Homeಅಂಕಣಗಳುಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ  44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು.

- Advertisement -
- Advertisement -

1965ನೇ ಇಸವಿಯ ವೇಳೆಗಾಗಲೇ ಹಾರ್ಲೆ ಮತ್ತು ಹಾರ್ಲೆ ಮ್ಯಾನೇಜ್ಮೆಂಟ್‌ನ ತೋಟಗಳ ವಿಸ್ತೀರ್ಣ ಸಾವಿರ ಎಕರೆಗಳನ್ನು ಮೀರಿತ್ತು. ಸುಮಾರು ಇನ್ನೂರೆವತ್ತಕ್ಕೂ ಹೆಚ್ಚು ಕುಟುಂಬಗಳು ಹಾರ್ಲೆ ಸಮೂಹದಲ್ಲಿ ದುಡಿದು ಬದುಕುತ್ತಿದ್ದರು.

ಕಾಫಿ ವಲಯದಲ್ಲಿ ಆಗ ಈಗಿನಂತೆ ಹೊರಗಿನಿಂದ ಬಂದು ಕೆಲಸ ಮಾಡುವ ಜನರಿರಲಿಲ್ಲ. ಎಲ್ಲರೂ ಆಯಾ ತೋಟಗಳಲ್ಲೇ ವಾಸ. ಹೊರಗಿಂದ ಕೆಲಸಕ್ಕೆ ಬರಲು ಆ ಕಾಲದಲ್ಲಿ ಕೆಲಸಗಾರರಿಗೆ ಸ್ವಂತ ನೆಲೆಯೆನ್ನುವುದು ಇರಲೇ ಇಲ್ಲ. ಈ ತೋಟ ಬಿಟ್ಟು ಹೊರಟರೆ ಇನ್ನೊಂದು ತೋಟ ಅಷ್ಟೇ.

ಅದಕ್ಕೂ ಹಿಂದೆ ದಕ್ಷಿಣ ಕನ್ನಡದಿಂದ ಮತ್ತು ಕೇರಳ- ತಮಿಳುನಾಡಿಗಳಿಂದ ಬರುತ್ತಿದ್ದ ಹಂಗಾಮಿ ಕಾರ್ಮಿಕರು ಹೆಚ್ಚಾಗಿ ಘಟ್ಟಗಳಲ್ಲೇ ನೆಲೆ ನಿಂತಿದ್ದರು. ಘಟ್ಟದ ಕೆಳಗಿನಿಂದ ಬರುವ ವಲಸೆ ಕಡಿಮೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಕಾಫಿ ತೋಟಗಳಲ್ಲಿ ಕನ್ನಡ, ತುಳು, ಮಲೆಯಾಳಂ ಮತ್ತು ತಮಿಳು ಈ ನಾಲ್ಕೂ ವ್ಯವಹಾರ ಭಾಷೆಯಾಗಿದ್ದವು.

ಕಾಲಾನಂತರದಲ್ಲಿ ಎರಡನೇ ತಲೆಮಾರಿಗೆ, ಇಲ್ಲಿ ನೆಲೆಸಿದ್ದ ತಮಿಳು ಮತ್ತು ಮಲೆಯಾಳಿಗಳು ಕನ್ನಡಿಗರೇ ಆಗಿದ್ದಾರೆ. ಇಲ್ಲಿನ ಸಾಂಸ್ಕೃತಿಕ ವಲಯದಲ್ಲಿ ಸೇರಿ ಹೋಗಿದ್ದಾರೆ. ತುಳು ಭಾಷಿಕರು ಹೇಗೂ ಕನ್ನಡಿಗರೇ, ಅವರಿಂದ ಇಲ್ಲಿನವರೂ ಸಾವಿರಾರು ಜನ ತುಳು ಕಲಿತರು. ಈಗ ಸಕಲೇಶಪುರ ತಾಲ್ಲೂಕಿನಲ್ಲಿ ತುಳು ಎರಡನೇ ಸಾಮಾನ್ಯ ಭಾಷೆಯಾಗಿದೆ.

