Homeಕರ್ನಾಟಕಗದಗ ಪ್ರವಾಹ ಭೀಕರವಲ್ಲ: ಬಿಜೆಪಿ ಮತ್ತು ಮಾಜಿ ಸಚಿವರ ಮುಠ್ಠಾಳತನ ಭೀಕರ!

ಗದಗ ಪ್ರವಾಹ ಭೀಕರವಲ್ಲ: ಬಿಜೆಪಿ ಮತ್ತು ಮಾಜಿ ಸಚಿವರ ಮುಠ್ಠಾಳತನ ಭೀಕರ!

- Advertisement -
- Advertisement -

(ಇಂಟ್ರೋ: ಶ್ರವಣಕುಮಾರ್ ಹಡಗಲಿ ಮತ್ತು ರಫೀಕ್ ಕೊಣ್ಣೂರು- ಗೌರಿ ಲಂಕೇಶ್ ರವರ ಅಭಿಮಾನಿಗಳಾದ ಈ ಇಬ್ಬರು ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕುಗಳ ಪ್ರವಾಹಪೀಡಿತ ಊರುಗಳಿಗೆ ಭೇಟಿ ಕೊಟ್ಟು ಫೋಟೊ ಮತ್ತು ವಿಡಿಯೋ ಒದಗಿಸಿದ್ದಾರೆ. ಅವರಿಗೆ ನಮ್ಮ ತಂಡದಿಂದ ಧನ್ಯವಾದಗಳು)

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಹೋಲಿಸಿದರೆ ಮಳೆ-ಪ್ರವಾಹದ ಕಾರಣಕ್ಕೆ ಗದಗ ಜಿಲ್ಲೆಗೇನೂ ದೊಡ್ಡ ನಷ್ಟ (ಸಾಪೇಕ್ಷವಾಗಿ) ಸಂಭವಿಸಿಲ್ಲ. ಧಾರವಾಡ-ಹುಬ್ಬಳ್ಳಿ ಕಡೆ ಹದಿನೈದು ದಿನಗಟ್ಟಲೇ ಮಳೆ ಹಿಡಿಯಿತೆಂದರೆ ಬೆಣ್ಣೆಹಳ್ಳ ಭರಪೂರ ಹರಿಯುತ್ತದೆ, ನವಿಲುತೀರ್ಥದಿಂದ ನೀರು ಬಿಡುಗಡೆ ಹೆಚ್ಚಾದಂತೆ ಮಲಪ್ರಭೆ ಉಕ್ಕತೊಡಗುತ್ತಾಳೆ.

ಮಹಾರಾಷ್ಟ್ರದ ಕೋಯ್ನಾದಿಂದ ಯಾವಾಗ ಎಷ್ಟು ಪ್ರಮಾಣದ ನೀರು ಬಿಡುತ್ತಾರೋ ಎಂಬುದರ ಮಾಹಿತಿ ಅಸಮರ್ಪಕವಾಗಿರುವುದರಿಂದ ಬೆಳಗಾವಿಯ ಜಿಲ್ಲಾಡಳಿತ ತತ್ತರಿಸಿ ಹೋಗುತ್ತದೆ. ಆದರೆ, ಗದಗಿಗೆ ಮೊದಲೇ ಮುನ್ಸೂಚನೆ ಸಿಗುವುದರಿಂದ ಇಲ್ಲಿ ಮೊದಲೇ ನಿಗಾ ವಹಿಸಲು ಸಾಧ್ಯ. ಈ ಸಲ ಜಿಲ್ಲಾಡಳಿತ ಮೊದಲೇ ಎಚ್ಚೆತ್ತ ಪರಿಣಾಮವಾಗಿ ಅಂತಹ ಹಾನಿಯೇನೂ ಸಂಭವಿಸಿಲ್ಲ.

