Homeಆರೋಗ್ಯನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು

- Advertisement -
- Advertisement -

| ಜಿ.ಆರ್.ವಿದ್ಯಾರಣ್ಯ |

ಶಿಕ್ಷಣದ ಮುಖ್ಯ ಉದ್ದೇಶ ನಾವು ನಮ್ಮ ಜೀವನವನ್ನು ನಮಗೆ ಬೇಕಾದಂತೆ ರೂಪಿಸಿಕೊಂಡು, ನಮ್ಮ ಕುಟುಂಬದ,  ಸಮಾಜದ ಮತ್ತು ದೇಶದ ಬೆಳವಣಿಗೆಗೆ ಸಹಾಯಕರಾಗುವುದು. ಮಕ್ಕಳ ಶಿಕ್ಷಣ ಅವರು ಶಾಲೆಯನ್ನು ಪ್ರವೇಶ ಮಾಡುವದಕ್ಕಿಂತ ಮುಂಚೆಯೇ ಪ್ರಾರಂಭವಾಗುತ್ತದೆ. ಆದರಿಂದ ಅವರಿಗೆ ಮನೆಯಲ್ಲಿ ಮತ್ತು ಅವರು ಬೆಳೆಯುವ ಸಮಾಜದಲ್ಲಿ ಕಲಿಕೆಗೆ ಅನುಕೂಲವಾದ ವಾತಾವರಣ ಸದಾ ಇರಬೇಕಾಗಿರುವುದು ಅನಿವಾರ್ಯ. ಆದರೆ ವಿಜ್ಞಾನ, ಭೂಗೋಳ, ಗಣಿತ, ವಿದೇಶಿ ಭಾಷೆ ಮುಂತಾದ ವಿಷಯಗಳನ್ನು ಅವರಿಗೆ ಮೂರು ವರ್ಷಕ್ಕೆ ಕಲಿಸಿ “ನಮ್ಮ ಮಗು ಮಹಾ ಪ್ರಚಂಡ” ಎಂದು ದೃಶ್ಯಮಾಧ್ಯಮದಲ್ಲಿ ಪ್ರದರ್ಶಿಸುವುದನ್ನು ಕಂಡಾಗ ನನಗೆ ಅತ್ಯಂತ ಖೇದವಾಗುತ್ತದೆ. ಏಕೆಂದರೆ ಅವರು ಮೊದಲು ಕಲಿಯ ಬೇಕಾಗಿರುವುದು ಜೀವನಾವಶ್ಯಕ ಕಲೆಗಳು.

ಮಹಾದಾರ್ಶನಿಕ ಪ್ಲುಟೋ ಸಾವಿರಾರು ವರ್ಷದ ಹಿಂದೆಯೇ “ಯಾವ ದೇಶದಲ್ಲಿ ಉತ್ತಮ ಪ್ರಜೆಗಳು ಇರುತ್ತಾರೋ ಅಲ್ಲಿ ಮಾತ್ರ ಉತ್ತಮ ಸರಕಾರ ಸಾಧ್ಯ” ಎಂಬ ಮಾತನ್ನು ಹೇಳಿರುತ್ತಾನೆ. ಅಂದರೆ ಪ್ರಜೆಗಳೇ ದೇಶದ ಅಡಿಪಾಯ. ತಳಪಾಯ ಭದ್ರವಾಗಿದ್ದರೇ ಮಾತ್ರ ಕಟ್ಟಡ ಸುಭದ್ರ. ಜನರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಒಂದು ಸಣ್ಣ ಪ್ರಯತ್ನ ನನ್ನದು. ಹಾಗಾದರೆ ಈ ಜೀವನಾವಶ್ಯಕ ಕಲೆಗಳು ಯಾವವು ಎಂದು ನೋಡೋಣ. ಜೀವನಾವಶ್ಯಕ ಕಲೆಗಳು ನಮಗೆ ದೈನಂದಿನ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಲು ಮತ್ತು ಪರಸ್ಪರ ಕ್ರಿಯೆಯಲ್ಲಿ (Interaction) ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ:

