Homeಅಂಕಣಗಳುಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ  44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು.

- Advertisement -
- Advertisement -

1965ನೇ ಇಸವಿಯ ವೇಳೆಗಾಗಲೇ ಹಾರ್ಲೆ ಮತ್ತು ಹಾರ್ಲೆ ಮ್ಯಾನೇಜ್ಮೆಂಟ್‌ನ ತೋಟಗಳ ವಿಸ್ತೀರ್ಣ ಸಾವಿರ ಎಕರೆಗಳನ್ನು ಮೀರಿತ್ತು. ಸುಮಾರು ಇನ್ನೂರೆವತ್ತಕ್ಕೂ ಹೆಚ್ಚು ಕುಟುಂಬಗಳು ಹಾರ್ಲೆ ಸಮೂಹದಲ್ಲಿ ದುಡಿದು ಬದುಕುತ್ತಿದ್ದರು.

ಕಾಫಿ ವಲಯದಲ್ಲಿ ಆಗ ಈಗಿನಂತೆ ಹೊರಗಿನಿಂದ ಬಂದು ಕೆಲಸ ಮಾಡುವ ಜನರಿರಲಿಲ್ಲ. ಎಲ್ಲರೂ ಆಯಾ ತೋಟಗಳಲ್ಲೇ ವಾಸ. ಹೊರಗಿಂದ ಕೆಲಸಕ್ಕೆ ಬರಲು ಆ ಕಾಲದಲ್ಲಿ ಕೆಲಸಗಾರರಿಗೆ ಸ್ವಂತ ನೆಲೆಯೆನ್ನುವುದು ಇರಲೇ ಇಲ್ಲ. ಈ ತೋಟ ಬಿಟ್ಟು ಹೊರಟರೆ ಇನ್ನೊಂದು ತೋಟ ಅಷ್ಟೇ.

ಅದಕ್ಕೂ ಹಿಂದೆ ದಕ್ಷಿಣ ಕನ್ನಡದಿಂದ ಮತ್ತು ಕೇರಳ- ತಮಿಳುನಾಡಿಗಳಿಂದ ಬರುತ್ತಿದ್ದ ಹಂಗಾಮಿ ಕಾರ್ಮಿಕರು ಹೆಚ್ಚಾಗಿ ಘಟ್ಟಗಳಲ್ಲೇ ನೆಲೆ ನಿಂತಿದ್ದರು. ಘಟ್ಟದ ಕೆಳಗಿನಿಂದ ಬರುವ ವಲಸೆ ಕಡಿಮೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಕಾಫಿ ತೋಟಗಳಲ್ಲಿ ಕನ್ನಡ, ತುಳು, ಮಲೆಯಾಳಂ ಮತ್ತು ತಮಿಳು ಈ ನಾಲ್ಕೂ ವ್ಯವಹಾರ ಭಾಷೆಯಾಗಿದ್ದವು.

ಕಾಲಾನಂತರದಲ್ಲಿ ಎರಡನೇ ತಲೆಮಾರಿಗೆ, ಇಲ್ಲಿ ನೆಲೆಸಿದ್ದ ತಮಿಳು ಮತ್ತು ಮಲೆಯಾಳಿಗಳು ಕನ್ನಡಿಗರೇ ಆಗಿದ್ದಾರೆ. ಇಲ್ಲಿನ ಸಾಂಸ್ಕೃತಿಕ ವಲಯದಲ್ಲಿ ಸೇರಿ ಹೋಗಿದ್ದಾರೆ. ತುಳು ಭಾಷಿಕರು ಹೇಗೂ ಕನ್ನಡಿಗರೇ, ಅವರಿಂದ ಇಲ್ಲಿನವರೂ ಸಾವಿರಾರು ಜನ ತುಳು ಕಲಿತರು. ಈಗ ಸಕಲೇಶಪುರ ತಾಲ್ಲೂಕಿನಲ್ಲಿ ತುಳು ಎರಡನೇ ಸಾಮಾನ್ಯ ಭಾಷೆಯಾಗಿದೆ.

