಟಿಸಲೂಬಹುದು. ಹಾಗಾಗಿ ಅವೆರಡಕ್ಕೂ ಒಂದು ರೀತಿಯ ನಂಟು ಇರುವಂತಿದ್ದರೂ ಎಲ್ಲಾ ಸಮಸ್ಯೆಗೂ ನಿರ್ಧಾರವೇ ಪರಿಹಾರ ಎಂತಲೂ ಇಲ್ಲ; ಎಲ್ಲಾ ನಿರ್ಧಾರಗಳೂ ಹೊಸ ಸಮಸ್ಯೆಗೆ ಕಾರಣವಾಗುತ್ತವೆ ಎಂತಲೂ ಇಲ್ಲ.

ಇಲ್ಲಿ ಸಮಸ್ಯೆಯನ್ನು ನಾವು ಎರಡು ವಿಧವಾಗಿ ಪರಿಗಣಿಸಬಹುದು. ಒಂದು ವೈಯುಕ್ತಿಕ ಅಥವಾ ಸಾಮಾಜಿಕ. ಇದು ಮನಶಾಸ್ತ್ರಕ್ಕೆ ಸಂಬಂಧಿಸಿದ್ದು, ಮತ್ತೊಂದು ವಿಜ್ಞಾನಕ್ಕೆ ಸಂಬಂಧಿಸಿದ್ದು, ಅಂದರೆ ಗಣಿತ, ವ್ಯಾಕರಣ, ವೈದ್ಯಕೀಯ, ಇತ್ಯಾದಿ.. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ, ಕೇವಲ ವೈಯುಕ್ತಿಕ ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಒಟ್ಟಿನಲ್ಲಿ ಸಮಸ್ಯೆ ಏನೇ ಇರಲಿ, ಅದು ಸ್ಪಷ್ಟವಾಗಿದ್ದಷ್ಟೂ ಪರಿಹಾರ ಸುಲಭ. ಸಮಸ್ಯೆ ಏನು ಎಂಬುದೇ ತಿಳಿಯದಿದ್ದಲ್ಲಿ ಪರಿಹಾರವೂ ಕಷ್ಟಸಾಧ್ಯ. ಪರಿಹಾರಕ್ಕೆ ನಮಗೆ ಬೇಕಾಗಿರುವುದು ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆ. ಇವೆರಡರ ಬಗ್ಗೆ ನಾನು ಈಗಾಗಲೇ ತಿಳಿಸಿದ್ದೇನೆ.

ಸಮಸ್ಯೆಯ ಪರಿಹಾರದಲ್ಲಿ ನಮ್ಮ ಮನಃಸ್ಥಿತಿಯೂ ಮುಖ್ಯ ಭೂಮಿಕೆ ವಹಿಸುತ್ತದೆ. ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ. ಅದೇ ರೀತಿ ಸಮಸ್ಯೆಯ ಎಲ್ಲಾ ಪಾರ್ಶ್ವಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗಿಲ್ಲದಿದ್ದಲ್ಲಿ, ನಮಗೆ ಗೊತ್ತಿರುವ ಅಲ್ಪ ಮಾಹಿತಿಯ ಆಧಾರದ ಮೇಲೆ, ಪರಿಹಾರಕ್ಕೆ ಕೈ ಹಾಕಿ ವಿಪರೀತ ಪರಿಣಾಮ ಎದುರಿಸಬೇಕಾಗುತ್ತದೆ. ಉದಾ: ಎಲೆಕ್ಟ್ರಿಕ್ ಮೀಟರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಒಲೆಯ ಮೇಲಿರಿಸಿದ ಕಾಯ್ದ ಎಣ್ಣೆಗೆ ಬೆಂಕಿ ತಗುಲಿದಾಗ, ನಾವು ಬೆಂಕಿ ನಂದಿಸಲು ಅದರ ಮೇಲೆ ನೀರು ಎರಚಲು ಹೋದಲ್ಲಿ, ವಿದ್ಯುತ್ ಶಾಕಿನಿಂದ ಅಥವಾ ದೊಡ್ಡ ಬೆಂಕಿ ಅನಾಹುತದಿಂದ ಹೆಚ್ಚಿನ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಸಮಸ್ಯೆ ಅರ್ಥವಾಗದಿದ್ದಲ್ಲಿ, ನಮ್ಮಲ್ಲಿ ಸಾಮರ್ಥ್ಯ/ಸಂಪನ್ಮೂಲದ ಕೊರತೆ ಇದ್ದಲ್ಲಿ, ಪರಿಹಾರಕ್ಕೆ ನಾವೊಬ್ಬರೇ ಯತ್ನಿಸದೇ, ಕೂಡಲೇ ಬೇರೆಯವರ ಸಹಾಯ ಪಡೆಯಬೇಕು. ಇದು ಸಮಸ್ಯೆ ಪರಿಹಾರ ಕಲೆಯ ಮುಖ್ಯ ಎಚ್ಚರಿಕೆ.