1.      ಸ್ವ-ಅರಿವು (ಸೆಲ್ಫ್ ಅವೇರ್ನೆಸ್)

2.      ಅನುಭೂತಿ ಶಕ್ತಿ (ಎಂಪಥಿ)

3.      ವಿಮರ್ಶಾತ್ಮಕ ಚಿಂತನೆ

4.      ಸೃಜನಾತ್ಮಕ ಚಿಂತನೆ

5.      ಸಮಸ್ಯೆಗೆ ಪರಿಹಾರ ಹುಡುಕುವ ಕಲೆ

6.      ನಿರ್ಧಾರ ತೆಗೆದುಕೊಳ್ಳುವ ಕಲೆ

7.      ಸಮರ್ಪಕ ಸಂವಹನ ಕಲೆ

8.      ಪರಸ್ಪರ ಸಂಬಂಧ ನಿರ್ವಹಣ ಕಲೆ

9.      ಮಾನಸಿಕ ಒತ್ತಡ (ಸ್ಟ್ರೆಸ್) ನಿರ್ವಹಣೆ

10.  ಭಾವನೆಗಳ ನಿರ್ವಹಣೆ ಕಲೆ.

ಕೇಂದ್ರೀಯ ಮಾಧ್ಯಮಿಕ ಶಿಕ್ಷಾ ಬೋರ್ಡಿನ ಪಠ್ಯಕ್ರಮದಲ್ಲಿ ಈ ಕಲೆಗಳ ಬಗ್ಗೆ ಉಲ್ಲೇಖವಿದೆ. ನಮ್ಮ ದೇಶದ ಶಿಕ್ಷಣ ನೀತಿಯಲ್ಲಿ ಮತ್ತು ಮುನ್ನೋಟದ ಟಿಪ್ಪಣಿಯಲ್ಲಿ ಈ ರೀತಿಯ ಚಿಂತನೆ ಕಂಡು ಬಂದರೂ ಸಹ ನಮ್ಮ ಮಕ್ಕಳ ಶಾಲೆಯ ಪಠ್ಯಪುಸ್ತಕದಲ್ಲಿ, ಪಾಠಗಳ ಆಯ್ಕೆಯಲ್ಲಿ ಇದೇ ಚಿಂತನೆ ಕಾಣಿಸುವುದಿಲ್ಲ. ಶಿಕ್ಷಣ ನೀತಿ ರೂಪಿಸುವವರಿಗೂ, ಪಾಠಗಳ ಆಯ್ಕೆ ಮಾಡುವವರಿಗೂ ಪರಸ್ಪರ ಸಂಪರ್ಕದ ಅಭಾವ ಇರುವುದು ಕಾಣಸಿಗುತ್ತದೆ ಎಂಬುದು ಖೇದನೀಯ.