ಎಲ್ಲಿ ಜನಪ್ರತಿನಿಧಿಗಳು?
ಅಂಡು ಸುಟ್ಟ ಬೆಕ್ಕಿನಂತೆ ಈಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಲೆ ತುಂಬ ಸಂಪುಟ ವಿಸ್ತರಣೆಯನ್ನೆ ತುಂಬಿಕೊಂಡ ಪರಿಣಾಮ ಅವರ ಆಗಮನದಿಂದ ಅಧಿಕಾರಿಗಳ ಮೇಲೆ ಯಾವ ಪರಿಣಾಮವೂ ಆಗಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರಿಗೆ ಪ್ರವಾಹ ದುರಂತ ತಾಕಿಯೇ ಇಲ್ಲ. ಬಿಜೆಪಿಯ ಶಾಸಕರಂತೂ ಸಚಿವಗಿರಿ ಪಡೆಯುವ ಉಮೇದಿನಲ್ಲೇ ಇದ್ದಾರೆ.

ಮಳೆ ಮತ್ತು ಪ್ರವಾಹ ಕೇವಲ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಗದಗ ಜಿಲ್ಲೆಗಳಿಗೆ ಅಷ್ಟೇ ಸೀಮಿತವಾಗಿಲ್ಲ. ಕೊಡಗು ಮತ್ತು ಕರಾವಳಿಯ ಮೂರು ಜಿಲ್ಲೆಗಳೂ ಇದರಿಂದ ತೊಂದರೆಗೆ ಸಿಲುಕಿವೆ. ಅಧಿಕೃತ ಅಂಕಿಅಂಶದ ಪ್ರಕಾರವೇ ರಾಜ್ಯದ 15 ಜಿಲ್ಲೆಗಳು ಮಳೆ ಮತ್ತು ಪ್ರವಾಹದ ಕಾರಣದಿಂದ ತತ್ತರಿಸಿ ಹೋಗಿವೆ. 15 ಜಿಲ್ಲೆಗಳು ಸಂಕಟದಲ್ಲಿ ಇರುವಾಘ ರಾಜ್ಯದ 28 ಸಂಸದರು ಎಲ್ಲ ಮುಚ್ಚಿಕೊಂಡು ಸುಮ್ಮನಿದ್ದಾರೆ. ಅದರಲ್ಲೂ ಬಿಜೆಪಿಯ 25 ಸಂಸದರು ಈ ಬಗ್ಗೆ ಮಾತೇ ಆಡಿಲ್ಲ.
ನಿನ್ನೆ ಬಾಯಿ ಬಿಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ: ರಾಜ್ಯದಿಂದ ಅನುದಾನ ಕೋರಿ ಕೇಂದ್ರಕ್ಕೆ ಮನವಿಯೇ ಬಂದಿಲ್ಲ ಎಂದು…..

ಶಿವನೇ, sorry, ರಾಘವೇಂದ್ರ ಸ್ವಾಮಿಯೇ, ಈ ಜೋಶಿ ಎಂಬ ಮನೆಹಾಳನಿಗೆ ಮೊದಲು ಬುದ್ಧಿ ಕೊಡು. ತಮ್ಮದೇ ಪಕ್ಷದ ರಾಜ್ಯ ಸರ್ಕಾರ ವಿಶೇಷ ನೆರವಿಗೆ ಮನವಿ ಸಲ್ಲಿಸಬೇಕಂತೆ! ಅಲ್ಲಿವರೆಗೆ ಈ ಜೋಶಿ ಸಾಹೇಬರು ಕೇಂದ್ರದ ಜೊತೆ ಮಾತಾಡಲ್ಲವಂತೆ!
ಅಲ್ರೀ, ಈ ಜೋಶಿಯೂ ಕೇಂದ್ರ ಸರ್ಕಾರದ ಭಾಗವೇ ಅಲ್ಲವೇ? ಮೂರು ದಿನದ ಹಿಂದೆ ಬೆಳಗಾವಿ ತಲುಪುವ ಮೊದಲು ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಬಗ್ಗೆ ಅನುಮತಿ ಪಡೆಯಲು ಗುಲಾಮನ ತರಹ ಓಡಿ ಹೋಗಿದ್ದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವರಿಗೆ ವಿಶೇಷ ನೆರವಿಗಾಗಿ ಮನವಿ ಮಾಡಬಹುದಿತ್ತಲ್ಲ? ಕಾಶ್ಮೀರದ ‘ಅಭಿವೃದ್ಧಿ’ಗಾಗಿ ಅಲ್ಲಿ ಸಂಸತ್ತಿನಲ್ಲಿ ವೋಟಿಂಗ್ ಮಾಡುವುದು ಮುಗಿದ ನಂತರವಾದರೂ ನಮ್ಮ ಸಂಸದರು ಕರ್ನಾಟಕದ ಸಂಕಷ್ಟದ ಬಗ್ಗೆ ಯೋಚಿಸಬೇಕಿತ್ತಲ್ಲವಾ? ಈ ಹೊತ್ತಿನಲ್ಲೂ ಕೇಂದ್ರ ನೆರವು ಘೋಷಿಸಿಲ್ಲ, ರಾಜ್ಯ ಸರ್ಕಾರ ಕೇಳಿಯೇ ಇಲ್ಲ…