ಹಾರ್ಲೆ‌‌ ಬಂಗಲೆ

ಹಾರ್ಲೆ ತೋಟಗಳ ಸಮೂಹದಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು. ಏಳೆಂಟು ವರ್ಷಗಳಲ್ಲಿ  ಮ್ಯಾನೇಜರ್, ರೈಟರುಗಳು, ಮೇಸ್ತ್ರಿಗಳು, ಮೆಕ್ಯಾನಿಕ್, ಡ್ರೈವರ್‌ಗಳು, ಬಡಗಿಗಳು ಒಳ್ಳೆಯ ನುರಿತ ಕಾರ್ಮಿಕರು ಹೀಗೆ ಅನುಭವೀ ಕೆಲಸಗಾರರ ತಂಡವೊಂದನ್ನು ಗಣಪಯ್ಯ ಕಟ್ಟಿದ್ದರು. ತಮ್ಮ ರಾಜಕಾರಣದ ಓಡಾಟಗಳೆಷ್ಟೇ ಇರಲಿ ಗಣಪಯ್ಯ ಮನೆಯಲ್ಲಿದ್ದಾಗ ಪ್ರತಿದಿನ ತೋಟಕ್ಕೆ ಒಂದು ಭೇಟಿ ನೀಡದೆ ಇರುತ್ತಿರಲಿಲ್ಲ.

ಇಷ್ಟು ದೊಡ್ಡ ಸಂಸ್ಥೆಯ ಯಜಮಾನರಾಗಿದ್ದರೂ ಇವರು ವಾಸವಿದ್ದುದು ಮಿಡ್ಲಟನ್ ಕಾಲದಲ್ಲಿ ಕಟ್ಟಿದ್ದ, ಬೇರೆ ಕಾಫಿ ಎಸ್ಟೇಟ್ ಬಂಗಲೆಗಳಿಗೆ ಹೋಲಿಸಿದರೆ ಅತಿ ಸಾಮಾನ್ಯವೆನಿಸಿದ ಒಂದು ಬಂಗಲೆಯಲ್ಲಿ. ಮನೆಯೊಳಗೂ ಅತ್ಯಂತ ಸರಳ. ಮನೆಗೆ ಯಾರೇ ಬರಲಿ ಎಲ್ಲರಿಗೂ ಜೊತೆಯಲ್ಲಿಯೇ ಊಟ. ಅದೂ ನೆಲದಲ್ಲಿ ಕುಳಿತು.

ಇವರ ಊಟದ ಮನೆಗೆ ಹೋಗುವ ದಾರಿಯಲ್ಲಿ ಗೋಡೆಯಲ್ಲಿ ಒಂದು ಹಲಗೆಯನ್ನು ಚಜ್ಜಾದಂತೆ  ಅಳವಡಿಸಲಾಗಿತ್ತು. ಅದರ ಮೇಲೆ ಒಂದು ಮಡಕೆ, ಒಂದು ತೆಂಗಿನ ಚಿಪ್ಪಿಗೆ ಬಿದಿರು ಕಡ್ಡಿ ಸಿಕ್ಕಿಸಿದ ಸೌಟು. -ಹಿಂದಿನ ಕಾಲದಲ್ಲಿ ಗಂಜಿ, ಸಾರು ಮುಂತಾದವನ್ನು ಬಡಿಸಲು ಬಳಸುತ್ತಿದ್ದಂತಹದು. ಮತ್ತೊಂದು ಹಳೆಯ ಹಿತ್ತಾಳೆ ಗಂಗಳ.

ಒಮ್ಮೆ ಗಣಪಯ್ಯನವರ ಗೆಳೆಯರಾದ ಗ್ರೆಗೊರಿ ಮಥಾಯಿಸರು ಅದನ್ನು ನೋಡಿ “ಇದನ್ನೇಕೆ ಇಲ್ಲಿ ಇಟ್ಟುಕೊಂಡಿದ್ದೀರಿ”? ಎಂದರಂತೆ.

ಆಗ ಗಣಪಯ್ಯ “ನನಗೆ ಅಹಂಕಾರ ಬರದೇ ಇರಲಿ ಅಂತ ನೆನಪು ಮಾಡಿಕೊಡಲು ಅದನ್ನು ಅಲ್ಲಿ ಕಾಣುವಂತೆ ಇಟ್ಟಿದ್ದೇನೆ. ಒಂದು ಕಾಲದಲ್ಲಿ ನಾನು ಅದರಲ್ಲೇ ಊಟ ಮಾಡುತ್ತಿದ್ದುದು” ಎಂದರಂತೆ.

ಸ್ವತಂತ್ರ ಪಾರ್ಟಿ ಸೇರಿದ ನಂತರ ಬಹುಬೇಗ ಪಕ್ಷದಲ್ಲಿ ಅವರ ಜವಾಬ್ದಾರಿ ಹೆಚ್ಚಾಗುತ್ತ ಹೋಯಿತು. ಅವರು ಸ್ವತಂತ್ರ ಪಾರ್ಟಿ ರಾಜ್ಯಾಧ್ಯಕ್ಷರೂ ಆದರು.