ಹಾರ್ಲೆ‌‌ ಬಂಗಲೆ

ಹಾರ್ಲೆ ತೋಟಗಳ ಸಮೂಹದಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು. ಏಳೆಂಟು ವರ್ಷಗಳಲ್ಲಿ  ಮ್ಯಾನೇಜರ್, ರೈಟರುಗಳು, ಮೇಸ್ತ್ರಿಗಳು, ಮೆಕ್ಯಾನಿಕ್, ಡ್ರೈವರ್‌ಗಳು, ಬಡಗಿಗಳು ಒಳ್ಳೆಯ ನುರಿತ ಕಾರ್ಮಿಕರು ಹೀಗೆ ಅನುಭವೀ ಕೆಲಸಗಾರರ ತಂಡವೊಂದನ್ನು ಗಣಪಯ್ಯ ಕಟ್ಟಿದ್ದರು. ತಮ್ಮ ರಾಜಕಾರಣದ ಓಡಾಟಗಳೆಷ್ಟೇ ಇರಲಿ ಗಣಪಯ್ಯ ಮನೆಯಲ್ಲಿದ್ದಾಗ ಪ್ರತಿದಿನ ತೋಟಕ್ಕೆ ಒಂದು ಭೇಟಿ ನೀಡದೆ ಇರುತ್ತಿರಲಿಲ್ಲ.

ಇಷ್ಟು ದೊಡ್ಡ ಸಂಸ್ಥೆಯ ಯಜಮಾನರಾಗಿದ್ದರೂ ಇವರು ವಾಸವಿದ್ದುದು ಮಿಡ್ಲಟನ್ ಕಾಲದಲ್ಲಿ ಕಟ್ಟಿದ್ದ, ಬೇರೆ ಕಾಫಿ ಎಸ್ಟೇಟ್ ಬಂಗಲೆಗಳಿಗೆ ಹೋಲಿಸಿದರೆ ಅತಿ ಸಾಮಾನ್ಯವೆನಿಸಿದ ಒಂದು ಬಂಗಲೆಯಲ್ಲಿ. ಮನೆಯೊಳಗೂ ಅತ್ಯಂತ ಸರಳ. ಮನೆಗೆ ಯಾರೇ ಬರಲಿ ಎಲ್ಲರಿಗೂ ಜೊತೆಯಲ್ಲಿಯೇ ಊಟ. ಅದೂ ನೆಲದಲ್ಲಿ ಕುಳಿತು.

ಇವರ ಊಟದ ಮನೆಗೆ ಹೋಗುವ ದಾರಿಯಲ್ಲಿ ಗೋಡೆಯಲ್ಲಿ ಒಂದು ಹಲಗೆಯನ್ನು ಚಜ್ಜಾದಂತೆ  ಅಳವಡಿಸಲಾಗಿತ್ತು. ಅದರ ಮೇಲೆ ಒಂದು ಮಡಕೆ, ಒಂದು ತೆಂಗಿನ ಚಿಪ್ಪಿಗೆ ಬಿದಿರು ಕಡ್ಡಿ ಸಿಕ್ಕಿಸಿದ ಸೌಟು. -ಹಿಂದಿನ ಕಾಲದಲ್ಲಿ ಗಂಜಿ, ಸಾರು ಮುಂತಾದವನ್ನು ಬಡಿಸಲು ಬಳಸುತ್ತಿದ್ದಂತಹದು. ಮತ್ತೊಂದು ಹಳೆಯ ಹಿತ್ತಾಳೆ ಗಂಗಳ.

ಒಮ್ಮೆ ಗಣಪಯ್ಯನವರ ಗೆಳೆಯರಾದ ಗ್ರೆಗೊರಿ ಮಥಾಯಿಸರು ಅದನ್ನು ನೋಡಿ “ಇದನ್ನೇಕೆ ಇಲ್ಲಿ ಇಟ್ಟುಕೊಂಡಿದ್ದೀರಿ”? ಎಂದರಂತೆ.

ಆಗ ಗಣಪಯ್ಯ “ನನಗೆ ಅಹಂಕಾರ ಬರದೇ ಇರಲಿ ಅಂತ ನೆನಪು ಮಾಡಿಕೊಡಲು ಅದನ್ನು ಅಲ್ಲಿ ಕಾಣುವಂತೆ ಇಟ್ಟಿದ್ದೇನೆ. ಒಂದು ಕಾಲದಲ್ಲಿ ನಾನು ಅದರಲ್ಲೇ ಊಟ ಮಾಡುತ್ತಿದ್ದುದು” ಎಂದರಂತೆ.

ಸ್ವತಂತ್ರ ಪಾರ್ಟಿ ಸೇರಿದ ನಂತರ ಬಹುಬೇಗ ಪಕ್ಷದಲ್ಲಿ ಅವರ ಜವಾಬ್ದಾರಿ ಹೆಚ್ಚಾಗುತ್ತ ಹೋಯಿತು. ಅವರು ಸ್ವತಂತ್ರ ಪಾರ್ಟಿ ರಾಜ್ಯಾಧ್ಯಕ್ಷರೂ ಆದರು.