ಸರ್ಕಾರವೇ ಪ್ರವಾಹದಲ್ಲಿ ಸಿಕ್ಕಾಗ…
ಇಲ್ಲಿ ಸರ್ಕಾರವೇ ಇಲ್ಲ ಎಂಬ ಭಾವನೆ ಜನರಿಗೆ ಬರತೊಡಗಿದೆ. ಏಕೆಂದರೆ ಆಪರೇಷನ್ ಕಮಲ ಎಂಬ ಅಸಹ್ಯ ಹಣದ ಪ್ರವಾಹ ಹರಿಸಿ ಸರ್ಕಾರ ರಚನೆ ಮಾಡಿದ ಮೇಲೆ, ಮುಖ್ಯಮಂತ್ರಿ ಬಿಟ್ಟರೆ ಬೇರಾವ ಸಚಿವರೂ ಇಲ್ಲವೇ ಇಲ್ಲ. ಹೀಗಾಗಿ ರಾಜ್ಯ ಬಿಜೆಪಿಯೇ ಈಗ ಅಧಿಕಾರ ಮತ್ತು ಕೇಂದ್ರದ ಅಡಿ ಗುಲಾಮಗಿರಿ ಎಂಬ ಪ್ರವಾಹದಲ್ಲಿ ಮುಳುಗಿದೆ. ಹೀಗಾಗಿ, ಸಚಿವ ಸ್ಥಾನ ಆಕಾಂಕ್ಷಿಗಳಾದ ಜಗದೀಶ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಇತ್ಯಾದಿಗಳಿಗೆ ಪ್ರವಾಹದ ಸಂಕಟ ತಟ್ಟಿಯೇ ಇಲ್ಲ.

ಗದಗ: ಶಾಶ್ವತ ಪರಿಹಾರವೇ ಇಲ್ಲವೇ?
2008-2009ರ ಪ್ರವಾಹದಲ್ಲಿ ಬಾಧೆಗೆ ಒಳಗಾದ ಗ್ರಾಮಗಳೇ ಈಗಲೂ ತೊಂದರೆಗೆ ಒಳಗಾಗಿವೆ. ಗದಗ ಜಿಲ್ಲೆಯಲ್ಲಿ ಪ್ರವಾಹ ಬಂದರೆ ನರಗುಂದ ಮತ್ತು ರೋಣ ತಾಲೂಕುಗಳ ನೂರಾರು ಗ್ರಾಮಗಳು ಸಮಸ್ಯೆಗೆ ಸಿಲುಕುತ್ತವೆ. ಬೆಣ್ಣೆಹಳ್ಳ ಮತ್ತು ಮಲಪ್ರಭೆಯ ಹರಿವು ಆರ್ಭಟಿಸಿಬಿಟ್ಟರೆ ಈ ನೂರಾರು ಹಳ್ಳಿಗಳ ಜನರ ಬದುಕು ಎಕ್ಕುಟ್ಟಿ ಹೋಗುತ್ತದೆ.