ಹಾರ್ಲೆ A to k estates ಹಳೆಯ ಆಫೀಸ್

ಈ ಕಾಲದಲ್ಲಿ ಅವರು ಸ್ವತಂತ್ರ ಪಾರ್ಟಿಗೆ ನೂರಾರು ಯುವಕರನ್ನು ಸೇರಿಸಿಕೊಂಡು ಬೆಳೆಸಿದರು. ಸ್ಥಳೀಯವಾಗಿ ಹಾನುಬಾಳಿನ ಅಜ್ಜೇಗೌಡರು, (ಇವರು ಕರ್ನಾಟಕದ ಹಿರಿಯ ಅಧಿಕಾರಿಗಳಾಗಿದ್ದ ಐ.ಎಂ. ವಿಠ್ಠಲ ಮೂರ್ತಿಯವ ಮಾವ) ಗಾಣದಹೊಳೆ ಸುಬ್ಬೇಗೌಡರ ಮಗ ಕೇಶವೇ ಗೌಡರು ಮುಂತಾದವರೆಲ್ಲ ಇದ್ದರು.

ದಕ್ಷಿಣಕನ್ನಡದಿಂದ ಲೋಕಸಭಾ ಸದಸ್ಯರಾಗಿದ್ದ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯನವರಿಗೆ ನಿಕಟ ಸಂಪರ್ಕವಿತ್ತು. ಮಲ್ಯರ ಬಗ್ಗೆ ಇವರಿಗೆ ಅಪಾರ ಗೌರವ, ಅವರ ದೂರದೃಷ್ಟಿಯ ಕುರಿತು ಮೆಚ್ಚುಗೆ.

ಒಮ್ಮೆ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯ ಮತ್ತು ರವೀಂದ್ರನಾಥರು ಮಂಗಳೂರಿನಿಂದ ಸಕಲೇಶಪುರದತ್ತ ಕಾರನಲ್ಲಿ ಬರುತ್ತಿದ್ದರಂತೆ. ಆಗ ಹಾಸನ ಮಂಗಳೂರು ರಸ್ತೆಯಲ್ಲಿ ದಿನಕ್ಕೆ ಮೂರು ಬಸ್ಸುಗಳು ನಾಲ್ಕೈದು ಲಾರಿಗಳು  ಮಾತ್ರ ಸಂಚರಿಸುತ್ತಿದ್ದ ಕಾಲ. ಏನೋ ಮಾತಾಡುತ್ತ ಮಲ್ಯರು ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಶಿಫಾರಸು ಮಾಡಿದ್ದೇನೆ ಎಂದರಂತೆ.

ಶಿರಾಡಿ ಘಾಟ್ ಹಳೆಯ ರಸ್ತೆ

ಆಗ ರವೀಂದ್ರನಾಥರು “ಸರ್ ಇಲ್ಲಿ ದಿನಕ್ಕೆ ಮೂರು ಬಸ್ಸು ಸಂಚರಿಸುವುದು ಇದು ರಾಷ್ಟ್ರೀಯ ಹೆದ್ದಾರಿಯೇ”? ಎಂದರಂತೆ,

ಆಗ ಮಲ್ಯರು “ರವಿ ನೀನು ಇವತ್ತಿನ ಸ್ಥಿತಿ ನೋಡಬೇಡ. ಇಪ್ಪತ್ತೈದು ವರ್ಷ ಮುಂದೆ ನೋಡು” ಎಂದು ಉತ್ತರಿಸಿದರಂತೆ.

ಇಂತಹ ದೂರ ದೃಷ್ಟಿಯನ್ನು ಗಣಪಯ್ಯನವರೂ ಹೊಂದಿದ್ದರು. ಇದನ್ನವರು ಕೃಷಿ ಉದಾಹರಣೆಗಳ ಮೂಲಕ ಹೇಳುತ್ತಿದ್ದರು. “ಒಂದು ಗಿಡ ನೆಡುವಾಗ, ಅದು ಬೆಳೆದು ನಿಂತಾಗ ಬೇಕಾಗುವ ಅವಶ್ಯಕತೆಗಳನ್ನು ಅರಿಯದೆ ನೆಟ್ಟವ ಒಳ್ಳೆಯ ಕೃಷಿಕನಾಗಲಾರ ಎನ್ನುತ್ತಿದ್ದರು.”

ಗಣಪಯ್ಯನವರ ಯಾವುದೇ ಬೇರೆ ಭಾಷಣವಿರಲಿ, ರಾಜಕೀಯ ಭಾಷಣಗಳಲ್ಲಿ ಕೂಡಾ ಕೃಷಿ ಮತ್ತು ಕೃಷಿಕರ ಸಮಸ್ಯೆಗಳು ಮತ್ತು ಪರಿಹಾರಗಳ ಪ್ರಸ್ತಾಪವಿಲ್ಲದೆ ಇರುತ್ತಿರಲಿಲ್ಲ. ಮುಂದೆ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದಾಗಲೂ ನಂತರದ ಚುನಾವಣಾ ಭಾಷಣಗಳಲ್ಲೂ ಇದು ಮುಂದುವರಿದೇ ಇತ್ತು.

