Homeಕರ್ನಾಟಕಗದಗ ಪ್ರವಾಹ ಭೀಕರವಲ್ಲ: ಬಿಜೆಪಿ ಮತ್ತು ಮಾಜಿ ಸಚಿವರ ಮುಠ್ಠಾಳತನ ಭೀಕರ!

ಗದಗ ಪ್ರವಾಹ ಭೀಕರವಲ್ಲ: ಬಿಜೆಪಿ ಮತ್ತು ಮಾಜಿ ಸಚಿವರ ಮುಠ್ಠಾಳತನ ಭೀಕರ!

- Advertisement -
- Advertisement -

(ಇಂಟ್ರೋ: ಶ್ರವಣಕುಮಾರ್ ಹಡಗಲಿ ಮತ್ತು ರಫೀಕ್ ಕೊಣ್ಣೂರು- ಗೌರಿ ಲಂಕೇಶ್ ರವರ ಅಭಿಮಾನಿಗಳಾದ ಈ ಇಬ್ಬರು ಗದಗ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕುಗಳ ಪ್ರವಾಹಪೀಡಿತ ಊರುಗಳಿಗೆ ಭೇಟಿ ಕೊಟ್ಟು ಫೋಟೊ ಮತ್ತು ವಿಡಿಯೋ ಒದಗಿಸಿದ್ದಾರೆ. ಅವರಿಗೆ ನಮ್ಮ ತಂಡದಿಂದ ಧನ್ಯವಾದಗಳು)

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಹೋಲಿಸಿದರೆ ಮಳೆ-ಪ್ರವಾಹದ ಕಾರಣಕ್ಕೆ ಗದಗ ಜಿಲ್ಲೆಗೇನೂ ದೊಡ್ಡ ನಷ್ಟ (ಸಾಪೇಕ್ಷವಾಗಿ) ಸಂಭವಿಸಿಲ್ಲ. ಧಾರವಾಡ-ಹುಬ್ಬಳ್ಳಿ ಕಡೆ ಹದಿನೈದು ದಿನಗಟ್ಟಲೇ ಮಳೆ ಹಿಡಿಯಿತೆಂದರೆ ಬೆಣ್ಣೆಹಳ್ಳ ಭರಪೂರ ಹರಿಯುತ್ತದೆ, ನವಿಲುತೀರ್ಥದಿಂದ ನೀರು ಬಿಡುಗಡೆ ಹೆಚ್ಚಾದಂತೆ ಮಲಪ್ರಭೆ ಉಕ್ಕತೊಡಗುತ್ತಾಳೆ.

ಮಹಾರಾಷ್ಟ್ರದ ಕೋಯ್ನಾದಿಂದ ಯಾವಾಗ ಎಷ್ಟು ಪ್ರಮಾಣದ ನೀರು ಬಿಡುತ್ತಾರೋ ಎಂಬುದರ ಮಾಹಿತಿ ಅಸಮರ್ಪಕವಾಗಿರುವುದರಿಂದ ಬೆಳಗಾವಿಯ ಜಿಲ್ಲಾಡಳಿತ ತತ್ತರಿಸಿ ಹೋಗುತ್ತದೆ. ಆದರೆ, ಗದಗಿಗೆ ಮೊದಲೇ ಮುನ್ಸೂಚನೆ ಸಿಗುವುದರಿಂದ ಇಲ್ಲಿ ಮೊದಲೇ ನಿಗಾ ವಹಿಸಲು ಸಾಧ್ಯ. ಈ ಸಲ ಜಿಲ್ಲಾಡಳಿತ ಮೊದಲೇ ಎಚ್ಚೆತ್ತ ಪರಿಣಾಮವಾಗಿ ಅಂತಹ ಹಾನಿಯೇನೂ ಸಂಭವಿಸಿಲ್ಲ.