ಮೊಟ್ಟ ಮೊದಲಿಗೆ ನಾವು ಸಮಸ್ಯೆ ಏನು ಎಂಬುದನ್ನು ಸರಿಯಾಗಿ ಅರಿಯಬೇಕು. ಸಮಸ್ಯೆ ನೇರವಾಗಿ ನಮ್ಮ ಕಣ್ಣಿಗೆ ಕಾಣುವುದು ಅಪರೂಪ, ಕೇವಲ ಅದರ ಲಕ್ಷಣಗಳು ನಮಗೆ ಗೋಚರಿಸುತ್ತವೆ. ಸಮಸ್ಯೆ ಎಲ್ಲೋ ಇರುತ್ತದೆ, ಲಕ್ಷಣಗಳು ಇನ್ನೆಲ್ಲೋ ಕಾಣಿಸಿಕೊಳ್ಳುತ್ತವೆ. ಹೇಗೆ ವೈದ್ಯರು ನಮ್ಮ ಕಾಯಿಲೆ ಕಂಡು ಹಿಡಿಯುವಾಗ ನಮ್ಮಿಂದ ತೊಂದರೆಯ ಲಕ್ಷಣಗಳನ್ನು ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾವೂ ಸಹ ಸಮಸ್ಯೆಯ ಗುಣ-ಲಕ್ಷಣಗಳನ್ನು ಗುರುತಿಸಿ, ವಿಶ್ಲೇಷಿಸಿ ಅದರಿಂದ ಸಮಸ್ಯೆ ಏನು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದರಲ್ಲೂ ಸಮಸ್ಯೆಗೆ “ಮೂಲ ಕಾರಣ” ಏನು ಎಂಬುದನ್ನು ತಿಳಿದು, ನಂತರ ಮೂಲ ಕಾರಣ ಹೋಗಲಾಡಿಸುವಂತಹ ಪರಿಹಾರ ಹುಡುಕಬೇಕಾಗುತ್ತದೆ. ಮೂಲ ಕಾರಣ ತಿಳಿಯದಿದ್ದರೆ ನಾವು ಪರಿಹಾರಕ್ಕೆ ದಾರಿ ಸಿಕ್ಕದೆ, ಅದರ ಚಕ್ರವ್ಯೂಹದಲ್ಲಿ ಸಿಲುಕುವುದು ನಿಶ್ಚಿತ.

ಮೂಲ ಕಾರಣ (ರೂಟ್ ಕಾಸ್) ಹುಡುಕಲು ಹಲವಾರು ಉಪಕರಣಗಳಿವೆ. ಅವುಗಳಲ್ಲಿ ಒಂದು “ಫೈವ್ ವೈ” (Five Why) ಇದರಲ್ಲಿ ಸಮಸ್ಯೆಯ ಬಗ್ಗೆ ಐದು ಬಾರಿ “ಏಕೆ?“ ಎಂದು ಪ್ರಶ್ನಿಸುವುದು. ಈ ಐದು ಬಾರಿಯ ಪ್ರಶ್ನೆಗೆ ಉತ್ತರ ಸಿಗುವಂತಿದ್ದರೆ ನಮಗೆ ಸಮಸ್ಯೆಯ ಮೂಲ ಕಾರಣ ಸ್ಪಷ್ಟವಾಗುತ್ತದೆ.

ಇನ್ನೊಂದು ಉಪಕರಣ ”ಫಿಷ್ ಬೋನ್” ಡಯಾಗ್ರಾಮ್. ಇದರಲ್ಲಿ ಸಮಸ್ಯೆಗೆ ಯಾವುದು ಕಾರಣ – ನಮ್ಮ ವ್ಯವಸ್ಥೆಯೇ, ಸಲಕರಣೆಗಳೇ, ಪರ್ಯಾವರಣವೇ, ಬಳಕೆಯ ವಸ್ತುಗಳೇ, ಜನರೇ ಅಥವಾ ಪ್ರಕ್ರಿಯೆಯೇ? ಎಂಬುದಾಗಿ ಅವುಗಳ ಕಾರ್ಯವನ್ನು ನಿರೀಕ್ಷಿಸಿ, ವಿಶ್ಲೇಶಿಸಿ ಯಾವುದು “ಕಾರಣ”, ಯಾವುದು ಲಕ್ಷಣ ಎಂಬ ತೀರ್ಮಾನಕ್ಕೆ ಬರುವುದು. ಚಿತ್ರ ಮೀನಿನ ಮೂಳೆಯ ಆಕಾರದಲ್ಲಿರುವುದರಿಂದ ಇದಕ್ಕೆ ಫಿಶ್ ಬೋನ್ ಎನ್ನುತ್ತಾರೆ.