ಹಾರ್ಲೆ A to k estates ಹಳೆಯ ಆಫೀಸ್

ಈ ಕಾಲದಲ್ಲಿ ಅವರು ಸ್ವತಂತ್ರ ಪಾರ್ಟಿಗೆ ನೂರಾರು ಯುವಕರನ್ನು ಸೇರಿಸಿಕೊಂಡು ಬೆಳೆಸಿದರು. ಸ್ಥಳೀಯವಾಗಿ ಹಾನುಬಾಳಿನ ಅಜ್ಜೇಗೌಡರು, (ಇವರು ಕರ್ನಾಟಕದ ಹಿರಿಯ ಅಧಿಕಾರಿಗಳಾಗಿದ್ದ ಐ.ಎಂ. ವಿಠ್ಠಲ ಮೂರ್ತಿಯವ ಮಾವ) ಗಾಣದಹೊಳೆ ಸುಬ್ಬೇಗೌಡರ ಮಗ ಕೇಶವೇ ಗೌಡರು ಮುಂತಾದವರೆಲ್ಲ ಇದ್ದರು.

ದಕ್ಷಿಣಕನ್ನಡದಿಂದ ಲೋಕಸಭಾ ಸದಸ್ಯರಾಗಿದ್ದ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯನವರಿಗೆ ನಿಕಟ ಸಂಪರ್ಕವಿತ್ತು. ಮಲ್ಯರ ಬಗ್ಗೆ ಇವರಿಗೆ ಅಪಾರ ಗೌರವ, ಅವರ ದೂರದೃಷ್ಟಿಯ ಕುರಿತು ಮೆಚ್ಚುಗೆ.

ಒಮ್ಮೆ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯ ಮತ್ತು ರವೀಂದ್ರನಾಥರು ಮಂಗಳೂರಿನಿಂದ ಸಕಲೇಶಪುರದತ್ತ ಕಾರನಲ್ಲಿ ಬರುತ್ತಿದ್ದರಂತೆ. ಆಗ ಹಾಸನ ಮಂಗಳೂರು ರಸ್ತೆಯಲ್ಲಿ ದಿನಕ್ಕೆ ಮೂರು ಬಸ್ಸುಗಳು ನಾಲ್ಕೈದು ಲಾರಿಗಳು  ಮಾತ್ರ ಸಂಚರಿಸುತ್ತಿದ್ದ ಕಾಲ. ಏನೋ ಮಾತಾಡುತ್ತ ಮಲ್ಯರು ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಶಿಫಾರಸು ಮಾಡಿದ್ದೇನೆ ಎಂದರಂತೆ.

ಶಿರಾಡಿ ಘಾಟ್ ಹಳೆಯ ರಸ್ತೆ

ಆಗ ರವೀಂದ್ರನಾಥರು “ಸರ್ ಇಲ್ಲಿ ದಿನಕ್ಕೆ ಮೂರು ಬಸ್ಸು ಸಂಚರಿಸುವುದು ಇದು ರಾಷ್ಟ್ರೀಯ ಹೆದ್ದಾರಿಯೇ”? ಎಂದರಂತೆ,

ಆಗ ಮಲ್ಯರು “ರವಿ ನೀನು ಇವತ್ತಿನ ಸ್ಥಿತಿ ನೋಡಬೇಡ. ಇಪ್ಪತ್ತೈದು ವರ್ಷ ಮುಂದೆ ನೋಡು” ಎಂದು ಉತ್ತರಿಸಿದರಂತೆ.

ಇಂತಹ ದೂರ ದೃಷ್ಟಿಯನ್ನು ಗಣಪಯ್ಯನವರೂ ಹೊಂದಿದ್ದರು. ಇದನ್ನವರು ಕೃಷಿ ಉದಾಹರಣೆಗಳ ಮೂಲಕ ಹೇಳುತ್ತಿದ್ದರು. “ಒಂದು ಗಿಡ ನೆಡುವಾಗ, ಅದು ಬೆಳೆದು ನಿಂತಾಗ ಬೇಕಾಗುವ ಅವಶ್ಯಕತೆಗಳನ್ನು ಅರಿಯದೆ ನೆಟ್ಟವ ಒಳ್ಳೆಯ ಕೃಷಿಕನಾಗಲಾರ ಎನ್ನುತ್ತಿದ್ದರು.”

ಗಣಪಯ್ಯನವರ ಯಾವುದೇ ಬೇರೆ ಭಾಷಣವಿರಲಿ, ರಾಜಕೀಯ ಭಾಷಣಗಳಲ್ಲಿ ಕೂಡಾ ಕೃಷಿ ಮತ್ತು ಕೃಷಿಕರ ಸಮಸ್ಯೆಗಳು ಮತ್ತು ಪರಿಹಾರಗಳ ಪ್ರಸ್ತಾಪವಿಲ್ಲದೆ ಇರುತ್ತಿರಲಿಲ್ಲ. ಮುಂದೆ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದಾಗಲೂ ನಂತರದ ಚುನಾವಣಾ ಭಾಷಣಗಳಲ್ಲೂ ಇದು ಮುಂದುವರಿದೇ ಇತ್ತು.