ಎಲ್ಲಿ ಜನಪ್ರತಿನಿಧಿಗಳು?
ಅಂಡು ಸುಟ್ಟ ಬೆಕ್ಕಿನಂತೆ ಈಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಲೆ ತುಂಬ ಸಂಪುಟ ವಿಸ್ತರಣೆಯನ್ನೆ ತುಂಬಿಕೊಂಡ ಪರಿಣಾಮ ಅವರ ಆಗಮನದಿಂದ ಅಧಿಕಾರಿಗಳ ಮೇಲೆ ಯಾವ ಪರಿಣಾಮವೂ ಆಗಿಲ್ಲ. ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರಿಗೆ ಪ್ರವಾಹ ದುರಂತ ತಾಕಿಯೇ ಇಲ್ಲ. ಬಿಜೆಪಿಯ ಶಾಸಕರಂತೂ ಸಚಿವಗಿರಿ ಪಡೆಯುವ ಉಮೇದಿನಲ್ಲೇ ಇದ್ದಾರೆ.

ಮಳೆ ಮತ್ತು ಪ್ರವಾಹ ಕೇವಲ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಗದಗ ಜಿಲ್ಲೆಗಳಿಗೆ ಅಷ್ಟೇ ಸೀಮಿತವಾಗಿಲ್ಲ. ಕೊಡಗು ಮತ್ತು ಕರಾವಳಿಯ ಮೂರು ಜಿಲ್ಲೆಗಳೂ ಇದರಿಂದ ತೊಂದರೆಗೆ ಸಿಲುಕಿವೆ. ಅಧಿಕೃತ ಅಂಕಿಅಂಶದ ಪ್ರಕಾರವೇ ರಾಜ್ಯದ 15 ಜಿಲ್ಲೆಗಳು ಮಳೆ ಮತ್ತು ಪ್ರವಾಹದ ಕಾರಣದಿಂದ ತತ್ತರಿಸಿ ಹೋಗಿವೆ. 15 ಜಿಲ್ಲೆಗಳು ಸಂಕಟದಲ್ಲಿ ಇರುವಾಘ ರಾಜ್ಯದ 28 ಸಂಸದರು ಎಲ್ಲ ಮುಚ್ಚಿಕೊಂಡು ಸುಮ್ಮನಿದ್ದಾರೆ. ಅದರಲ್ಲೂ ಬಿಜೆಪಿಯ 25 ಸಂಸದರು ಈ ಬಗ್ಗೆ ಮಾತೇ ಆಡಿಲ್ಲ.
ನಿನ್ನೆ ಬಾಯಿ ಬಿಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಾರೆ: ರಾಜ್ಯದಿಂದ ಅನುದಾನ ಕೋರಿ ಕೇಂದ್ರಕ್ಕೆ ಮನವಿಯೇ ಬಂದಿಲ್ಲ ಎಂದು…..

ಶಿವನೇ, sorry, ರಾಘವೇಂದ್ರ ಸ್ವಾಮಿಯೇ, ಈ ಜೋಶಿ ಎಂಬ ಮನೆಹಾಳನಿಗೆ ಮೊದಲು ಬುದ್ಧಿ ಕೊಡು. ತಮ್ಮದೇ ಪಕ್ಷದ ರಾಜ್ಯ ಸರ್ಕಾರ ವಿಶೇಷ ನೆರವಿಗೆ ಮನವಿ ಸಲ್ಲಿಸಬೇಕಂತೆ! ಅಲ್ಲಿವರೆಗೆ ಈ ಜೋಶಿ ಸಾಹೇಬರು ಕೇಂದ್ರದ ಜೊತೆ ಮಾತಾಡಲ್ಲವಂತೆ!
ಅಲ್ರೀ, ಈ ಜೋಶಿಯೂ ಕೇಂದ್ರ ಸರ್ಕಾರದ ಭಾಗವೇ ಅಲ್ಲವೇ? ಮೂರು ದಿನದ ಹಿಂದೆ ಬೆಳಗಾವಿ ತಲುಪುವ ಮೊದಲು ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಬಗ್ಗೆ ಅನುಮತಿ ಪಡೆಯಲು ಗುಲಾಮನ ತರಹ ಓಡಿ ಹೋಗಿದ್ದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವರಿಗೆ ವಿಶೇಷ ನೆರವಿಗಾಗಿ ಮನವಿ ಮಾಡಬಹುದಿತ್ತಲ್ಲ? ಕಾಶ್ಮೀರದ ‘ಅಭಿವೃದ್ಧಿ’ಗಾಗಿ ಅಲ್ಲಿ ಸಂಸತ್ತಿನಲ್ಲಿ ವೋಟಿಂಗ್ ಮಾಡುವುದು ಮುಗಿದ ನಂತರವಾದರೂ ನಮ್ಮ ಸಂಸದರು ಕರ್ನಾಟಕದ ಸಂಕಷ್ಟದ ಬಗ್ಗೆ ಯೋಚಿಸಬೇಕಿತ್ತಲ್ಲವಾ? ಈ ಹೊತ್ತಿನಲ್ಲೂ ಕೇಂದ್ರ ನೆರವು ಘೋಷಿಸಿಲ್ಲ, ರಾಜ್ಯ ಸರ್ಕಾರ ಕೇಳಿಯೇ ಇಲ್ಲ…