ಮೇಲಿನ ರೀತಿಗಳಲ್ಲದೆ ಸಮಸ್ಯೆ ಪರಿಹಾರಕ್ಕೆ ಇನ್ನೂ ಕೆಲವು ತಂತ್ರಗಳನ್ನು ಬಳಸಬಹುದು. ಅವೆಂದರೆ:

·         ಸಮಸ್ಯೆಯ ಒಂದು ನಿಜರೂಪ ಮಾದರಿ (ಮೊಡೆಲ್) ಮಾಡಿಕೊಂಡು ಅದರ ಮೇಲೆ ಮೊದಲು ಪ್ರಯೋಗ ಮಾಡುವುದು. ನಂತರ ಅದನ್ನು ನಿಜವಾದ ಸಮಸ್ಯೆಯ ಮೇಲೆ ಉಪಯೋಗಿಸುವುದು (ವೈದ್ಯರು ತಮ್ಮ ಔಷಧಿಗಳನ್ನು ಮೊದಲು ಬಲಿಪಶುಗಳ ಮೇಲೆ ಉಪಯೋಗಿಸುವ ರೀತಿಯಲ್ಲಿ).

·         ಸಮಸ್ಯೆಯ ತರಹವೇ ಇರುವ ಅನುರೂಪ ಮಾದರಿಯ ಮೇಲೆ ಪ್ರಯೋಗ ಮಾಡಿ ನೋಡುವುದು.

·         “ಹೀಗೆ ಮಾಡಿದರೆ ಹೀಗೆ ಆಗುತ್ತದೆ” ಎನ್ನುವ ಪಠ್ಯಪುಸ್ತಕ ತತ್ವವಾದವನ್ನು ಪ್ರಯೋಗಿಸಿ ನೋಡುವುದು.

·         ಸಂಕೀರ್ಣ ಸಮಸ್ಯೆಯನ್ನು ಚಿಕ್ಕ-ಚಿಕ್ಕದಾಗಿ ತುಂಡರಿಸಿ ಪರಿಹಾರ ಹುಡುಕುವುದು.

·         ಯಾವ ಯಾವ ತುಂಡುಗಳಿಗೆ ಪರಿಹಾರ ಸಿಗುತ್ತದೋ ಅಲ್ಲಿಂದ ಮುಂದಕ್ಕೆ ಹೊಸದಾಗಿ ಯೋಚಿಸುವುದು.

·         ಪರಿಹಾರ ಸಿಗದ ತುಂಡುಗಳನ್ನು ಒಟ್ಟು ಸೇರಿಸಿ ಪರಿಹಾರ ಕಂಡುಕೊಳ್ಳುವುದು

·         ಸಮಸ್ಯೆಯನ್ನು ಪರಿವರ್ತಿಸಿ ಪರಿಹಾರವಿರುವಂತಹ ಸಮಸ್ಯೆಯನ್ನಾಗಿ ಮಾಡುವುದು.

ಸಮಸ್ಯೆ ಪರಿಹಾರದ ಐದು ಹೆಜ್ಜೆಗಳು:

1.      ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಸರಿಯಾಗಿ ಗುರುತಿಸಿ, ವ್ಯಾಖ್ಯಾನಿಸುವುದು.

2.      ಅದರ ಪರಿಹಾರಕ್ಕೆ ಬೇಕಾದ ಪರ್ಯಾಯ ಮಾರ್ಗಗಳನ್ನು, ಬೇಕಾದ ಸಂಪನ್ಮೂಲ ಹುಡುಕುವುದು/ಕ್ರೋಢೀಕರಿಸುವುದು.

3.      ಪರ್ಯಾಯ ಮಾರ್ಗಗಳ ಉಪಯುಕ್ತತೆ/ಮೌಲ್ಯ ಕಂಡುಹಿಡಿದು, ಅವುಗಳಲ್ಲಿ ಅತ್ಯಂತ ಸೂಕ್ತವಾದುದನ್ನು ಆಯ್ದುಕೊಳ್ಳುವುದು.

4.      ಆಯ್ದ ಯೋಜನೆಯನ್ನು ಚಾಚೂ ತಪ್ಪದಂತೆ ಜಾರಿಗೊಳಿಸುವುದು.

5.      ಸಮಸ್ಯೆ ಪರಿಹಾರವಾಯಿತೋ, ಇಲ್ಲವೋ ಎಂದು ನೋಡುವುದು. ಆಗಿಲ್ಲದಿದ್ದಲ್ಲಿ ಮತ್ತೆ. ಹೆಜ್ಜೆ ಕ್ರಮಾಂಕ 1 ರಿಂದ ಪ್ರಾರಂಭಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...