ಈ ಎಲ್ಲಾ ಕಲೆಗಳು ನಮಗೆ ದೈವದತ್ತವಾಗಿ ಜನ್ಮದಿಂದಲೇ ಬಂದ ಕಲೆಗಳು. ಬಡವ-ಬಲ್ಲಿದ ಬೇಧವಿಲ್ಲದೆ, ಇವನ್ನು ನಾವು ಎಷ್ಟೋ ಚಿಕ್ಕ ಮಕ್ಕಳಲ್ಲಿ ಕಾಣಬಹುದು. ಆದರೆ ಹಿರಿಯರು ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಯಲು ಬಿಡದೇ, ಅದನ್ನು ಸರಿಯಾಗಿ ಪೋಷಿಸದೇ, ಅವುಗಳು ಕಾಲ ಕ್ರಮೇಣ ಕುಂಠಿತಗೊಳ್ಳಲು ಕಾರಣಕರ್ತರಾಗುತ್ತಾರೆ. ಮಕ್ಕಳು ನಾವು ಹೇಳುವುದರಿಂದ ಕಲಿಯುವುದು ಕಡಿಮೆ, ನಮ್ಮನ್ನು ನೋಡಿ ಕಲಿಯುವುದೇ ಹೆಚ್ಚು. ಇದನ್ನೇ ಸಂಸ್ಕಾರವೆಂದೂ ಕರೆಯಬಹುದು. ನಮ್ಮಲ್ಲಿ ಈ ಕಲೆಗಳು ಕ್ಷೀಣವಾಗುತ್ತಿದ್ದಂತೆ ಅವರಲ್ಲಿಯೂ ಅಗೋಚರವಾಗಲು ಪ್ರಾರಂಭವಾಗುತ್ತವೆ. ಇದನ್ನು ಪೋಷಕರು, ಶಿಕ್ಷಕರು, ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ.

1.      ಸ್ವ-ಅರಿವು (ಸೆಲ್ಫ್ ಅವೇರ್ನೆಸ್): ಇದನ್ನು ನಾವು ಆಧ್ಯಾತ್ಮಕ ಚಿಂತನೆ ಎಂದು ನೋಡದೇ ಮಗುವಿಗೆ ತಾನು ಯಾರು, ಮನೆಯಲ್ಲಿ, ಶಾಲೆಯಲ್ಲಿ ಮತ್ತು ಸಮಾಜದಲ್ಲಿ ತನ್ನ ಸ್ಥಾನಮಾನ ಏನು ಎಂಬುದರ ಅರಿವು ಇರಬೇಕು. ಇದರಿಂದ ಮಗುವಿಗೆ ಶಾಲೆಯಲ್ಲಿ ಕೀಳರಿಮೆಯಾಗಲೀ ಅಥವಾ ಶ್ರೀಮಂತ ಕುಟುಂಬದ ಮಗುವಾಗಿದ್ದಲ್ಲಿ ಹಿರಿಯರಿಮೆಯಾಗಲೀ ಆಗದಂತೆ, ಮನೆಯಲ್ಲಿ ನಾನು ಏನೇ ಆಗಿದ್ದರೂ ಶಾಲೆಯಲ್ಲಿ ನಾನೂ ಮಿಕ್ಕವರಂತೆ ಸರಿ-ಸಮಾನ ವಿದ್ಯಾರ್ಥಿ ಎಂಬುದು ಮನದಟ್ಟಾಗಬೇಕು. ಮಗುವಿನ ಗ್ರಹಿಸುವ ಶಕ್ತಿ ಬೆಳೆದಂತೆ, ಈ ಅರಿವಿನ ವ್ಯಾಖ್ಯಾನವೂ ಬದಲಾಗುತ್ತಿರುತ್ತದೆ, ಆದರೆ ಸಮಾನತೆಯ ಭಾವನೆಗೆ ಧಕ್ಕೆ ಬಾರದಂತೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳಬೇಕು.

2.      ಅನುಭೂತಿ ಶಕ್ತಿ (ಎಂಪಥಿ) : ಎಂದರೆ ಇನ್ನೊಬ್ಬರ ಬಗ್ಗೆ ಅನುಕಂಪವಲ್ಲ, ಇನ್ನೊಬ್ಬರ ಸಮಸ್ಯೆಯನ್ನು ಅರಿತು ಅದಕ್ಕೆ ತಕ್ಕಂತೆ ನಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವುದು ಅನುಭೂತಿ. ಒಬ್ಬ ದೃಷ್ಟಿಹೀನನ ಬಗ್ಗೆ ಅಯ್ಯೋ ಪಾಪ ಎನ್ನುವುದಕ್ಕಿಂತ, ಅವನ ದಾರಿಯಲ್ಲಿರುವ ಅಡೆತಡೆಗಳನ್ನು ಹೋಗಲಾಡಿಸಲು ಪ್ರಯತ್ನಿಸುವುದು ಅನುಭೂತಿ. ಧೃತರಾಷ್ಟ್ರ ಕುರುಡನೆಂದು ಗಾಂಧಾರಿ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನು ದಿವ್ಯಾಂಗರ ಅವಶ್ಯಕತೆಗನುಗುಣವಾಗಿ ವಿನ್ಯಾಸ/ನಿರ್ಮಾಣಗೊಳಿಸುವುದು ಸರಕಾರದ ಅನುಭೂತಿ.