ಸರ್ಕಾರವೇ ಪ್ರವಾಹದಲ್ಲಿ ಸಿಕ್ಕಾಗ…
ಇಲ್ಲಿ ಸರ್ಕಾರವೇ ಇಲ್ಲ ಎಂಬ ಭಾವನೆ ಜನರಿಗೆ ಬರತೊಡಗಿದೆ. ಏಕೆಂದರೆ ಆಪರೇಷನ್ ಕಮಲ ಎಂಬ ಅಸಹ್ಯ ಹಣದ ಪ್ರವಾಹ ಹರಿಸಿ ಸರ್ಕಾರ ರಚನೆ ಮಾಡಿದ ಮೇಲೆ, ಮುಖ್ಯಮಂತ್ರಿ ಬಿಟ್ಟರೆ ಬೇರಾವ ಸಚಿವರೂ ಇಲ್ಲವೇ ಇಲ್ಲ. ಹೀಗಾಗಿ ರಾಜ್ಯ ಬಿಜೆಪಿಯೇ ಈಗ ಅಧಿಕಾರ ಮತ್ತು ಕೇಂದ್ರದ ಅಡಿ ಗುಲಾಮಗಿರಿ ಎಂಬ ಪ್ರವಾಹದಲ್ಲಿ ಮುಳುಗಿದೆ. ಹೀಗಾಗಿ, ಸಚಿವ ಸ್ಥಾನ ಆಕಾಂಕ್ಷಿಗಳಾದ ಜಗದೀಶ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಇತ್ಯಾದಿಗಳಿಗೆ ಪ್ರವಾಹದ ಸಂಕಟ ತಟ್ಟಿಯೇ ಇಲ್ಲ.

ಗದಗ: ಶಾಶ್ವತ ಪರಿಹಾರವೇ ಇಲ್ಲವೇ?
2008-2009ರ ಪ್ರವಾಹದಲ್ಲಿ ಬಾಧೆಗೆ ಒಳಗಾದ ಗ್ರಾಮಗಳೇ ಈಗಲೂ ತೊಂದರೆಗೆ ಒಳಗಾಗಿವೆ. ಗದಗ ಜಿಲ್ಲೆಯಲ್ಲಿ ಪ್ರವಾಹ ಬಂದರೆ ನರಗುಂದ ಮತ್ತು ರೋಣ ತಾಲೂಕುಗಳ ನೂರಾರು ಗ್ರಾಮಗಳು ಸಮಸ್ಯೆಗೆ ಸಿಲುಕುತ್ತವೆ. ಬೆಣ್ಣೆಹಳ್ಳ ಮತ್ತು ಮಲಪ್ರಭೆಯ ಹರಿವು ಆರ್ಭಟಿಸಿಬಿಟ್ಟರೆ ಈ ನೂರಾರು ಹಳ್ಳಿಗಳ ಜನರ ಬದುಕು ಎಕ್ಕುಟ್ಟಿ ಹೋಗುತ್ತದೆ.

2008-09ರ ಭೀಕರ ಪ್ರವಾಹದ ನಂತರ ಮೂವರು ಇದೇ ಜಿಲ್ಲೆಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇವರ್ಯಾರೂ ಈ ಹಳ್ಳಿಗಳ ಶಾಶ್ವತ ಪುನರ್ವಸತಿಗೆ ಎಂದೂ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ.