2008-09ರ ಭೀಕರ ಪ್ರವಾಹದ ನಂತರ ಮೂವರು ಇದೇ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರ್ಯಾರೂ ಈ ಹಳ್ಳಿಗಳ ಶಾಶ್ವತ ಪುನರ್ವಸತಿಗೆ ಎಂದೂ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ.

ಯಡಿಯೂರಪ್ಪ ಕೃಪೆಯಿಂದ ಸಚಿವರಾಗಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲ, ಜಗದೀಶ ಶೆಟ್ಟರ್ ಆಶಿರ್ವಾದದಿಂದ ಸಚಿವರಾಗಿದ್ದ ರೋಣ ಶಾಸಕ ಕಳಕಪ್ಪ ಬಂಡಿ ತಮ್ಮ ಆ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಪ್ರವಾಹ ಬಂದರೆ ಇವರಿಬ್ಬರ ತಾಲೂಕುಗಳೇ ತೊಂದರೆಗೆ ಸಿಲುಕುವುದು. ಆದರೆ ಈ ಇಬ್ಬರೂ ಒಂದು ಶಾಶ್ವತ ಪರಿಹಾರಕ್ಕೆ ಯತ್ನಿಸಲೇ ಇಲ್ಲ.

ಈಗ ಬನ್ನಿ, 2013-18ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಎಚ್.ಕೆ. ಪಾಟೀಲರು ಕಳಕಪ್ಪ ಬಂಡಿ ಮತ್ತು ಸಿ.ಸಿ. ಪಾಟಲರಂತೆ ಪಂಡರಾಪಟ್ಟಿ ಶಾಸಕ ಎಂದು ಅನಿಸಿಕೊಂಡವರಲ್ಲ. ರಾಜ್ಯ ರಾಜಕಾರಣದಲ್ಲಿ ಎಚ್‍ಕೆ ಅವರಿಗೆ ಒಂದು ಗೌರವದ ಸ್ಥಾನವಿದೆ.

ಆದರೆ, ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ನೆರೆ-ಪ್ರವಾಹ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ರೂಪಿಸಲೇ ಇಲ್ಲ. ಅವರು ಒಂದು ಪರಿಹಾರ ಹುಡುಕಿ ಆ ಪ್ರಸ್ತಾಪವನ್ನು ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದರೂ ಸಾಕಿತ್ತು, ತಕ್ಷಣ ಅನುಮೋದನೆ ಸಿಗುತ್ತಿತ್ತು. ಗದಗಿಗೆ ನಿತ್ಯ ನೀರು ಒದಗಿಸುವ, ಗದಗ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಮೇಲ್ಮೈ ನೀರು (ಸರ್ಫೆಸ್ ವಾಟರ್, ನದಿ ನೀರು) ಒದಗಿಸುವ ದೊಡ್ಡ ಯೋಜನೆಗಳಿಗೆ ಎಲ್ಲ ನೆರವು ನೀಡಿದ ಸಿದ್ದರಾಮಯ್ಯ ಪ್ರವಾಹ ಪರಿಹಾರದ ಯೋಜನೆ ರೂಪಿಸಿದ್ದರೆ ಖಂಡಿತ ಇಲ್ಲ ಅನ್ನುತ್ತಿರಲಿಲ್ಲ.


ಹೀಗಾಗಿ, ಬಂಡಿ, ಸಿಸಿ ಪಾಟೀಲರಂತಹ ತರಹೇವಾರಿ ರಾಜಕಾರಣಿಗಲನ್ನು ಬಿಟ್ಟು ಬಿಡೋಣ. ಎಚ್. ಕೆ. ಪಾಟೀಲರಂತಹ ಹಿರಿಯ, ಗೌರವಾನ್ವಿತ ರಾಜಕಾರಣಿಯನ್ನೇ ಈಗ ನಾವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲೇಬೇಕಿದೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...