3.      ವಿಮರ್ಶಾತ್ಮಕ ಚಿಂತನೆ: ಯಾವುದೇ ವಿಷಯವನ್ನು ಅರಿತುಕೊಳ್ಳುವ ಸಲುವಾಗಿ, ತನ್ನ ಕುತೂಹಲವನ್ನು ಸದಾ ಕಾಯ್ದಿರಿಸಿಕೊಂಡು, ಅದರ ಹಿಂದಿರುವ ತಥ್ಯವನ್ನು ಪ್ರಶ್ನಿಸುವುದೇ ವಿಮರ್ಶಾತ್ಮಕ ಚಿಂತನೆ. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಸಂಬಂಧಿಕರು, ಹೊರಗೆ ಸ್ನೇಹಿತರು ಹೇಳಿದ್ದೆಲ್ಲ ನಿಜ/ಸುಳ್ಳು ಎಂದು ಒಮ್ಮೆಗೇ ನಿರ್ಧರಿಸದೇ ಅದನ್ನು ಒರೆ ಹಚ್ಚುವ ಕಲೆ ವಿಮರ್ಶಾತ್ಮಕ ಚಿಂತನೆ. ಇದರಿಂದ ಕಲಿತದ್ದು ಮಕ್ಕಳ ಮನಸ್ಸಿನಲ್ಲಿ ದೃಢವಾಗುತ್ತದೆ.

4.      ಸೃಜನಾತ್ಮಕ ಚಿಂತನೆ: ಇದು ವಿಮರ್ಶಾತ್ಮಕ ಚಿಂತನೆಗಿಂತ ವಿಭಿನ್ನವಾಗಿದ್ದು, ನಮಗೆ ತಿಳಿದಿರುವ ವಿಷಯದಿಂದ ಇನ್ನೂ ಹೆಚ್ಚು ಪ್ರಯೋಜನ ಪಡೆಯಲು ಸಾದ್ಯವೇ ಎಂದು ಚಿಂತಿಸುವುದು ಸೃಜನಶೀಲತೆ. ಉದಾ: ಶಾಲೆಯಲ್ಲಿ 2+2=4 ಎಂದು ಕಲಿಸಿದರೆ ಹೇಗೆ ಎಂದು ಪ್ರಶ್ನಿಸುವುದು ವಿಮರ್ಶಾತ್ಮಕ ಚಿಂತನೆಯಾದರೆ, 2+2=5 ಯಾಕಾಗಬಾರದು ಎಂದು ತರ್ಕಿಸುವ ಕಲೆ ಸೃಜನಾತ್ಮಕ ಚಿಂತನೆ.

5.      ಸಮಸ್ಯೆಗೆ ಪರಿಹಾರ ಹುಡುಕುವ ಕಲೆ: ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅರಿಯದ ಸಮಸ್ಯೆಗೆ ಹೆದರುವುದು ಅಥವಾ ಹೆದರಿ ಓಡಿಹೋಗುವುದು ನೈಸರ್ಗಿಕ ಪ್ರತಿಕ್ರಿಯೆ ಆದರೆ ಅದು ಕ್ಷಣಿಕ. ಮತ್ತೊಮ್ಮೆ ಅದು ಎದುರಾದಾಗ ಅದಕ್ಕೆ ಹೆದರಿ ಓಡಿಹೋಗದೆ, ಅದು ಏನು, ಏಕೆ, ಹೇಗೆ ಎಂದು ಯೋಚಿಸಿ, ಅದನ್ನು ಮೀರಲು ಮಾಡುವ ಪ್ರಯತ್ನವೇ ಈ ಕಲೆ.