ಯಡಿಯೂರಪ್ಪ ಕೃಪೆಯಿಂದ ಸಚಿವರಾಗಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲ, ಜಗದೀಶ ಶೆಟ್ಟರ್ ಆಶಿರ್ವಾದದಿಂದ ಸಚಿವರಾಗಿದ್ದ ರೋಣ ಶಾಸಕ ಕಳಕಪ್ಪ ಬಂಡಿ ತಮ್ಮ ಆ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಪ್ರವಾಹ ಬಂದರೆ ಇವರಿಬ್ಬರ ತಾಲೂಕುಗಳೇ ತೊಂದರೆಗೆ ಸಿಲುಕುವುದು. ಆದರೆ ಈ ಇಬ್ಬರೂ ಒಂದು ಶಾಶ್ವತ ಪರಿಹಾರಕ್ಕೆ ಯತ್ನಿಸಲೇ ಇಲ್ಲ.

ಈಗ ಬನ್ನಿ, 2013-18ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಎಚ್.ಕೆ. ಪಾಟೀಲರು ಕಳಕಪ್ಪ ಬಂಡಿ ಮತ್ತು ಸಿ.ಸಿ. ಪಾಟಲರಂತೆ ಪಂಡರಾಪಟ್ಟಿ ಶಾಸಕ ಎಂದು ಅನಿಸಿಕೊಂಡವರಲ್ಲ. ರಾಜ್ಯ ರಾಜಕಾರಣದಲ್ಲಿ ಎಚ್‍ಕೆ ಅವರಿಗೆ ಒಂದು ಗೌರವದ ಸ್ಥಾನವಿದೆ.

ಆದರೆ, ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ನೆರೆ-ಪ್ರವಾಹ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ರೂಪಿಸಲೇ ಇಲ್ಲ. ಅವರು ಒಂದು ಪರಿಹಾರ ಹುಡುಕಿ ಆ ಪ್ರಸ್ತಾಪವನ್ನು ಅವರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟಿದ್ದರೂ ಸಾಕಿತ್ತು, ತಕ್ಷಣ ಅನುಮೋದನೆ ಸಿಗುತ್ತಿತ್ತು. ಗದಗಿಗೆ ನಿತ್ಯ ನೀರು ಒದಗಿಸುವ, ಗದಗ ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಮೇಲ್ಮೈ ನೀರು (ಸರ್ಫೆಸ್ ವಾಟರ್, ನದಿ ನೀರು) ಒದಗಿಸುವ ದೊಡ್ಡ ಯೋಜನೆಗಳಿಗೆ ಎಲ್ಲ ನೆರವು ನೀಡಿದ ಸಿದ್ದರಾಮಯ್ಯ ಪ್ರವಾಹ ಪರಿಹಾರದ ಯೋಜನೆ ರೂಪಿಸಿದ್ದರೆ ಖಂಡಿತ ಇಲ್ಲ ಅನ್ನುತ್ತಿರಲಿಲ್ಲ.


ಹೀಗಾಗಿ, ಬಂಡಿ, ಸಿಸಿ ಪಾಟೀಲರಂತಹ ತರಹೇವಾರಿ ರಾಜಕಾರಣಿಗಲನ್ನು ಬಿಟ್ಟು ಬಿಡೋಣ. ಎಚ್. ಕೆ. ಪಾಟೀಲರಂತಹ ಹಿರಿಯ, ಗೌರವಾನ್ವಿತ ರಾಜಕಾರಣಿಯನ್ನೇ ಈಗ ನಾವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲೇಬೇಕಿದೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘168 ಮಕ್ಕಳನ್ನು ಕೊಂದವರ ನೆನಪಿಡಿ’ : ಇರಾನ್‌ನಿಂದ ಅಮೆರಿಕ ಅಧಿಕಾರಿಗಳ ಫೋಟೋ ಬಿಡುಗಡೆ

ಬರೋಬ್ಬರಿ 168 ಕಂದಮ್ಮಗಳ ಸಾವಿಗೆ ಕಾರಣವಾದ, ಮಿನಾಬ್‌ನ ಶಾಲೆ ಮೇಲಿನ ಕ್ಷಿಪಣಿ ದಾಳಿಗೆ ಅಮೆರಿಕದ ನೌಕಾಪಡೆಯ ಅಧಿಕಾರಿಗಳಾದ ಕಮಾಂಡರ್ ಲೀ ಆರ್. ಟೇಟ್ ಮತ್ತು ಯುಎಸ್ಎಸ್ ಸ್ಪ್ರೂಯನ್ಸ್‌ನ ಎಕ್ಸಿಕ್ಯೂಟಿವ್ ಆಫೀಸರ್ ಜೆಫ್ರಿ ಇ....