1960 ದಕ್ಷಿಣ ಕನ್ನಡ ದ ಲೋಕಸಭಾ ಸದಸ್ಯರಾಗಿದ್ದ ಯು. ಶ್ರೀನಿವಾಸ ಮಲ್ಯ

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ  44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನುಗ್ಗೆಹಳ್ಳಿ ಶಿವಪ್ಪ ಲೋಕಸಭೆಗೆ ಆಯ್ಕೆಯಾದರು. ಕರ್ನಾಟಕದ ವಿಧಾನಸಭೆಯಲ್ಲಿ ಹದಿನಾರು ಸ್ಥಾನ ಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನಾಲ್ಕು ಜನ ಸ್ವತಂತ್ರ ಪಾರ್ಟಿಯಿಂದಲೂ, ಒಬ್ಬರು ಪಿ.ಎಸ್.ಪಿ ಯಿಂದ ಇನ್ನೊಬ್ಬರು ಪಕ್ಷೇತರರಾಗಿಯೂ ಸ್ವತಂತ್ರ ಪಾರ್ಟಿ ಬೆಂಬಲದೊಂದಿಗೆ ಗೆದ್ದಿದ್ದರು. ಅವರಲ್ಲಿ ಒಬ್ಬರು ಹೊಳೆನರಸೀಪುರದಿಂದ ಹೆಚ್.ಡಿ.ದೇವೇಗೌಡರು ಪ್ರಥಮ ಬಾರಿಗೆ ಶಾಸಕರಾಗಿದ್ದರು.

ಪಕ್ಕದ ಸುಳ್ಯ ಮತ್ತು ಸೋಮವಾರಪೇಟೆಯಲ್ಲೂ ಸ್ವತಂತ್ರ ಪಾರ್ಟಿ ಗೆದ್ದಿತ್ತು. ಸುಳ್ಯ ಕ್ಷೇತ್ರದಿಂದ ಎ.ರಾಮಚಂದ್ರ ಶಾಸಕರಾಗಿದ್ದರು. ಸೋಮವಾರಪೇಟೆಯಿಂದ ಗುಂಡುಕುಟ್ಟಿ ಮಂಜುನಾಥಯ್ಯ ಗೆದ್ದಿದ್ದರು.

ಗಣಪಯ್ಯನವರು ರಾಜ್ಯ ರಾಜಕಾರಣದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿದ್ದರು. ಅದೇ ಚುನಾವಣೆಯಲ್ಲಿ ಸಿ.ಎಂ.ಪೂಣಚ್ಚ ಕಾಂಗ್ರೆಸ್‌ನಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಸಚಿವರಾದರು.

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವಾಗ ಕೊಡಗಿನ ಮುಖ್ಯಮಂತ್ರಿಗಳಾಗಿ ಅದನ್ನು ಬೆಂಬಲಿಸಿದವರು ಸಿ.ಎಂ. ಪೂಣಚ್ಚ. ಇದರಿಂದಾಗಿ ಅವರು ಕೊಡಗಿನಲ್ಲಿ ಸಾಕಷ್ಟು ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಜೊತೆಗೆ ಪೂಣಚ್ಚನವರ ಇಬ್ಬರು ಆಪ್ತಗೆಳೆಯರು ಗುಂಡುಕುಟ್ಟಿ ಮಂಜುನಾಥಯ್ಯ, ಹಾರ್ಲೆ ಗಣಪಯ್ಯ ಕಾಂಗ್ರೆಸ್ಸಿನ ಕಡು ವಿರೋಧಿಗಳಾಗಿ ಸ್ವತಂತ್ರ ಪಾರ್ಟಿಯಲ್ಲಿದ್ದರು. ಪೂಣಚ್ಚನವರ ಮತದಾರ ಕ್ಷೇತ್ರಕ್ಕೆ ಸೇರಿದ ಸುಳ್ಯ ಮತ್ತು ಸೋಮವಾರಪೇಟೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರ ಪಾರ್ಟಿಯೂ ವಿರಾಜಪೇಟೆಯಲ್ಲಿ ಜನಸಂಘವೂ ಜಯಗಳಿಸಿದ್ದವು. ಆದರೆ ಮಂಗಳೂರಿನ ಇತರ ವಿಭಾಗಗಳು ಪೂಣಚ್ಚನವರನ್ನು ಬೆಂಬಲಿಸಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...