6.      ನಿರ್ಧಾರ ತೆಗೆದುಕೊಳ್ಳುವ ಕಲೆ: ಸಮಸ್ಯೆಗಳು ಮತ್ತು ಪರಿಹಾರಗಳು ಅನೇಕವಾದಾಗ ಅದರಲ್ಲಿ ಸರಿಯಾದ ಆಯ್ಕೆ ಯಾವುದು ಎಂದು ನಿರ್ಧರಿಸುವುದು ಈ ಕಲೆ. ಚಿಕ್ಕ ಮಕ್ಕಳ ಮುಂದೆ ಎರಡು ವಸ್ತುಗಳನ್ನಿಡಿ, ಅದು ಹೇಗೆ ತನಗೆ ಬೇಕಾದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತದೆ, ನೀವೇ ನೋಡಿ.

7.      ಸಮರ್ಪಕ ಸಂವಹನ ಕಲೆ: ನಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಇನ್ನೊಬ್ಬರಿಗೆ ಸರಿಯಾಗಿ ಅರ್ಥವಾಗವಾಗುವಂತೆ ತಿಳಿಸುವುದೇ ಸಂವಹನ ಕಲೆ. ಮಾತು ಬಾರದ ಪುಟ್ಟ ಮಗು ಹೇಗೆ ತನ್ನ ಅನಿಸಿಕೆಯನ್ನು ತನ್ನ ತಾಯಿಗೆ ತಿಳಿಸುತ್ತದೆ ಅಥವಾ ಹೇಗೆ ಆಕೆ ಅದನ್ನು ಅರಿತುಕೊಳ್ಳುತ್ತಾಳೆ ಎಂಬುದನ್ನು ಒಂದು ಕ್ಷಣ ಯೋಚಿಸಿದಲ್ಲಿ, ಇದರ ಮಹತ್ವ ತಾನಾಗಿಯೇ ತಿಳಿಯುತ್ತದೆ.

8.      ಪರಸ್ಪರ ಸಂಬಂಧ (interpersonal) ಕಲೆ: ನಾವು ಇತರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಈ ಕಲೆ ಕಲಿಸುತ್ತದೆ. ಮನೆಯವರೆಲ್ಲರೂ ಮುಕ್ತವಾಗಿ ಪರಸ್ಪರ ಒಳ್ಳೆಯ ಸಂಬಂಧ / ಧನಾತ್ಮಕ ಸಂವಹನ ಇಟ್ಟುಕೊಂಡಿದ್ದಲ್ಲಿ ಮಕ್ಕಳೂ ಸಹ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತವೆ. ಇಲ್ಲವಾದಲ್ಲಿ ಮಖಹೇಡಿಗಳಾಗುತ್ತಾರೆ.

9.      ಮಾನಸಿಕ ಒತ್ತಡ (Stress) ನಿರ್ವಹಣೆ: ದೈನಂದಿನ ಜೀವನದಲ್ಲಿ ಒತ್ತಡಗಳು ಬರುವುದು ಸ್ವಾಭಾವಿಕ, ಆದರೆ ಅದರ ಬಗ್ಗೆ ನಮ್ಮಲ್ಲಿ ಪ್ರತಿಯೊಬ್ಬರ ಪ್ರತಿಕ್ರಿಯೆಯೂ ವಿಭಿನ್ನವಾಗಿರುತ್ತದೆ. ಈ ಪ್ರತಿಕ್ರಿಯೆಯಿಂದ ನಮ್ಮ ಮೇಲಿನ ಒತ್ತಡ ಹೆಚ್ಚಬಹುದು ಅಥವಾ ಕ್ಷೀಣಿಸಬಹುದು. ಇದನ್ನು ಸರಿಯಾಗಿ ನಿರ್ವಹಿಸುವುದೇ ಈ ಕಲೆ. ಮಗು ಏನಾದರೂ ಮಾಡಿದಲ್ಲಿ ತಾಯಿ ಪ್ರೀತಿ ತೋರಿಸುತ್ತಾಳೋ, ಗದರುತ್ತಾಳೋ, ಅಥವಾ ಹೊಡೆಯುತ್ತಾಳೋ ಅದರಿಂದ ಮಗುವಿನ ಮಾನಸಿಕ ಒತ್ತಡ ಏರುಪೇರಾಗುತ್ತದೆ. ಇದನ್ನು ಸರಿಯಾಗಿ ನಿರ್ವಹಿಸಲು ಕಲಿಸುವುದೇ ಈ ಕಲೆ.

10.  ಭಾವನೆಗಳ ನಿರ್ವಹಣೆ ಕಲೆ: ಮಾನಸಿಕ ಒತ್ತಡದಿಂದ ನಮಗೆ ಕೋಪ, ದುಃಖ, ಬೇಸರ, ಸಂತೋಷ ಹೀಗೆ ಹಲವಾರು ಭಾವನೆಗಳು ಉಕ್ಕಿ ಬರಬಹುದು. ಅವನ್ನು ಸಮಯಕ್ಕೆ ತಕ್ಕಂತೆ ನಿಯಂತ್ರಿಸಿ, ನಿರ್ವಹಿಸುವುದೇ ಈ ಕಲೆ.

ಈ ಕಲೆಗಳನ್ನು ನೀವೂ ಕಲಿಯಿರಿ, ಜೀವನದಲ್ಲಿ ರೂಢಿಸಿಸಿಕೊಳ್ಳಿ, ಮಕ್ಕಳಲ್ಲೂ ಬೆಳೆಯಲು ಬಿಡಿ.

ಲೇಖಕರ ಪರಿಚಯ

ಜಿ. ಆರ್. ವಿದ್ಯಾರಣ್ಯ ಅವರು ಶ್ರೀಮತಿ ಶಾಂತ ಮತ್ತು ದಿ. ಜಿ.ವಿ.ರಂಗಸ್ವಾಮಿಯವರ ಜ್ಯೇಷ್ಠ ಪುತ್ರರಾಗಿ 1951ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಜನಿಸಿ, ದೂರದ ಮುಂಬಯಿ ನಗರದಲ್ಲಿ ಬೆಳೆದವರು. ಶಾಲಾ ಕಾಲೇಜು ಶಿಕ್ಷಣ ಮುಂಬಯಿಯಲ್ಲಿ ನಡೆಯಿತು. ತಮ್ಮ 18ನೆಯ ವಯಸ್ಸಿನಲ್ಲಿ, 1969ರಲ್ಲಿ ಐ.ಬಿ.ಎಂ. 1401 ಆಟೋಕೋಡರ್ ಕಂಪ್ಯೂಟರ್ ಪ್ರೊಗ್ರಾಮಿಂಗ್ ಡಿಪ್ಲೊಮಾ ಪಡೆದ ನಂತರ, ಕೆಲಸ ಸಿಗದೆ, ಮರೀನ್ ಕಮ್ಯುನಿಕೇಷನ್ ಕ್ಲಾಸ್ 1 ಲೈಸೆನ್ಸ್ ಪಡೆದು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಇಂಗ್ಲೆಂಡಿನ ಲಿವರ್ಪೂಲ್ ನಗರದ ರಿವರ್ಸ್ಡೇಲ್ ಕಾಲೇಜಿನಲ್ಲಿ ಓದಿ, ಮರೀನ್ ರೇಡಾರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್ ಆಸಕ್ತಿ ಮುಂದುವರೆಸಿ, ಮೈಕ್ರೋಸಾಫ್ಟ್ ಕಂಪನಿಯ ಸಿಸ್ಟಮ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಮುಂತಾದ ಡಿಪ್ಲೊಮಾಗಳನ್ನೂ ಪಡೆದಿದ್ದಾರೆ. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ.

ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ, ತಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಹಲವಾರು ಎನ್.ಜಿ.ಒ. ಗಳೊಂದಿಗೆ ಸುಮಾರು 75 ಶಾಲೆಗಳಲ್ಲಿ ಮತ್ತು 15 ಕಾಲೇಜುಗಳಲ್ಲಿ ಮಕ್ಕಳಿಗೆ ಪೌರಪ್ರಜ್ಞೆಯ ಪಾಠ ಹೇಳಿಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ಜಿಲ್ಲಾ ಮಟ್ಟದ ತರಬೇತುದಾರರಾಗಿ, ಅರ್.ಟಿ.ಐ. ಇಂಡಿಯಾ ಜಾಲತಾಣದಲ್ಲಿ ಕಮ್ಯುನಿಟಿ ಬಿಲ್ಡರ್ ಆಗಿ, ಜನರಿಗೆ ಉಚಿತ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೈಸೂರಿನ ಕೊಳಗೇರಿಗಳಲ್ಲಿ ಬಡ ಮಕ್ಕಳಿಗೆ, ಎನ್.ಜಿ.ಒ. ಜೊತೆ ಸೇರಿ, ಜೀವನಾವಶ್ಯಕ ಕಲೆಗಳ ಮತ್ತು ನಾಯಕತ್ವದ ತರಬೇತಿಯನ್ನೂ ನೀಡುತ್ತಿದ್ದಾರೆ. ಬರಹದಲ್ಲಿ ತಮ್ಮ ಆಸಕ್ತಿಯಿಂದ ಮೈಸೂರಿನ ರೋಟರಿ ವೆಸ್ಟ್ ಕ್ಲಬ್ಬಿನ ಬೃಂದಾವನ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ/ಜಾಲತಾಣಗಳಲ್ಲಿ ಲೇಖನ ಪ್ರಕಟಿಸಿದ್ದಾರೆ. ಶ್ರೀಯುತರ ಪತ್ನಿ, ಶ್ರೀಮತಿ ಸ್ವರ್ಣಗೌರಿ, ನಿವೃತ್ತ ಶಾಲಾ ಶಿಕ್ಷಕಿ. ಇಬ್ಬರು ಪುತ್ರಿಯರು ವಿದೇಶದಲ್ಲಿ ನೆಲೆಸಿದ್ದಾರೆ.

ನಾನುಗೌರಿ. ಕಾಂಗೆ ಈಗಾಗಲೇ ಹತ್ತಾರು ಸಕಾಲಿಕ ಲೇಖನಗಳನ್ನು ಬರೆದಿರುವು ಅವರು ಇನ್ನು ಮುಂದೆ ಜೀವನ ಕಲೆಗಳು, ವ್ಯಕ್ತಿತ್ವ ವಿಕಸನದ ಕುರಿತು ನಿರಂತರವಾಗಿ ಅಂಕಣ ಬರೆಯಲಿದ್ದಾರೆ. ಎಲ್ಲಾ ವಯೋಮಾನದವರಿಗೂ ಗೊತ್ತಿದ್ದರೂ ಸಹ ಒತ್ತಡದಲ್ಲಿ ಮರೆತುಬಿಡಬಹುದಾದ ಹಲವು ಬಹುಮುಖ್ಯ ಅಂಶಗಳು ಕುರಿತು ಅವರು ಬೆಳಕು ಚೆಲ್ಲಲ್ಲಿದ್ದಾರೆ. ಹಾಗಾಗಿ ತಪ್ಪದೇ ಓದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....