ಕೇರಳ ವಿಧಾನಸಭಾ ಚುನಾವಣೆ 2026 | ‘ಎಲ್‌ಡಿಎಫ್, ಯುಡಿಎಫ್ ದಶಕಗಳಿಂದ ರಾಜ್ಯವನ್ನು ಲೂಟಿ ಮಾಡಿವೆ’: ಪ್ರಧಾನಿ ಮೋದಿ

ಕೇರಳ ವಿಧಾನಸಭಾ ಚುನಾವಣೆ 2026 ರ ಹಿನ್ನೆಲೆಯಲ್ಲಿ ಪಾಲಕ್ಕಾಡ್‌ನಲ್ಲಿ ಭಾನುವಾರ ಬೃಹತ್ ಚುನಾವಣಾ ರ್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಯುಡಿಎಫ್ ಮತ್ತು ಎಲ್‌ಡಿಎಫ್ ಎರಡರ ಮೇಲೂ ತೀವ್ರ ದಾಳಿ ನಡೆಸಿದ್ದಾರೆ. ಈ...

ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ : ಮೂವರು ಪತ್ರಕರ್ತರು, 9 ಪ್ಯಾರಾಮೆಡಿಕಲ್ ಸಿಬ್ಬಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿ ಶನಿವಾರ (ಮಾ.28) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಮೂವರು ಪತ್ರಕರ್ತರು ಮತ್ತು ಒಂಬತ್ತು ಅರೆವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಅಲ್‌-ಜಝೀರಾ ವರದಿ ಮಾಡಿದೆ. ಜೆಝೈನ್ ರಸ್ತೆಯಲ್ಲಿ ಪತ್ರಕರ್ತರ...

ಉತ್ತರ ಪ್ರದೇಶ: 25 ವರ್ಷದ ಐಸ್ ಕ್ರೀಮ್ ಮಾರಾಟಗಾರನ ತಲೆ ಕತ್ತರಿಸಿ, ಮನೆಗೆ ತೆಗೆದುಕೊಂಡು ಹೋಗಿದ್ದ ವ್ಯಕ್ತಿ ಬಂಧನ 

ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶನಿವಾರ 25 ವರ್ಷದ ಐಸ್ ಕ್ರೀಮ್ ಮಾರಾಟಗಾರನ ಶಿರಚ್ಛೇದ ಮಾಡಲಾಗಿತ್ತು. 50 ವರ್ಷದ ಕೊಲೆಗಾರ, ಆ ವ್ಯಕ್ತಿಯ ಗಂಟಲು ಕತ್ತರಿಸಿ, ತಲೆ ಕತ್ತರಿಸಿ, ನಂತರ ಅದನ್ನು ತನ್ನ...

ಗ್ಯಾಸ್‌ ಸಿಲಿಂಡರ್‌ಗಾಗಿ ಸುಡು ಬಿಸಿಲಿನಲ್ಲಿ 4 ಗಂಟೆ ಕಾದ ವ್ಯಕ್ತಿ : ಕುಸಿದು ಬಿದ್ದು ಸ್ಥಳದಲ್ಲೇ ಸಾವು!

ಎಲ್‌ಪಿಜಿ ಸಿಲಿಂಡರ್ ಪಡೆಯಲು 41.2 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲಿನಲ್ಲಿ 4 ಗಂಟೆ ಕಾದ 55 ವರ್ಷದ ವ್ಯಕ್ತಿ, ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಅಕೋಲಾ ಬಳಿ ನಡೆದಿದೆ. ಅಕೋಲಾದಿಂದ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ: ಆರ್‌ಎಸ್‌ಎಸ್ ನಾಯಕ ಸೇರಿ 30 ಮಂದಿ ಬಂಧನ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಪೊಲೀಸರು

ಶುಕ್ರವಾರ ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ಹಿಂದೂತ್ವ ಗುಂಪುಗಳು ನಡೆಸಿದ ರಾಮನವಮಿ ಮೆರವಣಿಗೆಯಲ್ಲಿ ಮುಸ್ಲಿಂ ಅಂಗಡಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಸುಮಾರು 30 ಜನರು ಗಾಯಗೊಂಡು, ಆ ಪ್ರದೇಶದಲ್ಲಿ...