1960 ದಕ್ಷಿಣ ಕನ್ನಡ ದ ಲೋಕಸಭಾ ಸದಸ್ಯರಾಗಿದ್ದ ಯು. ಶ್ರೀನಿವಾಸ ಮಲ್ಯ

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ  44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನುಗ್ಗೆಹಳ್ಳಿ ಶಿವಪ್ಪ ಲೋಕಸಭೆಗೆ ಆಯ್ಕೆಯಾದರು. ಕರ್ನಾಟಕದ ವಿಧಾನಸಭೆಯಲ್ಲಿ ಹದಿನಾರು ಸ್ಥಾನ ಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನಾಲ್ಕು ಜನ ಸ್ವತಂತ್ರ ಪಾರ್ಟಿಯಿಂದಲೂ, ಒಬ್ಬರು ಪಿ.ಎಸ್.ಪಿ ಯಿಂದ ಇನ್ನೊಬ್ಬರು ಪಕ್ಷೇತರರಾಗಿಯೂ ಸ್ವತಂತ್ರ ಪಾರ್ಟಿ ಬೆಂಬಲದೊಂದಿಗೆ ಗೆದ್ದಿದ್ದರು. ಅವರಲ್ಲಿ ಒಬ್ಬರು ಹೊಳೆನರಸೀಪುರದಿಂದ ಹೆಚ್.ಡಿ.ದೇವೇಗೌಡರು ಪ್ರಥಮ ಬಾರಿಗೆ ಶಾಸಕರಾಗಿದ್ದರು.

ಪಕ್ಕದ ಸುಳ್ಯ ಮತ್ತು ಸೋಮವಾರಪೇಟೆಯಲ್ಲೂ ಸ್ವತಂತ್ರ ಪಾರ್ಟಿ ಗೆದ್ದಿತ್ತು. ಸುಳ್ಯ ಕ್ಷೇತ್ರದಿಂದ ಎ.ರಾಮಚಂದ್ರ ಶಾಸಕರಾಗಿದ್ದರು. ಸೋಮವಾರಪೇಟೆಯಿಂದ ಗುಂಡುಕುಟ್ಟಿ ಮಂಜುನಾಥಯ್ಯ ಗೆದ್ದಿದ್ದರು.

ಗಣಪಯ್ಯನವರು ರಾಜ್ಯ ರಾಜಕಾರಣದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿದ್ದರು. ಅದೇ ಚುನಾವಣೆಯಲ್ಲಿ ಸಿ.ಎಂ.ಪೂಣಚ್ಚ ಕಾಂಗ್ರೆಸ್‌ನಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಸಚಿವರಾದರು.

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವಾಗ ಕೊಡಗಿನ ಮುಖ್ಯಮಂತ್ರಿಗಳಾಗಿ ಅದನ್ನು ಬೆಂಬಲಿಸಿದವರು ಸಿ.ಎಂ. ಪೂಣಚ್ಚ. ಇದರಿಂದಾಗಿ ಅವರು ಕೊಡಗಿನಲ್ಲಿ ಸಾಕಷ್ಟು ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಜೊತೆಗೆ ಪೂಣಚ್ಚನವರ ಇಬ್ಬರು ಆಪ್ತಗೆಳೆಯರು ಗುಂಡುಕುಟ್ಟಿ ಮಂಜುನಾಥಯ್ಯ, ಹಾರ್ಲೆ ಗಣಪಯ್ಯ ಕಾಂಗ್ರೆಸ್ಸಿನ ಕಡು ವಿರೋಧಿಗಳಾಗಿ ಸ್ವತಂತ್ರ ಪಾರ್ಟಿಯಲ್ಲಿದ್ದರು. ಪೂಣಚ್ಚನವರ ಮತದಾರ ಕ್ಷೇತ್ರಕ್ಕೆ ಸೇರಿದ ಸುಳ್ಯ ಮತ್ತು ಸೋಮವಾರಪೇಟೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರ ಪಾರ್ಟಿಯೂ ವಿರಾಜಪೇಟೆಯಲ್ಲಿ ಜನಸಂಘವೂ ಜಯಗಳಿಸಿದ್ದವು. ಆದರೆ ಮಂಗಳೂರಿನ ಇತರ ವಿಭಾಗಗಳು ಪೂಣಚ್ಚನವರನ್ನು ಬೆಂಬಲಿಸಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...