ಅತ್ಯಾಚಾರ ಪ್ರಕರಣ: ಸ್ವಘೋಷಿತ ‘ದೇವಮಾನವ’ ಅಶೋಕ್ ಖರತ್ ಪೊಲೀಸ್ ಕಸ್ಟಡಿಯನ್ನು ಏಪ್ರಿಲ್ 1 ರವರೆಗೆ ವಿಸ್ತರಿಸಿದ ನಾಸಿಕ್ ಕೋರ್ಟ್

ನಾಸಿಕ್: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಪೊಲೀಸ್ ಕಸ್ಟಡಿಯನ್ನು ನಾಸಿಕ್ ನ್ಯಾಯಾಲಯವು ಭಾನುವಾರ ಏಪ್ರಿಲ್ 1 ರವರೆಗೆ ವಿಸ್ತರಿಸಿ ಆದೇಶ ನೀಡಿದೆ. ನಾಶಿಕ್ ಜಿಲ್ಲೆಯ ಮಿರ್ಗಾಂವ್‌ನಲ್ಲಿರುವ ದೇವಾಲಯ...

ಚೊಚ್ಚಲ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಟಿವಿಕೆ : ಎರಡು ಕ್ಷೇತ್ರಗಳಿಂದ ನಟ ವಿಜಯ್ ಸ್ಪರ್ಧೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ. ಚೆನ್ನೈ ಜಿಲ್ಲೆಯ ಪೆರಂಬೂರು ಮತ್ತು ತಿರುಚಿರಾಪಳ್ಳಿ...

ಲೈಂಗಿಕ ಪ್ರಕರಣದ ಆರೋಪಿ ಅಶೋಕ್ ಖರತ್ ಅವರನ್ನು ರಕ್ಷಣೆಯಲ್ಲಿ ಇಡಬೇಕು; ಕಸ್ಟಡಿಯಲ್ಲಿ ಕೊಲೆಯಾಗುವ ಸಾಧ್ಯತೆ ಹೆಚ್ಚಿದೆ: ಪ್ರಕಾಶ್ ಅಂಬೇಡ್ಕರ್

ಮುಂಬೈ: ಕಾಂಗ್ರೆಸ್ ನಂತರ, ವಂಚಿತ್ ಬಹುಜನ ಅಘಾಡಿ ಸ್ಥಾಪಕ-ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳ ಸರಣಿಯಲ್ಲಿ ಬಂಧಿಸಲ್ಪಟ್ಟಿರುವ ಸ್ವಯಂ ಘೋಷಿತ ದೇವಮಾನವ 'ಕ್ಯಾಪ್ಟನ್' ಅಶೋಕ್ ಖರತ್ ಅವರನ್ನು ಪೊಲೀಸ್ ಮತ್ತು...

ಇಸ್ರೇಲ್‌ನ ಹಲವೆಡೆ ಯುದ್ಧ ವಿರೋಧಿ ಪ್ರತಿಭಟನೆ : ನೆತನ್ಯಾಹು ಆಡಳಿತದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಪಶ್ಚಿಮ ಏಷ್ಯಾ ಸಂಘರ್ಷವು ಎರಡನೇ ತಿಂಗಳಿಗೆ ಕಾಲಿಡುತ್ತಿದ್ದಂತೆ, ಇಸ್ರೇಲ್‌ನಲ್ಲಿ ನೆತನ್ಯಾಹು ಆಡಳಿತದ ವಿರುದ್ದ ಜನಾಕ್ರೋಶ ಭುಗಿಲೆದ್ದಿದೆ. ಪ್ರಮುಖ ನಗರಗಳಾದ ಟೆಲ್ ಅವಿವ್, ಜೆರುಸಲೇಂ ಮತ್ತು ಹೈಫಾದಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ....